Tuesday, December 27, 2011

ಚಳಿಗಾಳಿಯ ನಡುವೆ ರಾಜಕೀಯದ ಮಂಗಾಟ. ದೀರ್ಘ ರಾತ್ರಿಯ ಋತುವಿನಲ್ಲಿ ಬೆಳಕಿಗಾಗಿ ಧ್ಯಾನ...


ಉತ್ತರಾಧಿಕಾರಿ ಯಾರು ? ಈ ಅಪ್ಪುಗೆಯ ಬಿಸಿ ತಟ್ಟುವುದು ಯಾರಿಗೆ ?

ಇಂದು ಬುಧವಾರ. ಬೆಂಗಳೂರಿನಲ್ಲಿ ವರ್ಷಕ್ಕಿಂತ ಹೆಚ್ಚು ಚಳಿ. ಬೆಳಿಗ್ಗೆ ಬೇಗ ಏಳಬೇಕು ಎಂದು ರಾತ್ರಿ ತೆಗೆದುಕೊಂಡ ತೀರ್ಮಾನ ಬೆಳಿಗ್ಗೆ ಅನುಷ್ಠಾನಕ್ಕೆ ಬರುವುದು ಕಷ್ಟ. ಇನ್ನೂ ಸ್ವಲ್ಪ ಹೊತ್ತು ಹಾಸಿಗೆಯಲ್ಲಿ ಉರುಳಾಡಲು ಇಷ್ಟ ಪಡುವ ಮನಸ್ಸು. ಇಂತಹ ಮನಸ್ಸು ಆಗಲೇ ಹಲವು ಸಬೂಬುಗಳನ್ನು ಸೃಷ್ಟಿ ಮಾಡಿಕೊಂಡಿರುತ್ತದೆ. ಇವತ್ತು ಬೇಡ, ತುಂಬಾ ಚಳಿ ಇದೆ, ಈ ಚಳಿಯಲ್ಲಿ ಹೊರಗೆ ವಾಕಿಂಗ್ ಗೆ ಹೋದರೆ, ಸೈನಸ್ ಸಮಸ್ಯೆ ಹೆಚ್ಚಾಗಬಹುದು ಎಂಬುದು ಒಂದು ಸಬೂಬು. ಇಂತಹ ಸಬೂಬು ಸಿಕ್ಕ ತಕ್ಷಣ ದೇಹ ಹಾಗೆ ಚಾದರದ ಒಳಗೆ ನುಸುಳಿದಂತೆ ಮಲಗಿ ಬಿಡುತ್ತದೆ.
ಕೊನೆಗೆ ಅನಿವಾರ್ಯವಾಗಿ ಎದ್ದು ಒಂದು ಕಪ್ ಕಾಫಿ ಹೀರಿ ಪತ್ರಿಕೆಗಳನ್ನು ಮಗುಚಿ ಹಾಕಿದರೆ, ಯಾವುದೂ ಸುದ್ದಿಯಂದೇ ಅನ್ನಿಸುವುದಿಲ್ಲ. ಎಲ್ಲವೂ ನಮಗೆ ಗೊತ್ತಿರುವುದೇ ಎಂದು ಅನ್ನಿಸುತ್ತದೆ. ಯಾವುದೇ ಒಂದು ವರದಿಯನ್ನು ಓದಲು ಮನಸ್ಸಾಗುವುದಿಲ್ಲ. ನಂತರ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲೇ ಟೀವಿ ಹಚ್ಚಿದರೆ, ನಮ್ಮ ಸುದ್ದಿ ವಾಚಕರು ನಿಮ್ಮ ಬಳಿ ಹೆಚ್ಚಿನ ಮಹಿತಿ ಏನಿದೆ ಎಂದು ಅದೇ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಆಗಲೇ ಇವತ್ತಿಗೂ ನಿನ್ನೆಗೂ ಏನೂ ವ್ಯ
ತ್ಯಾಸವಿಲ್ಲ ಎಂದು ಅನ್ನಿಸಲು ಪ್ರಾರಂಭವಾಗುತ್ತದೆ. ಆಗ ಮನಸ್ಸು ಇನ್ನಷ್ಟು ಮುದುಡುತ್ತದೆ. ಇರಲಿ ಬಿಡಿ. ಆದರೂ ಇಂದು ನನ್ನನ್ನು ಯೋಚನೆಗೆ ಹಚ್ಚಿದ್ದು ಎರಡು ಪ್ರಮುಖ ಘಟನೆಗಳು.
ಮುಖ್ಯಮಂತ್ರಿ ಸದಾನಂದಗೌಡ, ಮತ್ತು ರಾಜ್ಯ ಬಿಜೆಪಿ ಅಧ್ಯಕ್ಶ ಈಶ್ವರಪ್ಪ, ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಯಡಿಯೂರಪ್ಪನವರ ಯಡವಟ್ತು ರಾಜಕೀಯದ ವಿವರಣೆ ನೀಡುತ್ತಿದ್ದಾರೆ. ದಯವಿಟ್ಟು ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿ ಎಂದು ಗೋಗರೆಯುತ್ತಿದ್ದಾರೆ. ಇಲ್ಲಿ ಬೆಂಗಳೂರಿನಲ್ಲಿ ಯಡಿಯೂರಪ್ಪನವರು ತಮ್ಮ ಹಿಂಬಾಲಕ ನಾಯಕರ ಸಭೆ ನಡೆಸುತ್ತಿದ್ದಾರೆ. ಪಕ್ಷದ ವರಿಷ್ಠರ ವಿರುದ್ಧ ಸಡ್ದು ಹೊಡೆದಿರುವ ಅವರು ತಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡದಿದ್ದರೆ ಹುಷಾರು ಎಂಬ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ.
ಆದರೆ ಬಿಜೆಪಿ ವರಿಷ್ಠರು ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಮಗುವನ್ನು ಚುವುಟಿ, ತೊಟ್ಟಿಲು ತೂಗುವ ಕಾಯಕ ಅವರದು. ಪ್ರಾಯಶಃ ಯಡಿಯೂರಪ್ಪನವರಿಂದ ಪಡೆದುಕೊಂಡಿದ್ದು ನೆನಪಾಗಿ ನೈತಿಕ ಪ್ರಜ್ನೆ ಅವರಿಗೆ ಕಾಡುತ್ತಿರಬಹುದು ! ಒಟ್ಟಿನಲ್ಲಿ ಯಡಿಯೂರಪ್ಪ ಅವರನ್ಮ್ನು ಬಿಡಲು ಸಾಧ್ಯವಾಗದೇ ಅವರನ್ನು ಇಟ್ಟುಕೊಳ್ಳಲೂ ಆಗದೇ ಬಿಜೆಪಿ ವರಿಷ್ಠರು ತೊಳಲಾಡುತ್ತಿದ್ದಾರೆ.
ಯಡೀಯೂರಪ್ಪನವರಿಗೆ ಅಧಿಕಾರವಿಲ್ಲದೇ ಬದುಕುವುದು ಸಾಧ್ಯವಿಲ್ಲ ಎಂದು ಅನ್ನಿಸಿಬಿಟ್ಟಿದೆ. ಅವರ ಹಿಂಬಾಲಕರಿಗೆ ಸದಾನಂದಗೌಡರು ಪ್ರಾಮಾಣಿಕರಾಗಿ ಇರುವುದು ಬೇಕಾಗಿಲ್ಲ. ತಮಗೆ ಮೇಯಲು ಅವಕಾಶವಿಲ್ಲ ಎಂಬ ದುಃಖ ಅವರದು. ಸದಾನಂದ ಗೌಡರು ಎಂದೂ ಬೆನ್ನೆಲುಬು ಇದೆ ಎಂದು ತೋರಿಸಿದವರಲ್ಲ. ಈಗ ಎದ್ದು ನಿಲ್ಲಲು ಬಗ್ಗಿಯೇ ಇದ್ದ ಬೆನ್ನು ಅಡ್ಡಿಯಾಗುತ್ತಿದೆ. ನೆಟ್ಟಗಾಗುವುದಕ್ಕೂ ನೋವು..!
ಈಶ್ವರಪ್ಪ ಎಂಬ ಬಿಜೆಪಿ ರಾಜ್ಯಾಧ್ಯಕ್ಷರದು ಯಾವ ಸಮಯಕ್ಕೆ ಮನಸ್ಸು ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವರದು ಚಂಚಲ ಚಿತ್ತ. ಲಾಭವಿದ್ದ ಕಡೆ ಗೊತ್ತಿಲ್ಲದಂತೆ ಜಾರಿ ಬಿಡುವ ಯಡಬಿಡಂಗಿ ಮನಸ್ಸು ಅವರದು. ಅವರನ್ನು ಕಟ್ಟಿಕೊಂಡವರು ಉದ್ಧಾರವಾಗುವುದು ಕಷ್ಟ. ಒಂದು ರೀತಿಯಲ್ಲಿ ಅತೃಪ್ತರು ಮತ್ತು ದುಃಖತಪ್ತರ ಸಮೂಹ ಇದು.
ಇಂದು ಬೆಳಿಗಿನಿಂದ ಇನ್ನೊಂದು ವಿದ್ಯಮಾನ ನಡೆಯುತ್ತಿದೆ. ನಮ್ಮ ಬಹುತೇಕ ಸುದ್ದಿ ವಾಹಿನಿಗಳು ಈ ವಿಚಾರವನ್ನೇ ಇಟ್ಟುಕೊಂಡು ಇಡೀ ದಿನ ಚರ್ಚೆ ಮಾಡಿವೆ. ಅದು ಕುಮಾರ ವರ್ಸಸೆಸ್ ಮಧು. ಇವರಿಬ್ಬರು ಬಂಗಾರಪ್ಪನವರ ಮಕ್ಕಳು. ಅಪ್ಪನ ಅಂತ್ಯ ಸಂಸ್ಕ್ರಾರದಲ್ಲೂ ಉತ್ತರಾಧಿಕಾರದ ಜಗಳ ತಾರಕಕ್ಕೆ ಏರಿದೆ. ಒಬ್ಬರು ಬರುವುದಕ್ಕಿಂತ ಮೊದಲು ಇನ್ನೊಬ್ಬರು ತಲೆ ಬೋಳಿಸಿಕೊಂಡು ಬಂದು ನಿಂತ ದೃಶ್ಯ. ಮಧ್ಯೆ ನಮ್ಮ ಧಾರಾವಹಿ ಸಿನಿಮಾಗಳನ್ನು ಹೆದರಿಸುವಂತೆ ಹರಿಯುವ ಕಣ್ಣೀರ ಧಾರೆ. ಅಗಲಿದ ನಾಯಕನ ಮುಂದೆ ಇವರು ಮಾಡುತ್ತಿರುವುದನ್ನು ನೋಡಿದರೆ ಇದಕ್ಕಾಗಿಯೇ ಇವರೆಲ್ಲ ಕಾಯುತ್ತಿದ್ದರೇನೋ ಎಂದು ಅನ್ನಿಸುತ್ತದೆ.
ನಾಯಕತ್ವ ಎನ್ನುವುದು ಅಪ್ಪನಿಂದ ಮಗನಿಗೆ ಬರುವ ಪಿತ್ರಾರ್ಜಿತ ಆಸ್ತಿಯಲ್ಲ. ಒಬ್ಬ ನಾಯಕ ಜನರ ನಡುವೆ ಹುಟ್ಟಿ ಬೆಳೆಯುತ್ತಾನೆ. ನಾಯಕ ಸ್ವಯಂ ಘೋಷಣೆಯಿಂದ ಆವಿರ್ಭವಿಸುವುದಿಲ್ಲ. ಇಂತಹ ಸಾಮಾನ್ಯ ಜ್ನಾನ ಕೂಡ ಇವರಿಗೆ ಇಲ್ಲ.
ಡಿಸೆಂಬರ್ ತಿಂಗಳ ಚಳಿಯ ನಡುವೆ ಇಂತಹ ಮೂರ್ಖರು ಅಯೋಗ್ಯರು ವಿಜೃಂಭಿಸುವುದು ಕಾಣುತ್ತಿದೆ. ಇವರಿಗೆ ಬದುಕನ್ನು ಅನುಭವಿಸುವುದಕ್ಕೂ ಬರುವುದಿಲ್ಲ. ಅಧಿಕಾರವನ್ನು ಹೇಗೆ ಪಡೆಯಬೇಕು ಎಂಬುದು ಗೊತ್ತಿಲ್ಲ. ನಾಯಕರಾಗುವುದು ಹೇಗೆ ಎಂಬ ಸಾಮಾನ್ಯ ಜ್ನಾನ ಕೂಡ ಇವರಿಗಿಲ್ಲ..
ಸಾಕು ಚಳಿ ಹೆಚ್ಚುತ್ತಿದೆ. ಬೆಚ್ಚನೆಯ ಚಾದರದೊಳಗೆ ಹೊಕ್ಕು ಕುಳಿತು ಕನಸು ಕಾಣುವ ಸುಖವೇ ಬೇರೆ. ದೀರ್ಘ ರಾತ್ರಿಯ ಈ ದಿನಗಳಲ್ಲಿ ಹಗಲಿಗಾಗಿ ಕಾಯುತ್ತ ಕನಸು ಕಾಣುವುದೇ ಹೆಚ್ಚು ಸಂತೋಷದಾಯಕ.

Monday, December 26, 2011


§AUÁgÀ¥Àà: »AzÀĽzÀ ªÀUÀðUÀ¼À DvÀä

¥ÀæeÉßAiÀÄ ¸ÀAPÉÃvÀ
CzÀÄ 1970 gÀ dÆ£ï wAUÀ¼ÀÄ. CUÀvÁ£É ªÀÄ¼É ¥ÁægÀA¨sÀªÁUÀÄwÛzÀÝ ¢£ÀUÀ¼ÀÄ. CAzÀÄ §ÄzsÀªÁgÀ. ¹zÁÝ¥ÀÅgÀzÀ°è ¸ÀAvÉAiÀÄ ¢£À. ±Á¯ÉUÉ ºÉÆÃUÀÄwÛzÀÝ £ÁªÀÅ ªÀÄzsÁå£Àí ¸ÀAvÉ ©Ã¢UÉ §A¢zÉݪÀÅ. DUÀ aªÀÄÄ aªÀÄÄ ªÀÄ¼É ¨ÉÃgÉ ©Ã¼ÀÄwÛvÀÄÛ. ªÀļÉAiÀÄ £ÀqÀĪÉAiÉÄà ¸ÀAvÉ ©Ã¢AiÀÄ°è ¨sÁµÀt. CzÀÄ ¨sÁµÀt JAzÀgÉ ªÁPï ¥ÀæªÁºÀ. ªÀįÉãÁr£À°è ¸ÀÄjAiÀÄĪÀ ªÀļÉAiÀÄ ºÁUÉ. ºÀjAiÀÄĪÀ £À¢AiÀÄ ºÁUÉ. CzÀPÉÌ CqÉ vÀqÉ JA§ÄzÀÄ E®èªÉà E®è.

¸ÀAvÉAiÀÄ ¢£À ©Ã¢AiÀÄ°è ªÀiÁvÀ£ÁqÀÄwÛzÀÝ CªÀgÀÄ ©½AiÀÄ ¥ÁåAlÄ ±ÀlÄð vÉÆnÖzÀÝgÀÄ. PÀtÂÚUÉ PÀ¥Àà£É

AiÀÄ PÀ£ÀßqÀPÀ. GzÀÝ£ÉAiÀÄ PÀÆzÀ®Ä. AiÀiÁªÀÅzÉÆà ¹¤ªÀiÁ £Àl¤gÀ§ºÀÄzÀÄ JAzÀÄ C¤ß¸ÀĪÀAvÉ CªÀjzÀÝgÀÄ. DUÀ £À£ÀUÉ w½¢zÉÝAzÀgÉ CªÀgÀÄ J¸ï. §AUÁgÀ¥Àà. ¥ÀPÀÌzÀ ¸ÉÆgÀ§zÀªÀgÀÄ. CªÀgÀÄ PÀ£ÁðlPÀ PÁæAwPÁj ¥ÀPÀë JA§ ¥ÀPÀëzÀ £ÁAiÀÄPÀgÀÄ JA§ÄzÀÄ. PÁ®£À vÉPÉÌUÉ ¸ÉÃj ºÉÆÃUÀĪÀªÀgÉUÀÆ CzÉà ªÀÄgÉAiÀįÁUÀzÀ avÀæ. zÁj ¸ÀjzÀgÀÆ §zÀ¯ÁUÀzÀ CzÉà ªÀåQÛvÀé. CzÉà ¢ügÀ¸ÀÄ. FUÀ®Æ CzÉà ªÀļÉAiÀÄ°è, d£ÀjgÀ°, ©qÀ°, £Á£ÀÄ ªÀiÁvÀ£ÁrAiÉÄà ªÀiÁvÀ£ÁqÀÄvÉÛÃ£É JA§AvÉ ªÀiÁvÀ£ÁqÀÄvÀÛ¯Éà EgÀĪ avÀæ ªÀÄgÉAiÀiÁUÀĪÀÅ¢®è.EzÁzÀ PÉ®ªÉà ¢£ÀUÀ¼À°è CªÀgÀÄ ¨sÁj ZÀ¼ÀªÀ½AiÉÆAzÀ£ÀÄß ºÀ«ÄäPÉÆArzÀÝgÀÄ. CzÀÄ GvÀÛgÀ PÀ£ÀßqÀ f¯ÉèAiÀÄ PÁqÀ£ÀÄß PÀrzÀÄ ¤Ã®Vj ªÀÄgÀªÀ£ÀÄß £ÉqÀĪÀ AiÉÆÃd£ÉAiÀÄ£ÀÄß ¥Àæw¨sÀn¹ ºÀ«ÄäPÉÆAqÀ ZÀ¼ÀªÀ½AiÀiÁVvÀÄÛ. F ZÀ¼ÀªÀ½AiÀÄ°è £ÀÆgÁgÀÄ d£À ¥Á¯ÉÆÎArzÀÝgÀÄ. CV£À ¸ÀPÁðgÀ CªÀgÀ£Éß®è §A¢ü¹ PÁgÀªÁgÀzÀ eÉÊ°UÉ PÀ¼ÀÄ»¹PÉÆnÖvÀÄÛ. §AUÁgÀ¥Àà ªÀiÁvÀæ ZÀ¼ÀªÀ½AiÀÄ£ÀÄß ¥ÁægÀA©ü¹ ªÀÄÄA¢£À ºÉÆÃgÁl gÀƦ¸ÀĪÀÅzÀPÁÌV ¨ÉAUÀ¼ÀÆjUÉ vÉgÀ½zÀÝgÀÄ. £ÁªÉ®è ¸Àtß ¸ÀtÚ ªÀÄPÀ̼ÀÄ ¥ÉǰøÀgÀ fæ£À°è PÁgÀªÁgÀPÉÌ ºÉÆgÀlÄ ¤AvÀ D gÉÊvÀgÀ£ÀÄß £ÉÆÃqÀÄwÛzÉݪÀÅ. »ÃUÉ PÁgÀªÁgÀ eÉÊ°UÉ ºÉÆÃzÀ gÉÊvÀgÀÄ C°èAzÀ ©qÀÄUÀqÉAiÀiÁzÀ ªÉÄïÉ, §¹ìUÉ §gÀ®Ä PÁ¹®èzÉà £ÀqÉzÀÄPÉÆAqÀÄ HjUÉ »AwgÀÄVzÀÝgÀÄ. DzÀgÉ §AUÁgÀ¥Àà£ÀªÀjUÉ dAiÀĪÁUÀ° JA§ dAiÀÄ WÉÆõÀ ªÀiÁvÀæ ¤AwgÀ°®è. FUÀ®Æ CzÉà dAiÀÄPÁgÀ PÉüÀÄwÛzÉ.

PÁAUÉæ¸ï gÁdPÁgÀtzÀ vÀªÀgÁzÀ GvÀÛgÀ PÀ£ÀßqÀ f¯ÉèAiÀÄ d£À DUÀ §AUÁgÀ¥Àà CªÀgÀ §UÉÎ ¨sÁj ¤jÃPÉëAiÀÄ£ÉßãÀÆ ElÄÖPÉÆArgÀ°®è. DUÀ gÁdPÁgÀtªÉAzÀgÉ PÁAUÉæ¸ï gÁdPÁgÀtªÁVvÀÄÛ. £ÁAiÀÄPÀgÉAzÀgÉ PÁAUÉæ¸ï £ÁAiÀÄPÀgÁVzÀÝgÀÄ. F ©ü£Àß zsÀé¤ C¥ÀjavÀ. PÁAUÉæ¸ï gÁdPÁgÀtzÀ°è »rvÀ ¸Á¢ü¹zÀÝ ºÀªÀåPÀgÀÄ ªÀÄvÀÄÛ ±ÁAvÀªÉÃj UÉÆÃ¥Á®UËqÀgÀ ZÀ¼ÀªÀ½¬ÄAzÀ gÁdQÃAiÀÄ ªÀÄvÀÄÛ ¸ÁªÀiÁfPÀ ªÀiÁ£ÀåvÉ ¥ÀqÉAiÀÄĪÀ zÁjAiÀÄ°è ºÉeÉÓ EqÀÄwÛzÀÝ ¢ÃªÀgÀÄ £ÀqÀÄ«£À ªÉʵÀªÀÄåzÀ EwºÁ¸ÀzÀ £ÀqÀÄªÉ ºÉÆgÀºÉÆ«ÄäzÀ §AUÁgÀ¥Àà DUÀ¯Éà »AzÀĽzÀ ¢ÃªÀgÀ DvÀä¥ÀæeÉßAiÀÄ ¸ÀAPÉÃvÀªÁV ¨É¼ÉAiÀÄvÉÆqÀVzÀÝgÀÄ. CªÀgÀÄ ¥ÁægÀA©ü¹zÀ ¤Ã®Vj «gÉÆâü ZÀ¼ÀªÀ½ PÀÆqÀ F gÁdPÁgÀtzÀ ªÉÊgÀÄzsÀåUÀ¼À£ÀÄß ¥Àæw©A©¸ÀĪÀAwvÀÄÛ. ¤Ã®Vj ¨É¼É¸ÀĪÀÅzÀÄ £É®ªÀ£ÀÄß §gÀqÀÄ ªÀiÁqÀÄvÀÛzÉ JAzÀÄ £ÀA©zÀªÀgÀÆ ¸ÀPÁðgÀªÀ£ÀÄß «gÉÆâü¸ÀĪÀ ±ÀQÛAiÀÄ£ÀÄß ºÉÆA¢gÀ°®è. DzÀgÉ §AUÁgÀ¥Àà F «ZÁgÀªÀ£ÀÄß vÀªÀÄä gÁdPÁgÀtzÀ ªÀÄÄRå±ÀQÛAiÀiÁV §¼À¹PÉƼÀî®Ä ¥ÁægÀA©ü¹zÀÝgÀÄ. ¤d°AUÀ¥Àà ¸ÀaªÀ ¸ÀA¥ÀÅlzÀ°è ªÀÄAwæAiÀiÁVzÀÝ gÁªÀÄPÀȵÀÚ ºÉUÀqÉ, f¯ÉèAiÀÄ°è ¤Ã®Vj AiÉÆÃd£É §gÀĪÀÅzÀPÉÌ PÁgÀtgÁVzÀÝgÀÄ. EzÀ£ÀÄß «gÉÆâü¹ ºÉÆÃgÁl ºÀ«ÄäPÉÆAqÀªÀgÀÄ ¸ÀªÀiÁdªÁ¢ ZÀ¼ÀªÀ½¬ÄAzÀ¯Éà ¸ÁªÀðd¤PÀ fêÀ£ÀPÉÌ PÁ°lÖ J¸ï. §AUÁgÀ¥Àà. DUÀ ¥ÁægÀA¨sÀªÁzÀ F E§âgÀÄ £ÁAiÀÄPÀgÀ dUÀ¼À §UɺÀjAiÀįÉà E®è. CzÀÄ 1983gÀ°è ºÉUÀqÉ ªÀÄÄRåªÀÄAwæAiÀiÁUÀĪÀÅzÀgÉÆA¢UÉ, E£ÉÆßAzÀÄ ªÀÄf°UÉ vÀ®Ä¦©nÖvÀÄ.

¹zÁÝ¥ÀÅgÀzÀ ¸ÀAvÉ ©Ã¢AiÀÄ°è ¨sÁµÀt ªÀiÁqÀÄwÛzÀÝ §AUÁgÀ¥Àà CªÀgÀ ¸À¨sÉUÉ DUÀ ¨sÁj ¸ÀASÉåAiÀÄ°è d£À §gÀÄwÛgÀ°®è. ¸ÀAvÉUÉ §AzÀªÀgÀÄ PÀÄvÀƺÀ®¢AzÀ CªÀgÀ ¨sÁµÀt PÉüÀÄwÛzÀÝgÀÄ. ºÁUÉ £ÀPÀÄÌ vÀªÀÄä vÀªÀÄä ªÀÄ£ÉUÉ »AwgÀÄUÀÄwÛzÀÝgÀÄ. EzÀjAzÀ vÀ¯É PÉr¹PÉƼÀîzÀ §AUÁgÀ¥Àà vÀªÀÄä ¨sÁµÀt ªÀÄÄV¹ ElV JA§ Hj£À°èzÀÝ vÀªÀÄä ¸ÀqÀØPÀ ©. ©. £ÁAiÀÄPÀgÀ ªÀÄ£ÉUÉ vÀAUÀ®Ä vÉgÀ¼ÀÄwÛzÀÝgÀÄ. DzÀgÉ £ÁªÉ®è ElV JA§ HjUÉ ºÉÆÃzÁUÀ §AUÁgÀ¥Àà §A¢zÀÝgÉ, ºÉʸÀÆÌ¯ï ºÉqï ªÀiÁ¸ÀÖgï DVzÀÝ CªÀgÀ ¸ÀqÀØPï ©. ©. £ÁAiÀÄÌgÀ ªÀÄ£ÉAiÀÄ QqÀQAiÀÄ §½ ¤AvÀÄ M¼ÀVzÀÝ §AUÁgÀ¥Àà K£ÀÄ ªÀiÁqÀÄwÛzÁÝgÉ JAzÀÄ PÀÄvÀƺÀ®¢AzÀ EtQ ºÁPÀÄwÛzÉݪÀÅ. CªÀgÀÄ PÀAqÀgÉ K£ÉÆà RĶ.

£À£Àß §ºÀÄvÉÃPÀ J®è ¸ÉßûvÀgÀÆ §AUÁgÀ¥Àà£ÀªÀgÀ eÁwUÉ ¸ÉÃjzÀªÀgÀÄ. ºÁUÉ, £ÀªÀÄä Hj£À ¸ÀÄvÀÛ EgÀĪÀ §ºÀÄvÉÃPÀ ºÀ½îUÀ¼ÀÆ ¢ÃªÀgÀ ºÀ½îUÀ¼ÉÃ. £À£Àß ¸ÉßûvÀgÉ®è ¸ÁªÀPÁ±ÀªÁV §AUÁgÀ¥Àà£ÀªÀgÀ C©üªÀiÁ¤UÀ¼ÁV ¥ÀjªÀwðvÀgÁUÀÄwÛzÀÝgÀÄ. ºÁUÉ PÀȶ PÀÆ°PÁgÀgÁV §zÀÄPÀÄwÛzÀÝ ¢ÃªÀgÀ ªÀÄ£ÉUÀ¼À°è §AUÁgÀ¥Àà£ÀªÀgÀ ¥sÉÇÃmÉÆÃUÀ¼ÀÄ §AzÀÄ UÉÆÃqÉAiÀÄ£ÀÄß C®APÀj¸ÀvÉÆqÀVzÀݪÀÅ. gÁªÀÄPÀȵÀÚ ºÉUÀqÉ, «ÃgÉÃAzÀæ ¥Ánïï, ¤d°AUÀ¥Àà JAzÀÄ gÁdQÃAiÀÄ ¥ÀæeÁߪÀAvÀgÀÄ ªÀiÁvÀ£ÁqÀÄwÛgÀĪÁUÀ¯Éà »AzÀĽzÀ ¢ÃªÀgÀ PÉÃjUÀ¼À°è §AUÁgÀ¥Àà ¥ÀæwµÁ×¥À£ÉUÉÆArzÀÝgÀÄ. CªÀgÀÄ d£À£ÁAiÀÄPÀgÁV gÀÆ¥ÀUÉƼÀÄîwÛzÀÝgÀÄ. ¸ÀtÚ ¸ÀtÚ UÀÄr¸À®ÄUÀ¼À°è §AUÁgÀ¥Àà ¥ÀævÀåPÀëgÁUÀvÉÆqÀVzÀÝgÀÄ. ¢ÃªÀgÀÄ d£ÁAUÀzÀªÀgÀÄ vÀªÀÄä £ÁAiÀÄPÀ §AUÁgÀ¥Àà£ÀªÀgÀ §UÉÎ ºÉªÉÄä¬ÄAzÀ ªÀiÁvÀ£ÁqÀĪÀÅzÀÄ ¸ÁªÀiÁ£ÀåªÁVvÀÄÛ. DzÀgÉ PÁAUÉæ¸ï gÁdPÁgÀtªÀ£Éßà G¹gÁqÀÄwÛzÀÝ f¯ÉèAiÀÄ ªÀÄvÀÄÛ gÁdåzÀ £ÁAiÀÄPÀjUÉ F §zÀ¯ÁªÀuÉ UÀªÀÄ£ÀPÉÌ §gÀ¯Éà E®è.

