Friday, December 27, 2013

ವಿದ್ರೋಹ ಭಾಗ ೩



ªÀÄ¼É ¤AvÀ ªÉÄïÉ, ºÀÆ VqÀzÀ ªÉÄðzÀÝ ¤Ãj£À ºÀ¤UÀ¼ÀÄ ºÁUÉ vÉÆnÖPÀÄÌwÛzÀݪÀÅ.  ºÁUÉ ¤Ãj£À ºÀ¤UÀ¼ÀÄ ©Ã¼ÀĪÁUÀ UÉÆwÛ£ÀgÉÃAzÀæ ±ÀªÀÄð ¤vÀå PÀªÀÄðªÀ£ÀÄß ªÀÄÄV¹ ºÉÆgÀPÉÌ §gÀĪÀµÀÖgÀ°è ¸ÀªÀÄAiÀÄ ºÀ£ÉÆßAzÀÄ UÀAmÉ zÁnvÀÄÛ. DUÀ¯Éà ºÀ®ªÀgÀÄ §AzÀÄ PÁAiÀÄÄwÛzÀÝgÀÄ. »ÃUÉ PÁAiÀÄÄwÛzÀݪÀgÀÄ PÀlÖzÀ ªÀÄÄA¨sÁUÀzÀ°ègÀĪÀ GzÁå£À ªÀ£ÀzÀ°è ¸ÀÄvÀÄÛwÛzÀÝgÀÄ. AiÀiÁjUÀÆ M¼ÀUÉ §AzÀÄ CªÀjAzÀ ¨ÉʹPÉƼÀÄîªÀ zsÉÊAiÀÄð EgÀ°®è. 
ºÀ£ÉÆßAzÀÄ UÀAmÉUÉ ¸ÀjAiÀiÁV E°èUÉ §AzÀ £ÁAiÀÄPÀgÀÄ £ÉÃgÀªÁV M¼ÀUÉ £ÀqÉzÀgÀÄ. M¼ÀUÉ ºÁ¹zÀÝ ZÁ¥ÉAiÀÄ ªÉÄÃ¯É CªÀgÀÄ PÀĽvÀÄPÉƼÀÄîªÀÅzÀPÀÆÌ £ÀgÉÃAzÀæ ±ÀªÀÄð ºÉÆgÀ §gÀĪÀÅzÀPÀÆÌ ¸Àj ºÉÆìÄvÀÄ.  vÀªÀÄä£ÀÄß PÁAiÀÄÄwÛgÀĪÀ £ÁAiÀÄPÀgÀ£ÀÄß CªÀgÀÄ £ÉÆÃr ¸ÀtÚzÁV £ÀPÀÌgÀÄ. £ÁAiÀÄPÀgÀÄ JzÀÄÝ ¤AvÀĪÀgÀÄ ºÁUÉ §UÉÎ ±ÀªÀÄðgÀ PÁ®Ä ªÀÄÄnÖ £ÀªÀĸÀÌj¹zÀgÀÄ.  ±ÀªÀÄðgÀÄ PÀĽvÀ ªÉÄÃ¯É CªÀgÀ ªÀÄÄAzÉ PÀĽvÀ £ÁAiÀÄPÀjUÉ ¸ÀjAiÀiÁV PÀĽvÀÄPÉƼÀÄîªÀÅzÀPÉÌ CªÀgÀ ºÉÆmÉÖAiÀÄzÉà CrÝ. §ÈºÀvÁÛzÀ CªÀgÀ ºÉÆmÉÖ JgÀqÀÆ vÉÆqÉUÀ¼À£ÀÄß zÁn £É®ªÀ£ÀÄß ¸Àà²ð¹wÛzÀÝgÉ CªÀjUÉ QjQjAiÀiÁUÀÄwÛvÀÄÛ.
F ªÀÄÄzÀÄPÀ MAzÀÄ PÀÄað ºÁQ¹zÀÝgÉ EªÀgÀ UÀAmÉãÀÄ ºÉÆUÀÄwÛvÀÄÛ JAzÀÄ ªÀÄ£À¹ì£À°è C¤ß¹zÀgÀÆ CzÀ£ÀÄß ºÉüÀĪÀ zsÉÊAiÀÄð CªÀjUÉ EgÀ°®è.
¤ªÀÄUÉ PÀĽvÀÄPÉƼÀî®Ä vÀÄA¨Á vÉÆAzÀgÉ AiÀiÁzÀAwzÉ C®èªÉ £ÁAiÀÄPÀgÉ..? ¥Àæ²ß¹zÀgÀÄ ±ÀªÀÄð.
ºÁUÉä®è. ¤ÃªÀÅ £À£ÀߣÀÄß £ÁAiÀÄPÀgÉ JAzÀÄ PÀgÉAiÀĨÁgÀzÀÄ. ¤ÃªÀÅ £ÀªÀÄUÉ®è £ÁAiÀÄPÀgÀÄ. ¤ªÀÄä D²ÃªÁðzÀ¢AzÀ F ¸ÀPÁðgÀ C¢üPÁgÀPÉÌ §A¢zÉ. £Á£ÀÄ £ÁAiÀÄPÀ£ÁVzÀÄÝ ¤«ÄäAzÀ. ¤ÃªÀÅ £À£ÀUÉ £ÁAiÀÄPÀgÉà JAzÀÄ PÀgÉzÀgÉ £À£ÀUÉ ªÀÄÄdÄUÀgÀªÁUÀÄvÀÛzÉ. JAzÀÄ ºÉýzÀ £ÁAiÀÄPÀgÀÄ vÁªÀÅ PÀĽvÀ ¨sÀAVAiÀÄ£ÀÄß §zÀ°¹zÀgÀÄ. JqÀvÉÆqÉAiÀÄ£ÀÄß JwÛ §®vÉÆqÉAiÀÄ ªÉÄÃ¯É ElÖgÀÄ. AiÀiÁªÀ vÉÆqÉAiÀÄ£ÀÄß AiÀiÁªÀ vÉÆqÉAiÀÄ ªÉÄÃ¯É ElÖgÀÆ UÀÄqÁtzÀAvÀºÀ ºÉÆmÉÖ ªÀiÁvÀæ £É®ªÀ£ÀÄß ZÀÄA©¹ QjQjAiÀÄ£ÀÄß GAlÆ ªÀiÁqÀÄwÛvÀÄÛ. eÉÆvÉUÉ ºÉÆmÉÖAiÉƼÀUÉ vÀÄA©zÀÝ C¥Á£ÀªÁAiÀÄÄ ºÉÆgÀPÉÌ §gÀĪÀÅzÀPÁÌV zÁjAiÀÄ£ÀÄß ºÀÄqÀÄPÀÄwÛvÀÄÛ. £ÁAiÀÄPÀjUÉ M¼ÀVgÀĪÀ F ªÁAiÀÄĪÀ£ÀÄß ºÉÆgÀPÉÌ ºÁPÀ¢zÀÝgÉ ¸ÁzsÀåªÉà E®è JAzÀÄ C¤ß¸ÀvÉÆqÀVvÀÄ.
EzÀ£Éß®è UÀªÀĤ¸ÀÄwÛzÀÝ ±ÀªÀÄð ªÀÄ£ÀĵÀå£À ªÀÄÆ®¨sÀÆvÀ ¸ÀªÀĸÉå JAzÀgÉ ºÉÆmÉÖAiÉÄÃ. J®ègÀÆ ªÀiÁqÀĪÀÅzÀÄ ºÉÆmÉÖUÁV. DzÀgÉ ºÉÆmÉÖAiÀÄ£ÀÄß ºÉÆgÀĪÀ ±ÀQÛ PÁ®ÄUÀ½UÉ EgÀ¨ÉÃPÀÄ. PÁ®ÄUÀ¼ÀÄ ºÉÆgÀ¯ÁgÀzÀµÀÄÖ zÉÆqÀÝzÁV ºÉÆmÉÖAiÀÄ£ÀÄß ¨É¼É¸ÀPÀÆqÀzÀÄ. ¤ÃªÀÅ ªÀÄÄRåªÀÄAwæAiÀiÁzÀ ªÉÄÃ¯É ¤ªÀÄä ºÉÆmÉÖ ¨É¼ÉAiÀÄÄwÛzÉ. ¤ÃªÀÅ ºÉÆmÉÖAiÀÄ£ÀÄß ¨É¼É¸ÀÄwÛ¢ÝÃj. ¤ªÀÄä ºÉÆmÉÖAiÉƼÀUÉ gÁdåzÀ £É®ªÀ£Éß®è vÀÄA©PÉƼÀÀÄzÀÄ. ¤ÃªÀÅ PÉÆmÁåAvÀgÀ gÀÆ¥Á¬Ä ºÀtªÀ£ÀÄß ºÉÆmÉÛAiÉƼÀUÉ vÀÄA§ §ºÀÄzÀÄ. ªÀÄ£ÀĵÀå¤UÉ AiÀiÁªÁUÀ ºÉÆmÉÖ ªÀÄÄRåªÁUÀÄvÀÛzÉAiÉÆà DUÀ ¸ÀªÀĸÉå ¥ÁægÀA¨sÀªÁUÀÄvÀÛzÉ. ºÉÆmÉÖ §Ä¢ÝAiÀÄ ªÀiÁvÀ£ÀÄß PÉüÀĪÀÅ¢®è.. CxÀðªÁ¬ÄvÉ £ÁAiÀÄPÀgÉ..? JAzÀÄ ¥Àæ²ß¹zÀgÀÄ.
EªÀgÀ ªÀiÁw£À vÀ¯É §ÄqÀ £ÁAiÀÄPÀjUÉ CxÀðªÁUÀ°®è. F ªÀÄÄzÀÄPÀ ºÉÆmÉÖAiÀÄ §UÉÎ ¨sÁµÀt ©qÀÄwÛzÁÝ£É.  ªÀiÁvÀ£ÁqÀĪÀ ZÀl. £Á£ÀÄ £À£Àß ¸ÀªÀĸÉåAiÀÄ §UÉÎ, gÁdPÁgÀtzÀ §UÉÎ ©ü£ÀߪÀÄwÃAiÀÄ ZÀlĪÀnPÉAiÀÄ §UÉÎ ªÀiÁvÀ£ÁqÀ®Ä §AzÀgÉ FvÀ E£ÉßãÉÆà ªÀiÁvÀ£ÁqÀÄvÁÛ£É. ºÁUÀAvÀ EªÀ£À£ÀÄß «gÉÆâü¸ÀĪÀAvÉAiÀÄÆ E®è. ¥ÀPÀëzÀ CzsÀðzÀµÀÄÖ ±Á¸ÀPÀgÀÄ EªÀ£À ªÀiÁvÀ£ÀÄß PÉüÀÄvÁÛgÉ. EªÀ£ÀÄ ¨ÉÃqÀ JAzÀgÉ £À£Àß £ÁAiÀÄPÀvÀé agÀArAiÀÄ°è ©zÀÄÝ PÉÆaÑ ºÉÆÃUÀÄvÀÛzÉ.  EªÀ£À D²ÃªÁðzÀ EzÀÝgÉ AiÀiÁgÀÆ £À£ÀߣÀÄß C®ÄV¸À®Ä ¸ÁzsÀå«®è JAzÀÄPÉÆAqÀgÀÄ £ÁAiÀÄPÀgÀÄ.
CµÀÖgÀ°è ºÉÆmÉÖAiÀÄ M¼ÀUÉ vÀÄA©PÉÆArzÀÝ C¥Á£ÀªÁAiÀÄÄ J®è CqÉ vÀqÉUÀ¼À£ÀÄß §¢UÉÆwÛ UÀÄzÀzsÁégÀªÀ£ÀÄß ºÀÄqÀÄQPÉÆAqÀÄ CvÀÛ ºÉÆgÀmÉà ©nÖvÀÄ. CzÀ£ÀÄß vÀqÉAiÀÄ®Ä CªÀgÀÄ JµÀÄÖ AiÀÄvÀß £ÀqɹzÀgÀÆ ¸ÁzsÀåªÁUÀ°®è. §Ägï JA§ ±À§ÝzÉÆA¢UÉ CzÀÄ ºÉÆgÀPÉÌà §AzÉà ©nÖvÀÄ.
¤ÃªÀÅ ¤ªÀÄä ºÉÆmÉÖAiÉƼÀUÉ PÀ®äµÀªÀ£ÀÄß vÀÄA©PÉÆAr¢ÝÃj. EzÀÄ ¤ªÀÄUÉ CxÀðªÁUÀ¨ÉÃQvÀÄÛ. F dUÀwÛ£À°è AiÀiÁgÀÆ ºÉÆmÉÖAiÉƼÀUÉ wA¢zÀÝ£ÀÄß ªÀÄÄaÑnÛPÉƼÀî®Ä ¸ÁzsÀå«®è. CzÀÄ ºÉÆgÀ dUÀwÛUÉ UÉÆvÁÛVAiÉÄà UÉÆvÁÛUÀÄvÀÛzÉ.  ¤ªÀÄUÉ w£ÀÄߪÀÅzÀQÌAvÀ ªÉÆzÀ®Ä EzÀÄ CxÀðªÁUÀ¨ÉÃQvÀÄÛ. FUÀ ¤ªÀÄUÉ PÀµÀÖ §A¢zÀÄÝ w£Àß ¨ÁgÀzÀÝ£ÀÄß wA¢zÀÝjAzÀ¯ÉÃ. FUÀ¯ÁzÀgÀÆ £Á£ÀÄ ºÉýzÀÝ£ÀÄß CxÀðªÀiÁrPÉƽî. E£ÀÄß ºÉaÑUÉ £Á£ÀÄ K£À£ÀÆß ºÉüÀĪÀÅ¢®è JAzÀÄ ºÉýzÀ ±ÀªÀÄð ¤Ã«£ÀÄß ºÉÆgÀrà JAzÀÄ £ÁAiÀÄPÀjUÉ ºÉýzÀgÀÄ.
¤ÃªÀÅ ºÉÆgÀr JAzÀÄ ºÉýzÀ ªÉÄÃ¯É C°è PÀĽvÀÄPÉƼÀÄîªÀ zsÉÊAiÀÄð £ÁAiÀÄPÀjUÉ EgÀ°®è. F ªÀÄÄzÀÄPÀ£ÀÄß £À£Àß «gÉÆâüUÀ¼ÀÄ §ÄPï ªÀiÁrzÁÝgÉ. CzÀPÁÌV J£ÉãÀÆ ªÀiÁvÀ£ÁqÀÄvÁÛgÉ. E£ÀÄß EªÀgÀ£ÀÄß £ÀA© EgÀĪÀÅzÀÄ ¸ÁzsÀå«®è JAzÀÄPÉÆAqÀ £ÁAiÀÄPÀgÀÄ ªÀÄÄAzÉãÀÄ ªÀiÁqÀ¨ÉÃPÀÄ JAzÀÄ AiÉÆÃa¸ÀÄvÀÛ¯Éà JzÀÄÝ ¤AvÀgÀÄ.
£À£Àß £ÁAiÀÄPÀvÀéªÀ£ÀÄß §zÀ°¸ÀĪÀ AiÀÄvÀß £ÀqÉAiÀÄÄwÛzÉ. £Á£ÀÄ F gÁdåPÀÌV J®èªÀ£ÀÆß ªÀiÁrzÉÝãÉ.. JAzÀÄ CªÀgÀÄ ºÉüÀÄwÛzÀÝAvÉ £Á£ÀÄ ¤ªÀÄä ºÉÆmÉÖAiÀÄ §UÉÎ ºÉýzÀÝ£Àß CxÀð ªÀiÁrPÉƽî. D£À £ÁAiÀÄPÀjUÉ zÉÆqÀØ ºÉÆmÉÖ EgÀ¨ÁgÀzÀÄ F ªÀiÁvÀÄ ¤ªÀÄUÉ CxÀðªÁzÀgÉ gÁdPÁgÀt CxÀðªÁUÀÄvÀÛzÉ. ¤ªÀÄä ¸ÀªÀĸÉåAiÀÄÆ CxÀðªÁUÀÄvÀÛzÉ JAzÀgÀÄ ±ÀªÀÄð.
£ÁAiÀÄPÀgÀÄ CªÀjUÉ ªÀÄvÉÆÛªÉÄä PÉÊ ªÀÄÄVzÀÄ C°èAzÀ ºÉÆgÀUÉ ºÉÆgÀlgÀÄ.
±ÉÆgÀUÉ ºÉÆÃVwÛgÀĪÀ £ÁAiÀÄPÀgÀ£Éßà £ÉÆÃqÀÄwÛzÀÝ ±ÀªÀÄð CªÀjUÉ F £ÁAiÀÄPÀ PÉ®ªÉà ªÀµÀðUÀ¼À »AzÉ ºÉÃVzÀÝ JA§ÄzÀÄ £É£À¥Á¬ÄvÀÄ. ZÁ¥É ¸ÀAWÀl£É J®è ¸À¨sÉUÀ½UÉ §gÀÄwÛzÀÝ CªÀgÀÄ ¸ÀAWÀl£ÉAiÀÄ ¤µÀÖ PÁAiÀÄðPÀvÀðgÀVzÀÝgÀÄ.  F ¸ÀªÀiÁdzÀ°è PÁæAwAiÀiÁUÀ¨ÉÃPÀÄ §zÀ¯ÁªÀuÉ DUÀ¨ÉÃPÀÄ JAzÀÄ ºÉüÀÄwÛzÀÝgÀÄ. CAvÀºÀ ºÀ®ªÀÅ ºÉÆÃgÁlUÀ¼À£ÀÄß CªÀgÀÄ ¸ÀAWÀn¹ £ÉÃvÀÈvÀé M»¹zÀÝgÀÄ.  F ¸ÀªÀiÁdPÁÌV £Á£ÀÄ, £À£ÀUÁV ¸ÀªÀiÁdªÀ®è JAzÀÄ ºÉüÀÄwÛzÀÝ ªÀåQÛ JµÀÄÛ ¨ÉÃUÀ §zÀ®V ©lÖgÀ®è ?  C¢üPÁgÀPÉÌ §AzÀ ªÉÄÃ¯É ¸ÀAWÀl£ÉAiÀÄ §UÉÎ CªÀjVzÀÝ D¸ÀQÛAiÀÄÆ PÀrªÉÄAiÀiÁ¬ÄvÀÄ. ZÁ¥É ¸ÀAWÀl£ÉAiÀÄ£ÀÄß CªÀgÀÄ nÃQ¸ÀÄwÛzÀÝ ªÀgÀ¢UÀ¼ÀÄ §gÀ vÉÆqÀVzÀªÀÅ. F £ÀqÀÄªÉ wAUÀ½UÉƪÉÄä E°èUÉ §AzÀÄ JAvÀºÀ £ÀAiÀÄ «£ÀAiÀĪÀ£ÀÄß ¥ÀæzÀ²ð¸ÀÄwÛzÀÝgÉAzÀgÉ EªÀgÀ ªÉÄÃ¯É §gÀÄwÛzÀÝ zÀÆgÀÄUÀ¼É®è ¸ÀĽîgÀ§ºÀÄzÀÄ JAzÀÄ C¤ß¸ÀÄwÛvÀÄÛ.
FvÀ EµÀÄÖ zÉÆqÀØ PÀ¼Àî JAzÀÄ CAzÀÄPÉÆArgÀ°®è JAzÀÄ ±ÀªÀÄðjUÉ C¤ß÷¹vÀÄ. DzÀgÉ EªÉ®èzÀgÀ £ÀqÀĪÉAiÀÄÆ DvÀ£À §UÉÎ ¹lÄÖ ªÀiÁrPÉƼÀî®Ä ¸ÁzsÀåªÁUÀĪÀÅ¢®è. AiÀiÁPÉÆà £ÀªÀÄä ºÀÄqÀÆUÀ JAzÉà C¤ß¸ÀÄwÛzÉ.  FvÀ ¸Àé®à PÀZÉÑà ºÀgÀÄPÀ JAzÀÄ UÉÆvÁÛzÁUÀ®Æ ¹lÄÖ §gÀ°®è. K£ÉÆà z˧ð®å JAzÀÄ ¸ÀĪÀÄä£ÁV ©mÉÖ. DUÀ¯Éà FvÀ£À ªÉÄÃ¯É ¤AiÀÄAvÀæt ElÄÖPÉÆArzÀÝgÉ, §Ä¢Ý ªÀiÁvÀÄ ºÉýzÀÝgÉ FvÀ EµÀÄÖ PÉqÀÄwÛgÀ°®è JAzÀÄ CªÀjUÉ C¤ß¹vÀÄ.
ªÀÄÄRåªÀÄAwæAiÀiÁzÀ ªÉÄÃ¯É FvÀ ºÀ¼ÉAiÀÄ ZÁ½AiÀÄ£ÀÄß ©qÀ°®è. vÀ£Àß ¸ÀA¥ÀÅlzÀ°è EgÀĪÀ ªÀÄ»¼Á ªÀÄAwæAiÉƧâjUÉ, K£ÀªÀ¼À ºÉ¸ÀgÀÄ…? ¸ÀÄ«ÄvÀæªÀÄä C®èªÁ ºËzÀÄ C¤ß¸ÀÄvÀÛzÉ. CªÀ½UÉ ¸ÀA¥ÀÅl ¸À¨sÉAiÀįÉèà GAUÀÄgÀ vÉÆr¹ ©lÖ£ÀAvÀ®è¯ï F ¸ÀÄ¢Ý §AzÀ ªÀÄgÀÄ¢£À DvÀ E°èUÉ §A¢zÀÝ. ºÁUÉ ZÁ¥ÉAiÀÄ ªÉÄÃ¯É PÀĽvÀªÀ vÀ£Àß «gÀÄzÀÞ µÀqÀåAvÀæ £ÀqÉAiÀÄÄwÛzÉ JAzÀÄ ºÉýzÀÝ.  vÁ£ÀÄ AiÀiÁjUÀÆ GAUÀÄgÀ vÉÆr¹®è JAzÀÄ CªÀ£ÀVAiÉÄà ºÉýzÀ£À®è.. AiÀiÁPÉÆà EªÀ£À «gÀÄzÀÞ PÉ®ªÀgÀÄ ZÁr ºÉüÀÄwÛzÁÝgÉ JAzÀÄ C¤ß¹ ¥ÀPÀëzÀ CzsÀåPÀëgÀÄ ºÁUÀÆ EvÀgÀ £ÁAiÀÄPÀgÀ£ÀÄß PÀgɹ §Ä¢Ý ºÉý PÀ¼ÀÄ»¹zÉÝ.
£ÀgÉÃAzÀæ ±ÀªÀÄð vÀªÀÄä PÉÆoÀr¬ÄAzÀ ºÉÆgÀPÉÌ §AzÀÄ GzÁå£ÀªÀ£ÀzÀvÀÛ £ÀqÉzÀgÀÄ. C°è PÁAiÀÄÄwÛzÀݪÀgÀÄ UËgÀªÀ ¨sÁªÀ¢AzÀ JzÀÄÝ PÉÊ ªÀÄÄVzÀgÀÄ.  ¸Àé®à ºÉÆvÀÄÛ Ej JAzÀÄ ºÉýzÀªÀgÀÄ GzÁå£ÀªÀ£ÀzÀ ªÀÄzsÀå ¨sÁUÀzÀ°è ºÁQ¹zÀÝ «ªÉÃPÁ£ÀAzÀgÀ ¥ÀæwªÉÄAiÀÄ §½ §AzÀÄ ¤AvÀgÀÄ. ªÀÄ£À¸ÀÄì ¨sÁgÀªÁzÀAvÉ C¤ß¹vÀÄ. vÀªÀÄä gÀPÀÛ PÁæAwAiÀÄ PÀ£À¸ÀÄ £À£À¸ÁUÀ°®è. ¸ÀªÀiÁd §zÀ¯ÁªÀuÉAiÀÄ PÀ£À¸ÀÄ £À£À¸ÁUÀ°®è. F zÉñÀzÀ°è PÁæAw ªÀiÁqÀ¨ÉÃPÀÄ JAzÀÄPÉÆAqÀÄ ªÀÄzÀĪÉAiÀiÁUÀzÉà G½zÀÄ ©mÉÖ. DzÀgÉ EwÛÃa£À ¢£ÀUÀ¼À°è £Á£ÀÄ vÉUÉzÀÄPÉÆAqÀ wêÀiÁð£ÀUÀ¼ÀÄ vÀ¦àgÀ¨ÉÃPÀÄ JAzÀÄ C¤ß¸ÀvÉÆqÀVvÀÄ. MªÉÆäªÉÄä ªÀÄzÀĪÉAiÀiÁUÀ¨ÉÃQvÀÄÛ JAzÀÆ C¤ß¸ÀÄvÀÛzÉ.  DzÀgÉ PÁæAw ªÀiÁqÀ®Ä ºÉÆgÀlªÀgÀÄ ªÀÄzÀĪÉAiÀiÁUÀ¨ÁgÀzÀÄ JAzÀÄ vÁªÀÅ CAzÀÄPÉÆA¢zÀÄÝ vÀ¥Àà®è C¤ß¹ ªÀÄ£À¹ìUÉ ¸ÀªÀiÁzsÁ£ÀªÁUÀÄvÀÛzÉ.
AiÀiÁgÉÆà ºÉýzÀ ªÀiÁvÀÄ. £ÀªÀÄä vÀ¥ÀÅöàUÀ¼ÀÄ £ÀªÀÄä£ÀÄß D¼ÀÄvÀÛªÉ CAvÀ. £Á£ÀÄ ªÀiÁrzÀ vÀ¥ÀÅöàUÀ¼ÀÄ £À£ÀߣÀÄß D¼ÀÄwÛªÉAiÉÄ ? ºÁVzÀÝgÉ £Á£ÀÄ ªÀiÁrzÀ vÀ¥ÀÅöàUÀ¼ÀÄ AiÀiÁªÀªÀÅ ?
CªÀjUÉ vÀªÀÄä vÀ¥ÀÅöàUÀ¼ÀÄ AiÀiÁªÀªÀÇ £É£À¦UÉ §gÀ°®è.
PÁAUÉæ¸ï ¥ÀPÀëzÀ ±ÁAw ªÀÄAvÀæ £À£ÀUÉAzÀÆ »r¸ÀÄwÛgÀ°®è. CªÀgÀÄ vÀ¯ÉAiÀÄ ªÉÄÃ¯É ElÄÖPÉƼÀÄîwÛzÀÝ mÉÆæ ¨ÉÃgÉAiÀĪÀjUÉ ºÁPÀ®Ä EzÀÝ mÉÆæ JAzÀÄ C¤ß¸ÀÄwÛvÀÄÛ. FUÀ CzÀÄ ¤dªÁVzÉ. mÉƦ £ÉÆÃrzÀgÉ CzÀÄ ªÉÆøÀzÀ ¨sÀæµÁÖZÁgÀzÀ ¸ÀAPÉÃvÀªÁV PÁtÄvÀÛzÉ. ¸ÀªÁð¢üPÁgÀzÀ ¸ÀAPÉÃvÀªÀV PÁtÄvÀÛzÉ.  AiÀiÁªÀÅzÉà zÉñÀPÉÌ ¸ÁévÀAvÀæ ¹UÀĪÀÅ¢zÀÝgÉ CzÀgÀ »AzÉvÁåUÀ §°zÁ£À EgÀ¨ÉÃPÀÄ. C¢®è¢zÀÝgÉ ¸ÁévÀAvÀæ÷åzÀ ¨É¯É w½AiÀÄĪÀÅ¢®è JAzÀÄ CªÀjUÉ C¤ß¹vÀÄ.  £ÀªÀÄä zÉñÀPÉÌ vÁåUÀ §°zÁ£À E®èzÉà ¸ÁévÀAvÀæ÷å §AvÀÄ JAzÀÄ ºÉüÀĪÀÅzÀÄ vÀ¥ÀÅöà. DzÀgÉ £ÀªÀÄä ºÉÆÃgÁlzÀ ºÉeÉÓ UÀÄgÀÄvÀÄUÀ¼ÀÄ £ÀªÀÄä°è PÉZÀÑ£ÀÄß ªÀÄÆr¸ÀĪÀÅ¢®è.  §zÀ°UÉ D¼À¹vÀ£ÀªÀ£ÀÄß ºÉaѸÀÄvÀÛªÉ JAzÀÄ CªÀgÀÄ CAzÀÄPÉÆAqÀgÀÄ.
«ªÉÃPÁ£ÀAzÀgÀ ¥ÀæwªÉÄAiÀÄ PɼÀUÉ ¸Àé®à ºÉÆvÀÄÛ PÀÆvÀ CªÀgÀÄ ªÀÄvÉÛ vÀªÀÄä PÉÆoÀrAiÀÄvÀÛ ºÉeÉÓ ºÁQzÀgÀÄ. vÀªÀÄUÁV PÁzÀÄ PÀĽvÀªÀgÀ£ÀÄß M¼ÀUÉ PÀgɹ CªÀgÀ ¸ÀªÀĸÉåUÀ¼À£ÀÄß PÉüÀvÉÆqÀVzÀgÀÄ.
DzÀgÀÆ ªÀÄ£À¹ìUÉ ¸ÀªÀiÁzsÁ£À«®è.  vÁªÀÅ ¢£À¢AzÀ ¢£ÀPÉÌ ¤¸ÀìºÁAiÀÄPÀgÁVwÛzÀÝAvÉ CªÀjUÉ C¤ß¸ÀvÉÆqÀVvÀÄ. £À£ÉÆßV£À ºÉÆÃgÁlUÁgÀ ¸ÀvÀÄÛ ºÉÆÃzÀ£É..? £Á£ÀÄ F ªÀåªÀ¸ÉÜAiÀÄ eÉÆvÉUÉ ºÉÆAzÁtÂPÉ ªÀiÁrPÉƼÀÄîwÛzÉÝ£ÉAiÉÄ ? EzÀÄ ¨sÀæµÀÖ ¸ÀPÁðgÀ JAzÀÄ UÉÆvÁÛzÁUÀ¯Éà EzÀgÀ «gÀÄzÀÞªÉà ºÉÆÃgÁl ªÀiÁqÀ¨ÉÃQvÀÄÛ. £ÀªÀÄä ºÉÆÃgÁl¢AzÀ F ¸ÀPÁðgÀ C¢üPÁgÀPÉÌ §A¢zÉ JA§ ªÀĪÀÄPÁgÀªÀ£ÀÄß ©lÄÖ ©qÀ¨ÉÃQvÀÄÛ. DzÀgÉ AiÀiÁPÉÆà F ¸ÀPÁðgÀ ªÀÄvÀÄÛ £ÁAiÀÄPÀgÀ «gÀÄzÀÞ PÀpt ¤®ÄªÉÄAiÀÄ£ÀÄß vÉUÉzÀÄPÉƼÀÄîªÀÅzÀPÉÌ ¸ÁzsÀåªÁUÀÄwÛ®è.  EzÀÄ MAzÀÄ jÃwAiÀÄ ªÉÆúÀ JAzÀÄ CªÀjUÉ C¤ß¹vÀÄ. ªÉÆúÀªÀ£ÀÄß vÀåf¸ÀĪÀÅzÀÄ ¸ÁzsÀå«®è. £Á£ÀÄ ªÉÆûvÀ£Éà JAzÀÄ CªÀgÀÄ CAzÀÄPÉÆAqÀgÀÄ.
C°èzÀÝ d£ÀgÀ£ÀÄß ªÀiÁvÀ£Ár¹ CªÀgÀ PÀµÀÖ ¸ÀÄRªÀ£ÀÄß PÉý PÀ½¹zÀ ªÉÄÃ®Æ ªÀÄ£À¸ÀÄì ºÁUÉ EvÀÄÛ. K£Éà DUÀ° ¸ÀàµÀÖ wêÀiÁð£ÀUÀ¼À£ÀÄß vÉUÉzÀÄPÉƼÀî¨ÉÃPÀÄ.  PÉÆ£ÉAiÀÄ G¹gÀÄ EgÀĪÀªÀUÉð ºÉÆÃgÁlªÀ£ÀÄß ©qÀ¨ÁgÀzÀÄ. EªÀgÀÄ £ÀªÀÄäªÀgÀÄ ¨ÉÃgÉAiÀĪÀgÀÄ JA§ ¨ÉÃzsÀ ¨sÁªÀ EgÀ¨ÁgÀzÀÄ JAzÀÄ CªÀgÀÄ CAzÀÄPÉÆAqÀgÀÄ. EAvÀºÀ wêÀiÁð£ÀªÀ£ÀÄß PÉÊUÉÆAqÀ ªÉÄÃ¯É ªÀÄ£À¸ÀÄì ¸Àé®à ¤gÁ¼ÀªÁ¬ÄvÀÄ. UÉÆAzÀ® ªÀiÁAiÀĪÀzÀAvÉ C¤ß¹vÀÄ. £Á¼É ¥ÀPÀëzÀ J®è £ÁAiÀÄPÀgÀ£ÀÄß PÀgɹ CªÀgÀ eÉÆvÉ ªÀiÁvÀ£ÁqÀ¨ÉÃPÀÄ. £ÁªÀÅ ºÉÆÃgÁl ªÀiÁr ¥ÀPÀëªÀ£ÀÄß C¢üPÁgÀPÉÌ vÀA¢zÀÄÝ EzÀPÀÌV C®è. d£ÀgÀ zÀÄqÀÝ£ÀÄß  £É®ªÀ£ÀÄß £ÀÄAUÀĪÀÅzÀPÁÌV C®è JAzÀÄ ºÉüÀ¨ÉÃPÀÄ. ¤ÃªÀÅ d£À¥ÀgÀªÁzÀ DqÀ½vÀªÀ£ÀÄß ¤ÃqÀ®Ä ¸ÁzsÀåªÁUÀ¢zÀÝgÉ gÁfãÁªÉÄ ¤Ãr ªÀÄ£ÉUÉ ºÉÆÃV JAzÀÄ ºÉüÀ¨ÉÃPÀÄ.
¸Ágï ¥ÀPÀëzÀ CzsÀåPÀÄëç ¤ªÀÄä£ÀÄß £ÉÆÃzÀ¨ÉÃPÀAvÉ §¯Áð CAvÁ PÉýÛzÁgÉ.. ¸ÀºÁAiÀÄPÀ §AzÀÄ ºÉýzÀ.
FUÀ §vÁðgÀAvÁ ? FUÀ ¨ÉÃqÀ CAvÁ ºÉüÀÄ. £Á£ÀÄ AiÀiÁªÁUÀ §gÀ¨ÉÃPÀÄ C£ÉÆßÃzÀ£Àß ¥sÉÇÃ£ï ªÀiÁr w¼À¹Û¤ CAvÁ CªÀjUÉ ºÉüÀÄ. ¸ÀºÁAiÀÄPÀ¤UÉ ¸ÀÆZÀ£É ¤ÃrzÀ ±ÀªÀiÁð vÀªÀÄä C°èzÀÝ PÉ®ªÀÅ ¥ÀŸÀÛPÀUÀ¼À£ÀÄß wgÀĪÀÅ ºÁQzÀgÀÄ. DzÀgÉ NzÀ¨ÉÃPÀÄ JAzÀÄ C¤ß¸À°®è. EwÛÃa£À wAUÀ¼À°è AiÀiÁªÀÅzÉà ¥ÀŸÀÛPÀªÀ£ÀÄß N¢®è JA§ÄzÀÄ CªÀjUÉ £É£À¥À¬ÄvÀÄ.
FUÀ K£À£ÀÄß MqÀĪÀÅzÀPÀÆÌ ªÀÄ£À¸ÁìUÀĪÀÅ¢®è. ¥ÀŸÀÛPÀUÀ¼À°è EgÀĪÀÅzÀÄ AiÀiÁªÀ ¥ÀæAiÉÆÃd£ÀPÀÆÌ §gÀĪÀÅ¢®è. ¥ÀŸÀÛPÀUÀ½VAvÀ §zÀÄQ£À C£ÀĨsÀªÀ ªÀÄÄRå JAzÀÄ CAzÀÄPÉÆAqÀgÀÄ. ¸Àé®à ¸ÀªÀÄAiÀÄzÀ¯Éèà ¥ÀPÀëzÀ CzsÀåPÀëgÀÄ ºÉÆgÀUÉ §AzÀÄ PÁAiÀÄÄwÛzÁÝgÉ JA§ ªÀiÁ»w §AvÀÄ. F gÁdPÁgÀtÂUÀ¼ÀÄ §gÀ¨ÉÃqÀ JAzÀgÀÆ §vÁðgÉ. vÀªÀÄUÉ PÉ®¸À DUÀ¨ÉÃPÀÄ JAzÉæ vÁ¸ÀÄ UÀlÖ¯É PÁAiÀiÁÛgÉ. vÀªÀÄUÉ PÉ®¸À E®è¢zÀÝgÉ, ºÀwÛgÀªÀÇ ¸ÀĽAiÉÆâ®è. £ÉÆÃqÀ®Ä §AzÀªÀgÀÄ ªÀÄÄRzÀ°è MAzÀÄ PÀÈvÀPÀ £ÀUÉAiÀÄ£ÀÄß r¥Éǹmï xÀgÀ EmÉÆÖ÷ÌAqÉ §vÁðgÉ.£ÀAiÀÄ «£ÀAiÀÄ ¥ÀæzÀ²ð¸ÁÛgÉ JA§ÄzÀÄ CªÀgÀ ªÀÄ£À¹ì£À°è §AvÀÄ.
£Á£ÀÄ EAxÀºÀ d£ÀgÀ £ÀqÀĪɣÉà §zÀÄQzÉÝãÉ. E¤ßgÀĪÀ ¸Àé®à DAiÀÄĵÀåªÀ£ÀÄß EAxÀªÀgÀ £ÀqÀĪÉAiÉÄà PÀ½AiÀĨÉÃPÀÄ.  EAxÀªÀgÀ £ÀqÀÄªÉ EzÀÝgÀÆ £Á£ÀÄ CªÀgÀAvÉ DUÀ°®è. £À£Àß ¥Àæ¨sÁªÀ CªÀgÀ ªÉÄÃ¯É ©ÃjgÀ§ºÀÄzÉà JAzÀÄ CªÀgÀÄ vÀªÀÄä£ÀÄß vÁªÉ ¥Àæ²ß¹PÉÆAqÀgÀÄ. DzÀgÉ ¥Àæ¨sÀªÁ ©ÃjzÉ JAzÀÄ ºÉüÀ®Ä CªÀjUÉ AiÀiÁªÀ PÁgÀtUÀ¼ÀÄ PÁt°®è. eÉÆvÉUÉ EAxÀªÀgÀ ¥Àæ¨sÁªÀ vÀªÀÄä ªÉÄÃ¯É ¸Àé®àªÀÇ DUÀ°®èªÀ®è JAzÀÄ CªÀjUÉ D±ÀÑAiÀÄðªÉ¤ß¹vÀÄ.
¥ÀPÀëzÀ CzsÀåPÀëgÀ£ÀÄß PÀ¼ÀÄ»¹ JAzÀÄ ºÉýzÀ CªÀgÀÄ QqÀQ¬ÄAzÀ ºÉÆgÀPÉÌ £ÉÆÃqÀvÉÆqÀVzÀgÀÄ. ºÉÆgÀUÀqÉ ªÀÄ¼É §AzÀÄ ¤AwvÀÄÛ. CªÀgÉà ¦æÃw¬ÄAzÀ ¨É¼É¹zÀ ºÀÆzÉÆÃl. C°èzÀÝ ¨ÉÃgÉ ¨ÉÃgÉ eÁwAiÀÄ ºÀÆ ªÀÄvÀÄÛ EvÀgÀ VqÀUÀ¼ÀÄ. ºÀÆzÉÆÃl JAzÀÄ ºÉüÀĪÀÅzÀQÌAvÀ C°èzÀÄÝzÀÄ §ºÀÄvÉÃPÀ OµÀzsÀ ¸À¸ÀåUÀ¼ÀÄ. PÉ®ªÀÅ C¥ÀgÀÆ¥ÀzÀ ¸À¸ÀåUÀ¼À£ÀÄß CªÀgÀÄ »ªÀiÁ®AiÀÄ¢AzÀ¯Éà vÀAzÀÄ £ÉnÖzÁÝgÉ. E£ÀÄß PÉ®ªÀ£ÀÄß ¨Á¨Á §ÄqÀ£ÀVj¬ÄAzÀ vÀAzÀÄ ¨É¼É¹zÁÝgÉ. F ¸À¸ÀåUÀ¼À°è AiÀiÁªÀ ¸À¸ÀåzÀ°è AiÀiÁªÀ OµÀzsÀ UÀÄt«zÉ, CzÀ£ÀÄß ºÉÃUÉ ¨É¼É¸À¨ÉÃPÀÄ JAzÀÄ ºÉüÀĪÀÅzÀgÀ°è CªÀgÀÄ ¹zÀÞ ºÀ¸ÀÛgÀÄ.
£ÀgÉÃAzÀæ ±ÀªÀÄð EzÀĪÀgÉV£À vÀªÀÄä vÉÆA§vÀÄÛ ¥Àè¸ï ªÀAiÀĹì£À°è JAzÀÆ ªÉÊzÀågÀ §½ ºÉÆÃzÀªÀgÀ®è. AiÀiÁªÀÅzÉà OµÀzsÀ vÉUÉzÀÄPÉÆAqÀªÀgÀ®è. ºÁ¹UÉ »rzÀªÀgÀ®è. MAzÀÄ ¸ÀtÚ dégÀ PÀÆqÀ CªÀjUÉ §A¢®è.
zÀÄÝ UÉÆwÛ®èzÀAvÉ, ¥Àmï ¥Àmï JAzÀÄ ±À§Ý §gÀÄwÛvÀÄÛ.  F ±À§ÝzÀ »AzÉAiÀÄÆ AiÀiÁªÀÅzÉÆà jÃwAiÀÄ ªÀiÁAwæPÀvÉ EzÉ JAzÀÄ CªÀjUÉ C¤ß¸ÀÄwÛvÀÄÛ.  ºËzÀÄ ªÀÄAvÀæ JAzÀgÉ ¸ÀégÀ. F ¸ÀégÀ ±ÀQÛAiÀi ªÀÄÆ® ¸ÁÜ£À. MAzÀÄ ¸ÀégÀªÀ£ÀÄß ¥ÀÅ£ÀgÀÄZÁÑgÀ ªÀiÁqÀĪÀÅzÀjAzÀ ¸ÀégÀUÀ½AzÀ GAmÁzÀ ±À§ÝUÀ¼ÀÄ ±ÀQÛ vÀÄA©PÉƼÀÄîvÀÛªÉ.  ®PÁëAvÀgÀ d£À EAvÀºÀ ±À§ÝUÀ¼À£ÀÄß §¼À¸ÀĪÀ ªÀÄÆ®PÀ  vÀªÀÄä ±ÀQÛAiÀÄ£ÀÄß CzÀPÉÌ vÀÄA§ÄvÁÛgÉ. ºÁUÉ D ±À§ÝUÀ¼À°è EgÀĪÀ ±ÀQÛAiÀÄ£ÀÄß vÁªÀÅ vÀÄA©PÉƼÀÄîvÁÛgÉ JAzÀÄ CªÀjUÉ C¤ß¹vÀÄ.
CµÀÖgÀ°è zÀqÀÆw zÉúÀzÀ CzsÀåPÀëgÀÄ Erà zÉúÀªÀ£ÀÄß C°V¸ÀÄvÀÛ AiÀÄxÁ ¥ÀæPÁgÀ vÀÄnAiÀÄ CAa£À°è MAzÀÄ £ÀUÀĪÀ£ÀÄß ElÄÖPÉÆAqÀÄ M¼À ¥ÀæªÉñÀ ªÀiÁrzÀgÀÄ. CªÀgÀÄ zsÀj¹zÀÝ CAV CªÀgÀ ªÉÄÊ §ºÀÄ ¨sÁUÀªÀ£ÀÄß ªÀÄÄZÀÑ®Ä AiÀÄvÀß £ÀqɸÀÄwÛvÀÄÛ. DzÀgÉ ºÉÆmÉÖAiÀÄ ¨sÁUÀ vÀÄA¨Á zÉÆqÀØzÁVgÀĪÀÅzÀjAzÀ CAVAiÀÄ PɼÀ ¨sÁUÀ PɼÀV£À ªÀgÉUÉ vÀ®Ä¥À¯ÁgÀzÉà JzÀÄÝ ¤AwvÀÄÛ.
M¼ÀUÉ §AzÀ CzsÀåPÀëgÀÄ §VÎ ±ÀªÀÄðgÀ PÁ®Ä ªÀÄÄlÖ®Ä AiÀÄvÀß £ÀzɹzÀgÀÄ. DzÀgÉ CªÀgÀ PÉÊUÀ¼ÀÄ PɼÀV£À ªÀgÉUÉ §gÀzÉÃ, CªÀgÀÄ KzÀĹgÀÄ ©qÀvÉÆqÀVzÀgÀÄ.
CzÉ®è ¨ÉÃqÀ. ¤ÃªÀÅ vÉÆAzÀgÉ vÉUÉzÀÄPÉƼÀî¨ÉÃqÀ. ¤ªÀÄä zÉúÀ ¤ªÀÄä ªÀiÁvÀÄ PÉüÀÄwÛ®è ºÁUÉ PÀĽvÀÄPÉƽî JAzÀgÀÄ £ÀgÉÃAzÀæ ±ÀªÀÄð.
ºÁUÉ PÉÊAiÀÄ£ÀÄß £É®PÉÌ Hj, zÉúÀzÀ ¨sÁgÀªÀ£Éß®è PÉʪÉÄÃ¯É ©lÄÖ, vÀªÀÄä PÀÄAqÉAiÀÄ£ÀÄß ZÁ¥ÉAiÀÄ ªÉÄÃ¯É ¥ÀæwµÁצ¹zÀ CzsÀåPÀëgÀÄ, G¸Àì¥Áà JAzÀÄ E£ÉÆߪÉÄä G¹gÀÄ ©lÖgÀÄ.
£É®zÀ ªÉÄÃ¯É PÀĽvÀÄPÉƼÀÄîªÀÅzÀÄ ¸Àé®à PÀµÀÖ vÀ¥ÀÅöàw½AiÀĨÉÃr JAzÀÄ CªÀgÀÄ ªÀÄ£À« ªÀiÁrzÀgÀÄ.
£Á£ÀÄ vÀ¥ÀÅöà w½AiÀÄĪÀ ¥Àæ±Éß E®è. DzÀgÉ zÉúÀªÀ£ÀÄß ¥À¼ÀV¸À¨ÉÃPÀÄ. zÉúÀ ªÀÄ£À¹ì£À CtwAiÀÄ£ÀÄß ¥Á°¸À¨ÉÃPÀÄ. zÉúÀzÀ ªÀiÁvÀ£ÀÄß ªÀÄ£À¸ÀÄì PÉüÀĪÀAvÁzÀgÉ PÀµÀÖ.  ¤ªÀÄä ªÀÄ£À¸ÀÄì zÉúÀzÀ UÀįÁªÀÄ£ÁVzÉ. »ÃUÁV ¤ªÀÄä ªÀÄ£À¸ÀÄì vÀ£Àß ±ÀQÛAiÀÄ£ÀÄß PÀ¼ÉzÀÄPÉÆArzÉ. UÀįÁªÀÄ£ÁzÀ ªÀÄ£À¸ÀÄì ¸ÀzÁ UÀįÁªÀÄVjAiÀÄ£Éßà §AiÀĸÀÄvÀÛzÉ. CzÀPÉÌ ¸ÀévÀAvÀæ ¤zsÁðgÀ vÉUÉzÀÄPÉƼÀÄîªÀ ±ÀQÛ EgÀĪÀÅ¢®è. ¤ªÀÄUÉ £Á£ÀÄ ºÉýzÀÄÝ CxÀðªÁ¬ÄvÉ JAzÀÄ ¥Àæ²ß¹zÀ ±ÀªÀÄðgÀÄ ¸ÀtÚUÉ £ÀPÀÌgÀÄ.
¤d, ¤eÁ. ¤ÃªÀÅ ºÉüÉÆzÀÄ £ÀÆgÀPÉÌ £ÀÆgÀµÀÄÖ ¸ÀvÀå. ¤ÃªÀÅ JAzÀÄ ¸ÀļÀÄî ºÉüÉÆÝÃgÉà C®è. eÉÆvÉUÉ ¤ÃªÀÅ £ÀªÀÄUÉ MAzÀAxÀgÀ UÁA¢ü EzÀÝ ºÁUÉ JAzÀÄ ºÉýzÀªÀgÉ, vÀªÀÄä vÀ¦à£À CjªÁV,, UÁA¢ü CAzÀgÉ F ªÀÄÄzÀÄPÀÄ PÉÆÃ¥À ªÀiÁqÀÌvÁÛ£É JAzÀÄ PÉÆAqÀÄ ¤ÃªÀÅ MAzÀxÀgÀ gÀĶ CAzÀ̽. ¸ÀAvÀgÀÄ ¸ÀAvÀgÀÄ JAzÀgÀÄ CzsÀåPÀëgÀÄ.
¤ÃªÀÅ ªÉÆzÀ®Ä ¸ÀļÀÄî ºÉüÀĪÀÅzÀ£ÀÄß ¤°è¸À¨ÉÃPÀÄ.  ¸ÀļÀÄî ºÉüÀĪÀÅzÀÄ JAzÀgÉ DvÀä ºÀvÉå ªÀiÁrPÉƼÀÄîªÀÅzÀÄ.  ¥Àǹ ºÉÆqÉAiÀÄĪÀÅzÀ£ÀÄß ¤°è¹. £ÉÃgÀªÀV ªÀiÁvÀ£Ár JAzÀÄ ºÉýzÀ ±ÀªÀÄðgÀÄ CzsÀåPÀëgÀvÀÛ EjAiÀÄĪÀAvÉ £ÉÆÃrzÀgÀÄ.
UÀÄgÀÄUÀ¼É, F ¸ÀPÁðgÀ C¹ÜvÀéPÉÌ §A¢zÀÄÝ ¤ªÀÄä D²ÃªÁðzÀ¢AzÀ, ¤ªÀÄä ¥Àj±ÀæªÀÄ¢AzÀ. DzÀgÉ FUÀ ¸ÀPÁðgÀzÀ ªÀiÁ£À ªÀÄAiÀiÁðzÉ ©Ã¢UÉ §AzÀÄ ©¢ÝzÉ. £À£ÀUÉ F ¥ÀPÀëzÀ CzsÀåPÀë JAzÀÄ ºÉýPÉƼÉÆîzÀPÀÆÌ ªÀÄÄdÄUÀgÀªÁUÀÄvÉÛ. £À£ÀUÉ ªÀÄÄdÄUÀgÀªÁzÉæ £Á£ÀÄ ¸À»¸ÉÆÌÃwä. DzÀgÉ ¤ªÀÄä ªÀiÁ£À ªÀiÁAiÀiÁðzÉ PÀÆqÀ ºÀgÁeÁVÛzÉ. d£À ¤ªÀÄä §UÉÎ DrPÉƼÉÆîà ºÁUÉ DVzÉ. F ±ÀªÀÄðgÀÄ AiÀiÁªÀ  PÁgÀt¢AzÀ¯ÉÆà UÉÆwÛ®è. £ÁAiÀÄPÀgÀ ¨ÉA§®PÉÌ ¤AwzÁgÉ CAvÀ ªÀiÁvÀ£ÁrPÉƼÁÛgÉ. £À£ÀUÉ EzÀ£ÀÄß ¸À»¹PÉƼÀî®Ä DUÉÆâ®è. ¸ÀPÁðgÀ ºÁ¼ÀÄ ©zÀÄÝ ºÉÆÃUÀ° CzÀgÉ ¤ªÀÄä ªÀiÁ£À ªÀÄAiÀiÁðzÉ ©Ã¢ ©Ã¼À¨ÁgÀzÀ®èªÀ UÀÄgÀÄUÀ¼É ?
F ªÀiÁvÀÄUÀ¼À£ÀÄß ºÉýzÀ CzsÀåPÀëgÀÄ vÀªÀÄä ªÀiÁvÀÄ F ªÀÄÄzÀÄPÀ£À ªÉÄÃ¯É AiÀiÁªÀ ¥ÀjuÁªÀÄ ©Ãj§ºÀÄzÀÄ JAzÀÄ w½zÀÄPÉƼÀî®Ä CªÀgÀvÀÛ £ÉÆÃrzÀgÀÄ. DzÀgÉ  ±ÀªÀÄðgÀ ªÀÄÄRzÀ°è AiÀiÁªÀ §zÀ¯ÁªÀuÉAiÀÄÆ DUÀ°®è.
CªÀgÉà ºÁUÉ vÀªÀÄä ¨sÁªÀ£ÉUÀ¼À£ÀÄß ¸ÀÄ®¨sÀªÁV vÉÆÃj¹PÉƼÀÄîªÀÅ¢®è. ªÀÄÄRªÀ£ÀÄß AiÀiÁªÁUÀ®Æ ©VzÀÄPÉÆAqÉà EgÀÄvÁÛgÉ. WÁn ªÀÄÄzÀÄPÀ JAzÀÄPÉÆAqÀ CzsÀåPÀëgÀÄ £Á£ÀÄ ªÀÄÄAzÉãÀÄ ªÀiÁqÀ¨ÉÃPÀÄ C£ÉÆßzÀ£Àß C¥ÀàuÉ PÉÆr¸À¨ÉÃPÀÄ.  ¤ÃªÀÅ PÁ®°è vÉÆÃj¹zÀÝ£Àß £Á£ÀÄ PÉÊAiÀÄ°è vÉUÉzÀÄPÉÆAqÀÄ…….. ªÀÄÄAzÉãÀÄ ºÉüÀ¨ÉÃPÀÄ JA§ÄzÀÄ CzsÀåPÀëjUÉ CxÀðªÁUÀ°®è. PÉÊAiÀÄ°è vÉUÉzÀÄPÉÆAqÀÄ K£ÀÄ ªÀiÁqÀĪÀÅzÀÄ ? JAzÀÄ w½AiÀÄ°®è.

