Sunday, April 20, 2008

ಓಡಬೇಕು, ಓಡುತ್ತಲೇ ಇರಬೇಕು.

ಓಡಿ ಹೋಗೋದು ? ಹಾಗೆಂದರೇನು ? ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಓದಿ ಹೋಗುವುದು ಗೊತ್ತಿಲ್ಲ. ನಾವು ಎಲ್ಲಿದ್ದೆವೆಯೋ ಅಲ್ಲಿಯೇ ನಿಂತು ಬಿಡುತ್ತೇವೆ. ಅಲ್ಲಿನ ರಾಡಿಯಲ್ಲಿ ನಮ್ಮ ಕಾಲುಗಳು ಹುಗಿದು ಹೋಗುತ್ತದೆ. ಅಲ್ಲಿಂದ ಕಾಲನ್ನು ಮೇಲೆ ಎತ್ತುವುದು ನಮಗೆ ಗೊತ್ತಿಲ್ಲ. ನಾನು ಹೇಳಿದ್ದು ನಿಮಗೆ ಅರ್ಥವಾಯಿತೆ ?
ಬದುಕು ಅಂದರೆ ಹಾಗೆ . ಅದು ನಿರಂತರ ಚಲನಶೀಲತೆ. ಬದುಕು ನಿಂತಿದೆ ಎಂದು ನಮಗೆ ಅನ್ನಿಸಿದರೆ ನಾವು ಅಪಾಯದಲ್ಲಿ ಇದ್ದೇವೆ ಎಂದೇ ಅರ್ಥ. ಇದನ್ನು ಇನ್ನಷ್ಟು ಸರಳವಾಗಿ ಹೇಳಲು ನಾನು ಯತ್ನಿಸುತ್ತೇನೆ. ಯಾವುದೇ ಮಗುವನ್ನು ನೋಡಿ. ಅದು ಸದಾ ಒಂದಲ್ಲ ಒಂದು ಆಟದಲ್ಲಿ ತೊಡಗಿಕೊಂಡಿರುತ್ತದೆ. ಒಮ್ಮೆ ರಂಗಾಣಿಯ ಜೊತೆ ಆಟವಾಡುತ್ತಿದ್ದರೆ, ಮತ್ತೊಮ್ಮೆ ಇನ್ನೊಂದು ಆಟಿಗೆಯತ್ತ ಅದರ ಮನಸ್ಸು ಹೋಗುತ್ತದೆ. ಯಾವುದೇ ಒಂದು ಆಟದಲ್ಲಿ ಅದು ಸಂತೋಷ ಪಡುವುದಿಲ್ಲ. ಅದಕ್ಕೆ ಮರೆಯುವುದು ಗೊತ್ತು. ಬಿಡುವುದು ಗೊತ್ತು. ಆದರೆ ನಾವು ಹಾಗಲ್ಲ. ನಾವು ಯಾವುದರಲ್ಲಾದರೂ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತೇವೆ. ಅದರಿಂದ ಹೊರಕ್ಕೆ ಬರುವುದು ನಮಗೆ ಗೊತ್ತಿಲ್ಲ. ಹೊರಕ್ಕೆ ಬರುವುದು ನಮಗೆ ಬೇಕಿಲ್ಲ. ಇದೇ ನಮ್ಮ ಸಮಸ್ಯೆ.