§AUÁgÀ¥Àà JAzÀÆ C©üªÀÈ¢Þ ¥ÀgÀ gÁdPÁgÀt ªÀiÁrzÀªÀgÀ®è. ¸ÉÆgÀ§zÀ°è EwÛÃa£ÀªÀgÉUÀÆ MAzÀÄ §¸ï ¸ÁÖAqï EgÀ°®. gÀ¸ÉÛUÀ¼É®è, zÀÄgÀ¹ÛAiÀiÁUÀzÉà EzÀÝgÀÆ §AUÁgÀ¥Àà vÀ¯É PÉr¹PÉÆAqÀªÀgÀ®è. F §UÉÎ AiÀiÁgÁzÀgÀÆ PÉýzÀgÉ, M¼Éî mÁgï gÀ¸ÉÛ AiÀiÁjUÉ ¨ÉÃPÀÄ, PÁgÀÄ ElÄÖPÉÆAqÀ ²æêÀÄAvÀjUÉ vÁ£É. ¤£ÀUÉ JwÛ£À §ArAiÀÄ°è ºÉÆÃUÀĪÀªÀ¤UÉ gÀ¸ÉÛ ºÉÃVzÀÝgÉãÀÄ JAzÀÄ ¨Á¬Ä ªÀÄÄaѸÀÄwÛzÀÝgÀÄ. DzÀgÉ ªÉÊAiÀÄQÛPÀªÁV vÀªÀÄä §½ §AzÀªÀgÀ£ÀÄß ¦æÃw¬ÄAzÀ ªÀiÁvÀ£ÁqÀĸÀÄwÛzÀÝ CªÀgÀÄ ¸ÀºÁAiÀĪÀ£ÀÄß ªÀiÁqÀÄwÛzÀÝgÀÄ. ºÁUÉ vÀ£Àß PÉëÃvÀæ¢AzÀ §AzÀ ¤gÀÄzÉÆåÃVUÀ½UÉ MAzÀ®è MAzÀÄ PÉ®¸ÀPÉÆqÀĸÀÄwÛzÀݪÀgÀÄ §AUÁgÀ¥Àà. »ÃUÉ §AUÁgÀ¥Àà£ÀªÀjAzÀ ¸ÀºÁAiÀÄ ¥ÀqÉzÀªÀgÀÄ CªÀgÀ ZÀÄ£ÁªÀuÉAiÀÄ ¸ÀAzÀ¨sÀðzÀ°è ¸ÀéAvÀ ºÀt RZÀÄð ªÀiÁrPÉÆAqÀÄ ZÀÄ£ÁªÀt ¥ÀæZÁgÀzÀ°è vÉÆqÀVPÉƼÀÄîwÛzÀÝgÀÄ. ºÁUÉ CªÀgÀ eÁߥÀPÀ ±ÀQÛ. ¸ÉÆgÀ§ ¹zÁÝ¥ÀÅgÀ vÁ®ÆQ£À §ºÀÄvÉÃPÀ ºÀ½îUÀ¼ÀÄ CªÀjUÉ UÉÆwÛzÀÝAvÉ C°è£À d£ÀgÀ ºÉ¸ÀgÀÄUÀ¼ÀÄ UÉÆwÛzÀݪÀÅ. ºÁUÉ AiÀiÁªÀÅzÉà ºÀ½îUÉ ºÉÆÃUÀ° EzÀÝQÌzÀÝ ºÁUÉ MAzÀÄ UÀÄr¸À® §½UÉ ºÉÆÃV D ªÀÄ£ÉAiÀÄ AiÀÄdªÀiÁ£À£À£ÀÄß ºÉ¸ÀgÀÄ »rzÀÄ PÀgÉAiÀÄÄwÛzÀÝgÀÄ. PÀA§½ vÁgÁ JAzÀÄ DzÉñÀ ¤Ãr PÀA§½ vÀj¹ CzÀgÀ ªÉÄÃ¯É CªÀgÀÄ ¥ÀæwµÁ×£ÉUÉƼÀÄîwÛzÀÝgÀÄ. ºÁUÉ ZÁ LvÀ£Á JAzÀÄ ¥Àæ²ß¸ÀÄwÛzÀÝgÀÄ. ZÀºÁPÉÌ ºÁ°®è JAzÀÄ DvÀ ºÉýzÀgÉ ZÁ PÀuÉÚ vÁ JAzÀÄ ºÉý DzÀ£ÀÄß PÀÄrzÀÄ CªÀgÀ°è MAzÁUÀÄwÛzÀݪÀgÀÄ §AUÁgÀ¥Àà.

¸ÁªÀiÁ£Àå d£ÀgÀ eÉÆvÉUÉ £ÉÃgÀªÀV ¸ÀAªÀºÀ£À £ÀqɸÀĪÀ CzÀÄãvÀ ±ÀQÛ CªÀjVvÀÄÛ. §qÀªÀgÀÄ ªÀÄvÀÄÛ »AzÀĽzÀªÀ ªÀUÀðzÀªÀjUÉ EªÀgÀÄ ¨ÉÃgÉAiÀĪÀgÀÄ JAzÀÄ C¤ß¸ÀÄvÀÛ¯Éà EgÀ°®è. ºÁUÉ §AUÁgÀ¥Àà ¨ÉAUÀ¼ÀÆj£À°è EzÁÝgÉ JA§ÄzÉà »AzÀĽzÀ ªÀUÀðzÀªÀjUÉ DvÀä ¸ÉÜöÊAiÀÄðªÀ£ÀÄß, J®èªÀ£ÀÄß JzÀÄj¸ÀĪÀ ªÀiÁ£À¹PÀ ±ÀQÛAiÀÄ£ÀÄß ¤ÃqÀÄwÛvÀÄÛ. eÁw ªÀÄvÀÄÛ ªÀUÀð ¸ÀAWÀµÀðUÀ¼À°è ¸ÀàµÀÖªÁzÀ ¤®ÄªÉÄAiÀÄ£ÀÄß ºÉÆA¢zÀÝ §AUÁgÀ¥Àà ªÉÄîéUÀð , ªÀÄvÀÄÛ ªÉÄïÁÓfUÀ¼À C¸ÀºÀ£ÉUÀÆ M¼ÀUÁVzÀÝgÀÄ. DzÀgÉ ªÉÊAiÀÄQÛPÀªÁV J®ègÀ eÉÆvÉ ¦æÃwAiÀÄ ¸ÀA§AzsÀ CªÀgÀzÁVvÀÄÛ.

§AUÁgÀ¥Àà gÁdQÃAiÀÄzÀ°è ªÉÄîPÉÌ ºÉÆÃzÀAvÉ CªÀgÀ ¹lÄÖ ªÀÄvÀÄÛ bÀ® ºÉZÀÄÑvÀÛ¯Éà ºÉÆìÄvÀÄ. C¢üPÁgÀ gÁdPÁgÀtzÀ J®è ¥ÀlÄÖUÀ¼À£ÀÄß PÀ°AiÀÄvÉÆqÀVzÀÝ CªÀgÀÄ gÁdQÃAiÀÄ J£ÀÄߪÀÅzÀÄ DAiÀiÁ PÀëtzÀ ºÉÆAzÁtÂPÉ JA§ ¥ÀgÀªÀÄ ¸ÀvÀåªÀ£ÀÄß vÀ¥ÁàV CxÉÊð¹PÉÆArzÀÝgÀÄ.. J¥ÀàvÀÛgÀ zÀ±ÀPÀzÀ ¥ÁægÀA¨sÀzÀ°è, ¥ÀæeÁ ¸ÉƶAiÀÄ°±ïÖ ¥ÀPÀëzÀ ¥ÀæzsÁ£À PÁAiÀÄðzÀ²ð ºÀÄzÉÝUÁV dUÀ¼À ªÀiÁrPÉÆAqÀÄ ¥ÀPÀëªÀ£ÀÄß ©lÖ CªÀgÀÄ ªÀÄvÉÛ ±ÁAvÀªÉÃj UÉÆÃ¥Á® UËqÀgÀvÀÛ wgÀÄV £ÉÆÃqÀ°®è. PÁUÉÆÃqÀÄ wªÀÄä¥Àà CªÀgÀ eÉÆvÉV£À dUÀ¼À §UɺÀjAiÀÄ°®è. eÉ. JZï, ¥ÀmÉîgÀAvÀºÀªÀgÀ eÉÆvÉUÀÆ dUÀ¼À ªÀiÁrzÀªÀgÀÄ CªÀgÀÄ. vÀªÀÄä£ÀÄß CwAiÀiÁV £ÀA©zÀ zÉêÀgÁeï CgÀ¸ÀÄ eÉÆvÉUÀÆ CªÀgÀÄ PÀÆ£ÉAiÀĪÀgÉUÉ G½AiÀÄ°®è. EA¢gÁ UÁA¢ü, gÁfêÀ UÁA¢ü CªÀgÀ eÉÆvÉUÀÆ dUÀ¼ÀªÁrzÀgÀÄ, ªÀÄvÉÛ CªÀgÀ §½UÉ ºÉÆÃzÀgÀÄ. ªÀÄvÉÛ ©lÄÖ ºÉÆÃzÀgÀÄ. MAzÀÄ jÃwAiÀÄ°è §AUÁgÀ¥Àà gÁdQÃAiÀÄ gÀAUÀzÀ wgÀÄUÁlzÀªÀgÀÄ. CªÀgÀ §zÀÄPÉà wgÀÄUÁl. DzÀgÉ F wgÀÄUÁlPÉÌ CªÀgÀÄ dAUÀªÀÄvÀézÀ ªÉÄgÀUÀÄ ¤ÃqÀ®Ä AiÀÄvÀß £ÀqɹzÀgÀÄ. CzÀgÉ CªÀgÀ wgÀÄUÁl dAUÀªÀÄvÀé¢AzÀ ¥ÉæÃjvÀªÁUÀzÉÃ, ¸ÁܪÀgÀªÁUÀĪÀ UÀÄtzsÀªÀÄðªÀ£ÀÄß ºÉÆA¢zÀ «ûavÀæ wgÀÄUÁlªÁVvÀÄ.

80 gÀ zÀ±ÀPÀ¢AzÀ¯Éà F gÁdåzÀ ªÀÄÄRåªÀÄAwæAiÀiÁUÀ¯Éà ¨ÉÃPÀÄ JAzÀÄ PÀ£À¸ÀÄ ºÉÆvÀÛ gÁdPÁgÀt ªÀiÁqÀÄvÀÛ §AzÀgÀÄ. ªÀÄÄRåªÀÄAwæ ¸ÁÜ£À vÀ¦àzÁUÀ dUÀ¼ÀªÁrPÉÆAqÀÄ C°èAzÀ ºÉÆgÀ©zÀÝgÀÄ. 90 gÀ zÀ±ÀPÀzÀ°è CªÀgÀÄ ªÀÄÄRåªÀÄAwæAiÀiÁzÀgÀÆ CzÀÄ PÉêÀ® JgÀqÀÄ ªÀµÀð. D ¸ÀAzÀ¨sÀðzÀ°è CªÀgÀÄ gÀƦ¹zÀ, «±Àé, DgÁzsÀ£ÁzÀAvÀºÀ AiÉÆÃd£ÉUÀ¼ÀÄ d£ÀjUÉ vÀ®Ä¥ÀŪÀ°è «¥sÀ®ªÁzÀªÀÅ. DUÀ¯Éà gÁdvÀézÀ UÀÄtUÀ¼À£ÀÄß C¼ÀªÀr¹PÉÆArzÀÝ ¸ÀªÀiÁdªÁ¢ £ÁAiÀÄPÀ, UÀÄj¬Ä®èzÀ ¥ÀAiÀÄtzÀ°è vÀªÀÄä£ÀÄß vÁªÉà PÀ¼ÉzÀÄPÉÆArzÀÝgÀÄ. CªÀgÀÄ vÀªÀÄä°èzÀÝ ºÀÄA§vÀ£ÀªÀ£ÀÄß vÀªÀÄä DvÁä©üªÀiÁ£ÀzÀ ¸ÀAPÉÃvÀ JAzÀÄ £ÀA©PÉÆArzÀÝgÀÄ. DzÀgÀÆ CªÀgÀ M¼ÀVzÀÝ ¸ÀªÀiÁdªÁ¢ aAvÀ£É DUÁUÀ ¥ÀæRgÀªÁV ºÉÆgÀ §AzÀ GzÁºÀgÀuÉUÀ¼ÀÆ EªÉ. ¥ÉAqÁ®ÄUÀ¼À£ÀÄß ºÁPÀÄwÛzÀݪÀjUÀÆ gÁeÉÆåÃvÀìªÀ ¥Àæ±À¹Û ¤ÃrzÀªÀgÀÄ CªÀgÀÄ.

¸ÀtÚ ªÀAiÀĹì¤AzÀ¯Éà §AUÁgÀ¥Àà£ÀªÀgÀ£ÀÄß £ÉÆÃrPÉÆAqÀÄ §AzÀ ££ÀUÉ CªÀgÀÄ JAzÀÄ CxÀðªÁUÀzÀ zÉÆqÀÝ ¥Àæ±ÁßxÀðPÀ a£Éí. CªÀgÀ ªÀåQÛvÀéªÀ£ÀÄß CxÀð ªÀiÁrPÉƼÀî®Ä ¸ÀºÁAiÀÄ ªÀiÁqÀĪÀ JgÀqÀÄ WÀl£ÉUÀ¼À£ÀÄß £Á£ÀÄ E°è £É£À¥ÀÅ ªÀiÁrPÉƼÀÄîwÛzÉÝãÉ.

1983 gÀ°è ºÉUÀqÉ ªÀÄÄRåªÀÄAwæAiÀiÁV C¢üPÁgÀ ¹éÃPÀj¹zÀ PÉ®ªÉà wAUÀ¼ÀÄUÀ¼À°è §AUÁgÀ¥Àà, ºÉUÀqÉ CªÀgÀ ¸ÀºÉÆÃzÀgÀ UÀuÉÃ±ï ºÉUÀqÉ CªÀgÀ ªÉÄÃ¯É CQÌ PÀ¼Àî ¸ÁUÁtÂPÉAiÀÄ DgÉÆÃ¥À ªÀiÁrzÀgÀÄ. D ¥ÀwæPÁUÉÆöÖAiÀÄ°è £Á£ÀÄ EzÉÝ. F DgÉÆÃ¥ÀªÀ£ÀÄß §AUÁgÀ¥Àà ªÀiÁrzÁUÀ ¥ÀwæPÁUÉÆöÖAiÀÄ°èzÀÝ ¸ÀºÉÆÃzÉÆåÃVAiÉƧâgÀÄ, ¸Ágï CªÀgÀ Hj£ÀªÀgÀÄ E¯Éèà EzÁÝgÉ JAzÀÄ MAzÀÄ £À£ÀߣÀÄß vÉÆÃj¸ÀÄvÀÛ ZÀmÁQ ºÁj¹zÀgÀÄ. ºËzÀÄ UÉÆvÀÄÛ EªÀgÉ®è MAzÉà JAzÀÄ ©lÖgÀÄ §AUÁgÀ¥Àà. £À£ÀUÉ DUÀ vÀqÉAiÀįÁUÀzÀµÀÄÖ PÉÆÃ¥À §AvÀÄ. EªÀgɯÉè MAzÉà JAzÀgÉ K£ÀÄ ºÉýà JAzÀÄ ¥ÀlÄÖ »rzÉ. £Á£ÀÄ ªÀÄvÀÄÛ gÁªÀÄPÀȵÀÚ ºÉUÀqÉ MAzÉà eÁwAiÀĪÀgÀÄ JAzÀÄ F ªÀiÁvÀÄ ºÉüÀÄwÛ¢ÝÃgÁ JAzÀÄ PÉÆÃ¥À¢AzÀ ¥Àæ²ß¹zÉ. CªÀjUÉ vÀªÀÄä vÀ¦à£À CjªÁVvÀÄÛ. E£ÀÆß aPÀÌ ºÀÄqÀÄUÀ£ÁVzÀÝ £À£Àß §½ §AzÀÄ ¸Áj JAzÀgÀÄ ¸ÁgÉÃPÉÆ¥Àà §AUÁgÀ¥Àà.

§AUÁgÀ¥Àà ªÀÄÄRåªÀÄAwæ ¸ÁÜ£ÀPÉÌ gÁfãÁªÉÄ ¤ÃrzÀ ¢£À £ÁªÉ®è gÁd¨sÀªÀ£ÀzÀ°è EzÉݪÀÅ. gÁdå¥Á®jUÉ gÁfãÁªÉÄ ¸À°è¹ ºÉÆgÀPÉÌ §AzÀ CªÀgÀ PÀtÄÚUÀ¼ÀÄ vÀÄA©zÀݪÀÅ. £ÉÃgÀªÁV £À£Àß §½ §AzÀ CªÀgÀÄ £À£ÀUÉ ¤ÃrzÀ ¸ÀºÀPÁgÀPÉÌ PÀÈvÀdßvÉ JAzÀgÀÄ. DzÀgÉ DUÀ £Á£ÀÄ PÉ®¸À ªÀiÁqÀÄwÛzÀÝ ¥ÀwæPÉ §AUÁgÀ¥Àà£ÀªÀgÀ£ÀÄß CªÀPÁ±À ¹PÁÌUÀ¯É®è gÀhiÁr¹ G¦à£ÀPÁ¬Ä ºÁPÀÄwÛvÀÄÛ. ¸ÀA¥sÀÇtðªÁV ºÉUÀqÉ ¥ÀgÀªÁzÀ ¤®ÄªÉÄAiÀÄ£ÀÄß ºÉÆA¢zÀ ¥ÀwæPÉ CzÀÄ. DzÀgÉ §AUÁgÀ¥Àà J®èªÀ£ÀÆß ªÀÄgÉvÀÄ PÀtÄÚ vÀÄA©PÉÆAqÀÄ PÀÈvÀdßvÉ ¸À°è¹zÀÝgÀÄ.

§AUÁgÀ¥Àà J¯ÁèzÀgÀÆ ¸ÀAVÃvÀzÀ zsÀé¤ PÉýzÀgÉ C¯Éèà vÁ¼À ºÁPÀÄwÛzÀÝgÀÄ. qÉƼÀÄî PÀÄtÂvÀ PÀAqÀgÉ PÀÄtÂAiÀÄ®Ä gÉr DUÀÄwÛzÀgÀÄ. £ÁlPÀ ¹£ÉªÀiÁ JAzÀgÉ CªÀjUÉ «¥ÀjÃvÀ ºÀÄZÀÄÑ. CªÀjUÉ vÁªÀÅ avÀæ £ÀlgÁUÀ¨ÉÃPÀÄ JA§ D¸É EvÀÛAvÉ. DzÀgÉ CªÀgÀ D C¸É PÉÊUÀÆqÀ°®è.

§AUÁgÀ¥Àà E£ÀÆß JvÀÛgÀPÉÌ KgÀĪÀ ±ÀQÛ G¼ÀîªÀgÁVzÀÝgÀÄ. »AzÀĽzÀ ªÀUÀðzÀªÀgÀ ¥ÀgÀªÁV PÉ®¸À ªÀiÁrzÀ, zÉêÀgÁeï CgÀ¸ÀÄ, J¯ï. f. ºÁªÀ£ÀÆgÀÄ CªÀgÀAvÀªÀgÀ ¸Á°£À¯Éèà JvÀÛgÀPÉÌ ¤®è§®è ±ÀQÛAiÀÄÆ CªÀjVvÀÄÛ. DzÀgÉ CzÁUÀ¯Éà E®è. C¢üPÁgÀ gÁdPÁgÀtzÀ°è PÀ¼ÉzÀĺÉÆÃzÀ §AUÁgÀ¥Àà, vÀªÀÄä ºÉeÉÓAiÀÄ UÀÄgÀÄvÀÄUÀ¼À£ÀÄß ªÀÄgÉvÀÄ ©nÖzÀÝgÀÄ. eÉÆvÉUÉ CªÀgÀ gÁdQÃAiÀÄ ºÉÆÃgÁl C¢üPÁgÀ PÉÃA¢æÃPÀÈvÀ ºÉÆÃgÁlªÁV §zÀ¯ÁUÀÄwÛzÀÄzÀ£ÀÄß CªÀgÀÄ UÀªÀĤ¸À¯Éà E®è. vÁwéPÀvÉ, £ÉÊwPÀ §® E®èzÀ J®è ºÉÆÃgÁlUÀ¼ÀÆ £Á±ÀªÁUÀÄvÀÛªÉ JA§ÄzÀ£ÀÄß CxÀð ªÀiÁrPÉƼÀÄîªÀÅzÀPÀÆÌ CªÀjUÉ ¸ÁzsÀåªÁUÀ°®è. PÉ®ªÉà PÉ®ªÀÅ fà ºÀÄgÀhÄÆgï UÀ¼À eÉÆvÉ EgÀ®Ä EµÀÖ¥ÀqÀÄwÛzÀÝ CªÀgÀÄ ©ü£Àß zsÀé¤AiÀÄ£ÀÄß ºÀwÛPÀÌ®Ä vÀÄ¢UÁ® ªÉÄÃ¯É ¤®ÄèwÛzÀÝgÀÄ. ¨sÀlÖAVUÀ¼À £ÀqÀÄªÉ PÀ¼ÉzÀĺÉÆÃUÀÄwÛgÀĪÀÅzÀÄ CªÀjUÉ CxÀðªÁUÀ¯Éà E®è. ¸ÀéAiÀÄA PÉÃA¢æÃPÀÈvÀ gÁdPÁgÀtªÀ£Éßà ¸ÉÊzÁÞAwPÀ gÁdPÁgÀt JA§ ¨sÀæªÉÄUÀÆ CªÀgÀÄ M¼ÀUÁVzÀÝgÀÄ.

DzÀgÉ §AUÁgÀ¥Àà£ÀªÀgÀ£ÀÄß EwºÁ¸À £É£À¥ÀÅ ªÀiÁrPÉƼÀÄîªÀÅzÀPÉÌ ºÀ®ªÀÅ PÁgÀtUÀ½ªÉ. 70 gÀ zÀ±ÀPÀzÀªÀgÉUÉ PÉêÀ® ªÉÄîéUÀðzÀ d£À ¸ÀªÀÄÄzÁAiÀÄUÀ¼À ¥Áæw¤¢üPÀ ¸ÀA¸ÉÜAiÀÄAvÉ EzÀÝ PÁAUÉæ¸ï ¥ÀPÀëPÉÌ ¸ÀªÀiÁdªÁ¢ aAvÀ£ÉAiÀÄ ªÉÄgÀUÀÄ ¤ÃrzÀ £ÁAiÀÄPÀgÀ ¸Á°UÉ §AUÁgÀ¥Àà ¸ÉÃgÀÄvÁÛgÉ. EA¢gÁ UÁA¢ü ªÀÄvÀÄÛ zÉêÀgÁd CgÀ¸ÀÄ ¥ÁægÀA©ü¹zÀ ¸ÁªÀiÁfPÀ £ÁåAiÀÄzÀ «±Á®ªÁzÀ PÁå£ÀªÁ¹UÉ §tÚ vÀÄA©zÀ £ÁAiÀÄPÀgÀ°è §AUÁgÀ¥Àà PÀÆqÀ ¸ÉÃgÀÄvÁÛgÉ. eÉÆvÉUÉ »AzÀĽzÀ ¢ÃªÀjUÉ DvÀä ¥ÀæeÉßAiÀÄ£ÀÄß vÀ¯É JwÛ £ÀqÉAiÀÄĪÀ ±ÀQÛAiÀÄ£ÀÄß vÀÄA©zÀªÀgÀÄ §AUÁgÀ¥Àà. EAzÀÄ ºÀ®ªÁgÀÄ ¥ÀPÀëUÀ¼À°è ºÀjzÀÄ ºÀAaºÉÆÃzÀ F ¸ÀªÀÄÄzÁAiÀÄzÀ ¥Àæ±ÁßwÃvÀ £ÁAiÀÄPÀgÀÄ §AUÁgÀ¥Àà.

ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಇಂದು ಪ್ರಕಟವಾದ ಲೇಖನ

Saturday, December 17, 2011

ಸಾಹಿತಿಗಳು ಭಟ್ಟಂಗಿ ಗಳಲ್ಲ.........



ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ್, ಸಾಹಿತಿಗಳಿಂದ ಬೈಸಿಕೊಳ್ಳುವುದಕ್ಕಾಗಿ ನಾವು ಅವರಿಗೆ ಹಣ ನೀಡಬೇಕೆ ಎಂಬ ಪ್ರಶ್ನೆಯನ್ನು ನಾಡಿನ ಜನರ ಮುಂದೆ ಇಟ್ಟಿದ್ದಾರೆ. ಈ ಪ್ರಶ್ನೆಗೆ ಹಲವರು ದಿನಪತ್ರಿಕೆಗಳ ವಾಚಕರ ವಾಣಿಯಲ್ಲಿ ಉತ್ತರವನ್ನು ಕೊಟ್ಟಿದ್ದಾರೆ. ಆದರೆ ಮಾಧ್ಯಮದಲ್ಲಿ ಈ ಬಗ್ಗೆ ಯಾವ ಪ್ರಮಾಣದಲ್ಲಿ ಚರ್ಚೆ ಆಗಬೇಕಿತ್ತೋ ಆ ಪ್ರಮಾಣದಲ್ಲಿ ಆಗಿಲ್ಲ. ಇದಕ್ಕೆ ಸಚಿವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂಬುದು ಕಾರಣವಿರಬಹುದು ಅಥವಾ ಎಲ್ಲವನ್ನು ಮೌನವಾಗಿ ಸ್ವೀಕರಿಸುವ ನಮ್ಮ ಮನಸ್ಥಿತಿಯೂ ಕಾರಣವಿರಬಹುದು. ಈ ಕಾರಣಗಳೇನೇ ಇರಲಿ, ಸಚಿವರ ಈ ಹೇಳಿಕೆಯನ್ನು ನಾವೆಲ್ಲ ಗಂಭೀರವಗಿ ತೆಗೆದುಕೊಳ್ಳಬೇಕಾಗಿದೆ.
ಈ ವಿಚಾರವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಕ್ಕೆ ಕಾರಣಗಳು ಹಲವು. ಮೊದಲನೇಯದಾಗಿ ಗೋವಿಂದ ಕಾರಜೋಳ್ ಅವರು ವ್ಯಯಕ್ತಿಕವಾಗಿ ಈ ಹೇಳಿಕೆ ನೀಡಿಲ್ಲ. ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಈ ಮಾತು ಹೇಳಿದ್ದಾರೆ. ಹೀಗಾಗಿ ಇದನ್ನು ಸಚಿವರ ಆಲೋಚನೆ ಎಂದು ತೆಗೆದುಕೊಳ್ಳದೇ ಈ ಸರ್ಕಾರದ ಆಲೋಚನೆ ಎಂದು ಸ್ವೀಕರಿಸಿ ಪ್ರತಿಕ್ರಿಯೆ ನೀಡಬೇಕಾಗಿದೆ. ಇನ್ನು ಸಚಿವರ ಮನಸ್ಥಿತಿ. ಅವರು ಸರ್ಕಾರದ ಹಣ ತಮ್ಮ ಹಣ ಎಂದುಕೊಂಡಿರುವಂತಿದೆ. ಇದಕ್ಕಿಂತ ಮುಖ್ಯವಾಗಿ ಅವರ ಮಾತಿನಲ್ಲಿ ಅಧಿಕಾರದ ಅಹಂಕಾರ ಕಣ್ನಿಗೆ ರಾಚುವಂತಿದೆ. ಜೊತೆಗೆ ಸಚಿವರಿಗೆ ಸಾಹಿತ್ಯ ಮತ್ತು ಸಂಸ್ಕೃತಿ ಎಂದರೇನು ಎಂಬ ಪ್ರಾಥಮಿಕ ಜ್ನಾನ ಕೂಡ ಇದ್ದಂತಿಲ್ಲ. ಹಾಗೆ ಸಾಹಿತ್ಯ ಸಮ್ಮೇಳನಕ್ಕೆ ಹಣ ಖರ್ಚು ಮಾಡುವುದರ ಮೂಲಕ ಸಾಹಿತಿಗಳಿಗೆ ಸರ್ಕಾರ ಸಹಾಯ ಮಾಡುತ್ತಿದೆ, ಹೀಗಾಗಿ ಸಾಹಿತ್ಯ ವಲಯ ಸರ್ಕಾರದ ಭಟ್ಟಂಗಿಯಂತೆ ಕೆಲಸ ಮಾಡಬೇಕು ಎಂಬ ತಮ್ಮ ಇರಾದೆಯನ್ನು ಅವರು ಈ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ. ಇದೊಂದು ಜನತಂತ್ರ ವಿರೋಧಿ ಮನಸ್ಥಿತಿಯಾದ್ದರಿಂದ ಈ ಬಗ್ಗೆ ಚರ್ಚೆ ಮಾಡಬೇಕಾದ್ದು ಅತ್ಯಗತ್ಯ.
ಜನತಂತ್ರ ವ್ಯವಸ್ಥೆಯಲ್ಲಿ ಯಾವುದೇ ಒಬ್ಬ ಸಚಿವರು ಆಡುವ ಮಾತು ಸರ್ಕಾರದ ಮಾತೇ ಆಗಿರುವುದರಿಂದ, ಮುಖ್ಯಮಂತ್ರಿ ಸದಾನಂದಗೌಡರಾಗಲೀ ಅಥವಾ ಸರ್ಕಾರದ ಪರವಾಗಿ ಯಾರೇ ಆಗಲೀ ಕೆಲವೊಂದು ಸ್ಪಷ್ಟೀಕರಣವನ್ನು ನೀಡಬೇಕು. ಸರ್ಕಾರದಿಂದ ಬೇಕಾಗಿರುವ ವಿವರಣೆಯ ಪಟ್ಟಿಯನ್ನು ನಾನು ಹೀಗೆ ಮಾಡುತ್ತೇನೆ.
೧. ಗೋವಿಂದ ಕಾರಜೋಳ್ ಅವರ ಹೇಳಿಕೆಯಂತೆ, ಸಾಹಿತ್ಯ ಸಮ್ನೇಳನಗಳಿಗೆ ಹಣ ವೆಚ್ಚ ಮಾಡುವುದು ವ್ಯರ್ಥ ಎಂಬುದು ಸರ್ಕಾರದ ಅಭಿಪ್ರಾಯವೆ ? ಅಥವಾ ಅದು ಸಚಿವರ ವೈಯಕ್ತಿಕ ಅಭಿಪ್ರಾಯವೆ ?
೨. ಸಾಹಿತ್ಯ ಸಮ್ಮೇಳನಳಗಳಲ್ಲಿ ಪಾಲ್ಗೊಳ್ಳುವ ಎಲ್ಲರೂ ಸರ್ಕಾರದ ಭಟ್ಟಂಗಿಗಳಾಗಿ ವಾಲಗ ಊದಬೇಕು ಎಂದು ಈ ಸರ್ಕಾರ ಬಯಸುತ್ತಿದೆಯೆ ?
೩.ಸಾಹಿತಿಗಳು ಸಾಹಿತ್ಯ ಸಮ್ಮೇಳನಗಳಲ್ಲಿ ಹೀಗೆ ಮಾತನಾಡಬೇಕು ಎಂದು ಫರ್ಮಾನು ಹೊರಡಿಸುವ ಇರಾದೆ ಈ ಸರ್ಕಾರಕ್ಕೆ ಇದೆಯೆ ?
೪. ಈ ಮಾತಿನ ಹಿನ್ನೆಲೆಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನದ ಬಗ್ಗೆ ಈ ಸರ್ಕಾರದ ನಿಲುಮೆ ಏನು ?
೫.ಎಲ್ಲ ಸರ್ಕಾರಗಳಿಗೂ ಸಾಂಸ್ಕೃತಿಕ ನೀತಿ ಎನ್ನುವುದು ಇರಬೇಕು. ಈ ಸರ್ಕಾರಕ್ಕೆ ಇಂಥಹ ನೀತಿ ಇದೆಯೆ ? ಒಂದೊಮ್ಮೆ ಇದ್ದರೆ ಆ ನೀತಿಯಲ್ಲಿ ಈ ವಿಚಾರವೂ ಪ್ರಸ್ತಾಪವಾಗಿದೆಯೆ ?
೬. ಸಚಿವರಿಗೆ ಇಂತಹ ಆಲೋಚನೆ ಬರುವುದಕ್ಕೆ ಕಾರಣಗಳೇನು ? ಗಂಗಾವತಿ ಸಮ್ಮೇಳದ ಬೇಸರ ಅವರಿಗಿದೆಯೆ ?
ಸಚಿವ ಕಾರಜೋಳರ ಹೇಳಿಕೆಯಿಂದ ನನ್ನ ಮನ್ನಸ್ಸಿನಲ್ಲಿ ಮೂಡಿದ ಪ್ರಶ್ನೆಗಳು ಇವು. ಯಾಕೆಂದರೆ ಗೋವಿಂದ ಕಾರಜೋಳರು ಹಿರಿಯ ರಾಜಕಾರಣಿ. ಯಾರೋ ಅನುಭವ ಇಲ್ಲದ ಸಚಿವರು ಇಂತಹ ಮಾತುಗಳನ್ನು ಆಡಿದ್ದರೆ, ಏನೂ ಗೊತ್ತಿಲ್ಲದೇ ಮಾತು ಬಾಯಿಯಿಂದ ಹೊರಕ್ಕೆ ಬಂದಿದೆ ಎಂದು ಸುಮ್ಮನಾಗಬಹುದಿತ್ತು. ಆದರ ಬಾಯಿ ಬಡುಕರಲ್ಲದ ಕಾರಜೋಳರು ತುಂಬಾ ಗಂಭೀರವಾಗಿಯೇ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ನಾವು ನಂಬಬೇಕಾಗಿದೆ. ಹಾಗೆ ಅವರ ಮಾತಿನಲ್ಲಿ ಒಟ್ಟಾರೆಯಾಗಿ ಸಾಹಿತ್ಯ ಲೋಕದ ಬಗ್ಗೆ ಒಂದು ರೀತಿಯ ಅಸಹನೆ ಇದ್ದಂತೆ ಕಾಣುತ್ತದೆ. ಈ ಅಸಹನೆಗೆ ಬಹು ಮುಖ್ಯವಾದ ಕಾರಣ ಅವರ ರಾಜಕೀಯ ಮನಸ್ಥಿತಿ. ಅವರಿಗೆ ಒಬ್ಬ ಪಕ್ಷದ ಕಾರ್ಯಕರ್ತನಿಗೂ ಒಬ್ಬ ಸಾಹಿತಿಗೂ ಇರುವ ವ್ಯತ್ಯಾಸ ತಿಳಿದಂತಿಲ್ಲ. ಒಬ್ಬ ಗುತ್ತಿಗೆದಾರನಿಗೂ ಸಾಹತ್ಯ ಲೋಕದ ಕ್ರಿಯಾಶೀಲ ವ್ಯಕ್ತಿಗೂ ಇರುವ ಅಂತರ ಅರಿವಿಗೆ ಬಂದಂತಿಲ್ಲ. ಸರ್ಕಾರದ ಎಲ್ಲ ಕೆಲಸಗಳಲ್ಲೂ ಕಮೀಶನ್ ವ್ಯವಹಾರ ಇರುವಂತೆ ಸಾಹಿತ್ರ್ಯ ಲೋಕದ ಜೊತೆಗೆ ರಾಜಕೀಯ ವ್ಯವಹಾರವನ್ನು ಅವರು ನಿರೀಕ್ಷಿಸಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಹಣ ನೀಡುವುದರಿಂದ, ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳನ್ನು ಟೀಕಿಸಬಾರದು ಎಂಬುದು ಅವರ ಇರಾದೆ.
ಇದನ್ನೇ ಅಪಾಯಕಾರಿ ಮನಸ್ಥಿತಿ ಎಂದು ಕರೆಯುತ್ತಿರುವುದು. ಸರ್ಕಾರಕ್ಕೆ ಸಾಂಸ್ಕೃತಿಕ ಅಯಾಮ ಇಲ್ಲದಿದ್ದರೆ, ಸಾಹಿತ್ಯ ಸಂಸ್ಕೃತಿ ಗೊತ್ತಿಲ್ಲದಿದ್ದರೆ ಇಂತಹ ಅಪಾಯಗಳನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಎದುರಿಸಬೇಕಾಗುತ್ತದೆ. ಈ ಅರಿವು ರಾಜಕಾರಣಿಗಳಿಗೂ ಇರಬೇಕು, ಸಾಹಿತ್ಯ ಲೋಕಕ್ಕೂ ಇರಬೇಕು. ಆದರೆ ಇವತ್ತಿನ ರಾಜಕಾರಣಕ್ಕೆ ಸಾಂಸ್ಕೃತಿಕ ಮುಖ ಇಲ್ಲ. ಹಾಗೆ ಸಾಹಿತ್ಯ ಲೋಕ ರಾಜಕಾರಣವನ್ನು ಎಲ್ಲಿಯವರೆಗೆ ಬಿಟ್ಟುಕೊಳ್ಳಬೇಕು ಎಂಬುದು ಮುಖ್ಯ. ಸಾಹಿತ್ಯ ಲೋಕದ ಬೆಡ್ ರೂಮ್ ವರೆಗೆ ರಾಜಕಾರಣಿಗಳು ಬರುವಂತಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಈಗ ರಾಜಕಾರಣಿಗಳು ಸಾಹಿತ್ಯ ಲೋಕದ ಮಲಗುವ ಕೊಠಡಿಯನ್ನು ಪ್ರವೇಶಿಸಿ ಆಗಿದೆ. ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡುವ ನೆಪದಲ್ಲಿ, ಸರ್ಕಾರ ಹಣ ಕೊಡುವ ನೆಪದಲ್ಲಿ ಸಾಹಿತ್ಯ ಲೋಕದ ಮಲಗುವ ಕೊಠಡಿಯಲ್ಲಿ ಕಾರಜೋಳ್ ಅವರಂತಹ ರಾಜಕಾರಣಿಗಳ ಕಿತಾಪತಿ ಪ್ರಾರಂಭವಾಗಿದೆ. ಇದೆಲ್ಲ ರಾಜಸತ್ತೆಯ ಮೂಲಭೂತ ಗುಣಧರ್ಮ ಎಂಬುದನ್ನು ನಾವು ಅರಿಯಬೇಕು. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ರಾಜಾಶ್ರಯ ಪಡೆದ ತಕ್ಷಣ ಅವರ ಸ್ವಾತಂತ್ರ್ಯ ಹರಣವಾಗುತ್ತದೆ. ಇದಾದ ನಂತರ ಬರುವುದೇ ಭಟ್ಟಂಗಿ ಸಾಹಿತ್ಯ.
ಎಲ್ಲ ಕಾಲಘಟ್ತಗಳಲ್ಲೂ ಇಂತಹ ಭಟ್ಟಂಗಿ ಸಾಹಿತಿಗಳಿದ್ದಾರೆ. ಭಟ್ಟಂಗಿ ಸಾಹಿತ್ಯವೂ ಬಂದಿದೆ. ಆದರೆ ಇಡೀ ಕನ್ನಡ ಸಾರಸ್ವತ ಲೋಕವನ್ನು ಪ್ರತಿನಿಧಿಸುವ ಸಾಹಿತ್ಯ ಪರಿಷತ್ತು ತನ್ನ ಅಂಗಳದಲ್ಲಿ ರಾಜಕಾರಣಿಗಳನ್ನು ಬಿಟ್ಟುಕೊಂಡು ಅವರ ಭಟ್ಟಂಗಿಯಾಗುತ್ತಿರುವುದು ಮಾತ್ರ ಇತ್ತೀಚಿನ ವರ್ಷಗಳಲ್ಲಿ.
ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದ ಹಣ ಪಡೆಯುವ ಕಾರಣದಿಂದ ಎಲ್ಲ ಸಾಹಿತ್ಯ ಸಮ್ಮೇಳನಗಳ ಸ್ವಾಗತ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ಶಾಸಕರಿಗೆ ನೀಡುವುದರೊಂದಿಗೆ, ಸಾಹಿತ್ಯ ಮತ್ತು ರಾಜಕಾರಣದ ಅಪವಿತ್ರ ಮೈತ್ರಿ ಪ್ರಾರಂಭವಾಗುತ್ತದೆ.ನಂತರ ಎಲ್ಲ ವಿಚಾರಗಳನ್ನು ಮೂಗು ತೂರಿಸುವ ರಾಜಕಾರಣಿಗಳು ಸಾಹಿತ್ಯ ಸಮ್ಮೇಳನಗಳನ್ನು ರಾಜಕೀಯ ಜಾತ್ರೆಯನ್ನಾಗಿ ಮಾರ್ಪಡಿಸಿಬಿಡುತ್ತಾರೆ. ಕೊನೆಗೆ ಸಮ್ಮೇಳನದಲ್ಲಿ ಯಾರದರೂ ವಿಭಿನ್ನ ಧ್ವನಿಯನ್ನು ಹೊರಡಿಸಿದರೆ ನಾವು ನಿಮಗೆ ಹಣ ಕೊಟ್ಟಿದ್ದೀವಿ, ಮುಚ್ಚಕಂಡು ಕುಳಿತುಕೊಳ್ಳಿ ಎಂದು ಹೇಳುವವರೆಗೂ ಇದು ತಲುಪಿಬಿಡುತ್ತದೆ. ಇಂತಹ ಸಂಬರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೆಲವೊಂದು ನಿಷ್ಠುರವಾದ ಹೆಜ್ಜೆಗಳನ್ನು ಇಡಲೇಬೇಕು. ಮೊದಲನೆಯದಾಗಿ ಸಾಹಿತ್ಯ ಸಮ್ಮೇಳನಗಳಿಗೆ ಹಣ ನೀಡುವುದು ಸರ್ಕಾರದ ಕರ್ತವ್ಯ ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಹೇಳಬೇಕು. ನೀವು ಹಣ ನೀಡಿದ ಕಾರಣಕ್ಕೆ ಸಾಹಿತ್ಯ ಪರಿಷತ್ತು ನಿಮ್ಮ ಅಡಿಯಾಳು ಅಗುವುದಿಲ್ಲ, ಅದು ಕನ್ನಡ ನಾಡಿನ ಆರು ಕೋಟಿ ಜನರನ್ನು ಪ್ರತಿನಿಧಿಸುವ ಸಂಸ್ಥೆ ಎಂಬುದನ್ನು ಸರ್ಕಾರಕ್ಕೆ ತಿಳಿಸಬೇಕು. ನೀವು ನೀಡುವ ಹಣ ಈ ನಾಡಿನ ಜನರ ಹಣ. ಅದು ನಿಮ್ಮ ಜೇಬಿನಿಂದ ಕೊಡುತ್ತಿರುವ ಹಣವಲ್ಲ ಎಂಬುದನ್ನು ತಿಳಿಸಿಕೊಡಬೇಕು.
ಹಾಗೆ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳನ್ನು, ಮಠಾಧಿಪತಿಗಳನ್ನು ವೇದಿಕೆಗೆ ಕರೆದು ಮೆರೆಸುವುದನ್ನು ನಿಲ್ಲಿಸಬೇಕು. ರಾಜಕಾರಣಿಗಳು ಮತ್ತು ಮಠಾಧಿಪತಿಗಳಿಗೆ ಸಾಹಿತ್ಯಾಸಕ್ತಿ ಇದ್ದರೆ ಅವರು ವೇದಿಕೆಯ ಕೆಳಭಾಗದಲ್ಲಿ ಅಹ್ವಾನಿತರ ಜೊತೆಗೆ ಕುಳಿತುಕೊಳ್ಳಲಿ, ವೇದಿಕೆಯ ಮೇಲೆ ಅಲ್ಲ.
ಇಂತಹ ಮಹತ್ತದ ತೀರ್ಮಾನಗಳನ್ನು ಕೈಗೊಳ್ಳುವ ಶಕ್ತಿ ಸಾಹಿತ್ಯ ಪರಿಷತ್ತಿಗೆ ಇದೇ ಎಂಬ ನಂಬಿಕೆ ನನಗಿಲ್ಲ. ಯಾಕೆಂದರೆ ಇವತ್ತಿನ್ನ ಬಹುತೇಕ ಸಾಹಿತಿಗಳೂ ರಾಜಾಶ್ರಯ ಬೇಡುವವರೇ. ಭಟ್ಟಂಗಿತನದ ಖುಷಿಯನ್ನು ಅನುಭವಿಸಿದವರೇ. ಇಂತವರಿಂದ ಬಹುದೊಡ್ದ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಕಷ್ಟ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ರಾಜಕಾರಣಿಗಳು ಬುದ್ದಿವಾದ ಹೇಳುವುದು ನಿಲ್ಲಬೇಕು. ಇಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವ ಜವಾದ್ಬಾರಿ ಸಾಹಿತಿಗಳ ಮೇಲೂ ಇದೆ.

Friday, December 9, 2011

ಮುಖ್ಯಮಂತ್ರಿಗಳಿಗೊಂದು ಪತ್ರ: ನೀವು ನೀವೇ ಆಗಿ ಡಿವಿ.


ಯಾರ ನೆರಳು ಯಾರು ? ಯಾರು ಹಿಂದೆ, ಯಾರು ಮುಂದೆ ?

ಈಗ ಕರ್ನಾಟಕದ ರಾಜಕೀಯದಲ್ಲಿ ನೆರಳು ಮತ್ತು ಬೆಳಕಿನಾಟವೊಂದು ನಡೆಯುತ್ತಿದೆ. ಇದರಲ್ಲಿ ನೆರಳಾಗಿರುವವರು ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ. ಈ ಆಟದಲ್ಲಿ ಅವರಿಗೆ ಸೋಲೇ ಅಥವಾ ಗೆಲುವೇ ಎಂಬುದು ಭವಿಷ್ಯಕ್ಕೆ ಬಿಟ್ಟ ವಿಚಾರ. ಆದರೆ ನೆರಳಿಗೆ ಎಂದಿದ್ದರೂ ಸ್ವಂತ ಅಸ್ಥಿತ್ವವಿಲ್ಲ. ಅದು ಎಷ್ಟಿದ್ದರೂ ಬೇರೆಯವರ ನೆರಳು. ಮೂಲ ವಸ್ತು ಇದ್ದರೆ ಮಾತ್ರ ನೆರಳಿಗೆ ಅಸ್ಥಿತ್ವ. ಇದು ನೆರಳಾಗಿರುವವರು ಅರ್ಥ ಮಾಡಿಕೊಳ್ಳಬೇಕಾದ ಸತ್ಯ.
ಸದಾನಂದ ಗೌಡ ಅವರನ್ನು ನಾನು ನೋಡಿದ್ದು ಸುಮಾರು ೨೫ ವರ್ಷಗಳ ಹಿಂದೆ. ಆಗ ಅವರು ರಾಜ್ಯ ವಿಧಾನಸಭೆಯಲ್ಲಿ ಪುತ್ತೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಸದನದಲ್ಲಿ ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಯಾವ ವಿಚಾರವೇ ಆಗಲಿ ಅವರು ಚರ್ಚೆಯಲ್ಲಿ ಪಾಲ್ಗೂಳ್ಳುತ್ತಿದ್ದರು. ಸದಾ ನಗುನಗುತ್ತಲೇ ಇರುತ್ತಿದ್ದ ರಾಜಕಾರಣಿ. ನಗುವ ಗಂಡಸನ್ನು ನಂಬಬಾರದು ಎಂಬ ನಾಣ್ನುಡಿ ಅವರಿಗೆ ಅನ್ವಯವಾಗುವಂತಿರಲಿಲ್ಲ.
ವಿಧಾನಸಭೆಯ ಮೊಗಸಾಲೆಯಲ್ಲಿ ಸಿಕ್ಕಾಗಲೆಲ್ಲ ಅವರು ನಗು ನಗುತ್ತಲೇ ಮಾತನಾಡುತ್ತಿದ್ದರು. ನಾನು ದಕ್ಷಿಣ ಕನ್ನಡದ ಅಳಿಯನಾಗಿದ್ದರಿಂದ ಮತ್ತು ಅವರು ಒಂದು ರೀತಿಯಲ್ಲಿ ದೂರದ ಸಂಬಂಧಿಯೂ ಆಗಿದ್ದರಿಂದ ನನ್ನನ್ನು ಅವರು ಭಾವ ಎಂದು ಸಂಭೋಧಿಸುತ್ತಿದ್ದರು. ಇದಾದ ಮೇಲೆ ಕೆಲವು ಸಂದರ್ಭದಲ್ಲಿ ಅವರು ಜೊತೆ ಮಾತನಾಡಿದ್ದು ಉಂಟು. ಈ ಸಲುಗೆಯ ಮೇಲೆ ನಾನು ಅವರಿಗೆ ಭಹಿರಂಗ ಪತ್ರವೊಂದನ್ನು ಬರೆಯುತ್ತಿದ್ದೇನೆ.

ಮಾನ್ಯ ಸದಾನಂದಗೌಡರೆ,

ನಿಮ್ಮನ್ನು ಟೀಕಿಸಲು ನನ್ನ ಬಳಿ ಯಾವ ಕಾರಣವೂ ಇಲ್ಲ. ಆದರೆ ನಿಮ್ಮನ್ನ ನೋಡಿದಾಗ ನನಗೆ ಕೆಲವೊಮ್ಮೆ ಆಯ್ಯೋ ಪಾಪ ಎಂದು ಅನ್ನಿಸುವುದುಂಟು. ಜೊತೆಗೆ ಇವತ್ತಿನ ನಿಮ್ಮ ಸ್ಠಿತಿ ಮತ್ತು ಕರ್ನಾಟಕದ ರಾಜಕಾರಣ ಎಲ್ಲಿಗೆ ಸಾಗಿದೆ, ಸಾಗುತ್ತಿದೆ ಎಂಬ ಪ್ರಶ್ನೆಗೆ ನಾನು ನಿಮ್ಮ ಸ್ಥಿತಿಯಿಂದಲೇ ಉತ್ತರ ಪಡೆದುಕೊಳ್ಳಲು ಯತ್ನಿಸುತ್ತಿದ್ದೇನೆ. ಹೀಗಾಗಿ ನಿಮ್ಮ ಈಗಿನ ಸ್ಥಿತಿ ನನಗೆ ಹೆಚ್ಚು ಪ್ರಸ್ತುತ.
ರಾಜಕಾರಣ ಎಂಬುದು ಎಲ್ಲರಿಗೂ ದಕ್ಕುವುದಲ್ಲ. ಅದು ಒಂದು ಮನಸ್ಥಿತಿ. ಆದ್ದರಿಂದ ಎಲ್ಲ ರಾಜಕಾರಣಿಗಳು ಯಶಸ್ವಿ ರಾಜಕಾರಣಿಯಾಗುವುದಿಲ್ಲ.ಯಶಸ್ವಿ ರಾಜಕಾರಣಿಯಾದವನು ಮೊದಲು ದೇಶವನ್ನು ರಾಜ್ಯವನ್ನು ಅರ್ಥ ಮಾಡಿಕೊಳ್ಳುತ್ತಾನೆ. ನಂತರ ತನ್ನನ್ನು ತಾನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾನೆ. ಈ ಸಮಾಜದಲ್ಲಿ ತನ್ನ ಪಾತ್ರವೇನು ಎಂಬುದನ್ನು ನಿರ್ಧರಿಸುತ್ತಾನೆ. ಜೊತೆಗೆ ಆತ ಮಹತ್ವಾಕಾಂಕ್ಷಿಯೂ ಆಗಿರುತ್ತಾನೆ. ಇದನ್ನೆಲ್ಲ ಗಮನಿಸಿದರೆ ನಿಜವಾದ ಅರ್ಥದಲ್ಲಿ ನಿಮ್ಮನ್ನು ರಾಜಕಾರಣಿ ಎಂದು ಕರೆಯುವುದಿಲ್ಲ. ಯಾಕೆಂದರೆ, ಇವತ್ತಿನ ರಾಜಕಾರಣಕ್ಕೆ ಬೇಕಾದ ಕೆಲವು ಅರ್ಹತೆಗಳು ನಿಮಗಿಲ್ಲ.
ನೀವು ಮೊದಲು ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಎಂದರೆ ನಿಮ್ಮ ಒಳ್ಳೆಯತನವೊಂದೇ ನಿಮ್ಮನ್ನು ಯಶಸ್ವಿ ರಾಜಕಾರಣಿಯನ್ನಾಗಿ ಮಾಡಲಾರದು. ನಿಮಗೆ ನಿಮ್ಮದೇ ಆದ ವ್ಯಕ್ತಿತ್ವ ಬೇಕು.ಗುಲಾಮಗಿರಿಯಲ್ಲಿ ನಾಯಕತ್ವ ಹುಟ್ಟುವುದಿಲ್ಲ. ಜನ ತಮ್ಮ ನಾಯಕನನ್ನು ಆದರ್ಶ ವ್ಯಕ್ತಿಯನ್ನಾಗಿ ನೋಡಲು ಬಯಸುತ್ತಾರೆ. ಅವರಿಗೆ ನಾಯಕ ಎನ್ನುವವ ತಮಗಿಂತ ಎತ್ತರದವ. ಆತನಲ್ಲಿ ತಮ್ಮ ಸಫಲತೆಯನ್ನು ನೋಡುವುದಕ್ಕೆ ಜನ ಬಯಸುತ್ತಾರೆ. ರಾಜಕಾರಣಿ ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ಜನ ಇಷ್ಟಪಡುವಂತಹ ಇಮೇಜ್ ಕೂಡ ಮುಖ್ಯ. ಜನ ನಮ್ಮ ಮುಖ್ಯಮಂತ್ರಿಗಳು ಹೀಗೆ ಎಂದು ಮಾತನಾಡುವಂತಾಗಬೇಕು. ಆದರೆ ಜನ ನಿಮ್ಮ ಬಗ್ಗೆ ಏನು ಮಾತನಾಡುತ್ತಾರೆ ಎಂಬುದನ್ನು ನೀವು ಗಮನಿಸಿದ್ದೀರಾ ?
ಜನರ ದೃಷ್ಟಿಯಲ್ಲಿ ನೀವು ಒಳ್ಳೆಯ ಮನುಷ್ಯ. ಇವರಿಗೆ ಕೆಲಸ ಮಾಡುವ ಆಸಕ್ತಿ ಇದೆ ಎಂದು ಜನ ಮಾತನಾಡುತ್ತಾರೆ. ಜೊತೆಗೆ ಇವರು ಯಡಿಯೂರಪ್ಪನವರ ಕಪಿ ಮುಷ್ಟಿಯಲ್ಲಿದ್ದಾರೆ. ಅವರು ಆಡಿಸಿದಂತೆ ಆಡುವ ಬುಗುರಿ ಅವರು. ಸೂತ್ರ ಮಾತ್ರ ಮಾಜಿ ಮುಖ್ಯಮಂತ್ರಿಗಳ ಕೈಯಲ್ಲಿದೆ ಎಂದು ಹೇಳುತ್ತಾರೆ. ಈ ಮಾತು ಸಂಪೂರ್ಣ ಸುಳ್ಳಲ್ಲ ಅಲ್ಲವೆ ? ನೀವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮಾಡಲು ಸಾಕಷ್ಟು ಕೆಲಸಗಳಿದ್ದವು. ಆಡಳಿತವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಇದಕ್ಕಾಗಿ ಆಯಕಟ್ಟಿನ ಸ್ಥಾನಗಳಲ್ಲಿ ಸೇರಿಕೊಂಡ ಕಳ್ಳ ಅಧಿಕಾರಿಗಳನ್ನು ಬದಲಿಸಬೇಕಾಗಿತ್ತು. ಇದರಿಂದ ನೀವು ಕೆಲಸ ಮಾಡುವುದಕ್ಕಾಗಿ ಬಂದವರು ಎಂಬ ಸಂದೇಶ ಹೋಗುತ್ತಿತ್ತು. ಆದರೆ ನೀವು ಈ ವಿಚಾರದಲ್ಲಿ ಎದೆಗಾರಿಕೆಯನ್ನು ಪ್ರದರ್ಶಿಸಲೇ ಇಲ್ಲ. ಬದಲಾಗಿ ನೀವು ಮಾಡಿದ ಕೆಲವು ಬದಲಾವಣೆಗಳು ಮಾಜಿ ಮುಖ್ಯಮಂತ್ರಿಗಳನ್ನು ಸಂತೋಷದಲ್ಲಿ ಇಡುವುದಕ್ಕಾಗಿಯೇ ಮಾಡಿದ ಬದಲಾವಣೆಗಳು ಎಂಬುದು ಸಣ್ನ ಮಕ್ಕಳಿಗೂ ಗೊತ್ತಾಗುವಂತಿತ್ತು. ನೀವು ಮಾಜಿ ಮುಖ್ಯಮಂತ್ರಿಗಳ ಹಿಡಿತದಲ್ಲೇ ಉಳಿದು ಬಿಟ್ಟಿರಿ.
ನಿಮ್ಮ ಸಚಿವ ಸಂಪುಟದಲ್ಲಿ ಇರುವ ಬಹಳಷ್ಟು ಸಚಿವರು, ಯಡಿಯೂರಪ್ಪನವರೇ ತಮ್ಮ ನಾಯಕರು ಎಂದು ಹೇಳಿಕೊಂಡು ಬರುತ್ತಿದ್ದಾರೆ. ನೀವು ಏನಿದ್ದರೂ ತಾತ್ಕಾಲಿಕ ಎಂಬ ಮಾತನ್ನು ಬಹಿರಂಗವಾಗಿ ಹೇಳುತ್ತಿದ್ದಾರೆ. ಇದು ಜನತಂತ್ರ ವಿರೋಧಿ ಮನಸ್ಥಿತಿ ಅಲ್ಲವೆ ? ಸಚಿವ ಸಂಪುಟಕ್ಕೆ ಒಂದು ಜಂಟಿ ಹೊಣೆಗಾರಿಕೆ ಇರುತ್ತದೆ. ಈ ಹೊಣೆಗಾರಿಕೆಯನ್ನು ಮೀರಿ ಹೇಳಿಕೆ ನೀಡುತ್ತಿರುವ ಇಂಥಹ ಸಚವರ ಬಾಯಿ ಮುಚ್ಚಿಸುವ ಕೆಲಸವನ್ನು ನೀವು ಮಾಡಲಿಲ್ಲ.ರೇಣುಕಾಚಾರ್ಯ ಅವರಂತಹ ಜೋಕರುಗಳನ್ನು ಹಿಸಿಕೊಂಡು ಬಂದಿರಿ. ಯಾಕೆ ಮಾಜಿ ಮುಖ್ಯಮಂತ್ರಿಗಳಿಗೆ ಬೇಸರವಾಗಬಹುದು ಎಂಬ ಭಯವೆ ?
ಇಡೀ ಸಚಿವ ಸಂಪುಟಕ್ಕೆ ಯಾವುದೇ ರೀತಿಯ ಫೋಕಸ್ ಇಲ್ಲದ ವಾತಾವರಣ ಈಗ ನಿರ್ಮಾಣವಾಗಿದೆ. ಪ್ರತಿಯೊಬ್ಬ ಸಚಿವರೂ ತಾವೊಬ್ಬ ಸ್ವತಂತ್ರ ಮಾಂಡಲೀಕರು ಎಂಬಂತೆ ವರ್ತಿಸುತ್ತಿದ್ದಾರೆ. ಇವರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ನಿಮಗೆ ಯಾಕೆ ಸಾಧ್ಯವಾಗಿಲ್ಲ ?
ಕೆಲವರು ಮನಸ್ಸಿಗೆ ಬಂದಂತೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇದೊಂದು ಸರ್ಕಾರ ಎಂದೇ ಅನ್ನಿಸುತ್ತಿಲ್ಲ. ಜೊತೆಗೆ ಸರ್ಕಾರದ ನೀತಿ ಏನು ಎಂಬುದೇ ಅರ್ಥವಾಗದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಯಾರು ಹೊಣೆಗಾರರು ಗೌಡರೆ ?
ಈಗ ಕನ್ನಡ ಶಾಲೆಗಳನ್ನು ಮುಚ್ಚುವ ವಿಚಾರವನ್ನೇ ತೆಗೆದುಕೊಳ್ಳಿ. ಈ ವಿಚಾರದಲ್ಲಿ ನಾವು ಶಾಲೆಗಳನ್ನು ಮುಚ್ಚುತ್ತಿಲ್ಲ, ವಿಲೀನಗೊಳಿಸುತ್ತಿದ್ದೇವೆ ಎಂದು ನಂಬಿಸುವ ಚಾಣಾಕ್ಷತ ಕೂಡ ನಿಮ್ಮ ಸಚಿವರಲ್ಲಿ ಉಳಿದಿಲ್ಲ. ಈ ಬಗ್ಗೆ ಹಲವೆಡೆ ಪ್ರತಿರೋಧ ಪ್ರಕಟವಾದರೂ ನೀವು ಮುಚ್ಚುವುದಿಲ್ಲ ಎಂದು ಹೇಳುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ಯಾಕೆ ಹೀಗೆ ? ನಿಮಗೆ ನಿಮ್ಮದೇ ಆದ ಸ್ಪಷ್ಟ ನಿರ್ಧಾರ ಇಲ್ಲವೆ ?
ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೆ ಗೊತ್ತು. ಕೈಗಾರಿಕೀಕರಣದ ಹೆಸರಿನಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳವ ಸರ್ಕಾರದ ಕ್ರಮಕ್ಕೆ ರಾಜ್ಯದ ರೈತರು ಧ್ವನಿ ಎತ್ತಿದ್ದಾರೆ. ಲಾಂಡ್ ಬ್ಯಾಂಕ್ ಹೆಸರಿನಲ್ಲಿ ರೈತರ ಭೂಮಿಯನ್ನು ಕಸಿದುಕೊಳ್ಳುವ ಯತ್ನ ನಡೆಯುತ್ತಿರುವುದು ಸರಿಯಾ ? ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನೀತಿ ಬೇಕು ಅಲ್ಲವೆ ? ಆದರೆ ದುರ್ದೈವದ ವಿಚಾರ ಎಂದರೆ ಯಾವುದೇ ಇಲಾಖೆಯಲ್ಲಿ ನೀತಿ ಎನ್ನುವುದು ಇಲ್ಲವೇನೋ ಎಂದು ಅನ್ನಿಸುತ್ತದೆ. ಹಿಂದಿನ ಸರ್ಕಾರದ ಎಲ್ಲ ನೀತಿಗಳನ್ನು ನೀವು ಚಾಚು ತಪ್ಪದೇ ಪಾಲಿಸಿಕೊಂಡು ಬರುವುದಾದರೆ ಈ ಸರ್ಕಾರ ಯಾಕಾದರೂ ಬೇಕು ? ಸ್ವಲ್ಪ ಈ ಬಗ್ಗೆ ಯೋಚಿಸಿ.
ಹಳ್ಳಿ ಮತ್ತು ಪಟ್ಟಣಗಳ ನಡುವಿನ ಅಂತರ ಹೆಚ್ಚುತ್ತಿದೆ. ಗ್ರಾಮಾಂತರ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಜನ ವಲಸೆ ಬರುವುದು ಹೆಚ್ಚುತ್ತಿದೆ. ನಮ್ಮ ಹಳ್ಳಿಗಳು ಹೊಸದಕ್ಕೆ ಹೊಂದಿಕೊಳ್ಳಲಾರದೆ ಹಳೆಯದನ್ನು ಉಳಿಸಿಕೊಳ್ಳಲಾಗದೇ ನಲುಗುತ್ತಿವೆ. ಮಾನವೀಯ ಸಂಬಂಧಗಳಿಗೆ ಹೆಸರುವಾಸಿಯಾದ ನಮ್ಮ ಹಳ್ಳಿಗಳು ಈಗ ವೈಯಕ್ತಿಕ ಧ್ವೇಷ ಮತ್ತು ಕೆಟ್ಟ ರಾಜಕಾರದ ಅಂಗಳಗಳಾಗಿ ಮಾರ್ಪಡುತ್ತಿವೆ. ಅಧಿಕಾರ ವಿಕೇಂದ್ರೀಕರಣ ಸರಿಯಾಗಿ ಅನುಷ್ಠಾನಕ್ಕೆ ಬರದೇ ನಮ್ಮ ಸ್ಥಳೀಯ ಸರ್ಕಾರಗಳು ಕಾಸು ಹೊಡೆಯುವ ಕೇಂದ್ರಗಳಾಗಿವೆ. ಈ ಬಗ್ಗೆ ನೀವು ಯೋಚಿಸಿದ್ದೀರಾ ?
ಊಟಕ್ಕೆ ಅನ್ನವಿಲ್ಲದಿದ್ದರೂ ಮಕ್ಕಳಿಗೆ ಲಾಫ್ ಟಾಪ್ ಮತ್ತು ಮೊಬೈಲ್ ಅನ್ನು ಕೊಡಿಸುವ ಸ್ಥಿತಿಗೆ ಬಂದಿರುವ ರೈತ ಇಂದಿಗೂ ತನ್ನ ಉತ್ಪನ್ನಗಳಿಗೆ ವೈಜ್ನಾನಿಕ ಬೆಲೆ ಪಡೆಯುತ್ತಿಲ್ಲ. ಮಾರುಕಟ್ಟೆ ಫೋರ್ಸ್ ಗಳು ರೈತನನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ನಿಯಂತ್ರಿತ ಮರುಕಟ್ಟೆಗಳು ಮಧ್ಯವರ್ತಿಗಳ ಹಿಡಿತದಲ್ಲಿವೆ. ಕೃಷಿ ಎನ್ನುವುದು ಬಂಡವಾಳವೂ ವಾಪಸ್ ಬರದ ಸ್ಥಿತಿಯಲ್ಲಿದೆ. ಇದೆಲ್ಲ ನಿಮಗೆ ತಿಳಿಯುವುದಿಲ್ಲವೆ ?
ಮುಖ್ಯಮಂತ್ರಿಯಾದವನು ರಾಜ ನೀತಿಜ್ನನಾಗಿರಬೇಕು. ಆಥನಿಗೆ ರಾಜ್ಯದ ಬಗ್ಗೆ ಕನಸುಗಳಿರಬೇಕು. ಕನಿಷ್ಟ ತನ್ನ ಮಟ್ಟಿಗಾದರೂ ಕನಸುಗಳನ್ನು ಹೊಂದಿರಬೇಕು. ಆದರೆ ನಿಮ್ಮನ್ನು ನೋಡಿದರೆ ನೀವು ಕನಸುಗಳೆ ಇಲ್ಲದ ವ್ಯಕ್ತಿಯಾಗಿ ಕಾಣುತ್ತೀರಿ. ಆದಷ್ಟ ದಿನ ನಡೆದುಕೊಂಡು ಹೋಗಲಿ ಎಂಬುದು ನಿಮ್ಮ ಮನಸ್ಥಿತಿ ಎಂದು ಅನ್ನಿಸುತ್ತದೆ.
ಈ ನಡುವೆ ನೀವು ವಿಧಾನ ಪರಿಷತ್ತಿನ ಚುನಾವಣೆಗೆ ನಿಲ್ಲದಂತೆ ಕೆಲವರು ಒತ್ತಡ ಹೇರುತ್ತಿದ್ದಾರೆ ಎಂದು ಕೇಳಿದ್ದೇನೆ. ನಿಮ್ಮನ್ನು ರಾಜಕೀಯವಾಗಿ ಮುಗಿಸುವ ಯತ್ನ ಕೂಡ ಇದಾಗಿರಬಹುದು. ಅತವಾ ನಿಮ್ಮನ್ನು ದೆಹಲಿಗೆ ಕಳುಹಿಸಿ ಇಲ್ಲಿ ಅಧಿಕಾರ ಹಿಡಿಯುವ ಹುನ್ನಾರವೂ ಇರಬಹುದು. ಇದನ್ನೆಲ್ಲ ನೋಡಿ ನಿಮಗೆ ಸಿಟ್ಟು ಬರುತ್ತಿಲ್ಲವೆ ? ನಿನ್ನೆ ನೀವು ಗಂಗಾವತಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ನಿಮ್ಮ ಮುಖ ಪೆಚ್ಚಾಗಿತ್ತು. ನಿಮ್ಮ ಎಂದಿನ ನಗು ಇರಲಿಲ್ಲ. ನಿಜ ನಿಮಗೂ ಇದನ್ನೆಲ್ಲ ನೋಡಿ ಬೇಸರವಾಗಿರಬಹುದು. ಆದರೆ ನೀರಿಗೆ ಇಳಿದ ಮೇಲೆ ಚಳಿಯ ಹಂಗು ಯಾಕೆ ?
ನಿಮಗೆ ಇನ್ನೊಂದು ಮಾತು ಹೇಳಲೇ ಬೇಕು. ಬದುಕಿನಲ್ಲಿ ಆಗಲೀ, ರಾಜಕಾರಣದಲ್ಲಾಗಲೀ ನಮಗೆ ನಮ್ಮದೇ ಆದ ವ್ಯಕ್ತಿತ್ವ ಇರಬೇಕು. ನಾವು ಬೇರೆಯವರ ನೆರಳಾಗಬಾರದು. ತಪ್ಪಿರಲಿ ಒಪ್ಪಿರಲಿ ನಾವು ನಾವೇ. ಅದಕ್ಕಾಗಿ ನಿಮಗೆ ನನ್ನದೊಂದು ಸಲಹೆ. ದಯವಿಟ್ಟು ನೀವು ನೀವೇ ಆಗಲು ಯತ್ನಿಸಿ. ಆಗದೇ ?
ಇವತ್ತಿಗೆ ಇಷ್ಟೆ ಸಾಕು. ಇನ್ನೊಮ್ಮೆ ಮಾತನಾಡೋಣ.