Thursday, December 26, 2013

ಪ್ರೀತಿ ಎಂಬ ಮಾಯೆಯನ್ನು ಬೆನ್ನು ಹತ್ತದವರು ಯಾರು ? ನಾನಂತೂ ಪ್ರೀತಿಯ ಪಯಣಿಗ. ಪ್ರೀತಿಯನ್ನು ಹುಡುಕುತ್ತ ಅಲೆದಾಡಿದವನು. ಆ ದಿನಗಳಲ್ಲಿ ನನಗೊಂದು ಪ್ರೀತಿಸುವ ಜೀವ ಬೇಕಾಗಿತ್ತು. ಅದಕ್ಕಾಗಿ ನಾನು ಹಂಬಲಿಸಿದೆ. ಅದನ್ನು ಹುಡುಕಿಕೊಂಡೂ ಅಲೆದೆ.
ಪ್ರೀತಿಯ ಹುಚ್ಚು ಹಿಡಿದ ಆ ದಿನಗಳು. ಕಾಮದ ಮುಖಾಮುಖಿಗಾಗಿ ಕಾದಿದ್ದ ಆ ಕ್ಷಣಗಳು. ನಾನು ಎಲ್ಲರನ್ನೂ ಪ್ರೀತಿಸಿದೆ. ಯಾರೂ ನನ್ನನ್ನು ಪ್ರೀತಿಸಲಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತ್ಡೇನೆ ಎಂದೆ. ನಿನ್ನ ಸಂಬಳ ಎಷ್ಟು ಎಂಬ ಪ್ರಶ್ನೆ ತೂರಿ ಬಂತು. ನಾನು ಹೇಳಿದೆ ೬೦೦ ರೂಪಾಯಿ.
ಈ ಹಣ ನನ್ನ ಸೀರೆಗೂ ಸಾಕಾಗುವುದಿಲ್ಲ...! ಆಕೆ ಹೇಳಿ ನಕ್ಕಳು. ನಾನು ತಲೆ ತಗ್ಗಿಸಿದೆ. ಪ್ರೀತಿ ಕೇಳಿದವನಿಗೆ ಅವಮಾನ. ಅದು ನಿರಾಕರಣೆಯಾಗಿದ್ದರೆ ಸಹಜವಾಗಿರುತ್ತಿತ್ತು.
ಆದರೆ ಗಂಡು ಹೆಣ್ಣಿನ ಸಂಬಂಧದಲ್ಲಿ ಸಹಜತೆಯ ಮಾತೆಲ್ಲಿ ? ಸಹಜವಾದುದರ ನಡುವೆ ಅಸಹಜವಾದುದು ಸಾಮಾನ್ಯ.
ನಾನು ತಲೆ ತಗ್ಗಿಸಿ ನಡೆದೆ. ಆಕೆ ನಗುತ್ತ ಬಾಯ್ ಬಾಯ್ ಎಂದಳು.
ನಾನು ದೇವದಾಸನಾದೆ. ರಮ್ ಕುಡಿದೆ. ಆಕೆ ಇದಕ್ಕೆ ನನಗೆ ಸಂಬಂಧವಿಲ್ಲ ಎಂದು ಹಾಗೆ ನಡೆದೇ ಬಿಟ್ಟಳು.
ನಾನು ಪ್ರೀತಿ ಸಿಗದಿದ್ದಕ್ಕಾಗಿ ಕುಡಿದೆನೆ ? ಅಥವಾ ಅವಳು ಸಿಂಪಥಿಗಾಗಿ ಕುಡಿದೆನೆ ? ಆದರೆ ಬದುಕು ನಿಲ್ಲಲಿಲ್ಲ. ಪ್ರೀತಿ ನಿಲ್ಲುವುದು ಹೇಗೆ ? ಪ್ರೀತಿ ಎಂದರೆ ನದಿ. ಅದು ಹರಿಯಲೇಬೇಕು
. ಈ ಕೆಳಗಿನ ಲಿಂಕ್ ನಲ್ಲಿ ಓದಿ ನನ್ನ ಪ್ರೀತಿಯ ಪಯಣ

http://siddapur.blogspot.com/2013/12/blog-post_4921.html

Wednesday, December 25, 2013

ವಿದ್ರೋಹಿ, ೨ನೆಯ ಅಧ್ಯಾಯ

ವಿದ್ರೋಹಿ, ೨ನೆಯ ಅಧ್ಯಾಯ, ಈಗ ಮುಂದುವರಿಯಲಿದೆ

ಅಧ್ಯಕ್ಷರಿಗೆ ತಕ್ಷಣ ಏನು ಹೇಳಬೇಕು ಅಂತ ತಿಳಿಯಲಿಲ್ಲ. ಅದರೆ ಪಕ್ಷದ ವರಿಷ್ಟಿರ ಸೂಚನೆಯನ್ನು ಇವರಿಗೆ ತಿಳಿಸುವುದು ನನ್‍ನ ಕರ್ತವ್ಯ ಎಂಬುದು ನೆನಪಾಗುತ್ತಿದ್ದಂತೆ ಹಾಗಲ್ಲ, ಸಾರ್ ತಾವು ಎಂದಿದ್ದರೂ ಪಕ್ಷದ ಮರ್ಗದರ್ಶಕರು. ನೀವು ಮಾರ್ಗದರ್ಶನ ಮಾಡ್ತಾ ಇರಿ.  ಹೊಸಬರನ್ನ ನಾಯಕರನ್ನಾಗಿ ಆಯ್ಕೆ ಮಾಡೋಣ ಅಂತ ಒಂದೇ ಉಸಿರಿನಲ್ಲಿ ಎಲ್ಲವನ್ನು ಹೇಳಿ ಮುಗಿಸಿದ ಅಧ್ಯಕ್ಷರು ತಾವು ತಮ್ಮ ಕರ್ತವ್ಯವನ್ನು ಮುಗಿಸಿದ ಸಮಾಧಾನದಿಂದ ನಿಟ್ಟುಸಿರು ಬಿಟ್ಟರು.
ಯಾವಾಗ ನಾಯಕತ್ವದ ಬದಲಾವಣೆಯ ಮತು ಬಂತೂ ನಾಯಕರಿಗೆ ಸಿಟ್ಟು ತಡೆಯಲಾಗಲಿಲ್ಲ. ಈ ಮೊದಲು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮಾಡಿದ ಸಂಕಲ್ಪ ಮರೆತೆ ಹೋಯಿತು. ಪಕ್ಕದಲ್ಲಿ ಇಟ್ಟಿದ್ದ ಹೂದಾನಿಯನ್ನು ಕೈಯಲ್ಲಿ ಹಿಡಿದು ಏ ಅಧ್ಯಕ್ಷ ನೀನು ನನ್ನ ಎಂಜಿಲು ತಿಂದು ಬೆಳೆದವನು. ಈಗ ನನ್ನನ್ನ ಇಳಿಸೋ ಮಾತನಾಡ್ತೀಯಾ. ನಿಮ್ಮನ್ನೆಲ್ಲ ಮುಗಿಸಿ ಹಾಕ್ತೀನಿ ಅಂತಾ ಗುಡಿಗಿ ಹೂದಾನಿಯನ್ನು ಅಧ್ಯಕ್ಷರತ್ತ ಎಸೆದರು. ಅಷ್ಟರಲ್ಲಿ ಒಳಗೆ ಬಂದಿದ್ದ ಮೇಡಮ್, ಕೈಗಾರಿಕಾ ಸಚಿವ ಮಾರಣ್ಣ ಗೌಡರು, ನೀರಾವರಿ ಸಚಿವ ಶಂಕರ್ ನಾಯಕ್, ನಾಯಕರನ್ನು ತಡೆದು ಅವರನ್ನು ಅವರ ಸ್ಥಾನದಲ್ಲಿ ಕೂಳೀತುಕೊಳ್ಳುವಂತೆ ನೋಡಿಕೊಂಡರು.
ಸಾರ್, ಸಿಟ್ಟು ಮಾಡಿಕೊಳ್ಳಬೇಡಿ. ನಿಮಗೆ ಬಿಪಿ ಶುಗರ್ ಎಲ್ಲ ಇದೆ. ನಾವೆಲ್ಲ ಮಾತುಕತೆಯಾಡಿ ಸಮಸ್ಯೆಯನ್ನು ಬಗೆ ಹರಿಸೋಣ ಎಂದು ಮಾರಣ್ಣ ಗೌಡರು ನಾಯಕರಿಗೆ ಸಮಾಧಾನ ಹೇಳಿದರು.  ಬುಸು ಬುಸು ಎಂದು ಉಸಿರು ಬಿಡುತ್ತಿದ್ದ ನಾಯಕರು ನಾಯಿಗಾದರೂ ನಿಯತ್ತು ಇರುತ್ತೆ. ಇವನಿಗೆ ನಿಯತ್ತು ಬ್ಯಾಡವಾ ? ಅದು ಯಾವುದ್ರಿ ಹೈ ಕಮಾಂಡು, ನನಗೆ ಗೊತ್ತಿಲ್ಲದಿರೋದು. ಅವರಿಗೆಲ್ಲ ನಾನು ಎನ್ ಎನ್ ಕಳಿಸಿದೀನಿ ಅನ್ನೋದು ನನಗೆ ಗೊತ್ತು. ನನ್ನ ಎಂಜಿಲು ತಿನ್ನೋ ಈ ಹೈಕಮಾಂಡ್ ನನಗೆ ರಾಜೀನಾಮೆ ನೀಡಿ ಅಂತಾ ಹೇಳೋಕೆ ಅದೆಷ್ಟು ಧೈರ್ಯ ? ಎಂದರು.
ಏ ಶ್ರೀವಾಸ, ಪಕ್ಕದಲ್ಲಿರೋ ಡ್ರಾ ನಲ್ಲಿ ಬಿಳಿ ಬಣ್ಣದ ಗುಳಿಗೆ ಇದೆ ಅದನ್ನ ತಗೊಂಡ್ಬಾ ಅಂತಾ ಕೂಗಿ ಹೇಳಿ ನೆತ್ತಿಯನ್ನು ಒಮ್ಮೆ ಕೈಯಿಂದಲೇ ಒರೆಸಿಕೊಂಡರು.  ಈ ನಾಯಕರಿಗೆ ಗುಳಿಗೆ ತಂದು ಕೊಟ್ಟ ಶ್ರೀನಿವಾಸ, ಹೊರಗಡೆ ಪ್ರೆಸ್ ನವರು ತುಂಬಾ ಜನ ಇದಾರೆ. ಅವರಿಗೆ ನಾಯಕರ ಜೊತೆ ಮಾತನಾಡಲೇ ಬೇಕಂತೆ ಅಂದ.
ನಾಯಕರು ಗುಳಿಗೆಯನ್ನು ಬಾಯಿಗೆ ಒಗೆದುಕೊಂಡು ಒಂದು ಗ್ಲಾಸ್ ನೀರು ಕುಡಿದರು.  ಡರ್ ಅಂತ ತೇಗಿದರು.  ಬಾಯಿಯಿಂದ ತೇಗು ಹೊರಕ್ಕೆ ಬರುತ್ತಿದ್ದಂತೆ ಕೆಳಗಿನಿಂದ ಪುರ್.. ಪುರ್ ಎಂದು ಅಪಾನವಯುವನ್ನು ಹೊರಕ್ಕೆ ಹಾಕಿದರು.
ಗ್ಯಾಸ್ ಟ್ರಬಲ್ ಹಾಗೆ ಸಾರ್. ಅದು ಹೊರಕ್ಕೆ ಹೋದರೆ ಸ್ವರ್ಗ ಸುಖ. ಒಳಗೆ ಇಟ್ಟುಕೊಂಡರೆ ಕಷ್ಟ ಕಷ್ಟ ಎಂದರು ಸಚಿವ ಶಂಕರ್ ನಾಯಕ್.
ಏನೇ ಹೇಳಿ ಗ್ಯಾಸ್ ಟ್ರಬಲ್ ಹಾಗೆ. ಅದು ಯಾವಾಗ ಹೊರಕ್ಕೆ ಬರುತ್ತೆ ಅಂತಾ ಹೇಳಕೇ ಆಗಲ್ಲ.  ಹೊರಕ್ಕೆ ಬಂದರೆ ಸುತ್ತ ಮುತ್ತ ವಾಸನೆ ಬರುತ್ತೆ ಅನ್ನೋದು ನಿಜ. ಆದರೆ ಒಳಗೆ ಇಟ್ಟುಕೊಂಡರೆ ಮೇಲಕ್ಕೆ ಹತ್ತಿ ಬಿಡುತ್ತೆ.  ಅಪಾನವಾಯು ಕೆಳಕ್ಕೆ ಹೋಗಬೇಕೇ ಹೊರತೂ ಮೇಲೆ ಬರಬಾರದು. ಮೇಲೆ  ಬಂದರೆ ಭ್ರಹ್ಮ ರಂದ್ರದ ವರೆಗೂ ಬಂದು ಬಿಡುತ್ತೆ ಎಂದು ಸಚಿವ ಮಾರಣ್ಣ ಗೌಡರು ಎಚ್ಚರಿಕೆಯ ಮಾತುಗಳನ್ನು ಆಡಿದರು.
 ತಮ್ಮ ಮೇಲೆ ನಾಯಕರು ಏರಿ ಬಂದ ಮೇಲೆ ತಣ್ಣಗೆ ಕುಳಿತಿದ್ದ ಅಧ್ಯಕ್ಷರು ಈ ಗ್ಯಾಸ್ ಡಿಸಕಷನ್ ನಲ್ಲಿ ಪಾಲ್ಗೊಳ್ಳಲಿಲ್ಲ. ತಾವು ಹೇಳುವುದನ್ನು ಹೇಳಿ ಆಗಿರುವುದರಿಂದ ತಮ್ಮ ಕೆಲಸ್ ಅಮುಗಿಯಿತು ಎಂದುಕೊಂಡ ಅಧ್ಯಕ್ಷರು ಹೊರಕ್ಕೆ ಹೋಗುವುದಕ್ಕಾಗಿ ಕಾಯುತ್ತಿದ್ದರು.
ಆದ್ರೂ ಸಾರ್ವಜನಿಕವಾಗಿ ಹೂಸು ಬಿಟ್ಟರೆ ಅದು ಒಳ್ಳೆಯದಲ್ಲ. ಆದರೆ ಅದನ್ನು ಬಹಳ ಕಾಲ ಇಟ್ತುಕೊಳ್ಳೋದು ಸಾಧ್ಯವಿಲ್ಲ. ಹೊರಕ್ಕೆ ಹಾಕಲೇ ಬೇಕು ಎಂದು ಹೇಳಿದ ನಾಯಕರು ಅರ್ಥಗರ್ಭಿತವಾಗಿ ಅಧ್ಯಕ್ಷರತ್ತ ನೋಡಿದರು.
ನಾನು ಅದ್ದರಿಂದ ಹೂಸನ್ನು ಒಳಗೆ ಇತ್ತುಕೊಳ್ಳೊದಿಲ್ಲ. ನಾನು ಹೊರಕ್ಕೆ ಹಾಕ್ತೀನಿ ಎಂದು ಅಧ್ಯಕ್ಷರತ್ತಲೇ ನೋಡುತ್ತ ಹೇಳಿದ ನಾಯಕರು “ನೀವು ಹೇಳೋದನ್ನೆಲ್ಲ ಹೇಳಿ ಆಯ್ತಲ್ಲ ಅಧ್ಯಕ್ಷರೆ ” ಅಧ್ಯಕ್ಷರು ಆಯ್ತು ಅಂತಾ ಹೇಳಿ ಅವರತ್ತ ಇನ್ನೊಮ್ಮೆ ಕೈ ಮುಗಿದು ಅಲ್ಲಿಂದ ಹೊರಟರು.
ನನ್ನನ್ನ ಹೂಸಿಗೆ ಹೋಲಿಸ್ತಾನಲ್ಲ. ಇವನನ್ನ ಸುಮ್ಮನೆ ಬಿಡಬಾರದು. ಅವನ ಸ್ಥಾನ ಯಾವುದು ಅಂತಾ ತೋರಿಸಿದರೆ ಗೊತ್ತಾಗುತ್ತೆ ಎಂದುಕೊಂಡ ಅವರು ಹೊರಗೆ ಕಾಯುತ್ತಿರುವ ಮಾಧ್ಯಮದವರ ಮುಂದೆ ಏನ್ ಹೇಳಬೇಕು ಅಂತಾ ಯೋಚಿಸುತ್ತ ನಾಯಕರ ಕೊಠಡಿಯಿಂದ ಹೊರಕ್ಕೆ ಬಂದರು.

ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಎದುರು ಮಾಧ್ಯಮ ಪ್ರತಿನಿಧಿಗಳ ದಂಡು. ಏನ್ರಪಾ ಹೇಗಿದ್ದೀರಿ ಅಂತ ಹೊರಕ್ಕೆ ಬಂದ ಅಧ್ಯಕ್ಷರು ಎಲ್ಲ ಸೂಸೂತ್ರವಾU ನಡೀತಿದೆ ಎನೂ ತೊಂದರೆ ಇಲ್ಲ ಎಂದು ಮಾತಿಗೆ ಪ್ರಾರಂಭಿಸಿದರು.
ಸಾರ್, ಮುಖ್ಯಮಂತ್ರಿಗಳು ರಾಜೀನಾಮೆ ನೀಡೋದಕ್ಕೆ ಒಪ್ಪಿದರಾ ? ಪ್ರಶ್ನೆಯೊಂದು ತೂರಿ ಬಂತು.
ಯಾವ ರಾಜೀನಾಮೆ ? ಯಾರ ರಾಜೀನಾಮೆ ? ಅಂತಾದೇನೂ ಇಲ್ಲ ಎಂದ ಅಧ್ಯಕ್ಷರು ಬರಲಾ ಎಂದು ಹೊರಡುವುದಕ್ಕೆ ಸನ್ನದ್ಧರಾದರು. ಆದರೆ ಬೆಳಗಿನಿಂದ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ಸಾರ್, ಏನೂ ಇಲ್ಲ ಅಂದರೆ ಬೆಳಗಿನಿಂದ ಒಳಗೆ ಕುಳಿತು ಏನ್ ಕಡಿದು ಕಟ್ಟೆ ಹಾಕ್ತಾ ಇದೀರಾ ಎಂದು ಪ್ರಶ್ನಿಸಿದರು.
ರೀ ನಾವ್ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡ್ತ ಇದೀವಿ. ರಾಜಕೀಯ ಚರ್ಚೆ ಮಾಡೋದಕ್ಕೆ ನಾವಿಲ್ಲ ಎಂದು ಹೇಳಿದ ಅಧ್ಯಕ್ಷರು ಒಳಗೆ ನಾಯಕರ ಗ್ಯಾಸ್ ಟ್ರಬಲ್ ಸಮಸ್ಯೆಯ ಬಗ್ಗೆ ಚರ್ಚೆ ನಡೀತಿದೆ ಎಂದು ಮನಸ್ಸಿನಲ್ಲೇ ನಕ್ಕರು. ನೋಡಿ ರಾಜ್ಯದ ಗಂಭೀರ ಸಮಸ್ಯೆಗಳ ಬಗ್ಗೆ  ಅಲ್ಲಿ ಚರ್ಚೆ ನಡೀತಿದೆ. ಆ ಬಗ್ಗೆ ಮುಖ್ಯಮಂತ್ರಿಗಳು ವಿವರ ನೀಡ್ತಾರೆ ಎಂದು ಹೊರನಡೆದರು.
ಅಲ್ಲಿಂದ ಹೊರಟ ಅಧ್ಯಕ್ಷರಿಗೆ ತಲೆ ಕರಡವಾಗಿತ್ತು. ಈತ ತನ್ನ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಲು ಹೇಸುವವನಲ್ಲ. ಈತನನ್ನು ಅಧಿಕಾರದಿಂದ ಇಳಿಸುವುದು ಸುಲಭ ಅಲ್ಲ ಎಂದು ಅಧ್ಯಕ್ಷರಿಗೆ ಅನ್ನಿಸಿತು. ಇಲ್ಲಿನ ಬೆಳವಣಿಗೆಯನ್ನೆಲ್ಲ ಪಕ್ಷದ ವರಿಷ್ಠರಿಗೆ ತಿಳಿಸಬೇಕು, ಅವರು ಹೇಳಿದಂತೆ ಮುಂದಿನ ಹೆಜ್ಜೆ ಇಡಬೇಕು ಎಂದು ಅವರು ಅಂದುಕೊಂಡರು.
ಅಧ್ಯಕ್ಷರಿಗೆ ಪಕ್ಷದ ವರಿಷ್ಠರ ಬಗ್ಗೆ ಅಂತಹ ಒಳ್ಳೆ ಅಭಿಪ್ರಾಯ ಇರಲಿಲ್ಲ.  ಈ ದೆಹಲಿ ರಾಜಕಾರಣಿಗಳಿಗೆ ಸರಿಯಾಗಿ ಭಾಷೇನೇ ಬರೋದಿಲ್ಲ. ಬಯ್ ಬಿಟ್ಟರೆ ಹಿಂದಿ ಮಾತನಾಡ್ತಾರೆ. ಇಲ್ಲ ಎಂದ್ರೆ ಇಂಗ್ಲೀಷ್. ಹೀಗಾಗಿ ಅವರು ಹೇಳುವುದು ಸರಿಯಾಗಿ ಅರ್ಥವಗುವುದಿಲ್ಲ. ಹೇಳಬೇಕಾದ್ದನ್ನು ಹೇಳುವುದು ಕಷ್ಟ. ಇಡೀ ಇಂಡಿಯಾಕ್ಕೆ ಒಂದೇ ಭಾಶೇ ಇರಬೇಕಿತ್ತು. ಆಗ ಈ ಸಮಸ್ಯೆ ಇರ್ತಾ ಇರಲಿಲ್ಲ.  ಹೇಳುವುದು ಕೇಳುವುದು ಸುಲಭವಗುತ್ತಿತ್ತು ಎಂದು ಅಧ್ಯಕ್ಷರಿಗೆ ಅನ್ನಿಸತೊಡಗಿತು.

