Saturday, February 20, 2010

ಮಲೇನಾಡಿನ ಅರಣ್ಯದ ಮೇಲೆ ಗಣಿ ಧಣಿಗಳ ಹೆಲಿಕಾಪ್ಟರು.....!

ನಮಗಿರುವುದು ಒಂದೇ ಭೂಮಿ. ಇಲ್ಲಿ ನಮ್ಮ ಜೊತೆ ಪಶು ಪಕ್ಷಿಗಳಿವೆ. ಅಸಂಖ್ಯಾತ ಜೀವ ಜಂತುಗಳಿವೆ. ಗುಡ್ಡ ಬೆಟ್ಟಗಳಿವೆ. ಪರ್ವತ ಶ್ರೇಣಿಗಳಿವೆ. ನದಿಗಳಿವೆ, ಕೆರೆ ಕೊತ್ತಲಗಳಿವೆ. ಮರಭೂಮಿಯಿದೆ. ನಿತ್ಯ ಹರಿದ್ವರ್ಣ ಕಾಡುಗಳಿವೆ. ಇಲ್ಲಿ ರಾತ್ರಿಯಾಗುತ್ತದೆ, ಹಗಲಾಗುತ್ತದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲವಿದೆ.

ಇದೆಲ್ಲ ಎಷ್ಟು ವ್ಯವಸ್ಥಿತವಾಗಿ ನಡೆಯುತ್ತದೆ ನೋಡಿ. ಯಾರದೋ ನಿರ್ದೇಶನದಲ್ಲಿ ನಡೆಯುವಂತೆ ಎಲ್ಲವೂ ನಡೆದುಹೋಗುತ್ತದೆ. ಒಮ್ಮೊಮ್ಮೆ ಈ ಪ್ರಕೃತಿಯಲ್ಲಿ ನಡೆಯುವ ಈ ವಿದ್ಯಮಾನಗಳು ನಮಗೆ ಅಚ್ಚರಿಯನ್ನು ಮೂಡಿಸುತ್ತವೆ. ಮತ್ತೊಮ್ಮೆ ಈ ಪ್ರಕೃತಿಯ ಮುಂದೆ ನಾವೆಷ್ಟು ಸಣ್ಣವರು ಎಂಬ ವಿನೀತಭಾವ ನಮ್ಮನ್ನು ಆವರಿಸಿಬಿಡುತ್ತದೆ. ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಹಭಾಳ್ವೆಯೇ ಬದುಕು ಎಂಬ ಪಾಠವನ್ನು ಕೇಳುತ್ತಲೇ ಬೆಳೆದ ನಮ್ಮ ನಾಗರೀಕತೆ ನಮ್ಮದು. ಆದರೆ ಈ ಪ್ರಕೃತಿಯ ಮೇಲೆ ಮನುಷ್ಯ ನಡೆಸುತ್ತಿರುವ ಧಾಳಿ, ಪ್ರಾಕೃತಿಕ ಸಮತೋಲನವನ್ನೇ ಹಾಳು ಮಾಡುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ.

ಇದನ್ನೆಲ್ಲ ನಾನು ನೆನಪಿಸಿಕೊಳ್ಳುತ್ತಿರುವುದಕ್ಕೆ ಕಾರಣ ರಾಜ್ಯ ಸಚಿವ ಸಂಪುಟ ನಿನ್ನೆ ತೆಗೆದುಕೊಂಡ ತೀರ್ಮಾನ. ರಾಜ್ಯದ ಮೂರು ಜಿಲ್ಲೆಗಳ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯ ಮೇಲಿದ್ದ ನಿಷೇಧವನ್ನು ರಾಜ್ಯ ಸರ್ಕಾರ ತೆಗೆದು ಹಾಕಿದೆ. ಬಳ್ಳಾರಿ, ಶಿವಮೊಗ್ಗ ಮತ್ತು ಮೈಸೂರಿನ ಸಂರಕ್ಷಿತ ಅರಣ್ಯದಲ್ಲಿ ಇನ್ನು ಮುಂದೆ ಗಣಿಗಾರಿಕೆ ಮಾಡಬಹುದು.

ಈ ಜನ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಏನನ್ನು ಮಾಡಲು ಹೊರಟಿದ್ದಾರೆ ? ಇವರಿಗೆ ನಮ್ಮ ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಕನಿಷ್ಟ ಕಳಕಳಿ ಇದೆಯಾ ? ಇಲ್ಲ. ಮಠಗಳಿಗೆ ಹಣ ನೀಡುವುದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿರುವ ಯಡಿಯೂರಪ್ಪ ಈ ನಿರ್ಧಾರದ ಮೂಲಕ ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ. ಅಧಿಕಾರ ರಾಜಕಾರಣದ ಮುಂದೆ ಉಳಿದಿದ್ದೆಲ್ಲ ಗೌಣ ಎಂಬುದನ್ನು ಅವರು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಹಾಗೆ ಬಳ್ಳಾರಿಯ ಗಣಿ ಧಣಿಗಳು ಸರ್ಕಾರದ ಮೇಲೆ ತಮಗಿರುವ ನಿಯಂತ್ರವಣನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.

ಯಾವುದೇ ಒಂದು ಸರ್ಕಾರಕ್ಕೆ ಸಾಮಾಜಿಕ ಬದ್ಧತೆ ಇರಬೇಕಾಗುತ್ತದೆ. ಒಬ್ಬ ಮುಖ್ಯಮಂತ್ರಿ ಜನರ ನಡುವಿನ ನಾಯಕನಾಗಬೇಕು. ಅದರೆ ಯಡಿಯೂರಪ್ಪ ಅವರಲ್ಲಿ ಈಗ ಅಧಿಕಾರದಲ್ಲಿ ಸದಾ ಇರಬೇಕು ಅನ್ನುವುದನ್ನು ಬಿಟ್ಟರೆ ಬೇರೆ ಬದ್ಧತೆ ಉಳಿದಿಲ್ಲ. ನಾಲ್ಕಾರು ಭಟ್ಟಂಗಿಗಳನ್ನು ನೂರಾರು ಮಠಾಧೀಶರನ್ನು ಇಟ್ಟುಕೊಂಡು ಅವರು ಅಧಿಕಾರ ನಡೆಸುತ್ತಿದ್ದಾರೆ. ಅಧಿಕಾರವನ್ನು ಉಳಿಸಿಕೊಳ್ಳಲು ಏನನ್ನೂ ಮಾಡಲು ಅವರು ಈಗ ಸಿದ್ಧ.

ಇಂತಹ ಜನ ವಿರೋಧಿ ತೀರ್ಮಾನಗಳನ್ನು ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರಕ್ಕೆ ಬುದ್ಧಿ ಹೇಳುವ ಸ್ಥಿತಿಯಲ್ಲೂ ಪಕ್ಷದ ನಾಯಕತ್ವ ಇಲ್ಲ. ಈಗಾಗಲೇ ಸೋಲಿನ ಮೇಲೆ ಸೋಲನ್ನು ಅನುಭವಿಸಿ ಹತಾಶವಾಗಿರುವ ಬಿಜೆಪಿ ವರಿಷ್ಠರಿಂದ ಹಿತವಚನವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ, ಬಿಜೆಪಿ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡಿರುವ ಸಂಘ ಪರಿವಾರ ಏನು ಮಾಡುತ್ತಿದೆ. ಸದಾ ವತ್ಸಲೆ ಮಾತೃಭೂಮಿ ಎಂದು ಹೇಳುತ್ತಲೇ ದಿನಚರಿಯನ್ನು ಪ್ರಾರಂಭಿಸುವ ಆರ್ ಎಸ್ ಎಸ್ ನಾಯಕರಿಗೆ ಇಂತಹ ತೀರ್ಮಾನಗಳಿಂದ ಮಾತೃಭೂಮಿ ಸದಾ ವತ್ಸಲೆಯಾಗಿ ಉಳಿಯುವುದಿಲ್ಲ, ಎಲ್ಲವನ್ನೂ ಕಳೆದುಕೊಂಡ ವಿಧವೆಯಾಗುತ್ತಾಳೆ ಎಂಬ ಅರಿವು ಇರಬೇಕಿತ್ತು. ಇದನ್ನು ಯಡಿಯೂರಪ್ಪ ಅವರಿಗೆ ಹೇಳಬೇಕಿತ್ತು. ಆದರೆ ಆರ್ ಎಸ್ ಎಸ್ ನಾಯಕರೂ ಸಹ, ಗಣಿ ಹಣಕ್ಕೆ ಬಲಿಯಾದಂತೆ ಕಾಣುತ್ತಿದೆ.

ಭಾರತೀಯ ಜನತಾ ಪಾರ್ಟಿಯಲ್ಲೂ ಪ್ರಕೃತಿಯನ್ನು ಪ್ರೀತಿಸುವವರು ಇದ್ದಾರೆ ಎಂದು ನಾನು ನಂಬಿದ್ದೇನೆ. ಅವರೆಲ್ಲ ಈಗ ಈ ತೀರ್ಮಾನದ ವಿರುದ್ಧ ಧ್ವನಿ ಎತ್ತಬೇಕು. ಹಾಗೆ ಮುಖ್ಯಮಂತ್ರಿಗಳ ಕೃಪಾಶೀರ್ವಾದದಿಂದ ಗೂಟದ ಕಾರು ಪಡೆದಿರುವ ಪರಿಸರವಾದಿ, ಅನಂತ ಹೆಗಡೆ ಅಶೀಸರ, ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಹಾಗೆ ಸಾಹಿತಿಗಳು ಕಲಾವಿದರು, ರೈತ ಸಂಘಟನೆಗಳು ಈ ತೀರ್ಮಾನದ ವಿರುದ್ಧ ಧ್ವನಿ ಎತ್ತಬೇಕಾದ ಅಗತ್ಯವಿದೆ.

