ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಅತಿ ಹೆಚ್ಚು ಚರ್ಚೆಗೆ ವಸ್ತುವಾಗುತ್ತಿರುವವರು ಕಾಮ್ರೇಡ್ ಗಳು. ಇವರಲ್ಲಿ ಸಿಪಿಎಮ್ ನ ಪ್ರಭಾವಿ ನಾಯಕ ಪ್ರಕಾಶ್ ಕಾರಟ್. ಈ ಪ್ರಕಾಶ್ ಕಾರಟ್ ಅವರನ್ನು ನೋಡಿದಾಗ ನೂರಾರು ವರ್ಷಗಳ ಹಿಂದಿನ ಕಮ್ಯುನಿಸ್ಟ್ ನಾಯಕ ಎಂದು ಅನ್ನಿಸುತ್ತದೆ. ಆತನ ಹೆಂಡತಿ ಬೃಂದಾ ಕಾರಟ್. ಅವರು ಸಹ ತಮ್ಮ ಉಗ್ರ ಎಡಪಂಥೀಯ ವಿಚಾರಧಾರೆಯನ್ನು ಆಗಾಗ ಪ್ರದರ್ಶಿಸುತ್ತಲೇ ಇರುತ್ತಾರೆ.
ಈ ದಂಪತಿಗಳು ಹಲವು ಕಾರಣಗಳಿಗಾಗಿ ಬಾರತೀಯ ಸಾರ್ವಜನಿಕ ಬದುಕಿನಲ್ಲಿ ವಿಶಿಷ್ಠರು ಎನ್ನಿಸುತ್ತದೆ. ಗಂಡ ಹೆಂಡತಿ ಇಬ್ಬರೂ ಕಮ್ಯುನಿಸ್ಟರಾಗುವುದು ಒಂದು ಸೋಜಿಗವೇ. ಆದರೆ ಇವರಿಬ್ಬರ ಹೆಸರನ್ನು ಪ್ರಸ್ತಾಪಿಸುತ್ತಿರುವುದು ಬೇರೆ ಕಾರಣಗಳಿಗಾಗಿ. ನನಗಿದ್ದ ಕುತೂಹಲ ಎಂದರೆ ಈ ಇಬ್ಬರು ಕಟ್ಟಾ ಕಮ್ಯುನಿಸ್ಟರ ಮಕ್ಕಳು ಹೇಗಿರಬಹುದು ? ಅವರೂ ಕಮ್ಯುನಿಸ್ಟರಾಗಬಹುದೆ ? ಎಂಬುದು. ಈ ಕಾರಣದಿಂದಾಗಿ ಅಲ್ಲಿ ಇಲ್ಲಿ ತಡಕಾಡಿದಾಗ ನನಗೆ ದೊರಕಿದ ಮಾಹಿತಿ ಎಂದರೆ, ಇವರಿಗೆ ಮಕ್ಕಳಿಲ್ಲ ಎಂಬುದು. ಅಷ್ಟೇ ಅಲ್ಲ, ತಮ್ಮ ಹೋರಾಟಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಮಕ್ಕಳು ಬೇಡ ಎಂದು ನಿರ್ಧರಿಸಿದರಂತೆ ! ಇದು ಎಷ್ಟು ನಿಜವೋ ತಿಳಿಯದು. ಆದರೆ ಇದು ನಿಜವಾಗಿದ್ದರೆ ? ತಕ್ಷಣ ನನಗೆ ಅನ್ನಿಸಿದ್ದು ಇದಕ್ಕಿಂತ ಜೀವವಿರೋಧಿ ನಿಲುಮೆ ಮತ್ತೊಂದು ಇರಲು ಸಾಧ್ಯವಿಲ್ಲ. ಯಾಕೆಂದರೆ ಮಗು ಹುಟ್ಟುವುದೇ ಒಂದು ಅಧ್ಬುತ. ಒಂದು ಜೀವಿಯೊಳಗೆ ಇನ್ನೊಂದು ಜೀವಿ, ಜೀವ ತಳೆಯುವ ಪರಿಯೇ ಹಾಗೆ. ಯೋಚಿಸಿ ನೋಡಿ. ಈ ಬದುಕಿನಲ್ಲಿ ಜೀವ ಕುಡಿಯೊಡೆಯುವ ಸಮಯವೇ ಅಂತಹುದು. ಒಂದು ಹೂವು ಅರಳುವುದನ್ನು ನೀವು ನೋಡಿದ್ದೀರಾ ? ಒಂದು ಸಸಿ ಮೊಳಕೆಯೊಡೆಯುವ ಸಂಭ್ರಮ ನಿಮಗೆ ಗೊತ್ತೆ ? ಮಳೆ ಬಂದ ಮರುದಿನ ಭೂಮಿ ಸಂತೃಪ್ತ ಭಾವದಿಂದ ನಳನಳಿಸುವ ಪರಿ ಹೇಗಿರುತ್ತದೆ ಗೊತ್ತೆ ?