ಸಂಝೆ 6 ಗಂಟೆ. ಅ ಪತ್ರಿಕಾ ಕಚೇರಿಂiÀiಲ್ಲಿ ಚಟುವಟಿಕೆ ತೀವ್ರ ಗೊಳ್ಳುತ್ತಿರುವ ಸಮಯ. ಸಂಪಾದಕರು, ಸುದ್ದಿ ಸಂಪಾದಕರು, ಮುಖ್ಯ ವರದಿಗರರು ಹಾಗೂ ಇತರ ಹಿರಿಯ ಸಹೋದ್ಯೋಗಿಗಳ ಜೊತೆ ಮರು ದಿನದ ಸಂಚಿಕೆಯ ಬಗ್ಗೆ ಚರ್ಚೆ ನಡೆಸ್ತಾ ಇದ್ದರು. ಯಾವ ಪುಟದಲ್ಲಿ ಯಾವ ಸುದ್ದಿ ಬರಬೇಕು ಎಂಬುದು, ಹಾಗೆ ಯಾವ ಸುದ್ದಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅಲ್ಲಿ ನಡೆಯುತ್ತಿದ್ದ ಚರ್ಚೆ.
ಸಾಧಾರಣವಾಗಿ ಪತ್ರಿಕಾ ಕಚೇರಿಗಳಿಗೆ ಜೀವ ಬರುವುದು ಸಂಜೆಯಾದ ಮೇಲೆ. ಎಲ್ಲ ಕಡೆಯಿಂದ ಸುದ್ದಿ ಬಂದು ಬೀಳುತ್ತಿರುವಾಗ ಯಾವ ಯಾವ ಸುದ್ದಿಯನ್ನು ತೆಗೆದುಕೊಳ್ಳಬೇಕು ಎಲ್ಲಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯ. ಸಂಪಾದಕ ನಾರಾಯಣ ರಾವ್ ಈ ವೃತ್ತಿಯಲ್ಲಿ 20 ವರ್ಷ ಮುಗಿಸಿದ್ದಾರೆ.  ಬೇರೇ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅವರು ಈ ಪತ್ರಿಕೆಯ ಸಂಪದಕರಗಿದ್ದು ಅಚಾನಕ್ ಆಗಿ. ಪತ್ರಿಕೋದ್ಯಮ ಬೇಡ ಎಂದುಕೊಂಡಿದ್ದ ಅವರಿಗೆ ಈ ಪತ್ರಿಕೆಯ ಸಂಪಾದಕರಾಗುವ ಅಹ್ವಾನ ಬಂತು. ಅವರುಒಪ್ಪಿಕೊಂಡು ಬಿಟ್ಟರು. ನಂತರದ್ದು ಇತಿಹಾಸ. ಪತ್ರಿಕೆಯ ಪ್ರಸಾರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚತೊಡಗಿತು. ನಾರಾಯಣ್ ರಾವ ರಾಜ್ಯದ  ಖ್ಯಾತ ಸಂಪಾದಕರು ಎನ್ನಿಸಿಕೊಂಡರು.
ನೋಡಿ ಸುದ್ದಿಗಳನ್ನು ರುಚಿ ಕಟ್ಟಾಗಿ ಕೊಡಬೇಕು ಎಂಬ ಅವರ ಮತು ಹಳೇ ತಲೆಮಾರಿನ ಪತ್ರಕರ್ತರಿಗೆ ಪಥ್ಯವಾಗುತ್ತಿರಲಿಲ್ಲ. ಸುದ್ದಿ ಎಂದರೆ ಸುದ್ದಿ. ಅಲ್ಲಿ ನ್ಯಾಯ ನಿಷ್ಠುರತೆ ಇರಬೇಕು ಎಂದು ನಂಬಿಕೊಂಡಿದ್ದ ಈ ಹಳೆಯ ಮಂದಿ ರುಚಿ ಕಟ್ಟಾಗಿ ನೀಡಬೇಕು ಅನ್ನೊದಕ್ಕೆ ಸುದ್ದಿ ಏನು ತಿಂಡಿಯಾ ಎಂದು ಅವರು ತಮ್ಮೊಳಗೆ ಪ್ರಶ್ನಿಸಿಕೊಂಡಿದ್ದು ಉಂಟು. ಆದರೆ ಅದನ್ನು ಸಂಪಾದಕರಿಗೆ ನೇರವಾಗಿ ಕೇಳುವ ಧೈರ್ಯವನ್ನು ಅವರು ಮಾಡಲಿಲ್ಲ.
ಏನ್ರಿ. ಭಿನ್ನಮತದ ಕಥೆ ಏನಾಯಿತು ? ಸಂಪಾದಕರು ಪ್ರಶ್ನಿಸಿದರು.
ಏನ್ ಇಲ್ಲ ಸಾರ್, ಇವತ್ತು ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಯಿತಂತೆ. ಹಾಗಂತ ಪಕ್ಷದ ಅಧ್ಯಕ್ಷ್ರು ಮಾಧ್ಯಮದ ಪ್ರತಿನಿಧಿಗಳಿವೆ ತಿಳಿಸಿದ್ದಾರೆ. ಈ ಕುರಿತು ವರದಿಯೂ ಬಂದಿದೆ ಎಂದರು ಸುದ್ದಿ ಸಂಪಾದಕ ಎಮ್. ಬಿ. ಪಾಟೀಲ್
ಸಂಪಾದಕರು ಒಂದು ಸಿಗರೇಟು ಹಚ್ಚಿ ಪುಸು ಪುಸು ಹೊಗೆ ಬಿಟ್ಟರು.
ವರದಿಗಾರನಾದವನಿಗೆ ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡಬೇಕು ಕಣ್ರಿ.  ಅಧ್ಯಕ್ಷರು ಹೇಳಿದ್ದನ್ನೇ ಕೇಳಿಕೊಂಡು ವರದಿ ಮಾಡಲು ನನಗೆ ವರದಿಗಾರರು ಯಾಕೆ ಬೇಕು ? ನಾನು ಸ್ಟೇನೋ ಗಳನ್ನ ನೇಮಿಸಿಕೊಂಡು ವರದಿ ತರಿಸ್ತೀನಿ. ವರದಿಗಾರ ಎಂದರೆ ಸುದ್ದಿಯ ಹಿಂದೆ ಹೋಗಬೇಕು. ಒಳಗೆ ನಡೆದಿದ್ದನ್ನ ಹೊರಕ್ಕೆ ಎಳೆಯಬೇಕು. ಬಿಹೈಂಡ್ ದ್ ಸಿನ್ ಏನು ನಡೆದಿದೆ ಎಂಬುದನ್ನು ರುಚಿಕಟ್ಟಾಗಿ ಹೇಳಿದರೆ ಜನ ಪತ್ರಿಕೆಯನ್ನ್ ಓದ್ತಾರೆ.
ಸುದ್ದಿಸಮ್ಪಾದಕ ಪಾಟಿಲರು ರುಚಿಕಟ್ಟಾಗಿ ಸುದ್ದಿಯನ್ನು ಕೊಟ್ಟರೆ ಸತ್ಯಕ್ಕೆ ಅಪಚಾರ ಮಡಿದಂತೆ ಅಗೋಲ್ವೆ ಎಂದು ಕೇಳಬೇಕು ಎಂದುಕೊಂಡರು. ಆದರೆ ಈ ತಲೆ ಕೆಟ್ಟ ಸಂಪಾದಕರ ಜೊತೆ ಮಾತನಾಡುವುದಕ್ಕಿಂತ ಸುಮ್ಮನಿರುವುದು ಒಳೆಯದು ಎಂದುಕೊಂಡರು.
ಸಂಪಾದಕರು ಮೀಟೀಂಗ್ ಮುಗಿಸಿ ಅವರನ್ನೆಲ್ಲ ಹೊರಕ್ಕೆ ಕಳುಹಿಸಿದರು. ಕಳುಹಿಸುವಾಗ ನಾನೊಂದು ಸುದ್ದಿಕೊಡ್ತೀನಿ. ಅದನ್ನ ಆಂಕರ್ ಸ್ಟೋರಿ ಮಾಡಿಕೊಳ್ಳಿ. ಮುಖ್ಯಮಂತ್ರಿಗಳ ಪೆÇೀಟೋನೂ ಇರಲಿ ಎಂದರು.
ಸಂಪಾದಕರು ಕಿಡಕಿಯ ಹತ್ತಿರ ಬಂದು ಒಂದು ಸಿಗರೇಟು ಹಚ್ಚಿದರು.ಸಿಗರೇಟಿನ ಹೊಗೆ ಬಾಯಿಯ ಮೂಲಕ ಇಳಿದು ಅಂಗಾಂಗಗಳೆಲ್ಲ ಒಂದು ಸುತ್ತು ಹಾಕಿದಾಗ ಮನಸ್ಸಿಗೆ ಹಾಯೆನಿಸಿತು. ಸಿಗರೇಟು ಕಂಡು ಹಿಡಿದವ ಯಾರಿರಬಹುದು ಎಂದು ಯೋಚಿಸತೊಡಗಿದರು. ಇದಕ್ಕಿರುವ ಅದ್ಬುತ ಶಕ್ತಿ ಬೇರೆ ಯಾವುದಕ್ಕೂ ಇಲ್ಲ ಅನ್ನಿಸಿ ಇನ್ನೊಂದು ದಮ್ ಎಳೆದರು. ಅಷ್ಟರಲ್ಲಿ ಫೆÇೀನ್ ಕರೆ.
ಸರಿ ಸರಿ, ಮಾಡ್ತೀನಿ ಬಿಡಿ. ಈ ಮುಖ್ಯಮಂತ್ರಿ ಅವರ ಬೆಂಬಲಿಗರು ಮುಕಳಿ ಮುಟ್ಕಂಡು ನೋಡ್ಕಬೇಕು ಹಾಂಗ್ ಮಾಡ್ತೀನಿ. ನೋಡ್ತಾ ಇರಿ. ಹೌದು ಹೌದು ಮುಖ ಪುಟದಲ್ಲೇ ಬರುತ್ತೆ….
ಫೆÇೀಣ್ ಇಟ್ಟವರು ನಿರಾಳವಾಗಿ ಉಸಿರಾಡಿದರು. ಕಂಪ್ಯುಟರ್ ಮುಂದೆ ಕುಳಿತು ವರದಿ ಬರೆಯಲು ಸಿದ್ಧರಾದರು. ವರದಿಯ ಶೀರ್ಷಿಕೆಯನ್ನು ಮೊದಲು ಬರೆದರು.
ಪಕ್ಷದ ಸಭೆಯಲ್ಲಿ ಹೂಸಿನ ಬಗ್ಗೆ ಗಂಭೀರ ಚರ್ಚೆ.. ನಾಯಕರ ಹೂಸಿಗೆ ಪರಿಹಾರ ಕಂಡುಕೊಳ್ಳುವ ಯತ್ನ…..!
ಸ್ವಲ್ಪ ವ್ಯಂಗ್ಯ ಬೆರಸಿ ಟಿಕಿಸಿದ ವರದಿ ಸಿದ್ಧವಾಯಿತು.  ವರದಿಯ ಕೊನೆಯ ಪ್ಯಾರಾ ಹೀಗಿತ್ತು.
ಈ ರಾಜ್ಯದ ಜನ ಬರಗಾಲದಿಂದ ತತ್ತರಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಮಿತಿ ಮೀರಿದೆ. ನಿರುದ್ಯೋಗ ತಾಂಡವಾಡುತ್ತಿದ್ದೆ. ಗ್ರಾಮಾಂತರ ಪ್ರದೇಶದ ರಸ್ತೆಗಳು ಹಾಳು ಬಿದ್ದಿವೆ. ಈ ಬಗ್ಗೆ ಚರ್ಚೆ ಮಾಡಬೇಕಾದವರು ನಾಯಕರ ಹೂಸಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಇವರು ಈ ಹೂಸು ಈಗಾಗಲೇ ರಾಜ್ಯದ ಉದ್ದಗಲಕ್ಕೂ ಪಸರಿಸಿ ಜನ ಮೂಗು ಮುಚ್ಚುಕೊಂಡು ತಿರುಗಾಡುವಂತಾಗಿದೆ. ಇಂತಹ ಸ್ಥಿತಿಯನ್ನು ಸರ್ಕಾರವನ್ನು ಕಿತ್ತೊಗೆಯುವ ಮೂಲಕ ರಾಜ್ಯವನ್ನು ರಕ್ಷಿಸಬೇಕಾಗಿದೆ.
ಸಂಪಾದಕರು ವರದಿಯನ್ನು ಇನ್ನೊಮ್ಮೆ ಓದಿದರು. ಮನಸ್ಸಿಗೆ ಸಮಾಧಾನವಾಯಿತು. ಹುಡುಗರನ್ನು ಕರೆದು ಈ ವರದಿಯನ್ನು ಮುಖಪುಟದಲ್ಲಿ ಆಂಕರ್ ಸ್ಟೋರಿಯನ್ನಾಗಿ ತೆಗೆದುಕೊಳ್ಳುವಂತೆ ಸೂಚಿಸಿ ಇನ್ನೊಂದು ಸಿಗರೇಟು ಹಚ್ಚಿದರು.

ಆ ದಿನ ನಾಯಕರ ಪಾಲಿಗೆ ಎಂದಿನ ದಿನವಾಗಿರಲಿಲ್ಲ. ಅಂದಿನ ಪತ್ರಿಕೆಗಳಲ್ಲಿ ತಮ್ಮ ಹೂಸಿನ ಬಗ್ಗೆ ಇಂತಹ ವರದಿ ಬಂದಿದ್ದು ನೋಡಿ ಅವರಿಗೆ ಮೊದಲು ಬೇಸರವಾದರೂ ನಂತರ ಈ ಬೇಸರ ಉಳಿಯಲಿಲ್ಲ. ಸಂಪುಟ ಸಹೋದ್ಯೋಗಿಗಳು ಎಲ್ಲ ವಿಚಾರವನ್ನು ಬಿಟ್ಟು ಹೂಸಿನ ಬಗ್ಗೆ ಚರ್ಚೆ ನಡೆಸಿದ್ದು ಸರಿ ಅಲ್ಲ ದಿರಬಹುದು ಆದರೂ ನನ್ನ ಬಗ್ಗೆ ಮಾತ್ರವಲ್ಲ ನನ್ನ ಹೂಸಿನ ಬಗ್ಗೆಯೂ ಚರ್ಚೆ ನಡೆದಿರುವುದು ತಮಗೆ ಶಾಸಕರ ಮೇಲೆ ಎಷ್ಟು ಹಿಡಿತವಿದೆ ಎಂಬುದನ್ನು ತೋರಿಸಿಕೊಡುತ್ತದೆ ಎಂದು ಮನಸ್ಸಿಗೆ ಸಮಾಧಾನ ಅನ್ನಿಸಿತು. ಈ ರಾಜ್ಯದಲ್ಲಿ ತಾವು ಏಕಮೇವಾದ್ವಿತಿಯ ನಾಯಕ. ನನ್ನ ನಾಯಕತ್ವವನ್ನು ಪ್ರಶ್ನಿಸುವ ಧೈರ್ಯ್ ಯಾರಿಗೂ ಇಲ್ಲ ಎಂದೂ ಅನ್ನಿಸಿತು.
ಆದರೂ ಮನಸ್ಸಿನ ಒಳಗೆ ಒಂದು ರೀತಿಯ ದುಗುಡ. ಜೊತೆಗೆ ತಣಿಯದ ಬಾಯಾರಿಕೆ. ಎಷ್ಟು ನೀರು ಕುಡಿದರೂ ಬಾಯಾರಿಕೆ ನೀಗುವುದೇ ಇಲ್ಲ. ಈ ಬಾಯಾರಿಕೆ ತನ್ನನ್ನು ಹೈರಾಣಾಗಿಸಿದೆ ಎಂದುಕೊಂಡ ನಾಯಕರು, ಇದು ದೈಹಿಕ ಮಾತ್ರವಲ್ಲ ಒಂದು ರೀತಿಯ ಮಾನಸಿಕ ದಣಿವು ಎಂದುಕೊಂಡರು. ಆದರೆ ಯಾಕೋ ಗೊತ್ತಿಲ್ಲ. ಯಾವುದಕ್ಕೂ ಕೈಚೆಲ್ಲಿ ಕುಳಿತುಕೊಳ್ಳಲು ಮನಸ್ಸಾಗುವುದಿಲ್ಲ. ಎಲ್ಲವನ್ನೂ ಜೈಸಬೇಕು ಎಂಬ ಹಠ. ಕಷ್ಟಪಟ್ಟು ಗಳಿಸಿದ ಈ ಸ್ಥಾನವನ್ನು ಬಿಟ್ಟುಕೊಡಲು ಮನಸ್ಸಾಗುವುದಿಲ್ಲ. ಸದಾ ಅಧಿಕಾರದಲ್ಲಿ ಇರಬೇಕು ಅಂತಾ ಅನ್ನಿಸುತ್ತೆ. ಇದು ಸಹ ತೀರದ ದಾಹ..

                                                          ಅಧ್ಯಾಯ 2
ರಾಜಧಾನಿಯ ಜನ ನಿಬಿಡ ರಸ್ತೆಯಲ್ಲಿರುವ ಹಳೆಯ ಕಟ್ಟಡ. ಅದಕ್ಕೆ ಸುಣ್ಣ ಬಣ್ಣ ಮಾಡಿ ಯಾವ ಕಾಲವಾಗಿದೆಯೋ ಗೊತ್ತಿಲ್ಲ. ಈ ಮೂರಂತಸ್ತಿನ ಕಟ್ಟಡದಲ್ಲಿ  ಔಷಧಿಗೆ ಬೆಕೆಂದರೂ ಒಂದು ಕುರ್ಚಿಯಿಲ್ಲ. ಇಲ್ಲಿ ಎಲ್ಲ ನಡೆಯುವುದು ಚಾಪೆಯ ಮೇಲೆ.  ಜೊತೆಗೆ ಇದರ ಹೆಸರು ಕೂಡ ಚಾಪೆ ಸಂಘಟನೆ ಎಂದೇ.  ನೆಲದ ಮೇಲೆ ಕುಳಿತೇ ಈ ಸಂಘಟನೆಯ ಜನ ಚರ್ಚೆ ನಡೆಸುತ್ತಾರೆ.  ಚಾಪೆಯ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಪ್ರಾರ್ಥನೆ ಮಾಡುತ್ತಾರೆ. ಗೊಡೆಯ ಮೇಲೆ ಭಾರತ ಮಾತೆಯ ದೊಡ್ಡ ಫೆÇೀಟೊವೊಂದನ್ನು ಹಾಕಿ ಅದಕ್ಕೆ ಹೂ ಮಾಲೆ ಹಾಕಲಾಗಿದೆ.
ಈ ಮೊದಲ ಮಹಡಿಯ ಬಲ ಬದಿಯಲ್ಲಿ ಒಂದು ಕೊಠಡಿ ಇದೆ. ಆ ಕೊಠಡಿಯಲ್ಲಿ ಚಾಪೆಯ ಮೇಲೆ ಕುಳಿತ ಈ ವಯೋವೃದ್ಧರು ಈ ಸಂಘಟನೆಯನ್ನು ಬೆಳೆಸಿದವರು. ಇವರಿಗೆ ಈಗ ನೂರರ ಸಮೀಪ ವಯಸ್ಸು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಚಳವಳಿಗೆ ಧುಮುಕಿದ್ದ ಇವರು ಗಾಂಧಿಜಿ ಜೊತೆ ಜಗಳವಾಡಿದ್ದು ಐತಿಹಾಸಿಕ ಘಟನೆ. ನಮಗೆ ಶಾಂತಿಯ ಮೂಲಕ ಸ್ವಾತಂತ್ರ್ಯ ಬೇಡ. ರಕ್ತ ಕ್ರಾಂತಿಯ ಬೇಕು ಎಂದು ಕಾಂಗ್ರೆಸನಾಯಕ್‍ರ ಮುಖದ ಮೇಲೆ ಹೊಡೆದಂತೆ ಹೇಳಿಬಂದವರು ಇವರು. ಇವರ ಹೆಸರು ನರೇಂದ್ರ ಶರ್ಮ.
ನರೇಂದ್ರ ಶರ್ಮ ಅವರ ಹೆಸರು ಗೊತ್ತಿಲ್ಲದವರಿಲ್ಲ. ಅವರು ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಎಲ್ಲರಂತ್ ಸಂತೋಷ ಪಡಲಿಲ್ಲ. ಶಾಂತಿಯಿಂದ ಪಡೆದ ಈ ಸ್ವಾತಂತ್ರ್ಯ ನಮ್ಮನ್ನು ನರ ಸತ್ತವರನ್ನಾಗಿ ಮಾಡುತ್ತದೆ ನಮಗೆ ಈ ಸ್ವಾತಂತ್ರ್ಯ ಬೇಡ ಎಂದು ಹೇಳಿಕೆ ನೀಡಿ ಆಗಲೇ ವಿವಾದ ಸೃಷ್ಟಿಸಿದವರು ನರೇಂದ್ರ ಶರ್ಮ.
ಇದಾದ ಮೇಲೆ ತಮ್ಮ ಹುಟ್ಟೂರಿಗೆ ಬಂದ ಅವರು ಈ ಸಂಘಟನೆಯನ್ನು ಕಟ್ಟಿದರು.ಆಗ ಊರ ಹೊರಗೆ ನಾಲ್ಕು ಎಕರೆ ಜಾಗ ತೆಗೆದುಕೊಂಡು ಚಾಪೆ ಸಂಘಟನೆಯನ್ನು ಹುಟ್ಟು ಹಾಕಿದರು. ಅದನ್ನು ಪ್ರಬಲ ಸಂಘಟನೆಯನ್ನಾಗಿ ಬೆಳೆಸಿದರು. 60 ವರ್ಶಗಳ ಹಿಂದೆ ಕಟ್ಟಿದ ಈ ಕಟ್ಟದ ಈಗಲೂ ಹಾಗೇ ಇದೆ.  ಈ ಕಟ್ಟಡದ ಗೊಡೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಆದರೆ ಇದರ ತಳಪಾಯ ಗಟ್ತಿ ಇರುವುದರಿಂದ ಏನೂ ಆಗುವುದಿಲ್ಲ ಎಂದು ನರೇಂದ್ರ ಶರ್ಮ ನಂಬಿಕೊಂಡಿದ್ದಾರೆ.
ಅವರು ತಮ್ಮ ಸಂಘಟನೆಗೆ ಚಾಪೆ ಸಂಘಟನೆ ಎಂದು ಹೆಸರು ನೀಡಿದ್ದಕ್ಕೂ ತಾತ್ವಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ಚಾಪೆ ಸದಾ ನೆಲವನ್ನು ಅಂಟಿಕೊಂಡಿರುತ್ತದೆ. ಅದಕ್ಕೆ ಅಹಂಕಾರವಿಲ್ಲ. ಜೊತೆಗೆ ಚಾಪೆಯ ಮೇಲೆ ಕುಳಿತುಕೊಂಡವರು ತಮ್ಮ ಅಹಂಕಾರವನ್ನು ಕಳೆದುಕೊಳ್ಳುತ್ತಾರೆ. ಎಲ್ಲರ ಜೊತೆ ಸಮಾನತೆಯನ್ನು ಸಾಧಿಸುವಲ್ಲಿಯೂ ಚಾಫೆಯ ಪಾತ್ರವಿದೆ.  ವಿದೇಶಿ ಉಡುಪಾದ ಪ್ಯಾಂಟು ಹಾಕಿಕೊಂಡರೆ ಚಾಪೆಯ ಮೇಲೆ ಕುಳಿತು ಕೊಳ್ಳುವುದು ಕಷ್ಟ. ಚಾಪೆಯ ಮೇಲೆ ಕುಳಿತುಕೊಳ್ಳುವಾಗ ಅಡ್ಡ ಪಂಜೆ ಉಟ್ಟರೆ ಉತ್ತಮ.  ಹೀಗಾಫಿû ಚಾಪೆ ಎನ್ನುವುದು ದೇಶಿಯತೆಯನ್ನು ಪ್ರತಿಬಿಂಬಿಸುತ್ತದೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಚಾಪೆ ಸಂಘಟನೆ ಅದರ ವಿರುದ್ಧ ನಡೆಸಿದ ಹೋರಾಟ ಕೂಡ ಸಣ್ಣದಲ್ಲ. ಸಂಘಟನೆಯ ಕಾರ್ಯಕರ್ತರು ತಂಡೋಪ ತಂಡವಾಗಿ ಜೈಲು ಸೇರಿದರು. ಹೊರಗಿನಿಂದ ಸರ್ಕಾರದ ವಿರುದ್ಧ ರಕ್ತ ಕ್ರಾಂತಿ ಮಾಡಬೇಕು ಎಂದು ನರೇಂದ್ರ ಶರ್ಮ ನಿರ್ಧರಿಸಿದ್ದರು. ಅದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಅವರು ಮುಂದಾಗಿದ್ದರು.  ಜೊತೆಗೆ ತಮ್ಮ ಸಂಘಟನೆಯ ಕಾರ್ಯಕರ್ತರಿಗೆ ಲಾಠಿ ಮತ್ತು ಕೇರಳದ ಕಲಾಯಿ ಪಟ್ಟಿನಂತಹ ಸಮರ ಕಲೆಯನ್ನು ಅವರು ಕಲಿಸಿದ್ದರು. ಇದೆಲ್ಲ ಆಗಿ ಚಾಪೆ ಸಂಘಟನೆ ಸಿದ್ಧವಾಗುವಷ್ಟರಲ್ಲಿ ತುರ್ತು ಪರಿಸ್ಥಿತಿ ಹೋಗಿತ್ತು. ಇಂದಿರಾ ಗಾಂಧಿ ನೆಲಕಚ್ಚಿದರು. ಹೀಗಾಗಿ ನರೇಂದ್ರ ಶರ್ಮ ಎರಡನೆಯ ಬಾರಿ ರಕ್ತ ಕ್ರಾಂತಿ ಮಾಡುವ ಅವಕಾಶವನ್ನು ಕಳೆದುಕೊಂಡರು. ಈ ಬಗ್ಗೆ ಅವರಿಗೆ ಈಗಲೂ ಬೇಸರವಿದೆ. ತುರ್ತು ಪರಿಸ್ಥಿತಿಯ ವಿರುದ್ಧ ರಕ್ತ ಕ್ರಾಂತಿ ನದೆದಿದ್ದರೆ ಈಗಿನ ಸ್ಥಿ ಬರುತ್ತಿರಲಿಲ್ಲ. ಭ್ರಷ್ಟಾಚಾರ ಸರ್ವ ವ್ಯಾಪಿಯಾಗುತ್ತಿರಲಿಲ್ಲ. ರಾಜಕಾರಣಿಗಳು ಜನ ವಿರೋಧಿಗಳಾಗುತ್ತಿರಲಿಲ್ಲ ಎಂದು ಶರ್ಮ ತಮ್ಮ ಬಳಿ ಬರುವವರ ಮುಂದೆ ಹೇಳುವುದಿದೆ.
ಚಾಪೆಯ ಮೇಲೆ ಕುಳಿತು ಯೋಚಿಸುತ್ತಿದ್ದ ನರೇಂದ್ರ ಶರ್ಮ ಅವರಿಗೆ ತಮ್ಮ ಕಾರ್ಯಕರ್ತರ ಹೋರಾಟದಿಂದ ಹಾಗೂ ಬೆಂಬಲದಿಂದ ಈ ಸರ್ಕಾರ ಅಧಿಕಾರಕ್ಕೆ ಬಂದದ್ದು ನೆನಪಾಗುತ್ತದೆ.  ಆದರೆ ಈ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂಬುದು ಬೇಸರವನ್ನು ಉಂಟು ಮಾಡುತ್ತದೆ.
ನರೇಂದ್ರ ಶರ್ಮ ಎದ್ದು ಬಾತ್ ರೂಮಿನತ್ತ ನಡೆದರು.  ಬಕೇಟಿನಲ್ಲಿ ತುಂಬಿಟ್ಟಿದ್ದ ನೀರನ್ನು ಮೊಗೆದು ಒಂದೊಂದೇ ತಂಬಿಗೆ ನೀರನ್ನು ತಲೆಗೆ ಸುರಿದುಕೊಂಡರು. ರಾಮಾಯ ರಾಮಚಂದ್ರಾಯ… ರಾಮ ಭದ್ರಾಯ ವೇದಸೆ ಎಂದು ಶ್ಲೋಕವನ್ನು ಹೇಳುತ್ತ ಕಲ್ಲಿನಿಂದ ಮೈ ಉಜ್ಜಿಕೊಂಡರು.  ಬಹುಬೇಗ ಸ್ನಾನವನ್ನು ಮುಗಿಸಿ ದೇವರ ಕೊಣೆಯ ಒಳಗೆ ನಡೆದರು. ಅಲ್ಲಿ ಸಂಧ್ಯಾವಂದನೆ ಮಾಡಿ, ಧ್ಯಾನ ಮಾಡಿ ಅವರು ಹೊರಕ್ಕೆ ಬರುವುದು ಯಾವಾಗ ಎಂದು ಹೇಳುವುದು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಅವರನ್ನು ನೋಡಲು ಬರುವವರು ಪೂಜೆ ಸಂಧ್ಯವಂದನೆ ಮುಗಿಯಿತೆ ಎಂದು ಕೇಳಿಕೊಂಡು ಇತ್ತ ಬರುತ್ತಾರೆ.  ಒಂದೊಮ್ಮೆ ಅವರ ಪೂಜೆಯ ಸಂದರ್ಭದಲ್ಲಿ ಬಂದರೆ ಅವರಿಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ.
ನಿಮಗೆ ಸಮಯದ ಪ್ರಜ್ನೆಯೇ ಇಲ್ಲ. ಇಲ್ಲಿ ಬಂದು ವಕ್ರಿಸಿ ಬಿಟ್ಟಿದ್ದೀರಲ್ಲ ? ಅಂತಾ ಬಂದವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.  ಮುಖ್ಯಮಂತ್ರಿಗಳು, ಮಂತ್ರಿಗಳು ರಾಜ್ಯಪಾಲರು, ಪತ್ರಕರ್ತರು ಯಾರೇ ಇರಲಿ ಅವರು ಕಾಯಲೇಬೇಕು. ಕಾದು ಬೈಸಿಕೊಳ್ಳಲೇ ಬೇಕು. ಹೀಗೆ ಬೈಸಿಕೊಂಡವರ ಪಟ್ಟಿ ಬಹಳದೊಡ್ಡದು.
ನರೇಂದ್ರ ಶರ್ಮ ನಿತ್ಯ ಕರ್ಮವನ್ನು ಮುಗಿಸಿ ಹೊರಕ್ಕೆ ಬರುವಷ್ಟರಲ್ಲಿ ಸಮಯ ಹನ್ನೊಂದು ಗಂಟೆ ದಾಟಿತ್ತು. ಆಗಲೇ ಹಲವರು ಬಂದು ಕಾಯುತ್ತಿದ್ದರು.
(ಮುಂದುವರಿಯುವುದು)

Tuesday, December 24, 2013

ವಿದ್ರೋಹ

ಇದು ನಾನು ಬರೆಯುತ್ತಿರುವ ಕಾದಂಬರಿ. ಇದರ ಮೊದಲ ಭಾಗವನ್ನು ನಿಮಗಾಗಿ ನೀಡುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿದರೆ ಸಂತೋಷ- ಶಶಿಧರ್ ಭಟ್

