Friday, November 28, 2008

ಇದು ಮೌನದ ಸಮಯ.........


ಈ ಚಿತ್ರವನ್ನು ನೋಡಿ. ಜೀವ ಕೊಡುವ ಶಕ್ತಿ ಇಲ್ಲದ ನಮಗೆ ಜೀವ ತೆಗೆಯುವ ಹಕ್ಕು ಬರುವುದು ಹೇಗೆ ?
ಧರ್ಮ ದೇವರು ನಮಗೆ ಯಾಕೆ ಬೇಕು ?
ಯಾಕೆ ಮನುಷ್ಯ ಇಷ್ಟು ಕ್ರೂರಿ ಯಾಗುತ್ತಿದ್ದಾನೆ ? ಯಾಕೆ ಅವನಿಗೆ ಜೀವ ತೆಗೆಯಲು ಆಸೆ ?
ಇದು ಉತ್ತರ ಗೊತ್ತಿಲ್ಲದ ಪ್ರಶ್ನೆಗಳು.
ನಾವು ಅಪ್ಪಟ ಸುಳ್ಳುಗಾರರು. ನಮ್ಮ ಶಬ್ದಗಳು ಸುಳ್ಳು. ಮಾತುಗಳು ಸುಳ್ಳು. ಇಂತಹ ಸಂದರ್ಭದಲ್ಲಿ ಮಾತನಾಡಲು ಮನಸ್ಸಾಗುವುದಿಲ್ಲ. ಇದು ಮೌನದ ಸಮಯ. ನಮ್ಮ ಮನಸ್ಸುಗಳು ಹೆಪ್ಪುಗಟ್ಟಲಿ. ಮೌನ ಸ್ಥಾಯಿಯಾಗಲಿ. ನಾವೆಲ್ಲ ಮೌನವಾಗಿರೋಣ. ಆಗಲಾದರೂ ನಮ್ಮ ಪ್ರಶ್ನೆಗಳಿಗೆ ಉತ್ತರ ದೊರಕಬಹುದು. ದಯವಿಟ್ಟು ಮಾತನಾಡಬೇಡಿ. ನೀವು ಮಾತನಾಡಿದರೆ ಸುಳ್ಳಾಗುತ್ತೀರಿ. ನಿಮ್ಮ ತರ್ಕದ ಶಕ್ತಿಯನ್ನು ಪ್ರದರ್ಶಿಸಲು ಪ್ರಾರಂಭಿಸುತ್ತೀರಿ. ನಿಮ್ಮ ವೈಚಾರಿಕತೆಯ ಪ್ರದರ್ಶನ ಮಾಡಲು ಮುಂದಾಗುತ್ತೀರು. ತರ್ಕ ಮತ್ತು ವೈಚಾರಿಕತೆ ಸತ್ಯವಲ್ಲ. ಅದು ಸತ್ಯ ಹೀಗೆ ಎಂದು ಹೇಳುವ ಅಹಂಕಾರ. ಆದ್ದರಿಂದ ಇದು ಮೌನದ ಸಮಯ. ಬುದ್ದನಂತೆ ಧ್ಯಾನಿಸುವ ಸಮಯ. ನಾವೆಲ್ಲ ಎಚ್ಚರಗೊಳ್ಳುವ ಸಮಯ. ಎಚ್ಚರಗೊಳಿಸುವ ಸಮಯ.

2 comments:

ರಾಮಸ್ವಾಮಿ ಹುಲಕೋಡು said...

ನನಗೂ ನಿಮ್ಮ ನಿಲುವು ಸರಿಯೆನಿಸಿದೆ.

Leo said...

you just snatched words from my mouth

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...