ನನಗಿನ್ನೂ ಸರಿಯಾಗಿ ನೆನಪಿದೆ. ನಾವು ಶಾಲೆಗೆ ಹೋಗುವ ದಿನಗಳು ಅವು. ಅಗಸ್ಟ್ ತಿಂಗಳಿನಲ್ಲಿ ಜಲ ಒಡೆಯುತ್ತಿತ್ತು.ನೀರಿನ ಬುಗ್ಗೆಗಳು ಸುಮಾರು ಒಂದು ತಿಂಗಳುಗಳ ಕಾಲ ಹಾಗೆ ಚಿಮ್ಮುತ್ತಲೇ ಇರುತ್ತಿದ್ದವು. ಈಗ ನಾನು ಮಳೆಗಾಲದ ದಿನಗಳಲ್ಲಿ ಊರಿಗೆ ಹೋದರೆ ಜಲ ಇಡೆಯುವುದನ್ನು ನೋಡುವುದಕ್ಕಾಗಿ ಎಲ್ಲೆಡೆ ಹುಡುಕುತ್ತೇನೆ. ಆದರೆ ಕಳೆದ ಹಲವಾರು ವರ್ಷಗಳಿಂದ ನಾನು ಜಲ ಒಡೆದಿದ್ದನ್ನು ನೋಡಿಯೇ ಇಲ್ಲ. ನಾವು ಶಾಲೆಗೆ ಹೋಗುವಾಗ ಕಾಣುತ್ತಿದ್ದ ಹುಲಿ, ಜಿಂಕೆಗಳು ಕಾಣಬಹುದೇ ಎಂದು ನೋಡುತ್ತೇನೆ. ಆದರೆ ಈ ಪ್ರಾಣಿಗಳು ಕಾಣುವುದಿಲ್ಲ. ಉತ್ತರ ಕನ್ನಡದ ಬಹುತೇಕ ಕಡೆ, ನೀಲಗಿರಿ ಆಕೇಶಿಯಾ ಗಿಡಗಳು ನಮ್ಮನ್ನು ಅಣಕಿಸುವುದನ್ನು ನಾನು ನೋಡುತ್ತೇನೆ. ನಾಗರೀಕತೆ, ಜೋಗ ಜಲಪಾತದ ಸೌಂದರ್ಯವನ್ನು ಕಸಿದುಕೊಂಡಿತು. ತಮ್ಮಿಷ್ಟದಂತೆ ಹರಿಯುತ್ತಿದ್ದ ನದಿಗಳು ಆಣೆ ಕಟ್ಟುಗಳಿಂದ ನಿಂತಲ್ಲೇ ನಿಲ್ಲಬೇಕಾಯಿತು. ನಾಗರೀಕತೆ ಇಲ್ಲಿನ ಬದುಕನ್ನೇ ನಾಶಪಡಿಸಿತು. ಈಗ ಮಲೇನಾಡಿನ ಅರಣ್ಯ ಪ್ರದೇಶಗಳಲ್ಲಿ ಗಣಿ ಧೂಳು ಆವರಿಸಿಕೊಳ್ಳಲಿದೆ. ಗಣಿ ಧಣಿಗಳ ಹೆಲಿಕಾಪ್ಟರ್ ಈ ಪ್ರದೇಶದಲ್ಲೂ ಹಾರಾಟ ನಡೆಸಲು ಪ್ರಾರಂಭಿಸಲಿವೆ.

ಜನ ಸಂಘಟಿತರಾದರೆ ಏನನ್ನೂ ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಮಹಾತ್ಮಾ ಗಾಂಧಿ. ಅವರಿಗೆ ಅಭಿವೃದ್ಧಿ ಮತ್ತು ನಾಗರೀಕತೆಯ ಬಗ್ಗೆ ಸ್ಪಷ್ಟ ಕಲ್ಪನೆಗಳಿದ್ದವು. ಹೀಗಾಗಿ ಅವರು ಗ್ರಾಮ ಸ್ವರಾಜ್ಯದ ಮಾತನಾಡಿದ್ದರು. ಸ್ವಾವಲಂಬನೆಯ ಮಾತನಾಡಿದ್ದರು. ವಿದೇಶಿ ವಸ್ತುಗಳ ವಿರುದ್ಧ ಸಮರ ಸಾರಿದ್ದರು. ತಮ್ಮ ಅಹಿಂಸಾತ್ಮಕ ಹೋರಾಟದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದರು.

ನಾವಿಂದು ಗಾಂಧಿಯನ್ನ ನೆನಪು ಮಾಡಿಕೊಳ್ಳಬೇಕು, ಹಾಗೆ ನಮ್ಮ ಅಭೀವೃದ್ಧಿ ಕಲ್ಪನೆ ಬದಲಾಗಬೇಕು. ನಾಗರಿಕತೆಯ ಹುಚ್ಚು ಕನಸಿನ ಬೆನ್ನ ಹಿಂದೆ ಬಿದ್ದು, ಎಲ್ಲವನ್ನು ನಾಶಪಡಿಸುವ ಮನಸ್ಥಿತಿಯಿಂದ ಹೊರಕ್ಕೆ ಬರಬೇಕು. ಇಲ್ಲದಿದ್ದರೆ ಮುಂದಿನ ತಲೆ ಮಾರು ನಮ್ಮನ್ನು ಕ್ಷಮಿಸುವುದಿಲ್ಲ.

Sunday, February 14, 2010

ಪ್ರೀತಿಸುವ ಹುಡುಗ ಹುಡುಗಿಯರಿಗೆ...........

ಇಂದು ವಾಲೆಂಟೈನ್ ಡೇ. ಹುಡುಗ ಹುಡುಗಿಯರಿಗೆ ತಮ್ಮ ಪ್ರೀತಿಯನ್ನ, ತಮ್ಮ ಮನಸ್ಸಿನ ಆಳದಲ್ಲಿ ಹುಡುಗಿಟ್ಟುಕೊಂಡ ಭಾವನೆಗಳನ್ನ ಹೇಳುವ ಅವಕಾಶ. ಗಿಫ್ಟ್ ಕೊಟ್ಟು ಸಂತೋಷ ಪಡುವ ಸಂದರ್ಭ.

ಆದರೆ ಪ್ರೀತಿ ಎಂದರೇನು ? ಅದೊಂದು ದೈವಿಕವಾದ ಭಾವನೆಯಾ ? ದೈಹಿಕ ಆಕರ್ಷಣೆಯಾ ? ಅದೊಂದು ಮನಸ್ಥಿತಿಯಾ ? ಗಂಡು ಹೆಣ್ಣಿನ ನಡುವಿನ ಸಹಜ ಸಂಬಂಧವಾ ? ಈ ಬಗ್ಗೆ ನಾವು ಬಹುತೇಕ ಸಂದರ್ಭದಲ್ಲಿ ಯೋಚಿಸುವುದಿಲ್ಲ. ಒಂದು ಕ್ಷಣ ಎಲ್ಲವನ್ನು ಬಿಟ್ಟು ಯೋಚಿಸಿ. ಪ್ರೀತಿ ಎಂದರೆ ಹರಿಯುವ ನದಿಯಂತೆ ಎಂದು ಹೇಳಿದವರು ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ. ಪ್ರೀತಿ ಎನ್ನುವುದು ಕೇವಲ ಶಬ್ದವಲ್ಲ, ಅದು ಎಲ್ಲವನ್ನೂ ಮೀರಿದ ಸ್ಥಿತಿ ಎಂದವರು ಓಷೋ. ಹೀಗೆ ಪ್ರೀತಿಯ ಬಗ್ಗೆ ಮಾತನಾಡಿದವರು ನೂರಾರು. ಯಾರನ್ನಾದರೂ ಪ್ರೀತಿಸಬೇಕು ಎಂದು ಹಪಹಪಿಸಿವವರು ಎಲ್ಲರೂ. ಆದರೆ ನಮಗೆ ಪ್ರೀತಿಯ ಬಗ್ಗೆ ಸರಿಯಾಗಿ ತಿಳಿದಿಲ್ಲ. ನಾವು ಪೊಸೇಸೀವ್ ಆಗಿರುವುದೇ ಪ್ರೀತಿ ಎಂದುಕೊಳ್ಳುತ್ತಿರುತ್ತೇವೆ. ನನಗೆ ಅವನೋ ಅವಳೋ ಉತ್ಕಟವಾಗಿ ಬೇಕು ಎಂದುಕೊಂಡ ತಕ್ಷಣ ಅದಕ್ಕೆ ಪ್ರೀತಿ ಎಂದು ಕರೆದು ಬಿಡುತ್ತೇವೆ. ಆದರೆ ಪ್ರೀತಿ ಅದಲ್ಲ. ಪ್ರೀತಿ ಎನ್ನುವುದು ಕೊಡುವುದು, ತೆಗೆದುಕೊಳ್ಳುವುದಲ್ಲ. ಪ್ರೀತಿ ಎಂದರೆ ಶಬ್ದವಲ್ಲ. ಅದನ್ನೂ ಮೀರಿದ್ದು. ಪ್ರೀತಿ ಎಂದರೆ ಮಾತಲ್ಲ, ಅದೊಂದು ಮೌನ. ಪ್ರೀತಿ ಎಂದರೆ ಹೇಳುವುದಲ್ಲ, ಕೇಳಿಸಿಕೊಳ್ಳುವುದು.

ಭಾರತದಲ್ಲಿ ನಾವು ಪ್ರೀತಿಯ ಬಗ್ಗೆ ಮಾತನಾಡುವಾಗ ಹಲವರು ಸಿಗುತ್ತಾರೆ. ಪ್ರೀತಿಗಾಗಿ ಜೀವವನ್ನೇ ಬಲಿ ಕೊಟ್ಟ ಸಲೀಮ್ ಅನಾರ್ಕಲಿಯಂತಹ ಕಥೆಗಳು ನಮಗೆ ಸಿಗುತ್ತವೆ. ಆದರೆ ಇಂದಿಗೂ ಪ್ರೀತಿ ಎಂದ ತಕ್ಷಣ ನಮ್ಮ ಕಣ್ಣು ಮುಂದೆ ಬರುವವನು ಮಹಾಭಾರತದ ಕೃಷ್ಣ. ಆತ ಎಲ್ಲವನ್ನೂ ಕೇಳಿಸಿಕೊಳ್ಳಬಲ್ಲವನಾಗಿದ್ದ. ಎಲ್ಲರನ್ನೂ ಪ್ರೀತಿಸಬಲ್ಲವನಾಗಿದ್ದ. ಯಾವ ಸಂದರ್ಭದಲ್ಲೂ ಆತನಿಗೆ ಸಿಟ್ಟೇ ಬರುತ್ತಿರಲಿಲ್ಲ. ಆತ ರುಕ್ಮಿಣಿಗೆ ಹೆದರುತ್ತಲೇ ಆಕೆಯನ್ನು ಪ್ರೀತಿಸುತ್ತಿದ್ದ. ಸತ್ಯಭಾಮಾಳ ಅಹಂಕಾರಕ್ಕೆ ಪೆಟ್ಟು ನೀಡುತ್ತಲೇ ಅವಳನ್ನು ಒಪ್ಪಿಕೊಳ್ಳಬಲ್ಲವನಾಗಿದ್ದ. ಜಾಂಬವತಿಯ ಆರಾಧನೆಗೆ ತನ್ನು ಒಪ್ಪಿಸಿಕೊಂಡು ಅವಳನ್ನು ಪ್ರೀತಿಸುತ್ತಿದ್ದ. ಹಾಗೆ ಕೃಷ್ಣ ಮತ್ತು ದ್ರೌಪದಿಯ ನಡುವಿನ ಸಂಬಂಧ. ಕೃಷ್ಣನ ಹೃದಯದಲ್ಲಿ ದ್ರೌಪದಿಗೆ ತುಂಬಾ ವಿಶಿಷ್ಟವಾದ ಸ್ಥಾನವಿತ್ತು. ಅತ ಅವಳ ಎದುರು ಮೌನವಾಗಿಬಿಡುತ್ತಿದ್ದ.

