ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಪ್ರತಿಶತ ೩೩ ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ವಿಧೇಯಕಕ್ಕೆ ರಾಜ್ಯ ಸಭೆ ಅನುಮೋದನೆ ನೀಡಿದೆ. ಇದೊಂದು ಐತಿಹಾಸಿಕ ವಿಧೇಯಕ ಎನ್ನುವದರಲ್ಲಿ ಎರಡು ಮಾತಿಲ್ಲ. ಎರಡನೆ ಧರ್ಜೆ ಪ್ರಜೆಯಾಗಿರುವ ಮಹಿಳೆಯರಿಗೆ ಈ ವಿಧೇಯಕ ರಾಜಕೀಯ ಪ್ರಾತಿನಿಧ್ಯವನ್ನು ನೀಡುವುದರಲ್ಲಿ ಅನುಮಾನವಿಲ್ಲ. ಆದರೆ ಈ ವಿಧೇಯಕದ ಬಗ್ಗೆ ಯಾದವ ತೃಯರು ಎತ್ತಿದ್ದ ಆಕ್ಷೇಪಗಳ ಬಗ್ಗೆ ಸದನದಲ್ಲಾಗಲೀ, ಸಾರ್ವಜನಿಕವಾಗಿ ಆಗಲೀ ಚರ್ಚೆ ನಡೆದಿಲ್ಲ. ನಮ್ಮ ಮಾಧ್ಯಮಗಳೂ ಸಹ ಯಾದವ ತ್ರಯರನ್ನು ಜೋಕರರನ್ನಾಗಿ ನೋಡಿ ಕೈತೊಳೆದುಕೊಂಡಿವೆ. ಆದರೆ ಅವರು ಎತ್ತಿರುವ ಕೆಲವು ತಾತ್ವಿಕ, ವಾಸ್ತವಿಕ ಸತ್ಯಗಳು ಚರ್ಚೆಗೆ ಗ್ರಾಸವನ್ನು ಒದಗಿಸಿದ್ದು ಮಾತ್ರ ನಿಜ.
ಮಹಿಳೆಯ ಮೀಸಲಾತಿಯಲ್ಲಿ ಒಳಮೀಸಲಾತಿ ಬೇಕೇ ಬೇಡವೆ ಎಂಬುದು ಈ ವಿವಾದದ ಕೇಂದ್ರ ಬಿಂದು. ಈಗಿನ ಮೀಸಲಾತಿಯಲ್ಲಿ ಮಹಿಳೆಯರಲ್ಲಿ ಲಾಭ ಪಡೆಯುವವರು, ಮೇಲ್ವರ್ಗದವರು ಮತ್ತು ಈಗಿನ ಖ್ಯಾತ ರಾಜಕಾರಣಿಗಳ ಕುಟುಂಬದ ಜನ ಎನ್ನುವುದು ಪ್ರಮುಖ ಆರೋಪ. ಇದು ಸ್ವಲ್ಪ ಮಟ್ಟಿಗೆ ನಿಜ. ನಮ್ಮ ಬಹುತೇಕ ರಾಜಕಾರಣಿಗಳು ನಂಬಿದರೆ ತಮ್ಮ ಕುಟುಂಬದವರನ್ನು ಮಾತ್ರ. ದೇವೇಗೌಡರಿಗೆ ತಮ್ಮ ಮಕ್ಕಳನ್ನು ಯಶಸ್ವಿ ರಾಜಕಾರಣಿಗಳನ್ನಾಗಿ ಮಾಡುವುದು ಮೊದಲ ಆದ್ಯತೆ. ಸೋನಿಯಾ ಗಾಂಧಿ ಅವರಿಗೆ ರಾಹುಲ್ ಗಾಂಧಿಯನ್ನು ಪಟ್ಟಕ್ಕೇರಿಸುವದೇ ಬದುಕಿನ ಧ್ಯೇಯ. ಯಡಿಯೂರಪ್ಪ ಅವರಿಗೆ ರಾಘವೇಂದ್ರನನ್ನು ಎಮ್. ಪಿ. ಮಾಡಿದ ಮೇಲೆ ವಿಜಯೇಂದ್ರನಿಗೆ ಹೇಗೆ ರಾಜಕೀಯ ಆಶ್ರಯ ನೀಡಬೇಕು ಎಂಬ ಚಿಂತೆ. ಇನ್ನು ನಮ್ಮ ಯಾದವ ನಾಯಕರು. ಲಾಲೂ ಪ್ರಸಾದ್ ಯಾದವ್ ಅವರಿಗೆ ಬಿಹಾರದಲ್ಲಿ ಮಹಿಳಾ ಮುಖ್ಯಮಂತ್ರಿ ಮಾಡಿದ ಕೀರ್ತಿಯ ಕಿರೀಟ. ಆದರೆ ಯಾರನ್ನೂ ನಂಬದ ಈ ಯಾದವ ನಾಯಕ, ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ್ದು ಮಾತ್ರ ತಮ್ಮ ಧರ್ಮ ಪತ್ನಿಯನ್ನು. ಅದನ್ನು ಬಿಟ್ಟರೆ ಬೇರೆ ಮಹಿಳೆಯರಿಗೆ ಅವರು ಅಧಿಕಾರ ನೀಡಿ ಬೆಳೆಸಿದ ಉದಾಹರಣೆ ನೆನಪಿಗೆ ಬರುತ್ತಿಲ್ಲ. ಇನ್ನು ಮುಲಾಯಮ್ ಸಿಂಗ ಯಾದವ್. ಇವರಿಗೆ ಹಿಂದಿ ಚಿತ್ರ ರಂಗದ ನಟಿಯರೆಂದರೆ ಪ್ರೀತಿ. ಅವರು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು ಜಯಾ ಬಚ್ಚನ್ ಎಂಬ ಮಾಜಿ ನಟಿಯನ್ನು !