ನಾವು ವಿದ್ಯಾರ್ಥಿಯಾಗಿದ್ದರೆ, ನಮಗೆ ಪ್ರಥಮ ಸ್ಥಾನವೇ ಬೇಕು. ಅದೇ ನಮ್ಮ ಗುರಿ. ನಾವು ಅದರಿಂದ ಹೊರಕ್ಕೆ ಬರಲಾರೆವು. ಹಾಗೆ ನಾವು ಉದ್ಯೋಗಸ್ಥರಾಗಿದ್ದರೆ ? ನಮ್ಮ ಬಾಸು, ನಮ್ಮ ಸಹೋದ್ಯೋಗಿಗಳು, ಅವರ ತರಲೆಗಳು, ಪ್ರಮೋಷನ್ನು ಇತ್ಯಾದಿ. ಇದರಿಂದ ನಮಗೆ ಹೊರಕ್ಕೆ ಬರುವುದು ಗೊತ್ತಿಲ್ಲ. ಈ ಪ್ರಪಂಚವನ್ನು ಬಿಟ್ಟು ನಾವು ಹೊರಕ್ಕೆ ಬರಲಾರೆವು. ಇಂತಹ ಜನರ ಬಳಿ ಹೋಗಿ ಬೇರೆ ಯಾವುದೋ ವಿಚಾರದ ಬಗ್ಗೆ ಮಾತನಾಡಿ. ಅವರು ಹೇಳುತ್ತಾರೆ, ನನಗೆ ನನ್ನದೇ ಸಾಕಷ್ಟು, ಹಾಸಿ ಹೊದ್ದುಕೊಳ್ಳುವಷ್ಟಿದೆ. ಅಂದರೆ ಅವರು ತಾವು ಸಿಕ್ಕಿಕೊಂಡ ವರ್ತುಲದಿಂದ ಹೊರಕ್ಕೆ ಬರಲಾರರು. ಅಲ್ಲಿಂದ ಓಡಿ ಹೋಗಲಾರರು.
ನಾನು ಇಂತಹ ಸ್ಥಿತಿಯಲ್ಲಿ ಹಲವಾರು ಬಾರಿ ಸಿಕ್ಕಿಕೊಂಡಿದ್ದೇನೆ. ಆದರೆ ಅಲ್ಲಿಂದ ಓಡಿ ಬರುವುದನ್ನು ಕಲಿತಿದ್ದೇನೆ.
ನಾನು ಪತ್ರಿಕೆಗಳಲ್ಲಿ ಕೆಲಸ ಮಾಡುವಾಗ ಎಷ್ಟೋ ಬಾರಿ, ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಿಡಬೇಕು ಎಂದು ಅನ್ನಿಸಿದ್ದುಂಟು. ಆಗೆಲ್ಲ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದೇನೆ. ಆದರೆ, ಮದುವೆ ಮಕ್ಕಳು ಆದ ಮೇಲೆ ನನಗೆ ಅಷ್ಟು ಸುಲಭವಾಗಿ ಓಡಲು ಸಾಧ್ಯವಾಗಿಲ್ಲ. ಪ್ರತಿ ಸಲ ಇರುವುದರಿಂದ ಇರದಿರುವುದರೆಡೆಗೆ ಓಡಬೇಕು ಎಂದುಕೊಂಡಾಗ, ಮನೆ ಹೆಂಡತಿ ಮಕ್ಕಳು ನೆನಪಾಗುತ್ತರೆ. ಆಗ ಇರುವ ಕೆಲಸವನ್ನು ಬಿಟ್ಟು ಓಡಿ ಹೋಗಲು ಸಾಧ್ಯವಾಗುವುದಿಲ್ಲ. ಪ್ರಾ ಯಶಃ ನಾವು ಬದುಕಿನಲ್ಲಿ ಸುರಕ್ಷತೆಯನ್ನು ಬಯಸುತ್ತೇವೆ. ಸುರಕ್ಷತೆಯ ಆಸೆ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಅದು ನಮ್ಮ ಕಾಲನ್ನು ಕಟ್ಟಿ ಹಾಕುತ್ತದೆ.
ಓದಿ ಹೋಗುವುದು ಎಂದರೆ, ಅದು ಬಿಡುಗಡೆ. ಓಡಿ ಹೋಗದೇ ನಿಂತಲ್ಲಿ ನಿಲ್ಲುವುದು ಎಂದರೆ ಅದು ಬಂಧನ. ಬಂಧನ ನಮ್ಮ ಮನಸ್ಸನ್ನು ಕಟ್ಟಿ ಹಾಕುತ್ತದೆ. ಅಲ್ಲಿ ಕ್ರಿಯಾಶೀಲತೆ ಸಾಯುತ್ತದೆ. ಆದ್ದರಿಂದ ನಾವೆಲ್ಲ ಓಡಬೇಕು ಓಡುತ್ತಲೇ ಇರಬೇಕು.