ನಿಮ್ಮ ಹಿತವನ್ನು ಬಯಸುವ
ಶಶಿಧರ್ ಭಟ್

ಹೀಗೊಂದು ಮಾತುಕತೆ ........

ಮಾತುಕತೆ, ಅಲ್ಲಲ್ಲಿ ನಗು ಮತ್ತು ಅಳು
ಕ್ಷಯವಿಲ್ಲದ್ದು ಅಕ್ಷರ, ಅಕ್ಷರ ಅಕ್ಷರಗಳನ್ನು ಪೊಣಿಸಿ ಮಣಿಸಿ
ಕಟ್ಟಿದ ಕಾವ್ಯ.
ವಾಕ್ಯವೇ ಕಾವ್ಯವಾಗುವ ಅದ್ಭುತ
ಅಕ್ಷರಕ್ಕೆ ಕ್ಷಯಿಸುವ ಗುಣ ಇಲ್ಲದಿದ್ದರೆ.
ಆದರೆ ಇಲ್ಲಿ ಆಗುತ್ತಿರುವುದೇ ಬೇರೆ
ಮಾತಿನ ಭರಾಟೆಯಲ್ಲಿ ಅಕ್ಷರಕ್ಕೆ ಕ್ಷಯಿಸುವ ಗುಣ
ಮಾತಿನ ಶಕ್ತಿಯೇ ಕ್ಷಯ.
ಮೊದಲು ಹುಟ್ಟಿದ್ದು ನಾದವಂತೆ
ನಾದದ ಅಪ್ಪ ಸ್ವರ, ಎಲ್ಲವೂ ಅಪಸ್ವರ.
ಹೀಗಾದರೆ ನಗು ಅಳುವಿಗೆ, ವ್ಯತ್ಯಾಸ ಇರುವುದಾದರೂ ಹೇಗೆ ?
ನಾವೆಲ್ಲ ಮಾತನಾಡುವ ಹಾಗೆ.
ಅಳುವವನಿಗೆ ಕಳೆದುಕೊಂಡ ನೋವು
ನಗುವವನಿಗೆ ಶಕ್ತಿ ತುಂಬುವ ಕಾವು
ಆದರೆ ಅಳುವಿನಲ್ಲಿ ಏನೂ ಹುಟ್ಟುವುದಿಲ್ಲ, ಅದು ವ್ಯರ್ಥ ಭಾವೋಧ್ವೇಗ.
ನಗುವಿಲ್ಲ ಎನೂ ಇರುವುದಿಲ್ಲ ಅದು,ಇರುವವನ ಅಹಂಕಾರ.
ಆದರೂ ಶಬ್ದಕ್ಕೆ ಶಕ್ತಿ ಇಲ್ಲದದ್ದರೆ ?
ಸ್ವರಕ್ಕೆ ಮಾಂತ್ರಿಕತೆ ಇಲ್ಲದಿದ್ದರೆ ?
ನಾದಕ್ಕೆ ಲಾಲಿತ್ಯ ಇಲ್ಲದಿದ್ದರೆ ?
ಇಲ್ಲದಿರುವಲ್ಲಿ ತುಂಬಬೇಕು
ಹಾಗಿದ್ದರೆ ಇರುವಲ್ಲಿ ?
ಅಕ್ಷರ ಕ್ಷಯಿಸಕೂಡದು, ಸ್ವರಕ್ಕೆ ಮಾಂತ್ರಿಕತೆ ಬೇಕು
ಬದುಕು ನಾದಮಯವಾಗಬೇಕು
ಇದೆಲ್ಲ ಆಗುವುದೆಲ್ಲಿ ?

ಶಶಿಧರ್ ಭಟ್

Thursday, December 8, 2011

ಇವರಿಗೆ ಸಂವಿಧಾನ ಎಂಬುದಿದೆ ಎಂಬುದು ಗೊತ್ತಿದೆಯೇ...

ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಇನ್ನೊಂದು ಯುದ್ಧ ಪ್ರಾರಂಭವಾಗಿದೆ. ಇದು ರಾಜ್ಯಪಲರಿಗೆ ಛೀಮಾರಿ ಹಾಕಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ್ಯ ಈಶ್ವರಪ್ಪ ಸದನದಲ್ಲೇ ಒತ್ತಾಯಿಸಿದ್ದಾರೆ. ರಾಷ್ಟ್ರಪತಿಗಳ ಬಳಿಗೆ ನಿಯೋಗ ಒಯ್ಯಬೇಕು ಎಂದು ರಾಜ್ಯ ಬಿಜೆಪಿ ನಿರ್ಧರಿಸಿದೆ. ಇದೆಲ್ಲ ಸರಿ, ಹಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಗಲಾಟೆ ನಡೆದ ಉದಾಹರಣೆ ಇದೆ. ಹಾಗೆ ರಾಜ್ಯಪಾಲರನ್ನು ಬದಲಿಸಬೇಕು ಎಂಬ ಒತ್ತಾಯ ಕೂಡ ಹೊಸದಲ್ಲ.
ಆದರೆ ಇಲ್ಲಿ ಬಹುಮುಖ್ಯವಾದ ಪ್ರಶ್ನೆ ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಮತ್ತು ರಾಜಯಪಾಲರ ನೇಮಕ ಮತ್ತು ನಡುವಳಿಕೆಗೆ ಸಂಬಂಧಿಸಿದ್ದು. ಈ ಬಗ್ಗೆ ಈಗಾಗಲೇ ಸರ್ಕರಿಯಾ ಕಮಿಶನ್ ನೀಡಿದ ವರದಿ ಸರ್ಕಾರದ ಮುಂದಿದೆ. ಈ ಆಯೋಗವನ್ನು ೧೦೮೩ರಲ್ಲಿ ನೇಮಿಸಲಾಗಿತ್ತು. ಇದು ೧೯೮೮ರಲ್ಲಿ ವರದಿಯನ್ನು ನೀಡಿತು. ಈ ವರದಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಬಂಧ ಹೇಗಿರಬೇಕು ಎನ್ನುವ ಬಗ್ಗೆ ಶಿಫಾರಸು ಮಾಡಿದೆ. ಆದರೆ ಷಿಫಾರಸುಗಳ ಅನುಷ್ಠಾನ ಮಾತ್ರ ಆಗಿಲ್ಲ.
ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಂಬಂಧಿಸಿದಂತೆ ದೊಡ್ಡಣ್ಣನ ಮನೋವೃತ್ತಿಯನ್ನು ತ್ಯಜಿಸುವುದು ಒಕ್ಕೂಟ ವ್ಯವಸ್ಥೆಯ ಹಿತದೃಷ್ಟಿಯಿಂದ ಅತ್ಯಗತ್ಯ. ಆದರೆ ಬಹುತೇಕ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ರಾಜಭವನದ ಮೂಲಕ ಪಕ್ಷ ರಾಜಕೀಯವನ್ನು ಮಾಡುತ್ತಿರುವುದಕ್ಕೆ ಹಲವು ಉದಾಹರಣೆಗಳಿವೆ. ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಅವರ ಕಾಲದಲ್ಲಿ ರಾಜಭವನ ಕಾಂಗ್ರೆಸ್ ಪಕ್ಷದ ಕಚೇರಿಗಳಂತೆ ವರ್ತಿಸುತ್ತಿದ್ದವು. ರಾಜ್ಯ ಸರ್ಕಾರವನ್ನು ಬೇಕೆಂದಾಗ ಕಿತ್ತೊಗೆಯುವ ಪ್ರವೃತ್ತಿ ಕಂಡು ಬರುತ್ತಿತ್ತು. ಇದಕ್ಕೆಲ್ಲ ಸ್ವಲ್ಪ ಮಟ್ತಿಗೆ ತಡೆ ಹಾಕಿದ್ದು ಸರ್ವೋಚ್ಚ ನ್ಯಾಯಾಲಯ. ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಯಾವುದೇ ಮುಖ್ಯಮಂತ್ರಿಯ ಬಲ ಪರೀಕ್ಷೆ ಆಗಬೇಕಾದ್ದು ವಿಧಾನಸಭೆಯಲ್ಲಿಯೇ ಹೊರತೂ ರಾಜಭವನದಲ್ಲಿ ಅಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟೋಕ್ತಿ ಐತಿಹಾಸಿಕ, ಇದಾದ ಮೇಲೆ ರಾಜಭವನದ ದುರ್ಬಳಕೆ ಕಡಿಮೆಯಾಗಿದೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ.
ನಮ್ಮ ಸಂವಿಧಾನದ ಪ್ರಕಾರ ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ಅವರು ಆಯಾ ರಾಜ್ಯಗಳ ಸರ್ಕಾರದ ಮೇಲೆ ನಿಗಾ ಇಟ್ಟಿರುತ್ತಾರೆ. ಸಂವಿಧಾನಿಕವಾಗಿ ರಾಜ್ಯ ಸರ್ಕಾರ ನಡೆಯುವುದೇ ರಾಜ್ಯಪಾಲರ ಆದೇಶಗಳ ಮೂಲಕ. ಆದರೂ ಇಲ್ಲಿಯೂ ವಿಧಾನಮಂಡಲಕ್ಕೆ ಅತ್ಯುಚ್ಛ ಸ್ಥಾನವಿದೆ. ವಿಧಾನಮಂಡಲ ಪರಮ. ಆದರೆ ಈ ಶಾಸನಸಭೆಗೆ ಅಧೀನವಾಗಿರುವ ಸರ್ಕಾರ, ರಾಜ್ಯಪಾಲರ ಸರ್ಕಾರ. ಅವರು ನೇಮಿಸಿದ ಸರ್ಕಾರ. ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳನ್ನು ನೇಮಿಸುವವರು ರಾಜ್ಯಪಾಲರು. ಯಾವುದೇ ರಾಜ್ಯಪಾಲರು ಅಸಂವಿಧಾನಕವಾಗಿ ನಡೆದುಕೊಂಡರೆ ರಾಷ್ಟ್ರಪತಿಗಳಿಗೆ ದೂರು ನೀಡುವ, ಅವರನ್ನು ವಾಪಸ್ಸು ಕರೆಸಿಕೊಳ್ಳುವಂತೆ ಒತ್ತಾಯಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಆದರೆ ಈ ಎಲ್ಲ ಸಂದರ್ಭಗಳಲ್ಲೂ ಒಂದು ಮಿತಿಯನ್ನು ಮೀರಿ ವರ್ತಿಸುವಂತಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರಾಜಭವನ ಹಲವಾರು ವಿವಾದಗಳಿಗೆ ಕಾರಣವಾಗಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಮ್ಮ ಮಿತಿಯನ್ನು ಮೀರಿ ವರ್ತಿಸುತ್ತಿರುವ ಅನುಮಾನ ಬರುತ್ತಿದೆ. ಹಾಗೆ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ಈ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಪಾಲರಿಗೆ ಸಂವಿಧಾನ ನೀಡಿದ ಸ್ಥಾನ ಮಾನಗಳು ಏನು ಎಂಬುದನ್ನು ಅರಿಯದೇ ವರ್ತಿಸುತ್ತಿದ್ದಾರೆ. ಹಂಸರಾಜ್ ಭಾರದ್ವಾಜ್ ಎಂಬ ಈ ರಾಜ್ಯಪಾಲರು ಮೂಲಭೂತವಾಗಿ ರಾಜಕಾರಣಿ. ಅವರಲ್ಲಿ ಹಿಂಸಾ ವಿನೋದವಿದೆ. ಅವರು ಹಿಂಸಿಸಿಯೇ ಸಂತೋಷಪಡಬಲ್ಲರು. ಆದರೆ ಅವರ ಕಾನೂನು ಜ್ನಾನವನ್ನು ಪ್ರಶ್ನಿಸುವಂತಿಲ್ಲ. ಅವರಿಗೆ ಸಂವಿಧಾನವೂ ಗೊತ್ತಿದೆ. ಹಾಗಾಗಿ ಅವರ ವರ್ತನೆಯನ್ನು ಸಂವಿಧಾನ ವಿರೋಧಿ ಎಂದಾಗಲೀ, ಅವರು ನಡವಳಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಯನ್ನು ಕಾಪಾಡುವ ದುರುದ್ದೇಶ ಇದೆ ಎಂದಾಗಲೀ ಸಾಬೀತು ಪಡಿಸುವುದು ಸಾಧ್ಯವಿಲ್ಲ. ಆದರೆ ಕೆಲವು ಸಂದರ್ಭಗಳಲ್ಲ ತಮ್ಮ ಮಿತಿಯನ್ನು ಮೀರಿ ಸಾರ್ವಜನಿಕ ಹೇಳಿಕೆಯನ್ನು ನೀಡಿ ಗೊಂದಲವನ್ನು ಅವರು ಉಂಟು ಮಾಡಿದ್ದು ನಿಜ. ಆದರೆ ಒಬ್ಬ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಲು ಇಷ್ಟೆ ಸಾಕಾಗುವುದಿಲ್ಲ.
ಇದ ರಾಜ್ಯ ಬಿಜೆಪಿ ನಾಯಕರಿಗೆ ಅರ್ಥವಾಗಿತ್ತು. ಆದರೆ ಅವರಿಗೆ ಅರ್ಥವಾಗುವಂತಿಲ್ಲ. ಇದಕ್ಕೆ ಸ್ಪಷ್ಟವಾದ ಉದಾಹರಣೆ ಎಂದರೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗಳು.
ರಾಜ್ಯಪಾಲರನ್ನು ಸದನಕ್ಕೆ ಕರೆಸಿ ಅವರಿಗೆ ಛೀಮಾರಿ ಹಾಕಬೇಕು ಎಂಬುದು ಈಶ್ವರಪ್ಪ ಅವರ ಇತ್ತೀಚಿನ ಹೇಳಿಕೆ. ಅವರು ಈ ಹೇಳಿಕೆ ನೀಡಿದ್ದು ವಿಧಾನಸಭೆಯಲ್ಲಿ. ಈ ವಿಧಾನಸಭೆ ರಚನೆಯಾಗಿದ್ದು ರಾಜ್ಯಪಾಲರ ಆದೇಶದ ಮೂಲಕ. ಜೊತೆಗೆ ವರ್ಷದ ಮೊದಲ ಅಧಿವೇಶನದ ಮೊದಲ ದಿನ ರಾಜ್ಯಪಾಲರು ಸದನಕ್ಕೆ ಬಂದು ಭಾಷಣ ಮಾಡುತ್ತಾರೆ. ನನ್ನ ಸರ್ಕಾರ ಎಂದು ಹೇಳುತ್ತಾರೆ. ನನ್ನ ಸರ್ಕಾರ ಮುಂದೇನು ಮಾಡುತ್ತಾರೆ ಎಂಬುದನ್ನು ವಿವರಿಸುತ್ತಾರೆ. ಇದು ಈಶ್ವರಪ್ಪ ಅವರಿಗೆ ತಿಳಿದಿಲ್ಲವೆ ? ಹೊಸ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಬಂದು ಸದನದಲ್ಲಿ ಮಾತನಾಡುವಾಗ ಸರ್ಕಾರ ಮತ್ತು ಬಿಜೆಪಿ ನಾಯಕರು ಏನು ಮಾಡುತ್ತಾರೆ ? ಅವರಿಗೆ ಛೀಮಾರಿ ಹಾಕಬೇಕು ಎಂದು ಹೇಳಿದವರು ಅವರು ಬಂದಾಗ ಎದ್ದು ನಿಂತು ಗೌರವ ಸಲ್ಲಿಸುತ್ತಾರೆಯೆ ಅಥವಾ ಆಡಳಿತ ಪಕ್ಷವೇ ಸಭಾತ್ಯಾಗ ಮಾಡುತ್ತದೆಯೆ ?
ಈಶ್ವರಪ್ಪ ಅವರ ಈ ಹೇಳಿಕೆ ಸಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಕಾಣುತ್ತಿದೆ. ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಭಿನ್ನಾಭಿಪ್ರಾಯಗಳು ಬಗೆ ಹರಿಯಬೇಕಾದ್ದು ಕೇಂದ್ರ ಮಟ್ಟದಲ್ಲಿ. ರಾಷ್ಟ್ರಪತಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು ಇದು ತಾರ್ಕಿಕ ಅಂತ್ಯವನ್ನು ಕಾಣುತ್ತದೆ. ಅದನ್ನು ಅತಿ ಕೀಳು ಮಟ್ಟದಲ್ಲಿ ವಿಧಾನಸಭೆಯಲ್ಲಿ ಚರ್ಚೆ ಮಾಡಿದರೆ ಸಮಸ್ಯೆ ಬಗೆಹರಿಯುವಿದಿಲ್ಲ. ಇದು ಈಶ್ವರಪ್ಪ ಅವರಿಗೆ ಅರ್ಥವಾಗಬೇಕಿತ್ತು. ಪಾಪ ಅವರ ತಲೆಗೆ ಇದು ಹೋಗದಿದ್ದರೆ ಬಿಜೆಪಿಯ ಹಿರಿಯ ನಾಯಕರು ಅವರಿಗೆ ಈ ಬಗ್ಗೆ ತಿಳುವಳಿಕೆ ನೀದಬೇಕಾಗಿತ್ತು.
ಈಗ ರಾಜ್ಯಪಾಲರ ವಿರುದ್ಧ ಬಿಜೆಪಿ ನಾಯಕರ ದೂರುಗಳೇನು ಎಂಬ ವಿಷಯಕ್ಕೆ ಬರೋಣ.

ಬಿಜೆಪಿ ನಾಯಕರಿಗೆ ಸಿಟ್ಟು ಬಂದಿರುವುದಕ್ಕೆ ಮೊದಲ ಕಾರಣ ರಾಜ್ಯಪಾಲರು ಯಡಿಯೂರಪ್ಪ ಅವರ ಸರ್ಕಾರವನ್ನು ವಜಾ ಮಾಡುವಂತೆ ಕೇಂದ್ರಕ್ಕೆ ಶೀಫಾರಸು ಮಾಡಿದ್ದು. ಇದನ್ನು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಹೀಗೆ ಶಿಫಾರಸು ಮಾಡುವ ಅಧಿಕಾರವನ್ನು ಅವರಿಗೆ ಸಂವಿಧಾನವೇ ನೀಡಿದೆ.
ಇನ್ನು ಯಡೀಯೂರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಸಿರಾಜುದಿನ್ ಪಾಷಾ ಅವರಿಗೆ ಅನುಮತಿ ನೀಡಿದ ವಿಚಾರ. ಇದು ಸಹ ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ. ಇಲ್ಲಿಯೂ ಸಂವಿಧಾನಕ್ಕೆ ವಿರುದ್ದವಾಗಿ ರಾಜ್ಯಪಾಲರು ನಡೆದುಕೊಂಡಿಲ್ಲ.
ಗೋಹತ್ಯೆ ನಿಷೇಧ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟ ಕ್ರಮದ ಬಗ್ಗೆಯೂ ರಾಜ್ಯಪಾಲರನ್ನು ಪ್ರಶ್ನಿಸಿವುದು ಸಾಧ್ಯವಿಲ್ಲ. ಯಾವುದೇ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವ ಅಧಿಕಾರ ಅವರಿಗಿದೆ. ಹೀಗಾಗಿ ಈ ಮೇಲಿನ ಯಾವ ವಿಚಾರದಲ್ಲಿಯೂ ರಾಜ್ಯಪಾಲರು ದುರುದ್ದೇಶದಿಂದ ನಿಯಮಬಾಹಿರವಾಗಿ, ಸಂವಿಧಾನಕ್ಕೆ ವಿರುದ್ಧವಾಗಿ ಮಾಡಿದ್ದಾರೆ ಎಂದು ಹೇಳುವುದು ಸಾಧ್ಯವಿಲ್ಲ ಯಾಕೆಂದರೆ ರಾಜ್ಯಪಾಪರ ಈ ಎಲ್ಲ ಕ್ರಮಗಳೂ ಅವರ ಮಿತಿಯ ಒಳಗೆ ಕೈಗೊಂಡ ಕ್ರಮಗಳೇ ಆಗಿೆ.
ಆದರೆ ಇದೆಲ್ಲ ಬಿಜೆಪಿಗೆ ಮತ್ತು ಸರ್ಕಾರಕ್ಕೆ ಮುಜುಗರವನ್ನು ಉಂಟೂ ಮಾಡುವ ಕ್ರಮಗಳೇ ಆಗಿವೆ. ಇದನ್ನು ಸರ್ಕಾರ ನಡೆಸುವವರು ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಆದರೆ ರಾಜ್ಯಪಾಲರ ಕ್ರಮ ಅಪಥ್ಯವಾಗಿದೆ ಎಂಬ ಒಂದೇ ಕಾರಣಕ್ಕೆ ಅವರಿಗೆ ಛೀಮಾರಿ ಹಾಕುವ ಮಾತನಾಡುವುದು ಸರಿಯಲ್ಲ. ರಾಜ್ಯಪಾಲರು ಸರ್ಕಾರಕ್ಕೆ ಮುಜುಗರವಾಗುವಂತೆ ಹಲವು ಬಾರಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರೆ ಅದನ್ನು ಯಾರು ಬೇಕಾದರೂ ಒಪ್ಪಬಹುದು. ಆದರೆ ಇಂತಹ ವಾತಾವರಣ ಉಂಟಾಗದಂತೆ ತಡೆಯಲು ಬಿಜೆಪಿ ಸರ್ಕಾರ ಯತ್ನಿಸಬೇಕಿತ್ತು. ಸಂವಿಧಾನದ ಪ್ರಕಾರ ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರಾದ್ದರಿಂದ ಅವರಿಗೆ ಕೋಡಬೇಕಾದ ಗೌರವವನ್ನು ಇವರು ನೀಡಬೇಕಾಗಿತ್ತು. ಆದರ ಇಲ್ಲಿ ಆದದ್ದೇನು ? ರಾಜ್ಯ ಪಾಲರು ಹೇಳಿಕಳಿಸಿದರೂ ಹಿಂದಿನ ಮುಖ್ಯಮಂತ್ರಿ ಅವರನ್ನು ನೋಡುತ್ತಿರಲಿಲ್ಲ. ಅವರ ಬಾಲಂಗೋಚಿಗಳು ರಾಜ್ಯಪಾಲರನ್ನು ಟೀಕಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದವು. ರೇಣುಕಾಚಾರ್ಯ, ರೇವಣ್ಣನಂತಹ ಮರಿ ಪುಡಾರಿಗಳು ಮಾರುಕಟ್ಟೆಯಲ್ಲಿ ರಾಜ್ಯಪಾಲರನ್ನು ಮನಸ್ಸಿಗೆ ಬಂದಂತೆ ಟೀಕಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸರ್ಕಾರ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಮೊದಲು ಅಥವಾ ಅನಂತರ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯಸ್ಥರಿಗೆ ತಿಳಿಸುವ ಪರಿಪಾಠ ಕೂಡ ಇದೆ. ಇದನ್ನು ಸಹ ಇವರು ಪಾಲಿಸಲಿಲ್ಲ. ಇದೆಲ್ ಹಂಸರಾಜ್ ಭರದ್ವಾಜ್ ಅವರನ್ನು ಕೆರಳಿಸುವುದಕ್ಕೆ ಕಾರಣಗಳಾಗಿರಬಹುದು.
ಏನೇ ಇರಲಿ, ಈಶ್ವರಪ್ಪ ಅವರು ರಾಜ್ಯಪಾಲರನ್ನು ಟೀಕಿಸುತ್ತಿರುವ ರೀತಿ ಯಾರಿಗೂ ಗೌರವ ತರುವಂತಹುದಲ್ಲ. ಅವರು ಮೊದಲು ಸಂವಿಧಾನವನ್ನು ಓದುವ ಕೃಪೆ ಮಾಡಬೇಕು. ಅವರ ಪಕ್ಷದ ನಾಯಕರು ಅವರಿಗೆ ಈ ಬಗ್ಗೆ ತಿಳುವಳಿಕೆ ನೀಡಬೇಕು.

ಈ ನಡುವೆ ಮತ್ತೆ ಸರ್ಕಾರಿಯಾ ಆಯೋಗದ ಶಿಫಾರಸುಗಳ ವಿಚಾರಕ್ಕೆ ಬರುತ್ತೇನೆ. ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರದ ವಿಕೇಂದ್ರೀಕರಣ ಮತ್ತು ಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾದವುಗಳು. ಇದನ್ನೇ ಸರ್ಕಾರಿಯಾ ಅಯೋಗ ಪ್ರಸ್ತಾಪಿಸಿದೆ. ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ರಾಜ್ಯಗಳಿಗೆ ಹಂಚುವ ಕೆಲಸ ಮಾಡಬೇಕು. ರಾಯ್ ಸರ್ಕಾರಗಳು ಜಿಲ್ಲಾ ಪಂಚಾಯಿತ್ ವ್ಯವಸ್ಥೆಗೆ ಹೆಚ್ಚಿನ ಅಧಿಕಾರವನ್ನು ನೀದಬೇಕು. ಹಾಗೆ ಕೆಳಹಂತದಿಂದ ಎಲ್ಲರೂ ತಮ್ಮ ಆಡಳಿತವನ್ನು ತಾವೇ ನಿರ್ವಹಿಸುವ ವ್ಯವಸ್ಥೆಯಾಗಬೇಕು.
ಅಮೇರಿಕ ಕೂಡ ಒಂದು ಒಕ್ಕೂಟ ವ್ಯವಸ್ಥೆ. ಅಲ್ಲಿ ವಿದೇಶಾಂಗ, ರಕ್ಷಣೆಯಂತಹ ಪ್ರಮುಖ ವಿಚಾರವನ್ನು ಹೊರತು ಪದಿಸಿದರೆ ಉಳಿದೆಲ್ಲವೂ ಅಲ್ಲಿನ ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಬರುತ್ತವೆ. ಎಲ್ಲದರಲ್ಲಿಯೂ ಅಮೇರಿಕವನ್ನು ಅನಿಸರಿಸುವ ನಾವು ಈ ವಿಚಾರದಲ್ಲಿ ಮಾತ್ರ ಅಧಿಕಾರವನ್ನು ನಮ್ಮ ನಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಬಯಸುತ್ತೇವೆ. ಏನೇ ಇರಲಿ ಎಲ್ಲರೂ ಮೊದಲು ಸಂವಿಧಾನವನ್ನು ಓದಬೇಕು. ಈಶ್ವರಪ್ಪ, ರೇಣುಕಾಾರ್ಯ ಮೊದಲಾದ ಹೀಸ್ ಮಾಸ್ಟರ್ ವೈಸ್ ಗಳು ಮೊದಲು ಸಂವಿಧಾನವನ್ನು ಓದಲಿ. ಆ ಸರ್ವಶಕ್ತನಾದ ಭಗವಂತನು ಅವರಿಗೆ ಆ ಬುದ್ದಿಯನ್ನು ನೀಡಲಿ.