ಇವರಿಬ್ಬರ ವರ್ತನೆಯಲ್ಲಿ ಮಹಿಳೆಯರ ಬಗ್ಗೆ ಕಾಳಜಿ ಕಾಣುತ್ತಿಲ್ಲ. ಹೀಗಾಗಿ ಅವರು ಪ್ರಸ್ತಾಪ ಮಾಡಿದ ಗಂಭೀರವಾದ ವಿಚಾರ ಹೆಚ್ಚಿನ ಮಹತ್ವವನ್ನು ಪಡೆಯಲೇ ಇಲ್ಲ. ಭೂತದ ಬಾಯಿಯಲ್ಲಿ ಭಗವದ್ಘೀತೆ ಬಂದಂತೆ ಎಂದು ಎಲ್ಲರೂ ನಿರ್ಧರಿಸಿಬಿಟ್ಟರು.
ಎರಡು ದಿನಗಳ ಹಿಂದೆ ನಾನು ನನ್ನ ಕೆಲವು ಸಮಾಜವಾದಿ ಗೆಳಯರ ಜೊತೆ ಮಾತನಾಡುತ್ತಿದ್ದೆ. ಅವರು ಎತ್ತಿದ ಪ್ರಶ್ನೆಗಳು ತುಂಬಾ ಗಂಭೀರವಾಗಿದ್ದವು. ಯಾದವ ತ್ರಯರು ಎತ್ತಿದ ಪ್ರಶ್ನೆ ಎನಿದೆ ಅದು ಮುಖ್ಯ ಅಲ್ಲವಾ ಎಂದು ಅವರು ಪ್ರಶ್ನಿಸಿದಾಗ ನಾನು ಆ ಬಗ್ಗೆ ಯೋಚಿಸತೊಡಗಿದೆ. ಮುಲಾಯಂ ಮತ್ತು ಲಾಲೂ ಈ ವಿಚಾರದಲ್ಲಿ ಮಾಡುತ್ತಿರುವ ಒಳ ಮೀಸಲಾತಿಯ ಪ್ರಶ್ನೆ ತುಂಬಾ ಪ್ರಸ್ತುತ. ಈ ಮೀಸಲಾತಿಯಿಂದ ಮೇಲ್ವರ್ಗದ ಮಹಿಳೆಯರಿಗೆ ಮತ್ತು ರಾಜಕಾರಣಿಗಳ ಕುಟುಂಬದ ಮಹಿಳೆಯರಿಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದರಲ್ಲಿ ನನಗಂತೂ ಅನುಮಾನ ಇಲ್ಲ. ಎಲ್ಲ ಖ್ಯಾತ ರಾಜಕಾರಣಿಗಳು ತುಮ್ಮ ಕುಟುಂಬದ ಮಹಿಳೆಯರನ್ನು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಯ ಸದಸ್ಯರನ್ನಾಗಿ ಮಾಡುತ್ತಾರೆ ಎಂಬುದೂ ನಿಜ. ಆದರೆ ಈಗ ಒಳ ಮೀಸಲಾತಿಯ ಬಗ್ಗೆ ಮಾತನಾಡುವವರ ಪ್ರಾಮಾಣಿಕತೆ ಮತ್ತು ಬದ್ಧತೆಯೇ ಪ್ರಶ್ನಾರ್ಹವಾಗಿದೆ. ಇಂಥಹ ಸ್ಥಿತಿಯಲ್ಲಿ ಅವರ ವಾದಕ್ಕೆ ಸಮರ್ಥನೆಯೇ ದೊರಕುತ್ತಿಲ್ಲ.