ಭಾಗ ೧

ಆಗ ತಾನೆ ಸಂಜೆಯಾಗಿ ಕೆಲಹೊತ್ತಾಗಿತ್ತು. ಎಲ್ಲ ಜಂಜಡಗಳಿಂದ ತಪ್ಪಿಸಿಕೊಂಡು ನಾಯಕರು ಇಲ್ಲಿ ಬಂದು ಕುಳಿತಿದ್ದರು.  ಇಲ್ಲಿ ಅಂದರೆ ನಗರದಿಂದ ಇಪ್ಪತ್ತು ಕಿಮೀ ದೂರದಲ್ಲಿರುವ ರೆಸಾರ್ಟ್ ನಲ್ಲಿ.  ಇಲ್ಲಿ ಕುಳಿತರು ಅವರ ಮನಸ್ಸು ಅಲ್ಲಿಯೇ ಇತ್ತು. ಆಗಲೇ ಶುರುವಾದ ಭಿನ್ನಮತ ಅವರನ್ನು ಕಂಗೆಡಿಸಿತ್ತು.  ತಾವು ನಂಬಿದವರು, ತಮ್ಮಿಂದಲೇ ಬೆಳೆದವರು ಹೀಗೆ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದು ಅವರು ಅಂದುಕೊಂಡಿರಲಿಲ್ಲ. ಆದರೆ ಅಧಿಕಾರ ಎಂದರೆ ಹಾಗೆ ತಾನೆ…?
ಏ ತಮ್ಮಾ ಬಾರೋ ಇಲ್ಲಿ….. ತಮ್ಮ ಸಹಾಯಕನನ್ನು ಹತ್ತಿರಕ್ಕೆ ಕರೆದರು. ನಾನು ಇಲ್ಲಿಗೆ ಬಂದಿದ್ದು ಯಾರಿಗೂ ಗೊತ್ತಿಲ್ಲ ತಾನೆ ?
ಪಕ್ಕದಲ್ಲಿ ಕೈ ಕಟ್ಟಿ ಕುಳಿತ ಅವರ ಸಹಾಯಕ ಇಲ್ಲ ಎಂದು ತಲೆ ಆಡಿಸಿದ. ಮತ್ತೆ ಮ್ಯಾಡಮ್ ಅವರಿಗೆ ಗೊತ್ತು ಅಂತಾ ಕಾಣುತ್ತೆ ಅಂದ. ಅವರು ಅವನತ್ತ ಸುಮ್ಮನೆ ನೋಡಿದರು. ಅವನ ತುಟಿಯಂಚಿನಲ್ಲಿ ಸಣ್ಣ ನಗೆ ಇದ್ದಂತೆ ಅನಿಸ್ತು. ಈ ನನಮಗ ವ್ಯಂಗವಾಗಿ ಮೇಡಮ್ ಅಂತ ಅಂದನಾ ? ಅನ್ನದೇ ಏನ್ ಮಾಡ್ತಾನೆ. ಸೂಳೇ ಮಗ ನನ್ ಜೊತೆಗಿದ್ದು ಕೊಬ್ಬಿದಾನೆ. ಬೈಯೋಣ ಎಂದು ಅನ್ನಿಸಿದರೂ ಬೈಯಲು ಮನಸ್ಸಾಗಲಿಲ್ಲ.  ಈ ಸಂದರ್ಭದಲ್ಲಿ ಅವನಿಗೆ ಬೈಯುವುದು ಅಷ್ಟು ಸೂಕ್ತ ಅಲ್ಲ ಎಂದುಕೊಂಡರು.
ಅಲ್ಲಿ ಮಳೆ ಬರ್ತಾ ಇತ್ತು.  ರೂಮಿನ ಹೊರಗೆ ಮಳೆಯ ನೀರು ಬೀಳುವುದನ್ನು ಅವರು ನೋಡುತ್ತ ಕುಳಿತರು. ಅವರು ಹುಟ್ಟಿ ಬೆಳೆದ ಊರು ಮಲೆನಾಡು ಜಿಲ್ಲೆಗೆ ಸೇರಿದರೂ ಅಲ್ಲಿ ಮಳೆ ಬರುವುದು ಕಡಿಮೆ. ವರ್ಷಕ್ಕೆ ಹತ್ತಾರು ಇಂಚು ಮಳೆ ಬಂದರೆ ಅದೇ ಹೆಚ್ಚು. ಆದರೆ ಜಿಲ್ಲಾ ಕೇಂದ್ರದಲ್ಲಿ ಹಾಗಲ್ಲ. ಅಲ್ಲಿ ಮಳೆ ಬಂದರೆ ಆರು ತಿಂಗಳು ನಿಲ್ತಾ ಇರಲಿಲ್ಲ. ಅವರು ಮೊದಲ ಬಾರಿ ಎಮ್ ಎಲ್ ಎ ಆದ ಮೇಲೆ ಜಿಲ್ಲಾ ಕೆಂದ್ರಕ್ಕೆ ತಮ್ಮ ವಾಸ್ತವ್ಯವನ್ನು ಬದಲಿಸಿ ಬಿಟ್ಟಿದ್ದರು. ಹಾಗೆ ಜಿಲ್ಲಾ ಕೇಂದ್ರಕ್ಕೆ ಬಂದ ಮೇಲೆ ಮಳೆ ನೋಡುವುದು ಸಾಮಾನ್ಯವಾಯಿತು.
ಹೊರಗೆ ಕಾರು ಬಂದು ನಿಂತ ಸದ್ದು. ಹೌದು ಆಕೆಯೇ ಬಂದಿರಬೇಕು. ಅವಳು ಹಾಗೆ. ಒಂದು ಕ್ಷಣವೂ ನನ್ನ ಬಿಟ್ಟು ಇರಲಾರಳು.  ನನ್ನ ಬಗ್ಗೆ ಅವಳಿಗಿರುವ ಕಾಳಜಿ ಅಂತಹುದು. ಕಳೆದ ಹತ್ತು ವರ್ಷಗಳಿಂದ ಎಂತೆಂತೆಹ ಕಷ್ಟವನ್ನು ಅವಳು ಎದುರಿಸಿದಳಲ್ಲ… ನನ್ನ ಜೊತೆಗಿನ ಸಂಬಂಧದ ಬಗ್ಗೆ ಎಲ್ಲರೂ ಮಾತನಾಡಿದರೂ ಆಕೆ ತಲೆ ಕೆಡಿಸಿಕೊಳ್ಳಲಿಲ್ಲ. ಸಂಪುಟ ಸಹೋದ್ಯೋಗಿಗಳು ಕುಹಕದ ಮಾತನಾದಿದರೂ ಎಲ್ಲವನ್ನು ನಿರ್ಲಕ್ಷಿಸಿದಳು. ನನಗೆ ಸಮಾಜ ನಿಂಧನೆಯ ಭಯ ಬಂದಾಗಲೂ ಹತ್ತಿರಕ್ಕೆ ಬಂದು ತಲೆ ಸವರಿ, ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ ಪುಟ್ಟಾ ಎಂದು ಬಿಟ್ಟಳಲ್ಲ. 
ನೋಡು ಜಗತ್ತು ಮಾತನಾಡುತ್ತದೆ. ಆನ ಮಾತನಾಡುತ್ತಾರೆ. ನಾವು ಈ ಜನರಿಗಾಗಿ ಬದುಕೊದು ಸಾಧ್ಯಾನಾ ? ನಾವು ಬದುಕೊದು ನಮಗಾಗಿ ಅಲ್ಲವಾ ? ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ, ಎಲ್ಲಿ ಒಂದು ಮುತ್ತು ಕೊಡು ಎಂದು ಲೊಚ ಲೊಚನೆ ಮುತ್ತು ಕೊಟ್ಟೇ ಬಿಟ್ಟಳಲ್ಲ..
ಸಹಾಯಕ ಹಾಗೆ ಒಳಗೆ ಬಂದ
ಸಾರ್ ಡಾಕ್ಟರ್ ಬಂದಿದಾರೆ, ಒಳಗೆ ಕಳಿಸಲಾ ?
ಕಳಿಸು ಎಂಬಂತೆ ಆತನತ್ತ ನೋಡಿದರು.
ಈ ಡಾಕ್ಟರ್ ಒಳ್ಳೆ ಮನುಷ್ಯ. ನಮ್ಮವನೇ. ಆತ ಎಂ ಬಿ ಬಿಎಸ್ ಅಲ್ಲ. ಹೊಮೊಯೋಪಥಿ. ಆದರೆ ಔಷಧ ಮಾತ್ರ ಪವರ್ ಫುಲ್. ಆತ ಕೊಟ್ಟ ಅಔಷಧ ಎಂದು ವಿಫಲವಾಗಲೇ ಇಲ್ಲ.  ನೊಡಿದರೆ ಸಣ್ಣ ಸಕ್ಕರೆ ಉಂಡೆಯಂತಹ ಔಷಧ ಕೊಡ್ತಾನೆ. ಅದು ಹೊಟ್ಟೆಗೆ ಹೋದ ತಕ್ಷಣ ಕೆಲಸ ಮಾಡೊದಕ್ಕೆ ಪ್ರಾರಂಭ ಮಾಡುತ್ತೆ. ಮುಂಡೆದು ಎಲ್ಲಿ ಕಲಿತನೋ.  ಆತನ ಪುಷ್ಟಿ ವರ್ಧಕ ಔಷಧಗಳು ಎಷ್ಟೇ ವಯಸ್ಸಾಗಲಿ ಅವರ ಮೇಲೆ ಕೆಲಸ ಮಾಡುತ್ತೆ. ಮುದುಕನೂ ಯೌವನದ ಹುಮ್ಮಸಿನಿಂದ ಕುಪ್ಪಳಿಸ್ತಾನೆ. 
ಡಾಕ್ಟರ್ ಒಳಗೆ ಬಂದರು. ಕೈ ಮುಗಿದು ನಿಂತರು.
ಸಾರ್ ಹೇಗಿದ್ದೀರಿ ? ನಿಮ್ಮ ಆರೋಗ್ಯ ಹೇಗಿದೆ ಅಂತ ನೋಡಿಕೊಂಡು ಹೋಗೊಣ ಅಂತಾ ಬಂದೆ. ಎಂದವರೆ ಹತ್ತಿರ ಬಂದು ಎದೆ ಕೈ ಕಾಲು ಮೊದಲಾದ ಸರ್ವಾಂಗವನ್ನು ಮುಟ್ಟಿ ನೊಡಿದರು.  ಯು ಆರ್ ಅಲ್ ರೈಟ್ ಎಂದವರೆ ತಮ್ಮ ಬಾಯಿಯನ್ನು ಕಿವಿಯ ಹತ್ತಿರ ತಂದು ರಾತ್ರಿ ಸಮಸ್ಯೆ ಇಲ್ಲ ತಾನೆ ಎಂದು ಕಿಸಕ್ಕನೆ ನಕ್ಕರು.
ನಿಮ್ಮನ್ ಕೇಳಿದರೆ ಏನ್ ಗೊತ್ತಾಗುತ್ತೆ… ಮೇಡ್ಮ್ ಕೇಳಬೇಕು ಅಂತ ಇನ್ನೊಮ್ಮೆ ಅನಗತ್ಯವಾಗಿ ನಕ್ಕರು. ನೊಡಿ ಆ ಸಕ್ಕರೆ ಕಾಳಿನಂತಹ ಗುಳಿಗೆಯನ್ನ ಹಾಗೆ ಮುಂದುವರಿಸಿ. ಇನ್ನೊಂದು ಸಣ್ಣ ಬಾಟಲಿಯಲ್ಲಿ ಇದೆಯಲ್ಲ, ಅದನ್ನ ಮಾತ್ರ ಯಾವಾಗ ಬೇಕೋ ಆವಾಗ ಉಪಯೋಗಿಸಿ.  ನಿಗಧಿತ ಡೊಸಿಗಿಂತ ಜಾಸ್ತಿ ತಗೋಬೇಡಿ.  ಜಾಸ್ತಿ ತಗಂಡರೆ ನಿಮಗೆ ಕಷ್ಟ ಅಂತ ಇನ್ನೊಮ್ಮೆ ನಕ್ಕರು. 
ನಾಯಕರಿಗೆ ಅವರ ಈ ನಗುವಿನ ಬಗ್ಗೆ ಅನುಮಾನ.  ಲೈಂಗಿಕ ಶಕ್ತಿ ವರ್ಧಕ ಔಷಧ ತೆಗೆದುಕೊಳ್ಳುವ ವಿಚಾರವನ್ನು ಈ ಡಾಕ್ಟರು ಎಲ್ಲ ಕಡೆ ಪ್ರಚಾರ ಮಾಡಬಹುದೇ ಎನ್ನುವ ಅನುಮಾನ ಅವರಿಗೆ ಮೂಡಿತು. ಮಾಡಿದರೆ ಮಾಡಿಕೊಳ್ಳಲಿ 65 ವರ್ಷ ದಾಟಿದ ಮೇಲೆ ಯಾರೇ ಆಗಲೀ ಔಷಧ ತೆಗೆದುಕೊಳ್ಳದೇ ಚಟುವಟಿಕೆ ನಡೆಸೋದು ಸಾಧ್ಯ ಇಲ್ಲ. ಜೊತೆಗೆ ಪಾಪ ನಂಬಿ ಬಂದ ಆಕೆಯನ್ನ ಖುಶಿಯಲ್ಲಿ ಇಡಲು ಇದನ್ನೆಲ್ಲ ಮಾಡಲೇಬೇಕು.  ಜಗತ್ತು ಏನು ಹೇಳುತ್ತೆ ಅನ್ನೋದಕ್ಕಿಂತ ನಾವು ಹೇಗಿದ್ದೀವಿ ಅನ್ನೋದು ಮುಖ್ಯ ಅಂತ ಅನ್ನಿಸಿ ಸಮಾಧಾನವಾಯ್ತು.
ಡಾಕ್ಟರ್ ಅನ್ನು ಕಳುಹಿಸಿ ಕೊಟ್ಟ ನಾಯಕರು ಮತ್ತೆ ಹೊರಗೆ ನೋಡಿದರು. ಮಳೆ ನಿಂತಿರಲಿಲ್ಲ. ಆಕೆ ಇನ್ನು ಬಂದಿಲ್ಲ ಅಂತ ಅಸಹನೆ ಮೂಡಿದರೂ ತನ್ನ ವಿರುದ್ಧ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಯನ್ನು ನಿಯಂತ್ರಿಸಲು ಆಕೆ ನಡೆಸುತ್ತಿರುವ ಯತ್ನ ನೆನಪಾಗಿ ಸಮಾಧಾನ ಅನ್ನಿಸಿತು. ಆಕೆ ತೋರಿಸಿದಷ್ಟು ಆಸಕ್ತಿಯನ್ನ ಸ್ವಂತ ಮಕ್ಕಳು ತೋರಿಸಿದ್ದರೆ ಈ ಸ್ಥಿತಿ ಬರ್ತಾ ಇರಲಿಲ್ಲ. ಆದರೆ ಈ ಮಕ್ಕಳೋ ಅದು ಇದು ವ್ಯವಹಾರ ಮಾಡಿ ಕಾಸು ಮಡುವುದನ್ನು ಕಲಿತರೇ ಹೊರತೂ ರಾಜಕೀಯ ಕಲಿಯಲಿಲ್ಲ. 
ಏ ಬಾರೋ ಇಲ್ಲಿ ಎಂದು ಸಹಾಯಕನನ್ನು ಕರೆದರು. ಮೇಡಮ್ ಬಂದ್ರೆನೋ ಅಂತಾ ಪ್ರಶ್ನಿಸಿದರು. ಆಕೆ ಬಂದಿಲ್ಲ ಎಂಬುದು ಅವರಿಗೆ ಗೊತ್ತಿದ್ದರೂ ಬಂದ್ರಾ ಅಂತ ಕೇಳಿ ಸಮಾಧಾನ ಪಟ್ಟುಕೊಳ್ಳಲು ಯತ್ನಿಸಿದರು. ಇಲ್ಲಿ ಬಂದಿಲ್ಲ ಬಂದ ತಕ್ಷಣ ಒಳಕ್ಕೆ ಕಳಿಸ್ತೀನಿ ಅಂತಾ ಹೇಳಿದ ಸಹಾಯಕ ಹೊರಕ್ಕೆ ಹೋಗಿ ಬಾಗಿಲು ಎಳೆದುಕೊಂಡ.  
ಹೊರಗೆ ಮಳೆ ನಿಂತಿರಲಿಲ್ಲ. ಯಾರಿಗೂ ಹೇಳದೇ ಸೆಕ್ಯುರಿಟಿಯನ್ನು ಬಿಟ್ಟು ಕದ್ದು ಇಲ್ಲಿಗೆ ಒಡಿ ಬಂದಿದ್ದ ನಾಯಕರು ಜೊತೆಗೆ ಆಪ್ತ ಸಹಾಯಕ ಮಾತ್ರ ಬಂದಿದ್ದ. ಇಲ್ಲಿ ಬಂದರೆ ಇಲ್ಲಿನ ಏಕಾಂತದಲ್ಲಿ ಎಲ್ಲವನ್ನೂ ಮರೆಯಬಹುದು ಎಂದು ಅವರು ಅಂದುಕೊಂಡಿದ್ದರು. ಆದರೆ ಮರೆಯಲು ಸಾಧ್ಯವಾಗ್ತಾ ಇಲ್ಲ. ಎಲ್ಲವೂ ನೆನಪಾಗ್ತಾ ಇದೆ. ನಾನು ಬೆಳೆಸಿದವರೆ ಧ್ರೋಹ ಮಾಡಲು ಸಜ್ಜಾಗಿದ್ದಾರೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಸರ್ಕಾರ ಉರುಳ ಬಹುದು. ಗೂಟದ ಕಾರು ಹೋಗಬಹುದು.  ಎನ್ನೊಬ್ಬ ಮುಖ್ಯಮಂತ್ರಿ ಆಗಬಹುದು.
ನಾಯಕರು ಕಿಡಿಕಿಯತ್ತ ಮತ್ತೊಮ್ಮೆ ನೋಡಿದರು. ಎಲ್ಲ ಕಳ್ಳ ಸೂಳೆ ಮಕ್ಕಳು ಅಂತ ದೊಡ್ದದಾಗಿ ಕೂಗಿದರು.. 
ಏನ್ ಸಾರ್ ಕರೆದ್ರಾ ಅಂತ ಆಪ್ತ ಸಹಯಕ ಒಳಗೆ ಬಂದ.
ಏ ಬೋಳಿ ಮಗನೇ ನಿನ್ ಯಾರ್ ಕರೆದ್ರು. ಕರದಾಗ್ ಬಾರೋ ಮಗನೆ ಎಂದು ಬೈದು, ಕಿಡಕಿಯತ್ತ ಉಗಿದರು. ಯಾಕೋ ಈ ಎಕಾಂತ ಅಸಹನೀಯ ಅಂತಾ ಅನ್ನಿಸತೊಡಗಿತು. ಕೆಲವೊಮ್ಮೆ ಏಕಾಂತ ಬೇಕು ಅಂತ ಅನ್ನಿಸುತ್ತೆ. ಏಕಾಂತದಲ್ಲಿ ಇದ್ದರೆ, ಜನರ ನಡುವೆ ಓಡಬೇಕು ಅಂತಾ ಅನ್ನಿಸುತ್ತೆ. ಆನರ ನಡುವೆ ಇದ್ದಾಗ ಕೆಟ್ಟ ಮಾತು ಬಾಯಿಯಿಂದ ಬಂದು ಬಿಡುತ್ತೆ. ಸೂ ಮಗ ಬೋ ಮಗ ಅಂದ್ರೆ ಫಾಲೋವರ್ಸ್ ದೂರ ಆಗ್ತಾರೆ..ಇನ್ನು ಮುಂದೆ ಕೆಟ್ಟದಾಗಿ ಬೈಯ್ಬಾರದು ಅಂತ ಸಂಕಲ್ಪ ಮಾಡಿದರು ಒಂದೆರಡು ದಿನಗಳಲ್ಲಿ ಅದೂ ಮರೆತು ಹೋಗಿ ಸಂಸ್ಕೃತ ಶಬ್ದಗಳು ಪುಂಖಾನುಪುಂಖವಾಗಿ ಬರಲು ಪ್ರಾರಂಭವಾಗುತ್ತೆ.
ಇನ್ನು ಮುಂದೆ ಯಾರನ್ನೂ ಬೈಯ್ಬಾರದು. ಮುಖದಲ್ಲಿ ಸಣ್ಣ ನಗುವನ್ನು ಫಿಕ್ಸ್ಡ್ ಡಿಪೆÇಸಿಟ್ ನಂತೆ ಇಟ್ಟುಕೊಂಡಿರಬೇಕು. ಸಿಟ್ಟು ಮಾಡಿಕೊಳ್ಳಲೇ ಬಾರದು ಎಂಬ  ತೀರ್ಮಾನಕ್ಕೆ ನಾಯಕರು ಬಂದರು.  ಆಪ್ತ ಸಹಾಯಕನನ್ನು ಹತ್ತಿರಕ್ಕೆ ಕರೆದು ಆತನ ಬೆನ್ನನ್ನು ಸವಾಕಶವಾಗಿ ಸವರಿದರು. ಬೈದಿದ್ದಕ್ಕೆ ಬೇಸರ ಮಾಡ್ಕಂದ್ಯೆನೋ ಅಂತ ವಿಚಾರಿಸಿದರು. ಸಾಹೇಬರ ವರ್ತನೆ ಬದಲಾಗಿದ್ದನ್ನು ಕಂಡ ಸಹಾಯಕ ಇಲ್ಲಾ ಸಾರ್, ನೀವು ನನ್ನ ತಂದೆ ಇದ್ದಂಗೆ. ನೀವು ಬೈದೇ ಇನ್ಯಾರು ನನ್ನ ಬೈ ಬೇಕು ಸಾರ್ ಅಂದ.
ನೀವೇ ನನ್ನ ತಂದೆ ಅಂತ ಆತ ಹೇಳಿದ ಮಾತು ಕೇಳಿ ಮನಸ್ಸಿನಲ್ಲಿ ಏನೋ ಕಸಿವಿಸಿ.  ಇವನ ಅಪ್ಪ ಕೂಡ ನನ್ನ ಜೊತೆಗೆ ಕೆಲಸ ಮಾಡಿದವ. ರಾಜಕೀಯದಲ್ಲಿ ಪ್ರವರ್ಧನ ಮಾನಕ್ಕೆ ಬರೆದ ಆ ದಿನಗಳಲ್ಲಿ ಹಗಲು ಇರುಳೆನ್ನದೇ ಜೊತೆಗೆ ದುಡಿದವ ಆತ. ಎಲ್ಲ ವ್ಯವಹಾರಗಳಲ್ಲೂ ಆತ ಎತ್ತಿದ ಕೈ. ಕಣ್ಣು ಸನ್ನೆ ಮಾಡಿದರೆ ಸಾಕು ಅವನಿಗೆ ಎಲ್ಲ ಅರ್ಥವಾಗ್ತಾ ಇತ್ತು. ಯಾಕೋ ಬೇಸರವಗಿದೆ ಕಣಯ್ಯ ಅಂದ್ರೆ ಸಾಕು, ಆತ ಯಾರನ್ನೋ ವ್ಯವಸ್ಥೆ ಮಾಡಿ ಬಿಡುತ್ತಿದ್ದ.  ಮನಸ್ಸಿಗೆ ಸಮಾಧಾನ ತೃಪ್ತಿ ಆದ ಮೇಲೆ ಯಾರಿಗೂ ಗೊತ್ತಾಗದ ಹಾಗೆ ಕರೆ ತಂದವರನ್ನು ಹಾಗೆ ಕಳುಸಿ ಬಿಡುತ್ತಿದ್ದ. ಈ ಗುಟ್ಟು ಎಲ್ಲಿಯೂ ಹೊರಕ್ಕೆ ಬರದಂತೆ ನೋಡಿಕೊಂಡ.
ಅವನ ಸ್ವಾಮಿ ನಿಷ್ಟೆ ಎಷ್ಟಿತ್ತೆಂದರೆ ನನಗಾಗಿ ತನ್ನ ಜೀವನವನ್ನೇ ಇಡಿ ಯಾಗಿ ಸವೆಸಿದ ಆತ.  ಮಗನಲ್ಲೂ ಅವನಪ್ಪನ ಗುಣ ಇದೆ ಎಂದು ಅವರಿಗೆ ಖಾತ್ರಿಯಾಗಿದೆ. ಕೋಟ್ಯಾಂತರ ರೂಪಾಯಿ ತರುವ ಕೊಡುವ ಕೆಲಸದಲ್ಲಿ ಎಂದೂ ಅಪ್ರಾಮಾಣಿಕವಾಗಿ ನಡೆದುಕೊಂಡವನಲ್ಲ. ನಿಯತ್ತಿನ ಸೂಳೇ ಮಗ. ಹೇಳಿದ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡ್ತಾನೆ.  ಎಲ್ಲಿಯೂ ತುಟಿ ಪಿಟಕ್ ಅನ್ನಲ್ಲ. 
ಸಾರ್ ಮೇಡಂ ಬಂದ್ರು ಅಂದವ ಬಾಗಿಲು ತೆರೆಯಲು ನಡೆದ. 
ಆವಳು ಬಂದೇ ಬಿಟ್ಟಳು. ತಿಳಿ ನೀಲಿ ಬಣ್ಣದ ಸೀರೆ ಅದಕ್ಕೆ ಸರಿಯಾದ ರವಿಕೆ ತೊಟ್ಟ ಆಕೆ, ಇವತ್ತು ಎಂದಿಗಿಂತ ದೊಡ್ಡ ಹಣೆಯ ಬೊಟ್ಟಿ ಇಟ್ಟಿದ್ದಳು. ಯಾಕೋ ಅವಳ ಹಣೆಯ ಮೇಲಿನ ಬೊಟ್ಟು ಅಗತ್ಯಕ್ಕಿಂತ ದೊಡ್ಡದಾಯಿತು ಅಂತ ನಾಯಕರಿಗೆ ಅನ್ನಿಸತೊಡಗಿತು.  ಜೊತೆಗೆ ಕಮ್ಯುನಿಸ್ಟ ಮತ್ತು ಫೆಮಿನಿಸ್ಟ್ ಹೆಂಗಸರು ಈ ರೀತಿ ಹಣೆಗೆ ಬೊಟ್ಟು ಇಡುವುದನ್ನು ಅವರು ನೋಡಿದ್ದರು.  ಈಕೆ ಫೇಮಿನಿಸ್ಟ್ ಅಂತಾಗಲೀ ಕಮ್ಯುನಿಸ್ಟ್ ಅಂತಾಗಲೀ ನಂಬಲು ಅವರ ಮನಸ್ಸು ಒಪ್ತಾ ಇಲ್ಲ.  
ಹೆಣ್ಣು ಅಂದ್ರೆ ಪ್ರಕೃತಿ. ಆಕೆ ಹಾಗೆ ಇರಬೇಕು.  ಒಪ್ಪಿಸಿಕೊಳ್ಳುವ ಹೆಣ್ಣು ಪಡೆದುಕೊಳ್ಳುವ ಶಕ್ತಿಯನ್ನ  ಹೊಂದಿರ್ತಾಳೆ. ಪಡೆದುಕೊಳ್ಳುವುದಕ್ಕಗಿಯೇ ಬಂದವಳಿಗೆ ಏನೂ ಸಿಗೋದಿಲ್ಲ. ಆದ್ರೆ ಈ ದೊಡ್ಡ ಬೊಟ್ಟಿನ ಹೆಂಗಸರು ತಾವೇ ಗಂದಸರು ಅಂತಾ ವರ್ತಿಸ್ತಾರೆ.  ಅವರಲ್ಲಿ ಒಪ್ಪಿಸಿಕೊಳ್ಳುವ ಮನಸ್ಥಿತಿನೇ ಇರೋದಿಲ್ಲ.  ಒಂಥರಾ ಹೆಣ್ಣ ತನ ಇಲ್ಲದಿರೋ ಹೆಂಗಸರು. ಅವರಿಂದ ಯಾವ ಪ್ರಯೋಜನಾನೂ ಇಲ್ಲ ಎಂದುಕೊಂಡರು ನಯಕರು.
ಮೇಡಮ್ ಹತ್ತಿರಕ್ಕೆ ಬಂದು ಮುಖದ ಮೇಲೆ ಮುತ್ತು ಕೊಟ್ಟು ಯಾಕೋ ಪುಟ್ಟಾ ಸುಸ್ತಾದಂತೆ ಕಾಣ್ತಿದಿಯಾ ಎಂದಳು. ಹಾಗೆ ನಾಯಕರ ತೊಡೆಯ ಮೇಲೆ ಕುಳಿತು ಕಚಗುಳಿ ಇಡತೊಡಗಿದಳು. ನಾಯಕರಿಗೆ ಯಾಕೋ ಅವಳ ಹಣೆಯ ಮೇಲಿನ ದೊಡ್ಡ ಬೊಟ್ಟು ಭೂತಕಾರವಾಗಿ ಕಾಣತೊಡಗಿತು. ಅವರು ಆಕೆಯ ಹಣೆಯನ್ನು ಹಣೆಯ ಮೇಲಿನ ಬೊಟ್ಟನ್ನು ನಿಟ್ಟಿಸಿ ನೋಡತೊಡಗಿದರು. ಅದು ಊರಿನ ಮಂತ್ರವಾದಿಗಳ ಅಂಜನದ ಬೊಟ್ಟಿನಂತೆ, ಅದರೊಳಗೆ ಇಡೀ ಕರ್ನಾಟಕ, ಪ್ರತಿ ಪಕ್ಷದ ನಾಯಕರು ಅವರು ಮಾಡುತ್ತಿರುವ ಅರೋಪಗಳು,  ಸ್ವಪಕ್ಷದವರೇ ನಡೆಸುತ್ತಿರುವ ಪಿತೂರಿ ಷಡ್ಯಂತ್ರಗಳು ಕಾಣಿಸತೊಡಗಿದವು.  ಒಂದೊಂದೆ ಆಕೃತಿಗಳು ಸ್ಪಷ್ಟವಾಗುತ್ತ, ಅವಳ ಕುಂಕುಮದ ಹಣೆಯ ಬೊಟ್ಟಿನಿಂದ ಹೊರಕ್ಕೆ ಜಿಗಿದು ನರ್ತಿಸುತ್ತಿರುವಂತೆ ಕಂಡು ನಾಯಕರು ಸಂಪೂರ್ಣವಾಗಿ ಬೆವರಿ ಹೋದರು. ಹಾಗೆ ಆಕೆಯನ್ನು ತೊಡೆಯಿಂದ ಪಕ್ಕಕ್ಕೆ ತಳ್ಳಿ, ಅಲ್ಲಿಯೇ ಟೀಪಾಯ್ ಮೇಲಿದ್ದ ಮಗ್ಗಿನಿಂದ ನೀರನ್ನು ಗಟ ಗಟನೇ ಕುಡಿದರು. ಉಳಿದ ನೀರನ್ನು ತಲೆಯ ಮೇಲೆ ಚಲ್ಲಿಕೊಂಡು ತಾವೇ ತಲೆಯನ್ನು ತಟ್ಟಿಕೊಳ್ಳತೊಡಗಿದರು. 
ಎಲ್ಲ ಕಳ್ಳ ಸೂಳೇ ಮಕ್ಕಳು. ಷಡ್ಯಂತ್ರ ರೂಪುಸ್ತಾರೆ, ಏನ್ ಬೇಕದರೂ ಮಾಡಲಿ ನಾನು ಕೈ ಚೆಲ್ಲಿ ಕೂಡ್ರ ಮಗ ಅಲ್ಲ.. ಇವರಿಗೆ ಒಂದು ಗತಿ ಕಾಣಸ್ತೀನಿ ಎಂದವರೇ ಪಕ್ಕದಲ್ಲಿನ ಗೋಡೆಗೆ ಹೋಗಿ ತಲೆ ಚಚ್ಚಿಕೊಳ್ಳತೊಡಗಿದರು. ನಾಯಕರ ಈ ಅವತಾರವನ್ನು ಕಂದು ಬೆದರಿದ ಮೇಡಮ್ ಶ್ರೀನಿನಾಸ, ಶ್ರೀನಿವಾಸ ಓಡಿ ಬಾರೋ ಇವರು ತಲೆ ಒಡಕ್‍ಂಡ್ ಸತ್ತೇ ಹೋಗ್ತಾರೆ ಎಂದು ಕೂಗತೊಡಗಿದರು.
ಇದಕ್ಕೆ ಕಾದಿದ್ದವನಂತೆ ಅಪ್ತ ಸಹಾಯಕ ಶ್ರೀನಿವಾಸ ಹೆದರ್ ಬೇಡಿ ಮೇಡಮ್ ಎಂದು ಅವರಿಗೆ ಸಮಾಧಾನ ಹೇಳಿ ಬನ್ನಿ ಸಾರ್ ಎಂದು ನಾಯಕರನ್ನು ಕರೆದುಕೊಂಡು ಬಂದು ಮಂಚದ ಮೇಲೆ ಕೂಡ್ರಿಸಿದ. ಸಾರ್ ಸ್ವಲ್ಪ ಔಷಧ ತಗಳ್ಳಿ ಎಲ್ಲ ಸರಿ ಹೋಗುತ್ತೆ ಎಂದು ಒಂದು ಗ್ಲಾಸಿಗೆ ವಿಸ್ಕಿಯನ್ನು ಬಗ್ಗಿಸಿ ಅದಕ್ಕೆ ಅರ್ಧದಷ್ಟು ನೀರನ್ನು ಬೆರಸಿ ನೀಡಿದ.
ನಾಯಕರು ಶಿವ ಶಿವ ಕಾಪಾಡು ತಂದೆ ಎಂದು ವಿಸ್ಕಿಯನ್ನು  ಇಳಿಸತೊಡಗಿದರು.