Monday, December 5, 2011

ಕಾಲು ಮುಟ್ಟುವವರು ಮತ್ತು ಮುಟ್ಟಿಸಿಕೊಳ್ಳುವವರು........!

ಮಾಜಿ ಮುಖ್ಯಮಂತ್ರಿ ಜೆ. ಎಚ್. ಪಟೇಲ್,ಒಮ್ಮೆ ಹೇಳಿದ ಮಾತು ಕಾಲು ಮುಟ್ಟಿ ನಮಸ್ಕರಿಸುವುದಕ್ಕೂ, ಕೈ ಮುಗಿಯುವುದಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ. ಕಾಲು ಕೈ ಎರಡು ನಮ್ಮ ಅಂಗಗಳೇ.. ಈ ಮಾತನ್ನು ಅವರು ಹೇಳಿದ್ದು, ಅವರು ಸ್ವಾಮಿಯೊಬ್ಬರ ಕಾಲು ಮುಟ್ಟಿ ನಮಸ್ಕರಿಸಿ ವಿವಾದಕ್ಕೆ ಒಳಗಾದಾಗ. ಜೆ.ಎಚ್. ಪಟೇಲ್ ಬುದ್ದಿವಂತ ರಾಜಕಾರಣಿ ಅವರು ತಮ್ಮ ಎಲ್ಲ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳಬಲ್ಲವರಾಗಿದ್ದರು. ಕೆಲವೊಮ್ಮೆ ಅವರ ಮಾತನ್ನು ಕೇಳಿ ನಕ್ಕು ಸುಮ್ಮನಾಗಿಬಿಡಬಹುದಾಗಿತ್ತು. ಯಾಕೆಂದರೆ ಅವರ ಮಾತಿನ ವೈಖರಿಯೇ ಹಾಗಿತ್ತು. ಜೆ.ಎಚ್. ಪಟೇಲರು ಅಂದು ಹೇಳಿದ ಮಾತನ್ನು ಇಂದು ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ. ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆಯೊಂದರಿಂದ ನನಗೆ ಜೆ.ಎಚ್. ಪಟೇಲರ ಈ ಮಾತು ನೆನಪಾಯಿತು. ಬಿ.ಎಸ್. ಯಡಿಯೂರಪ್ಪನವರು ಮಾಜಿಯಾದ ಮೇಲೆ ನಿನ್ನೆ ಮೊದಲ ಬಾರಿ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತಿದ್ದ ಅವರ ಕಾಲನ್ನು ಮುಟ್ಟಿ ನಮಸ್ಕರಿಸಿದವರು ಹಲವರು. ಅವರಲ್ಲಿ ಪ್ರಮುಖರೆಂದರೆ ವಿಧೂಷಕನಂತೆ ಸದಾ ವರ್ತಿಸುವ ಅಬ್ಕಾರಿ ಸಚಿವ ರೇಣುಕಾಚಾರ್ಯ. ಕಾಲು ಮುಟ್ಟುವುದಕ್ಕೂ ಸೈ, ಕೈ ಎತ್ತುವುದಕ್ಕೂ ಸೈ ಎಂಬಂತಿರುವ ರೇಣುಕಾಚಾರ್ಯ ಅವರ ಈ ವರ್ತನೆಯನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಈ ಘಟನೆ ವಿಧಾನಸಭೆಯಲ್ಲಿ ನಡೆದಿದ್ದರಿಂದ ಈ ಬಗ್ಗೆ ಮಾತನಾಡಲೇಬೇಕಾಗಿದೆ. ನಮ್ಮ ಜನಪ್ರತಿನಿಧಿಗಳ ಅಲ್ಲಿನ ನಡವಳಿಕೆ ಕೇವಲ ವೈಯಕ್ತಿಕ ನಡವಳಿಕೆಯಾಗಿ ಉಳಿಯುವುದಿಲ್ಲ. ಅದಕ್ಕೆ ಸಾರ್ವಜನಿಕ ಆಯಾಮ ಕೂಡ ಇದೆ. ಯಾಕೆಂದರೆ ಅದು ವಿಧಾನಸಭೆ. ವಿಧಾನಸಭೆಗೆ ಪಾವಿತ್ರ್ಯತೆ ಇದೆ. ಅಲ್ಲಿನ ನಡವಳಿಕೆಗೆ ಸಂಬಂಧಿಸಿದಂತೆ ಜನತೆಗೆ ಜನಪ್ರತಿನಿಧಿಗಳು ಉತ್ತರ ನೀಡಲೇಬೇಕು.ನಾವು ಆ ಬಗ್ಗೆ ಮಾತನಾಡಲೇಬೇಕು. ವಿಧಾನಸಭೆ ರಾಜಕಾರಣಿಗಳ ಮಾವನ ಮನೆ ಅಲ್ಲ. ಅವರ ಡ್ರಾಯಿಂಗ್ ರೂಮೋ ಬೆಡ್ ರುಮೋ ಅಲ್ಲ. ನಮ್ಮ ಪರವಾಗಿ ವಿಧಾನಸಭೆಗೆ ಹೋಗಿ ಶಾಸನ ರಚನೆ ಮಾಡಬೇಕಾದ ಈ ಜನ ಕೋಡಂಗಿಗಳಂತೆ ವರ್ತಿಸಕೂಡದು. ಹಾಗೆ ಮಾಡಿದರೆ ಅದು ಜನರಿಗೆ ಮಾಡುವ ಅವಮಾನ. ಇನ್ನು ಕಾಲಿಗೆ ಬೀಳುವ ವಿಚಾರಕ್ಕೆ ಬರೋಣ. ಕಾಲಿಗೆ ಬೀಳುವುದೆಂದರೆ ಅದು ಸಂಪೂರ್ಣ ಶರಣಾಗತಿ. ಭಾರತೀಯ ಪರಂಪರೆಯಲ್ಲಿ ದೇವರಿಗೆ, ಸಂತರಿಗೆ, ಹಿರಿಯರಿಗೆ ಕಾಲಿಗೆ ಬೀಳುವ ಪರಂಪರೆಯಿದೆ. ಇದು ನಾನು ನಿನಗೆ ಶರಣಾಗಿದ್ದೇನೆ ಎನ್ನುವುದು ಯಾರು ಕಾಲಿಗೆ ಬೀಳುತ್ತಾರೆಯೋ ಅವರಿಗೆ ತೋರಿಸುವ ಗೌರವ ಕೂಡ. ಆದರೆ ಕಾಲಿಗೆ ಬೀಳುವವನಿಗೆ, ಕಾಲಿಗೆ ಬೀಳುವವರ ಇದಕ್ಕೆ ಅರ್ಹರೆ ಎಂಬ ಅರಿವು ಇರಬೇಕು ಇಂತಹ ಅರಿವು ಇಲ್ಲದ ಕಾಲಿಗೆ ಬೀಳುವುದು ಮೂರ್ಖತನ. ಇಂದಿನ ಬದುಕಿನಲ್ಲಿ ಕಾಲಿಗೆ ಬೀಳುವುದು ಸಾಮಾನ್ಯವಾಗಿದೆ. ಜೊತೆಗೆ ಕಾಲಿಗೆ ಬೀಳುವವರು ಗೌರವದಿಂದ ಕಾಲಿಗೆ ಬೀಳುತ್ತಿದ್ದಾರೆಯೇ ಅಥವಾ ಕಾಲನ್ನು ಎಲ್ಲಿ ಹಿಡಿದು ಎಳೆಯಬೇಕು ಎಂದು ಸರಿಯಾಗಿ ನೋಡುವುದಕ್ಕಾಗಿ ಕಾಲಿಗೆ ಬೀಳುತ್ತಾರೆಯೇ ಎಂಬುದು ಅನುಮಾನ. ಕಾಲಿಗೆ ಬೀಳುವುದು ಹೇಗೆ ಸರ್ವವ್ಯಾಪಿಯಾಗಿದೆ ನೋಡಿ. ಯಾವುದೋ ನಾಯಕ ನಟ ಎದುರಿಗೆ ಕಂಡರೆ, ಯುವ ಕಲಾವಿದರು ಅವನ ಕಾಲಿಗೆ ಬೀಳುತ್ತಾರೆ. ಮಠ ಮಾನ್ಯಗಳ ಅಧಿಪತಿಗಳು ಸ್ವಾಮಿಗಳು ಕಂಡರೆ ಸಾಕು ಎಲ್ಲರೂ ಬಗ್ಗಿ ಕಾಲು ಮುಟ್ಟುತ್ತಾರೆ. ಪತ್ರಕರ್ತರೂ ಸಹ ಅಲ್ಲಲ್ಲಿ ಯಾರ ಯಾರದೋ ಕಾಲಿಗೆ ಬಿದ್ದ ವರದಿಗಳು ಬರುತ್ತವೆ. ಹೀಗೆ ಪಾದ ಮುಟ್ಟುವುದು ದೊಡ್ಡ ಪಿಡುಗಾಗಿದೆ. ಪಾದ ಮುಟ್ಟುವವರಿಗೆ ಇರಬೇಕಾದ ಕನಿಷ್ಟ ಜ್ನಾನ ಎಂದರೆ ಈ ಪಾದ ಮುಟ್ಟಿಸಿಕೊಳ್ಳುವುದಕ್ಕೆ ಅರ್ಹವಾಗಿದೆಯೆ ಎಂಬುದನ್ನು ತಿಳಿದುಕೊಳ್ಳಬೇಕಾದದ್ದು. ಅದರೆ ಈ ಪಾದ ಮುಟ್ಟುವವರು ಮತ್ತು ಮುಟ್ಟಿಸಿಕೊಳ್ಳುವವರನ್ನು ನೋಡಿದಾಗ ಭಯ ಉಂಟಾಗುತ್ತದೆ. ಹಾಗೆ ಮುಟ್ಟಿಸಿಕೊಳ್ಳುವ ಪಾದಗಳು ಎಲ್ಲೆಲ್ಲಿ ನಡೆದಾಡಿ ಬಂದಿವೆಯೋ ಎಂಬ ಪ್ರಶ್ನೆಯೂ ಮೂಡುತ್ತವೆ. ಸ್ವಾಮಿಗಳ ಪಾದಗಳು ಈಗ ಪವಿತ್ರವಾಗಿ ಉಳಿದಿಲ್ಲ. ಈ ಪಾದಗಳು ಕಂಡ ಕಂಡಲ್ಲಿ ಸುತ್ತಾಡಿ ಕಾಲಿಗೆ ಮುಟ್ಟ ಬಾರದನ್ನು ಮುಟ್ಟಿಸಿಕೊಂಡು ಬರುತ್ತಿವೆ. ಹಾಗೆ ರಾಜಕಾರಣಿಗಳ ಪಾದಗಳು. ಇತ್ತೀಚಿನ ದಿನಗಳಲ್ಲಂತೂ ರಾಜಕಾರಣಿಗಳ ಪಾದಗಳು ಪರಪ್ಪನ ಅಗ್ರಹಾರದಲ್ಲಿ ಸುತ್ತುವುದು ಹೆಚ್ಚಾಗಿವೆ. ಹಾಗೆ ಹೊಲಸು ಇರುವಲ್ಲಿ ಸುತ್ತುವ ಪಾದಗಳು ಇವೆ. ಪತ್ರಕರ್ತರು ಮುಟ್ಟುವ ಪಾದಗಳೂ ಪವಿತ್ರವಾಗಿಲ್ಲ . ಬಹುತೇಕ ಪಾದಗಳು ಅಂಟು ರೋಗಗಳನ್ನು ಪಸರಿಸುತ್ತಿವೆ.ಇಂಥಹ ಕಾಲುಗಳನ್ನು ಮುಟ್ಟುವುದು ತರವೆ ? ಪಾದವನ್ನು ಮುಟ್ಟುವ ಕೈಗಳ ವಿಚಾರಕ್ಕೆ ಬಂದರೆ ಈ ಕೈಗಳಿಗೂ ಏನೇನೋ ಮೆತ್ತಿಕೊಂಡಿದೆ. ಎಲ್ಲೆಲ್ಲೋ ಹರಿದಾಡಿ ಮಲೀನವಾದ ಕೈಗಳು. ಈ ಕೈಗಳಿಗೆ ಪಾದದ ಹೊಲಸು ಮೆತ್ತಿಕೊಂಡರೆ ? ಅವರು ಉಣ್ಣುವ ಅನ್ನ ಕೂಡ ವಿಷವಾಗುವುದಿಲ್ಲವೆ ? ಈಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆ ಸ್ನಾನದ ಬಗ್ಗೆ ಚರ್ಚೆ ಪ್ರತಿಭಟನೆ ನಡೆಯುತ್ತಿದೆ. ಇದರ ಪರವಾಗಿ ಇರುವವರು, ವಿರೋಧ ವ್ಯಕ್ತಪಡಿಸುವವರು ಟೀವಿಯ ಮುಂದೆ ಬಂದು ಹೇಳಿಕೆಗಳ ಸುರಿಮಳೆ ಗೈಯುತ್ತಿದ್ದಾರೆ. ಬ್ರಾಹ್ಮಣರ ಎಂಜಿಲೆಲೆಯ ಮೇಲೆ ಉರುಳುವುದಕ್ಕೂ, ಈ ಕೊಳಕು ಪಾದಗಳನ್ನು ಮುಟ್ಟುವ ಮಲೀನ ಕೈಗಳಿಗೂ ಇರುವ ಸಂಬಂಧ ಎಂತಹುದು ಎಂಬ ಕುತೂಹಲ ನನಗಿದೆ. ಜೊತೆಗೆ ಈ ಬಗ್ಗೆ ವೈಚಾರಿಕರು ಮತ್ತು ಹೋರಾಟಗಾರರು ಏನು ಹೇಳಬಹುದು ಎಂಬ ಕುತೂಹಲ ಕೂಡ ನನಗಿದೆ. ಹಾಗೆ ಎಂಜಿಲು ಎಲೆಯ ಮೇಲೆ ಉರುಳಿದರೆ ರೋಗಗಳು ಮರೆಯಾಗುತ್ತವೆ ಎಂದು ಹೇಳಿದ ಮಹಾತ್ಮರಾದ ಉನ್ನತ ಶಿಕ್ಷಣ ಸಚಿವ ಡಾ. ವಿ. ಎಸ್. ಆಚಾರ್ಯ ಏನು ಹೇಳಬಹುದು ಎಂದು ಕೇಳುವುದಕ್ಕೆ ನಾನು ಕಾತುರನಾಗಿದ್ದೇನೆ. ಅದರೆ ಸ್ವತ ವೈದ್ಯರಾದ ಆಚಾರ್ಯರು ಮಡೆ ಸ್ನಾನದ ವಿವಾದದ ನಂತರ ರೋಗಗ್ರಸ್ತರಾಗಿದ್ದಾರೆ ಎಂದು ಕೇಳಿದ್ದಾನೆ. ಹೀಗಾಗಿ ಅವರ ಪತಿಕ್ರಿಯೆಗಾಗಿ ನಾನು ಇನ್ನಷ್ಟು ಕಾಲ ಕಾಯಬೇಕಾಗಬಹುದು. ನಾನು ಇದುವರೆಗೆ ಯಾರ ಕಾಲಿಗೂ ಬಿದ್ದಿಲ್ಲ. ಯಾರ ಪಾದವನ್ನು ಮುಟ್ಟಿಲ್ಲ. ಸ್ವಾಮಿಗಳು ಅನಿರೀಕ್ಷಿತವಾಗಿ ಸಿಕ್ಕಾಗ ಅವರಿಗೆ ಕೈ ುಗಿದಿದ್ದು ಉಂಟು. ಆದರೆ ಅವರನ್ನು ಮುಟ್ಟಿಸಿಕೊಂಡಿಲ್ಲ. ಹಾಗೆ ನಾನು ಚಾನಲ್ ಗಳಲ್ಲಿ ಕೆಲಸ ಮಾಡುವಾಗಲೂ ಯಾರೇ ಬಂದರೂ ಅವರು ಪಾದವನ್ನು ಸ್ಪರ್ಷಿಸುವ ಪಾಪ ಮಾಡಿಲ್. ಹೀಗಾಗಿ ಈ ಬಗ್ಗೆ ಮಾತನಾಡುವ ನೈತಿಕ ಶಕ್ತಿ ನನಗಿದೆ ಎಂದುಕೊಂಡಿದ್ದೇನೆ ಕೊನೆಯದಾಗಿ ನನಗೆ ಯಡಿಯೂರಪ್ಪನವರ ಬಗ್ಗೆ ನನಗೆ ಕನಿಕರವಿದೆ. ಅವರ ಕಾಲು ಮುಟ್ಟಿದವರು ಕಾಲಿನ ಯಾವ ಭಾಗವನ್ನು ಹಿಡಿದು ಎಳೆಯಬೇಕು ಎಂಬ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಂಡಿರುತ್ತಾರೆ ಎಂಬ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ.

Sunday, December 4, 2011

ರಾಬಿನ್ ಹುಡ್ ರಾಜಕಾರಣ ಮತ್ತು ಹೊಸ ಸಮಾಜವಾದ !

ಹಲವು ದಿನಗಳ ನಂತರ ಬಳ್ಳಾರಿ ಶಾಂತವಾಗಿದೆ. ಶ್ರೀರಾಮುಲು ಎಂಬ ಹಿಂದುಳಿದ ವರ್ಗಗಳ ನಾಯಕ, ಜೈಲು ಪಾಲಾಗಿರುವ ಜನಾರ್ಧನ ರೆಡ್ದಿ ಅವರ ಅಪ್ತ, ಜಯಶಾಲಿಯಾಗಿದ್ದಾರೆ. ಅವರು ಬಳ್ಳಾರಿಯ ರಸ್ತೆಗಳಲ್ಲಿ ವಾಹನದ ಮೇಲೆ ಕುಳಿತು ಕೈಬೀಸಿಯಾಗಿದೆ. ಅವರ ಪಕ್ಕದಲ್ಲಿ ಅವರ ಅಳಿಯ ಕಂಪ್ಲಿ ಶಾಸಕ, ಸುರೇಶ ಬಾಬು ಮತ್ತು ಇನ್ನೊಂದು ಬದಿಯಲ್ಲಿ ಸೋಮಶೇಖರ ರೆಡ್ದಿ. ರೆಡ್ದಿ ಸಹೋದರಲ್ಲಿ ಒಬ್ಬರಾದ ಕರುಣಾಕರ ರೆಡ್ಡಿ ವಿಜಯದ ಮೆರವಣಿಗೆಯಲ್ಲೂ ಕಾಣಿಸಿಕೊಂಡಿಲ್ಲ. ಈ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಡಪದಲ್ಲಿರುವ ತಮ್ಮ ಹೆಂಡತಿಯ ಮನೆಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಇರಲಿ ಕರುಣಾಕರ ರೆಡ್ಡಿ ಒಂದು ರೀತಿಯಲ್ಲಿ ಭೂಗತರಾಗಿದ್ದಾರೆ. ಅಂದರೆ ರೆಡ್ಡಿ ಸಹೋದರರ ನಡುವೆಯೂ ಭಿನ್ನಮತ ಇದೆ.ಇಲ್ಲದಿದ್ದರೆ ವಿಜಯದ ಮೆರವಣಿಗೆಯಲ್ಲಾದರೂ ಕರುಣಾಕರ ರೆಡ್ಡಿ ಕಾಣಿಸಿಕೊಳ್ಳಬೇಕಾಗಿತ್ತು. ರೆಡ್ಡಿಗಳ ಆಪ್ತರ ಪ್ರಕಾರ ಕಡಪದಲ್ಲಿಯೇ ಕರುಣಾಕರ ರೆಡ್ಡಿ ಮನೆಯೊಂದನ್ನು ಕಟ್ಟಿಸಿದ್ದಾರಂತೆ. ಅವರು ಅಲ್ಲಿಯೇ ಕಾಯಂ ಆಗಿ ಇರುತ್ತಾರೆಯೆ ಕರ್ನಾಟಕಕ್ಕೆ ಬರುತ್ತಾರೆಯೆ ಗೊತ್ತಿಲ್ಲ. ಈ ಜಯ ಕುಸಿಯುತ್ತಿದ್ದ ರೆಡ್ಡಿ ಸಾಮ್ರಾಜ್ಯಕ್ಕೆ ಒಂದು ಸಣ್ಣ ಆಸರೆ ಎಂಬುದು ನಿಜ. ಈ ಚುನಾವಣೆಯಲ್ಲಿ ರಾಮುಲು ಸೋತಿದ್ದರೆ, ಸಾಮ್ರಾಜ್ಯದ ಪತನ ನಿಚ್ಚಳವಾಗುತ್ತಿತ್ತು. ಕರ್ನಾಟಕದ ರಾಜಕೀಯದ ಒಂದು ಅಧ್ಯಾಯ ಮುಗಿಯುತ್ತಿತ್ತು. ಆದರೆ ಹಾಗಾಗಲಿಲ್ಲ. ವಿಜಯದ ಮೆರವಣಿಗೆಯ ಸಂದರ್ಭದಲ್ಲಿ ರಾಮುಲು ಹೇಳಿದ ಒಂದು ಮಾತು: ನಾನು ಹಿಂದುಳಿದ ವರ್ಗದಿಂದ ಬಂದವನು ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಯಿತು ! ಈ ಮಾತು ಅವರ ಮುಂದಿನ ರಾಜಕೀಯ ನಡೆಯ ಮುನ್ಸೂಚಿ ಎಂದೇ ನನಗೆ ಅನ್ನಿಸುತ್ತದೆ. ಅವರು ಹಿಂದುಳಿದ ವರ್ಗಗಳ ರಾಜಕಾರಣಕ್ಕೆ ನಿಶ್ಚಯಿಸಿ ಆಗಿದೆ. ಅವರು ಹೊಸ ಪಕ್ಷ ಅಹಿಂದದಂತೆ, ಹಿಂದುಳಿದ ವರ್ಗ ಮತ್ತು ಮುಸ್ಲೀಮ್ ಅವರ ಬೆಂಬಲದ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ. ಈ ಕಾರಣದಿಂದಲೇ ವಿಜಯಘೋಷ ಆಗುತ್ತಿರುವಂತೆ ದೇವಾಲಯಕ್ಕೆ ಹೋಗಿ ಬಂದ ರಾಮುಲು ಮಸೀದಿ ಚರ್ಚಗಳಿಗೂ ಹೋಗಿ ಬಂದಿದ್ದಾರೆ. ತಲೆಯ ಮೇಲೆ ಮುಸ್ಲೀಮ್ ಟೋಪಿಯನ್ನು ಹಾಕಿಕೊಂಡಿದ್ದಾರೆ. ಇದೆಲ್ಲ ಅವರ ಮುಂದಿನ ಹೆಜ್ಜೆಯ ಮುನ್ಸೂಚನೆ.ಈ ಝಾಆಟೀ ರಾಜಕಾರಣ ಅವರನ್ನು ಎಲ್ಲಿಗೆ ಒಯ್ಯಬಹುದು ? ಅವರು ಕರ್ನಟಕದಲ್ಲಿ ಪ್ರಬಲ ಶಕ್ತಿಯಗಿ ಉಳಿಯಬಹುದೆ ? ಹೇಳುವುದು ಕಷ್ಟ. ಯಾಕೆಂದರೆ ಅಹಿಂದ ಸಂಘಟನೆಯ ನೇತೃತ್ವ ಒಹಿಸಿ ಹೋರಾಡಿದ ಸಿದ್ದರಾಮಯ್ಯ ಅವರೇ ಈ ಯತ್ನದಲ್ಲಿ ಸಫಲರಾಗಲಿಲ್ಲ. ಹೀಗಿರುವಾಗ ರೆಡ್ಡಿಗಳನ್ನು ಹಿಂದಕ್ಕೆ ಇಟ್ಟುಕೊಂಡು ಹೊರಟಿರುವ ಶ್ರೀರಾಮುಲು ಗೆಲ್ಲುತ್ತಾರೆ ಎಂದು ಹೇಳಲಾಗದು. ಆದರೆ ರೆಡ್ದಿ ಸಹೋದರರಿಗೆ ಈ ನಡೆ ಅನಿವಾರ್ಯ. ಅವರಿಗೆ ಬೇರೆ ದಾರಿಯಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರು ಹೋಗುವಂತಿಲ್ಲ. ಜೆಡಿಎಸ್ ಸೇರಿದರೆ ಇರುವ ಮರ್ಯಾದೆಯೂ ಹೋಗುತ್ತದೆ. ಬಿಜೆಪಿಯಲ್ಲಿ ಇರುವ ಸ್ಥಿತಿ ಇಲ್ಲ. ಉಳಿದ ದಾರಿ ಹೊಸ ಪಕ್ಷ ಕಟ್ಟುವುದು ಮಾತ್ರ. ರಾಜಕಾರಣದಲ್ಲಿ ನಾಯಕನೊಬ್ಬನ ಅನಿವಾರ್ಯತೆ ಹೊಸ ಪಕ್ಷದ ಹುಟ್ಟಿಗೆ ಕಾರಣವಾಗಬಹುದಾದರೂ ಆ ಪಕ್ಷದ ಯಶಸ್ಸಿಗೆ ಅಷ್ಟೇ ಸಾಲದು. ಕರ್ನಾಟಕದ ಇತಿಹಾಸವನ್ನೇ ನೋಡಿ. ವಿಅಯಕ್ತಿಕ ಕಾರಣಗಳಿಂದಾಗಿ ಪ್ರಾದೇಶಿಕ ಪಕ್ಷವನ್ನು ಹುಟ್ಟು ಹಾಕಿದ ದೇವರಾಜ ಅರಸು. ಆರ್. ಗುಂಡೂರಾವ್, ಬಂಗಾರಪ್ಪ ಎಲ್ಲರೂ ನೆಲ ಕಚ್ಚಿದರು. ಅವರ ಕಿಸೆ ಬರಿದಾದಾಗ ಮತ್ತೆ ಮಾತ್ರ ಪಕ್ಷಕ್ಕೆ ಮರಳಿದರು, ಇಲ್ಲವೇ ನಾಮಾವಶೇಷವಾದರು. ಇತಿಹಾಸ ಹೀಗಿರುವಾಗ ಶ್ರೀರಾಮುಲು ಮತ್ತು ಅವರ ಬಳಗಕ್ಕೆ ಇತಿಹಾಸವನ್ನು ಬದಲಿಸುವ ಹೊಸ ಇತಿಹಾಸವನ್ನು ಬರೆಯುವ ಶಕ್ತಿ ಇದೆಯೆ ? ಈಗಿನ ಪರಿಸ್ಥಿತಿ ನೋಡಿದರೆ ಈ ಸಾಧ್ಯತೆ ತುಂಬಾ ಕಡಿಮೆ ಎಂದೇ ಅನ್ನಿಸುತ್ತದೆ. ಶ್ರೀರಾಮುಲು ಮಂತ್ರಿಯಾಗಿ ಕೆಲಸ ಮಾಡಿದರೂ ಅವರೆಂದೂ ರಾಜ್ಯ ನಾಯಕರಾಗಿ ಪರಿಗಣಿತರಾದವರಲ್ಲ. ಜೊತೆಗೆ ರಾಜ್ಯ ನಾಯಕರಾಗಿ ಹೊರಹೊಮ್ಮುವ ನಾಯಕತ್ವದ ಗುಣ ಅವರಲ್ಲಿ ಕಾಣುವುದಿಲ್ಲ.ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಅವರ ಪ್ರಭಾವ ಸೀಮಿತ. ಇದು ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕಲು ಸಾಲದು. ಶ್ರೀರಾಮುಲು ಹೃದಯವಂತ ಎಂದು ಹೇಳುವವರಿದ್ದಾರೆ. ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದಕ್ಕೆ ಸಣ್ನ ಉದಾಹರಣೆಯೊಂದು ಇಲ್ಲಿದೆ. ಒಂದು ದಿನ ಒಬ್ಬ ಹೆಂಗಸು ರಾಮುಲು ಮನೆಗೆ ಬಂದಳು. ಅವಳ ಮಗನಿಗೆ ಮೂತ್ರಪಿಂಡದ ಸಮಸ್ಯೆ. ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವ್ಯವಸ್ಥೆ ಕೆಟ್ತು ಹೋಗಿತ್ತು. ಮಗನಿಗೆ ಡಯಾಲಿಸಿಸ್ ಮಾಡಿಸುವ ಅನಿವಾರ್ಯತೆ ಆ ಹೆಂಗಸಿಗೆ. ಶ್ರೀರಾಮುಲು ಅವರನ್ನು ನೋಡಿ ಆಕೆ ಕೇಳಿಕೊಂಡಿದ್ದು ಇಷ್ಟೇ. ದಯವಿಟ್ಟು ಡಯಾಲಿಸಿಸ್ ಸರಿಪಡಿಸಿ.ನನ್ನ ಮಗನಿಗೆ ಡಯಾಲಿಸಿಸ್ ಮಾಡಿಸಬೇಕಾಗಿದೆ. ಇದಕ್ಕೆ ರಾಮುಲು ಪ್ರತಿಕ್ರಿಯೆ ಏನು ಗೊತ್ತೆ ? ಈ ವ್ಯವಸ್ಥೆ ಯಾವಾಗ ಸರಿಯಾಗುತ್ತದೇಯೋ ಗೊತ್ತಿಲ್ಲ. ಒಂದು ಕೆಲಸ ಮಾಡಿ ಬೆಂಗಳೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ ಅವರು ೩೦,೦೦೦ ರೂಪಾಯಿಗಳನ್ನು ಕಿಸೆಯಿಂದ ತೆಗೆದುಕೊಟ್ಟರಂತೆ ! ಇದು ಶ್ರೀರಾಮುಲು ಅವರ ಬಳ್ಳಾರಿ ರಾಜಕಾರಣದ ಪರಿ. ಅವರು ವ್ಯಕ್ತಿಗತವಾಗಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಮದುವೆಗೆ, ಮುಂಜಿಗೆ, ಅಂತ್ಯಕ್ರಿಯೆಗೆ ಹೀಗೆ ಎಲ್ಲದಕ್ಕೂ ವ್ಯಕ್ತಿಗತವಾಗಿ ಸಹಾಯ ಮಾಡಿದ್ದಾರೆ. ವೈಯಕ್ತಿಕ ಸಹಾಯ ಪಡೆದವರು ಅವರೆನ್ನು ಎಂದೂ ಮರೆಯುವುದಿಲ್ಲ.ಇದೇ ರಾಮುಲು ರಾಬಿನ್ ಉಡ್ ಮಾಧರಿ. ಇಂಗ್ಲೇಂಡಿನ ಜನಪದ ನಾಯಕನಾಗಿದ್ದವನು ರಾಬಿನ್ ಹುಡ್. ಆತ ಒಂದು ರೀತಿಯಲ್ಲಿ ಸಾಮಾನ್ಯ ಕಳ್ಳ. ಆದರೆ ಆತ ಸುಲಿದಿದ್ದನ್ನು ಬಡವರಿಗೆ ಹಂಚುತ್ತಿದ್ದ. ಪ್ರಭೂತ್ವದ ವಿರುದ್ಧ ಭೂಗತನಾಗಿದ್ದುಕೊಂಡೇ ಹೋರಾಟ ಮಾಡುತ್ತಿದ್ದ. ಇದೇ ರಾಬಿನ್ ಹುಡ್ ಮಾಧರಿ. ಈ ಮಾಧರಿಯನ್ನು ಅನುಸರಿಸುತ್ತಿರುವ ರಾಮುಲು ಅವರಿಗೆ ಯಶಸ್ಸ ದಕ್ಕಿದೆ.ಆದರೆ ಒಬ್ಬ ರಾಜ್ಯ ಮಟ್ಟದ ನಾಯಕ ಈ ರಾಬಿನ್ ಉಡ್ ರಾಜಕಾರಣವನ್ನು ಎಷ್ಟು ದಿನ ಮಾಡಬಹುದು ? ರಾಜಕಾರಣ ಎನ್ನುವುದು ವೈಯಕ್ತಿಕ ನೆಲೆಯಲ್ಲಿ ನಡೆಯುವಂತಹುದೆ ಅಥವಾ ಅದಕ್ಕೆ ಸಾಮುದಾಯಿಕ ನೆಲೆಗಟ್ಟು ಬೇಕೆ ? ಈ ಪ್ರಶ್ನೆ ಪ್ರಸಕ್ತ ಸಂದರ್ಭದಲ್ಲಿ ತುಂಬಾ ಮುಖ್ಯ. ರಾಜಕಾರಣಿಗಳಿಗೆ ಸಾಮುದಾಯಿಕ ಹೊಣೆಗಾರಿಕೆ ಇದೆ. ಅವರು ಸಮಾಜಕ್ಕೆ ಸೇರಿದವರೇ ಹೊರತು ಯಾವುದೇ ವ್ಯಕ್ತಿಗಳಿಗಲ್ಲ. ಸಮುದಾಯದ ಒಳಿತಿಗೆ ಕೆಲಸ ಮಾಡಬೇಕಾದ್ದು ಅವರ ಜವಬ್ದಾರಿ. ಆದರೆ ನಮ್ಮ ರಾಜಕಾರಣದಲ್ಲಿ ವೈಯಕ್ತಿಕ ಸಹಾಯ ಮಾಡಿದವರೇ ಸತತವಾಗಿ ಆರಿಸಿ ಬರುತ್ತಿದ್ದಾರೆಯೇ ಹೊರತೂ ಸಮಾಜಕ್ಕಾಗಿ ಕೆಲಸ ಮಾಡಿದವರಲ್ಲ. ಅಂದರೆ ರಾಜಕಾರಣ ಸಾಮುದಾಯಿಕ ನೆಲೆಗಟ್ಟಿನಿಂದ ವೈಯಕ್ತಿಕ ನೆಲೆಗಟ್ಟಿಗೆ ಬಂದು ನಿಂತಿದೆ. ವಯಕ್ತಿಕ ನೆಲೆಗಟ್ಟಿನ ರಾಜಕಾರಣದಲ್ಲಿ ಸಮುದಾಯ ಮುಖ್ಯವಾಗುವುದಿಲ್ಲ. ಅಲ್ಲಿ ನಡೆಯುವುದೆಲ್ಲ ವ್ಯಕ್ತಿ ಕೇಂದ್ರಿತವಾಗಿಯೇ. ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೇ ತೆಗೆದುಕೊಳ್ಳಿ. ಅವರು ಮಠ ಮಾನ್ಯಗಳು ಸೇರಿದಂತೆ ಎಲ್ಲರಿಗೂ ಹಣ ಹಂಚಿದ್ದಾರೆ. ಅವರಿಂದ ಲಾಭ ಪಡೆದವರು ಅವರೆನ್ನು ಎಂದೂ ಮರೆಯುವುದಿಲ್ಲ. ಅಂದರೆ ದುಡ್ಡಿನ ಸಹಾಯ ಮಾಡುವ ಯಡಿಯೂರಪ್ಪ ಮತ್ತು ಅವರಿಂದ ಸಹಾಯ ಪಡೆದ ವ್ಯಕ್ತಿಗಳ ನಡುವಿನ ವೈಯಕ್ತಿಕ ಸಂಬಂಧ ಇದು. ಆದರೆ ರಾಜಕಾರಣ ಎನ್ನುವುದು ಹಾಗಲ್ಲ. ಅದು ಸಾಮುದಾಯಿಕ ನೆಲೆಗಟ್ಟಿನ ಮೇಲೆ ನಿಂತಿರಬೇಕು. ರಾಜಕಾರಣಿಗೆ ಉತ್ತರದಾಯಿತ್ವ ಇರಬೇಕು. ಈ ಉತ್ತರದಾಯಿತ್ವ ವಯಕ್ತಿಕ ನೆಲೆಗಟ್ಟಿನ ಮೇಲೆ ನಿಂತಿರುವುದಿಲ್ಲ. ಇದು ನಿಂತಿರುವುದು ಸಾಮುದಾಯಿಕ ನೆಲೆಗಟ್ಟಿನ ಮೇಲೆ. ಅಂದರೆ ರಾಜಕಾರಣಿಗಳು ಹಾಗೂ ಅಧಿಕಾರಸ್ತರು ಉತ್ತರ ನೀಡಬೇಕಾದ್ದು ಸಮಾಜಕ್ಕೆ ಹೊರತೂ ಯಾವುದೇ ವ್ಯಕ್ತಿಗಳಿಗಲ್ಲ. ಇಡೀ ಸಮಾಜದ ಕಲ್ಪನೆ ಇಂದು ಹೊರಟು ಹೋಗಿದೆ. ಯಡಿಯೂರಪ್ಪ ಸಮಾಜ ಎಂದ ತಕ್ಷಣ ಲಿಂಗಾಯಿತರು ನೆನಪಾಗುತ್ತಾರೆ. ಕುಮಾರಸ್ವಾಮಿ ದೇವೇಗೌಡರಿಗೆ ಸಮಾಜ ಎಂದರೆ ಒಕ್ಕಲಿಗರು. ರಾಮುಲು ಈಗ ವಾಲ್ಮೀಕಿ ಸಮಾಜದ ಬಗ್ಗೆ ಮಾತನಾಡತೊಡಗಿದ್ದಾರೆ. ಇದು ಇವರೆಲ್ಲ ಸಮಾಜವಿಜ್ನಾನ ಮತ್ತು ಸಮಾಜವಾದ. ಈ ಹೊಸ ಸಮಾಜ ವಿಜ್ನಾನ ಇಂದಿನ ರಾಜಕಾರಣವನ್ನು ನಿರ್ದೇಶಿಸುತ್ತಿದೆ. ಇಂಥಹ ಸಮಾಜ ವಿಜ್ನಾನದ ಹರಿಕಾರರು ಎಲ್ಲಿ ತಪ್ಪುತ್ತಾರೆಂದರೆ, ತಮ್ಮ ಸಮಾಜವೊಂದೇ ಗೆಲುವನ್ನು ತಂದುಕೊಡುತ್ತದೆ ಎಂದು ನಂಬಿಕೆಯ ಮೂಲಕ. ಶ್ರೀರಾಮುಲು ಈಗ ಹೊಸ ಪಕ್ಷ ಕಟ್ಟುವ ಸಂದರ್ಭದಲ್ಲಿ ಇದೇ ಸಮಾಜವಾದವನ್ನು ಮುಡಿಗೇರಿಸಿಕೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ. ಹಾಗೆ ಯಡಿಯೂರಪ್ಪ ಮಾಡಿದ ತಪ್ಪನ್ನೇ ಅವರು ಮಾಡುವ ಲಕ್ಷಣ ಕಂಡು ಬರುತ್ತಿದೆ. ಬಳ್ಳಾರಿಯಲ್ಲಿ ಲಿಂಗಾಯಿತರು ಯಡಿಯೂರಪ್ಪ ಅವರ ಅಭ್ಯರ್ಥಿಯನ್ನು ಗೆಲ್ಲಿಸಲಿಲ್ಲ ಎಂಬುದು ರಾಮುಲು ಅವರಿಗೆ ಅರ್ಥವಾದಂತೆ ಕಂಡುಬರುತ್ತಿಲ್ಲ. ಇತಿಹಾಸದಿಂದ ಪಾಠ ಕಲಿಯದವನು ಏನನ್ನೂ ಮಾಡಲಾರ. ಯಶಸ್ವಿ ನಾಯಕನೂ ಆಗಲಾರ.