ಅವನಿಗೆ ಪ್ರೀತಿ ಎಂದರೆ ಯಮುನೆ. ಯಮುನಾ ನದಿಯ ದಂಡೆಯ ಮೇಲೆ ಆಟವಾಡಿ ಬೆಳೆದ ಆತ ಗೋಪಿಕೆಯರ ಸೀರೆ ಕದ್ದಿದ್ದು ಇದೇ ನದಿಯ ದಂಡೆಯ ಮೇಲೆ. ಹಾಗೆ ತನ್ನ ಮುರಳಿಗಾನಕ್ಕೆ ಆತ ಆಯ್ಕೆ ಮಾಡಿಕೊಂಡಿದ್ದು ಯಮುನಾ ನದಿಯ ದಂಡೆಯನ್ನ. ಆತ ಅಲ್ಲಿಂದ ಧ್ವಾರಕೆಗೆ ಬಂದ ಮೇಲೆ ಮುರಳಿಯನ್ನು ಬಿಟ್ಟ. ಆದರೆ ತನ್ನೊಳಗಿನ ಪ್ರೀತಿ ಆರಿ ಹೋಗದಂತೆ ನೋಡಿಕೊಂಡ. ನನಗೆನ್ನಿಸುವ ಹಾಗೆ ಕೃಷ್ಣನ ಪ್ರೀತಿಗೆ ಹಲವು ಮುಖಗಳಿದ್ದವು. ಬೇರೆ ಬೇರೆ ಆಯಾಮಗಳಿದ್ದವು. ಆತ ಪ್ರೀತಿಯ ಅತಿ ದೊಡ್ಡ ಸಂಕೇತ.

ಭಾರತದಲ್ಲಿ ಪ್ರೀತಿಗೆ ಸಂಬಂಧಿಸಿದ ಮಹಾಕಾವ್ಯಗಳಿವೆ. ಕಾಳಿದಾಸನ ಮೇಘಧೂತ ಇಂತಹ ಕಾವ್ಯಗಳಲ್ಲಿ ಒಂದು. ಉರ್ದು ಶಾಯರಿಗಳು ಘಝಲ್ ಗಳು ಪ್ರೀತಿಯ ಸಮುದ್ರ. ಹಾಗೆ ಕನ್ನಡಕ್ಕೆ ಬಂದರೆ ಇಲ್ಲಿ ಪ್ರೀತಿಯನ್ನು ಆರಾಧಿಸುವ ಕವಿಗಳಿದ್ದಾರೆ. ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ಎಂಬ ಕವಿವಾಣಿ ಪ್ರೀತಿಯನ್ನ ಅತ್ಯದ್ಭುತವಾಗಿ ವಿವರಿಸುತ್ತದೆ. ಬಿ. ಆರ್‍. ಲಕ್ಷಣರಾವ್ ಅವರಂಥಹ ಪ್ರೀತಿಯ ತುಂಟ ಕವಿಗಳಿದ್ದಾರೆ. ದಾಂಪತ್ಯ ಬದುಕಿನ ಪ್ರೀತಿಯನ್ನ ಕಟ್ಟಿಟ್ಟ ಕೆ. ಎಸ್. ನರಸಿಂಹಸ್ವಾಮಿ ಅವರ ಗೀತೆಗಳು ನಮ್ಮ ನಡುವೆ ಇವೆ. ಇಂದು ಪ್ರೀತಿಯ ಬಗ್ಗೆ ಮಾತನಾಡುವ ಹುಡೂಗ ಹುಡುಗಿಯರಿಗೆ ಇದೆಲ್ಲ ಗೊತ್ತಿರಲಿಕ್ಕಿಲ್ಲ. ಇಂದು ನಮ್ಮ ನಡುವೆ ಗಟ್ಟಿಯಾಗಿ ಬೇರೂರಿರುವುದು ಸಿನೆಮಾ ಪ್ರೀತಿ. ಇದು ಶಾರೂಖ್ ಖಾನ್ ನ ಪ್ರೀತಿಯೂ ಆಗಿರಬಹುದು, ಕನ್ನಡದ ಗಣೇಶನ ಪ್ರೀತ್ಇಯೂ ಆಗಿರಬಹುದು. ಆದರೆ ಇದು ನಿಜವಾದ ಪ್ರೀತಿ ಅಲ್ಲ.

ಪ್ರೀತಿ ಎನ್ನುವುದಕ್ಕೆ ನದಿಯ ಹಾಗೆ ಯಾವುದೇ ಕಟ್ಟು ಪಾಡುಗಳಿಲ್ಲ. ಅದಕ್ಕೆ ಯಾವುದೇ ಹಂಗೂ ಇಲ್ಲ. ಪ್ರೀತಿ ನದಿಯಂತೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇಹರಿಯುತ್ತಲೇ ಇರುತ್ತದೆ.

ವಾಲೆಂಟೈನ್ ಡೇ ದಿನ ಈ ಮಾತುಗಳನ್ನು ಹೇಳಬೇಕು ಎಂದು ಅನ್ನಿಸಿತು. ಹಾಗೆ, ಈ ಬಗ್ಗೆ ಎದ್ದಿರುವ ವಿವಾದ. ಪ್ರಮೋದ್ ಮುತಾಲಿಕ್ ಅಂತವರಿಗೆ ಪ್ರೀತಿ ಅರ್ಥವಾಗುವುದು ಸಾಧ್ಯವೇ ಇಲ್ಲ. ಯಾಕೆಂದರೆ ನಿಜವಾದ ಪ್ರೀತಿಯನ್ನು ಅರ್ಥಮಾಡಿಕೊಂಡವ, ಸಂತ ವಾಲೆಂಟನ್ ನನ್ನು ಧ್ವೇಷಿಸುವುದು, ವಿರೋಧಿಸುವುದು ಸಾಧ್ಯವೇ ಇಲ್ಲ. ಆದರೆ ನಿಮಗೊಂದು ಮಾತು ಹೇಳುತ್ತೇನೆ. ನಿಮಗೆ ಮಹಾಭಾರತದ ಕೃಷ್ಣ ಅರ್ಥವಾಗದಿದ್ದರೆ ನೀವು ಯಾರನ್ನೂ ಪ್ರೀತಿಸಲಾರಿರಿ. ಕಾಳಿದಾಸನ ಮೇಘಧೂತ ತಿಳಿಯದಿದ್ದರೆ, ಪ್ರೀತಿಯ ಉತ್ಕಟತೆಯ ಅನುಭವ ನಿಮಗೆ ಬರಲಾರದು. ಬಿ. ಆರ್. ಲಕ್ಷಣರಾವ್ ಅವರ ಕವನಗಳನ್ನು ಓದದಿದ್ದರೆ, ಪ್ರೀತಿಯ ಜೊತೆಗಿನ ತುಂಟತನ ನಿಮ್ಮನ್ನು ತಟ್ಟುವುದಿಲ್ಲ. ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ಎಂದು ಕೇಳಿದ ಜಿಎಸ್ ಶಿವರುದ್ರಪ್ಪನವನ ಕವನವನ್ನು ಓದದಿದ್ದರೆ ಈ ಬದುಕಿನಲ್ಲಿ ಪ್ರೀತಿಯ ಮಹತ್ವ ಏನು ಎಂಬುದು ನಿಮಗೆ ತಿಳಿಯುವುದಿಲ್ಲ. ಕೆ. ಎಸ್. ನರಸಿಂಹಸ್ವಾಮಿಯವರ ದಾಂಪತ್ಯದ ಪ್ರೀತಿಯನ್ನ ನೀವು ತಿಳಿದರೆ ಪ್ರೀತಿ ಇನ್ನಷ್ಟು ಸಮೃದ್ಧವಾಗುತ್ತದೆ. ಇದೆಲ್ಲವನ್ನೂ ಮಾಡಿದರೆ ನಿಮ್ಮ ಹೃದಯವೇ ಪ್ರೀತಿಯ ನಿಲ್ದಾಣವಾಗುತ್ತದೆ. ಆಗ ನಿಮಗೆ ನಿಮ್ಮ ಪ್ರೀತಿಗಾಗಿ ವಾಲೆಂಟೈನ್ ಡೇ ಬೇಕಾಗುವುದಿಲ್ಲ. ವರ್ಷದಲ್ಲಿ ಒಮ್ಮೆ ಪ್ರೀತಿಸುವುದಕ್ಕಾಗಿ ಕಾಯುವ ಅಗತ್ಯವೂ ಇರುವುದಿಲ್ಲ. ಪ್ರೀತಿ ಸದಾ ನಿಮ್ಮ ಜೊತೆ ಇರುತ್ತದೆ. ನೀವೇ ಪ್ರೀತಿಯಾಗುತ್ತೀರಿ. ನಿಮ್ಮ ಪ್ರೀತಿ ನದಿಯಂತೆ ಹರಿಯುತ್ತಿರುತ್ತದೆ. ನಿಮ್ಮ ಬಳಿ ಸದಾ ಗುಲಾಬಿ ಅರಳುತ್ತದೆ.

Friday, February 12, 2010

ನಾವು ಹೀಗೆ ಮಾಡಬೇಕು......

