Tuesday, June 5, 2012

ಬಿಜೆಪಿ ಸ್ವರೂಪ ಬದಲಾವಣೆ; ಇತ್ತ ಹಳೆ ಸೀರೆಯೂ ಇಲ್ಲ, ಅತ್ತ ಹೊಸ ಸೀರೆಯೂ ಇಲ್ಲ !

ಒಂದು ಸರ್ಕಾರದ ಐದು ವರ್ಷಗಳ ಆಡಳಿತಾವಧಿಯಲ್ಲಿ ಮೊದಲ ನಾಲ್ಕು ವರ್ಷಗಳನ್ನು ನಿರ್ಣಾಯಕ ವರ್ಷಗಳು ಎಂದೇ ಹೇಳಬೇಕಾಗುತ್ತದೆ. ಹಲವು ರೀತಿಯ ಭರವಸೆಗಳನ್ನು ನೀಡಿ ಅಧಿಕಾರದ ಗದ್ದುಗೆ ಏರಿದ ಪಕ್ಷದ ಸತ್ವ ಪರೀಕ್ಷೆ ಈ ಅವಧಿಯಲ್ಲೇ ನಡೆದು ಹೋಗುತ್ತದೆ. ಕೊನೆಯ ಒಂದು ವರ್ಷ ಚುನಾವಣೆಗೆ ಸಿದ್ಧವಾಗಬೇಕಾದ ಸಮಯವಾಗಿರುವುದರಿಂದ ಅದು ಸರ್ಕಾರದ ವಿಶ್ವಾಸಾರ್ಹತೆಯನ್ನು ಅಭಿವೃದ್ಧಿಪರ ನಿಲುವನ್ನು ಸಾಬೀತು ಪಡಿಸುವ ಅವಧಿ ಅಲ್ಲ. ಜೊತೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಮಾಡಲಾಗದ್ದನ್ನು ಒಂದು ವರ್ಷದ ಅವಧಿಯಲ್ಲಿ ಮಾಡಬಹುದು ಎಂಬುದನ್ನು ನಂಬಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಸಾಧನೆ ಮತ್ತು ವೈಫಲ್ಯವನ್ನು ಚರ್ಚಿಸಲು ಇದು ಸಕಾಲ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ  ನಡೆದ ಘಟನಾವಳಿಗಳನ್ನು ಒಮ್ಮೆ ನೆನಪು ಮಾಡಿಕೊಂಡರೆ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಯಾವುದು ? ಆ ಚಿತ್ರದಲ್ಲಿ ಕಾಣುವ ಬಣ್ನಗಳು ಯಾವವು ?ಈ ಚಿತ್ರವನ್ನು ಬಿಡಿಸಿದವರು ತೆರೆದಿಟ್ಟ ಸತ್ಯ ಯಾವುದು ? ಒಟ್ಟ್ಇನಲ್ಲಿ ಇದು ಸಫಲ ಯತ್ನವೇ ಅಥವಾ ವಿಫಲತೆಯ ಇತಿಹಾಸವೆ ?
ಒಂದು ಸರ್ಕಾರ ಎಂದ  ತಕ್ಷಣ  ಅದರ ಹಿಂದೆ ಪಕ್ಷದ ನೆರಳು ಇದ್ದೇ ಇರುತ್ತವೆ. ನಮ್ಮ ಜನತಂತ್ರ ವ್ಯವಸ್ಥೆಯಲ್ಲಿ ಪಕ್ಷ ರಹಿತವಾದ ಸರ್ಕಾರಕ್ಕೆ ಅಸ್ಥಿತ್ವ ಇಲ್ಲ. ಹೀಗಾಗಿ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವಾಗ ಬಿಜೆಪಿ ಸರ್ಕಾರ ಎಂದೇ ನಾವು  ಹೇಳಬೇಕಾಗುತ್ತದೆ. ಜೊತೆಗೆ ಸರ್ಕಾರದ ಆಗುಹೋಗುಗಳ ನೇರವಾದ ಪರಿಣಾಮ ಜನರ ಮೇಲೆ ಆಗುತ್ತದೆ ಎಂಬುದು ನಿಜವಾದರೂ ಇದರ ಪರಿಣಾಮ ಪಕ್ಷದ ಮೇಲೆ ಆಗುವುದನ್ನು ನಿರಾಕರಿಸಲಾಗದು. ಹಾಗಿದ್ದರೆ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತೀಯ ಜನತಾ ಪಕ್ಷದ ಮೇಲೆ ಆದ ಪರಿಣಾಮ ಯಾವುದು ಮತ್ತು  ಯಾವ ರೀತಿಯದು ?