ಇವೆಲ್ಲವನ್ನು ಸಂತೃಪ್ತಿಯ ಮಹಾ ಕ್ಷಣಗಳೆಂದು ನಾನು ಕರೆಯುತ್ತೇನೆ. ಒಂದು ಮಗು ಹೊಟ್ಟೆಯೊಳಗೆ ರೂಪತಳೆಯುವುದು ಹಾಗೆ. ನನಗೆ ಬಹಳಷ್ಟು ಸಂದರ್ಭಗಳಲ್ಲಿ ಹುಡುಗಿಯರನ್ನು ನೋಡಿದಾಗ ಈರ್ಷೆಯಾಗುತ್ತದೆ. ಹೆಣ್ಣು ಜೀವಕ್ಕೆ ಇರುವ ಇಂತಹ ಒಂದು ಅನುಭವ ನನಗಿಲ್ಲವಲ್ಲ ಎಂದೂ ಬೇಸರವಾಗುತ್ತದೆ. ಬದುಕಿನ ಒಂದು ಅನುಭವ ದಕ್ಕುತ್ತಿಲ್ಲವಲ್ಲ ಎಂದು ಮನಸ್ಸು ಹಪಹಪಿಸುತ್ತದೆ. ಆಗ ನೆನಪಾಗುವವರರು ಇದೇ ಉಗ್ರ ಕಮ್ಯುನಿಸ್ಟ್ ದಂಪತಿಗಳು.
ಕಮ್ಯುನಿಸಂ ಬಗ್ಗೆ ನನ್ನ ವಿರೋಧವಿಲ್ಲ. ನನ್ನ ಯೌವನದ ದಿನಗಳಲ್ಲಿ ನಾನೂ ಕಮ್ಯುನಿಸ್ಟನೇ. ಸರ್ವ ಸಮಾನತೆಯ ಸಮಾಜದ ಕನಸು ಕಂಡವನೇ. ಈಗಲೂ ಅಂತಹ ಸಮಾಜ ನಿರ್ಮಾಣವಾಗುವುದಿದ್ದರೆ ಅದಕ್ಕೆ ನನ್ನ ಬೆಂಬಲ ಇದ್ದೇ ಇದೆ. ಆದರೆ ನಮ್ಮ ಹೋರಾಟಕ್ಕೆ ತೊಂದರೆಯಾಗುತ್ತದೆ ಎಂದು ಮಕ್ಕಳೇ ಬೇಡ ಎಂದು ಹೇಳಿದ್ದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಹಾಗೆ ಮಕ್ಕಳಾದರೆ ಹೋರಾಟಕ್ಕೆ ತೊಂದರೆಯಾಗುತ್ತದೆ ಎಂದು ಹೇಳುವವರು ಬದುಕನ್ನೇ ನಿರಾಕರಿಸಿದಂತೆ. ಬದುಕನ್ನು ಹೊರತುಪಡಿಸಿದ ಹೋರಾಟ ಇಲ್ಲ. ಬದುಕನ್ನು ಮೀರಿದ ಹೋರಾಟ ಕೂಡ ಇರುವುದು ಸಾಧ್ಯವಿಲ್ಲ. ಯಾಕೆಂದರೆ, ನಮ್ಮೆಲ್ಲರ ನಂಬಿಕೆ, ಚಿಂತನೆಗಳಿಗಿಂತ ಬದುಕು ದೊಡ್ಡದು. ಯಾರು ಬದಕನ್ನೇ ನಿರಾಕರಿಸುತ್ತಾರೋ ಅವರು ಹೋರಾಟಕ್ಕೆ ಅರ್ಥವಿಲ್ಲ. ಹಾಗೆ ಅವರು ಪ್ರಾಮಾಣಿಕರೂ ಎಂದೂ ಅನ್ನಿಸುವುದಿಲ್ಲ.
ಪ್ರಕಾಶ್ ಕಾರಟ್ ಮತ್ತು ಬೃಂದಾ ಕಾರಟ್ ಅವರ ಬಗ್ಗೆ ನನಗೆ ಪಾಪ ಅನ್ನಿಸುತ್ತದೆ. ಹೋರಾಟದ ಬೃಮೆಯಲ್ಲಿ ಬದುಕನ್ನು ನಿರಾಕರಿಸುವ ಇವರ ಬಗ್ಗೆ ಬೇಸರವಾಗುತ್ತದೆ.
Subscribe to:
Post Comments (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ಮಹಾರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಎರಡನೆ ಬಂಡಾಯ.. ಒಂದು ವರ್ಷದ ಹಿಂದೆ ಶಿವಸೇನೆಯಿಂದ ಹೊರಗೆ ಬಂದ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ಮುಖ್ಯ...
-
ಮಳೆ ಹೊಯ್ದು ಹೋದ ಮೇಲೆ ಮಳೆ ಹನಿಗಳು ಬೀಳುತ್ತಲೇ ಇರುತ್ತವೆ,, ಮೋಡ ಮುಚ್ಚಿರುತ್ತದೆ. ಯಾವಾಗ ಮತ್ತೆ ಮಳೆ ಬರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ.. ಮತ್ತೆ ಗುಡುಗು ಸಿಡಿ...
3 comments:
"ಬದುಕನ್ನು ಹೊರತುಪಡಿಸಿದ ಹೋರಾಟ ಇಲ್ಲ. ಬದುಕನ್ನು ಮೀರಿದ ಹೋರಾಟ ಕೂಡ ಇರುವುದು ಸಾಧ್ಯವಿಲ್ಲ. ಯಾಕೆಂದರೆ, ನಮ್ಮೆಲ್ಲರ ನಂಬಿಕೆ, ಚಿಂತನೆಗಳಿಗಿಂತ ಬದುಕು ದೊಡ್ಡದು. ಯಾರು ಬದಕನ್ನೇ ನಿರಾಕರಿಸುತ್ತಾರೋ ಅವರು ಹೋರಾಟಕ್ಕೆ ಅರ್ಥವಿಲ್ಲ. ಹಾಗೆ ಅವರು ಪ್ರಾಮಾಣಿಕರೂ ಎಂದೂ ಅನ್ನಿಸುವುದಿಲ್ಲ"
ಖರೇ ಮಾತು..
olle baraha
Khandit nij. estendaroo manushya jeeviye horatu vastuvallavalla?-raghavendra hegde
Post a Comment