ನಾನು ಕಳೆದ ಕೆಲವು ದಿನಗಳ ಹಿಂದೆ ಉತ್ತರ ಕರ್ನಾಟಕದ ಪ್ರವಾಸ ಕೈಗೊಂಡಿದ್ದೆ. ಈ ಪ್ರವಾಸದ ಮೂಲ ಉದ್ದೇಶ ಒಂದೆರಡು ಕಡೆ ಪತ್ರಿಕೊದ್ಯಮ ಮತ್ತು ಸಾಮಾಜಿಕ ಬದ್ಧತೆಯ ಬಗ್ಗೆ ಮಾತನಾಡುವುದು. ಅಲ್ಲಿ ನಾನು ಏನು ಮಾತನಾಡಿದೆ ಎನ್ನುವುದನ್ನು ಮೊದಲು ಹೇಳಿ ಬಿಡುತ್ತೇನೆ.
ಪತ್ರಿಕೋದ್ಯಮಕ್ಕೆ ನಮ್ಮಲ್ಲಿ ತುಂಬಾ ಗೌರವವಿದೆ. ಜೊತೆಗೆ ಸಾಮಾನ್ಯ ಜನರಿಗೆ ಇಂದಿಗೂ ಪತ್ರಿಕೆಗಳ ಬಗ್ಗೆ, ಮಾಧ್ಯಮದ ಬಗ್ಗೆ ನಂಬಿಕೆ ಇದೆ. ಇದಕ್ಕೆ ಬಹುಮುಖ್ಯ ಕಾರಣ ಮಾಧ್ಯಮಗಳು ಬಹುಸಂಖ್ಯಾತರ ಜನರ ಧ್ವನಿಯಾಗಿರುತ್ತವೆ ಎಂಬುದು. ಜೊತೆಗೆ ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ಮಾಧ್ಯಮಗಳು ಯಾವುದೇ ವ್ಯಕ್ತಿಗಾಗಲಿ, ಪಕ್ಷಕ್ಕಾಗಲಿ, ಸಿದ್ಧಾಂತಕ್ಕಾಗಲಿ ಬದ್ಧವಾಗಿರದೇ, ಸಮಾಜಕ್ಕೆ ಬದ್ಧವಾಗಿರುತ್ತವೆ ಎಂಬುದು ಜನರ ನಂಬಿಕೆ. ಈ ನಂಬಿಕೆಯನ್ನು ಗಳಿಸಲು ಭಾರತೀಯ ಪತ್ರಿಕೋದ್ಯಮ, ಸ್ವಾತಂತ್ರ್ಯ ಫೂರ್ವ ಕಾಲದಿಂದ ಕೆಲಸ ಮಾಡುತ್ತ ಬಂದಿವೆ.
ಮಹಾತ್ಮ ಗಾಂಧಿ, ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ ಮೇಲೆ ಮಾಡಿದ ಕೆಲಸ ಎಂದರೆ ಪತ್ರಿಕೆಯನ್ನು ಪ್ರಾರಂಭಿಸಿದ್ದು. ಅವರು ಜನರನ್ನು ತಲುಪಲು ಅತ್ಯುತ್ತಮ ಮಾರ್ಗ ಎಂದರೆ ಪತ್ರಿಕೆಗಳು ಎಂದು ಅವರು ನಂಬಿದ್ದರು. ಅವರ ನಂಬಿಕೆ ಹುಸಿಯಾಗಲಿಲ್ಲ. ಅವರು ತಮ್ಮ ಪತ್ರಿಕೆಯ ಮೂಲಕವೇ ಜನ ಜಾಗೃತಿ ಮೂಡಿಸಿದರು. ಸ್ವಾತಂತ್ರ್ಯ ಚಳವಳಿಯನ್ನು ಕಟ್ಟಿದರು. ಹಾಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಪತ್ರಿಕೆಗಳು ಒಹಿಸಿದ ಪಾತ್ರ ತುಂಬ ಮುಖ್ಯವಾದುದು.
ನನಗೆ ಕಳೆದ ಎರಡು ದಿನಗಳಿಂದ ನಾನು ಅಂದು ಆಡಿದ ಮಾತುಗಳು ನೆನಪಾಗುತ್ತಿವೆ. ಮಾಧ್ಯಮ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರ್ಸಶ್ನೆ ಇಂದು ಹಿಂದೆಂದಿಗಿಂತಲು ಹೆಚ್ಚು ಮುಖ್ಯ ಅನ್ನಿಸುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ನಾನು ಜಿ ನ್ಯೂಸ್ ನ ಬೆಂಗಳೂರು ಬ್ಯುರೋದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ಸಂದರ್ಭ. ಅದೊಂದು ದಿನ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಮತ್ತು ಗೋವಿಂದಾಚಾರ್ಯ ಮೈಸೂರಿನಲ್ಲಿ ಮದುವೆಯಾದರು ಎಂಬ ಸುದ್ದಿ ರಾತ್ರಿಯ ಸುದ್ದಿಯಲ್ಲಿ ಬಂತು. ಆಗ ಜಿ ನ್ಯೂಸ್ ನ ಮುಖ್ಯಸ್ಥರಾಗಿದ್ದ ಸಂಜಯ ಪುಗಲಿಯಾ ನನ್ನನ್ನು ಸಂಪರ್ಕಿಸಿ, ನೋಡಿ, ಇವರಿಬ್ಬರ ಮದುವೆ ಮೈಸೂರಿನಲ್ಲಿ ನಡೆದಿದೆ. ನನಗೆ ಮದುವೆಯ ಫೋಟೋಗಳು ಬೇಕು. ಹಾಗೆ ತಕ್ಷಣ ವೈಸೂರಿಗೆ ಟೀಂ ಕಳುಹಿಸಿ ಪೂಜಾರಿಯಬೈಟ್ ತನ್ನಿ ಎಂದರು. ನನಗೆ ತಕ್ಷಣ ಕೋಪ ಬಂತು.
ಸಾರ್, ಈ ಮದುವೆ ಮೈಸೂರಿನಲ್ಲಿ ನಡೆದಿದೆ ಎಂದು ಹೇಳುತ್ತೀರಿ. ಆದರೆ ಸುದ್ದಿಯನ್ನು ಪ್ರಸಾರ ಮಾಡುವುದಕ್ಕಿಂತ ಮೊದಲು ನನನ್ನುಒಂದು ಮಾತು ಕೇಳಿಲ್ಲ. ಈಗ ಬೈಟ್ ತನ್ನಿ ಎನ್ನುತ್ತಿದ್ದೀರಿ ಎಂದೆ. ಅಷ್ಟರಲ್ಲಿ ಈ ಸುದ್ದಿಯನ್ನು ನೋಡಿ ಕೆಂಡಾಮಂಡಲವಾದ ಉಮಾ ಭಾರತಿ, ಚಾನಲ್ ಗೆ ಹಿಗ್ಗಾಮುಗ್ಗಾ ಝಾಡಿಸಿದ್ದರು. ಹೀಗಾಗಿ ತಾವು ಪ್ರಸಾರ ಮಾಡಿದ ಸುದ್ದಿ ನಿಜವಾದುದು ಎಂದು ಸಾಬೀತು ಪಡಿಸಲು ಸಂಜಯ ಪುಗಲಿಯಾ ಯತ್ನ ನಡೆಸುತ್ತಿದ್ದರು. ನಾನು ವರದಿಗಾರ ಮತ್ತು ಕ್ಯಾಮರ ಮನ್ ಅನ್ನು ಮೈಸೂರಿಗೆ ಕಳುಹಿಸಿದೆ. ಹಾಗೆ ಮೈಸೂರಿನ ಶಾಸಕರನ್ನು ಈ ಬಗ್ಗೆ ಪ್ರಶ್ನಿಸಿದೆ. ಅವರಿಗೆ ಈ ಬಗ್ಗೆ ತಿಳಿದಿರಲಿಲ್ಲ. ಮೈಸೂರಿನ ಪೊಲೀಸ್ ಕಮೀಷನರ್ ಅವರನ್ನು ಸಂಪರ್ಕಿಸಿ, ಕಳೆದ ಎರಡು ದಿನಗಳಿಂದ ಈಚೆಗೆ ಯಾರಾದರೂ ವಿಐಪಿ ಗಳು ಬಂದಿದ್ದರಾ ಎಂದು ಪ್ರ್ಷ್ನಶ್ನಿಸಿದೆ. ಅವರಿಂದ ಬಂದ ಉತ್ತರ ಇಲ್ಲ. ಮೈಸೂರಿಗೆ ಹೋಗಿದ್ದ ನಮ್ಮ ಹುಡುಗರು ಅಲ್ಲಿ ಯಾವ ಮದುವೆ ನಡೆದಿಲ್ಲ ಎಂಬ ಸುದ್ದಿಯನ್ನು ತಂದರು.
ಈ ಸುದ್ದಿ ಬೇಜವಾಬ್ದಾರಿಯದಾಗಿತ್ತು. ದೆಹಲಿಯ ವರದಿಗಾರನೊಬ್ಬ, ಯಾರದೋ ಮಾತು ಕೇಳಿ ಗಾಳಿ ಪಟ ಹಾರಿಸಿದ್ದ. ಈ ಸುದ್ದಿ ತಮಗೆ ಮೊದಲು ಸಿಕ್ಕಿತು ಎಂದು ಚಾನಲ್ಹ್ ಹಿಂದೆ ಮುಂದೆ ನೋಡದೆ ಪ್ರಸಾರ ಮಾಡಿ ಬಿಟ್ಟಿತ್ತು. ಯಾಕೆಂದರೆ ಆಗ ಜೀ ನ್ಯೂಸ್ ಮತ್ತು ಆಗತಾನೆ ಬಂದ ಆಜ್ ತಕ್ ನಡುವೆ ತೀವ್ರ ಪೈಪೋಟಿ ಇತ್ತು. ಈ ಪೈಪೋಟಿ ಎಷ್ಟೂ ಅನಾರೋಗ್ಯಕರವಾಗಿ ನಡೆಯುತ್ತಿತ್ತು ಎಂಬುದಕ್ಕೆ ಇದೊಂದು ಉದಾಹರಣೆ. ಇದಾದ ಮೇಲೆ ಜೀ ನ್ಯೂಸ್ ಉಮಾ ಭಾರತಿ ಅವರ ಕ್ಷಮೆ ಕೇಳಿತು.
ಈ ಘಟನೆಯ ನಂತರ ನಾನು ಜೀ ನ್ಯೂಸ್ ಕೆಲಸಕ್ಕೆ ರಾಜೀನಾಮೆ ನೀಡಿದೆ. ಎರಡು ಚಾನಲ್ ಗಳ ನಡುವಿನ ಪೈಪೋಟಿ ಹೇಗೆ ಸತ್ಯದ ಮೇಲೆ ಕಲ್ಲು ಹಾಕುವ ಕೆಲಸ ಮಾಡಿಸುತ್ತದೆ ಎಂಬುದು ನನಗೆ ಮೊದಲ ಬಾರಿ ಅರ್ಥವಾಗಿತ್ತು. ಜೊತೆಗೆ ಬೇಸರವೂ ಆಗಿತ್ತು.
ಚಾನಲ್ ಗಳಲ್ಲಿ ಸುದ್ದಿಗಳನ್ನು ಸೆನ್ಸೇಶನಲೈಸ್ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ನನ್ನನ್ನು ಅಂದಿನಿಂದ ಕಾಡುತ್ತಲೇ ಇದೆ. ಆದರೆ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ.
ನಾನು ಜೀ ಕನ್ನಡ ವಾಹಿನಿಗೆ ಅಖಾಡಾ ಕಾರ್ಯಕ್ರಮವನ್ನು ಮಾಡುತ್ತಿದ್ದಾಗ ನಂತರ ಮಹಾಯುದ್ಧ್ ಮಾಡುತ್ತಿದ್ದಾಗ ಹಲವೆಡೆ ಮಾರಾಮಾರಿಗಳೇ ನಡೆದು ಹೋದವು. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸಭ್ಯ ರಾಜಕಾರಣಿ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ನ ಅನಿಲ್ ಪಾಟೀಲ್ ಬೆಂಬಲಿಗರು ನನ್ನ ಮೇಲೆ ಏರಿ ಬಂದರು. ದಾವಣಗೆರೆಯಲ್ಲಿ ಚಿತ್ರೀಕರಣ ಮಾಡುವಾಗ ಈ ನಗರವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ಮಾಡಿದ ಹೆಗ್ಗಳಿಕೆ, ಶಾಮನೂರು ಶಿವಶಂಕರಪ್ಪ ಅವರದ್ದು ಎಂದೆ. ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸುವುದಕ್ಕೆ ಬಂದು ಪೋಲೀಸರನ್ನು ಕರೆಸಬೇಕಾಯಿತು.
ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲಿಸಮ್ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಆಗ ಅಲ್ಲಿನ ಪತ್ರಕರ್ತರೊಬ್ಬರು, ನಕ್ಸ್ಲಲ್ ಚಳವಳಿಯಲ್ಲಿ ಇರುವ ಬಹುತೇಕರು ದಲಿತರು ಎಂದರು. ಆಗ ದಲಿತ ಸಂಘಟನೆಯ ನಾಯಕರು ವೇದಿಕೆಯ ಮೇಲೆ ಏರಿ ಬಂದು ರಂಪಾಟ ಮಾಡಿಬಿಟ್ಟರು. ನಾನು, ನನ್ನ ಮತ್ತು ದಲಿತ ಚಳವಳಿಯ ನಡುವಿನ ಸಂಬಂಧವನ್ನು ಹೇಳಿ ಪರಿಸ್ಥಿಯನ್ನು ತಿಳಿಗೊಳಿಸಲು ಸುಮಾರು ಮುಕ್ಕಾಲು ಗಂಟೆ ತೆಗೆದುಕೊಂಡಿತು. ಆದರೆ ಈ ವಿವಾದ ಇಲ್ಲಿಗೆ ನಿಲ್ಲಲಿಲ್ಲ. ಈ ಪತ್ರಕರ್ತರ ವಿರುದ್ಧ ಪಾವಗಡ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿದವು. ಯಾವ ಕಾರಣಕ್ಕೂ ಆ ಪತ್ರಕರ್ತರು ಹೇಳಿದ ಮಾತುಗಳನ್ನು ಪ್ರಸಾರ ಮಾಡಬಾರದು ಎಂದು ನಮ್ಮ ಮೇಲೆ ಒತ್ತಡ ಹೇರತೊಡಗಿದರು. ನಾನು ಅವರಿಗೆ ಒಂದು ಮಾತು ಹೇಳಿದೆ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹೇಳುವ ಹಕ್ಕಿದೆ. ಅದನ್ನು ಯಾರೂ ಮೋಟಕುಗೊಳಿಸಲು ಸಾಧ್ಯವಿಲ್ಲ. ನಾನು ಅವರು ಹೇಳಿದ್ದನ್ನು ಪ್ರಸಾರ ಮಾಡಿಯೇ ಮಾಡುತ್ತೇನೆ. ನಾನು ಹೇಳಿದಂತೆ ಪ್ರಸಾರ ಮಾಡಿದೆ. ಆ ಪತ್ರಕರ್ತರು ಕೆಲವು ದಿನ ಪಾವಗಡದಿಂದ ತಲೆ ಮರೆಸಿಕೊಂಡಿದ್ದರು. ನಂತರ ಎಲ್ಲರ ಜೊತೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ.
ಈ ಸಂದರ್ಭದಲ್ಲಿ ಈ ಸುದ್ದಿಯನ್ನು ವೈಭವೀಕರಿಸಬಾರದು ಎಂದು ನಾನು ನಿರ್ಧರಿಸಿದೆ. ಹೀಗಾಗಿ ನನ್ನ ಕಾರ್ಯಕ್ರಮದಲ್ಲಿ ನಡೆದ ಯಾವುದೇ ಘಟನೆಗೆ ನಮ್ಮ ಚಾನಲ್ಲಿನಲ್ಲಿ ಹೆಚ್ಚಿನ ಪ್ರಚಾರ ನೀಡಲಿಲ್ಲ. ಹಾಗೆ ಮಾಡಿದ್ದರೆ ಜನಸಮುದಾಯದ ನಡುವಿನ ವೈಮನಸ್ಸು ಇನ್ನಷ್ಟು ದೊಡ್ದದಾಗುತ್ತಿತ್ತು. ಬಸ್ಸು ಲಾರಿಗೆ ಬೆಂಕಿಬೀಳುತ್ತಿತ್ತು. ಸಾರ್ವಜನಿಕ ಆಸ್ತಿಗೆ ಹಾನಿಯಾಗುತ್ತಿತ್ತು. ಆದರೆ ಚಾನಲ್ ನ ವೀಕ್ಷಕರ ಸಂಖ್ಯೆ ಹೆಚ್ಚುವುದಕ್ಕಿಂತ ಸಾರ್ವಜನಿಕರ ನಡುವೆ ಸೌಹಾರ್ಧ ಸಂಬಂಧ ಉಳಿಯುವುದು ಮುಖ್ಯ ಎಂದು ನಾನು ಅಂದುಕೊಂಡೆ.
ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಒಪ್ಪುವುದು ಕಷ್ತವಾಗಬಹುದು. ಆದರೆ ಮಾಧ್ಯಮ ಸಾಮಾಜಿಕ ಹೊಣೆಗಾರಿಕೆಯನ್ನು ಬಿಡಬಾರದು ಎಂದು ನಂಬಿದವನು ನಾನು. ಹೀಗಾಗಿ ಬೇರೆ ರೀತಿ ವರ್ತಿಸುವುದು ನನಗೆ ಸಾಧ್ಯವೇ ಇಲ್ಲ.
ಕಳೆದ ಎರಡು ಮೂರು ದಿನಗಳಿಂದ ಇದೆಲ್ಲ ನನಗೆ ನೆನಪಾಗುತ್ತದೆ. ಹಾಗೆ ನಾನು ರಾಜ್ಯದ ಬೇರೆ ಬೇರೆ ಕಡೆ ಪತ್ರಿಕೋದ್ಯಮದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು ಮನಸ್ಸಿಗೆ ಬರುತ್ತದೆ. ಅವರ ಮುಖಗಳನ್ನು ಕಣ್ಣುಮುಂದೆ ತಂದುಕೊಳ್ಳಲು ಯತ್ನಿಸುತ್ತೇನೆ. ಇವರು ನಾಳೆ ಎಂತಹ ಪತ್ರಿಕೋದ್ಯಮಿಗಳಾಗಬಹುದು ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಯತ್ನಿಸುತ್ತ್ಣೇನೆ.