ನಾಯಕರಿಗೆ ಆಇದು ರೌಂಡ್ ವಿಸ್ಕಿ ಇಳಿಸಿದರೂ ನಿದ್ರೆ ಹತ್ತಿರವೂ ಸುಳಿಯಲಿಲ್ಲ.  ಪಕ್ಕದಲ್ಲಿ ಇದ್ದವಳು ತನ್ನ ಮಂಗಾಟವನ್ನೂ ಮುಂದುವರಿಸಿದರೂ ಯಾಕೋ ಅವಳು ಬೇಕು ಎಂದು ಅನ್ನಿಸಲಿಲ್ಲ.  ಅವಳ ಹಣೆಯ ಮೇಲಿನ ಕುಂಕುಮ ಯಾಕೋ ತನ್ನನ್ನು ಹೆದರಿಸುತ್ತಿರುವಂತೆ,  ಆ ಕುಂಕುಮದಿಂದ ಹೊರಕ್ಕೆ ಬರುವ ಚಿತ್ರ ವಿಚಿತ್ರ ಚಿತ್ರಗಳು ತನ್ನನ್ನೇ ಬಲಿ ತೆಗೆದುಕೊಳ್ಳುವಂತೆ ಅವರಿಗೆ ಅನ್ನಿಸತೊಡಗಿತು. 
ಯಾಕೋ ಈ ರಾಜಕಾರಣ ಎನ್ನುವುದು ಒಂದು ಚಕ್ರವ್ಯೂಹವಾಗಿ ತನ್ನನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದು ಅನ್ನಿಸದೇ ಇರಲಿಲ್ಲ.  ತಾವು ರಾಜಕಾರಣಕ್ಕೆ ಬಂದ ದಿನಗಳು ನಾಯಕರ ಚಿತ್ತ ಬಿತ್ತಿಯಲ್ಲಿ ಮೂಡತೊಡಗಿತು. 
 ಮಲೆನಾಡ ಜಿಲ್ಲೆಯ ಆ ತಾಲೂಕು ಕೇಂದ್ರದಲ್ಲಿ ತಾವು ರೈತ ಚಳವಳಿಯನ್ನು ಕಟ್ಟಿದ್ದು ಆಗ ಅಲ್ಲಿನ ಜನ ತಮ್ಮನ್ನು ಪ್ರೀತಿಸಿದ ರೀತಿ, ಎಲ್ಲವೂ ನೆನಪಾಯಿತು. ಆಗ ಇದ್ದುದು ಆ ತಾಲೂಕಾ ಕೇಂದ್ರದ ಬಡಾವಣೆಯೊಂದರ ಸಣ್ಣ ಮನೆಯೊಂದರಲ್ಲಿ. ಆ ಮನೆಯಿಂದ ಒಬ್ಬ ಒಳಕ್ಕೆ ಬಂದರೆ ಇಬ್ಬರು ಹೊರಕ್ಕೆ ಹೋಗಬೇಕಾದ ಸ್ಥಿತಿ.  ಆಗಲೂ ಬೆಳಗಿನಿಂದಲೂ ಮನೆಯಲ್ಲಿ ಜನವೋ ಜನ. ಬಂದವರು ಮನೆಯ ಹೊರಗೆ ನಿಂತಿದ್ದರೂ ಸರಸ್ವತಿ ಅವರಿಗೆಲ್ಲ ಒಂದು ಕಫ್ ಕಾಫಿ ಕೊಡುವುದನ್ನು ಮರೆಯುತ್ತಿರಲಿಲ್ಲ.  ಅಂತಹ ಆದರಾತಿಥ್ಯ ಆಕೆಯದು. ಮನೆಗೆ ಬಂದವರ ಕಷ್ಟ ಸುಖ ವಿಚಾರಿಸಿ ಅವರಿಗೆ ತನ್ನ ಕೈಲಾದ ಸಹಾಯ ಮಾಡುವುದನ್ನು ಅವಳು ಮರೆಯುತ್ತಿರಲಿಲ್ಲ. ಆಕೆಯ ತವರು ಮನೆಯವರು ಸ್ವಲ್ಪ ಮಟ್ಟಿನ ಸ್ಥಿತಿವಂತರಾಗಿದ್ದರಿಂದ ಎಷ್ಟೋ ಸಲ ನನಗೆ ಗೊತ್ತಾಗದಂತೆ ಅಲ್ಲಿಂದಲೇ ಹಣ ತಂದು ಸಂಸಾರ ನಡೆಸ್ತಾ ಇದ್ದಳು. ಆದರೆ ಒಂದು ದಿನವೂ ಮನೆಯಲ್ಲಿ ಸಾಮಾನು ತರುವುದಕ್ಕೂ ಹಣ ಇಲ್ಲ ಎಂದು ಹೇಳಿದವಳಲ್ಲ. ಆಗಲೇ ನಡೆದಿದ್ದು ಪುರ ಸಭೆಯ ಚುನಾವಣೆ. ಆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಹಣ ತರುವುದಕ್ಕಾಗಿ ಗುತ್ತಿಗೆದಾರ ನಾಗಪ್ಪನ ಮನೆಗೆ ಹೋಗಿದ್ದು.. ಆತ ತಿರುಗಿ ಮಾತನಾಡದೇ 10 ಲಕ್ಷ ರೂಪಾಯಿಯನ್ನು ನೀಡಿಯೇ ಬಿಟ್ಟ. ಆ ಹಣದನ್ನು ಮನೆಗೆ ತಂದಾಗ ತನ್ನನ್ನು ಅಪರಿಚತನಂತೆ ಮೊದಲ ಬಾರಿಗೆ ನೋಡಿದಳಲ್ಲ ಸರಸ್ವತಿ. ಇದೆಲ್ಲ ಬೇಕಿತ್ತ ಅಂತ ಒಂದು ಸಲ ಕೇಳಿದವಳು ಮತ್ತೆ ಮಾತನಾಡಲಿಲ್ಲ. ಈ ಹಣದಲ್ಲಿ ಸ್ವಲ್ಪ ಹಣವನ್ನು ಬೇರೆ ತೆಗೆದಿಟ್ಟಿ ಮನೆಯ ಕರ್ಚಿಗೆ ಬಳಸು ಎಂದಾಗ  ಮುಖಕ್ಕೆ ಹೊಡದಂತೆ ಮಾತನಾಡಿ ಬಿಟ್ಟಳಲ್ಲ/
ಈ ಅನ್ಯಾಯದ ಹಣವನ್ನು ನಾನು ಮನೆಯ ಕರ್ಚಿಗೆ ಬಳಸೋದಿಲ್ಲ/ ಹಾಗೇನಾದರೂ ಮಾಡಿದರೆ ಮಕ್ಕಳು ನರಕಕ್ಕೆ ಹೋಗ್ತವೆ. ಆನ್ಮ ಜನ್ಮಾಂತರದಲ್ಲೂ  ಈ ಪಾಪ ಹೋಗೋದಿಲ್ಲ. ಎಂದು ಖಡಕ್ ಆಗಿ ಹೇಳಿದವಳು ಕೊಟ್ಟ ಹಣ ತೆಗೆದುಕೊಳ್ಳಲಿಲ್ಲ. ಆವತ್ತೆ ಅನ್ನಿಸುತ್ತೆ. ಮೊದಲ ಬಾರಿ ಅವಳ ಮೇಲೆ ಕೈ ಮಾಡಿದ್ದು. ಕೆನ್ನೆಯ ಮೇಲೆ ಐದು ಬೆರಳು ಮೂಡಿದರೂ ಆಕೆ ತುಟಿ ಪಿಟಕ್ ಅನ್ನಲಿಲ್ಲ. 
ಯಾಕೋ ಇವತ್ತು ಈ ಸರಿ ರಾತ್ರಿಯಲ್ಲಿ ಅವಳು ನೆನಪಗ್ತಾಳೆ. ಅವಳು ಹೇಳಿದ ಮಾತನ್ನು ಕೇಳಿದರೆ ಇವತ್ತು ಈ ಸ್ಥಿತಿಗೆ ಸಿಕ್ತಾ ಇರಲಿಲ್ಲ. ಆದರೆ ಬದುಕಿನಲ್ಲಿನ ಮಹತ್ವಾಕಾಂಕ್ಷೆ ಹೀಗೆಲ್ಲ ಮಾಡಿಸುತ್ತೆ. ರಾಜಕಾರಣದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಬೇಕು ಎಂದುಕೊಂಡವನಿಗೆ ಇದೆಲ್ಲ ಅಂತಹ ಮುಖ್ಯ ಅಂತ ಅನ್ನಿಸಲೇ ಇಲ್ಲ.  ಹ್
ಆಗಲೇ ಬೆಳಗು ಆಗ್ತಾ ಇತ್ತು. ನಾಯಕರು ತನ್ನ ಪಕ್ಕ ಮಲಗಿದವಳನ್ನು ನೋಡಿದರು. ಯಾಕೋ ಅವಳು ಅಸಹ್ಯ ಅನ್ನಿಸತೊಡಗಿತು. ಇವಳ ಜೊತೆಗೆ ನಾನು ಸಂಬಂಧ ಇಟ್ಟುಕೊಂಡಿದ್ದು ಅನ್ನಿಸಿ ಬೇಸರವಾಯಿತು. ಇವಳ ಸಲುವಾಗಿ ನಾನು ಎಷ್ಟೆಲ್ಲ ಮಾಡಿದೆ. ರಾಜಕೀಯವಾಗಿ ಸ್ಥಾನ ಮಾನ ನೀಡಿದ್ದಾಯಿತು.  ಅಧಿಕಾರ ಅಂತಸ್ತು ಎಲ್ಲವೂ ಬಂತು. ಆದರೂ ಈಕೆಯ ವರ್ತನೆಯಲ್ಲಿ ಬದಲಾವಣೆ ಆಗಲಿಲ್ಲ. ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಅಲ್ಲಿಂದ ರಾಜಧಾನಿಗೆ ಬಂದರೂ ಒಂಚೂರು ಬದಲಾವಣೆ ಇಲ್ಲ.  ಯಾವಾಗ ಬೇಕಾದರೂ ಸೀರೆ ಸೆರಗು ಸರಿಸಲು ರೆಡಿ ಎಂಬಂತೆ ವರ್ತಿಸ್ತಾಳೆ. ಇದೆಲ್ಲ ಹೋಗಲಿ ಎಂದು ಕೊಂಡರೆ ಸಂಪುಟ ಸಹೋದ್ಯೋಗಿಗಳ ಜೊತೆ ಅಧಿಕಾರಿಗಳ ಜೊತೆ ನನ್ನ ಮತ್ತು ಅಕೆಯ ಸಂಬಂಧವನ್ನು ಸೂಕ್ಷ್ನವಾಗಿ ಹೇಳ್ತಾ ಅಧಿಕಾರ ಚಲಯಿಸ್ತಾಳೆ. ಅವಳು ಒಂಚೂರು ಮುಜುಗರ್ ಆಗೋದಿಲ್ಲ. 
ಹಡಬೆ ಮುಂಡೆ ಎಂದು ಬೈದುಕೊಂಡ ನಾಯಕರು, ಎನೋ ತೀರ್ಮಾನಿಸಿದಂತೆ ಹಾಸಿಗೆಯಿಂದ ಎದ್ದು ಬಾಥ್ ರೂಮಿನತ್ತ ನಡೆದರು. ಮಲ ವಿಸರ್ಜನೆ ಸರಾಗವಾಗಿ ಆಗಲಿಲ್ಲ. ಊ ಊ ಅಂತ ಉಸಿರಿದರೆ, ಮಲ ಹೊರಕ್ಕೆ ಬರುವುದಕ್ಕೆ ಬದಲಾಗಿ ಬಾಂಬ್ ಸಿಡಿಸಿದಂತ ಶಬ್ದ ಹೊರಕ್ಕೆ ಬರುತ್ತದೆ. ನಿಮಗೆ ಮಲ ಬದ್ಧತೆ ಇದೆ ಹೆಚ್ಚು ಕುಡಿದರೆ ಮಲ ಸಾಫ ಆಗೋದಿಲ್ಲ ಅಂತ ಡಾಕ್ಟರು ಹಲವು ಬಾರಿ ಹೇಳಿ ಆಗಿದೆ. ಆದರೆ ಸೂಳೆ ಮಗಂದು  ರಾತ್ರಿ ಆದರೆ ನಾಲ್ಕು ಪೆಗ್ ಇಳಿಸದ ಹೊರರು ನಿದ್ರೆ ಬರೋದಿಲ್ಲ.  ಜಗತ್ತಿನಲ್ಲಿ ಈಗ ಯಾವ ರೀತಿಯ ಬದ್ಧತೆ ಇಲ್ಲದಿದ್ದರೂ ಈ ಮಲ ಬದ್ಧತೆ ಮಾತ್ರ ಇದೆ ಅನ್ನಿಸಿ ನಾಯಕರಿಗೆ ಈ ಸ್ಥಿತಿಯಲ್ಲೂ ಸಣ್ಣಗೆ ನಗು ಬಂತು.
ಎಷ್ಟೇ ಪ್ರಯತ್ನ ಪಟ್ಟರೂ ನಾಯಕರಿಗೆ ಮಲ ಸಾಫ್ ಆಗಲಿಲ್ಲ. ಸರಿ ಅಂತಾ ಹಾಗೆಯೇ ಎದ್ದು ಬಂದು ಬಟ್ಟೆ ಧರಿಸಿ ಹೊರದೋದಕ್ಕೆ ಸಿದ್ಧವಗ ತೊಡಗಿದರು.  ಇನ್ನೂ ಹಾಸಿಗೆಯಲ್ಲಿ ಹೊದ್ದು ಮಲಗಿದವಳನ್ನು ಎಬ್ಬಿಸಲು ಮನಸ್ಸಾಗಲಿಲ್ಲ. ಆಕೆಯನ್ನು ಎಬ್ಬಿಸಲು ಮುಂದಾದರೆ ಮತ್ತೆ ಜೊತೆಗೆ ಬರುವ ಹಠ ಹಿಡಿಯಬಹುದು ಅನ್ನಿಸಿ ಆಕೆಯನ್ನು ಎಬ್ಬಿಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದ ನಾಯಕರು ಅಲ್ಲಿಂದ ಹೊರಟೇ ಬಿಟ್ಟರು.
ಆಗ ಬೆಳಿಗಿನ ಜಾವ ಐದು ಗಂಟೆ ದಾಟಿ ಹೋಗಿತು.  ರಾಜಧಾನಿ ಮೈ  ಕೊಡವಿ ಎದ್ದು ಕುಳಿತು ಎಷ್ಟೋ ಹೊತ್ತಾಗಿತ್ತು. ನಾಯಕರು  ಚುಮು ಚುಮುಗುಡುವ ಬೆಳಗಿನಲ್ಲಿ  ರೇಸಾರ್ಟ್ ನಿಂದ ತಮ್ಮ ಅಧಿಕೃತ ನಿವಾಸದತ್ತ ಹೊರಟಿದ್ದರು. ರಾಜಧಾನಿಯ ರಸ್ತೆಗಳು ಆಗಲೇ ವಾಹನ ಸಂಚಾರದಿಂದ ಮೈದುಂಬಿಕೊಳ್ಳತೊಡಗಿತ್ತು. 
ತಾವು ಅಧಿಕಾರಕ್ಕೆ ಬಂದ ಮೇಲೆ ಈ ರಸ್ತೆ ಸಂಚಾರವನ್ನು ಸುಗಮಗೊಳಿಸುವುದಕ್ಕಾಗಿ ಕೈಗೊಂಡ ಯೋಜನೆಗಳು ಅವರಿಗೆ ನೆನಪಾಯಿತು. ಕನಿಷ್ಠ 18 ಮೇಲ್ಸೇತುವೆಗಳ ನಿರ್ಮಾಣ ಮಾಡಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿದ್ದು.. ಒಂದೇ ಎರಡೇ.. ಆದರೆ ನನ್ನ ಈ ಆಭಿವೃದ್ಧಿ ಯೋಜನೆಗಳಿಗೆ ಸಿಗಬೇಕಾದ ಪ್ರಚಾರ ಸಿಗಲಿಲ್ಲ.  ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸುದ್ದಿ ಮಾಧ್ಯಮಗಳು ನೀಡಿದ ಪ್ರಚಾರವನ್ನು ಕೆಲಸಕ್ಕೆ ನೀಡಲೇ ಇಲ್ಲ.  ಗ್ಲೋಬಲ್ ಟೆಂಡರ್ ಕರೆದು ಕಾಮಗಾರಿಯನ್ನು ನೀಡಬೇಕಾಗಿತ್ತು ಎಂದು ಪ್ರತಿ ಪಕ್ಷಗಳು ಬೊಬ್ಬೇ ಹೊಡೆದವಲ್ಲ… ಕೆಲವು ನಿರುದ್ಯೋಗಿಗಳು ಉಪವಾಸ ಸತ್ಯಾಗ್ರಹ ನಡೆಸಿ, ಎಲ್ಲ ಭ್ರಷ್ಟಾಚಾರದ ಪ್ರಕರಣಗಳನ್ನು ಸಿ ಬಿ ಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದವು.. ಆದರೆ ಈ ದೇಶದಲ್ಲಿ ಭ್ರಷ್ಟನಲ್ಲದವರು ಯಾರು ? ನಾನೊಬ್ಬನೇ ಇದನ್ನೆಲ್ಲ ಮಾಡಿದ್ದಾ ? ಬೇರೆಯವರು ಮಾಡಿಯೇ ಇಲ್ಲವಾ ಎಂಬ ಪ್ರಶ್ನೆ ಮನಸ್ಸಿನಲ್ಲಿ ಬಂದು ನಾವೆಲ್ಲ ಒಂದೇ ಅನ್ನಿಸಿ ಸಮಾಧಾನ ಪಟ್ಟುಕೊಂಡರು.
ನಾಯಕರು ಅಧಿಕೃತ ನಿವಾಸವನ್ನು ತಲುಪವಷ್ಟರಲ್ಲಿ ಬೆಳಿಗ್ಗೆ ಆರು ಗಂಟೆ. ಮನೆಯ ಎದುರಿಗಿರುವ ಸೆಕ್ಯುರಿಟಿ ಗಾರ್ಡ್ ಗಳು ಪೆÇಲೀಸರು ಬದಲಗಿದ್ದರು. ನೈಟ್ ದ್ಯೂಟಿ ಮುಗಿಸಿದವರು ತಮ್ಮ ಸಮವಸ್ತ್ರಗಳನ್ನು ಕಳಚಿ ಮನೆಗೆ ಹೋಗಲು ಸಿದ್ಧರಾಗುತ್ತಿದ್ದರು. ಇವರನ್ನು ನೋಡಿದಾಗ ತಮ್ಮ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಅವರಿಗೆ ಅನ್ನಿಸಿತು.  ಯಾವ ಸಂದರ್ಭದಲ್ಲಿ ಯಾರು ಎಲ್ಲಿ ನುಸುಳಿ ಏನು ಮಾಡುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಅನ್ನಿಸಿ ಒಂದು ಕ್ಷಣ ಭಯ ಅವರನ್ನು ಆವರಿಸಿತು. 
ಮನೆಯ ಖಾಸಗಿ ಸಿಬ್ಬಂದಿಗಳು ಹೊಸ ದಿನವನ್ನು ಸ್ವಾಗತಿಸಲು ಸಿದ್ಧರಾಗುತ್ತಿದ್ದರು.  ಅವರ ಮುಖಗಳಲ್ಲಿ ಯಾವ ಭಾವನೆ ಇದೆ ಎಂದು ಗುರುತಿಸಲು ಯತ್ನಿಸಿದ ನಾಯಕರು ಒಬ್ಬೊಬ್ಬರ ಮುಖಗಳನ್ನು ದಿಟ್ಟಿಸಿ ನೋಡಿ. ಆ ಮುಖಗಳಲ್ಲಿ ಅನಿಶ್ಚಿತತೆಯಾಗಲಿ ಭಯವಾಗಲಿ ಕಾಣುತ್ತದೆಯೆ ಎಂದು ಓದಿ ನೋಡಲು ಮುಂದಾದರು. ಆದರೆ ಅವರಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ. ಬದುಕಿನ ಮತ್ತೊಂದು ದಿನವನ್ನು ಅವರು ಸ್ವಾಗತಿಸುತ್ತಿದ್ದಾರ್ ಎಂದು ಅನ್ನಿಸಿತು.
ಅಷ್ಟರಲ್ಲಿ ಬೆಳಗಿನ ಜನತಾ ದರ್ಶನಕ್ಕೆ ಬರುವವರು ಬರತೊಡಗಿದ್ದರು.  ಬದುಕಿನ ಎಲ್ಲ ದುಃಖ ದುಮ್ಮಾನಗಳನ್ನು ಹೊತ್ತು ತಂದವರು. ಕೈಯಲ್ಲಿ ಒಂದು ಅರ್ಜಿ. ಇಲ್ಲಿ ಬಂದರೆ ಏನಾದರೂ ಆಗುತ್ತದೆ ಎಂಬ ನಂಬಿಕೆ. ಅವರಲ್ಲಿ ವಿಕಲಾಂಗರಿದ್ದರು. ವಿಧವೆಯರಿದ್ದರು ದಿನಗೂಲಿ ಕಾರ್ಮಿಕರಿದರು. ಆಟೋ ಚಾಲಕರಿದ್ದರು ಹೊಟೆಲ್ ಕಾರ್ಮಿಕರಿದ್ದರು.  ಆದರೆ ಅವರನ್ನು ನೋಡುವ ಮನಸ್ಥಿತಿಯಲ್ಲಿ ನಾಯಕರಿರಲಿಲ್ಲ.
ಆಪ್ತ  ಸಹಾಯಕ ಶ್ರೀನಿವಾಸ್ ಸಿದ್ಧನಾಗಿ ಬಂದಿದ್ದ. ಕೈಯಲ್ಲಿ ನೋಟು ಬುಕ್ ಹಿಡಿದುಕೊಂಡು ಏನು ಹೆಳಿದರೂ ಅದನ್ನು ಬರೆದುಕೊಳ್ಳಲು ಸಿದ್ಧವಾಗಿರುವ ಚಿತ್ರಗುಪ್ತ. ಈತ ಪ್ರತಿ ದಿನ ಹಲವರ ಸಾವನ್ನು, ಇನ್ನು ಕೆಲವರ ಬದುಕನ್ನು ಅವರ ಭವಿಷ್ಯವನ್ನು ಬರೆದು ಬಿಡುತ್ತಾನೆ. ತಮ್ಮ ಮನಸ್ಸಿನಲ್ಲಿ ಇರುವುದು ಮಾತಿನ ರೂಪ ಪಡೆಯುತ್ತಿದ್ದಂತೆ ಅದನ್ನು ವಾಸ್ತವಕ್ಕೆ ಇಳಿಸಿ ಬಿಡುತ್ತಾನೆ. 
ಶ್ರೀನಿವಾಸ, ಇವತ್ತಿನ ಜನತ ದರ್ಶನ ಕ್ಯಾನ್ಸಲ್ ಮಾಡು. ಮತ್ತೆ ಪಕ್ಷದ ಅಧ್ಯಕ್ಷರು ಮಂತ್ರಿಗಳು ಬಂದರೆ ಅವರ ಜೊತೆ ಮೀಟೀಂಗ್ ಫಿಕ್ಸ್ ಮಾಡು ಎಂದರು ನಾಯಕರು.
ಸಾರ್, ಈಗ ಜನತಾ ದರ್ಶನ ಕ್ಯಾನ್ಸಲ್ ಮಾಡೋದು ಸರಿಯಲ್ಲ್ ಎಂದು ಹೇಳಬೇಕು ಎಂದುಕೊಂಡರೂ ಬೇಡ ಎಂದು ಶ್ರೀನಿವಾಸ ಸುಮ್ಮನಾದ. ಸರಿ ಸಾರ್ ಎಂದು ಹೇಳಿದವ ಹೊರಕ್ಕೆ ಹೆಜ್ಜೆ ಹಾಕಿದ. ನಾಯಕರು ಪಕ್ಷದ ಅಧ್ಯಕ್ಷರು ಮತ್ತು ಸಚಿವರು ಬಂದಾಗ ಅವರ ಬಳಿ ಏನು ಹೇಳಬೇಕು ಎಂದು ಯೋಚಿಸತೊಡಗಿದರು. ಈ ಪಕ್ಷದ ಅಧ್ಯಕ್ಷ ನಾರಾಯಣಪ್ಪ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾನೆ. ಅವನಿಗೆ ನಾನು ಈ ಸ್ಥಾನದಿಂದ ನಿರ್ಗಮಿಸುವುದು ಬೇಕು. ಆದರೆ ಎದುರುಗಡೆ ಮಾತ್ರ, ನೀವೆ ನಮ್ಮ ನಾಯಕರು, ನೀವು ಬೇರೆ ಅಲ್ಲ, ಪಕ್ಷ ಬೇರೆ ಅಲ್ಲ ಎಂದು ಪೂಸಿ ಹೊಡೆಯುತ್ತಾನೆ. ಹೊರಗೆ ಹೋದ ತಕ್ಷಣ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕಲು ಪಕ್ಷ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿಕೆ ನೀಡುತ್ತಾನೆ. ಚಾಂಡಾಲ ನನ್ ಮಗ. ಅವನನ್ನು ಪಕ್ಷದ ಅಧ್ಯಕ್ಶನನ್ನಾಗಿ ಮಾಡುವಾಗ ವಿರೋಧ ವ್ಯಕ್ತ ಪಡಿಸಬೇಕಾಗಿತ್ತು.  ನನ್ನ ಕಟ್ಟಾ ಬೆಂಬಲಿಗರಲ್ಲಿ ಒಬ್ಬರು ಅಧ್ಯಕ್ಷರಾಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಅಂದು ಅನ್ನಿಸಿತು. 
ಸಾರ್ ಪಕ್ಷದ ಅಧ್ಯಕ್ಷರು ಬಂದಿದ್ದಾರೆ, À  ಎಂದು ಹೇಳಿದ ಶ್ರೀನಿವಾಸ ಹೇಳಿದ.
ಅವರನ್ನು ಒಳಗೆ ಕಳುಹಿಸು ಎಂದು ಹೇಳಿದ ನಾಯಕರು ಅವರ ಜೊತೆ ಹೇಗೆ ಮಾತನಾಡಬೇಕು ಎಂದು ಯೋಚಿಸತೊಡಗಿದರು. ಈ ಅಧ್ಯಕ್ಷ ರಾಜಕೀಯವಾಗಿ ಬೆಳೆದಿದ್ದು ನನ್ನ ಸಹಾಯದಿಂದ. ಈಗ ದೊಡ್ಡ ನಾಯಕನಂತೆ ಫೆÇೀಸು ನೀಡ್ತಾನೆ. ಕಳ್ಳ ನನ್ನ ಮಗ ಎಂದುಕೊಂಡ ನಾಯಕರು ಇವತ್ತು ಯಾವ ಕಾರಣಕ್ಕೂ ಯಾರ ಮೇಲೂ ಸಿಟ್ಟು ಮಾಡಿಕೊಳ್ಳಬಾರದು ಎಂಬ ಗಟ್ಟಿ ತೀರ್ಮಾನಕ್ಕೆ ಬಂದರು.
ನಮಸ್ಕಾರ ಸಾರ್ ಎನ್ನುತ್ತಲೇ ಒಳಕ್ಕೆ ಬಂದ ಅಧ್ಯಕ್ಷರು ಅಕ್ಕ ಪಕ್ಕ ನೋಡಿ ಯಾರೂ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ನಾಯಕರ ಕಾಲು ಮುಟ್ಟಿ ನಮಸ್ಕರಿಸಿದರು.
ನೀವು ನನ್ನ ಗುರುಗಳು. ನಮ್ಮ ಪಕ್ಷದ ನಾಯಕರು. ನಮ್ಮೆಲ್ಲರ ನಾಯಕರು. ನಿಮ್ಮ ಆಶೀರ್ವಾದ ನಮಗೆ ಸದಾ ಬೇಕು ಎಂದು ಪೂರ್ವ ಪೀಥಿಕೆ ಹಾಕಿದರು.
ಈ ಮಾತನ್ನು ಕೇಳಿದ ನಾಯಕರಿಗೆ ಒಳಗೊಳಗೆ ಸಿಟ್ಟು ಬಂತು. ಈ ಮಗನಿಗೆ ಝಾಡಿಸಿ ಒದೆಯಬೇಕು ಎಂದು ಒಮ್ಮೆ ಅನ್ನಿಸಿದರೂ ತಾವು ತಮ್ಮ ತಾಳ್ಮೆ ಕಳೆದುಕೊಳ್ಳಬಾರದು ಎಂದುಕೊಂಡರು. ಆದರೆ ಯಾರಾದರೂ ಕಾಲಿಗೆ ಬಿದ್ದರೆ ಮನಸ್ಸು ಕರಗಿ ನೀರಾಗಿ ಬಿಡುತ್ತದೆ ಸಿಟ್ಟಿ ಕಳ್ಳ ಬೆಕ್ಕಿನಂತೆ ಮಾಯವಾಗಿ ಬಿಡುತ್ತದೆ. ನನ್ ದೌರ್ಬಲ್ಯ ಈತನಿಗೆ ಗೊತ್ತು. ಹೀಗಾಗಿ ಬಂದ ತಕ್ಷಣ ಕಾಲಿಗೆ ಬಿದ್ದು ಬಿಡುತ್ತಾನೆ. ಅದೂ ಖಾಸಗಿಯಾಗಿ ಒಬ್ಬನೆ ಇರುವಾಗ ಕಾಲಿಗೆ ಬೀಳುವ ಈ ಅಧ್ಯಕ್ಷ ಎಲ್ಲರೂ ಇರುವಾಗ ಗತ್ತಿನಿಂದ ಮಾತಾಡ್ತಾನೆ. ಈ ಬಾರಿ ಹೇಗಾದರೂ ಮಾಡಿ ಇವನಿಗೆ ಚಳ್ಳೆ ಹಣ್ಣು ತಿನ್ನಿಸಲೇಬೇಕು ಎಂದು ನಾಯಕರು ತಮ್ಮೊಳಗೆ ಹೇಳಿಕೊಂಡರು.
ತಮ್ಮ ದಧೂತಿ ದೇಹವನ್ನು ಸೋಫಾದ ಮೇಲೆ ನವಿರಾಗಿ ಪ್ರತಿಷ್ಠಾಪನೆ ಮಾಡಿ ದೀರ್ಘವಾಗು ಉಸೆರೆಳೆದುಕೊಂಡ ಅಧ್ಯಕ್ಷರು ಮಾತನಾಡಲು ಪ್ರಾರಂಭಿಸಿದರು.
ಸಾರ್ ಪಕ್ಷ ಮತ್ತು ಸರ್ಕಾರದ ಇಮೇಜ್ ಹೆಚ್ಚಿಸಬೇಕು . ಎಲ್ಲಾ ಕಡೆ ಪಕ್ಷದ ಕಾರ್ಯಕರ್ತರಂತೂ ಮೈ ಮೇಲೆ ಬರ್ತಾರೆ. ನಮ್ಮ ಸಕ್ರಾರ ಅಧಿಕಾರಕ್ಕೆ ಬಂದ ಮೇಲೆ ಏನೋ ಆಗುತ್ತೆ ಅಂದುಕೊಂಡ ಕಾರ್ಯಕರ್ತರಿಗೆ ಈಗ ಭ್ರಮ ನಿರಸನ ಅಗ್ತಾ ಇದೆ. ನಾವು ಅವರನ್ನೆಲ್ಲ ಸಮಾಧಾನ ಪಡಿಸ್ತಾನೇ ಇದೀನಿ. ಆದರೆ ಮಾತು ಕೇಳೋಲ್ಲ ಸಾರ್. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಪಕ್ಶ್‍ಃಅದಲ್ಲಿ ಬೆಲೆ ಇಲ್ಲದಂತಾಗಿದೆ ಅಂತ ದೂರ್ತಾರೆ ಸಾರ್ ಎಂದರು ಅಧ್ಯಕ್ಷರು. ಹಾಗೆ ತಮ್ಮ ದೊಡ್ಡದಾದ ಮೂಗಿನ ಒಂದು ಹೊಳ್ಳೆಯೊಳಗೆ ಕೈ ಬೆರಳು ಹಾಕಿ ಅದನ್ನು ಗರ ಗರನೇ ತಿರುಗಿಸಿದರು. 
ಒಮ್ಮೆ ಆಕ್ಷಿ ಎಂದು ಸೀನಿ ಸಾರ್ ಈಗ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಅಂತ ನಮಗೆ ಮಾರ್ಗದರ್ಶನ ಮಾಡಬೇಕು. ಪಕ್ಷವನ್ನ ಸರ್ಕಾರವನ್ನು ಉಳಿಸುವ ಹೊಣೆ ನಿಮ್ಮದು ಎಂದರು. ಈ ಮಾತಿಗೆ ನಾಯಕರ ಏನು ಪ್ರತಿಕ್ರಿಯೆ ನೀಡಬಹುದು ಎಂದು ಕಾಯತೊಡಗಿದರು.
ನಾಯಕರಿಗೆ ಇವರ ಮಾತಿನ ಹಿಂದಿನ ಮರ್ಮ ಅರ್ಥವಾಗದೇ ಇರಲಿಲ್ಲ.  ತನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತೆ ಈತ ಸೂಚಿಸುತ್ತಿದ್ದಾನೆ. ನಿನ್ನೆ ತಾನೆ ಹೈಕಮಾಂಡ್ ಜೊತೆ ಮಾತನಾಡಿ ಬಂದಿರುವ ಈತ ಅವರ ಸೂಚನೆಯನ್ನು ಪಡೆದು ಬಂದಿರಬಹುದು ಎಂದು ಅವರಿಗೆ ಅನ್ನಿಸಿತು.
ನೋಡು ಆಧ್ಯಕ್ಷರೆ, ಪಕ್ಷದ ಇಮೇಜ್ ಇಮೇಜ್ ಅಂತಾ ಮಾತಾದ್ತೀರಲ್ಲ, ಇಮೇಜ್ ಗೆ ಏನಾಗಿದೆ ? ಪ್ರತಿ ಪಕ್ಷದವರಿಗೆ ಬೇರೆ ಕೆಲಸ ಇಲ್ಲ . ಅವರು ನಮ್ಮ ಸರ್ಕಾರದ ಮಾನವನ್ನು ತೆಗೆಯಲು ತುದಿಗಾಲ ಮೇಲೆ ನಿಂತಿರ್ತಾರೆ. ಅವರು ಈ ಸರ್ಕಾರ ಸರಿ ಅಲ್ಲ ಅಂತಾ ಅಪಪ್ರಚಾರ ಮಾಡ್ತಾರೆ. ಆದ್ರೆ ನೀವು ? ನಮ್ಮ ಪಕ್ಷದ ಅಧ್ಯಕ್ಷರು. ನೀವೇ ಹೀಗೆ ಮಾತನಾಡಿದರೆ ಹ್ಯಾಗೆ..? ಎಂದರು ನಾಯಕರು. 
ಹಾಗಲ್ಲ, ಸಾರ್, ದಯವಿಟ್ಟು ತಪ್ಪು ತಿಳಿಯಬೇಡಿ. ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. ನಿಮ್ಮ ಮಕ್ಕಳ ಮೇಲೆ ಬಂದಿದೆ. ನಿಮ್ಮ ಆಪ್ತ ಸಚಿವರ ಮೇಲೆ ಬಂದಿದೆ.  ತನಿಖಾ ಸಂಸ್ಥೆಗಳು ತನಿಖೆ ನಡೆಸ್ತೀವೆ. ಹೀಗಿರುವಾಗ ನಾನು ನೀವು ಸುಮ್ಮನೆ ಇರೋದಕ್ಕೆ ಸಾಧ್ಯನಾ ? ಯೋಚನೆ ಮಾಡಿ. ಸರ್ಕಾರದ ಇಮೇಜ್ ಹೆಚ್ಚಿಸೋದಕ್ಕೆ ಏನಾದರೂ ಮಾಡಲೇಬೇಕು ಅಲ್ಪರಾ ? ಹಾಗೆ ಪಕ್ಷದ ವರಿಷ್ಠರೂ ಸಹ ಇದೇ ಅಭಿಪ್ರಾಯ ಹೊಂದಿದ್ದಾರೆ.  ನನಗೆ ನಿಮ್ಮ ಜೊತೆ ಮಾತನಾಡುವಂತೆ ಹೇಳಿದ್ದಾರೆ ಎಂದು ಹೇಳಿದ ಅಧ್ಯಕ್ಶರು ನಾಯಕರ ಮುಖವನ್ನೇ ನೋಡತೊಡಗಿದರು.

ಯಾರ್ರಿ, ಹೈಕಮಾಂಡ್. ಈ ರಾಜ್ಯದಲ್ಲಿ ಪಕ್ಷ ಕಟ್ಟಿದವನು ನಾನು. ಎಲ್ಲಿತ್ತರಿ ನಿಮ್ಮ ಪಕ್ಷ ? ಹಳ್ಳಿ ಹಳ್ಳಿ ತಿರುಗಿ ಈ ಪಕ್ಷ ಕಟ್ಟಿದವನು ನಾನು. ಪಕ್ಷವನ್ನು ಬೆಳೆಸಿದವನು ನಾನು. ಅಧಿಕಾರಕ್ಕೆ ತಂದವನು ನಾನು. ಆಗ ಹೈಕಮಾಂಡ್ ಎಲ್ಲಿತ್ತು ? ಪಕ್ಷದ ಇಮೇಜು ಅಂತಾ ಮಾತನಾಡ್ತಾ ನನ್ನನ್ನ ಇಳಿಸೋದಕ್ಕೆ ನೋಡ್ತಿದಿರಾ ? ನಾನು ಅಧಿಕಾರ ಬಿಟ್ಟು ಕೊಡಲ್ಲ ಎನ್ ಮಾಡ್ತೀರಿ ? ನನಗೆ ಶಾಸಕರ ಬೆಂಬಲ ಇದೆ. ನೀವು ನನ್ನ ನಾಯಕತ್ವದ ಬದಲಾವಣೆಗೆ ಮುಂದಾದರೆ ಪಕ್ಷವನ್ನೇ ಹೈಜಾಕ್ ಮಾಡ್ತೀನಿ ಎಂದು ಹೇಳಿದ ನಾಯಕರು ಉಗ್ರ ರೂಪ ತಾಳಿದರು..

(ಮುಂದುವರಿಯುವುದು )

ಇದು ಅಷ್ಟು ಸುಲಭವಲ್ಲ, 
ಪ್ರೀತಿ ಪಡೆಯುವುದಕ್ಕಿಂತ ಕೊಡುವುದರ ಕಷ್ಟ.
ಪಡದೇ ಕೊಡುವುದು ನಮಗೆಲ್ಲ ಇಷ್ಟ, ಹಾಗ ಕೊಡುವುದು ಹೇಗೆ ?
ಆದರೂ ಕೊಡಲೇ ಬೇಕು ಕೊಡುತ್ತಲೇ ಇರಬೇಕು.
ಕೊಡಲು ಸಾಧ್ಯವಾಗದಿದ್ದರೆ ಕೆಳಗೆ ಪ್ರಪಾತ, ಆತ್ಮಘಾತ..
ಅಪ್ಪನಾಗುವುದು ಆಷ್ಟು ಸುಲಭವಲ್ಲ.
ನಿಂತ ನದಿಯಾಗುವವನು ಅಪ್ಪ. ಹರಿಯುತ್ತಲೆ ಇರುವುದು ಅವನ ಕುಡಿ.
ನಿಂತವರಿಗೆ ಹರಿಯುವಿಕೆ ಅರ್ಥವಾಗುವುದಿಲ್ಲ, 
ಹರಿಯುವವರಿಗೆ ನಿಲ್ಲುವುದು ಆಗದ ಕೆಲಸ 
ನಿಂತು ನೋಡಲೇಬೇಕು ಹರಿಯುವ ರಭಸವನ್ನು
ಕಲ್ಲು ಬಂಡೆಗಳಿಗೆ ಅಪ್ಪಳಿಸುವ ಭಯವನ್ನು, ಹರಿಯುವವರಿಗೆ
ಎಲ್ಲಿದೆ ವ್ಯವಧಾನ ? ಕೇಳುವ ತಾಳ್ಮೆ..
ನಿಂತವರಿಗೆ ಹರಿಯುವ ರಬಸದ ಸುಖ ತಿಳಿಯದ ಬಾಳ್ವೆ,,
ಅಪ್ಪನಾಗುವುದು ಸುಲಭವಲ್ಲ.
ಒಮ್ಮೆ ನಿಂತು ನೋಡು, ಅಕ್ಕಪಕ್ಕದ ಕಾಡು,
ದಂಡೆ, ಅದರ ಮೇಲೆ ಏನಿದೆ ಏನಿಲ್ಲ ?
ಹರಿಯುವ ರಬಸದ ನಡುವೆ ನಿಂತು ನೋಡುವ ತಾಳ್ಮೆ ಧ್ಯಾನ
ಹರಿಯುವುದನ್ನು ನಿಲ್ಲಿಸಬೇಡ, ಆದರೆ ನಿಂತು ನೋಡುವುದನ್ನು ಮರೆಯಬೇಡ
ಆದರೆ ಮಾತು ಕೇಳಲಾರದು ಹರಿಯುವ ಉತ್ಕಟತೆಯಲ್ಲಿ, ತೀವ್ರತೆಯ ಸುಖದಲ್ಲಿ
ಆದರೂ ಅಪ್ಪನಾಗುವುದು ಸುಲಭವಲ್ಲ.

ಅಪ್ಪ ಓದಿ ಮುಗಿಸಿದ ಹಾಳೆ, ಇರಬಹುದು ಆದರೂ ಸ್ವಲ್ಪ ತಾಳೆ
ಒಮ್ಮೆ ಓದಿ ಮುಗಿಸಿದ ಹಾಳೆಯಲ್ಲಿನ ಅಕ್ಷರ ತಾಗಲಿ ನಿನ್ನ ಹ್ರುದಯಕ್ಕೆ..
ಆ ಹಾಳೆಯಲ್ಲಿ ಏನಿದೆ ಏನಿಲ್ಲ ? ಅದನ್ನೆಲ್ಲ ನೀನು ನೋಡಲೇಬೇಕಲ್ಲ..
ನಿಜ ಹಾಳೆ ರದ್ದಿಯಾಗಿದೆ, ಆದರೂ ಅದರಲ್ಲಿ ಏನೋ ಇದೆ..
ಒಮ್ಮೆ ನೋಡಿ ಮುಂದೆ ನಡೆ, ಅದಕ್ಯಾಕೆ ಬಿಡೆ ? 
ಆದರೂ ಹೇಳುತ್ತೇನೆ ಅಪ್ಪನಾಗುವುದು ಅಷ್ಟು ಸುಲಭವಲ್ಲ,,

ಆಕಾಶ ಭೂಮಿ  ಎಲ್ಲೂ ಸೇರುವುದಿಲ್ಲ, ಆದರೂ ಹಾಗೆ ಕಾಣಿಸುವುದಲ್ಲ
ನಿಂತ ಭೂಮಿಗೆ ಮೇಲಿನ ಆಕಾಶದ ಭಯ. ಅಕಾಶಕ್ಕೆ ನೆಲ ಕಾಣಿಸುವುದಿಲ್ಲ
ಮೇಲೆ ಹಾರುವವರು ಕೆಳಗೆ ನೋಡಲಾರರು.ಕೆಳಗೆ ಇರುವವರು ಮೇಲೆ ನೋಡದೇ ಇರಲಾರದು
ಆದರೂ ಒಮ್ಮೆ ನೋಡಿ ಬಿಡು ನೆಲವನ್ನು, ನೀನು ಬಲ್ಲೆಯಾ ?
ನೆಲವಿಲ್ಲದೇ ಆಕಾಶವಿಲ್ಲ, ಅಕಾಶ ಎನ್ನುವುದೇ ಭ್ರಮೆಯಲ್ಲವಾ ?
ಇದೆಲ್ಲವುದರ ನಡುವೆಯೂ ಹೇಳುತ್ತೇನೆ
ಅಪ್ಪನಾಗುವುದು ಅಷ್ಟು ಸುಲಭವಲ್ಲ,,

Monday, September 30, 2013

ಭಾರತದಲ್ಲೇ ಗಾಂಧೀಜಿ ಅನಾಥರಾಗಿದ್ದಾರೆ......!