ಭಾರತದಲ್ಲಿ ನಿಜವಾದ ಅರ್ಥದಲ್ಲಿ ಪಕ್ಷ ಎಂಬುದು ಇಲ್ಲ. ಇಲ್ಲಿರುವುದು ರಾಜಕೀಯ ನಾಯಕರ ಗುಂಪುಗಳು. ಕಾಂಗ್ರೆಸ್ ಒಂದು ಚಳವಳಿಯಾಗಿ ನಂತರ ಪಕ್ಷವಾದರೂ ಅದನ್ನು ಒಂದು ಪಕ್ಷ ಎಂದು ಪರಿಗಣಿಸುವುದು ಸಾಧ್ಯವಿಲ್ಲ.  ಯಾಕೆಂದರೆ ಒಂದು ಪಕ್ಷಕ್ಕೆ ಸ್ಪಷ್ಟವಾದ ಸೈದ್ಧಾಂತಿಕ ತಳಹದಿ, ನೈತಿಕ ಬದ್ಧತೆ ಮತ್ತು ಪ್ರಾಮಾಣಿಕತೆ ಬೇಕಾಗುತ್ತದೆ. ಕೆಳ ಹಂತದಿಂದ ಜನತಾಂತ್ರಿಕ ಮೌಲ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ಇರಬೇಕು. ಸ್ಥಳೀಯ ನಾಯಕತ್ವ ಬೆಳೆಯಲು ಅನುವು ಮಾಡಿಕೊಡುವ ವಾತಾವರಣ ಇರಬೇಕು. ಚುನಾವಣೆ ಬಂದಾಗ ಗೆಲ್ಲುವುದೊಂದೇ ಪಕ್ಷದ ಗುಣಧರ್ಮ ಅಲ್ಲ. ಹಾಗಾದರೆ ಪಕ್ಷ ಆಂತರಿಕವಾಗಿ ಕ್ಶಯಿಸತೊಡಗುತ್ತದೆ.
ಕಾಂಗ್ರೆಸ್ ಪಕ್ಷಕ್ಕಿಂತ ಭಾರತೀಯ ಜನತಾ ಪಕ್ಶಕ್ಕೆ ಇಂತಹ ಪಕ್ಷದ  ಗುಣಗಳಿದ್ದವು. ಬಿಜೆಪಿಯ ಸಿದ್ಧಾಂತವನ್ನು ಒಪ್ಪದವರೂಅದಕ್ಕೊಂದ್ಉ ಸಿದ್ಧ್ಹಾಂತವಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಆ ಪಕ್ಷದ ಬಲ ಪಂಥೀಯನಿಲುವುಗಳನ್ನು ಎಲ್ಲರೂ ಒಪ್ಪಿಕೊಳ್ಳುವುದು ಸಾಧ್ಯವಿಲ್ಲದವರೂ ಅ ಪಕ್ಷ ನಿಲುವುರಹಿತವಾಗಿದೆ ಎಂದು ಹೇಳುವಂತಿರಲಿಲ್ಲ.
ಹಾಗೆ ವಾಜಪೇಯಿ ಮತ್ತು ಆಡ್ವಾಣಿಯವರ ನಿಲುವನ್ನು ಒಪ್ಪದವರೂ ಅವರ ಬಗ್ಗೆ ವೈಯಕ್ತಿಕ ಗೌರವವನ್ನು ಉಳಿಸಿಕೊಂಡು ಬರುವಂತಹ ನಾಯಕತ್ವದ ಗುಣ ಅವರಿಗಿತ್ತು. ಹಾಗೆ ಕರ್ನಾಟಕದಲ್ಲಿ ಸಹ, ಬಿಜೆಪಿಯ ನಾಯಕರ ಪಕ್ಷದ ಮತ್ತು ಸೈದ್ಧಾಂತಿಕ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ.
ರಾಜ್ಯದಲ್ಲಿ ಬಿಜೆಪಿ  ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಆದ ಮೊದಲ ಪರಿಣಾಮ ಎಂದರೆ ಅದರ ಸ್ವರೂಪದಲ್ಲಾದ ಮೂಲಭೂತ ಬದಲಾವಣೆ. ಅಧಿಕಾರವನ್ನು ಭದ್ರ ಪಡಿಸಿಕೊಳ್ಳು ಭರದಲ್ಲಿ ಕಂದ ಕಂಡವರಿಗೆಲ್ಲ ಪಕ್ಷ  ಬಾಗಿಲು ತೆರೆಯಿತು. ಪಕ್ಶ ಬದಲಿಸುವುದನ್ನೇ ರಾಜಕಾರಣ ಎಂದು ನಂಬಿರುವ ಹಲವರು ಬಿಜೆಪಿ ಸೇರಿದರು.; ಅಧಿಕಾರದ ಗದ್ದುಗೆ ಹಿಡಿದು ವಿಜ್ರಂಭಿಸತೊಡಗಿದರು.ಬಿಜೆಪಿ ಸರ್ಕಾರದ ಬುಡ ಗಟ್ಟಿಯಾಯಿತು ಎಂದು ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಬೀಗುತ್ತಿರುವಾಗಲೇ ಬಿಜೆಪಿ  ಒಂದು ರಾಜಕೀಯ ಪಕ್ಷವಾಗಿ  ದುರ್ಬಲವಾಗತೊಡಗಿತ್ತು. ಅಧಿಕಾರ ರಾಜಕಾರಣದಲ್ಲಿ ಬಿಜೆಪಿ ಎಂಬ ಪಾರ್ಟಿ ವಿಥ್ ಡಿಫರೆನ್ಸ್  ಕಳೆದು ಹೋಗತೊಡಗಿದ್ದು ಪಕ್ಷದ ನಾಯಕತ್ವದ ಅರಿವಿಗೆ ಬರಲೇ ಇಲ್ಲ.
ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದ ತತ್ವ ಮತ್ತು ಮೌಲ್ಯಗಳನ್ನು  ಪಕ್ಷದ ಸರ್ಕಾರವೇ ಗಾಳಿಗೆ ತೂರುತ್ತಲೇ ಬಂತು. ಬಿಜೆಪಿ  ನಂಬಿಕೊಂಡು ಬಂದ ವ್ಯಕ್ತಿಗತ ನೈತಿಕತೆಯನ್ನು  ಸಚಿವ ರೇಣುಕಾಚಾರ್ಯ ಗಾಳಿಗೆ ತೂರಿದರು.  ಕೆಲವು ಸಚಿವರು ಸದನದಲ್ಲೇ ನೀಲಿ ಚಿತ್ರ ವೀಕ್ಷಣೆ ಮಾಡಿದರು. ಭ್ರಷ್ಟತೆಯ ಪಿಡುಗು ಮೂಲವ್ಯಾಧಿಯಂತೆ ಕಾಡತೊಡಗಿತು. ಪಕ್ಷದಲ್ಲಿ ಆದ ಈ ಬದಲಾವಣೆ ಅಥವಾ ಪಕ್ಷ ಧರಿಸತೊಡಗಿದ ಹೊಸ ಸ್ವರೂಪದ ಬಗ್ಗೆ ಯಾವ ರೀತಿಯ ಪ್ರತಿರೋಧವೂ ವ್ಯಕ್ತವಾಗಲಿಲ್ಲ.  ಅಂದರೆ ಬಿಜೆಪಿಯ ನಾಯಕತ್ವಕ್ಕೆ ಪಕ್ಷದ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆ  ಅನಿವಾರ್ಯ ಎಂದು ಅನ್ನಿಸುತ್ತಿರಬೇಕು.  ಇಲ್ಲದಿದ್ದರೆ  ನೈತಿಕ ಬದ್ಧತೆ  ಮತ್ತು  ಸೈದ್ಧಾಂತಿಕ  ನಿಲುವುಗಳ ಬಗ್ಗೆ ಪಕ್ಷ ರಾಜೀ ಮಾಡಿಕೊ:ಳ್ಳುವುದು ಸಾಧ್ಯವೇ ಇರಲಿಲ್ಲ.
ಬಿಜೆಪಿಯಲ್ಲಿ  ಆದ ಆಗುತ್ತಿ ರುವ ಬದಲಾವಣೆಗೆ ಬೇರೆ ಬೇರೆ ರೀತಿಯ ಆಯಾಮಗಳೂ ಇವೆ.  ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದ್ಏಶ ದೊಡ್ದದು ಎಂಬ ಬಿಜೆಪಿಯ ಸಿದ್ಧಾಂತವೂ ಈಗ ಉಳಿದಂಅತೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪಕ್ಷಕ್ಕಿಂತ ದೊಡ್ಡದಾಗಿ ಬೆಳೆದವರು  ಯಡಿಯೂರಪ್ಪ. ಅವರು ಹೀಗೆ ಬೆಳೆಅಯುವಾಗ ಸುಮ್ಮನಿದ್ದ ನಾಯಕತ್ವಕ್ಕೆ ಈಗ ಯಡಿಯೂರಪ್ಪನವರೇ ನುಂಗಲಾರದ ತುತ್ತಾಗಿದ್ದಾರೆ. ಅವರನ್ನು ಇಟ್ಟು ಕೊಳ್ಳಲೂ ಆಗದೇ ಕಳಿಹಿಸಿಕೊಡಲೂ ಸಾಧ್ಯವಾಗದ ಅಸಹಾಯಕ ಸ್ಥಿತಿಗೆ ಬಿಜೆಪಿ ತಲುಪಿ ಬಿಟ್ಟಿದೆ. ಈಗ ಯಡೀಯೂರಪ್ಪ ಪಕ್ಷದಲ್ಲಿ ಇದ್ದರೂಸಮಸ್ಯೆ. ಪಕ್ಷ ಬಿಟ್ಟರೂ ಸಮಸ್ಯ.