ಎಂಡಿಎನ್- ಹೀಗೊಂದು ನೆನಪು

£Á¼É ±À¤ªÁgÀ ¥ÉÇæÃ. £ÀAdÄAqÀ¸Áé«Ä CªÀgÀ CªÀÄÈvÀ ªÀĺÉÆÃvÀìªÀ PÁAiÀÄðPÀæªÀÄ £ÀqÉAiÀÄ°zÉ JA§ ¸ÀÄ¢ÝAiÀÄ£ÀÄß ¥ÀwæPÉUÀ¼À°è £ÉÆÃrzÉ. DUÀ £À£Àß ªÀÄ£À¹ì£À°è £É£À¥ÀÅUÀ¼À ¥ÀÅl vÉgÉzÀÄPÉƼÀîvÉÆqÀVvÀÄ. ¸ÀĪÀiÁgÀÄ 20 ªÀµÀðUÀ¼À PÁ® M§â ¥ÀwæPÉÆÃzÀå«ÄAiÀiÁV CªÀgÀ eÉÆvÉ £À£Àß MqÀ£Ál«vÀÄÛ. £À£ÀUÉ vÀÄA¨Á ¦æAiÀÄgÁzÀ PÉ®ªÉà PÉ®ªÀgÀ°è ¥ÉÇæÃ. JArJ£ï M§âgÀÄ.