ಪ್ರೀತಿ ಇರುವಲ್ಲೇ ಬದುಕಿದೆ- ಮಹಾತ್ಮಾ ಗಾಂಧಿ



ಆತ್ಮ ವಿಶ್ವಾಸದ ಮಾತುಗಳು,
ಮೋಹನ ದಾಸ್ ಕರಮಚಂದ್ ಗಾಂಧಿ ಎಂದರೆ ಹೆಚ್ಚಿನ ಜನರಿಗೆ ಅರ್ಥವಾಗದ ಮಹತ್ಮಾ ಗಾಂಧಿ ನನ್ನ ಒಳಗೆ ಹೇಗೆ ಬಂದು ಪ್ರತಿಷ್ಠಾಪಿಸಿ ಬಿಟ್ಟ ಎಂದು ಈಗ ಯೋಚಿಸುತ್ತಿದ್ದೇನೆ. ಹೀಗೆ ಯೋಚಿಸುವಾಗ  ನನಗೆ ಮೊದಲು ನೆನಪಾಗುವುದು ಗಾಂಧಿ ಟೋಪಿ. ಮಹತ್ಮಾ ಗಾಂಧಿ ತಮ್ಮ ಬದುಕಿನ ಕೊನೆಯ ವರ್ಷಗಳಲ್ಲಿ ಟೋಪಿ ಹಾಕಿಕೊಳ್ಳುವುದು ಕಡಿಮೆಯಾಗಿತ್ತು. ಯಾಕೆಂದರೆ ಗಾಂಧಿಯವರ ಸುತ್ತ ಇದ್ದ ಕಾಂಗ್ರೆಸ್ಸಿಗರು ಟೋಫಿಯನ್ನು ಕಸಿದುಕೊಂಡಿದ್ದರು. ಗಾಂಧಿ ಟೋಪಿಯನ್ನು ಮೋಸ ಮತ್ತು ವಂಚನೆಯ ಸಂಕೇತವಾಗಿ ಮಾಡಿದವರು ಕಾಂಗ್ರೆಸ್ಸಿಗರು.
ಈ ಮಾತುಗಳನ್ನು ಯಾರು ವಿರೋಧಿಸಲು ಸಾಧ್ಯ ?
ನಾನು ಈ ಜಗತ್ತಿಗೆ ಕಣ್ಣು ಬಿಡುವಾಗಲೇ ನಮ್ಮ ಮನೆಯ ಗಂಡಸರ ತಲೆಯ ಮೇಲೆ ಗಾಂಧಿ ತೋಪಿ ಇತ್ತು. ಹಾಗೆ ಮನೆಯ ವರಾಂಡಾದಲ್ಲಿ ಮಹತ್ಮರ ಫೋ ಟೋವನ್ನು ಹಾಕಲಾಗಿತ್ತು. ನಮ್ಮ ಮೂಲ ಮನೆಯ ಗೋಡೆಯ ಮೇಲೆ ನೇತಾಡುವ ಮಹಾತ್ಮರ ಫೋಟೋಗಳಲ್ಲಿ   ಮೊದಲನೆಯದು ರಾಮಕೃಷ್ನ ಪರಮಹಂಸರದು. ಇದಾದ ಮೇಲೆ ಶಿವಾಜಿ, ಮಹಾರಾಣಾ ಪ್ರತಾಪಸಿಂಹ, ವಿವೇಕಾನಂದ ಹೀಗೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಗ್ಲಾಸು ಹಾಕಿಸಿ ಇಟ್ಟ  ಫೋ ಟೋಗಳಲ್ಲಿ ಇಂಡಿರಾ ಗಾಂಧಿ, ಜವಾಹರಲಾಲ್ ನೆಹರೂ ಅವರ ಜೊತೆ ಮಹಾತ್ಮಾ ಗಾಂಧಿ ಅವರ  ಫೋಟೋ. ಗಾಂಧೀಜಿಯವರ ಸಣ್ಣವನಿದ್ದಾಗಲೇ ನಾನು ನೋಡಿದ ಈ  ಫೋಟೋದಲ್ಲಿ ಟೋಪಿ ಇರಲಿಲ್ಲ. ಅವರು ಕಣ್ಣು ಮುಚ್ಚಿ ಕುಳಿತ  ಫೋ
ಟೋ ಅದು. ಆದರೆ ನೆಹರೂ ತಲೆಯ ಮೇಲೆ ಮಾತ್ರ ಗರಿ ಗರಿಯಾದ ಟೋಪಿ.
ನನ್ನ ಅಜ್ಜ ತಲೆಯ ಮೇಲೆ ಟೋಪಿ ಹಾಕಿಕೊಳ್ಳುತ್ತಿದ್ದ. ಆದರೆ ಅವನ ತಲೆಯ ಮೇಲಿನ ಟೋಪಿ ಗರಿ ಗರಿಯಾಗಿ ಇರುತ್ತಿರಲಿಲ್ಲ. ಅದು ಅವನ ಹಣೆಯನ್ನು ದಾಟಿ ಹುಬ್ಬಿನ ಬಳಿ ಬಂದು ಕುಳಿತುಕೊಳ್ಳುತ್ತಿತ್ತು. ಹೀಗಾಗಿ ಅವನಿಗೆ ಹಣೆ ಇದೆ ಎಂಬುದು ನನಗೆ ಗ್ಯಾರಂಟಿಯಾಗಲು ಹಲವು ವರ್ಷಗಳೇ ಬೇಕಾದವು. ನನ್ನ ಅಜ್ಜ ಸ್ವಾತಂತ್ರ್ಯ ಸೇನಾನಿ. 1942 ರ ಕರ ನಿರಾಕರಣ ಚಳವಳಿಯಲ್ಲಿ ಪಾಲ್ಗೊಂಡು ಜೈಲು ವಾಸ ಅನುಭವಿಸಿದವ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಮನೆ ಮಠ ಕಳೆದುಕೊಂಡವ. ಕಟ್ಟಾ ಕಾಂಗ್ರೆಸಿಗನಾದ ಅವನಿಗೆ ಗಾಂಧೀಜಿಯ ಬಗ್ಗೆ ಅಂತಹ ಪ್ರೀತಿ ಇರಲಿಲ್ಲ. ನನ್ನ ಅಜ್ಜನ ಗುಣವೇ ಗಾಂಧಿ ತತ್ವಗಳಿಗೆ ವಿರೋಧವಾದುದು. ಆತನಿಗೆ ಜಗಳ ಮಾಡುವುದು ಅಂದರೆ ತುಂಬಾ ಇಷ್ಟ. ಅಕ್ಕ ಪಕ್ಕದ ಮನೆಯವರೋ ಊರಿನವರೋ ಯಾರೂ ಸಿಗದಿದ್ದರೆ ಮನೆಯವರ ಜೊತೆ ಮಕ್ಕಳ ಜೊತೆ ಜಗಳ ಪ್ರಾರಂಭಿಸಿ ಬಿಡುತ್ತಿದ್ದ. ಜಗಳ ವಿಲ್ಲದಿದ್ದರೆ ಅದು ಬದುಕೇ ಅಲ್ಲ ಎಂಬುದು ಅವನ ನಂಬಿಕೆ. ಹೀಗಾಗಿ ಶಾಂತಿ ಸಹನೆ ಬೋಧಿಸುತ್ತಿದ್ದ ಗಾಂಧಿ ಅವನಿಗೆ ಇಷ್ಟವಾಗುತ್ತಿರಲಿಲ್ಲ.
ಬದಲಾವಣೆಯ ಕನಸುಗಾರ
ನಾನು ಹುಟ್ಟುವ ಹೊತ್ತಿಗೆ ಗಾಂಧಿ ಯುಗ ಮುಗಿದು ನೆಹರೂ ಯುಗ ಮುಗಿದು ಇಂದಿರಾ ಯುಗ ಪ್ರಾರಂಭವಾಗಿತ್ತು. ಆಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಾಶನ ನೀಡಿದ್ದರು. ಅಜ್ಜನಿಗೆ ತಾಮ್ರ ಪತ್ರದ ಪ್ರಶಸ್ತಿಯೂ ಸಿಕ್ಕಿತ್ತು. ಹೀಗಾಗಿ ಅವನಿಗೆ ಇಂದಿರಾ ಗಾಂಧಿಯವರ ಮೇಲೆ ಅಪಾರ ಅಭಿಮಾನ. ಅವನು ಮಾತನಾಡುವಾಗಲೆಲ್ಲ ಮಹಾತ್ಮಾ ಗಾಂಧಿಯವರನ್ನು ಒಮ್ಮೆ ಬೈದು ಇಂದಿರಾ ಗಾಂಧಿ ಅವರನ್ನು ಒಮ್ಮೆ ಹೊಗಳಿ ಸುಮ್ಮನಾಗುತ್ತಿದ್ದ.  ನಾನು ದೊಡ್ಡವನಾಗುವ ಹೊತ್ತಿಗೆ ತುರ್ತು ಪರಿಸ್ಥಿತಿಯ ದಿನಗಳು ಮುಗಿದಿದ್ದವು. ಜೊತೆಗೆ ನನ್ನ ಮೇಲೆ ಪ್ರಭಾವ ಬೀರಿದ ಬಂಡಾಯ ಚಳವಳಿ ಮೈತು ರೈತ ಚಳವಳಿ ವ್ಯಕಿ ಪೂಜೆಯನ್ನು ಸರ್ವಾಧಿಕಾರಿ ಮನಸ್ಥಿತಿಯನ್ನು ವಿರೋಧಿಸುವಂತೆ ಮಾಡಿತ್ತು. ಜೊತೆಗೆ ಲೋಹಿಯಾ ಅವರ ಬರೆಹಗಳು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರಿಂದ ನಾನು ಇಂದಿರಾ ಗಾಂಧಿಯವರನ್ನು ಪ್ರಬಲವಾಗಿ ವಿರೋಧಿಸುತ್ತಿದ್ದೆ. ಈ ವಿಚಾರವಾಗಿ ನನ್ನ ಮತ್ತು ಅಜ್ಜನ ನಡುವೆ ಘೋರ ಯುದ್ಧವೇ ನಡೆದು ಬಿಡುತ್ತಿತ್ತು.
ಇಂದಿರಾ ಗಾಂಧಿ ಇಲ್ಲದಿದ್ದರೆ ನಾವೆಲ್ಲ ಭೀಕ್ಷೆ ಬೇಡಿ ಬದಕಬೇಕಿತ್ತು ತಿಳ್ಕ ಎಂದು ಹೇಳುತ್ತಿದ್ದ ಅಜ್ಜ ಇಂದಿರಾ ವಿರೋಧಿಯಾದ ನನಗೆ ಮನೆ ಬಿಟ್ಟು ಹೋಗು ಎಂದು ಹಲವು ಬಾರಿ ಹೇಳಿದ್ದ. ಇಂತಹ ಕುರುಕ್ಷೇತ್ರ ಯುದ್ಧ ನಡೆಯುತ್ತಿದ್ದಾಗ ಮನೆಯ ಹೆಂಗಸರು ಮಧ್ಯ ಪ್ರವೇಶ ಮಾಡಿ ನನ್ನನ್ನು ಸಮಾಧಾನ ಮಾಡಿ ಒಳಗೆ ಕರೆದುಕೊಂಡು ಹೋಗುತ್ತಿದ್ದರು. ವಿಚಿತ್ರ ಸಿಟ್ಟು ಜಗಳ ಹೋರಾಟದ ಮನೋಭಾವದ ಅಜ್ಜ ಗಾಂಧಿಜಿಯವರನ್ನ್ ವಿರೋಧಿಸುತ್ತಿದ್ದ ಕಾರಣದಿಂದಲೇ ನಾನು ಗಾಂಧಿಜಿಯವ ಬಗ್ಗೆ ಓದಲು ಪ್ರಾರಂಭಿಸಿದೆ. ಜ್Éತೆಗೆ ಖಾದಿ ನಮ್ಮ ಮನೆಯ ಅಡಿಕೃತ ವಸ್ತ್ರವಾಗಿತ್ತು. ಅಜ್ಜ ಮತ್ತು ಅಪ್ಪ ಖಾದಿಯನ್ನು ಬಿಟ್ಟು ಬೇರೆ ಬಟ್ಟೆಯನ್ನು ಧರಿಸುತ್ತಿರಲಿಲ್ಲ.
ಅಪ್ಪನೂ ಅಜ್ಜನಂತೆ ತಲೆಯ ಮೇಲೆ ಟೋಫಿ ಹಾಕಿಕೊಳ್ಳುತ್ತಿದ್ದ. ಆದರೆ ಅಪ್ಪನ ಟೋಪಿಯ ಮಧ್ಯದ ಗೆರೆ ಎಂದು ಅಳಿಸುತ್ತಿರಲಿಲ್ಲ. ಅವನ ಬಳಿ ಇದ್ದ ಹತ್ತಾರು ನೆಹರೂ ಜುಬ್ಬಾ ಮತ್ತು ಪಂಜೆಯನ್ನು ದೋಬಿಯ ಬಳಿ ತೊಳೆಸಿ ಅದಕ್ಕೆ ಗಂಜಿ ಹಾಕಿ ಇಸ್ತ್ರಿ ಇರುವಂತೆ ನೋಡಿಕೊಳ್ಳುತ್ತಿದ್ದ ಅಪ್ಪ. ಅವನ ಬಟ್ಟೆಯ ಇಸ್ತ್ರೀ ಎಂದೂ ಅಳಿಸುತ್ತಿರಲಿಲ್ಲ. ಎಂದೂ ಗರಿಗರಿಯಾಗಿ ಇರುತ್ತಿತ್ತು ಅವನ ಖಾದಿ ಬಟ್ಟೆ. ಜೊತೆಗೆ ಅಪ್ಪ ಬಿಳಿಯ ಬಣ್ಣದ ಖಾದಿ ಬಿಟ್ಟು ಬೇರೆ ಹಾಕಿಕೊಂಡವನಲ್ಲ. ಆದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಬಂದ ಮೇಲೆ ಅಪ್ಪ ಟೋಪಿಯನ್ನು ಹಾಕಿಕೊಳ್ಳುವುದನ್ನು ನಿಲ್ಲಿಸಿಬಿಟ್ಟ. ಆದರೆ ಖಾದಿಯನ್ನು ಮಾತ್ರ ಬಿಡಲಿಲ್ಲ.
ಇಂಗ್ಲೀಷ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದ ಅಪ್ಪ ಎಂದೂ ಗಾಂಧಿಯ ಬಗ್ಗೆ ಮಾತನಾಡಲಿಲ್ಲ. ಅವನಿಗೂ ಗಾಂಧಿ ಎಂದರೆ ಇಂದಿರಾ ಗಾಂಧಿ ಮಾತ್ರವೇ. ಇವರ ಈ ದಿವ್ಯ ಮೌನದಿಂದಾಗಿಯೇ ನಾನು ಗಾಂಧಿಯ ಬಗ್ಗೆ ಹೆಚ್ಚು ಆಸಕ್ತನಾದೆ. ಅವರತ್ತ ಆಕರ್ಷಿತನಾದೆ. ನಾನು ಕಾಲೇಜಿಗೆ ಹೋಗುವಾಗಲೂ ಅಪ್ಪ ನನಗೆ ಖಾದಿ ಪ್ಯಾಂಟು ಮತ್ತು ಶರ್ಟನ್ನೇ ಕೊಡಿಸಿದ್ದ. ಬಹುಶಃ ಖಾಲಿಜೆಗೆ ಖಾದಿ ಹಾಕಿಕೊಂಡು ಹೋಗುತ್ತಿದ್ದವ ನಾನೊಬ್ಬನೇ.
ನಾನು ಎಂದೂ ಗಾಂಧಿ ಆರಾಧಕನಾಗಲಿಲ್ಲ. ನಾನು ಆರಾಧನೆ ಮತ್ತು ಅಭಿಮಾನದ ವಿರೋಧಿ. ನಾವು ಯಾರನ್ನಾದರೂ ಆರಾಧಿಸಲು ಪ್ರಾರಂಭಿಸಿದ ತಕ್ಷಣ ಅವರನ್ನು ಅರ್ಥ ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇವೆ. ಗಾಂಧಿಜಿಯವರ ಹಲವಾರು ವಿಚಾರಗಳ ಬಗ್ಗೆ ನನಗೆ ಸಹಮತ ಇಲ್ಲದಿದ್ದರೂ ಅವರ ನಂಬಿಕೆಯಲ್ಲಿನ ಪ್ರಾಮಾಣಿಕತೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡ ಕೆಲವೇ ಕೆಲವು ಜನರಲ್ಲಿ ಗಾಂಧೀಜಿ ಕೂಡ ಒಬ್ಬರು. ಅವರ ಗ್ರಾಮ ಸ್ವರಾಜ್, ಅಹಿಂಸೆ ಮತ್ತು ಸತ್ಯ ನನಗೆ ಎಂದೂ ಆದರ್ಶಪಾಯ. ತಮ್ಮ ಬದುಕನ್ನು ಪ್ರಯೋಗಶಾಲೆ ಎಂದುಕೊಂಡ ಗಾಂಢಿಜಿಯವರಲ್ಲೂ ಪ್ರಯೋಗಶೀಲತೆ ಬದುಕಿನ ಭಾಗವಾಗಿ  ಬಂದಿರಲಿಲ್ಲ. ಅದಕ್ಕಿಂತ ಅವರಿಗೆ ಹಿಡಿದಿದ್ದ ಬ್ರಹ್ಮಚರ್ಯದ ಹುಚ್ಚು. ತಾವು ಭ್ರಹ್ಮಚಾರಿಯಾಗಿ ಇರಲು ಯತ್ನಿಸುತ್ತಿದ್ದ ಅವರು ಎಲ್ಲರ ಮೇಲೂ ಅದನ್ನು ಹೇರುತ್ತಿದ್ದರು. ಇಂತಹ ಕೆಲವು ನಂಬಿಕೆಗಳು ಗಾಂಧೀಜಿಯವರ ಬದುಕಿನ ಕಪ್ಪು ಚುಕ್ಕೆಗಳು.
ಎಪ್ಪತ್ತರ ದಶಕದಲ್ಲಿ ದೇಶದಲ್ಲಿ ಸಂಪೂರ್ಣ P್ಫ್ರಂತಿಯ ಕಹಳೆ ಊದಿ ಎರಡನೆಚಿiÀು ಸ್ವಾತಂತ್ರ್ಯ ಹೋರಾಟದ ಮುಂಚೋಣಿಯಲ್ಲಿದ್ದ ಜಯಪ್ರಕಾಶ್ ನಾರಾಯಣ್ ಅವರೂ ಗಾಂಧೀಜಿಯವರ ಸಾಮಿಪ್ಯವನ್ನು ಪಡೆದಿದ್ದವರು. ಜಯಪ್ರಕಾಶ್ ನಾರಾಯಣ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಇ ವಿದೇಶಕ್ಕೆ ಹೋದಾಗ ಜಯಪ್ರಕಾಶ ಅವರ ಪತ್ನಿ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲೇ ಉಳಿದುಕೊಳ್ಳುತ್ತಾರೆ. ಗಾಂಧೀಜಿ ಅವರಿಗೆ ಬ್ರಹ್ಮಚರ್ಯೆಯನ್ನು ಬೋಧಿಸುತ್ತಾರೆ. ಜಯಪ್ರಕಾಶರು ವಿದೇಶದಿಂದ ಹಿಂತಿರುಗಿ ತಮ್ಮ ಹೆಂಡತಿಯನ್ನು ನೋಡಲು ಆಶ್ರಮಕ್ಕೆ ಬಂದಾಗ ಅವರನ್ನು ಪ್ರೀತಿಯಿಂದ ಬರ ಮಾಡಿಕೊಳುವ ಮಹಾತ್ಮಾ ಗಾಂಧಿ ಬ್ರಹ್ಮಚರ್ಯೆಯನ್ನು ಮುಂದುವರಿಸುವಂತೆ ಸೂಚನೆ ನೀಡಲು ಮರೆಯುವುದಿಲ್ಲ.  ಹೊಸದಾಗಿ ಮದುವೆಯಾಗಿ ಮಧುಚಂದ್ರವನ್ನು ನಡೆಸದ ಯುವ ದಂಪತಿಗಳಿಗೆ ಇಂತಹ ಸಲಹೆ ನೀಡುವುದು ಜೀವ ವಿರೋಧಿ ಎಂದು ಗಾಂಧೀಜಿಯವರಿಗೆ ಅನ್ನಿಸುವುದಿಲ್ಲ.
ಗಾಂಧೀಜಿಯವರ ನಂಬಿಕೆಯ ನಿಷ್ಟೆ ಅಂತಹದು. ಆ ವಿಚಾರದಲ್ಲಿ ಅವರು ಕಠೋರ ಹೃದಯಿ. ಗಾಂಧೀಜಿ ಇಂದಿನ ಅರ್ಥದಲ್ಲಿ ರಾಜಕಾರಣಿ ಅಲ್ಲ. ಆದರೆ ಅವರೂ ರಾಜಕಾರಣಿಯೇ. ಅದು ತಮ್ಮ ಗುರಿಯನ್ನು ತಲುಪಲೇ ಬೇಕು ಎಂಬ ನಿಷ್ಟೆಯಿಂದ ಬಂದ ರಾಜಕಾರಣ.  ಗಾಂಧಿ ಮತ್ತು ನೆಹರೂ ನಡುವಿನ ಸಂಬಂಧ ವ್ಯಕ್ತಿಗತ ನೆಲೆಯ ಸಂಬಂಧವಾಗಿದ್ದರೂ ಅದು ರಾಜಕಾರಣದ ಆಯಾಮವನ್ನು ಹೊಂಡಿತ್ತು. ಈ ಕಾರಣದಿಂದಾಗಿಯೇ ತಮ್ಮ ವ್ಯಕ್ತಿತ್ವ ಮತ್ತು ನಂಬಿಕೆಗೆ ವಿರೋಢವಾದ ವ್ಯಕ್ತಿತ್ವ ಮತ್ತು ನಂಬಿಕೆಯನ್ನು ರೂಢಿಸಿಕೊಂಡಿದ್ದ ನೆಹರೂ ಅವರನ್ನು ಗಾಂಧಿ ಒಪ್ಪಿಕೊಂಡಿದ್ದರು. ಲಿಬರಲ್ ಆಗಿದ್ದ ನೆಹರೂ ಸರ್ಹಾರ್ ಪಟೇಲ್ ರಾಜಗೋಪಾಲ್ ಆಚಾರಿ ಅವರಂತೆ ಇರಲಿಲ್ಲ. ನೆಹರು ಆಧುನಿಕತೆಯ ಜೊತೆ ಸಂವಾದ ಮತ್ತು ಸಂವಹನ ನಡೆಸಬಲ್ಲವರಾಗಿದ್ದರು. ಆಧುನಿಕತೆ ಮತ್ತು ಮನುಷ್ಯ ಪ್ರೀತಿಯ ವಿಚಾರದಲ್ಲಿ ತಮ್ಮ ಬದ್ಧತೆಯನ್ನು ಮೀರಬಲ್ಲವರಾಗಿದ್ದ ನೆಹರೂ ಗಾಂಧಿಜಿಯವರ ಆಯ್ಕೆಯಾಗಿದ್ದು ರಾಜಕಾರಣವೇ. ಗಾಂಧೀಜಿಯವರಿಗೆ ಸ್ವತಂತ್ರ ಭಾರತ ಆಧುನಿಕತೆಯ ಜೊತೆ ಸಂವಾದ ನಡೆಸೇಕು, ಆ ಮೂಲಕ ಅಭಿವೃದ್ಧಿ ಹೊಂದಬೇಕು ಎಂಬ ಒಳ ಆಸೆ ಇತ್ತು. ಅದಕ್ಕಾಗಿ ಅವರು ಆರಿಸಿಕೊಂಡಿದ್ದು ನೆಹರೂ ಅವರನ್ನು.
ಗಾಂಧೀಜಿ ಮತ್ತು ಅವರ ಹೆಂಡತಿ ಕಸ್ತೂರಿ ಬಾ ಅವರ ಸಂಬಂಧವನ್ನು ನೋಡಿ. ಗಾಂಧೀಜಿಯವರ ಹೆಜ್ಜೆ ಗುರುಗಳಲ್ಲೇ ಹೆಜ್ಜೆ ಇಡುತ್ತ ಬಂದವರು ಎಂದು ಅವರನ್ನು ಶ್ಲಾಘಿಸಲಾಗುತ್ತದೆ. ಗಾಂಧೀಜಿಯವರ ಯಶಸ್ಸಿನಲ್ಲಿ ಅವರ ಹೆಂಡತಿಯ ಪಾತ್ರ ದೊಡ್ಡದು ಎಂದು ಹೇಳಲಾಗುತ್ತದೆ. ಆದರೆ ಇವರ ದಾಂಪತ್ಯದ ಮೂಲಕ ಅವರಿಗೆ ಮಕ್ಕಳಾದರು ಎಂಬುದನ್ನು ಬಿಟ್ಟರೆ ಅವರದು ನಿಜವಾದ ದಾಂಪತ್ಯವಾಗಿರಲಿಲ್ಲ. ಗಾಂಧೀಜಿಯವರ ಬದ್ಧತೆ ಎಂತಹ ವಿಪರೀತ ಎಂದರೆ ತಮ್ಮ ಹೆಂಡತಿಗೆ ಪ್ರತ್ಯ್ರೇಕ ಅಸ್ಥಿತ್ವವಿದೆ ಎಂದು ಅವರು ಪರಿಗಣೀಸಲೇ ಇಲ್ಲ. ತನ್ನ ಹೆಂಡತಿಯನ್ನು ತನ್ನ ನಂಬಿಕೆಗಾಗಿ ಅಗ್ನಿಪರೀಕ್ಷೆಗೆ ಒಡ್ಡಿದ ರಾಮ ಕೂಡ ಸೀತೆಯ ಪ್ರತ್ಯೇಕ ಅಸ್ಥಿತ್ವವನ್ನು ಪರಿಗಣನೆಗೆ ತೆಗೆದುಕೊಂಡವನಲ್ಲ. ಇಂತಹ ರಾಮ ಗಾಂಧೀಜಿಗೆ ತುಂಬಾ ಇಷ್ಟ. ಇದು ಅವರ ಮನಸ್ಥಿತ್ಯ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೆ ರಾಮನನ್ನು ಆರಾಧಿಸುವ ಗಾಂಧೀಜಿ ಅವರನ್ನು ರಾಮ ಮಂದಿರ ಕಟ್ಟಲು ಇಟ್ಟಿಗೆ ಹೊತ್ತ ಸಂಘ ಪರಿವಾರ ಮತ್ತು ಬಿಜೆಪಿಯವರಿಗ್ ಸ್ವೀಕಾರಾರ್ಹರಾಗಿರಲಿಲ್ಲ. ಇವರೆಲ್ಲ ಮಂದಿರದಲ್ಲಿ ಇಟ್ಟಿಗೆಗಳಲ್ಲಿ ರಾಮನನ್ನು ಕಾಣುತ್ತಿದ್ದರೆ ಗಾಂಧಿಜಿ ಮನುಷ್ಯನ ಹೃದಯಗಳಲ್ಲಿ, ನಡವಳಿಕೆಯಲ್ಲಿ ರಾಮನನ್ನು ಕಾಣಲು ಯತ್ನಿಸುತ್ತಿದ್ದರು.
ಗಾಂಧೀಜಿಯವರು ದೇವರಾಗಿರಲಿಲ್ಲ. ಅವರಲ್ಲಿಯೂ ಮನುಷ್ಯ ಸಹಜವಾದ ದೌರ್ಬಲ್ಯಗಳಿದ್ದವು. ಎಲ್ಲ ಮನುಷ್ಯ ಸಹಜವಾದ ದೌರ್ಬಲ್ಯಗಳ ನಡುವೆ ಎಲ್ಲರು ಮೆಚ್ಚಬಹುದಾದ ನಿಜವಾದ ಮಹಾ ನಾಯಕರು ಗಾಂಧೀಜಿ. ಧಾರ್ಮಿಕ ಮನಸ್ಥಿತಿಯನ್ನು ಹೊಂದಿದ್ದ ಕೋಮುವಾದಿ ಜಾತೀಯವಾದಿ ಅವರಾಗಿರಲಿಲ್ಲ. ಭಾರತದ ಶಕ್ತಿ ಎಲ್ಲಿದೆ ಎಂಬುದು ಅವರಿಗೆ ಗೊತ್ತಿತ್ತು. ಕಾಂಗ್ರೆಸ್ ಎಂಬ ಪುರಾತನ ಪಕ್ಷಕ್ಕೇ ಮಹಾತ್ಮಾ ಗಾಂಧಿ ನೆನಪಿನಲ್ಲಿ ಇದ್ದಿದ್ದರೆ ದೇಶಕ್ಕೆ ಇಂದಿನ ಸ್ಥಿತಿ ಬರುತ್ತಿರಲಿಲ್ಲ.  ಗಾಂಧಿ ಸ್ವಾವಲಂಬನೆಯ ಮಾತನಾಡಿದವರು. ಅಹಿಂಸೆಯನ್ನು ನಂಬಿದವರು. ಶಾಂತಿಯ ಪ್ರತಿಪಾದಕರಾಗಿದ್ದವರು. ಮನುಷ್ಯ ದೌರ್ಬಲ್ಯಗಳ ನಡುವೆ ಅದನ್ನು ಮೀರಲು ಯತ್ನಿಸಿದವರು.
ಕೆಲವು ತಿಂಗಳುಗಳ ಹಿಂದೆ ಊರಿಗೆ ಹೋದಾಗ ನಮ್ಮ ಮೂಲ ಮನೆಯ ವರಾಂಡಾದ ಗೋಡೆಯ ಮೇಲೆ ಇದ್ದ ಈ ಮಹಾತ್ಮರ ಫೆÇೀಟೋಗಳನ್ನೆಲ್ಲ ನೋಡಿದೆ. ಅದರೆ ಈ ಫೆÇೀಟೋಗಳಲ್ಲಿ ಮೊದಲಿನ Œಜೀವ ಕಳೆ ಕಂಡುಬರಲಿಲ್ಲ. ನಮ್ಮ ಮನೆಯಲ್ಲಿದ್ದ ಇಂಡೀನ ತಲೆ ಮಾರಿನ ಹುಡುಗರಿಗೆ ಗಾಂಧಿ ಗೊತ್ತಿರಬಹುದು ಎಂದು ಅನ್ನಿಸಲಿಲ್ಲ. ಗಾಂಧಿಯ ಬಗ್ಗೆ ಮಾತನಾಡುವವರು ಈ ಬಗ್ಗೆ ಜಗಳವಾಡುವವರು ಇರಲಿಲ್ಲ.
ನಮ್ಮ ಚಿಕ್ಕಪ್ಪ ಇರುವ ಈ ಹಳೆಯ ಮನೆಯ ವರಾಂಡದಲ್ಲಿ ಕುಳಿತಿರುತ್ತಿದ್ದ ನನ್ನ ಅಜ್ಜ ಕೊನೆಯ ದಿನಗಳಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ. ಕಾಲಿಗೆ ಕಸ ಎಂದು ಹೇಳುತ್ತ ಯಾವುದೋ ಎಣ್ಣೆ ತಿಕ್ಕಿಸಿಕೊಂಡು ತೆವಳುತ್ತಿದ್ದ ಆಗಲೂ ಆತ ಗಾಂಧೀಜಿಯನ್ನು ಬೈಯುವುದನ್ನು ನಿಲ್ಲಿಸಿರಲಿಲ್ಲ. ನಾನು ಬೆಂಗಳೂರಿನಿಂದ ಮನೆಗೆ ಹೋದಾಗಲೆಲ್ಲ ನನ್ನ ಮತ್ತು ಅವನ ನಡುವೆ ಕಾಂಗ್ರೆಸ್ ವಿಚಾರವಾಗಿಯೇ ಜಗಳವಾಗುತ್ತಿತ್ತು. ಅವನು ಎಂತಹ ವ್ಯಕ್ತಿ ಎಂದರೆ, ನಾನು ಪತ್ರಕರ್ತನಾಗಿ ಹೆಗಡೆ ದೇವೇಗೌಡರ ಪತ್ರಿಕಾಗೋಷ್ಠಿಗೆ ಹೋದರೂ ಆತ ಸಹಿಸುತ್ತಿರಲಿಲ್ಲ. ಕಾಂಗ್ರೆಸ್ ವಿರೋಧಿಗಳ ಜೊತೆ ನಾನು ಸಂಪರ್ಕ ಇಟ್ಟುಕೊಳ್ಳುವುದನ್ನು ಬಯಸದ ನನ್ನ ಅಜ್ಜ ಗಾಂಧೀಜಿಯವರನ್ನು ಟೀಕಿಸುವವರನ್ನು ಮಾತ್ರ ಇಷ್ಟ ಪಡುತ್ತಿದ್ದ. ಆದರೆ ಗಾಂಧೀಜಿಯವರ ವಿಚಾರದಲ್ಲಿ ತಾತ್ವಿಕವಾಗಿ ತಾರ್ಕಿಕವಾಗಿ ಜಗಳವಾಡುವವರೂ ಇಲ್ಲ.
ಜಾಗತೀಕರಣದ ಹುಸಿ ಮತ್ತು ಭ್ರಮೆಯ ನಡುವೆ ಗಾಂಧಿ ಎಷ್ಟು ದೊಡ್ಡ ಮನುಷ್ಯರಾಗಿದ್ದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗೆ ನಮ್ಮ ಇಂದಿನ ಯುವಕರು ಗಾಂಧಿ ಏನು ಹೇಳಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸಬೇಕು. ಆದರೆ ಇಂದು ಸಾಮಾಜಿಕ ತಾಣಗ¼ಲ್ಲಿ ಗಾಂಧೀಜಿಯವರನ್ನು ಅವಹೇಳನ ಮಾಡುವಂಥಹ ಮಾತುಗಳು ಹರಿದಾಡುತ್ತಿವೆ. ಅವರೊಬ್ಬ ಟೆರಿರಿಸ್ಟ್ ಎಂದು ಯಾರೋ ಒಬ್ಬರು ಹಾಕಿದ್ದ ಅಪ್ ಡೆಟ್ ನೋಡಿ ಮನಸ್ಸಿಗೆ ನೋವಾಯಿತು.
ಹೊಸ ಗಾಂಧಿಗಳನ್ನು ಹಿಡಿದುಕೊಂಡಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರನ್ನು ಕೈ ಬಿಟ್ಟಿದೆ. ನಾಥೂರಾಮ್ ಗೋಡ್ಸೆ ಅವರ ನಂಬಿಕೆಯನ್ನೇ ಹೊಂದಿರುವ ಬಿಜೆಪಿಗೆ ಗಾಂಧಿ ಪರಮ ಶತ್ರು. ಬಿಜೆಪಿಯ ಅಜೆಂಡಾದ ಅನುಷ್ಠಾನಕ್ಕೆ ಇರುವ ದೊಡ್ಡ ಅಡ್ಡಿ ಎಂದರೆ ಗಾಂಧಿ ಮತ್ತು ಅವರ ತತ್ವಾದರ್ಶಗಳು.
ಹೀಗಾಗಿ ಭಾರತದಲ್ಲೇ ಗಾಂಧಿ ಅನಾಥರಾಗಿದ್ದಾರೆ…

Saturday, September 21, 2013

ಪತ್ರಿಕೆ ಓದುವಾಗಲೆಲ್ಲ ನನ್ನಪ್ಪ ಎದುರಿಗೆ ಬಂದು ನಿಲ್ಲುತ್ತಾನೆ......!