Wednesday, November 30, 2011

ನನ್ನೂರಿನ ಸಾಹಿತ್ಯ ಸಮ್ಮೇಳನ; ಸಾಹಿತ್ಯ ದಿಂದ ಬದುಕೇ ಅಥವಾ ಬದುಕಿನಿಂದ ಸಾಹಿತ್ಯವೇ ?

ಬೇಡ್ಕಣಿ ಎಂಬ ಆ ಪುಟ್ಟ ಊರು ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಸುಮಾರು ೬ ಕಿಮೀ ದೂರದಲ್ಲಿ. ಅಲ್ಲಿ ಒಂದು ಕಾಲದಲ್ಲಿ ಕೋಟೆಯಿತ್ತು. ಆ ಕುರುಹುಗಳು ಈಗಲೂ ಇವೆ. ಕೋಟೆ ಆಂಜನೇಯ ಈಗಲೂ ಅಲ್ಲಿ ಕುಳಿತಿದ್ದಾನೆ. ಬೇಡ್ಕಣಿಯಿಂದ ಎರಡು ಕಿಮೀ ದೂರದಲ್ಲಿ ಇರುವುದು ಭುವನಗಿರಿ. ಕನ್ನಡಿಗರ ನಾಡ ದೈವ ಭುವನೇಶ್ವರಿ ಇಲ್ಲಿಯ ಗುಡ್ಡದ ಮೇಲಿದ್ದಾಳೆ. ಪ್ರಾಯಶಃ ಕರ್ನಾಟಕದಲ್ಲಿ ಇಂತಹ ಇನ್ನೊಂದು ಭುವನೇಶ್ವರಿ ದೇವಾಲಯ ಇಲ್ಲ. ಇಲ್ಲಿಂದ ಇನ್ನು ಕೆಲವೇ ಕೀಮೀ ದೂರದಲ್ಲಿ ಬಿಳಗಿ ಇದೆ. ಈ ಬಿಳಗಿ ಸಂಸ್ಥಾನದ ಕುರುಹುಗಳಾಗಿ ಜೈನ ಬಸದಿ, ಗೋಲ್ ಬಾವಿಯೂ ಇದೆ. ಈಗ ಗೋಲ ಬಾವಿ ಶಿತಿಲಗೊಂಡಿದೆ. ಈ ಬೇಡ್ಕಣಿ ಈಗ ಪ್ರಸಿದ್ಧಿ ಹೊಂದುವುದಕ್ಕೆ ಇನ್ನೊಂದು ಕಾರಣ ಇಲ್ಲಿರುವ ಶನಿ ದೇವಾಲಯ. ಈ ಶನಿ ತುಂಬಾ ಫವರ್ ಫುಲ್ ಎಂದು ಉತ್ತರ ಕನ್ನಡದ ಜನ ನಂಬಿದ್ದಾರೆ. ವಾರದ ಕೇಲವು ದಿನಗಳಲ್ಲಿ ಇಲ್ಲಿಗೆ ನೂರಾರು ಭಕ್ತಾದಿಗಳು ಬಂದು ಶನಿ ದೇವರ ಪೂಜೆ ಮಾಡಿಸಿ ಸಮಾಧಾನದಿಂದ ಹಿಂತಿರುಗುತ್ತಾರೆ. ಶನಿದೇವರಿಂದಾಗಿ ಊರಿಗೆ ಇನ್ನಷ್ಟು ಜನಪ್ರಿಯತೆ ಬಂದಿದೆ. ಇದೇ ಊರಿನಲ್ಲಿ ನಡೆದಿದ್ದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ. ಇಲ್ಲಿ ಸಮ್ಮೇಳನ ಯಶಸ್ವಿಯಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೋಹಿದಾಸ್ ನಾಯಕರಿಗೆ ಇಂತಹ ಅನುಮಾನವಿತ್ತು. ಬೆಳಿಗ್ಗೆ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನೋಡಿದಾಗ ನನಗೆ ಮನಸ್ಸು ತುಂಬಿ ಬರುವುದಕ್ಕೆ ಕಾರಣಗಳಿದ್ದವು. ಅಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಹೆಂಗಸರು ರೈತ ಕುಟುಂಬಕ್ಕೆ ಸೇರಿದವರು. ತಮ್ಮ ಬದುಕನ್ನು ನಿರ್ವಹಿಸಲು ಇಡೀ ದಿನ ತೋಟ ಗದ್ದೆಗಳಲ್ಲಿ ದುಡಿಯುವವರು. ಅವರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಧ್ಯಕ್ಷರ ಪೂರ್ಣ ಕುಂಭ ಸ್ವಾಗತಕ್ಕೆ ಸಿದ್ಧರಾಗಿದ್ದರು. ದುಡಿಯುವ ಕೈಗಳು ಹೀಗೆ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದನ್ನು ನಾನು ನೋಡಿದ್ದು ಕಡಿಮೆ. ಸಾಧಾರಣವಾಗಿ ಮೇಲ್ವರ್ಗದ ಜನ ಇಂಥಹ ಮೆರವಣಿಗೆಯಲ್ಲಿ ಸಾಗುವುದು ಸಾಮನ್ಯ. ಆದರೆ ಇಲ್ಲಿನ ಪರಿಸ್ಥಿತಿಯೇ ಬೇರೆಯಾಗಿತ್ತು. ಅಲ್ಲಿ ನೋಡಿದಾಗ ಇದು ಸಾಹಿತ್ಯ ಸಮ್ಮೇಳನವೇ ಅಥವಾ ರೈತ ಸಮ್ಮೇಳನವೇ ಎನ್ನುವ ಹಾಗೆ. ಎಲ್ಲರ ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು.. ಗುಡಿಸಿ ಸಾರಿಸಿ ಮಾವಿನ ತೋರಣ ಕಟ್ಟಲಾಗಿತ್ತು. ಸಮ್ಮೇಳನವನ್ನು ಉದ್ಘಾಟಿಸಿದವರು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ. ನನ್ನ ಕೆಲಸ ಸಮಾರೋಪ ಭಾಷಣ ಮಾಡುವುದಾಗಿತ್ತು. ಆದರೆ ಉದ್ಘಾಟನಾ ಸಮಾರಂಭದಲ್ಲಿ ನನ್ನನ್ನು ವೇದಿಕೆಗೆ ಕ್ ಕರೆದು ಪುಸ್ತಕ ಬಿಡುಗಡೆಯ ಕೆಲಸವನ್ನು ಒಹಿಸಲಾಯಿತು. ನಾನು ತುಂಬಾ ಸಂತೋಷದಿಂದ ಹತ್ತು ಪುಸ್ತಕಗಳ ಬಿಡುಗಡೆ ಮಾಡಿದೆ. ಹಾಗೆ ಭಾಷಣ ಮಾಡುವಂತೆ ಸೂಚಿಸಿದರೂ ಸಂಜೆ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡುವುದಾಗಿ ಹೇಳಿದೆ. ನನಗೆ ಅಲ್ಲಿ ಭಾಷಣ ಮಾಡುವುದಕ್ಕಿಂತ ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಅನ್ನಿಸಿತ್ತು. ಹಾಗೆ ಅಲ್ಲಿ ನಡೆಯುವ ಚರ್ಚೆ ಮತ್ತು ಸಂವಾದವನ್ನು ಕೇಳುವುದು ಭಾಷಣ ಮಾಡುವುದಕ್ಕಿಂತ ಮುಖ್ಯವಾಗಿತ್ತು. ನನಗೆ ನನ್ನ ಜಿಲ್ಲೆಯ ಬಗ್ಗೆ ಹೆಮ್ಮೆ ಮತ್ತು ಗೌರವ ಇರುವುದಕ್ಕೆ ಹಲವು ಕಾರಣಗಳಿಗಾಗಿ. ಇಲ್ಲಿನ ಸಾಮಾನ್ಯ ಮನುಷ್ಯ ಕೂಡ ಸಾಹಿತ್ಯದ ಬಗ್ಗೆ ಮಾತನಾಡಬಲ್ಲ. ಹೊಸ ಕೃತಿಗಳನ್ನು ವಿಮರ್ಷೆ ಮಾಡಬಲ್ಲ. ಹಾಗೆ ಒಂದು ರಸ್ತೆಯಲ್ಲಿ ಹೋದರೆ ನಿಮಗೆ ಹಲವು ಕವಿಗಳು ಎದುರಾಗುತ್ತಾರೆ.ಕಾವ್ಯದ ಬಗ್ಗೆ ಮಾತನಾಡುತ್ತಾರೆ. ಅವರ ಸಾಹಿತ್ಯ ಪ್ರೀತಿ ದೊಡ್ದದು. ನಾನು ೮೦ ದಶಕದಲ್ಲಿ ನಾವೆಲ್ಲ ಸೇರಿ ವ್ಯವಸ್ಥೆ ಮಾಡಿದ್ದ ಜಿಲ್ಲಾ ಬಂಡಾಯ ಸಾಹಿತ್ಯ ಸಮ್ಮೇಳನದ ನೆನಪು ಮಾಡಿಕೊಂಡು ನನ್ನ ಮಾತು ಪ್ರಾರಂಭಿಸಿದೆ. ಆ ಸಮ್ಮೇಳನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ನಮ್ಮೂರಿನ ಆಗಿನ ಬಿಡಿಓ ಮುನಿವೆಂಕಟಪ್ಪ ಅವರನ್ನು ನೆನಪು ಮಾಡಿಕೊಂಡೆ. ಅವರು ಆಗಲೇ ಹಲವಾರು ಕವನಗಳನ್ನು ಬರೆದಿದ್ದರು. ಅದನ್ನು ಪ್ರಕಟಿಸುವ ಇರಾದೆ ಅವರದಾಗಿತ್ತು. ಹೀಗಾಗಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ದೇವನೂರು ಮಹಾದೇವ, ದೇವಯ್ಯ ಹರವೆ, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ ಅವರಿಗೆ ಮುನಿವೆಂಕಟಪ್ಪ ತೋರಿಸಿದರು. ಅವರೆಲ್ಲ ಕವನ ಸಂಕಲನವನ್ನು ಹೊರ ತರುವಂತೆ ಸಲಹೆ ನೀಡಿದರು. ಆದರೆ ನನಗೆ ಕೆಲವು ಅನುಮಾನಗಳಿದ್ದವು. ಅವರ ಕವನಗಳು ಹೇಳಿಕೆಗಳಂತೆ ಇದ್ದವು. ಹಾಗೆ ಇಂದಿರಾ ಗಾಂಧಿ ಅವರನ್ನು ಕಟುವಾಗಿ ಟೀಕಿಸಿದ ಕವನವೂ ಇತ್ತು. ಇಂತಹ ಕವನವನ್ನು ಒಳಗೊಂಡ ಕವನ ಸಂಕಲನ ಹೊರಕ್ಕೆ ಬಂದರೆ, ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬ ಆತಂಕ ನನ್ನದಗಿತ್ತು. ಕೋಲಾರದಲ್ಲಿ ಜೀತದಾಳಾಗಿ ನಂತರ ಸರ್ಕಾರಿ ಕೆಲಸಕ್ಕೆ ಸೇರಿದ್ದ ಅವರು ಕೆಲಸ ಕಳೆದುಕೊಳ್ಳುವುದು ನನಗೆ ಬೇಕಾಗಿರಲಿಲ್ಲ. ಆದರೆ ಎಲ್ಲ ಬಂಡಾಯ ಸಾಹಿತಿಗಳು ಕವನ ಸಂಕಲನನ್ನು ತರುವಂತೆ ಸಲಹೆ ನೀಡಿದರು. ಸಿದ್ದಾಪುರದಲ್ಲಿ ಈ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದ ಕೆಲವೇ ತಿಂಗಳುಗಳಲ್ಲಿ ಮುನಿವೆಂಕಟಪ್ಪನವರ ಬೆಂಕಿಯ ನಡುವೆ ಎಂಬ ಕವನ ಸಂಕಲನ ಹೊರಕ್ಕೆ ಬಂತು. ಹಾಗೆ ಅಂದಿನ ಗುಂಡೂರಾವ್ ಸರ್ಕಾರ ಮುನಿವೆಂಕಟಪ್ಪ ನವರನ್ನು ಅಮಾನತು ಮಾಡಿತು. ಸುಮಾರು ಒಂದೂವರೆ ವರ್ಷಗಳ ಕಾಲ ಅಮಾನತು ರದ್ದುಪಡಿಸಲು ಮುನಿವೆಂಕಟಪ್ಪ ಯತ್ನ ನಡೆಸಿದರೂ ಸಫಲರಾಗಲಿಲ್ಲ. ನಂತರ ಜನತಾ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲಂಕೇಶರು ಈ ವಿಚಾರವನ್ನು ನಝೀರ್ ಸಾಬರ ಗಮನಕ್ಕೆ ತಂದರು. ಮುನಿವೆಂಕಟಪ್ಪ ನವರ ಅಮಾನತು ರದ್ದಾಯಿತು. ನಾನು ಇದನ್ನೆಲ್ಲ ಸಮ್ಮೇಳನದಲ್ಲಿ ನೆನಪು ಮಾಡಿಕೊಂಡೆ. ಸಾಹಿತ್ಯ ಮುಖ್ಯವೇ ಅಥವಾ ಬದುಕೆ ? ಸಾಹಿತ್ಯ ಬದುಕಿನ ಮೇಲೆ ಪ್ರಭಾವ ಬೀರುತ್ತದೆಯೆ ಅಥವ ಬದಕಿನ ದಾಖಲೇಯೆ ಸಾಹಿತ್ಯವೆ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ನಾನು ನನ್ನ ಮಾತನ್ನು ಮುಂದುವರಿಸಿದೆ. ನಮಗೆಲ್ಲ ನಮ್ಮ ಒಳಗಿನ ಜಗತ್ತೊಂದು ಇರುತ್ತದೆ. ಹಾಗೆ ಹೊರಗಿನ ಜಗತ್ತು. ಒಳಗಿನ ಜಗತ್ತನ್ನು ನಾವು ಕಟ್ಟಿಕೊಳ್ಳುವ ರೀತಿಯೇ ಅದ್ಭುತ. ಹೊರ ಜಗತ್ತಿನಿಂದ ಪ್ರೇರಿತವಾಗುವ ಈ ನಮ್ಮೋಳಗಿನ ಜಗತ್ತು ಹಲವು ರೀತಿಯ ದ್ವಂದ್ವಗಳನ್ನು ಹೊಂದಿರುತ್ತವೆ. ಹಾಗೆ ಅಲ್ಲಿ ಕನಸುಗಳು ಇರುತ್ತವೆ. ಆದರೆ ಈ ಒಳ ಜಗತ್ತು ಸಂಪೂರ್ಣವಾಗಿ ಸತ್ಯವಲ್ಲ. ಅದು ನೆನಪು, ಅನುಭವ ಕನಸುಗಳನ್ನು ಎರಕ ಹೊಯ್ದು ಸಿದ್ಧಪಡಿಸಿದ್ದು. ಒಬ್ಬ ಸಾಹಿತಿ ತನ್ನ ಈ ಒಳ ಜಗತ್ತನ್ನು ಹೊರ ಹಾಕುತ್ತಿರುತ್ತಾನೆ. ಆದರೆ ಇಲ್ಲಿನ ಕೌತುಕ ಎಂದರೆ ನಮ್ಮೆಲ್ಲರ ಒಳ ಜಗತ್ತು ಯಾವ ರೀತಿ ಇದೆ ಎಂಬುದು ನಮ್ಮ ಹೊರ ಜಗತ್ತಿನ ಗ್ರಹಿಕೆಯ ಮೇಲೆ ಅವಲಂಬಿತವಾಗಿದೆ. ನಮ್ಮ ಗ್ರಹಿಕೆಯಲ್ಲಿ ದೋಷವಿದ್ದರೆ ನಮ್ಮ ಒಳ ಜಗತ್ತು ಸುಂದರವಾಗಿರುವುದಿಲ್ಲ ಎಂದು ನಾನು ಹೇಳಿದೆ. ಇವತ್ತಿನ ಸಾಹಿತ್ಯ ಲೋಕ ಯಾವುದೋ ರೀತಿಯ ವಿಸ್ಮ್ರುತಿಗೆ ಒಳಗಾಗಿದೆ ಎಂದು ನನಗೆ ಅನ್ನಿಸುತ್ತದೆ. ಯಾಕೆಂದರೆ ಸಾಹಿತಿಗಳು ಸದಾ ವರ್ತಮಾನದ ಜೊತೆ ಮುಖಾಮುಖಿಯಾಗಬೇಕು. ವರ್ತಮಾನದ ಜೊತೆ ಜಗಳವಾಡಬೇಕು. ವರ್ತಮಾನದ ಸತ್ಯಗಳನ್ನು ಗ್ರಹಿಸಲು ಯತ್ನಿಸಬೇಕು. ಆದರೆ ಇವತ್ತಿನ ಸಂದರ್ಭದಲ್ಲಿ ಸಾಹಿತ್ಯ ಲೋಕ ವರ್ತಮಾನದ ಜೊತೆ ಮಾತುಕತೆ ನಡೆಸುತ್ತಿಲ್ಲ. ಜಾಗತೀಕರಣದ ನಂತರ ನಮ್ಮ ಗ್ರಾಮೀಣ ಪ್ರದೇಶ ಹೆಚ್ಚು ಅತಂತ್ರವಾಗಿರುವುದರ ಬಗ್ಗೆ ಸಾಹಿತಿಗಳು ಮಾತನಾಡುತ್ತಿಲ್ಲ. ರೈತರು ಭೂಮಿ ಕಳೆದುಕೊಂಡು ಅತಂತ್ರರಾಗುವುದು ನಮ್ಮ ಸಾಹಿತಿಗಳಿಗೆ ಕಥಾ ವಸ್ತುವಾಗುತ್ತಿಲ್ಲ. ಭ್ರಷ್ಟಾಚಾರದ ಬಗ್ಗೆ ಸಾಹಿತ್ಯ ಲೋಕ ಗಾಢ ಮೌನವನ್ನು ಹೊಂದಿರುವುದು ಸಂಶಯಕ್ಕೆ ಕಾರಣವಾಗಿದೆ. ಈಗ ಉತ್ತರ ಕನ್ನಡ ಜಿಲ್ಲೆಯನ್ನೇ ತೆಗೆದುಕೊಳ್ಳಿ. ಇಲ್ಲಿ ಮದುವೆಗೆ ಬಂದ ಹುಡುಗರಿಗೆ ಹುಡುಗಿಯರು ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಚಹಾ ಅಂಗಡಿ ಇಟ್ಟುಕೊಂಡರೂ ಸರಿ ಅವರನ್ನು ಮದುವೆಯಾಗಲು ಒಪ್ಪುವ ಹುಡುಗಿಯರು ಕೃಷಿ ಮಾಡಿಕೊಂಡಿರುವ ಹುಡುಗನನ್ನು ಮದುವೆಯಾಗುತ್ತಿಲ್ಲ. ಹೀಗಾಗಿ ೪೦ ದಾಟಿದರೂ ಮದುವೆಯಾಗದ ಹುಡುಗರು ಇಲ್ಲಿದ್ದಾರೆ. ಇದಕ್ಕೆ ಯಾಕೆ ಸಾಹಿತ್ಯ ಲೋಕ ಸ್ಪಂದಿಸುತ್ತಿಲ್ಲ. ಇದು ಒಂದು ಕಥೆಗೆ ಯಾಕೆ ವಸ್ತುವಾಗುತ್ತಿಲ್ಲ ? ಗ್ರಹಿಕೆ ಮತ್ತು ಸಂವಹನದ ಬಗ್ಗೆಯೂ ನಾನು ಮಾತನಾಡಿದೆ. ನನ್ನ ಭಾಷಣ ಮುಗಿಯುವ ಹೊತ್ತಿಗೆ ರಾತ್ರಿಯಾಗಿತ್ತು. ಎಲ್ಲರೂ ಭಾಷಣ ಚೆನ್ನಾಗಿತ್ತು ಎಂದರು. ನಾನು ನಮ್ಮ ಜಿಲ್ಲೆಯ ಸಂಸ್ಕೃತಿಯನ್ನು ಉಳಿಸಲು ಏನಾದರೂ ಮಾಡಬೇಕು ಎಂದು ಹೇಳಿದೆ. ಇಲ್ಲಿ ಪ್ರವಾಸೋಧ್ಯಮ ಅಭೀವೃದ್ಧಿಯಾಗಲು ಯೋಜನೆಗಳು ಬರಬೇಕು. ಈ ಬಗ್ಗೆ ಏನಾದರೂ ಮಾಡೋಣ ಎಂದು ಅವರಿಗೆ ಹೇಳಿ ರಾತ್ರಿಯ ಬೆಂಗಳೂರು ಬಸ್ ಹತ್ತಿದೆ. ಸಿದ್ದ್ದ್ಧಧ ಪಡಿ

Wednesday, November 23, 2011

ಮತ್ತೆ ಮತ್ತೆ ಲಂಕೇಶ್ ನೆನಪಾಗುತ್ತಿದ್ದಾರೆ......!