1980 gÀ zÀ±ÀPÀzÀ°è GZÁÒçAiÀÄ ¹ÜwAiÀÄ°èzÀÝ gÉÊvÀ ZÀ¼ÀªÀ½UÉ ¸ÉêzÁÞAwPÀ £É¯ÉUÀlÖ£Àäß MzÀV¹zÀªÀgÀÄ £ÀAdÄAqÀ¸Áé«Ä. DUÀ CªÀgÀ eÉÆvÉ J®èjAzÀ®Æ AiÀÄdªÀiÁ£ÀgÀÄ JAzÀÄ PàgɹPÉƼÀäîwÛzÀÝ gÀÄzÀæ¥Àà£ÀªÀjzÀÝgÀÄ. ºÁUÉ ¸ÀªÀiÁdªÁ¢ aAvÀPÀ ªÀÄvÀÄÛ vÀ£Àß ¸ÉßúÀ¢AzÀ¯Éà J®ègÀ£ÀÄß ¸É¼ÉzÀÄPÉƼÀÄîîwÛzÀÝ ¸ÀÄAzÀgÉñï EzÀÝgÀÄ. EªÀgÀÄ ªÀiÁrzÀ Cw ªÀĺÀvÀézÀ PÉ®¸À JAzÀgÉ gÉÊvÀgÀ°è DvÁä©üªÀiÁ£ÀªÀ£Àäß ªÀÄÆr¹zÀÄÝ. ºÁUÉ ºÀ¹gÀÄ ±Á°UÉ «zsÁ£À¸ËzsÀzÀ ¥ÀæªÉñÀ zÉÆgÀPÀĪÀAvÉ ªÀiÁrzÀÄÝ.

£Á£ÀÄ ¥ÀwæPÉÆÃzÀåªÀÄPÉÌ §AzÀ ¢£ÀUÀ¼À°è gÉÊvÀ ZÀ¼ÀªÀ½AiÀÄ £ÁAiÀÄPÀgÉAzÀgÉ £À£ÀUÉ §ºÀÄzÉÆqÀØ CZÀÑj. ¸ÀPÁðj C¢üPÁjUÀ¼À zsÀ¥Àð, ªÉʨsÀªÀ£ÀÄß £ÉÆÃqÀÄvÀÛ¯É ¨É¼ÉzÀ, gÉÊvÀ PÀÄlÄA§¢AzÀ §AzÀ £À£ÀUÉ EªÀgÁqÀĪÀ ªÀiÁvÀÄUÀ¼É®è £À£Àß ªÀÄ£À¹ì£À°è ªÀÄÆrzÀ ªÀiÁvÀÄUÀ¼ÀAvÉ C¤ß¸ÀÄwÛvÀÄÛ.

PÀ£ÁðlPÀzÀ°è ¥ÀæxÀªÀÄ PÁAUÉæ¸ÉìÃvÀgÀ ¸ÀPÁðgÀ C¢üPÁgÀPÉÌ §gÀĪÀÅzÀPÉÌ zÀ°vÀ ªÀÄvÀÄÛ PÀ£ÀßqÀ ZÀ¼ÀªÀ½UÀ¼À eÉÆvÉ, gÉÊvÀ ZÀ¼ÀªÀ½AiÀÄ ¥ÁvÀæªÀÇ ªÀÄÄRåªÁVvÀÄÛ. £ÀgÀUÀÄAzÀ ªÀÄvÀÄÛ £ÀªÀ®UÀÄAzÀ gÉÊvÀ ZÀ¼ÀªÀ½ £ÀqÉAiÀÄÄwÛzÁÝUÀ ¨ÁzÁ«Ä ºË¸ï £À°è ªÀÄAdÄ ¨sÁUÀð«AiÀÄ £ÀÈvÀå £ÉÆÃqÀÄwÛzÀÝ UÀÄAqÀÆgÁªï vÀªÀÄä UÉÆÃjAiÀÄ£Àäß vÁªÉà vÉÆÃrPÉÆArzÀÝgÀÄ. ºÁUÉ PÁAUÉæ¸ï ¥ÀPÀëPÀÆÌ UÉÆÃjAiÀÄ£Àäß ¹zÀÞ¥Àr¹nÖzÀÝgÀÄ.

EAvÀºÀ ¸ÁªÀiÁfPÀ ªÀÄvÀÄÛ gÁdQÃAiÀÄ ªÁvÁªÀgÀzÀ°è C¢üPÁgÀPÉÌç §A¢zÀÄÝ d£ÀvÁ ¥ÀjªÁgÀ. ªÀÄÄRåªÀÄAwæAiÀiÁzÀªÀgÀÄ gÁªÀÄPÀȵÀÚ ºÉUÀqÉ. DzÀgÉ vÀAvÀæUÁjPÉAiÀÄ£ÀÄß §®ªÁV £ÀA©PÉÆArzÀÝ ºÉUÀqÉAiÀĪÀjUÉ vÀªÀÄä ªÉÆzÀ® ±ÀvÀÄæªÁV PÀArzÀÄÝ gÉÊvÀ ZÀ¼ÀªÀ½AiÉÄÃ. »ÃUÁV CªÀgÀÄ gÉÊvÀ ZÀ¼ÀªÀ½AiÀÄ£ÀÄß MqÉAiÀÄĪÀ PÉ®¸ÀPÉÌ PÉʺÁQzÀgÀÄ. gÉêÀt¹zÀÞAiÀÄå gÉÊvÀ ¸ÀAWÀl£É¬ÄAzÀ ºÉÆgÀPÉÌ §AzÀgÀÄ. JAzÀÆ ºÉUÀqÉAiÀĪÀgÀ gÁdQAiÀÄ ±ÉÊ°AiÀÄ£Àäß M¥ÀàzÀ £ÀAdÄAqÀ¸Áé«Ä ªÀävÀÛµÀÄÖ PÉÆÃ¥ÀUÉÆAqÀgÀÄ.

£ÀUÀgÀzÀ ¥ÀgÁUï ºÉÆÃmÉ°è£À°è PàgÉ¢zÀÝ ¥ÀwæPÁUÉÆöÖAiÀÄ°è CªÀgÀ ºÉýzÀ JAzÀÄ ªÀiÁvÀÄ ;

F ºÉUÀqÉ ªÀÄvÀÄÛ CªÀgÀ ªÀÄ£ÉAiÀĪÀgÀ£Àß £ÀªÀÄä gÉÊvÀgÀÄ PÀA§PÉÌ PÀnÖ ºÉÆqÉAiÀÄÄvÁÛgÉ.

D ¢£ÀUÀ¼À°è ºÉUÀqÉAiÀĪÀgÀ d£À¦æAiÀÄvÉ GvÀÛAUÀzÀ°èvÀÄÛ.zÉêÉÃUËqÀgÀAvÀºÀ zÉêÉÃUËqÀgÀÄ ºÉUÀqÉ «gÀÄzÀÞ ªÀiÁvÀ£ÁqÀ®Ä »AzÉÃlÄ ºÁPÀÄwÛzÀÝgÀÄ. DzÀgÉ £ÀAdÄAqÀ¸Áé«Ä CªÀgÀzÀÄÝ AiÀiÁªÀÅzÀPÀÆÌ PÁågÉ J£ÀßzÀ eÁAiÀĪÀiÁ£À. F §UÉÎ JµÉÖà nÃPÉUÀ¼ÀÄ §AzÀgÀÆ CªÀgÀÄ vÀªÀää ºÉýPÉAiÀÄ£Àäß »AzÀPÉÌ ¥ÀqÉAiÀÄ°®è.

CA¢£À ¥ÀwæPÁUÉÆöÖAiÀÄ°è ¥Á¯ÉÆÎArzÀÝ £Á£ÀÄ CªÀgÀ£ÀÄß E£ÀßµÀÄÖ ªÉÄaÑPÉÆAqÉ. «dAiÀÄ£ÀUÀgÀzÀ°èzÀÝ CªÀgÀ ªÀÄ£ÉUÀÆ ¨sÉÃn ¤ÃqÀvÉÆqÀVzÉ. CªÀgÀ eÉÆvÉ ªÀiÁvÀ£ÁqÀĪÁUÀ CªÀgÀ D¼ÀªÁzÀ w¼ÀĪÀ½PÉ, «µÀAiÀĪÀ£Àäâ «±Éèö¸ÀäwÛzÀÝ jÃw AiÀiÁgÀ£ÁßzÀgÀÆ CªÀgÀvÀÛ ¸É¼ÉzÀÄ ©qÀÄwÛvÀÄÛ.

F £ÀqÀÄªÉ £ÀAdÄAqÀ¸Áé«Ä ¨ÁæºÀät zsÉéö. CªÀgÀÄ ¤£Àß eÉÆvÉ ºÉÃUÉ ªÀiÁvÀ£ÁqÀÄvÁÛgÉ JAzÀÄ M©â§âgÀÄ »jAiÀÄ ¥ÀvÀæPÀvÀðgÀÄ PÉýzÁUÀ £À£ÀUÉ ±ÁPï. £À£ÀUÉAzÀÆ CªÀgÀÄ ªÉÊAiÀÄQÛPÀªÁV eÁwUÉ CAvÀºÀ ¥ÁæªÀÄÄRåvÉ PÉÆqÀÄvÁÛgÉ JAzÀÄ C¤ß¸À¯Éà E®è. DzÀgÉ ¸ÉÊzÁÞAwPɪÁV CªÀgÀÄ ¥ÀÅgÉÆûvÀ±Á»AiÀÄ£Àäß «gÉÆâü¸ÀÄwÛzÀÝgÀÄ. CzÀÄ £À£ÀUÉ w½AiÀÄzÀ «µÀAiÀĪÉãÀÆ DVgÀÀ°®è. eÉÆvÉUÉ CrPÉ ªÀÄgÀ Kj PÉÆ£É PÉÆAiÀÄÄåwÛzÀÝ, UÀzÉÝUÉ ºÉÆÃV G½ªÉÄ ªÀiÁqÀÄwÛzÀÝ £À£ÀUÉ CªÀgÀÄ gÉÊvÀgÀ ¥ÀgÀªÁV ºÉÆÃgÁl ªÀiÁqÀÄwÛzÀÄÝzÀÄ ºÉZÀÄÑ ¦æAiÀĪÁUÀÄwÛvÀÄÛ. £Á£ÀÄ ªÀÄÆ®¨sÀÆvÀªÁV GvÀÛgÀ PÀ£ÀßqÀzÀ M§â PÀȶPÀ . £ÀAvÀgÀ ¥Àj¹ÜwAiÀÄ MvÀÛqÀ¢AzÀ PÀȶAiÀÄ£Àäß ªÀÄÄAzÀĪÀj¸À¯ÁUÀzÉà ¥ÀvÀæPÀvÀð£ÁzÀªÀ£ÀÄ £Á£ÀÄ. »ÃUÁV £ÀAdÄAqÀ¸Áé«Ä CªÀgÀ £ÉÃgÀ ªÀiÁvÀÄ £À£ÉÆß½V£À ªÀiÁvÀÄUÀ½UÉ zsÀé¤ ¤ÃqÀÄwÛzÀݪÀÅ.£ÀAvÀgÀzÀ ¢£ÀUÀ¼À°è £ÀAdÄAqÀ¸Áé«Ä §zÀ¯ÁzÀgÉ ? ºÉüÀĪÀÅzÀÄ PÀµÀÖ. £ÀAdÄAqÀ¸Áé«Ä ¸ÀªÁð¢üPÁjAiÀiÁVzÀÝgÉ ? CzÉà gÉÊvÀ ZÀ¼ÀªÀ½ ±ÀQÛAiÀÄ£Àäß PÀ¼ÉzÀÄPÉƼÀî®Ä PÁgÀtªÁ¬ÄvÉ ?