ಯಡಿಯೂರಪ್ಪನವರಿಗೆ ಭಸ್ಮಾಸುರ ಹಸ್ತವನ್ನು ನೀಡಿದ್ದೇ ಬಿಜೆಪಿ ನಾಯಕತ್ವ.ಪಕ್ಷದ ಸ್ವರೂಪಕ್ಕೆ ಕೊಡಲಿ ಪೆಟ್ಟು ಬೀಳುವಂತಾ ಬೆಳವಣಿಗೆ ಆಗುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನೆ ಕುಳಿತವರು ಬಿಜೆಪಿ ವರಿಷ್ಠರು. ಹೀಗಾಗಿ ಈ ಹಸ್ತ ತನ್ನ ತಲೆಯ ಮೇಲೆ ಬಂದರೂ ಏನು ಮಾಡಲಾಗದ ಹಂತವನ್ನು ಬಿಜೆಪಿ ತಲುಪಿ ಬಿಟ್ಟಿದೆ.
ಸೈದ್ಧಾಂತಿಕ ರಾಜಕಾರಣದಿಂದ ಅಧಿಕಾರ ರಾಜಕಾರಣಕ್ಕೆ ಸರಿಯುತ್ತಿರುವ ಬಿಜೆಪಿ, ವಿಚಿತ್ರ ತೊಳಲಾಟದಲ್ಲಿದೆ. ಅಧಿಕಾರ ರಾಜಕಾರಣದ ಪಟ್ಟುಗಳು ಪಕ್ಷಕ್ಕೆ ಕರಗತವಾಗಿಲ್ಲ.  ಹೀಗಾಗಿ ಯಡಿಯೂರಪ್ಪನಂತವರು ಎಡವುತ್ತಾರೆ. ಸರ್ಕಾರವನ್ನು ಉಳಿಸಿಕೊಳ್ಳುವ ಭರದಲ್ಲಿ  ಭ್ರಷ್ಟಾಚಾರದ ಕೂಪದಲ್ಲಿ ಕಳೆದು ಹೋಗುವ  ಸ್ಥಿತಿ ನಿರ್ಮಾಣವಾಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಸೈದ್ಧಾಂತಿಕ ರಾಜಕಾರಣ ಎಷ್ಟರ ಮಟ್ಟಿಗೆ ಇರಬೇಕು  ಇವೆರಡರ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುಫುದು ಹೇಗೆ ಎಂಬದು ತಿಳಿಯದೇ ಪಕ್ಷ  ಗೊಂದಲಕ್ಕೆ ಸಿಕಲುಕಿಕೊಳ್ಳುತ್ತದೆ.
ಕಳೆದು ನಾಲ್ಕು ವರ್ಷಗಳಲ್ಲಿ ಬಿಜೆಪಿ ಎಂಬ ಪಕ್ಷದಲ್ಲಿ ಆದ ಆಗುತ್ತಿರುವ ಬದಲಾವಣೆಗಳು ಈ ಪಕ್ಷಕ್ಕೆ  ಮತ್ತೆ ಅಧಿಕಾರವನ್ನು ನೀಡುತ್ತದೆ ಎಂದು ಹೇಳುವುದು ಕಷ್ಟ, ಗಂಡ ತರುವ ಹೊಸ ಸೀರೆಗಾಗಿ ಹಳೆಯ ಸೀರೆಯನ್ನು ಸುಟ್ಟುಕೊಂಡ ಗೃಹಿಣಿಯ ದುರಂತ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ. ಅತ್ತ ಹೊಸ ಸೀರೆಯೂ ಇಲ್ಲ. ಇತ್ತ ಹಳೆಯ ಸೀರೆಯೂ ಇಲ್ಲ. ಎಲ್ಲರ ಎದುರು ನಗ್ನವಾಗುವ   ದುರಂತ ಬಿಜೆಪಿಯದು.

3 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

"ಮಾಡಿದ್ದುಣ್ಣೋ ಮಹರಾಯ"...ಆಷ್ಟೇ.
ಸಕಾಲಿಕ ಬರೆಹ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

" ಮಾಡಿದ್ದುಣ್ಣೋ ಮಹರಾಯ " ..ಅಷ್ಟೇ..
ಸಕಾಲಿಕ ಬರೆಹ. ಚೆನ್ನಾಗಿದೆ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

" ಮಾಡಿದ್ದುಣ್ಣೋ ಮಹರಾಯ " ..ಅಷ್ಟೇ..
ಸಕಾಲಿಕ ಬರೆಹ. ಚೆನ್ನಾಗಿದೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...