Sunday, April 6, 2008

ನಮಗೆ ಮಾತನಾಡಲು ಬರುವುದಿಲ್ಲ

ಇಂದು ನಾವೆಲ್ಲ ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆ ಯಾವುದು ? ಈ ಪ್ರಶ್ನೆಯನ್ನು ದಿನಕ್ಕೆ ಒಂದು ಬಾರಿಯಾದರೂ ನನ್ನನ್ನೇ ನಾನೇ ಕೇಳಿಕೊಳ್ಳುತ್ತೇನೆ। ಕೆಲವರಿಗೆ ಅನ್ನದ ಸಮಸ್ಯೆ। ಇನ್ನೂ ಕೆಲವರಿಗೆ ವಸತಿಯ ಸಮಸ್ಯೆ। ಕೆಲವರಿಗೆ, ಹೊಸ್ ಕಾರುಕೊಂಡುಕೊಳ್ಳುವ ಸಮಸ್ಯೆ। ಮಗನಿಗೆ ಅಥವಾ ಮಗಳಿಗೆ ಒಳ್ಳೆಯ ಶಾಲೆಯಲ್ಲಿ ಸೀಟು ದಕ್ಕಿಸಿಕೊಳ್ಳುವ ಸಮಸ್ಯೆ। ಗಂಡನಿಗೆ ಹೆಂಡತಿಯ ಸಮಸ್ಯೆ, ಹೆಂಡತಿಗೆ ಗಂಡನ ಸಮಸ್ಯೆ। ಪ್ರೇಮಿಗೆ ಪ್ರೇಮಿಸುವ ಸಮಸ್ಯೆ। ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ। ಪ್ರಾಯಶಃ ಈ ಜಗತ್ತಿನಲ್ಲಿ ಸಮಸ್ಯೆ ಇಲ್ಲ ಎಂದು ಹೇಳುವವರು ಯಾರೂ ಇಲ್ಲ।
ನನಗೆ ಇದ್ಯಾವುದೂ ಸಮಸ್ಯೆ ಎಂದು ಅನ್ನಿಸುವುದಿಲ್ಲ। ಇವೆಲ್ಲವಕ್ಕಿಂತ ಮುಖ್ಯವಾದ ಸಮಸ್ಯೆ ಎಂದರೆ ಸಂವಹನ ಸಮಸ್ಯೆ ಎನ್ನುವುದು ನನಗೆ ಮನದಟ್ಟಾಗಿದೆ। ನಮಗೆ ಬೇರೆಯವರಿಗೆ ಹೇಳಬೇಕಾದ್ದನ್ನು ಹೇಳಲು ಬರುವುದಿಲ್ಲ। ಬೇರೆಯವರು ಹೇಳಿದ್ದನ್ನು ಕೇಳಲು ಬರುವುದಿಲ್ಲ। ಆದ್ದರಿಂದ ಈ ಸಮಸ್ಯೆಯನ್ನು ಹೇಳುವ ಮತ್ತು ಕೇಳುವ ಸಮಸ್ಯೆ ಎಂದು ನಾನು ಕರೆಯುತ್ತೇನೆ।
ಹೇಳುವ ಸಮಸ್ಯೆಯನ್ನೇ ನೋಡಿ। ನಾವು ದಿನವಿಡೀ ಮಾತನಾಡುತ್ತಲೇ ಇರುತ್ತೇವೆ। ನಮಗೆ ಮಾತನಾಡುವುದು ಇಷ್ಟ। ನಾವು ಹೇಳುವುದನ್ನು ಬೇರೆಯವರು ಕೇಳುತ್ತಾರೆಯೇ ಅಥವಾ ಇಲ್ಲವೇ ಎಂಬುದು ನಮಗೆ ಮುಖ್ಯವಲ್ಲ। ನಮಗೆ ನಾವು ಹೇಳುವುದನ್ನು ಹೇಳಲೇ ಬೇಕು। ನಾವು ಹೇಳುವುದನ್ನು ಯಾರಿಗೆ ಹೇಳುತ್ತೇವೆಯೋ ಅವರು ಅದನ್ನು ಕೇಳಿಸಿಕೊಳ್ಳಲೇಬೇಕು। ನಾವೆಂತಹ ಸರ್ವಾಧಿಕಾರಿಗಳು ! ನಮಗೆ ಮನಸ್ಸಿನಲ್ಲಿರುವುದನ್ನು ಕಕ್ಕಲು ಒಂದು ವಾಷ್ ಬೇಸಿನ್ ಬೇಕು। ನಮ್ಮ ದೃಷ್ಠಿಯಲ್ಲಿ ನಮ್ಮ ಎದುರು ಇರುವವರು, ಇಂತಹ ವಾಷ್ ಬೇಸಿನ್ ಗಳು।