ಕ್ರಾಂತಿ ಅಥವಾ ಬದಲಾವಣೆ ಪವಾಡದಂತೆ ನಡೆಯುವುದಿಲ್ಲ. ಈ ದೇಶದಲ್ಲಿ ಮಹಿಳೆಯರೆಲ್ಲ ಶೋಷಿತರೇ. ಮೇಲ್ವರ್ಗದ ಮಹಿಳೆಯರು ಇದಕ್ಕೆ ಹೊರತಲ್ಲ. ಆದ್ದರಿಂದ ಮಹಿಳೆ ಮೀಸಲಾತಿಯನ್ನು ಮೊದಲು ಸ್ವಾಗತಿಸೋಣ. ನಂತರ ಒಳ ಮೀಸಲಾತಿಯ ಬಗ್ಗೆ ಹೋರಾಟ ನಡೆಸೋಣ ಎಂದು ಯಾದವ ತ್ರಯರು ಯೋಚಿಸಬಹುದಿತ್ತು. ಆದರೆ ಅವರು ಹಾಗೆ ಯೋಚನೆ ಮಾಡಲಿಲ್ಲ. ಬದಲಾಗಿ ಸರ್ಕಾರಕ್ಕೆ ನೀಡದ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಳ್ಳುವ ಬೆದರಿಕೆಯನ್ನು ಅವರು ಒಡ್ಡಿದರು. ಇಲ್ಲಿಯೂ ರಾಜಕೀಯ ಮಾಡಿದರು.
ಈ ಮೀಸಲಾತಿಯಿಂದ ಸದನಗಳಲ್ಲಿ ಹೆಚ್ಚಿನ ಮಹಿಳೆಯರು ಕಾಣುತ್ತಾರೆ. ಜೊತೆಗೆ ರಾಜಕಾರಣಿಗಳ ಕುಟುಂಬದ ಮಹಿಳೆಯರು ಅ ಮನೆಯ ಪುರುಷ ರಾಜಕಾರಣಿಗಳಿಗಿಂತೆ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ ಎಂದು ನಾನು ನಂಬಿದ್ದೇನೆ. ದೇವೇಗೌಡರ ಜಾಗದಲ್ಲಿ ಚೆನ್ನಮ್ಮ ಲೋಕಸಭೆ ಸದಸ್ಯರಾದರೆ ? ಬಂಗಾರಪ್ಪ ಬದಲಿಗೆ ಅವರ ಹೆಂಡತಿ ಸದನದಲ್ಲಿ ಕಾಣುವಂತಾದರೆ ? ಯಡಿಯೂರಪ್ಪ ಅವರ ಮಕ್ಕಳಿಗಿಂತ ಅವರ ಹೆಣ್ಣು ಮಕ್ಕಳು ಸದನಕ್ಕೆ ಬಂದರೆ, ಹೆಚ್ಚು ಪ್ರಾಮಾಣಿಕರಾಗಿರಲಾರರೆ ?
ಇದನ್ನೆಲ್ಲ ಗಮನಿಸಿದರೆ, ಈ ಮಹಿಳಾ ಮೀಸಲಾತಿ ಮಸೂದೆ ಮೊದಲು ಬರಲಿ. ನಂತರ ಒಳ ಮೀಸಲಾತಿಯ ಬಗ್ಗೆ ಹೋರಾಟ ನಡೆಸಬಹುದು. ಎಲ್ಲ ಕೆಳ ವರ್ಗದ ಮಹಿಳೆಯರು ಸದನದಲ್ಲಿ ಕಾಣುವಂತಾದರೆ, ನಮ್ಮ ರಾಜಕಾರಣದ ಅನೈತಿಕತೆಯ ಪಯಣಕ್ಕೆ ಒಂದಿಷ್ಟು ತಡೆಯಾದರೂ ಬಿದ್ದೀತು. ಇದನ್ನು ಯಾದವ ತ್ರಯರು ಅರ್ಥ ಮಾಡಿಕೊಳ್ಳಲಿ.
Subscribe to:
Post Comments (Atom)
ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?
ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ಮಹಾರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಎರಡನೆ ಬಂಡಾಯ.. ಒಂದು ವರ್ಷದ ಹಿಂದೆ ಶಿವಸೇನೆಯಿಂದ ಹೊರಗೆ ಬಂದ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ಮುಖ್ಯ...
-
ಮಳೆ ಹೊಯ್ದು ಹೋದ ಮೇಲೆ ಮಳೆ ಹನಿಗಳು ಬೀಳುತ್ತಲೇ ಇರುತ್ತವೆ,, ಮೋಡ ಮುಚ್ಚಿರುತ್ತದೆ. ಯಾವಾಗ ಮತ್ತೆ ಮಳೆ ಬರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ.. ಮತ್ತೆ ಗುಡುಗು ಸಿಡಿ...
No comments:
Post a Comment