ನಾನು ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದ್ದು ಯಾವಾಗ ಎಂದು ಯೋಚಿಸಿದರೆ ತಕ್ಷಣ ಉತ್ತರ ಹೊಳೆಯುವುದಿಲ್ಲ. ನಾನು ಶಾಲೆಗೆ ಹೋಗಲು ಪ್ರಾರಂಭಿಸಿದಾಗಲೇ ನಮ್ಮ ಮನೆಗೆ ಪ್ರಜಾವಾಣಿ, ದಿ ಹಿಂದೂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳು ಬರುತ್ತಿದ್ದವು.ಅಪ್ಪ ದೊಡ್ಡ ಧ್ವನಿಯನ್ನು ಪತ್ರಿಕೆಗಳ ಪಠಣ ಮಾಡುತ್ತಿದ್ದ.
ನನ್ನ ಅಪ್ಪ ಪತ್ರಿಕೆಗಳನ್ನು ದೊಡ್ದ ಧ್ವನಿಯಲ್ಲಿ ಓದುತ್ತಿದ್ದ ದೃಶ್ಯ ನನ್ನ ಕಣ್ಣ ಮುಂದೆ ಈಗಲೂ ಬರುತ್ತದೆ. ಅಪ್ಪ ಹೀಗೆ ಪತ್ರಿಕೆಯನ್ನು ದೊಡ್ದ ಧ್ವನಿಯಲ್ಲಿ ಓದುವುದು ನನ್ನ ಅಜ್ಜನಿಗೆ ಇಷ್ಟವಾಗುತ್ತಿರಲಿಲ್ಲ.
ಮಾಣಿ ಮನಸಿನಲ್ಲೇ ಪತ್ರಿಕೆ ಓದು ಎಂದು ಅಜ್ಜ ಅಪ್ಪನಿಗೆ ಬೈಯುತ್ತಿದ್ದ. ಆದರೆ ಅಪ್ಪ ದೊಡ್ಡದಾಗಿ ಪತ್ರಿಕೆ ಓದುವುದನ್ನು ನಿಲ್ಲಿಸುತ್ತಿರಲಿಲ್ಲ. ಅವನ ಪ್ರಕಾರ ಇಂಡಿಯಾ ಎಂಬ ಈ ದೇಶದಲ್ಲಿ ಇಂಗ್ಲೀಷ್ ಸರಿಯಾಗಿ ಬರೆಯುವ ಏಕಮೇವ ಇಂಗ್ಲೀಷ್ ಪತ್ರಿಕೆ ಎಂದರೆ ಅದು ದಿ.ಹಿಂದೂ ಮಾತ್ರ. ಉಳಿದ ಆಂಗ್ಲ ದಿನ ಪತ್ರಿಕೆಗಳಿಗೆ ಇಂಗ್ಲೀಷ್ ಬರುವುದಿಲ್ಲ ಎಂದು ಅವನ ನಂಬಿಕೆಯಾಗಿತ್ತು. ನಾಟಕಗಳ ವಿಚಿತ್ರ   ಬಗ್ಗೆ ಸೆಳೆತವಿದ್ದ ಅಪ್ಪ ಶೇಕ್ಸಫಿಯರ್ ನ ಎಲ್ಲ ನಾಟಕಗಳನ್ನು ಮನೆಯಲ್ಲಿ ತಂದಿಟ್ಟಿದ್ದ. ಆದರೆ ಪತ್ರಿಕೆಗಳನ್ನು ದೊಡ್ಡ ಧ್ವನಿಯಲ್ಲಿ ಓದುತ್ತಿದ್ದ ಅಪ್ಪ ಕಾವ್ಯ, ನಾಟಕ ಮತ್ತು ಕಾದಂಬರಿಗಳನ್ನು ಮಾತ್ರ ದೊಡ್ಡ ಧ್ವನಿಯಲ್ಲಿ ಓದುತ್ತಿರಲಿಲ್ಲ.
ಹಿಂದೂ ಪತ್ರಿಕೆಯನ್ನು ಇಡಿ ಜಗತ್ತಿಗೆ ಕೇಳುವಂತೆ ಓದುತ್ತಿದ್ದ ಅಪ್ಪ ನಾನೂ ಆ ಪತ್ರಿಕೆಯನ್ನು ಓದಬೇಕು ಎಂದು ಕಡ್ಡಾಯ ಮಾಡಿ ಬಿಟ್ಟಿದ್ದ. ಆದರೆ ಆ ಪತ್ರಿಕೆಯಲ್ಲಿ ಬರುತ್ತಿದ್ದ ಯಾವುದೇ ವರದಿ ಅಥವಾ ಲೇಖನದ ತಲೆ ಬುಡ ನನಗೆ ಅರ್ಥವಾಗುತ್ತಿರಲಿಲ್ಲ ಆದರೆ ಅಪ್ಪನ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಅದನ್ನು ಓದಲೇ ಬೇಕಾದ ದುರಂತ ಸ್ಥಿತಿ ನನ್ನದಾಗಿತ್ತು. ನನ್ನ ಅಪ್ಪನಿಗೆ ಕನ್ನಡದ ಮೇಲೂ ಪಾಂಡಿತ್ಯವಿತ್ತು. ಹಳೆಗನ್ನಡ ಸಾಹಿತ್ಯವನ್ನು ತನ್ನ ನಾಲಿಗೆಯ ಮೇಲೆ ಇಟ್ಟುಕೊಂಡಿದ್ದ ಆತ ರನ್ನ, ಪಂಪ ಹರಿಹರ, ರಾಘವಾಂಕ, ಜನ್ನ ಪೆÇನ್ನ ಎಲ್ಲರ ಕರೆತಂದು ನಮ್ಮ ಎದುರು ನಿಲ್ಲಿಸಿ ಬಿಡುತ್ತಿದ್ದ. ಹರಿಹರನ ರಗಳೆಯನ್ನು, ದೊಡ್ದ ಧ್ವನಿಯಲ್ಲಿ ಓದುತ್ತಿದ್ದ ಅವನಿಗೆ ರಾಘವಾಂಕನೆಂದರೆ ಅಪಾರ ಪ್ರೀತಿ.  ಕರ್ನಾಟಕ ಭಾರತ ಕಥಾ ಮಂಜರಿಯನ್ನು ತನ್ನ ಬಾಯಲ್ಲೇ ಇಟ್ಟುಕೊಂಡಿದ್ದ ಅವನಿಗೆ ಜೈಮಿನಿ ಭಾರತವನ್ನು ದೊಡ್ದ ದಾಗಿ ಓದುವುದೆಂದರೆ ಖುಷಿ.
ನಾನು ಹೈಸ್ಕೂಲಿಗೆ ಬರುವ ಹೊತ್ತಿಗೆ ಪತ್ರಿಕೆ ಮತ್ತು ಸಾಹಿತ್ಯದ ರುಚಿ ನನಗೆ ಹತ್ತತೊಡಗಿತ್ತು. ಅಪ್ಪ ಮನೆಗೆ ತರುತ್ತಿದ್ದ, ಸುಧಾ, ಕಸ್ತೂರಿ, ಕರ್ಮವೀರ, ಮೊದಲಾದ ನಿಯತಕಾಲಿಕೆಗಳು ನನ್ನನ್ನು ಓದಿನೆಡೆಗೆ ಎಳೆದೊಯ್ದು ಬಿಟ್ಟಿದ್ದವು. ಎಲ್ಲ ಪತ್ರಿಕೆಗಳು ನಮ್ಮ ಮನೆಗೆ ಬರುತ್ತಿದ್ದುದು ರಾತ್ರಿ. ಬೆಳಿಗ್ಗೆ ತಾಲೂಕು ಕೇಂದ್ರವಾದ ಸಿದ್ದಾಪುರಕ್ಕೆ ಹೋಗುತ್ತಿದ್ದ ಅಪ್ಪ, ರಾತ್ರಿ ಮನೆಗೆ ಬರುವಾಗ ಚೀಲದ ತುಂಬಾ ಪತ್ರಿಕೆಗಳನ್ನು ಹೊತ್ತು ತರುತ್ತಿದ್ದ. ಆದರೆ ಅವನ   ಕೈಚೀಲದಲ್ಲಿ      ಇರುತ್ತಿದ್ದ ಪತ್ರಿಕೆಗಳು, ನಿಯತಕಾಲಿಕೆಗಳು ನಮಗೆ ಸಿಗಬೇಕು ಎಂದರೆ ಅದನ್ನೆಲ್ಲ ಅಪ್ಪ ಓದಿ ಮುಗಿಸಬೇಕಾಗಿತ್ತು. ತಾನು ಓದು ಮುಗಿಸುವವರೆಗೆ ಯಾವ ಪತ್ರಿಕೆಯನ್ನು ನಿಯತಕಾಲಿಕೆಯನ್ನು ಆತ ನಮಗೆ ಮುಟ್ಟಲು ಕೊಡುತ್ತಿರಲಿಲ್ಲ.  ಅಪ್ಪ ಪತ್ರಿಕೆಗಳನ್ನು ಓದಿ ಮುಗಿಸಿದ ಮೇಲೆ ನಾನು ಓದಲು ಪ್ರಾರಂಭಿಸುತ್ತಿದ್ದೆ.
ಅಪ್ಪನ ಬಳಿ ದೊಡ್ದದಾದ ಪುಸ್ತಕ ಭಂಡಾರವೇ ಇತ್ತು. ಹೀಗಾಗಿ ಆತ ನಮ್ಮ ಮನೆಗೆ ಶಾರದಾ ನಿಲಯ ಎಂದು ಹೆಸರಿಟ್ಟಿದ್ದ, ಕುವೆಂಪು, ಶಿವರಾಮ ಕಾರಂತ, ಚಿತ್ತಾಲ, ಬೆಂದ್ರೆ, ಕಣವಿ    ಮೊದಲಾದವರ ಗ್ರಂಥಗಳು ಬಿಡುಗಡೆಯಾದ ತಕ್ಷಣ ಶಾರದಾ ನಿಲಯವನ್ನು ಸೇರುತ್ತಿದ್ದವು. ಹೀಗೆ ಬಂದ ಹೊಸ ಪುಸ್ತಕಗಳನ್ನು ಅಪ್ಪ ಓದಿ ಮುಗಿಸಿದ ಮೇಲೆ ನಾನು ಓದಬೇಕಾಗಿತ್ತು.  ಅಪ್ಪ ನನಗೆ ಮೊದಲು    ಓದಲು ಕೊಟ್ಟ ಕಾದಂಬರಿ ಎಂದರೆ ಸಮರ್‍ಸೆಟ್ ಮಾಮ್ ನ ನವ್ ಅಂಡ್ ದೆನ್ ಕಾದಂಬರಿ. ಈ ಕಾದಂಬರಿ ಹೇಗಿದೆ ಎಂದು ಕೇಳಿದ ಅಪ್ಪನಿಗೆ ನನಗೆ ಏನೂ ತಿಳಿಯುತ್ತಿಲ್ಲ ಎಂದು ಉತ್ತರ ಕೊಟ್ಟಿದ್ದೆ. ಇದರಿಂದ ಅಪ್ಪನಿಗೆ ತುಂಬಾ ಸಿಟ್ಟು ಬಂದಿತ್ತು. ಆತನಿಗೆ ಸಿಟ್ಟು ಬಂತೆಂದರೆ ನನಗೆ ಹಿಂದೆ ಮುಂದೆ ನೋಡದೇ ಬಡಿಯುತ್ತಿದ್ದ.
ಅಪ್ಪ ನನಗೆ ಹೀಗೆ ಬಡಿದಾಗಲೆಲ್ಲ ನನ್ನ ರಕ್ಷಣೆಗೆ ಬರುತ್ತಿದ್ದವಳು ನನ್ನ ಅಮ್ಮಮ್ಮ. ಅಮ್ಮಮ್ಮ ಎಂದರೆ ಅಪ್ಪನ ಅಮ್ಮ. ಆಕೆಗೆ ನನ್ನ ಮೇಲೆ ಅಪಾರವಾದ ಪ್ರೀತಿ. ನಾನು ಮಾಡಬಾರದ ಕೆಲಸವನ್ನು ಮಾಡಿ ಅಪ್ಪನಿಂದ ಹೊಡೆತ ತಿಂದಾಗ ಆಕೆ ಆಯ್ಯೋ ಅವನನ್ನು ಕೊಲ್ಲಡಾ ಮಾಣಿ ಎಂದು ಹೇಳಿ ತನ್ನ ಸೀರೆಯ ಸೆರೆಗಿನಡಿ ಆಕೆ ಬಚ್ಚಿಟ್ಟುಕೊಳ್ಳುತ್ತಿದ್ದಳು. ನಂತರ ನಾನು ಅಮ್ಮಮ್ಮನ ಮಡಿಲಲ್ಲಿ ತಲೆ ಇಟ್ಟು ನಿದ್ರೆ ಮಾಡುತ್ತಿದ್ದೆ. ಹೀಗಾಗಿ ಅಮ್ಮಮ್ಮನ ಸೀರೆಯ ಸೆರಗಿನ ವಾಸನೆ ನನ್ನಿಂದ ದೂರವಾಗಲೇ ಇಲ್ಲ. ಆಕೆ ನನ್ನ ಪಾಲಿಗೆ ರಕ್ಷಕಿ. ನನ್ನ ತಪ್ಪುಗಳನ್ನೆಲ್ಲ ಕ್ಶಮಿಸುವ ಕರುಣಾಮಯಿ.
ಅಪ್ಪ ನನ್ನ ಬಡಿಯುವಾಗ ಅಮ್ಮ ನನ್ನತ್ತ ನೋವು ಮತ್ತು ಕರುಣೆಯಿಂದ ನೋಡುತ್ತಿದ್ದಳು. ಅವಳಿಗೆ ಅಪ್ಪನಿಗೆ ವಿರುದ್ಧ ಮಾತನಾಡುವ ದೈರ್ಯ ಇರಲಿಲ್ಲ. ಹಾಗೆ ಹೆಚ್ಚೆಂದರೆ ತನ್ನ ಅತ್ತೆ ಅಂದರೆ ಅಮ್ಮಮ್ಮನ ಬಳಿ ಓಡಿ ಹೋಗಿ ಅತ್ತೆರೆ, ಶಶಿಗೆ ಬಡಿದು ಹಾಕ್ತಾ ಇದ್ದ ಎಂದು ಎಂದು ದೂರು ನೀಡಿ ಅಮ್ಮಮ್ಮ ರಂಗ ಪ್ರವೇಶಿಸುವಂತೆ ಮಾಡುತ್ತಿದ್ದಳು. ಅಮ್ಮಮ್ಮ ನ ಮುಂದೆ ಅಪ್ಪನ ಪೌರುಷ ತಣ್ಣಗಾಗುತ್ತಿತ್ತು. ಆತ ನನಗೆ ಹೊಡೆಯುವುದನ್ನು ನಿಲ್ಲಿಸಿ ಜಾಗ ಖಾಲಿ ಮಾಡುತ್ತಿದ್ದ.
ಅದೊಂದು ದಿನ ಅಪ್ಪ ಪೇಟೆಯಿಂದ ಮನೆಗೆ ಹಿಂತಿರುಗುವ ಹೊತ್ತಿಗೆ ನಾನು ಮನೆಯ ಅಂಗಳದಲ್ಲಿ ನಿಂತಿದ್ದೆ. ಆಗಲೇ ಯಕ್ಷಗಾನದ ಹಾಡುಗಳು ನನ್ನನ್ನು ಸೆಳೆದಿದ್ದವು. ಅಪ್ಪ ಎರಡು ಯಕ್ಷಗಾನವನ್ನು ಬರೆದಿದ್ದ. ನನಗೂ ಯಕ್ಷಗಾನ ಬರೆಯಬೇಕು ಎಂಬ ಆಸೆ. ಹೀಗಾಗಿ ಪ್ರಾಸದ ಬಗ್ಗೆ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅಪ್ಪನ ಮುಖ ಕಂಡು ನನ್ನೊಳಗೆ ಇದ್ದ ಕವಿ ಹೃದಯ ಜಾಗ್ರತವಾಗಿ ಯಕ್ಷಗಾನದ ಹಾಡು ಬಂದೇ ಬಿಟ್ಟಿತು.
ತಾಕು ತರಕಿಟ ಬಳಗುಳಿ ವೆಂಕಟ…..
ಬಳಗುಳಿ ನಮ್ಮ ಊರು. ಅಪ್ಪನ ಹೆಸರು ವೆಂಕಟ್ರಮಣ. ನಾನು ಹೇಳಿದ ಈ ಚರಣ ಅಧ್ಬುತವಾಗಿದೆ ಎಂದು ಅಂದುಕೊಳ್ಳುವಾಗಲೇ ಅಪ್ಪ ಜಮದಗ್ನಿಯಾಗಿ ಬಿಟ್ಟಿದ್ದ. ಪಕ್ಕದಲ್ಲಿದ್ದ ಬಾರುಕೋಲನ್ನು ತೆಗೆದುಕೊಂಡು ನನ್ನನ್ನು ಅಟ್ಟಿಸಿಕೊಂಡು ಬಂದ. ನಾನು ಮನೆಯ ಹಿಂದಕ್ಕೆ ಓಡಿದೆ ಮನೆಯ ಹಿಂದೆ ಇರುವ ದೊಡ್ದ ದರೆಯನ್ನು ಹತ್ತಿ ಮರ ಒಂದನ್ನು ಹತ್ತಿ ಕುಳಿತು ಬಿಟ್ಟೆ. ಅಪ್ಪ ಕೆಳಗೆ ಬಾರು ಕೋಲು ಹಿಡಿದು ಕಾದು ನಿಂತೆ ಇದ್ದ. ನನ್ನ ಮತ್ತು ಅಪ್ಪನ ಈ ಜಗಳದಲ್ಲಿ ಅಮ್ಮಮ್ಮ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಾಗ ಸಂಜೆಯಾಗಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ನಾನು ಮರದ ಮೇಲೆ ಕುಳಿತಿದ್ದೆ.
ಇವೆಲ್ಲ ಕಾರಣದಿಂದ ನನಗೆ ಹಲವಾರು ಅನ್ವರ್ಥ ನಾಮಗಳು ಬರತೊಡಗಿದ್ದವು. ಸೂಜಿಮೆಣಸಿನ ಕಾಯಿ ಎಂಬುದು ಇಂತಹ ಹೆಸರುಗಳಲ್ಲಿ ಒಂದು. ಮಲೆನಾಡಿನಲ್ಲಿ ಬೆಳೆಯುವ ಸೂಜಿ ಮೆಣಸಿನ ಕಾಯಿ ನೋಡುವುದಕ್ಕೆ ತುಂಬಾ ಚಿಕ್ಕದು. ಆದರೆ ತುಂಬಾ ಖಾರ. ಬಾಯಿಗಿಟ್ತರೆ ಕಣ್ನಲ್ಲಿ ನೀರು. ನಾನಾಗ ತುಂಬಾ ಸಣ್ನಗೆ ಇದ್ದುದರಿಂದ ಊರ ಜನ ನನಗೆ ಈ ಹೆಸರು ಇಟ್ಟಿದ್ದರು.
ಊರಿನ ಜನರೆಲ್ಲ ನನ್ನನ್ನು ಕರೆಯುತ್ತಿದ್ದ ಇನ್ನೊಂದು ಹೆಸರೆಂದರೆ ಕೆಂಪು ತುಟಿ ಹೆಗಡೇರು. ನನಗೆ ಮೊದಲಿನಿಂದಲೂ ಕೆಂಪು ತುಟಿ ಎಂದು ಅಮ್ಮ ಈಗಲೂ ಹೇಳುವುದುಂಟು, ಈ ಕೆಂಪು ತುಟಿ ನಾನು ತಿನ್ನುವ ಎಲೆ ಎಡಕೆಯಿಂದ ಇನ್ನಷ್ಟು ಕೆಂಪಗಾಗಿ ನನ್ನನ್ನು ಕೆಂಪತುಟಿಯ ಹೆಗಡೆಯವರನ್ನಾಗಿ ಮಾಡಿತ್ತು.
ಹೀಗೆ ನನ್ನ ಬೆನ್ನ ಚರ್ಮವನ್ನು ತನ್ನ ಬಾರು ಕೋಲಿನಿಂದ ಆಗಾಗ ಮುತ್ತಿಕ್ಕುತ್ತಿದ್ದ ಅಪ್ಪ ನಾನು ಕಾಲೇಜು ಪ್ರವೇಶಿಸುತ್ತಿದ್ದಂತೆ ಸಂಪೂರ್ಣವಾಗಿ ಬದಲಾಗಿ ಹೋದ. ಆತ ನನ್ನನ್ನು ಸ್ಣೇಹಿತನಂತೆ ಕಾಣತೊಡಗಿದ. ಒಂದು ವರ್ಷ ಸಿದ್ದಾಪುರದ ಕಾಲೇಜಿನಲ್ಲಿ   ನಾನು   ಇರುವಾಗ ಮಾಡಿಕೊಂಡ ಯಾವುದೇ ಲಫಡಾದಲ್ಲಿ ಆತ ಮಧ್ಯ ಪ್ರವೇಶಿಸಲಿಲ್ಲ. ಹಲವಾರು ಹುಡುಗಿಯರ ತಂದೆ ತಾಯಿಯರು ನನ್ನ ಬಗ್ಗೆ ದೂರು ನೀಡಿದಾಗ ನಾನು ಮಧ್ಯ ಪ್ರವೇಶಿಸುವುದಿಲ್ಲ, ಮಗ ಬೆಳೆದಿದ್ದಾನೆ ಎಂದು ಹೇಳಿ ಸುಮ್ಮನಾದ. ಕಾಲೇಜಿನ ಪ್ರಾಂಶುಪಾಲರೇ ನನ್ನ ಬಗ್ಗೆ ದೂರು ನೀಡಿದಾಗ ಮುಂದಿನ ಓದಿಗಾಗಿ ಬೆಳಗಾವಿಗೆ ಹೋಗಲು ವ್ಯವಸ್ಥೆ ಮಾಡಿದ. ಆದರೆ ಮಗನೆ ನೀನು ಮಾಡಿದ್ದು ತಪ್ಪು ಎಂದು ಒಂದು ದಿನವೂ ಹೇಳಲಿಲ್ಲ.
ನಂತರದ ದಿನಗಳಲ್ಲಿ ನಾನು ಓದು ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಅಪ್ಪ ನನ್ನ ಜೊತೆ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದನೇ ಹೊರತೂ ಬೇರೆ ಯಾವ ವಿಚಾರವನ್ನು ಮಾತನಾಡುತ್ತಿರಲಿಲ್ಲ. ಆತನ ಆರೋಗ್ಯ ಕೆಟ್ತ ಮೇಲೆ ಮಾತು ಕಡಿಮೆಯಾಗಿತ್ತು. ಆತ ನನ್ನನ್ನು ನೋಡುವಾಗ ಪ್ರೀತಿಯಿಂದ ವಿಶ್ವಾಸದಿಂದ ನೋಡುತ್ತಿದ್ದ.  ಅವನ ನೋಟದಲ್ಲಿ  ಸಣ್ಣವನಿರುವಾಗ ಹೊಡೆತ ಕೊಡುತ್ತಿದ್ದ ಬಗ್ಗೆ ಒಂದು ಪಶ್ಚಾತ್ತಾಪದ ಭಾವ ಯಾವಾಗಲೂ ಇರುತ್ತಿತ್ತು. ಅಪ್ಪನಿಗೆ ಕೊನೆಯವರೆಗೆ ನನ್ನ ಮೇಲಿದ್ದ ಬೇಸರವೆಂದರೆ ನನಗೆ ಆಂಗ್ಲ ಭಾಷೆಯ ಮೇಲೆ ಪ್ರಭುತ್ವ ಇಲ್ಲ ಎನ್ನುವುದು. ಸದಾ ಖಾದಿದಾರಿಯಾಗಿರುತ್ತಿದ್ದ ನಿಜವಾದ ಅರ್ಥದಲ್ಲಿ ಗಾಂಧಿವಾದಿ. ಆತ ತೊಡುತ್ತಿದ್ದ ಒಳ ಊಡುಪುಗಳು ಕೂಡ ಖಾದಿ. ನಮ್ಮ ಕುಟುಂಬವೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಎಲ್ಲವನ್ನೂ ಕಳೆದುಕೊಂಡಿತ್ತು. ಆದರೆ ಅಪ್ಪ ಇಂಗ್ಲೀಷರನ್ನು ವಿರೋಧಿಸುತ್ತಿದ್ದವ ಆಂಗ್ಲ ಭಾಷೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ !
ಅಪ್ಪ ಸಂಸ್ಕೃತ ಕಲಿಯಲಿಲ್ಲ. ಪ್ರತಿ ದಿನ ದೇವರ ಪೂಜೆ ಮಾಡಲಿಲ್ಲ.
ಪ್ರತಿ ದಿನ ಬೆಳಿಗ್ಗೆ ಪತ್ರಿಕೆ ಒದುವಾಗ ಅಪ್ಪ ನೆನಪಾಗುತ್ತಾನೆ. ನನ್ನಪ್ಪ ನಿಜವಾಗಿ ದೊಡ್ದವ. ಅವನ ಮುಂದೆ ನಾನು ಏನೂ ಅಲ್ಲ.
ಇಂದು ಭಾನುವಾರ ಪ್ರಜಾವಣಿಯನ್ನು ನೋಡುತ್ತಿದ್ದಾಗ ಮತ್ತೆ ಅಪ್ಪ ಎದುರು ಬಂದು ನಿಂತ. ಆಗಲೇ ನಾನು ಕಂಪ್ಯೂಟರ್ ಆನ್ ಮಾಡಿದೆ.

Friday, September 20, 2013

ಇತಿಹಾಸ ಪುರಾಣವಾಗುವ ಬಗೆ; ಐತಿಹಾಸಿಕ ವ್ಯಕ್ತಿಗಳಿಗೆ ಅತಿಮಾನುಷ ಶಕ್ತಿ......

ಇತ್ತೀಚಿನ ದಿನಗಳಲ್ಲಿ ಇತಿಹಾಸ ನನಗೆ  ಹೆಚ್ಚು ಆಕರ್ಷಕ ಅನ್ನಿಸುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಒಂದು ದೇಶವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದೇ ಇತಿಹಾಸ, ಆದರೆ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಹೇಗೆ ? ಒಂದು ದೇಶದ ಇತಿಹಾಸ ಅಂದರೆ ಅದು ಒಂದು ದೇಶದ ಜನ ಜೀವನವನ್ನು ಸಂಸ್ಕೃತಿಯನ್ನು ಬೌಗೋಲಿಕ ವ್ಯಾಪ್ತಿಯನ್ನು, ಹಾಗೂ ಅವರು ಹೇಗೆ ಯೋಚಿಸುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಆಗಿದೆ, ಹೀಗಾಗಿ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದೇ ಬಹುದೊಡ್ದ ಸವಾಲಾಗಿದೆ.
ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ನೈಜ ಮತ್ತು ವಸ್ತು ನಿಷ್ಠ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಪೂರಕ ಸಾಮಗ್ರಿಗಳಿಲ್ಲ. ರಾಮಾಯಣ ಮತ್ತು ಮಹಾಭಾರತದಂತಹ ಮಹಾ ಕಾವ್ಯಗಳು ಒಂದು ಕಾಲ ಘಟ್ಟದ ರಾಜ ಮಹಾರಾಜರ ಕಥೆಗಳನ್ನು ಮಾತ್ರ  ಹೇಳುತ್ತವೆ. ಜೊತೆಗೆ ಮನುಷ್ಯ ಸಂಬಂಧಗಳು, ಅವರು ನಂಬಿದ್ದ ಜೀವನ ಮೌಲ್ಯಗಳ ಬಗ್ಗೆ ಮಾತನಾಡುತ್ತವೆ. ಆದರೆ ಇವು ಯಾವವೂ ಕೂಡ ವೈಚಾರಿಕ ಸಂಘರ್ಷಕ್ಕೆ ಎಡೆ ಮಾಡಿಕೊಡುವುದಿಲ್ಲ. ಜೊತೆಗೆ ಸತ್ಯ ಎಂದುಕೊಂಡಿದ್ದನ್ನು ಪ್ರಶ್ನಿಸುತ್ತ ಮುಖಾಮುಖಿಯಾಗುವುದಿಲ್ಲ.
ನಾವೆಲ್ಲ ಮಹಾಭಾರತ  ರಾಮಾಯಣದಂತಹ ಗ್ರಂಥಗಳನ್ನು ಓದಿ ಬೆಳೆದಿದ್ದೇವೆ. ಈ ಮಹಾ ಕಾವ್ಯಗಳು ನಮ್ಮಂತಹವರ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ಒಹಿಸಿವೆ. ಆದರೆ ರಾಮಾಯಣದಲ್ಲಿ ಅಥವಾ ಮಹಾ ಭಾರತದಲ್ಲಿ ಬರುವ ಪಾತ್ರಗಳು ನಮ್ಮ ಜೊತೆ ಯಾಕೆ ಮುಖಾಮುಖಿಯಾಗುವುದಿಲ್ಲ ? ನಮ್ಮಲ್ಲಿ ಹುಟ್ಟುವ ಪ್ರಶ್ನೆಗಳನ್ನು ಯಾಕೆ ಕೇಳಲು ಸಾಧ್ಯವಾಗುತ್ತಿಲ್ಲ ?
ಇದುಕ್ಕೆ ಬಹುಮುಖ್ಯವಾದ ಕಾರಣ ಈ ಮಹಾನ್ ಕಾವ್ಯಗಳಿಗೆ ಧರ್ಮದ ಲೇಪ ಇರುವುದೇ ಆಗಿದೆ. ರಾಮ ಮತ್ತು ಕೃಷ್ಣ ದೇವರಾಗಿದ್ದರಿಂದ ಅವರ ನಡವಳಿಕೆಯನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ನಮ್ಮ ಪರಂಪರೆ ನೀಡಿಲ್ಲ. ಹೀಗಾಗಿ ರಾಮ ಮರೆಯಲ್ಲಿ ನಿಂತು ವಾಲಿಯನ್ನು ವಧಿಸಿ ನಮ್ಮಂತೆ ಸಾಮಾನ್ಯ ಮನುಷ್ಯನಂತೆ ವರ್ತಿಸಿದರೂ ಅವನ ವರ್ತನೆಗೆ ದೈವತ್ವದ ಆರೋಪ ಮಾಡಿ ಕ್ಷಮಿಸಿ ಬಿಡುತ್ತೇವೆ. ರಾಮ ಎಂಬ ಒಬ್ಬ ರಾಜನ ಹೆಂಡತಿಯನ್ನು ರಾವಣ ಎಂಬ ಇನ್ನೊಬ್ಬ ರಾಜ ಹೊತ್ತೊಯ್ಸ ಘಟನೆಯನ್ನ್ಯು ಒಂದು ರಾಜ್ಯದ ಸಮಸ್ಯೆಯನ್ನಾಗಿ ಪರಿಗಣಿಸಿಬಿಡುತ್ತೇವೆ. ರಾಮ ದೇವರಾದ್ದರಿಂದ ಆತ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಿದ್ದು ಸರಿ. ಆತ ಮನುಷ್ಯನಾಗಿದ್ದರೆ ಆತ ತಪ್ಪಿತಸ್ಥ. ದೈವತ್ವ
ಆದರೆ ರಾಮ ಇದ್ದ ಕಾಲದಲ್ಲಿ ಸಾಮಾನ್ಯ ಜನ ಹೇಗಿದ್ದರು ? ರಾಮ ಸೀತೆಯನ್ನು ಕಳೆದಕೊಂಡ ಘಟನೆಯನ್ನು ಸಾಮಾನ್ಯ್ ಪ್ರಜೆಯೊಬ್ಬ ಸ್ವೀಕರಿಸಿದ ಬಗೆ ಯಾವುದು ಎಂಬ ವಾಲ್ಮೀಕಿ ರಾಮಾಯಣದಲ್ಲಿ ಹೆಚ್ಚಿನ ವಿವರಗಳು ದೊರಕುವುದಿಲ್ಲ. ಹಾಗೆ ಅಂದಿನ ಸಮಾಜದ ಸಂರಚನೆ ಹೇಗಿತ್ತು ? ಈ ಬಗ್ಗೆ ಹೆಚ್ಚಿನ ವಿವರಗಳು ದೊರಕುವುದಿಲ್ಲ.
ಅಂದರೆ ನಾವು ಮಹಾ ಕಾವ್ಯ ಎಂದು ಪರಿಗಣಿಸಿದ ರಾಮಾಯಣ ಮತ್ತು ಮಹಾಭಾರತದಲ್ಲಿ ಸಾಮಾನ್ಯ ಜನರ ಬದುಕಿನ ಬಗ್ಗೆ ಏನೂ ಇಲ್ಲ. ಈ ಎರಡೂ ಮಹಾ ಕಾವ್ಯಗಳು ಸಾಮಾನ್ಯ ಜನರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗೂ ಅವರ ಆಲೋಚನೆಗೆ ವೇದಿಕೆಯಾಗಿಲ್ಲ.
ರಾಮಾಯಣಕ್ಕಿಂತ ಮಹಾ ಭಾರತ ಹೆಚ್ಚು ಪರಿಣಾಮಕಾರಿ. ರಾಮಾಯಣ ಅಂದಿನ ಕಾಲಕ್ಕೆ ಮಾತ್ರವಲ್ಲದೇ ಇಂದಿನ ಕಾಲಕ್ಕೂ ಸಲ್ಲುವ ಕೆಲವು ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುವುದಕ್ಕೆ ಸೀಮಿತವಾಗಿದೆ. ಮಹಾಭಾರತ ಹಾಗಲ್ಲ, ಅದರ ಕ್ಯಾನವಾಸ್ ತುಂಬಾ ದೊಡ್ದದು. ಅದು ಯುದ್ಧದ ಬಗ್ಗೆಯೂ ಮಾತನಾಡುತ್ತದೆ, ಬದುಕಿನ ಬಗ್ಗೆಯೂ ಮಾತನಾಡುತ್ತದೆ. ಹಾಗೆ ರಾಮಾಯಣದ ರಾಮನಂತೆ, ಕೃಷ್ಣ ನೂರಕ್ಕೆ ನೂರರಷ್ಟು ಎಲ್ಲ ಕ್ರಿಯೆಗಳಿಂದಲೂ ದೈವತ್ವದ ಆರೋಪದಿಂದಾಗಿ ಬಚಾವಾಗುವ ದೈವ ನಾಯಕನಲ್ಲ. ಆತ ದೈವತ್ವವನ್ನು ಮೀರಿ ಮನುಷ್ಯನಂತೆ ಹಲವು ಬಾರಿ ವರ್ತಿಸಿ ಟೀಕೆಗೆ ಒಳಗಾಗುತ್ತಾನೆ. ಆತನ ಬಾಲ್ಯದ ಕಳ್ಳತನಕ್ಕೆ, ನಂತರದ ವ್ಯಾಮೋಹಕ್ಕೆ, ಸಾವಿರಾರು ಜನರನ್ನು ಸಾವಿನ ಕೂಪಕ್ಕೆ ತಳ್ಳುವ ಯುದ್ಧಕ್ಕೆ ಆತನ ದೈವತ್ವ ಸಂಪೂರ್ಣ ರಕ್ಶಣೆಯನ್ನು ನೀಡುವುದಿಲ್ಲ. ಹೀಗಾಗಿ ರಾಮನಿಗಿಂತ ಕೃಷ್ಣ ಹೆಚ್ಚು ಹತ್ತಿರದವನಾಗಿ ಕಾಣುತ್ತಾನೆ.
ಈ ಎರಡೂ ಮಹಾಕಾವ್ಯಗಳು ದೈವತ್ವವನ್ನು ಮೀರಿದ್ದರೆ ಅವುಗಳು ನಮ್ಮನ್ನು ಇನ್ನೂ ಹೆಚ್ಚು ವಿಸ್ತೃತವಾದ ಚಿಂತನೆಗಳಿಗೆ ಹಚ್ಚುತ್ತಿದ್ದವು. ಇದನ್ನು ಮೀರಿ ನೋಡುವುದಾದರೆ ರಾಮಾಯಣದ ರಾವಣ ರಾಮಾಯಣದಲ್ಲಿ ಪ್ರತಿಬಿಂಬಿತವಾಗಿದ್ದಕ್ಕಿಂತ ಭಿನ್ನವಾಗಿ ನಮಗೆ ಕಾಣುತ್ತಾನೆ. ಆತನ ಮನಸ್ಸಿನಲ್ಲಿ ತುಂಬಿದ ಪ್ರತಿಕಾರ ಆತನನ್ನು ಇನ್ನೊಬ್ಬರ ಹೆಂಡತಿಯನ್ನು ಎಳೆತರುವುದಕ್ಕೆ ಪ್ರೇರೇಪಿಸಿದ್ದನ್ನು ಬಿಟ್ಟರೆ ಆತ ಜನ ವಿರೋಧಿಯಾದ ಬಗ್ಗೆ ಬೇರೆ ಯಾವ ಸಮರ್ಥನೆಯೂ ದೊರುಕುವುದಿಲ್ಲ. ಜೊತೆಗೆ ರಾಮಾಯಣ ರಾಮ ಮತ್ತು ರಾವಣರ ನಡುವಿನ ವೈಯಕ್ತಿಕ ಧ್ವೇಷದ ಕಥೆಯೇ ಹೊರತೂ ಅದು ಜನ ಸಮುಧಾಯವನ್ನು ಒಳಗೊಂಡ ಕಥಾನಕವಾಗಿ ಬೆಳೆಯುವುದಿಲ್ಲ. ಮಹಾಭಾರತಕ್ಕಿಂತ ರಾಮಾಯಣ ಹಳೆಯದಾಗಿರುವುದು ಇದಕ್ಕೆ ಒಂದು ಕಾರಣವಾದರೆ ಇದನ್ನು ಬರೆದ ವಾಲ್ಮೀಕಿಯೇ ರಾಮನ ಭಕ್ತನಂತೆ ವರ್ತಿಸಿದ್ದು ಕಾರಣವಿರಬಹುದು. ಆತ ರಾಮಾಯಣವನ್ನು ನೋಡಿದ್ದು ರಾಮ ಕಥಾನಕವನ್ನಾಗಿ ಮಾತ್ರ. ಇದು ವಾಲ್ಮೀಕಿ ಮಿತಿ. . ಆತನ ಬದುಕಿನ ಅನುಭವ ವ್ಯಾಸನಿಗಿಂತ ವಿಸ್ತ್ರುತವಾಗಿದ್ದರೂ ಆತ ವಾಲ್ಮೀಕಿಯಾಗ ಬದಲಾಗುವಾಗಲೇ ರಾಮ ಭಕ್ತನಾಗಿಯೂ ಬದಲಾಗ. ಹೀಗಾಗಿ ಕವಿಯಾಗಿ ಎಂದು ಅನ್ನಿಸುತ್ತದೆ. ಹೀಗಾಗಿ ಈ ಮಹಾ ಕಾವ್ಯದಲ್ಲಿ ಆತನೂ ಒಂದು ಪಾತ್ರವಾಗಿ ಸೀತೆಯನ್ನು ತನ್ನ ಆಶ್ರಮದಲ್ಲಿ ಸಲುಹಿ, ಆಕೆಯ ಹೆರಿಗೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತಾನೆ. ಮತ್ತೆ ರಾಮ ಸೀತೆ ಒಂದಾಗುವಂತೆ ನೋಡಿಕೊಳ್ಳುತ್ತಾನೆ. ಆದರೆ ತಾನು ವರಿಸಿ ಮದುವೆಯಾದ ಸೀತೆಯನ್ನು ಕಾಡಿಗೆ ಆಟ್ಟಿದ್ದು ತಪ್ಪು ಎಂದು ರಾಮನಿಗೆ ಹೇಳದೇ ತನ್ನ ರಾಮ ಭಕ್ತಿಯನ್ನು ವಾಲ್ಮೀಕಿ ಪ್ರದರ್ಶಿಸುತ್ತಾನೆ. ಜೊತೆಗೆ ಇಡೀ ರಾಮಾಯಣದಲ್ಲಿ ರಾಮ ಅಗಸನೊಬ್ಬನ ಮಾತು ಕೇಳಿ ಹೆಂಡತಿಯನ್ನು ಕಾಡಿಗಟ್ಟಿದ ಎಂದು ಹೇಳುವ ಮೂಲಕ ಜನ ಸಾಮಾನ್ಯರ ಧ್ವನಿ ಪ್ರಕಟವಾಗುವ ಏಕ ಮೇವ ಘಟನೆಯೂ ಇದಾಗುತ್ತದೆ. ಇದನ್ನು ಬಿಟ್ಟರೆ ಇಡೀ ರಾಮಾಯಣದಲ್ಲಿ ಎಲ್ಲೂ ಜನಸಾಮಾನ್ಯರು ಪಾತ್ರವಾಗುವುದೇ ಇಲ್ಲ. ಉಳಿದಂತೆ ರಾಮ ಕಾಡಿಗೆ ಹೋಗುವಾಗ ಸಾಮೋಹೊಕವಾಗಿ ಅಳುವ ಪ್ರಜೆಗಳು ರಾಮ ತಿರುಗಿ ಬಂದಾಗ ಸಂತೋಷದಿಂದ ನಲಿಯುವುದಕ್ಕೆ ಮಾತ್ರ ಸೀಮಿತವಾಗುತ್ತಾರೆ.\
ನಾನು ಈ ಮಾತುಗಳನ್ನು ಹೇಳುವಾಗ ಒಂದು ವಿಷಯವನ್ನು ಸ್ಪಷ್ತಪಡಿಸಲೇ ಬೇಕು. ಅದು ರಾಮಾಯಣ ಮತ್ತು ಮಹಾಭಾರತವನ್ನು ನೋಡುವ ಬಗೆ. ಅದನ್ನು ಅರ್ಥ ಮಾಡಿಕೊಳ್ಳುವ ರೀತಿ. ಇದೊಂದು ಹಿಂದೂಗಳ ಪವಿತ್ರ ಗ್ರಂಥ ಎಂದುಕೊಂಡು ಪ್ರಾರಂಭಿಸಿದರೆ ಆಗ ಅರ್ಥಮಾಡಿಕೊಳ್ಳುವ ಉಳಿದೆಲ್ಲ ಬಾಗಿಲುಗಳು ಮುಚ್ಚುತ್ತವೆ. ಇದೊಂದು ಮಹಾ  ಕಾವ್ಯ ಎಂದು ಕೊಂಡರೆ ಆಗ ವಿಮರ್ಷೆಯ ಎಲ್ಲ ಮಾನದಂಡಗಳನ್ನು ಅನುಸರಿಸಿ ಈ ಗ್ರಂಥವನ್ನು ನೋಡಬೇಕಾಗುತ್ತದೆ. ಆದರೆ ಬಹುತೇಕ ಭಾರತೀಯರು ಇದನ್ನು ಪುರಾಣ ಎಂದು ಸ್ವೀಕರಿಸಿ ರಾಮನನ್ನು ದೇವರು ಎಂದು ಸ್ವೀಕರಿಸಿಯಾಗಿದೆ. ಹೀಗಾಗಿ ರಾಮಯಣವನ್ನು ವಿಭಿನ್ನ ದೃಷ್ಟಿಯಲ್ಲಿ