ನಮಗೆ ಸಂವಹನ ಕ್ರಿಯೆಯ ಪ್ರಾಥಮಿಕ ಲಕ್ಷಣ ಕೂಡ ಗೊತ್ತಿಲ್ಲ। ನಾವು ಏನನ್ನು ಹೇಳುತ್ತೇವೆ ಎಂಬುದರ ಪ್ರಾಥಮಿಕ ಅರಿವು ನಮಗಿರಬೇಕು। ನಾವು ಹೇಳುವುದನ್ನು ಹೇಳಲು ಬೇಕಾದ ಭಾಷಾ ಸಮರ್ಥ್ಯ ನಮಗಿರಬೇಕು। ನಾವು ಏನನ್ನು ಹೇಳಲು ಹೊರಟಿದ್ದೇವೆಯೋ ಅದನ್ನು ಹೇಳಲು ಸರಿಯಾದ ಶಬ್ದಗಳನ್ನು ಆಯ್ಕೆಮಾಡಿಕೊಳ್ಳಬೇಕು। ಆದರೆಬಹುತೇಕ ಸಂದರ್ಭದಲ್ಲಿ ನಾವು ಈ ಬಗ್ಗೆ ಯೋಚಿಸುವುದೇ ಇಲ್ಲ। ಸುಮ್ಮನೆ ಮಾತನಾಡಿ, ಈ ಮಾತುಗಳಿಗೆ ಪ್ರತಿಕ್ರಿಯೆ ಬರದಿದ್ದಾಗ, ಅವನಿಗೆ ಏನು ಗತ್ತು ಮಾರಾಯಾ ಎಂದು ಪ್ರತಿಕ್ರಿಯೆ ನೀಡಿ ಸುಮ್ಮನಾಗಿ ಬಿಡುತ್ತೇವೆ।
ಏನನ್ನಾದರೂ ಹೇಳುವುದಕ್ಕೆ ಮೊದಲು ನಮಗೆ ನೋಡುವುದು ಗೊತ್ತಿರಬೇಕು। ಆದರೆ ನಮಗೆ ನೋಡುವುದೇ ಗೊತ್ತಿಲ್ಲ। ನಾವು ಏನನ್ನೂ ಸರಿಯಾಗಿ ನೋಡುವುದಿಲ್ಲ। ನಮ್ಮ ಜೊತೆಗೆ ಕೆಲಸ ಮಾಡುವವರನ್ನು, ನಮ್ಮ ಜೊತೆಗೆ ಬದುಕುವವರನ್ನು ನಾವು ನೋಡು ಎಷ್ಟೋ ಕಾಲ ಕಳೆದುಹೋಗಿರುತ್ತದೆ। ನಾವು ಪ್ರಥಮ ಸಲ ಅವರನ್ನು ನೋಡಿದ ಮೇಲೆ ಮತ್ತೆ ಅವರನ್ನು ನೋಡುವುದಿಲ್ಲ। ನಾನು ಹೇಳುವುದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು। ಆದರೆ ಇದು ನಿಜ। ನೋಡುವುದೆಂದರೆ ಪ್ರೆಶ್ ಆಗಿ ನೋಡುವುದು। ಹೊಸದಾಗಿ ನೊಡುವುದು ಇದೆಯಲ್ಲ, ಅದು ನಮಗೆ ಹೊಸದಾಗಿ ಮಾತನಾಡುವುದನ್ನು ಕಲಿಸುತ್ತದೆ। ನಾವು ಹೊಸದಾಗಿ ಮಾತನಾಡಿದರೆ ಹೊಸದಾಗಿ ಕೇಳುವವರು ಸಿಗುತ್ತಾರೆ।

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...