ಯಾಕೋ ಗೊತ್ತಿಲ್ಲ. ಬಳ್ಳಾರಿಯಲ್ಲಿರುವ ನನ್ನ ಯುವ ಸ್ನೇಹಿತ ಆದಿತ್ಯ ಭಾರದ್ವಾಜ್ ಕಳುಹಿಸಿದ ಒಂದು ಎಸ್ ಎಮ್ ಎಸ್ ನನ್ನನ್ನು ಕಾಡುತ್ತಿದೆ. ಅವರು ಕಳುಹಿಸಿದ ಎಸ್ ಎಮ್ ಎಸ್ ನ ಸಾರ ಇಷ್ಟೇ. ನನಗೆ ಈಗ ಲಂಕೇಶ್ ನೆನಪಾಗುತ್ತಾರೆ.. ಅವರು ಕಳುಹಿಸಿದ ಈ ಎಸ್ ಎಂ ಎಸ್ ಓದಿದ ಮೇಲೆ ನನಗೂ ಲಂಕೇಶ್ ಕಾಡತೊಡಗಿದ್ದಾರೆ. ಪ್ರಾಯಶ: ಲಂಕೇಶ್ ಪತ್ರಿಕೆಯ ಎರಡನೆಯ ಸಂಚಿಕೆ ಹೊರ ಬಂದ ವಾರ ಅದು. ನಾನು ಕೈಯಲ್ಲಿ ಒಂದು ಲೇಖನವನ್ನು ಹಿಡಿದುಕೊಂಡು ಬಸವನಗುಡಿಯಲ್ಲಿರುವ ಅವರ ಕಚೇರಿಗೆ ಹೋದೆ. ಲಂಕೇಶ್ ತುಂಬಾ ಪ್ರೀತಿಯಿಂದ ಒಳಗೆ ಕರೆದು ಮಾತನಾಡಿದರು. ನಾನು ಬರೆದು ತಂದಿದ್ದ ಲೇಖನವನ್ನು ಸ್ವಲ್ಪ ಅಳುಕಿನಿಂದಲೇ ಅವರಿಗೆ ನೀಡಿದೆ. ಅದು ರಾಮಚಂದ್ರಾಪುರದ ಅಂದಿನ ಸ್ವಾಮಿ ರಾಘವೇಂದ್ರ ಭಾರತಿ ಸ್ವಾಮಿಗಳಿಗೆ ಸಂಬಂಧಿಸಿದ್ದಾಗಿತ್ತು. ಆ ದಿನಗಳಲ್ಲಿ ಬಂಡಾಯ ಸಂಘಟನೆಯಲ್ಲಿ ಇದ್ದ ನಾನು ಈ ಸ್ವಾಮಿಯ ವಿರುದ್ಧ ಊರಿನಲ್ಲಿ ಹೋರಾಟವನ್ನು ಸಂಘಟಿಸಿದ್ದೆ. ಇದಕ್ಕೆ ಪ್ರತಿಯಾಗಿ ಅವರು ನನ್ನನ್ನು ಹೈವ್ಯಕ ಭ್ರಾಹ್ಮಣರ ಜಾತಿಯಿಂದ ನನ್ನನ್ನು ಹೊರ ಹಾಕಿದ್ದರು. ಯಾವ ಹವ್ಯಕರೂ ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದ್ದರು.ಅವರ ಮೇಲೆ ಒಂದು ಲೇಖನ ಬರೆದುಕೊಂಡು ಬಂದಿದ್ದ ನಾನು ಲಂಕೇಶ್ ಪತ್ರಿಕೆಯ ಕಚೇರಿಯ ಬಾಗಿಲು ಬಡಿದಿದ್ದೆ. ಲಂಕೇಶ್ ನನ್ನ ಲೇಖನವನ್ನು ಓದಿದರು. ಲೇಖನ ಚೆನ್ನಗಿದೆ. ಆದರೆ ನಿಮಗೆ ಕನ್ನಡ ಕಲಿಸಿದ ಮಹಾತ್ಮ ಯಾರು ಎಂದು ಪ್ರಶ್ನಿಸಿದರು. ನೋಡಯ್ಯ ಲೇಖನ ಬರೆಯುವುದಕ್ಕಿಂತ ಮೊದಲು ಕನ್ನಡದ ವ್ಯಾಕರಣವನ್ನು ಕಲಿತಿರಬೇಕು ಎಂದರು ಲಂಕೇಶ್. ನನಗೆ ಅವಮಾನವಾಗಿತ್ತು. ಕೋಪ ಬಂದಿತ್ತು. ನಾನು ತಿರುಗಿ ಮಾತನಾಡದೇ ಅಲ್ಲಿಂದ ಹೊರಟು ಬಿಟ್ಟೆ. ಮುಂದಿನ ವಾರ ಲಂಕೇಶ್ ಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟವಾಗಿತ್ತು. ಜೊತೆಗೆ ೧೫೦ ರೂಪಾಯಿ ಸಂಭಾವನೆ.! ಇದಾದ ಮೇಲೆ ಲಂಕೇಶ್ ಜೊತೆ ನನ್ನ ಸಂಪರ್ಕ ಬೆಳೆಯಿತು. ಹಾಗೆ ಊರಿನಿಂದ ಬೆಂಗಳೂರಿಗೆ ಬಂದ ನಾನು ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡತೊಡಗಿದೆ. ಮೊದಲು ಕೆಲಸಕ್ಕೆ ಸೇರಿದ್ದ್ಉ ಸಂಯುಕ್ತ ಕರ್ನಾಟಕ ಪತ್ರಿಕೆಗೆ. ಅಲ್ಲಿ ಆಗ ನನಗೆ ಸಿಗುತ್ತಿದ್ದುದು ತಿಂಗಳಿಗೆ ೮೦ ರೂಪಾಯಿ ಸಂಬಳ. ಆಗಲೇ ನಾನು ಲಂಕೇಶ್ ಪತ್ರಿಕೆಯ ಕಾಯಂ ಓದುಗನಾಗಿದ್ದೆ. ಲಂಕೇಶ್ ಪತ್ರಿಕೆ ನನಗೆ ಓದುವುದನ್ನು ಕಲಿಸಿತ್ತು. ಒಳನೋಟವನ್ನು ನೀಡಿತ್ತು. ಈಗಲೂ ಆಗಾಗ ನಾನು ಲಂಕೇಶ್ ಅವರ ಟೀಕೆ ಟಿಪ್ಪಣಿಯನ್ನು ಓದುವುದುಂಟು. ಆಗೆಲ್ಲ ಒಂದು ವಸ್ತು ಮತ್ತು ವಿಚಾರವನ್ನ ಅವರು ಗ್ರಹಿಸುತ್ತಿದ್ದ ರೀತಿ ಅಚ್ಚರಿಯನ್ನು ಉಂಟು ಮಾಡುತ್ತದೆ. ಇವತ್ತಿಗೂ ಕೂಡ ಅವರ ಬಹಳಷ್ಟು ಬರಹಗಳು ಪ್ರಸ್ತುತ ಅನ್ನಿಸುತ್ತದೆ. ಲಂಕೇಶ್ ಅವರ ಅತಿ ದೊಡ್ಡ ಗುಣವೆಂದರೆ, ಯಾವುದೇ ರೀತಿಯ ಕ್ರೈಸಿಸ್ ನಲ್ಲಿ- ಅದು ರಾಜಕೀಯ ಬಿಕ್ಕಟ್ಟಿರಬಹುದು, ಸಾಮಾಜಿಕ ಬಿಕ್ಕಟ್ಟು ಇರಬಹುದು, ಅವರು ತೆಗೆದುಕೊಳ್ಳುತ್ತಿದ್ದ ಜನಪರ ನಿಲುವು. ಅವರ ನಿಲುವಿನಲ್ಲಿ ಕೆಲವೊಮ್ಮೆ ತಪ್ಪುಗಳು ಇದ್ದರೂ ಅವು ಉದ್ದೇಶಪೂರ್ವಕ ತಪ್ಪುಗಳಾಗಿರಲಿಲ್ಲ. ಅವರ ಬದ್ಧತೆ ಮತ್ತು ಸಾಮಾಜಿಕ ಕಳಕಳಿಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಲಂಕೇಶ್ ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಯಾಗಿದ್ದರು. ಲಂಕೇಶ್ ಅವರಿಗೆ ೬೦ ತುಂಬಿದ ಸಂದರ್ಭದಲ್ಲಿ ಮೈಸೂರಿನಲ್ಲಿ ಮೂರು ದಿನಗಳ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಘಟಾನುಘಟಿಗಳಿದ್ದ ಆ ಕಾರ್ಯಕ್ರಮದಲ್ಲಿ ಲಂಕೇಶ್ ಪತ್ರಿಕೆ ಮತ್ತು ಕನ್ನಡ ಪತ್ರಿಕೋದ್ಯಮ ಎಂಬ ವಿಚಾರದ ಬಗ್ಗೆ ಭಾಷಣ ಮಾಡುವ ಅವಕಾಶ ನನಗೆ ಲಭ್ಯವಾಗಿತ್ತು. ಲಂಕೇಶ್ ನಾನೇ ಆ ವಿಚಾರದ ಮೇಲೆ ಉಪನ್ಯಾಸ ನೀಡಬೇಕು ಎಂದು ಸೂಚಿಸಿದ್ದರು. ಅಂದಿನ ನನ್ನ ಭಾಷಣವನ್ನು ಅವರು ಮೆಚ್ಚಿಕೊಂಡಿದ್ದರು. ಇದಾದ ಮೇಲೆ ನಾನು ಅವರನ್ನು ನೋಡಿದ್ದು ಅವರು ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಾಗ. ನನ್ನ ಸ್ಣೇಹಿತರಾದ ಭರತಾದ್ರಿ ಮತ್ತು ಪತ್ರಕರ್ತ ಮಹದೇವ್ ಪ್ರಕಾಶ್ ಮೇಷ್ಟ್ರು ನಿಮ್ಮನ್ನು ನೋಡಬೇಕಂತೆ ಎಂದು ಹೇಳಿದಾಗ ಮರುದಿನವೇ ನಾನು ಆಸ್ಪತ್ರೆಗೆ ಹೋದೆ. ಲಂಕೇಶ್ ಹಾಸಿಗೆಯ ಮೇಲೆ ಮಲಗಿದ್ದರು. ಅವರ ಹೊಟ್ಟೆ ಗುಡಾಣದಂತೆ ಕಾಣುತ್ತಿತ್ತು. ಬಾರಯ್ಯ ಎಂದವರೆ ನನ್ನ ಜೊತೆಗೆ ಮಾತನಾಡತೊಡಗಿದರು. ನಾನು ಸತ್ತು ಹೋಗ್ತೀನೇನೋ ಗೊತ್ತಿಲ್ಲ..ಆದರೆ ನಾನು ಸಾವಿಗೆ ಹೆದರುವುದಿಲ್ಲ ಎಂದರು ಲಂಕೇಶ್. ನನ್ನ ಪತ್ರಿಕೆ ಹೇಗಿದೆಯಯ್ಯ ಎಂದೂ ಪ್ರಶ್ನಿಸಿದರು. ಸಾರ್, ಒಬ್ಬ ಮನುಷ್ಯನಂತೆ ಪತ್ರಿಕೆಗೂ ಒಂದು ಆಯಸ್ಸು ಅಂತ ಇರುತ್ತದೆ. ಲಂಕೇಶ್ ಪತ್ರಿಕೆ ಎಷ್ಟು ಎತ್ತರಕ್ಕೆ ಏರಬಹುದಿತ್ತೋ ಅಷ್ಟು ಎತ್ತರಕ್ಕೆ ಏರಿ ಆಗಿದೆ. ಇನ್ನು ಏನಿದ್ದರೂ ಅದು ಕೆಳಕ್ಕೆ ಬರಲೇಬೇಕು. ಮೇಲೆ ಹೋದವರೂ ಕೆಳಕ್ಕೆ ಬೀಳುವಂತೆ ಪತ್ರಿಕೆ ಕೂಡ. ನೀವು ದಯವಿಟ್ಟು ತಪ್ಪು ತಿಳಿಯಬಾರದು. ನೀವು ಬೈದರೇ ಎಲ್ಲರೂ ಕೇಳುತ್ತಾರೆ. ನೀವು ಕ್ಷಮಿಸಿ ಎಂದು ಲೇಖನವನ್ನು ಪ್ರಾರಂಭಿಸಿದರೆ ಅದು ನೀವು ಬರೆಯುವ ವಿಧಾನ ಅದು ನಮಗೆಲ್ಲ ಖುಷಿ ನೀಡುತ್ತದೆ. ಆದರೆ ನಿಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವರೆಲ್ಲ ಬೈಯುವುದೇ ಪತ್ರಿಕೋದ್ಯಮ ಎಂದುಕೊಂಡರೆ ಅದು ಅಪಾಯ. ಜೊತೆಗೆ ಸಣ್ನ ಪುಟ್ಟ ಹುಡುಗರು ನಿಮ್ಮದೇ ದಾಟಿಯಲ್ಲಿ ಬೈಯಲು ಪ್ರಾರಂಭಿಸಿದರೆ ಯಾರೂ ಕೇಳುವುದಿಲ್ಲ. ಬೈಯುವವನಿಗೂ ಒಂದು ಯೋಗ್ಯತೆ ಬೇಕಾಗುತ್ತದೆ ಎಂದೇ ನಾನು. ಲಂಕೇಶ್ ಎಲ್ಲವನ್ನೂ ಕೇಳಿಸಿಕೊಂಡರು. ಹಾಗೆ ಮಧ್ಯಾನ್ಹದವರೆಗೆ ಹತ್ತಿರಕ್ಕೆ ಕೂಡ್ರಿಸಿಕೊಂಡು ಮಾತನಾಡಿದರು. ನಮ್ಮಂಥಹ ಲಕ್ಶಾಂತರ ಜನರನ್ನು ಮಾನಸಿಕವಾಗಿ ಬೆಳೆಸಿದ ಲಂಕೇಶ್ ಹಾಗೆ ಹಾಸಿಗೆಯ ಮೇಲೆ ಮಲಗಿದ್ದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅಗ ನಾನು ಕನ್ನಡ ಪ್ರಭದಲ್ಲಿ ಬರೆಯುತ್ತಿದ್ದ ರಾಜಕೀಯ ವರದಿಗಳನ್ನು ಮೆಚ್ಚಿಕೊಂಡಿದ್ದ ಅವರು ಪತ್ರಿಕೋದ್ಯಮಿಗೆ ನ್ಯಾಯ ನಿಷ್ಠುರತೆ ಬೇಕು ಅದು ನಿನಗೆ ಇದೆ ಎಂದು ನನ್ನ ಬೆನ್ನು ತಟ್ಟಿದ್ದನ್ನು ನಾನು ಹೇಗೆ ತಾನೆ ಮರೆಯಲಿ ? ಈಗ ಪ್ರತಿದಿನ ಪತ್ರಿಕೆ ಓದುವಾಗ ಲಂಕೇಶ್ ನೆನಪಾಗುತ್ತಾರೆ. ಅವರ ಜೊತೆ ಬೇರೆ ಸಂಪಾದಕರನ್ನು ಪತ್ರಿಕೋದ್ಯಮಿಗಳನ್ನು ಹೋಲಿಸಲು ಯತ್ನಿಸುತ್ತೇನೆ. ಮನಸ್ಸಿಗೆ ಬೇಸರವಾಗುತ್ತದೆ. ಕೆಲವೊಮ್ಮೆ ಈ ಪತ್ರಿಕೋದ್ಯಮವೇ ಬೇಡ ಎಂದು ಅನ್ನಿಸುತ್ತದೆ. ಅದರೆ ಬದುಕಲು ಬೇರೆ ದಾರಿ ಯಾವುದು ಎಂದು ತಿಳಿಯದೇ ಸುಮ್ಮನಾಗುತ್ತೇನೆ. ಇಂದಿನ ಪತ್ರಿಕೋದ್ಯಮವನ್ನು ನೋಡಿ ನಾನು ಸಿನಿಕನಾಗಲಾರೆ. ಎಲ್ಲವೂ ಎಲ್ಲರೂ ಕೆಟ್ಟವರು ಎಂದು ಹೇಳಲಾರೆ. ಆದರೆ ಪತ್ರಿಕೋದ್ಯಮ ಸಾಗುತ್ತಿರುವ ದಾರಿ ಬೇಸರವನ್ನು ಉಂಟು ಮಾಡುತ್ತದೆ. ಆಗೆಲ್ಲ ಲಂಕೇಶ್ ನೆನಪಾಗಿ ಹೊಸ ಹುಮ್ಮಸು ಮೂಡುತ್ತದೆ. ಇದೆಲ್ಲ ಬದಲಾಗುತ್ತದೆ ಎಂದು ಅನ್ನಿಸುತ್ತದೆ.

Sunday, November 20, 2011

ನನ್ನ ಶಾಲೆ ಮತ್ತು ಮೋಟು ಕಾನಿನ ಭೂತ...!

ನಾನು ಓದಿದ ಶಾಲೆಗೆ ನೂರು ವರ್ಷ !
ಈ ಶಾಲೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿ. ಸಿದ್ಧಾಪುರದಿಂದ ಸಿರ್ಸಿ ಮಾರ್ಗದಲ್ಲಿ ಬಂದು ಹಾರ್ಸಿಕಟ್ಟಾಗೆ ಹೋಗುವ ದಾರಿಯಲ್ಲಿ ತಿರುಗಿಕೊಂಡರೆ ಸಿಗುತ್ತದೆ, ಕೋಲಸಿರ್ಸಿ. ಆದರೆ ಆ ಊರನ್ನು ಕೋಲಸಿರ್ಸಿ ಎಂದು ಸಂಬೋಧಿಸುವುದು ತುಂಬಾ ಕಡಿಮೆ. ಜನರ ಬಾಯಲ್ಲಿ ಇದು ಕೋಲ್ಸೆ. ಈ ಊರಿಗೆ ಕೋಲಸಿರ್ಸಿ ಎಂಬ ಹೆಸರು ಯಾಕೆ ಬಂತು ಎಂಬುದು ಯಾರಿಗೂ ತಿಳಿಯದು. ಬಹುಶಃ ಸಿರ್ಸಿ ಸಿದ್ದಾಪುರದ ದಾರಿಯಲ್ಲಿ ಈ ಹೆಸರು ಬಂದರೂ ಬಂದಿರಬಹುದು.
ನಾನು ಆ ಶಾಲೆಗೆ ಹೋಗುವಾಗ ನಡೆದುಕೊಂಡೇ ಹೋಗಬೇಕಗಿತ್ತು. ಸುಮಾರು ಮೂರು ಕಿಮೀ ಕಾಡಿನ ದಾರಿ. ಆ ಕಾಡಿನ ದಾರಿಯಲ್ಲಿ ನನ್ನ ಜೊತೆಗೆ ಶಾಲೆಗೆ ಬರುತ್ತಿದ್ದ ನನ್ನ ಚಿಕ್ಕಪ್ಪ ಬಾಲಚಂದ್ರ ಹಾಗೂ ನಾನು ಹಲವು ಸಲ ಹುಲಿಯನ್ನು ನೋಡಿದ್ದುಂಟು. ಮಲಗಿರುವ ಹುಲಿಯನ್ನು ಕಲ್ಲು ಹೊಡೆದು ಎಬ್ಬಿಸುವ ಬಗ್ಗೆ ಮಾತನಾಡಿದ್ದು ಉಂಟು. ಆದರೆ ಅಲ್ಲಿ ಇಂದು ಹುಲಿಯೂ ಇಲ್ಲ, ಆಗಿನ ಕಾಡು ಇಲ್ಲ.
ಅದರ ಜೊತೆಗೆ ಅರ್ಧ ದಾರಿಯಲ್ಲಿ ಇದ್ದ ಮೋಟ ಕಾನಿನ ಭೂತ..
ಈ ಭೂತ ಸ್ಥಾನದ ಹಿಂದೆ ಸ್ಮಶಾನವಿತ್ತು. ಹೀಗಾಗಿ ಈ ಭೂತಕ್ಕೆ ಭಯಾನಕತೆ ಕೂಡ ಬಂದಿತ್ತು. ಈ ದಾರಿಯಲ್ಲಿ ಸಾಗುವವರು ಭೂತನಿಗೆ ಭಯ ಭಕ್ತಿಯಿಂದ ಕೈಮುಗಿದು ಸಾಗುತ್ತಿದ್ದರು. ಹಾಗೆ ಅಮಾವಾಸ್ಯೆಯೆಂದು ಹಲವರು ಅಲ್ಲಿ ಕುರಿ ಕೊಯ್ಯುತ್ತಿದ್ದರು. ಕೊಯ್ದ ಕುರಿಯ ರಕ್ತವನ್ನು ಭೂತದ ಕಲ್ಲಿಗೆ ಅಭಿಷೇಕ ಮಾಡುತ್ತಿದ್ದರು. ಇದರಿಂದ ಕೆಲವು ದಿನಗಳ ಕಾಲ ಭೂತನ ಕಲ್ಲು ರಕ್ತದಿಂದಾಗಿ ಕೆಂಪಗೆ ಕಾಣುತ್ತಿತ್ತು. ಮೋಟಕಾನಿನ ಈ ಭೂತ ತುಂಬಾ ಶಕ್ತಿವಂತ ಎಂದು ನನ್ನ ಅಜ್ಜ ಆಗಾಗ ಹೇಳುತ್ತಿದ್ದುದುಂಟು. ಆದರೆ ನಮ್ಮ ಮನೆಯವರು ಈ ಭೂತನಿಗೆ ನಡೆದುಕೊಳ್ಳುತ್ತಿರಲಿಲ್ಲ. ಹಾಗೆ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಇರುವ ಹವ್ಯಕರಿಗೂ ಈ ಭೂತನಿಗೂ ಅಂತಹ ಸಂಬಂಧ ಇರಲಿಲ್ಲ. ಕೋಳಿ ಕೊಯ್ಯುವುದನ್ನು ನೋಡಬಾರದು ಎಂದು ಅಮ್ಮ ಶಾಲೆಗೆ ಹೋಗುವಾಗ ಹೇಳಿ ಕಳಿಸುತ್ತಿದ್ದರು. ಆದರೆ ಭಯದಿಂದ ತಲೆ ಬಗ್ಗಿಸಿ ಆ ಬೂತನ ಸ್ಥಾನವನ್ನು ದಾಟಿ ಹೋಗಬೇಕು ಎಂದುಕೊಂಡರೂ ಆ ಸ್ಥಳಕ್ಕೆ ಬಂದ ತಕ್ಷಣ ಕಣ್ನು ಮೇಲೆ ಹೋಗುತ್ತಿತ್ತು. ಆಗೆಲ್ಲ ಕೋಳಿ ಕೊಯ್ದ ಮೇಲೆ ಅದರ ತಲೆ ಚಡಪಡಿಸುವುದು ಕಾಣುತ್ತಿತ್ತು. ಹಾಗೆ ಸ್ವಲ್ಪ ಹೊತ್ತು ಮೇಲಕ್ಕೆ ಹಾರಿದ ಕೋಳಿಯ ದೇಹ ನಂತರ ನಿಸ್ತೇಜವಾಗುತ್ತಿತ್ತು.
ನಮ್ಮ ಕೋಲ್ಸೆ ಶಾಲೆಯ ಪಕ್ಕದಲ್ಲಿ ಒಂದು ಅರಳಿ ಮರವಿತ್ತು. ಆ ಮರ ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆರಿದ್ರಾ ಮಳೆಯ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿದ್ದುದು ಅದ್ರೆ ಮಳೆ ಹಬ್ಬ. ನಡು ಮಳೆಗಾಲದಲ್ಲಿ ನಡೆಯುವ ಈ ಹಬ್ಬದಲ್ಲಿ ಒಂದೇ ದಿನ ನೂರಾರು ಕುರಿಗಳನ್ನು ಬಲಿ ಕೊಡಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ನಾವು ಶಾಲೆಗೆ ಹೋಗುತ್ತಿರಲಿಲ್ಲ. ಕಡಿದ ಕುರಿಯನ್ನು ನೋಡಬಾರದು ಎಂಬ ಕಾರಣಕ್ಕೆ ನಮ್ಮ ಶಾಲೆಯ ಮೇಸ್ತ್ರು ನಮಗೆ ರಜೆ ಕೊಟ್ಟು ಬಿಡುತ್ತಿದ್ದರು. ನೂರಾರು ಕುರಿ ಕೋಳಿಯ ರಕ್ತಾಭಿಷೇಕಕ್ಕೆ ಸಾಕ್ಷಿಯಾಗಿರುತ್ತಿದ್ದ ಈ ಮರ ಉಳಿದ ದಿನಗಳಲ್ಲಿ ಎಲ್ಲ ಮರಗಳಂತೆ ಇರುತ್ತಿತ್ತು. ನಮ್ಮ ಶಾಲೆಯಲ್ಲಿ ಅಗ ಶೌಚಾಲಯ ಇರದಿದ್ದರಿಂದ ನಾವು ಶಾಲೆ ಮಕ್ಕಳು ಮೂತ್ರ ವಿಸರ್ಜೆನೆಗೆ ಈ ಸ್ಥಳವನ್ನು ಬಳಸುತ್ತಿದ್ದೆವು. ಆ ಮರದ ಮರೆಯಲ್ಲಿ ನಿಂತರೆ ಯಾರೂ ಕಾಣುತ್ತಿರಲಿಲ್ಲ. ಅಲ್ಲಿ ಮೂತ್ರ ವಿಸರ್ಜನೆಗೆ ಉಚ್ಚೆ ಕುಣಿಗಳನ್ನು ನಾವು ನಿರ್ಮಿಸುತ್ತಿದ್ದೆವು.
ನಮ್ಮದು ಏಳನೆಯ ತರಗತಿಯವರೆಗಿನ ಶಾಲೆ. ಅಲ್ಲಿ ಬರುವ ಮಕ್ಕಳಲ್ಲಿ ಬಹುತೇಕರು ಈಡಿಗರು ಮತ್ತು ಹಿಂದುಳಿದ ವರ್ಗದವರ ಮಕ್ಕಳು. ಇವರನ್ನು ಬಿಟ್ಟರೆ ಹತ್ತಾರು ಲಿಂಗಾಯಿತರ ಮಕ್ಕಳು. ನಾವು ಎರಡು ಮೂರು ಮಕ್ಕಳು ಮಾತ್ರ ಹವ್ಯಕರು.
ಮಳೆಗಾಲ ಬಂದರೆ ಶಾಲೆ ಸೋರುತ್ತಿತ್ತು. ಹೀಗಾಗಿ ಮಳೆಗಾಲಕ್ಕೆ ಮೊದಲು ನಾವು ಶಾಲೆಯ ಮೇಲೆ ಏರಿ ಒಡೆದ ಹೆಂಚುಗಳನ್ನು ತೆಗೆದು ಹೊಸ ಹೆಂಚು ಹಾಕುತ್ತಿದ್ದೆವು. ಹಾಗೆ ಶಾಲೆಯ ಎದರು ಎಲ್ಲ ರೀತಿಯ ತರಕಾರಿಗಳನ್ನು ನಾವು ಬೆಳೆಸಿದ್ದೆವು. ಎಲ್ಲೂ ಬೆಳೆಯದಂತೆ ಬೆಳೆದ ಆ ತರಕಾರಿ ಎಲ್ಲಿಗೆ ಹೋಗುತ್ತದೆ ಎಂಬುದು ಮಾತ್ರ ನಮಗೆ ತಿಳಿಯುತ್ತಿರಲಿಲ್ಲ. ಶಾಲೆಯಲ್ಲಿರುವ ಎಲ್ಲ ಟೀಚರುಗಳ ಮನೆಗೆ ಇದೇ ತರಕಾರಿ ಹೋಗುತ್ತದೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ ಈ ಮಾತಿಗೆ ನಮ್ಮ ಬಳಿ ಯಾವ ಪುರಾವೆಯೂ ಇರಲಿಲ್ಲ.
ನಮ್ಮ ಶಾಲೆಯಲ್ಲಿ ಇದ್ದ ಟೀಚರುಗಳಲ್ಲಿ ಎಂಟು ಜನ ಮಿಸ್ ಗಳು. ನಾವು ಅವರನ್ನು ಅಕ್ಕೋರೆ ಎಂದು ಸಂಬೊಂಧಿಸುತ್ತಿದ್ದೆವು. ಇವರಲ್ಲಿ ಸುಮಿತ್ರಾ ಅಕ್ಕೋರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ. ನಾನು ಅವರಿಗೆ ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದ ದೊಡ್ದ ದೊಡ್ದ ಡೇರೆ ಹೂವುಗಳನ್ನು ಕೊಡುತ್ತಿದ್ದೆ. ಅವರು ಅದನ್ನು ಮುಡಿದುಕೊಂಡು ಶಶಿ ತಂದು ಕೊಟ್ಟಿದ್ದು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.
ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ ನಾನು ಎಲ್ಲರಿಗಿಂತ ಸಣ್ಣಗಿದ್ದೆ. ಕುಳ್ಳ ಬೇರೆ. ಕೆಂಪಗಿನ ಒಂದು ಮುದ್ದೆಯ ಹಾಗಿದ್ದ ನನ್ನನ್ನು ಕಂಡರೆ ಎಲ್ಲ ಶಿಕ್ಷರಿಗೂ ಪ್ರೀತಿ. ಅದೊಂದು ದಿನ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ತಲೆ ತಿರುಗಿ ಬಿದ್ದು ಬಿಟ್ಟೆ. ಪಟಗಾರ್ ಮಾಸ್ತರು ಮತ್ತು ಸುಮಿತ್ರಾ ಅಕ್ಕೋರು ನನ್ನನ್ನು ಕಳುಹಿಸಿ ಕೊಡಲು ನನ್ನ ಜೊತೆಗೆ ನಮ್ಮ ಮನೆಗೆ ಬಂದರು. ಕಾಡಿನ ಹಾದಿಯಲ್ಲಿ ಸುಮಾರು ಅರ್ಧ ಗಂಟೆ ನಡೆದು ಮನೆಗೆ ಬಂದ ಮೇಲೆ ನಾನು ತಲೆ ತಿರುಗಿ ಬಿದ್ದಿದ್ದನ್ನು ಹೇಳಿದ ಮಾಸ್ತರು ನಾನು ತುಂಬಾ ವೀಕ್ ಇರುವುದರಿಂದ ಹೀಗಾಗಿದೆ ಎಂದು ಹೇಳಿ ಅವನು ಒಂದೆರದು ದಿನ ರಜಾ ತೆಗೆದುಕೊಳ್ಳಲಿ ಎಂದು ಸ್ಯಾಂಕ್ಷನ್ ಮಾಡಿಯೇ ಬಿಟ್ಟರು.
ಅಮ್ಮ ಅವತ್ತೆ ಮಾಡಿದ್ದ ತೊಡೆದೆಳ್ಳವು ಅನ್ನು ಪ್ರೀತಿಯಿಂದ ನಮ್ಮ ಮಾಸ್ತರು ಮತ್ತು ಅಕ್ಕೋರಿಗೆ ಕೊಟ್ಟರು. ಮಲೇನಾಡಿನಲ್ಲಿ ಕಬ್ಬಿನ ಹಾಲಿನಿಂದ ಮಾಡುವ ಈ ತೊಡೆದೆಳ್ಳವು ಕರಾವಳಿಯವರಾದ ಅವರಿಗೆ ಅಪರಿಚಿತವಾಗಿತ್ತು. ದೊಡ್ಡ ಮಡಿಕೆಯನ್ನು ಮಗಚಿ ಒಲೆಯ ಮೇಲಿಟ್ಟು ಅದರ ಮೇಲೆ ದೂಸೆಯಂತೆ ಹಾಕುವ ವಿಶಿಷ್ಟವಾದದ್ದು ತೊಡೆದೆಳ್ಳವು. ಅದನ್ನು ಬಾಯಿಯಲ್ಲಿ ಇಟ್ಟ ಕೆಲವೇ ಸೆಕೆಂಡುಗಳಲ್ಲಿ ಅದು ಕರಗಿ ಹೋಗುತ್ತದೆ. ಇದು ಯಾವ ರೀತಿಯ ತಿಂಡಿ ಎಂಬುದು ಪಟಗಾರ್ ಮಾಸ್ತರಿಗೆ ಅರ್ಥವಾಗಲಿಲ್ಲ. ಆದರೆ ಅವರಿಗೆ ಅದರ ಮೋಹ ಮಾತ್ರ ಹೋಗಲಿಲ್ಲ. ಅಮ್ಮ ಅವರಿಗಾಗಿ ನಾಲ್ಕಾರು ತೊಡೆದೆಳ್ಲವುಗಳನ್ನು ಪ್ರೀತಿಯಿಂದ ಕಟ್ಟಿ ಕೊಟ್ಟಳು.
ಇದಾದ ಮೇಲೆ ಕಂಡಾಗಲೆಲ್ಲ ನಿಮ್ಮ ಮನೆಯ ತೊಡೆದೆಳ್ಳವು ಅದ್ಭುತ ಅತ್ಯದ್ಭುತ ಎಂದು ಅವರು ಹೇಳುತ್ತಿದ್ದರು. ಜೊತೆಗೆ ಇದೇ ಕಾರಣಕ್ಕೆ ಅವರ ದೃಷ್ಟಿಯಲ್ಲಿ ನನ್ನ ಗೌರವವೂ ಹೆಚಾಯಿತು. ಆದರೆ ನಾನು ಇಡೀ ಘಟನೆಯನ್ನು ಅರ್ಥ ಮಾಡಿಕೊಂಡಿದ್ದೇ ಬೇರೆ ರೀತಿಯಲ್ಲಿ. ನಾನು ತಲೆ ತಿರುಗಿ ಬಿದ್ದರೆ ನನಗೆ ರಜೆ ನೀಡುತ್ತಾರೆ ಎಂಬ ಸತ್ಯದ ದರ್ಶನ ನನಗಾಗಿತ್ತು. ಹೀಗಾಗಿ ವಾರಕ್ಕೆ ಒಮ್ಮೆ ಪ್ರಾರ್ಥನೆಯ ವೇಳೆಯಲ್ಲಿ ತಲೆ ತಿರುಗಿ ಬಿದ್ದು ಬಿಡುತ್ತಿದ್ದೆ. ಇದು ನಾಟಕವೋ ಅಥವಾ ನಿಜವೂ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದ ಪಟಗಾರ್ ಮಾಸ್ತರು ನನ್ನನ್ನು ಮನೆಗೆ ಕಳುಹಿಸಿಕೊಡಲು ಸಿದ್ಧವಾಗುತ್ತಿದ್ದರು. ನಮ್ಮ ಮನೆಗೆ ಬಂದು ವಿಶೇಷ ತಿಂಡಿಗಳನ್ನು ತಿಂದು ಅವರು ಶಾಲೆಗೆ ಹಿಂತಿರುಗುತ್ತಿದ್ದರು. ನಾನು ರಜಾದ ಸುಖವನ್ನು ಅನುಭವಿಸುತ್ತಿದ್ದೆ. ಕಾಡುಮೇಡುಗಳಲ್ಲಿ ಅಲೆದು ರಜಾವನ್ನು ಸಾರ್ಥಕವನ್ನಾಗಿ ಮಾಡಿಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಬಹಳಷ್ಟು ದಿನ ಶಾಲೆಯೇ ನಡೆಯುತ್ತಿರಲಿಲ್ಲ. ದೊಡ್ಡ ಮಳೆ ಬಂದರೆ ನೀರು ಒಳಗೆ ಬರುತ್ತಿದ್ದರಿಂದ ಶಾಲೆಗೆ ರಜಾ ಘೋಷಿಸಲಾಗುತ್ತಿತ್ತು. ಹಾಗೆ ನಮ್ಮ ಮನೆ ಮತ್ತು ಶಾಲೆಯ ನಡುವೆ ಕಾಡಿನ ಜೊತೆಗೆ ಸಣ್ಣ ಸಣ್ನ ಹಳ್ಳಗಳೂ ಇದ್ದವು. ಈ ಹಳ್ಳಗಳು ತುಂಬಿದರೆ ಅದಕ್ಕೆ ದಾಟಲು ಹಾಕಿದ ಸಂಕ ಕೊಚ್ಚಿ ಹೋಗುತ್ತಿತ್ತು. ಹೀಗಾಗಿ ನಾವು ಹಳ್ಳದ ಬಳಿ ಬಂದು ಸಂಕ ಇಲ್ಲ ಎಂದು ಮನೆಗೆ ಹೋಗಿ ಬಿಡುತ್ತಿದ್ದವು.
ಈ ಶಾಲೆಯಲ್ಲಿನ ನನ್ನ ಆನುಭವದ ಭುತ್ತಿ ದೊಡ್ದದು. ಅದನ್ನು ಇನ್ನೊಮ್ಮೆ ಹೇಳುತ್ತೇನೆ. ನಾನು ಮೊದಲು ಹೇಳಿದ ಮೋಟು ಕಾನಿನ ಭೂತ ಮತ್ತು ನನಗೂ ಇರುವ ಸಂಬಂಧದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲೇ ಬೇಕು.
ನನ್ನಲ್ಲಿ ಭಯ ಹುಟ್ಟಿಸಿದ್ದ ಈ ಭೂತ ನನಗೆ ತೀವ್ರವಾಗಿ ಕಾಡುತ್ತಿದ್ದುದು ಪರೀಕ್ಷೆ ಬಂದಾಗ ಮಾತ್ರ. ಆಗ ಮಾತ್ರ ಭೂತನ ಎದುರು ನಿಂತು ನಾನು ಪರೀಕ್ಷೆಯಲ್ಲಿ ಪಾಸಾದರೆ ೫೦ ತೆಂಗಿನ ಕಾಯಿ ಒಡೆಸುತ್ತೇನೆ ಎಂದು ಹೇಳುತ್ತಿದ್ದೆ. ಪರೀಕ್ಷೆಯಲ್ಲಿ ಪಾಸಾದ ಮೇಲೆ ನನಗೆ ಈ ಭೂತನ ಬಗ್ಗೆ ಗೌರವ ಉಳಿಯುತ್ತಿರಲಿಲ್ಲ. ಹೀಗಾಗಿ ಭೂತಪ್ಪನಿಗೆ ತೆಂಗಿನ ಕಾಯಿಯೂ ಸಿಗುತ್ತಿರಲಿಲ್ಲ. ಎಳು ವರ್ಷ ಕೋಲ್ಸೆ ಶಾಲೆಗೆ ಹೋದವ, ಪ್ರತಿ ವರ್ಷ ೫೦ ತೆಂಗಿನ ಕಾಯಿ ಹರಿಕೆ ಹೇಳಿಕೊಂಡಿದ್ದೇನೆ. ಒಂದೇ ಒಂದು ತೆಂಗಿನ ಕಾಯಿ ಹರಿಕೆಯನ್ನು ತೀರಿಸಿಲ್ಲ. ಆದರೆ ಮೋಟುಕಾನಿನ ಭೂತ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ, ನನ್ನನ್ನು ಸಲಹುತ್ತಲೇ ಇದ್ದಾನೆ.
ಕಳೆದ ಶನಿವಾರ ಊರಿನವರೆಲ್ಲ ಸೇರಿ ಈ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನ್ನನ್ನು ಕರೆಯಲು ಬೆಂಗಳೂರಿಗೆ ಬಂದು ಮಾತನಾಡಿ ಹೋಗಿದ್ದರು. ನಾನು ನನ್ನ ಶಾಲೆಯ ಶತಮನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಬೇಕು ಎಂದುಕೊಂಡಿದ್ದೆ. ಆದರೆ ಊರಿಗೆ ಹೋದರೂ ಶಾಲೆಗೆ ಃಓಗಲು ಆಗಲಿಲ್ಲ. ಯಾಕೆಂದರೆ ಅನಿರೀಕ್ಷಿತವಾಗಿ ನನ್ನ ಅಪ್ಪ ತೀರಿಕೊಂಡಿದ್ದ.
ಹೀಗಿದ್ದರೂ ಊರಿನ ಹಿರಿಯಲು ಶಾಲು ಸ್ಮರಣ ಫಲಕ ಹಿಡಿಕೊಂಡು ನನ್ನ ಮನೆಗೆ ಬಂದು ಸತ್ಕಾರ ಮಾಡಿದರು. ಈ ಶಾಲೆಯಲ್ಲಿ ಕಲಿತ ನೀನು ದೊಡ್ಡ ಮನುಷ್ಯನಗಿದ್ದೀಯಾ ಎಂದು ಪ್ರೀತಿಯ ಮಾತನಾಡಿದರು. ಅಪ್ಪನನ್ನು ಕಳೆದುಕೊಂಡ ಆ ಸಂದರ್ಭದಲ್ಲೂ ನನಗೆ ಮನಸ್ಸಿನಲ್ಲಿ ಮೂಡಿದ್ದು ಕೃತಜ್ನತೆ. ನೆನಪಾಗಿದ್ದು ಅದೇ ನನ್ನ ಶಾಲಾ ದಿನಗಳು.