CµÀögÀ°è £ÀAdÄAqÀ¸Áé«Ä CAvÀgÁ¶ÖçÃAiÀÄ ªÀÄlÖzÀ°è PÀȶPàgÀ£Àß ¸ÀAWÀn¸À®Ä ªÀÄÄAzÁzÀgÀÄ. eÉÆvÉUÉ ºÀ®ªÀgÀ «gÉÆÃzsÀzÀ £ÀqÀĪÉAiÀÄÆ ZÀÄ£ÁªÀuÉAiÀÄ°è ¸Àà¢üð¹, gÉÊvÀ ¸ÀAWÀzÀ ±ÀQÛAiÀÄ ¥ÀjÃPÉë ªÀiÁrzÀgÀÄ. £ÀAdÄAqÀ¸Áé«Ä ªÀÄvÀÄÛ ¨Á¨ÁUËqÀ ¥ÁnîgÀÄ ±Á¸ÀPÀgÁzÀgÀÆ gÉÊvÀ ¸ÀAWÀ Uɮ谮è. AiÀiÁPÉAzÀgÉ gÉÊvÀ ºÉÆÃgÁlzÀ°è ¥Á¯ÉÆÎAqÀ gÉÊvÀgÀÄ ªÉÊAiÀÄQÛPÀªÁV ¨ÉÃgÉ ¨ÉÃgÉ gÁdQÃAiÀÄ ¥ÀPÀëUÀ½UÉ ¸ÉÃjzÀªÀgÁVzÀÝgÀÄ.

AiÀiÁªÁUÀ ZÀÄ£ÁªÀuÁ gÁdQÃAiÀÄzÀ°è gÉÊvÀ ¸ÀAWÀ ¸ÉÆÃwvÉÆÃ, CzÀgÀ ºÉÆÃgÁlzÀ ±ÀQÛ PÀÄAzÀvÉÆqÀVvÀÄ. eÉÆvÉUÉ ¸ÀAWÀzÀ M¼ÀV£À ©ü£Áß©ü¥ÁæAiÀÄUÀ¼ÀÄ §»gÀAUÀªÁUÀvÉÆqÀVzÀªÀÅ. ºÀtPÁ¸ÀÄ zÀÄgÀÆ¥ÀAiÉÆÃUÀzÀ DgÉÆÃ¥ÀUÀ¼ÀÄ PÉý§gÀvÉÆqÀVzÀªÀÅ. £ÀAdÄAqÀ¸Áé«Ä DUÀ¯Éà ªÀiÁ£À¹PÀªÁVAiÀÄÆ PÀĹAiÀÄvÉÆqÀVzÀÝgÀÄ.

£ÀAdÄAqÀ¸Áé«Ä ªÁPï ¥ÀlÄ. ºÉÆÃgÁlUÁgÀ. FUÀ®Æ gÉÊvÀ £ÁAiÀÄPÀgÀÄ AiÀiÁgÉà ªÀiÁvÀ£ÁqÀ°, CªÀgÀÄ £ÀAdÄAqÀ¸Áé«Ä CªÀgÀ£Àäß C£ÀÄPÀj¸ÀÄwÛzÁÝgÉ JAzÀÄ C¤ß¸ÀÄvÀÛzÉ. ªÀiÁvÀ£ÁqÀĪÀ ±ÉÊ°, «µÀAiÀÄ ªÀÄAqÀ£É J®èzÀgÀ®Äè £ÀAdÄAqÀ¸Áé«Ä CªÀgÀ £ÉgÀ¼ÀÄ PÁtÄvÀÛzÉ. EzÉà CªÀgÀ AiÀıÀ¹ì£À ªÀiÁ£ÀzÀAqÀ ªïAzÀÆ C¤ß¸ÀÄvÀÛzÉ.

Saturday, February 6, 2010

---------------------------- ?