ನೋಡಲು ಅವರು ಒಪ್ಪುವುದಿಲ್ಲ.
ನಾನು ಇಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಇತಿಹಾಸ ಎಂದು ಸ್ವೀಕರಿಸಿ ಮಾತನಾಡುತ್ತಿದ್ದ್ಡೇನೆ. ಹೀಗಾಗಿ ಒಂದು ಇತಿಹಾಸವನ್ನು ಹೇಗೆ ನೋಡಬೇಕೋ ಹಾಗೆ ನೋಡಲು ಯತ್ನ ನಡೆಸಿದ್ದೇನೆ. ರಾಮ ಮತ್ತು ರಾವಣ ಇಲ್ಲಿದ್ದರು ಮತ್ತು ಅವರ ನಡುವೆ ಯುದ್ಧ ನಡೆದಿತ್ತು ಎಂಬುದನ್ನು ಒಪ್ಪಿಕೊಂಡು ಮಾತನಾಡುವುದಾದರೆ ಮಹಾಕಾವ್ಯದಲ್ಲಿ ಇರುವ ಭಕ್ತಿ ನಂಬಿಕೆ ಮತ್ತು ಭಕ್ತನೊಬ್ಬ ತನ್ನ ದೇವರ ಬಗ್ಗೆ ಬರೆದುದೆಲ್ಲ ಇತಿಹಾಸವಾಗುವುದಿಲ್ಲ. ಅದು ಕಾವ್ಯವನ್ನು ಬರೆದವನ ಅಭಿಪ್ರಾಯ ನಂಬಿಕೆ ಕೂದ ಎಂಬ ಎಚ್ಚರಿಕೆ ನಮಗೆಲ್ಲ ಇರಬೇಕು. ಆಗ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.
ಮಹಾಭಾರತ ರಾಮಾಯಣಕ್ಕಿಂತ ಹೆಚ್ದಿ ಇತಿಹಾಸಕ್ಕೆ ಹತ್ತಿರವಾಗಿದೆ ಎಂದು ನನಗೆ ಅನ್ನಿಸಿದೆ. ಅದು ಇತಿಹಾಸದ ಮೇಲೆ ಕಟ್ಟಿದ ಮಹಾ ಕಾವ್ಯ. ಹಾಗಂತ ಮಹಾಭಾರತದಲ್ಲಿ ಬಂದಿದ್ದೆಲ್ಲ ನೂರಕ್ಕೆ ನೂರರಷ್ಟು ಸತ್ಯ ಎಂದು ನಾವು ಅಂದುಕೊಳ್ಳಬೇಕಾಗಿಲ್ಲ. ಈಗ ಈ ಮೊದಲು ಪ್ರಸ್ತಾಪಿಸಿದ ಇತಿಹಾಸದ ವಿಚಾರಕ್ಕೆ ನಾನು ಬರುತ್ತೇನೆ. ಭಾರತೀಯ ಇತಿಹಾಸ ಹೀಗೆ ಇತ್ತು ಹೇಳುವ ಸ್ಪಷ್ಟ ಮತ್ತು ನಿಖರ ಮಾಹಿತಿಗಳು ಈಗಲೂ ಲಭ್ಯವಿಲ್ಲ. ಈ ಬಗ್ಗೆ ಸತತ ಸಂಶೋಧನೆ ಕೂಡ ನಡೆದಿಲ್ಲ. ಗುಪ್ತರ ಕಾಲದಿಂದ ಮೈಸೂರು ಸಂಸ್ಥಾನದ ವರೆಗೆ ಇತಿಹಾಸ ಏಕ ಮುಖವಾಗಿದೆ. ನಮ್ಮ ಇತಿಹಾಸಕಾರಲ್ಲಿ    ಎರಡು ಬಗೆಯ ಜನರಿದ್ದಾರೆ. ಕೆಲವರು ನಮ್ಮ ಇತಿಹಾಸವನ್ನು ವೈಭವೀಕರಿಸಿ ಹೇಳುವಂಥವರು. ಇನ್ನೊಂದು ಬಗೆಯ ಇತಿಹಾಸಕಾರರು ಎಡ ಪಂಥೀಯ ಮತ್ತು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಭಾರತೀಯ ಇತಿಹಾಸಕಾರರು.
   ಇವರಲ್ಲಿ ರೋಮಿಲಾ ಥಾಪರ್ ಅಂಥವರು ಪ್ರಮುಖರು.   ಇವರು ಎಂಥವರೆಂದರೆ ಅವರಿಗೆ ಶಂಕರಾಚಾರ್ಯ, ಮಧ್ವಚಾರ್ಯರಂಥವರ ವಿಚಾರಧಾರೆಯ ಮೇಲು ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಯ ಪ್ರಭಾವ ಕಾಣುತ್ತದೆ. ಭಾರತಕ್ಕೆ ಈ ಎರಡು ಧರ್ಮಗಳು ಬಂದಿದ್ದು ಯಾವಾಗ, ಹಿಂದೂ ಧರ್ಮ ಯಾವಾಗಿನಿಂದ ಇದೆ ಎಂಬ ಸಾಮಾನ್ಯ ಜ್ನಾನವೂ ಇಲ್ಲದಂತೆ ಈ ಇತಿಹಾಸಕಾರರು ವರ್ತಿಸುತ್ತಿದ್ದಾರೆ. ಇವರಿಗೆ ಇತಿಹಾಸವನ್ನು ಇತಿಹಾಸವನ್ನಾಗಿ ನೋಡುವುದು ಬೇಕಾಗಿಲ್ಲ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸಂಪೂರ್ಣ ನಿರಾಕರಣೆಯೇ ಇವರ ಮೂಲ ಉದ್ದೇಶ.
ಇನ್ನು ಭಾರತದಲ್ಲಿ ಇರುವುದೆಲ್ಲ ಅದ್ಭುತವಾದುದು ಎಂದು ಹೊರಡುವ ಬಲ ಪಂಥೀಯ ಇತಿಹಾಸಕಾರರು. ಇವರಿಗೂ ಈ ದೇಶದ ಸಾಮಾಜಿಕ ಸಂರಚನೆ ಇಲ್ಲಿರುವ ವೈರುಧ್ಯಗಳು ಮುಖ್ಯವಲ್ಲ. ಇವೂ ಸಹ ಎಲ್ಲವನ್ನೂ ವೈಭವಿಕರಿಸುವ ಮೂರ್ತಿ ಪೂಜಕರು. ಇತಿಹಾಸ ಯಾವುದೇ ಪಂಥದ ಮೇಲೆ ನಿಂತಿರುವುದಲ್ಲ. ಅದು ಕಳೆದುಹೋದ ಸತ್ಯವನ್ನು ಅನಾವರಣಗೊಳಿಸುವ ಕಾಯಕ. ಇಲ್ಲಿ ಬಣ್ಣದ ಕನ್ನಡಕವನ್ನು ಹಾಕಿಕೊಂಡು ನೋಡುವುದು ಸರಿಯಲ್ಲ.
ಇತ್ತೀಚಿನ ಕೆಲವು ಸಂಶೋಧನೆಗಳು ನಮ್ಮ ಇತಿಹಾಸಕಾರರ ಹಳೆಯ ನಂಬಿಕೆಗಳು ಸುಳ್ಲು ಎಂದು ಸಾಬೀತುಪಡಿಸಿವೆ. ಭಾರತದಲ್ಲಿ ಸರಸ್ವತಿ ನದಿ ಇತ್ತು ಎಂಬುದು ಸಾಟ್ ಲೈಟ್ ತಂತ್ರಜ್ನಾನ ಸಾಬೀತುಪಡಿಸಿದೆ. ಎಂದೋ ಬತ್ತಿ ಹೋದ ಈ ನದಿಯ ದಂಡೆಯ ಮೇಲೆ ನೂರಕ್ಕು ಹೆಚ್ಚು ನಾಗರೀಕತೆಗಳು ಇದ್ದವು. ಈ ನಾಗರೀಕತೆಗಳು ಹರಪ್ಪಾ ಮತ್ತು ಮಹಂಜೋದಾರ್ ನಾಗರೀಕತೆಗಿಂತ ಹಿಂದಿನವು. ಹೀಗಾಗಿ ಹರಪ್ಪ ಮತ್ತು ಮಹಂಜೋದಾರ್ ನಾಗರಿಕತೆಯೇ ಅತಿ ಪುರಾತನವಾದ ನಾಗರಿಕತೆ ಎಂಬ ಇತಿಹಾಸಕಾರರ ಪ್ರತಿಪಾದನೆಯನ್ನು  ಅಲ್ಲಗಳೆದಂತಾಗಿದೆ. ಹಾಗೆ ಆರ್ಯರು ಹೊರಗಿನಿಂದ ಭಾರತಕ್ಕೆ ಬಂದವರು ಎಂಬ ವಾದವೂ ಈ ಹೊಸ ಸಂಶೋಧನೆ ಸುಳ್ಳಾಗಿಸಿದೆ. ಯಾಕೆಂದರೆ ಸರಸ್ವನಿ ನದಿಯ ಮೇಲಿನ ನಾಗರೀಕತೆ ಸುಮಾರು ಕ್ರಿಸ್ತಪೂರ್ವ ೧೦,೦೦೦ ವರ್ಷಗಳಷ್ಟು ಹಿಂದಿನವು ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೆ ಡಾ. ಎಸ್ ಆರ್ ರಾವ ನೇತೃತ್ವದಲ್ಲಿ ಧ್ವಾರಕೆಯನ್ನು ಸಮುದ್ರದಾಳದಲ್ಲಿ ಪತ್ತೆ ಮಾಡಿದ್ದು ಮತ್ತೊಂದು ಐತಿಹಾಸಿಕ ಸಾಧನೆ. ಈ ಧ್ವಾರಕೆ ಎಂಬ ನಗರ ಕ್ರಿಸ್ತಪೂರ್ವ ೧೨,೦೦೦ ದಿಂದ ೩೦ ಸಾವಿರ ವರ್ಷಗಳ ಹಿಂದೆ ಎಂಬುದು ಸ್ಪಷ್ಟವಾಗಿದೆ. ಇದು ಭಾರತೀಯ ಇತಿಹಾಸವನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ದದ್ದು ಮಾತ್ರವಲ್ಲ,  ಭಾರತೀಯ ಇತಿಹಾಸದಲ್ಲಿ ಇರುವ ಮಿಥ್ಯೆಯನ್ನು ಬಯಲು ಮಾಡಿದೆ.
ಧ್ವಾರಕೆಯನ್ನು ಪತ್ತೆ ಮಾಡಿದ್ದು ಮಹಾ ಭಾರತ ಕೇವಲ ಕಾವ್ಯವಲ್ಲ ಅದು ಇತಿಹಾಸ ಎಂಬುದನ್ನು ಸಾಭೀತುಪಡಿಸುವುದರ ಜೊತೆಗೆ ಕೃಷ್ಣ ಐತಿಹಾಸಿಕ ವ್ಯಕ್ತಿ ಎಂಬ ಪುಳಕ ನಮಗೆ ಉಂಟಾಗುವಂತೆ ಮಾಡಿದೆ. ಈ ಪುಳಕವನ್ನು ಅನುಭವಿಸುವಾಗಲೇ ಈಗ ನಮ್ಮ ನಡುವೆ ಹಿಮಾಲಯದಂತೆ ಬೆಳೆದ ಕೃಷ್ಣನಿಗೂ ಐತಿಹಾಸಿಕ ಕೃಷ್ಣನಿಗೂ ವ್ಯತ್ಯಾಸ ಇದ್ದಿರಬಹುದು ಎಂಬ ಎಚ್ಚರ ಕೂಡ ನಮಗೆ ಇರಲೇಬೇಕು. ಯಾಕೆಂದರೆ ವ್ಯಕ್ತಿಯೊಬ್ಬ ಕಾಲ  ಕ್ರ‍ಮದಲ್ಲಿ ಸಂಪೂರ್ಣ ದೇವರಾಗಿ ಬೆಳೆದರೆ ಅವನ ಐತಿಹಾಸಿಕ ವ್ಯಕ್ತಿತ್ವ ಸಂಪೂರ್ಣವಾಗಿ ಬದಲಾಗಿರುತ್ತದೆ. ಇತಿಹಾಸ ಎನ್ನುವುದು ವಾಸ್ತವವಾದರೆ ಇತಿಹಾಸ ಪುರಾಣವಾದರೆ ಅದು ಮಾನವಾತೀತವಾದ ಗುಣಧರ್ಮವನ್ನು ಅಳವಡಿಸಿಕೊಂಡು ಬಿಡುತ್ತದೆ. ಹಾಗೆ ಪುರಾಣವಾಗಿ ಬದಲಾದ ಇತಿಹಾಸದಲ್ಲಿ ಬರುವ ವ್ಯಕ್ತಿಗಳು ಅತಿ ಮಾನುಷವಾದ ಶಕ್ತಿಯನ್ನು ಪಡೆದುಕೊಂಡೂ ಬಿಡುತ್ತಾರೆ. ಒಮ್ಮೆ ಹೀಗೆ ಬದಲಾದ ವೈಕ್ತಿಗಳು ಐತಿಹಾಸಿಕ ವ್ಯಕ್ತಿಗಳಾದರೂ ಅವರಿಗೆ ದೈವತ್ವದಿಂದಾಗಿ ದೊರಕಿದ ಅತಿಮಾನುಷ ಶಕ್ತಿ ಅವರನ್ನು ಕಾಲಾತೀತರನಾಗಿ ಮಾಡುಬಿಡುತ್ತದೆ. ಇನ್ನೊಂದು ಮಹತ್ವದ ವಿಷಯವನ್ನು ನಾವು ಮರೆಯುವಂತಿಲ್ಲ. ಇತಿಹಾಸ ಎಲ್ಲ ಕಾಲದಲ್ಲಿ ಸಂತೋಷವನ್ನು ನೀಡುತ್ತದೆ ಎಂದು ಹೇಳಲಾಗುವುದಿಲ್ಲ. ಐತಿಹಾಸಿಕ ವ್ಯಕ್ತಿಗಳು ನಮಗೆ ಇಷ್ಟವಾಗದೇ ಇರಬಹುದು. ಆದರೆ ಅತಿಮಾನುಷ ಶಕ್ತಿಯನ್ನು ಪಡದು ದೈವತ್ವಕ್ಕೆ ಏರಿದ ಐತಿಹಾಸಿಕ ಪಾತ್ರಗಳು ನಮ್ಮ ವಿಶ್ಲೇಷಣೆಯ ಪರಿದಿಯಿಂದ ಹೊರಕ್ಕೆ ಹೋಗಿಬಿಡುತ್ತಾರೆ. ಆದ್ದರಿಂದಲೇ ಪುರಾಣ ನೀಡುವ ಸಂತೋಷವನ್ನು ಇತಿಹಾಸ ನೀಡುವುದಿಲ್ಲ.
ರಾಮಕೃಷ್ಣರು ಹೀಗೆ ಐತಿಹಾಸಿಕ ಪಾತ್ರವಾಗಿದ್ದವರು ಪುರಾಣದ ಪಾತ್ರವಾದವರು. ನಮ್ಮ ವಿಮರ್ಷೆಯ ಪರಿದಿಯಿಂದ ಆಚೆ ಹೋದವರು. ಆದ್ದರಿಂದ ಅವರನ್ನು ಐತಿಹಾಸಿಕ ವ್ಯಕ್ತಿಗಳಾಗಿ ವಿಮರ್ಷಿಸಲು ಪ್ರಾರಂಭಿಸಿದರೆ ಪುರಾಣದ ರಾಮ ಕೃಷ್ಣರು ಎದುರಾಗಿ ಸಮಸ್ಯೆ ಪ್ರಾರಂಭವಾಗುತ್ತದೆ. ಹಾಗೆ ಮಹಾಭಾರತ ಮತ್ತು ರಾಮಾಯಣವನ್ನು ಕಾವ್ಯವನ್ನಾಗಿ ನೋಡಬೇಕೆ ಅಥವಾ ಪುರಾಣವಾಗಿ ನೋಡಬೇಕೇ ಎಂಬುದು. ಪುರಾಣದಲ್ಲಿ ಸಿಗುವ ಪಾತ್ರಗಳೇ ಬೇರೆ, ಪುರಾಣಕ್ಕೆ ಮೂಲವಾದ ಇತಿಹಾಸದ ಪಾತ್ರಗಳೇ ಬೇರೆ. ಇದನ್ನು ಸ್ಪಷ್ಜವಾಗಿ ಅರ್ಥಮಾಡಿಕೊಂಡರೆ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.



Monday, September 2, 2013

ಸೋನಿಯಾ ರೋಗಕ್ಕೆ ವಿದೇಶಿ ಮದ್ದು; ರಾಜಕೀಯಕ್ಕೆ ನವ ಧಾರ್ಮಿಕತೆ ಬೇಕು

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಮತ್ತೆ ಆರೋಗ್ಯ ಕೈ ಕೊಟ್ಟಿದೆ. ಅವರು ತಮ್ಮ ಆರೋಗ್ಯ ತಪಾಸಣೆಗೆ ವಿದೇಶಕ್ಕೆ ಹಾರಿದ್ದಾರೆ, ಅವರಿಗೆ ಆರೋಗ್ಯ ಕೈಕೊಟ್ಟಿದ್ದು ಇದೇ ಮೊದಲಲ್ಲ. ಈ ಮೊದಲು ಆರೋಗ್ಯ ವ್ಯತ್ಯಾಸವಾದಾಗಲೂ ಅವರು ಚಿಕಿತ್ಸೆಗೆ ವಿದೇಶದ ವಿಮಾನ ಹತ್ತಿದ್ದರು. ಆರೋಗ್ಯ ಸರಿಯಾದ ಮೇಲೆ ಭಾರತಕ್ಕೆ ಹಿಂತಿರುಗಿದ್ದರು. ಆದರೆ ಅವರ ಆರೋಗ್ಯಕ್ಕೆ ಏನಾಗಿತ್ತು ? ಅವರಿಗೆ ಆಗಿದ್ದೇನು ಎಂಬುದನ್ನು ಆಗಲೂ ಬಹಿರಂಗಪಡಿಸಿರಲಿಲ್ಲ. ಈಗಲೂ ಅವರಿಗೆ ಆಗಿರುವುದೇನು ಎಂಬ ಬಗ್ಗೆ ಯಾವುದೇ ವಿವರಗಳೂ ಲಭ್ಯವಿಲ್ಲ. ಏನೇ ಇರಲಿ ಅವರ ಆರೋಗ್ಯ ಸುಧಾರಿಸಲಿ, ಅವರು ಆರೋಗ್ಯವಂತರಾಗಿ ದೇಶಕ್ಕೆ ಹಿಂತಿರುಗಲಿ.
ಕಾಂಗ್ರೆಸ್ ಪಕ್ಷಕ್ಕೆ ೧೦೦ ಕ್ಕಿಂತ ಹೆಚ್ಚು  ವಯಸ್ಸಾಗಿದೆ. ಇಂತಹ ಪಕ್ಷದ ಅಧ್ಯಕ್ಷರಿಗೆ ಆರೋಗ್ಯ ಕೆಟ್ಟಿರುವುದು ಆತಂಕದ ವಿಷಯವೇ. ಆದರೆ ಅವರಿಗೆ ಉಂಟಾಗಿರುವ ಆರೋಗ್ಯ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಈ ದೇಶದ ಆರೋಗ್ಯ ವ್ಯವಸ್ಥೆಗೆ ಇಲ್ಲವೆ ? ಇಲ್ಲಿನ ವೈದ್ಯರಿಗೆ ಗುಣಪಡಿಸಲು ಆಗದಂತಹ ಸಮಸ್ಯೆ ಅವರಿಗಾಗಿದೆಯೆ ? ಗೊತ್ತಿಲ್ಲ. ಆದರೆ ಇಲ್ಲಿರುವ ಬಹುಮುಖ್ಯ ಪ್ರಶ್ನೆ ಎಂದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಚಿಕಿತ್ಸೆ ನೀದಲು ಸಾಧ್ಯವಾಗದಂತಹ ಆರೋಗ್ಯ ವ್ಯವಸ್ಥೆ ನಮ್ಮದಾದರೆ ? ಇಲ್ಲಿನ ಸಾಮಾನ್ಯ ಮನುಷ್ಯನ ಗತಿ ಏನು ? ಇದಕ್ಕೆ ಕಾಂಗ್ರೆಸ್ ಪಕ್ಷದ ಹೊಣೆಗಾರಿಕೆ ಉತ್ತರದಾಯಿತ್ವ ಇಲ್ಲವೆ ?
ಈ ದೇಶದ ನೂರಕ್ಕೆ ೯೦ ರಷ್ಟು ಜನರಿಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಶಕ್ತಿ ಇಲ್ಲ. ಅವರು ತಮ್ಮ ಅನಾರೋಗ್ಯಕ್ಕೆ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ದಾದಿಯರ ಸಹಾಯ ಪಡೆಯಬೇಕು, ಇಲ್ಲವೇ ಯಾವುದೋ ನಾಟಿ ವೈದ್ಯರ ಮೊರೆ ಹೋಗಬೇಕು. ಇನ್ನೂ ರೋಗ ಉಲ್ಬಣಗೊಂಡರೆ ಮನೆ ಮಠ ಮಾರಿ ಜಿಲ್ಲಾ ಆಸ್ಪತ್ರೆಗೋ, ಖಾಸಗಿ ಆಸ್ಪತ್ರೆಗೋ ಹೋಗಬೇಕು,. ಇಲ್ಲಿಯೋ ಅವರ ಜೀವ ಸುರಕ್ಷಿತ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಸಾಮಾನ್ಯ ಜನರಿಗೆ ಇಲ್ಲದ ವಿಶೇಷ ಸೌಲಭ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಇದೆ. ಅವರಿಗೆ ಜ್ವರ ಬಂದರೂ ಚಿಕಿತ್ಸೆಗೆ ಅಮೇರಿಕೆಗೆ ಹೋಗಬಹುದು.
ಇಂಥಹ ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಅಧ್ಯಕ್ಷರು ಹಾಗಿದ್ದರೆ ಈ ದೇಶದ ಆರೋಗ್ಯ ವ್ಯವಸ್ಥೆ ಯನ್ನು ನಂಬುವುದಿಲ್ಲ ಎಂದಾದರೆ ಅದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ. ಯಾಕೆಂದರೆ ಈ ದೇಶದಲ್ಲಿ ಏನೇ ಆಗಿರಲಿ, ಅದು ಋಣಾತ್ಮಕವಾಗಿರಲಿ, ಧನಾತ್ಮಕವಾಗಿರಲಿ ಅದರ ಸಂಪೂರ್ಣ ಹೊಣೆ ಕಾಂಗ್ರೆಸ್ ಪಕ್ಷದ್ದೇ. ನೆಹರೂ ಕುಟುಂಬದ್ದೇ. ಯಾಕೆಂದರೆ ಈ ದೇಶವನ್ನು ಬಹುಕಾಲ ಅಳಿದ್ದು, ಆಳುತ್ತಿರುವುದು ಕಾಂಗ್ರೆಸ್ ಪಕ್ಷವೇ. ಇಂದೂ ಸಹ ಆ ಪಕ್ಷ ನೆಹರೂ ಕುಟುಂಬದ ಗುಲಾಮ. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದ ಆತ್ಮ ಮತ್ತು ಜೀವವೇ ನೆಹರೂ ಕುಟುಂಬ   ಈ ಕುಟುಂಬದ ಇಂದಿನ ಯಜಮಾನರಿಗೆ ಈ ದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ನಂಬಿ ಕೆ ಇಲ್ಲ. ಇಲ್ಲಿ ಚಿಕಿತ್ಸೆ ಪಡೆದುಕೊಂಡರೆ ಗುಣವಾಗುತ್ತದೆ ಎಂಬ ನಂಬಿಕೆ ಇಲ್ಲ !
ಇದು ಮನೆಯ ಯಜಮಾನನಿಗೆ ತನ್ನ ಕುಟುಂಬದ ಸಮಸ್ಯರ ಮೇಲೆ ನಂಬಿಕೆ ಇಲ್ಲದ ಸ್ಥಿತಿ.
ಭಾರತದ ವೈದ್ಯಕೀಯ ವ್ಯವಸ್ಥೆಯನ್ನು ಸಾರಾಸಗಟಾಗಿ ತೆಗೆದುಹಾಕುವಂತಿಲ್ಲ. ಇಲ್ಲಿ ಹಣವಿದ್ದ ರೆ ವಿಶ್ವದ ಅತ್ತುಮ ಚಿಕಿತ್ಸೆ ಇಲ್ಲಿ ದೊರೆಯುತ್ತದೆ.  ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಏಷ್ಯಾದ ಮತ್ತು ಆಫ್ರಿಕಾದ ರೋಗಿಗಳು ಭಾರತದತ್ತ ಮುಖಮಾಡುತ್ತಿದ್ದಾರೆ. ಅವರಿಗೆ ಆಮೇರಿಕಾ ಮತ್ತು ಇಂಗ್ಲಂಡಿನಲ್ಲಿ ದೊರಕುವ ಚಿಕಿತ್ಸೆಯೇ ಇಲ್ಲಿ ಕಡಿಮೆ ವೆಚ್ಚದಲ್ಲಿ ದೊರಕುತ್ತಿದೆ. ಭಾರತೀಯರಿಗೆ ಇಲ್ಲಿನ ಹೈಟೆಕ್ ಆಸ್ಪತ್ರೆ ದುಬಾರಿಯನ್ನಿಸಿದರೂ ಅಮೇರಿಕ ಇರೋಪಿಗೆ ಹೋಲಿಸಿದರೆ ಇಲ್ಲಿನ ಚಿಕಿತ್ಸಾ ವೆಚ್ಚ ಕಡಿಮೆಯೇ.
ಇತ್ತೀಚೆಗೆ ಪಾಕಿಸ್ಥಾನದ ರೋಗಿಗಳೂ ಭಾರತಕ್ಕೆ ಬಂದು ನಾರಾಯಣ ಹೃದಯಾಲಯದಂತಹ ವಿಶ್ವ ದರ್ಜೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಉದಾಹರಣೆ ಇದೆ. ಅಂದರೆ ಭಾರತದ ವಿರೋಧವನ್ನು ತಮ್ಮ ಮನಸ್ಸಿನ ಭಾಗವಾಗಿ ಮಾಡಿಕೊಂಡುವರೇ ಹೆಚ್ಚಿರುವ ಪಾಕಿಸ್ಥಾನಿಗಳು ಈ ದೇಶದ ಆರೋಗ್ಯ ವ್ಯವಸ್ಥೆಯನ್ನು, ಇಲ್ಲಿನ ವೈದ್ಯರನ್ನು ನಂಬುತ್ತಾರೆ. ಆದರೆ ನಮ್ಮ ದೇಶದ ಸೋಸೆಗೆ ಆ ನಂಬಿಕೆ ಇಲ್ಲ.
ಸೋನಿಯಾ ಗಾಂಧಿ ಅವರ ಭಾರತ ಪ್ರೇಮವನ್ನು ನಾನು ಪ್ರಶ್ನಿಸುವುದಿಲ್ಲ. ಅವರು ಎಲ್ಲಿಂದಲೂ ಬಂದು ಈ ದೇಶವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ದೇಶವನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ. ಗಂಡ ರಾಜೀವ  ಗಾಂಧಿ ಹತ್ಯೆಯಾದರೂ ಎದೆಗುಂದದೇ ಪಕ್ಷದ ಜವಾಬ್ದಾರಿಯನ್ನು ಹೊತ್ತು ಆ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಹಾಗೆ ತನ್ನ ಮಗ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಪಣತೊಟ್ಟಿದ್ದಾರೆ. ಬೆನ್ನೆಲುಬು ಇಲ್ಲದೇ ನೆಹರೂ ಕುಟುಂಬದ ಗುಲಾಮರೇ ಆಗಿರುವ ಕಾಂಗ್ರೆಸ್ ಹಿರಿಯ ನಾಯಕರೂ ರಾಹುಲ್ ಪಟ್ಟಾಭಿಷೇಕ್ಕೆ ಗರಿ ಗರಿಯಾದ ನೆಹರೂ ಶರ್ಟ್ ತೊಟ್ಟು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆಇಷ್ಟು ವರ್ಷಗಳ ನಂತರವೂ ಸೋನಿಯಾ ಈ ದೇಶದ ಆರೋಗ್ಯ ವ್ಯವಸ್ಥೆಯ್ನ್ನು ನಂಬುತ್ತಿಲ್ಲ. ಅವರ ರೋಗಕ್ಕೆ ವಿದೇಶಿ ಚಿಕಿತ್ಸೆಯೇ ಬೇಕು. ದೇಶದ ಎಲ್ಲ ರೀತಿಯ ಸಮಸ್ಯೆಗಳಿಗೂ ವಿದೇಶಿ ಮಾಧರಿಯೇ ಪರಿಹಾರ ಎಂಬ ನಂಬಿಕೆ
ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಅವರಿಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತದ್ದು ಏನಾಗಿದೆ ಎಂಬುದನ್ನು ಹೇಳಬೇಕಿತ್ತು. ಹಾಗೇ ಬಹಿರಂಗವಾಗಿ ಹೇಳುವುದು ಆ ಪಕ್ಷದ ಕರ್ತವ್ಯವೂ ಆಗಿತ್ತು. ಆದರೆ ಅವರ ಆರೋಗ್ಯದ ಸಮಸ್ಯೆಯನ್ನು ಪಕ್ಷ ಗುಟ್ಟಾಗಿ ಇಟ್ಟಿದೆ. ಒಂದೊಮ್ಮೆ ವಿದೇಶದಲ್ಲಿ ಚಿಕಿತ್ಸೆ ಪಡೆಯದೇ ಬೇರೆ ದಾರಿಯೇ ಇಲ್ಲದಿದ್ದರೆ ಆಗ ಅದನ್ನು ಒಪ್ಪಿಕೊಳ್ಳಬಹುದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಲ್ಲವೂ ಗುಟ್ಟು.
ಸೋನಿಯಾ ಗಾಂಧಿ ಅವರೂ ಸಹ ತಮ್ಮ ಆರೋಗ್ಯಕ್ಕೆ ಈ ದೇಶದಲ್ಲೇ ಚಿಕಿತ್ಸೆ ಪಡೆಯಬಹುದಿತ್ತು. ಈ ದೇಶದ ಸಾಮಾನ್ಯ ನಾಗರಿಕನೊಬ್ಬನಿಗೆ ದೊರಕದ ಸೌಲಭ್ಯ ನನಗೂ ಬೇಡ ಎಂದು ಅವರು ಹೇಳಬಹುದಿತ್ತು. ಈ ದೇಶದ ಸೊಸೆಯಾಗಿ ಬಂದ ನಾನು ಇಲ್ಲಿಯೇ ಬದುಕುತ್ತೇನೆ, ಇಲ್ಲಿಯೇ ಸಾಯುತ್ತೇನೆ ಎಂದು ಹೇಳುವ ಮೂಲಕ ದೇಶದ ಜನರ ಹೃದಯವನ್ನು ಗೆಲ್ಲಬಹುದಿತ್ತು. ಪ್ರಧಾನಿ ಹುದ್ದೆಯಲ್ಲಿ ತಾವು ಕುಳಿತುಕೊಳ್ಳದೇ ಮನಮೋಹನ್ ಸಿಂಗ್ ಅವರನ್ನು ಕೂಡ್ರಿಸಿ ತ್ಯಾಗ ಜೀವಿಯಾದ ಅವರಿಗೆ ಇದೊಂದು ದೊಡ್ಡ ವಿಚಾರವಾಗಿರಲಿಲ್ಲ. ಆದರೆ ಸೋನಿಯಾ ಗಾಂಧಿ ಇಂತಹ ಅವಕಾಶವನ್ನು ಕಳೆದುಕೊಂಡರು.
ಈ ರೀತಿ ಹೇಳಲು ಎರಡರೂ ನೀತಿಯ ಮನಸ್ಥಿತಿ ಬೇಕಾಗುತ್ತದೆ. ಮೊದಲನೇಯದಾಗಿ ನಿಜವಾದ ದೇಶಪ್ರೇಮ ಮತ್ತು ಉತ್ತರದಾಯಿತ್ವ.  ನಾನು ಈ ದೇಶದ ಸಾಮಾನ್ಯ ನಾಗರಿಕಳು. ಕಾಂಗ್ರೆಸ್ ಅಧ್ಯಕ್ಶರಾಗಿದ್ದು ಕಾಕತಾಳೀಯ. ಈ ಹುದ್ದೆಗೆ ಬಂದ ಮೇಲೆ ಹುದ್ದೆಯ ಘನತೆ ಗಾಂಭೀರ್ಯವನ್ನು ಕಾಪಾಡುವುದು ನನ್ನ ಕರ್ತವ್ಯ. ಹೀಗಾಗಿ ದೇಶದ ಸಾಮಾನ್ಯ ನಾಗರಿಕರಿಗೆ ದೊರಕದಿರುವುದು ನನಗೆ ಬೇಡ ಎಂಬ ದೃಢ ನಿರ್ಧಾರದ ಮನಸ್ಸು. ಇಂತಹ ಮನಸ್ಸು ದೇಶ ಮತ್ತು ಸಾಮಾನ್ಯ ಜನರ ಮೇಲಿನ ಪ್ರೀತಿಯಿಂದ ಬರುತ್ತದೆ. ಗಾಂಧೀಜಿಯಂತವರಿಗೆ ಇಂತಹ ಮನಸ್ಸು ದೃಢ ನಿರ್ಧಾರ ಇತ್ತು. ಯಾಕೆಂದರೆ ಅವರ ದೇಶ ಪ್ರೇಮ ಸಾಮಾನ್ಯ ಜನರ ಮೇಲಿನ್ ಪ್ರೀತಿಯಿಂದಲೇ ಬಂದಿದ್ದು.
ಇಂಥಹ ಜನ ಪ್ರಧಾನಿಯಾಗಲೀ ಇನ್ಯಾವುದೇ ಹುದ್ದೆಗೆ ಹೋಗಲಿ ಅದು ತಮ್ಮ ಮತ್ತು ತಮ್ಮ ಕುಟುಂಬದ ಜನ್ಮ ಸಿದ್ಧ ಹಕ್ಕು ಎಂದು ಅಂದುಕೊಳ್ಳುವುದಿಲ್ಲ. ಅವರು ತಾವೊಬ್ಬ ಟ್ರಸ್ಟಿ ಎಂದು ಮಾತ್ರ ಅಂದುಕೊಳ್ಳುತ್ತಾರೆ.
ಸೋನಿಯಾ ಗಾಂಧಿ ಅವರ ಹೆಸರಿನ ಜೊತೆ ಗಾಂಧಿ ಎಂಬ ಸರ್ ನೇಮ್ ಇದ್ದರೂ ಅವರು ಮೋಹನ್ ದಾಸ್ ಕರಮ ಚಂದ್ ಗಾಂಧಿ ಅಲ್ಲ. ಅವರಿಗೆ ಇವರಿಗೆ ಹೋಲಿಕೆ ಮಾಡಲು ಸಾಧ್ಯವೂ ಇಲ್ಲ. ಜೊತೆಗೆ ಮಹಾತ್ಮಾ ಗಾಂಧಿ ಅವರು ಇದ್ದ ಕಾಲದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗೂ ಈಗಿನ ಸ್ಥಿತಿಗೂ ತುಂಬಾ ವ್ಯತ್ಯಾಸ ಇದೆ. ಈಗಿನ ಕಾಂಗ್ರೆಸ್ ಪಕ್ಶಕ್ಕೆ ಹಳೆಯ ಗಾಂಧಿ ಅಲ್ಲ, ಈಗಿನ ಡಿಫರೆಂಟ್ ಗಾಂಧಿಗಳೇ ಬೇಕು ಎಂಬುದು ಸತ್ಯ. ಇವರೆಲ್ಲ ಜಗತೀಕರಣದ ಇಂದಿನ ಸೃಷ್ಟಿಕರ್ತರಾದ ಗಾಂಧಿಗಳು. ಗ್ರಾಮ ಸ್ವರಾಜ್ಯ ಸ್ವದೇಶಿ ಚಳವಳಿಯ ಮಾತನಾಡಿದ ಗಾಂಧಿ ಅಲ್ಲ.
ಇಂಥಹ ನಿರ್ಧಾರ ಕೈಗೊಳ್ಳಲು ಬೇಕಾದ ಇನ್ನೊಂದು ರೀತಿಯ ಮನಸ್ಥಿತಿ ಎಂದರೆ ರಾಜಕೀಯ ಲಾಭವನ್ನೇ ಗಣನೆಗೆ ತೆಗೆದುಕೊಂಡೂ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವುದು. ಸೋನಿಯಾ ಗಾಂಧಿ ಅವರು ಎರಡನೇಯ ಮನಸ್ಥಿಯಂತೆ, ನಾನು ಇಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಘೋಷಿಸಿದ್ದರೆ ದೇಶದ ಜನ ಅವರ ದೇಶ ಪ್ರೇಮಕ್ಕೆ  ಹೌದು ಹೌದು ಎಂದು ತಲೆ ತೂಗುತ್ತಿದ್ದರು. ಇದು ಅವರ ಮಗನನ್ನು ಪ್ರಧಾನಿಯನ್ನಾಗಿ ಮಾಡುವ ಯತ್ನಕ್ಕೆ ಸಹಾಯವನ್ನು ಒದಗಿಸುತ್ತಿತ್ತು. ಆದರೆ ಸೋನಿಯಾ ಹಾಗೆ ಮಾಡಲಿಲ್ಲ. ಅವರು ತಮ್ಮ  ರೋಗಕ್ಕೆ ವಿದೇಶಿ ಮದ್ದು ಪಡೆಯುವ ದೃಡ ನಿರ್ಧಾರ ಮಾಡಿದ್ದರು. ನಮ್ಮೆಲ್ಲರಂತೆ ಅವರಲ್ಲಿಯೂ ಇರಬಹುದಾದ ಬದುಕುವ ಆಸೆ ಮತ್ತು ಜೀವ ಭಯಕ್ಕೆ ವಿದೇಶದ ಪರಿಹಾರವನ್ನೇ ಆಯ್ಕೆ ಮಾಡಿಕೊಂಡರು. ಹೀಗಾಗಿ ಅವರು ಮಹಾನ್ ದೇಶಪ್ರೇಮಿಯೂ ಅಗಲಿಲ್ಲ, ಇತ್ತ ಚಾಣಾಕ್ಷ ರಾಜಕಾರಣಿಯೂ ಆಗಲಿಲ್ಲ. ತಮ್ಮ ಎದುರಿಗೆ ಇದ್ದ ಅದ್ಬುತ ಅವಕಾಶವನ್ನು ಅವರು ಕಳೆದುಕೊಂಡರು.
ಯಾರೇ ಆಗಲಿ ಒಂದು ದೇಶವನ್ನುಆರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಭಾರತ ಎಂದರೇನು ಎಂದು ಕೇಳಿದರೆ ಏನು ಹೇಳುತ್ತೀರಿ ? ರಾಜ್ಯಗಳ ಲೆಕ್ಕವನ್ನು ಹೇಳುತ್ತೀರಾ ? ಎಲ್ಲೆಲ್ಲಿ ಗಡಿ ಇದೆ ಎಂದು ಹೇಳಿತ್ತೀರಾ ? ಹಾಗೆ ಹೇಳಿದರೆ ದೇಶವನ್ನು ಹೇಳಿದಂತಾಯಿತೆ ? ದೇಶ ಎನ್ನುವುದು ಕೇವಲ ಬೌಗೋಲಿಕ ವಿವರಗಳಲ್ಲ. ಹಾಗೆ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂದ ದೇಶವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಜೊತೆಗೆ ಒಂದು ದೇಶಕ್ಕೆ ಒಂದು ಮನಸ್ಸು ಎಂಬುದು ಇರುತ್ತದೆ. ಈ ಮನಸ್ಸು ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ, ನಂಬಿಕೆ, ಧರ್ಮ ಆಚಾರ ಮೊದಲಾದ ಅಂಶಗಳ ಆಧಾರದ ಮೇಲೆ ರೂಪಗೊಂಡಿರುತ್ತದೆ. ಭಾರತೀಯ ಮನಸ್ಸು ಎಂದರೆ ಅಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯ ರಾಮಾನುಜಾಚಾರ್ಯ, ಮಹಾವೀರ ಗೌತಮ ಬುದ್ಧ, ಸೂಪಿ ಸಂತರು, ಬಸವಣ್ಣ ಕಬೀರ ಎಲ್ಲರೂ ಇದ್ದಾರೆ. ಇವರೆಲ್ಲ ದೇಹವನ್ನಲ್ಲ ನಮ್ಮ ಮನಸ್ಸುಗಳನ್ನು ರೂಪಿಸಿದ್ದಾರೆ. ಬುದ್ದಿಗಿಂತ ಹೃದಯವಂತಿಕೆ ಮತ್ತು ಹೃದಯದ ಮೂಲಕವೇ ವಿಚಾರ ಮಾಡುವ ಪರಂಪರೆಯೊಂದನ್ನು ಬೆಳೆಸಿದ್ದಾರೆ. ಭಾರತೀಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದೇ ಆಗಿದೆ.
ಆದರೆ ವಿದೇಶಿ ಮನಸ್ಸುಗಳು ಇಂತಹ ವಾತಾವರಣದಲ್ಲಿ ರೂಪಗೊಂಡಿಲ್ಲ. ಬಹುಮಟ್ಟಿಗೆ ಅದು ವೈಜ್ನಾನಿಕ ಮನಸ್ಥಿತಿ ಅವರದು. ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ

ತಂದು ನಿಲ್ಲಿಸುವುದು ವಿದೇಶಿ ಜಾಯಮಾನ. ಅಲ್ಲಿ ಹೃದಯಕ್ಕೆ ಯಾವ ಕೆಲಸವೂ ಇರುವುದಿಲ್ಲ.
ನಮ್ಮ ಇವತ್ತಿನ ರಾಜಕಾರಣಿಗಳ ಬಹುಮುಖ್ಯ ಸಮಸ್ಯೆ ಎಂದರೆ ಅವರಿಗೆ ಧರ್ಮ ಎನ್ನುವುದು ಕೇವಲ ಮತ ಪಡೆಯುವ ಒಂದು ಆಯುಧ ಮಾತ್ರ. ಕೆಲವರು ಹಿಂದೂ ಧರ್ಮದ ಶ್ರೇಷ್ಥತೆಯ ಬಗ್ಗೆ ಮಾತನಾಡುತ್ತ ಮತ ಪಡೆಯುವವರಾದರೆ, ಇನ್ನೂ ಕೆಲವರು ಜಾತ್ಯತೀತ ತತ್ವದ ಬಗ್ಗೆ ಮಾತನಾಡುತ್ತ ಮತ ಪಡೆಯುವವರು. ಇವರಿಗೆ ಧರ್ಮ ಮತ್ತು ಧಾರ್ಮಿಕತೆಯ ನಡುವಿನ ವ್ಯತ್ಯಾಸವಾಗಲೀ, ವಿಭಿನ್ನವಾದ ಆಧ್ಯಾತ್ಮಿಕತೆ ಅರಿವಾಗಲಿ ಇಲ್ಲ. ರಾಜಕಾರಣಕ್ಕೂ ಧರ್ಮಕ್ಕೂ ಸಂಬಂಧ ಇಲ್ಲದಿದ್ದರೂ ಧಾರ್ಮಿಕತೆ ಇಲ್ಲದ ರಾಜಕಾರಣಕ್ಕೆ ಅಸ್ಥಿತ್ವ ಇಲ್ಲ. ರಾಜಕಾರಣಕ್ಕೆ ಒಂದು ಧಾರ್ಮಿಕತೆ ಬೇಕು. ಅದು ಇಂದಿನ ಆಧುನಿಕ ಬದುಕಿಗೆ ಸಹ್ಯವಾಗುವ, ಆಧುನಿಕ ಮನಸ್ಸುಗಳೂ ಒಪ್ಪಿಕೊಳ್ಳುವ ನವ ಧಾರ್ಮಿಕತೆ. ಇಲ್ಲಿ ವೈಜ್ಜಾನಿಕ ಮನೋಭಾವನೆಯ ಜೊತೆ ಹೃದಯ ಮತ್ತು ಮನಸ್ಸುಗಳು ಒಂದಾಗುವ ಧಾರ್ಮಿಕತೆ. ಇಂತಹ ಧಾರ್ಮಿಕತೆ ದೇಶದ ಇತಿಹಾಸ ಮತ್ತು ಪರಂಪರೆಯನ್ನು ಬಿಟ್ಟು ರೂಪಗೊಳ್ಳುವುದು ಸಾಧ್ಯವಿಲ್ಲ.
ಭಾರತೀಯತೆ ಅಂದರೆ ಅದೇ. ಅಲ್ಲಿ ಕೇವಲ ಬುದ್ದಿಯಲ್ಲ. ಹೃದಯವೂ ಮಾತನಾಡುತ್ತದೆ. ಕೆಲವೊಮ್ಮೆ ಬುದ್ದಿಗಿಂತ ಮನಸ್ಸೇ ಮುಖ್ಯವಾಗುತ್ತದೆ.
ಇದನ್ನು ನಮ್ಮ ರಾಜಕೀಯ ಮತ್ತು ರಾಜಕೀಯ ನಾಯಕರು ಅರಿಯದಿದ್ದರೆ ನಮಗೆ ಉಳಿಗಾಲ ಇಲ್ಲ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...