Sunday, November 13, 2011

ನನ್ನ ಅಪ್ಪ ಇನ್ನಿಲ್ಲ.....!

ನನ್ನ ಅಪ್ಪ ಕಳೆದ ಮಂಗಳವಾರ ಇಹಲೋಕ ಯಾತ್ರೆ ಮುಗಿಸಿದ. ಅಪ್ಪನಿಗೆ ಹುಷಾರಿಲ್ಲ ಎಂಬುದು ದೂರದ ಬೆಂಗಳೂರಿನಲ್ಲಿರುವ ನನಗೆ ತಿಳಿದಿತ್ತು. ಆದರೆ ಇಷ್ಟು ಬೇಗ ಆತ ಜೈ ಎಂದು ಹೊರಟಿ ಬಿಡುತ್ತಾನೆ ಎಂದು ನಾನು ಅಂದುಕೊಂಡಿರಲಿಲ್ಲ.
ಅಪ್ಪನನ್ನು ಕಳುಹಿಸಿಕೊಟ್ಟ ಮೇಲೆ ನಾನು ಅವನ ಬಗ್ಗೆ ಯೋಚಿಸುತ್ತೇನೆ. ನನ್ನ ಅಪ್ಪ ಹೇಗಿದ್ದ ? ಆತ ಏನನ್ನು ನಂಬಿದ್ದ ? ಆತ ಹೇಗೆ ಬದುಕಿದ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ.
ನನ್ನ ಅಪ್ಪ ಎಂದ ತಕ್ಷಣ ನನಗೆ ನೆನಪಾಗುವುದು ಆತನ ನೆಹರೂ ಶರ್ಟು ಮತ್ತು ಬಿಳಿಯ ಲುಂಗಿ. ಆತ ಎಂದೂ ಖಾದಿಯನ್ನು ಬಿಟ್ಟು ಬೇರೆ ಬಟ್ಟೆ ಹಾಕಲಿಲ್ಲ. ಸದಾ ಗರಿ ಗರಿಯಾದ ಇಸ್ತ್ರೀ ಮಾಡಿದ ಶರ್ಟು ಲುಂಗಿ. ಹೆಗಲ ಮೇಲೆ ಒಂದು ಶಾಲು. ಆತ ಹತ್ತಿರದ ಸಿದ್ದಾಪುರಕ್ಕೆ ಹೊರಟನೆಂದರೆ ಅವನ ಸುತ್ತ ಇರುತ್ತಿದ್ದ ನಾಲ್ಕಾರು ಜನ. ಅವರ ಜೊತೆ ಅವನ ಮೆರವಣಿಗೆ ಪೇಟೆಯಲ್ಲಿ ಹೊರಟಿತೆಂದರೆ ಅದನ್ನು ನೋದುವುದೇ ಚಂದ. ಮನೆಯಿಂದ ಹೊರಟ ಮೊದಲು ಬರುತ್ತಿದ್ದುದು ಕನ್ಸುಮರ್ಸ್ ಸೊಸೈಟಿಗೆ. ಅಲ್ಲಿಂದ ಚೌದರಿಯ ಪ್ರದೀಪ್ ಸ್ಟೋರ್ಸ್. ಅಲ್ಲೆಲ್ಲ ಸ್ನೇಹಿತರ ಜೊತೆ ಮಾತನಾಡಿ ಮಹಾಲಸಾ ಹೋಟೆಲ್ ಗೆ ಬಂದು ಒಂದು ಕಪ್ ಬಿಸಿ ಬಿಸಿ ಚಹ ಕುಡಿದು ಜೊತೆಗಿದ್ದವರಿಗೆಲ್ಲ ಚಹಾ ಸಮಾರಾಧನೆ.
ಬೆಳಿಗ್ಗೆ ಹತ್ತಕ್ಕೋ ಹನ್ನೊಂದಕ್ಕೋ ಪೇಟೆಗೆ ಹೋದರೆ ಅವನು ತಿರುಗಿ ಮನೆಗೆ ಬರುತ್ತಿದ್ದುದು ರಾತ್ರಿ ೮ ಗಂಟೆ ಸುಮಾರಿಗೆ. ಬರುವಾಗ ಅವನ ಕೈಯಲ್ಲಿ ಇರುತ್ತಿದ್ದ ಉದ್ದನೆಯ ಜೋಲು ಚೀಲದಲ್ಲಿ ಎಲ್ಲ ದಿನ ಪತ್ರಿಕೆಗಳು ಮಾಸಿಕಗಳು ಇರುತ್ತಿದ್ದವು. ಶಿವರಾಮ ಕಾರಂತ್, ಕುವೆಂಪು, ತೇಜಸ್ವಿ, ಮೊದಲಾದವರ ಯಾವುದೇ ಹೊಸ ಪುಸ್ತಕ ಬರಲಿ, ಅದು ಮೊದಲು ಅಪ್ಪನ ಕೈಚೀಲದಲ್ಲಿ ನುಸುಳಿಕೊಂಡು ಮನೆಯ ಲೈಬ್ರರಿ ಸೇರುತ್ತಿದ್ದವು. ಆತ ಅತಿಯಾಗಿ ಇಷ್ಟ ಪಡುತ್ತಿದ್ದ ದಿನ ಪತ್ರಿಕೆ ಎಂದರೆ ದಿ ಹಿಂದೂ. ಸಿ ರಾಜಗೋಪಾಲಾಚಾರಿ ಅವರು ತರುತ್ತಿದ್ದ ಸ್ವರಾಜ್ ಪತ್ರಿಕೆಯನ್ನು ಅವನು ತರಿಸುತ್ತಿದ್ದ. ಹಾಗೆ ಜರ್ಮನ್ ನ್ಯೂಸ್, ಸೋವಿಯತ್ ಲ್ಯಾಂಡ್ ಪತ್ರಿಕೆಗಳು ಮನೆಗೆ ಬರುತ್ತಿದ್ದವು.
ರಾತ್ರಿ ಮನೆಗೆ ಬಂದವ ಹಿಂದೂ ಪತ್ರಿಕೆಯನ್ನು ತೆಗೆದುಕೊಂಡು ದೊಡ್ಡ ದ್ವನಿಯಲ್ಲಿ ಪಠಣ ಮಾಡುತ್ತಿದ್ದ. ಹಾಗೆ ಸುಧಾ ಕಸ್ತೂರಿ, ಸಂಗಮ, ಮೊದಲಾದ ಪತ್ರಿಕೆಗಳನ್ನು ತರಿಸುತ್ತಿದ್ದ ಅಪ್ಪ ತಾನು ಓದಿ ಮುಗಿಸಿದ ಹೊರತೂ ಅ ಪತ್ರಿಕೆಗಳನ್ನು ಬೇರೆಯವರಿಗೆ ಕೊಡುತ್ತಿರಲಿಲ್ಲ. ಆತ ಒಂದು ರೀತಿಯಲ್ಲಿ ಹುಟ್ಟಾ ಕಾಂಗ್ರೆಸ್ಸಿಗ. ಆದರೆ ಹಳೆಗನ್ನಡ ಮತ್ತು ಹೊಸ ಗನ್ನಡ ಸಾಹಿತ್ಯದ ಬಗ್ಗೆ ಅವನಿಗೆ ಪ್ರೀತಿ ಇದ್ದಂತೆ ಇಂಗ್ಲೀಷ್ ಸಾಹಿತ್ಯದ ಬಗ್ಗೆಯೂಅ ಅಪಾರವಾದ ಪ್ರೀತಿ ಇತ್ತು.
ಷೇಕ್ಶಫಿಯರ್ ನಾಟಕಗಳನ್ನು ಆರಾಧಿಸುತ್ತಿದ್ದ ಅಪ್ಪ ಅವುಗಳನ್ನು ಓದಲು ನೀಡುತ್ತಿದ್ದ. ಹಾಗೆ ಸಮರ್ ಸೆಟ್ ಮಾಂ ನ ಕಾದಂಬರಿಗಳು. ನನಗೆ ಇಂಗ್ಲೀಷ್ ಸಾಹಿತ್ಯವನ್ನು ಓದಲು ನೀಡುತ್ತಿದ್ದ ಆತ ಅವುಗಳ ಬಗ್ಗೆ ವಿಮರ್ಷೆ ಮಾಡುತ್ತಿದ್ದ. ಆದರೆ ನನಗೆ ಸರಿಯಾದ ಇಂಗ್ಲೀಷ್ ಬರುವುದಿಲ್ಲ ಎಂಬ ಸಿಟ್ಟಿ ಅವನಿಗೆ ಕೊನೆಯವರೆಗೆ ಇತ್ತು. ನಾನು ಬೆಳಗಾವಿಯಲ್ಲಿ ಕಾಲೇಜಿಗೆ ಹೋಗುವಾಗ ಇಂಗ್ಲೀಷ್ ನಲ್ಲೇ ಪತ್ರ ಬರೆಯುವಂತೆ ಅದೇಶ ನೀಡಿದ್ದ. ನಾನು ಬರೆದ ಇಂಗ್ಲೀಷ್ ಪತ್ರಗಳಲ್ಲಿ ಇರುವ ತಪ್ಪುಗಳನ್ನು ಮಾರ್ಕ್ ಮಾಡಿ ನನಗೆ ಕಳುಹಿಸುತ್ತಿದ್ದ. ನಾನು ಅಪ್ಪನ ಈ ಅವತಾರಕ್ಕೆ ಹೆದರಿ ಅವನಿಗೆಪತ್ರ ಬರೆಯುವುದನ್ನೇ ನಿಲ್ಲಿಸಿ ಬಿಟ್ಟೆ.
ಹಳೆಗನ್ನಡ ಸಹಿತ್ಯವೂ ಕೂಡ ಅವನನ್ನು ಸೆಳೆದಿತ್ತು. ರನ್ನ ಹರಿಹರ ರಾಘವಾಂಕ, ಜನ್ನ ಪೊನ್ನ ಮೊದಲಾದವರ ಕೃತಿಗಳು ಅವನಿಗೆ ಬಾಯಿ ಪಾಠ. ಕುಮಾರವ್ಯಾಸ ಭಾರತವನ್ನು ಅವರು ದೊಡ್ದ ಧ್ವನಿಯಲ್ಲಿ ಓದುತ್ತಿದ್ದ.
ಅಪ್ಪನಿಗೆ ಸಾಕಷ್ಟು ಸಿಟ್ಟು ಬರುತ್ತಿತ್ತು. ಸಿಟ್ಟು ಬಂದಾಗ ಮುಖ ಮುಸಡಿ ನೋಡದೇ ಭಾರಿಸಿ ಬಿಡುತ್ತಿದ್ದ. ಹಲವು ಬಾರಿ ತಪ್ಪುಗಳನ್ನು ಮಾಡಿ ಅವನಿಂದ ನಾನು ಹೊಡೆತ ತಿಂದಿದ್ದೇನೆ. ಒಮ್ಮೆಯಂತೂ ಮನೆಯ ಅಂಗಳದ ಕಂಬಕ್ಕೆ ನನ್ನನ್ನು ಕಟ್ಟಿ ದನಕ್ಕೆ ಬಡಿಯುವಂತೆ ನನಗೆ ಬಡಿದಿದ್ದ. ಆತ ಊಟ ಮಾಡಿ ಮಲಗಿದಾಗ ಯಾರಾದರೂ ಗಲಾಟೆ ಮಾಡಿದರೆ ಆತ ಸಹಿಸುತ್ತಿರಲಿಲ್ಲ. ಪಕ್ಕದ ಮನೆಯ ಚಿಕ್ಕಪ್ಪಂದಿರು ಗಲಾಟೆ ಮಾಡಿದರೂ ಹೊಡತ ಮಾತ್ರ ನನಗೆ ಬೀಳುತ್ತಿತು. ನನಗೆ ಹೊಡೆದರೆ ಅವರು ಬುದ್ದಿ ಕಲಿಯುತ್ತಾರೆ ಎಂಬ ನಂಬಿಕೆ ಅವನದಾಗಿತ್ತು.
ಅಪ್ಪ ತನ್ನ ಮನಸ್ಸಿನಲ್ಲಿ ಇದ್ದುದನ್ನು ಯಾರ ಬಳಿಯೂ ಹೇಳಿಕೊಂಡವನಲ್ಲ. ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದಾಗಲೂ ಆತ ಕೊಡು ಗೈ ದೊರೆಯೇ. ಯಾರು ಏನು ಕೇಳಿದರೂ ಇಲ್ಲ ಎಂದು ಹೇಳುವುದು ಅವನಿಗೆ ಗೊತ್ತೇ ಇರಲಿಲ್ಲ. ನಾನು ಊರು ಬಿಟ್ಟು ಬೆಂಗಳೂರಿಗೆ ಬಂದ ಮೇಲೂ ಶಶಿಧರ್ ಬೆಂಗಳೂರಿನಲ್ಲಿ ಹ್ಯಾಂಗೆ ಜೀವನ ಮಾಡ್ತೇನೋ ಎಂದು ತಲೆ ಕೆಡಿಸಿಕೊಂಡಿದ್ದನೇ ಹೊರತೂ ನನ್ನಿಂದ ಯಾವ ನಿರೀಕ್ಷೆಯನ್ನೂ ಇಟ್ತುಕೊಂಡವನಲ್ಲ. ನಾನು ವರ್ಷಕ್ಕೆ ಎರಡು ವರ್ಷಕ್ಕೇ ಮನೆಗೆ ಹೋದರೂ ಯಾಕೆ ಬಂದಿಲ್ಲ ಎಂದು ಒಮ್ಮೆಯೂ ಕೇಳಿದವನಲ್ಲ.
ಇನ್ನೊಂದು ಘಟನೆಯೂ ನನಗೆ ನೆನಪಾಗುತ್ತದೆ. ಅದು ನನ್ನ ಮದುವೆಯ ಸಂದರ್ಭದ್ದು. ನಾನು ಮದುವೆಯಾದ ಹುಡುಗಿ ಸ್ವಜಾತಿಯವಳಲ್ಲ ಎಂದು ತಿಳಿದರೂ ಒಂದೇ ಒಂದು ಮಾತನ್ನೂ ಆತ ಆಡಲಿಲ್ಲ. ಜೊತೆಗೆ ಹೆಣ್ಣು ಒಪ್ಪಿಸಿಕೊಳ್ಳುವ ಸಂದರ್ಭದಲ್ಲಿ ತನ್ನ ಜನೀವಾರವನ್ನೇ ತೆಗೆದು ಬಿಟ್ಟ. ಯಾಕೆಂದರೆ ನನ್ನ ಹೆಂಡತಿಯಾಗುವ ಹುಡುಗಿಯ ನೆಂಟರಿಷ್ಟರಿಗೆ ನಾವು ಬ್ರಾಹ್ಮಣರು ಎಂಬುದು ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಅದು ಗೊತ್ತಾದರೆ ತೊಂದರೆಯಾಗಬಹುದು ಎಂಬ ಭಯ. ಆಗ ಅಪ್ಪ ಹೇಳಿದ್ದು. ಮಗನೇ ನೀನು ಮದುವೆಯಾಗುವುದು ಮುಖ್ಯ. ನನ್ನ ಜನಿವಾರವಲ್ಲ...!
ಅಪ್ಪ ಮಗೇಗಾರಿನ ಮಹಾ ಗಣಪತಿ ನಾಟಕ ಸಂಘದ ಸಂಸ್ಥಾಪಕ ಸದಸ್ಯನಾಗಿದ್ದ. ಹಲವಾರು ನಾಟಕಗಳಲಿ ಅಭಿನಯಿಸಿದ್ದ. ಪ್ರಚಂಡ ರಾವಣ ಮತ್ತು ಕೌಶಿಕ ಅವನು ಬರೆದ ಎರಡು ನಾಟಕಗಳು. ಈ ನಾಟಕಗಳು ಹಲವಾರು ಬಾರಿ ಪ್ರದರ್ಶನ ಕಂಡವು. ಹಾಗೆ ಎರಡು ಯಕ್ಷಗಾನವನ್ನು ಅವನು ಬರೆದಿದ್ದ.
ನಾನು ಬೆಂಗಳೂರಿಗೆ ಬಂದಿ ಇಲ್ಲಿಯೇ ಕಳೆದು ಹೋದ ಮೇಲೆ ಅವನು ನನಗೆ ಎಂದೂ ಬೈಯಲಿಲ್ಲ. ನನ್ನ ಬಗ್ಗೆ ಅವನಿಗೆ ಅಪಾರವಾದ ಪ್ರೀತಿ ಇತ್ತು. ಮಗನ ಬಗ್ಗೆ ಹೆಮ್ಮೆಯಿತ್ತು. ಮಗನ ಪ್ರಾಮಾಣಿಕತೆ ಮತ್ತು ಸಾಧನೆಯಿಂದ ಸಂತೋಷಗೊಂಡಿದ್ದ ಅತ ತನ್ನ ಕೊನೆಯ ದಿನಗಳಲ್ಲಿ ನಾನು ಅವನಿಗೆ ಏನೂ ಮಾಡಲಿಲ್ಲ ಎಂದು ಹೇಳುತ್ತಿದ್ದನಂತೆ. ನನ್ನನ್ನು ನೋಡಬೇಕು ಎಂದು ತಮ್ಮ ಮತ್ತು ಅಮ್ಮನ ಹತ್ತಿರ ಹೇಳುತ್ತಿದ್ದನಂತೆ. ನಾನು ಕಳೆದ ಸೋಮವಾರ ಊರಿಗೆ ದೌಡಾಯಿಸಿದೆ. ಆಗ ಅಪ್ಪ ಅರೆ ಪ್ರಜ್ನಾವಸ್ತೆಯಲ್ಲಿದ್ದ. ಆದರೆ ಅವನಿಗೆ ನಾನು ಬಂದಿದ್ದು ತಿಳಿದಿತ್ತು. ನಾಲ್ಕಾರು ದಿನಗಳಿಂದ ನಿದ್ರೆ ಮಾಡದೇ ಏನೇನೂ ಮಾತನಾಡುತ್ತಿದ್ದ ಅತ ನನ್ನನ್ನು ನೋಡಿದ. ಕೈ ಎತ್ತಿ ಆಶೀರ್ವಾದ ಮಾಡಿದ. ನಿನಗೆ ಗುಣವಾಗುವ ವರೆಗೆ ಆನು ಇಲ್ಲೇ ಇರ್ತಿ ಎಂದಾಗ ಸಮಾಧಾನದಿಂದ ಹಾಗೆ ಮಲುಗಿದ. ರಾತ್ರಿ ಗಂಜಿ ಕುಡಿದ. ಔಷಧ ಸೇವಿಸಿದ. ಆದರೆ ಮರು ದಿನ ಬೆಳಿಗ್ಗೆ ನೋಡಿದಾದ ಅವನಿರಲಿಲ್ಲ.
ಹಾಸಿಗೆ ಹಿಡಿದ ಮೇಲೂ ಆತ ನಾಟಕ ಬರೆಯಲು ಮುಂದಾಗಿದ್ದ. ಆಗ ಅವನ ಕೈ ಕೂಡ ಸ್ವಾದೀನದಲ್ಲಿ ಇರಲಿಲ್ಲ. ಹೀಗಾಗಿ ಮೊಮ್ಮಗ ಕಾರ್ತೀಕನಿಗೆ ಹೇಳಿ ಬರೆಸುತ್ತಿದ್ದನಂತೆ. ನಾಲ್ಕಾರು ದೃಶ್ಯಗಳನ್ನು ಬರೆದು ಮುಗಿಸುವಷ್ಟರಲ್ಲಿ ಅವನು ಅರೆ ಪ್ರಜ್ನಾವಸ್ತೆಗೆ ಸರಿದು ಹೋದ. ಆತನ ನಾಟಕದ ಅಂಕದ ಪರದೆಯೂ ಜಾರಿ ಹೋಗಿತ್ತು.
ನನಗೆ ಅಪ್ಪ ಎಂದಾಕ್ಷಣ ಹೀಗೆ ಹಲವರು ಘಟನೆಗಳು ನೆನಪಾಗುತ್ತವೆ. ನನಗೆ ಓದುವ ಅಭಿರುಚಿಯನ್ನು ಮೂಡಿಸಿದ. ಬದುಕುವುದನ್ನು ಕಲಿಸಿದ. ಬದುಕಿನಲ್ಲಿ ಮೌಲ್ಯಗಳು ಮುಖ್ಯ, ಹಣವಲ್ಲ ಎಂದು ಪಾಠ ಹೇಳಿದ. ಜಾತ್ಯಾತೀತ ಮೌಲ್ಯಗಳನ್ನು ನನ್ನೊಳಗೆ ತುಂಬಿದ. ಬೆರೆಯವರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ವ್ಯಕ್ತಿತ್ವ ರೂಪಗೊಳ್ಳುವಂತೆ ಮಾಡಿದ. ಬೇರೆಯವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಬದುಕುವ ದಾರಿ ತೋರಿಸಿದ.
ಹಾಗೆ ನನ್ನೊಳಗೆ ಒಬ್ಬ ಪತ್ರಿಕೋದ್ಯಮಿಯನ್ನು ಹುಟ್ಟು ಹಾಕಿದವನೂ ಅವನೇ. ನಾನು ಸಣ್ಣವನಿರುವಾಗಲೇ ಸ್ಥಳೀಯ ಪತ್ರಿಕೆಗಳಲ್ಲಿ ರಾಜಕೀಯ ವಿಶ್ಲೇಷಣೆ ಹಾಗೂ ಲೇಖನಗಳನ್ನು ಬರೆಯುತ್ತಿದ್ದ ಆತ ನನಗೆ ಬರೆಯುವ ಅಭಿರುಚಿ ಬೆಳೆಯುವಂತೆ ಮಾಡಿದ.
ಅಪ್ಪ ನನ್ನಿಂದ ಏನನ್ನೂ ನಿರೀಕ್ಷಿಸಲಿಲ್ಲ. ನಾನು ಅವನಿಗೆ ಏನನ್ನೂ ಕೊಡಲಿಲ್ಲ. ಆದರೆ ಅವನು ನನಗೆ ನೀಡಿದ್ದನ್ನು ನಾನು ಈ ಜನ್ಮದಲ್ಲಿ ಮರೆಯಲಾರೆ. ಆ ಋಣವನ್ನು ನಾನು ತೀರಿಸಲಾರೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...