ಶನಿವಾರ ನಗರದಲ್ಲಿ ಕೇಂದ್ರ ಸಚಿವ ಜೈರಾಮ್ ರಮೇಶ್ ಬಿ ಟಿ ಬದನೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಸಭೆಯೊಂದನ್ನು ಏರ್ಪಡಿಸಿದ್ದರು. ಈ ಸಭೆಯಲ್ಲಿ ಬಿಟಿ ತಾಂತ್ರಿಕತೆಯ ಪರವಾಗಿ ಇರುವವರೂ ಇದ್ದರು. ವಿರೋಧವಾಗಿ ಇರುವವರು ಇದ್ದರು. ನಾನು ಈ ಬಗ್ಗೆ ಮಾತನಾಡುವುದಿಲ್ಲ. ಇಲ್ಲ ನಡೆದ ಚರ್ಚೆ ನಂತರ ನಡೆಯುತ್ತಿರುವ ವಾಗ್ವಾದವನ್ನು ನಾನು ಗಮನಿಸಿದ್ದೇನೆ. ಈ ಬಗ್ಗೆ ಮಾತನಾಡುವಾಗ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ಹೊಳವುಗಳನ್ನು ಇಲ್ಲಿ ಹೇಳಲು ಹೊರಟಿದ್ದೇನೆ.
ಹೊಸ ತಂತ್ರಜ್ನಾನ, ಅದು ಜೈವಿಕ ತಂತ್ರಜ್ನಾನ ಇರಬಹುದು ಅಥವಾ ಬೇರೆ ತಂತ್ರಜ್ನಾನ ಇರಬಹುದು, ಈ ಬಗ್ಗೆ ಒಂದು ಕೂತೂಹಲ ಜೊತೆಗೆ ಒಂದು ಭಯ ಕೂಡ ಇರಬೇಕಾಗುತ್ತದೆ. ವಿಜ್ನಾನ ಮತ್ತು ವೈಜ್ನಾನಿಕ ಸಂಶೋಧನೆಯಲ್ಲಿ ಇದೇ ಕೊನೆ ಎಂಬುದು ಇಲ್ಲ. ಇದೆಲ್ಲ ಆಯಾ ಕಾಲ ಘಟ್ಟದ ಸತ್ಯ ಮಾತ್ರ. ಅದು ಸಾರ್ವಕಾಲಿಕ ಸತ್ಯ ಅಲ್ಲ. ಈ ಅರಿವು ನಮಗೆ ಇಲ್ಲದಿದ್ದರೆ ನಾವು ಅಯೋಗ್ಯರು.
ಪೃಕೃತಿಗೆ ಒಂದು ನಿಯಮ ಇದೆ. ವಿಜ್ನಾನ ಸದಾ ಈ ನಿಯಮಕ್ಕೆ ಸವಾಲು ಹಾಕುವ ಕೆಲಸವನ್ನು ಮಾಡುತ್ತಲೇ ಇರುತ್ತದೆ. ನಿಮಗೆ ಸರಳವಾಗಿ ಹೇಳಬೇಕೆಂದರೆ, ದಿನ ಎಂದರೆ ಅಲ್ಲಿ ರಾತ್ರಿಯೂ ಇದೆ. ಹಗಲೂ ಇದೆ. ಹಗಲು ಮತ್ತು ರಾತ್ರಿ ಇರುವುದಿಂದಲೇ ಈ ಭೂಮಿಯ ಮೇಲಿನ ಜೈವಿಕ ಜಗತ್ತು ನಡೆದುಕೊಂಡಿದೆ. ಹಾಗೆ ಒಂದು ಗುಲಾಬಿ ಗಿಡದಲ್ಲಿ ಗುಲಾಬಿ ಹೂವು ಬಿಡುತ್ತದೆ. ಮಾವಿನ ಮರದಲ್ಲಿ ಮಾವಿನ ಕಾಯಿ ಬರುತ್ತದೆ. ಇದೆಲ್ಲ ಪ್ರಕೃತಿಯ ಸಹಜ ಕ್ರಿಯೆಗಳು. ಪೃಕೃತಿಯನ್ನು ಪ್ರೀತಿಸುವ ಒಬ್ಬ ವ್ಯಕ್ತಿ ಅರಳುವ ಗುಲಾಬಿಯನ್ನು ಬೆರಗಿನಿಂದ ನೋಡುತ್ತಾನೆ. ಅದರ ಬಣ್ಣ ಅವನ ಮನಸ್ಸಿಗೆ ಮುದವನ್ನು ನೀಡುತ್ತದೆ. ಆದರೆ ಒಬ್ಬ ವಿಜ್ನಾನಿ ಗುಲಾಬಿಯನ್ನು ನೋಡುವ ರೀತಿ ಬೇರೆ. ಅವನಲ್ಲಿ ಚಿಕಿತ್ಸಕ ಬುದ್ದಿ ಇರುತ್ತದೆ. ಆತ ಈ ಗುಲಾಬಿಯ ಹೂವಿನಲ್ಲಿ ಇರುವ ಜೈವಿಕ ಅಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾನೆ. ನಮಗೆಲ್ಲ ಗೊತ್ತಿರುವ ಇನ್ನೊಂದು ಸಂಗತಿ ಇದೆ. ಸರ್ ಎಂ. ವಿಶ್ವೇಶ್ವರಯ್ಯ ಜೋಗ ಜಲಪಾತವನ್ನು ನೋಡಿದಾಗ ವಾಟ್ ಏ ವೇಸ್ಟ್ ಎಂದು ಉದ್ಗಾರ ತೆಗೆದರಂತೆ. ಇದು ಒಬ್ಬ ಇಂಜನಿಯರ್ ಅಥವಾ ಒಬ್ಬ ವಿಜ್ನಾನಿ ಯೋಚಿಸುವ ಪರಿ. ನಮಗೆ, ಕವಿ ಹೃದಯ ಇದ್ದರೆ, ವಾಟ್ ಏ ವೇಸ್ಟ್ ಎಂದು ಅನ್ನಿಸುವುದಿಲ್ಲ. ಇದೊಂದು ಪ್ರ್ಕೃತಿಯ ಅದ್ಬೂತವಾಗಿ ಕಾಣುತ್ತದೆ. ನಾವೆಲ್ಲ ಚಿಕ್ಕವರಿದ್ದಾಗ ವಾರಕ್ಕೆ ಒಮ್ಮೆ ಜೋಗ ಜಲಪಾತವನ್ನು ನೋಡಲು ಹೋಗುತ್ತಿದ್ದೆವು. ಆಗ ಲಿಂಗನಮಕ್ಕಿ ಅಣೆಕಟ್ತು ನಿರ್ಮಾಣ ಆಗಿರಲಿಲ್ಲ. ಹೀಗಾಗಿ ಜೋಗ ಜಲಪಾತ ಸದಾ ದುಮ್ಮಿಕ್ಕುತ್ತಿತ್ತು. ಪ್ರತಿ ಸಲ ಈ ಜಲಪಾತವನ್ನು ನೋಡಿದಾಗಲೂ ಅದು ಹೊಸದಾಗಿ ಕಾಣುತ್ತಿತ್ತು. ಯಾರ ಹಂಗೂ ಇಲ್ಲದೆ ಪ್ರಪಾತಕ್ಕೆ ಧುಮ್ಮಿಕ್ಕುವ ಜಲಪಾತ ನನಗೆ ಏನು ಕಲಿಸಿತು ಎಂಬುದನ್ನು ವಿವರಿಸುವುದು ಕಷ್ಟ. ಆದರೆ ಒಬ್ಬ ವಿಜ್ನಾನಿಗೆ ಜಲಪಾತ ಎಂದರೆ ವೇಸ್ಟ್ !
ಒಬ್ಬ ವಿಜ್ನಾನಿಗೆ ಸಂಶೋಧಕನಿಗೆ ಬದುಕಿನ ಬಗ್ಗೆ ಪ್ರೀತಿ ಇರಬೇಕು. ಆವನ ಆಲೋಚನೆಯ ಜೊತೆಗೆ ಆಧ್ಯಾತ್ಮಿಕತೆ ಇರಬೇಕು, ಕವಿಹೃದಯ ಇರಬೇಕು. ವೈಜ್ನಾನಿಕ ಸಂಶೋಧನೆ ಎಂಬುದು ಮಾನವನ ಅಹಂಕಾರದ ಮೇಲೆ ನಿಂತಿದೆ. ನಾನು ಸಂಶೋಧನೆ ಮಾಡಿದ್ದೇ ಪರಮ ಅದೇ ಅಂತಿಮ ಎಂಬ ನಂಬಿಕೆಯ ಮೇಲೆ ನಿಂತಿದೆ. ಇಂತಹ ಅಹಂಕಾರದಿಂದ ವೈಜ್ನಾನಿಕ ಸಂಶೋಧಕ ಕುರುಡನಾಗುತ್ತಾನೆ. ನಾನು ಸಂಶೋಧಿಸಿದ್ದು ಅಂತಿಮ ಅಲ್ಲದಿರಬಹುದು ಎಂಬ ಅಪನಂಬಿಕೆ ಇದ್ದರೆ ಆತ ನಿಜವಾದ ವಿಜ್ನಾನಿಯೋ ಸಂಶೋಧಕನೋ ಆಗುತ್ತಾನೆ.
ನಮಗೆ ಇರುವುದೊಂದೇ ಭೂಮಿ. ಇಲ್ಲಿ ನಮ್ಮಂತೆಯೇ ಕೋಟ್ಯಾಂತರ ಜೀವಿಗಳಿವೆ. ಗಿಡ ಮರಗಳಿವೆ. ಇವೆಲ್ಲ ಒಂದು ಶಿಸ್ತಿಗೆ ಒಳಪಟ್ಟು ಕೆಲಸ ಮಾಡುತ್ತವೆ. ಪ್ರಕೃತಿಗೆ ಸಹಜವಾದದ್ದು ಮಾತ್ರ ಈ ಜೀವ ಜಗತ್ತನ್ನು ಉಳಿಸಬಹುದು. ಅಸಹಜವಾದುದು ಅಲ್ಲ. ಈಗ ನಾವು ಮಾತನಾಡುತ್ತಿರುವ ಹೊಸ ತಾಂತ್ರಿಕತೆ ಸಹಜವಾದುದ್ದಲ್ಲ. ಯಾಕೆಂದರೆ ಸಂಶೋಧನೆ ಪ್ರಕೃತಿಯ ನಿಯಮವನ್ನು ಬದಲಿಸುವ ಆಶಯವನ್ನು ಹೊಂದಿರುತ್ತದೆ.
ಈಗ ಬಿಟಿ ಬದನೆಯ ವಿಚಾರಕ್ಕೆ ಬರೋಣ. ಈ ಬದನೆ ತಳಿಯನ್ನು ಸಂಶೋಧಿಸಿದವರಿಗೆ ವಿಚಿತ್ರ ಅಹಂಕಾರ ಇದೆ. ನಾನು ಕಂಡುಕೊಂಡಿದ್ದೇ ಸತ್ಯ ಎಂಬ ಅಹಂಬಾವ ಇದೆ. ಈ ಕಾರಣಕ್ಕೆ ಬಿಟಿ ಬದನೆಯ ವಿರುದ್ಧ ಮಾತನಾಡುವವರನ್ನು ಅವರು ತುಚ್ಛವಾಗಿ ಕಾಣುತ್ತಾರೆ. ಯಾವುದೋ ಬಹುರಾಷ್ಟ್ರೀಯ ಕಂಪನಿಯ ವಕ್ತಾರರಂತೆ ಮಾತನಾಡುತ್ತಾರೆ. ಸರಿ ಬಿಟಿ ಬದನೆ ಬೆಳೆಯುವುದರಿಂದ ಭಾರತದ ರೈತ ಆರ್ಥಿಕವಾಗಿ ಸುದೃಡನಾಗುತ್ತಾನೆ ಎಂದು ಮಾತನಾಡುತ್ತಾರೆ. ಆದರೆ ಈ ದೇಶದಲ್ಲಿ ಹಸಿರು ಕ್ರಾಂತಿ ಆದ ಮೇಲೆ ಏನಾಯಿತು ಎಂಬ ಸತ್ಯ ನಮ್ಮ ಮುಂದಿದೆ. ಹೊಸ ಹೊಸ ತಳಿಗಳನ್ನು ತಂದು ಹಾಕಿದ ರೈತ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಹೆಚ್ಚು ಹೆಚ್ಚಾಗಿ ಬಳಸುವಂತಾಯಿತು. ಇದನ್ನು ತಯಾರಿಸುವ ಕಂಪನಿಗಳು ಆರ್ಥಿಕವಾಗಿ ಸದೃಡವಾದವು. ರೈತ ರಾಸಾಯನಿಕ ಗೊಬ್ಬರಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಜೊತೆಗೆ ಈಗಲೂ ನಾವು ಫುಡ್ ಸೆಕ್ಯುರಿಟಿ ಬಗ್ಗೆ ಮಾತನಾಡುವ ಸ್ಥಿತಿಯಲ್ಲೇ ಇದ್ದೇವೆ.
ಬಿಟಿ ಬದನೆ ಬೆಳೆದ ರೈತ ತಾನು ಬೆಳೆದ ಬದನೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವಂತಿಲ್ಲ. ಯುರೋಪಿಯನ್ ಯೂನಿಯನ್ ಬಿಟಿ ಬದನೆಯನ್ನು ಬಳಸದಿರುವ ನಿರ್ಧಾರ ಕೈಗೊಂಡಿವೆ. ಈಗ ಐರೋಫ್ಯ ರಾಷ್ಟ್ರಗಳಿಗೆ ಪ್ರತಿಶತ ೬೦ ರಷ್ಟು ಬದನೆಯನ್ನು ಭಾರತದಿಂದಲೇ ರಫ್ತು ಮಾಡಲಾಗುತ್ತದೆ. ಬಿಟಿ ಬದನೆ ಬೆಳೆದರೆ ಈ ರಫ್ತಿನ ಗತಿ ಏನು ?
ನಮಗೆ ವಿಚಿತ್ರ ರೀತಿಯ ಆಧುನಿಕತೆಯ ಹುಚ್ಚು ಹಿಡಿದಿದೆ. ಅಭಿವೃದ್ಧಿಯ ಕನಸು ಕಾಡುತ್ತಿದೆ. ಆದರೆ ಅಭಿವೃದ್ಧಿ ಎಂದರೆ ಏನು ? ಆಧುನಿಕತೆ ಎಂದರೇನು ? ಈ ಸರಳ ಪ್ರಶ್ನೆಗೆ ನಮ್ಮ ಬಳಿ ಉತ್ತರ ಇಲ್ಲ. ಮನೆಯಲ್ಲಿ ರೂಮಿಗೊಂದು ಟೀವಿ, ಜನರಿಗೊಂದು ಕಾರು ಇದ್ದರೆ ಅದು ಅಭಿವೃದ್ಧಿಯಾ ? ಈ ಪ್ರಶ್ನೆಗಳಿಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕು. ಆಗ ನಮಗೆ ಬಿಟಿ ಬದನೆ ಯಾಕೆ ಬೇಡ ಎಂಬುದು ಅರ್ಥವಾಗುತ್ತದೆ. ಇಲ್ಲದಿದ್ದರೆ ವಿದೇಶಿ ಕಂಪನಿಗಳ ಜೇಬು ತುಂಬಲು ನಾವು ಕೆಲಸ ಮಾಡುತ್ತೇವೆ. ವಿದೇಶಗಳು ನಡೆಸುವ ಅಪಾಯಕಾರಿ ಸಂಶೋಧನೆಗಳನ್ನು ಪರೀಕ್ಷಿಸುವ ಅಂಗಳ ನಮ್ಮದಾಗುತ್ತದೆ. ಕೊನೆಗೆ ನಮಗೆ ಉಳಿಯುವ ಪ್ರಶ್ನೆ ಅಭಿವೃದ್ಧಿ ಎಂದರೇನು ?

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...