Monday, September 30, 2013

ಭಾರತದಲ್ಲೇ ಗಾಂಧೀಜಿ ಅನಾಥರಾಗಿದ್ದಾರೆ......!

ಪ್ರೀತಿ ಇರುವಲ್ಲೇ ಬದುಕಿದೆ- ಮಹಾತ್ಮಾ ಗಾಂಧಿ



ಆತ್ಮ ವಿಶ್ವಾಸದ ಮಾತುಗಳು,
ಮೋಹನ ದಾಸ್ ಕರಮಚಂದ್ ಗಾಂಧಿ ಎಂದರೆ ಹೆಚ್ಚಿನ ಜನರಿಗೆ ಅರ್ಥವಾಗದ ಮಹತ್ಮಾ ಗಾಂಧಿ ನನ್ನ ಒಳಗೆ ಹೇಗೆ ಬಂದು ಪ್ರತಿಷ್ಠಾಪಿಸಿ ಬಿಟ್ಟ ಎಂದು ಈಗ ಯೋಚಿಸುತ್ತಿದ್ದೇನೆ. ಹೀಗೆ ಯೋಚಿಸುವಾಗ  ನನಗೆ ಮೊದಲು ನೆನಪಾಗುವುದು ಗಾಂಧಿ ಟೋಪಿ. ಮಹತ್ಮಾ ಗಾಂಧಿ ತಮ್ಮ ಬದುಕಿನ ಕೊನೆಯ ವರ್ಷಗಳಲ್ಲಿ ಟೋಪಿ ಹಾಕಿಕೊಳ್ಳುವುದು ಕಡಿಮೆಯಾಗಿತ್ತು. ಯಾಕೆಂದರೆ ಗಾಂಧಿಯವರ ಸುತ್ತ ಇದ್ದ ಕಾಂಗ್ರೆಸ್ಸಿಗರು ಟೋಫಿಯನ್ನು ಕಸಿದುಕೊಂಡಿದ್ದರು. ಗಾಂಧಿ ಟೋಪಿಯನ್ನು ಮೋಸ ಮತ್ತು ವಂಚನೆಯ ಸಂಕೇತವಾಗಿ ಮಾಡಿದವರು ಕಾಂಗ್ರೆಸ್ಸಿಗರು.
ಈ ಮಾತುಗಳನ್ನು ಯಾರು ವಿರೋಧಿಸಲು ಸಾಧ್ಯ ?
ನಾನು ಈ ಜಗತ್ತಿಗೆ ಕಣ್ಣು ಬಿಡುವಾಗಲೇ ನಮ್ಮ ಮನೆಯ ಗಂಡಸರ ತಲೆಯ ಮೇಲೆ ಗಾಂಧಿ ತೋಪಿ ಇತ್ತು. ಹಾಗೆ ಮನೆಯ ವರಾಂಡಾದಲ್ಲಿ ಮಹತ್ಮರ ಫೋ ಟೋವನ್ನು ಹಾಕಲಾಗಿತ್ತು. ನಮ್ಮ ಮೂಲ ಮನೆಯ ಗೋಡೆಯ ಮೇಲೆ ನೇತಾಡುವ ಮಹಾತ್ಮರ ಫೋಟೋಗಳಲ್ಲಿ   ಮೊದಲನೆಯದು ರಾಮಕೃಷ್ನ ಪರಮಹಂಸರದು. ಇದಾದ ಮೇಲೆ ಶಿವಾಜಿ, ಮಹಾರಾಣಾ ಪ್ರತಾಪಸಿಂಹ, ವಿವೇಕಾನಂದ ಹೀಗೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಗ್ಲಾಸು ಹಾಕಿಸಿ ಇಟ್ಟ  ಫೋ ಟೋಗಳಲ್ಲಿ ಇಂಡಿರಾ ಗಾಂಧಿ, ಜವಾಹರಲಾಲ್ ನೆಹರೂ ಅವರ ಜೊತೆ ಮಹಾತ್ಮಾ ಗಾಂಧಿ ಅವರ  ಫೋಟೋ. ಗಾಂಧೀಜಿಯವರ ಸಣ್ಣವನಿದ್ದಾಗಲೇ ನಾನು ನೋಡಿದ ಈ  ಫೋಟೋದಲ್ಲಿ ಟೋಪಿ ಇರಲಿಲ್ಲ. ಅವರು ಕಣ್ಣು ಮುಚ್ಚಿ ಕುಳಿತ  ಫೋ
ಟೋ ಅದು. ಆದರೆ ನೆಹರೂ ತಲೆಯ ಮೇಲೆ ಮಾತ್ರ ಗರಿ ಗರಿಯಾದ ಟೋಪಿ.
ನನ್ನ ಅಜ್ಜ ತಲೆಯ ಮೇಲೆ ಟೋಪಿ ಹಾಕಿಕೊಳ್ಳುತ್ತಿದ್ದ. ಆದರೆ ಅವನ ತಲೆಯ ಮೇಲಿನ ಟೋಪಿ ಗರಿ ಗರಿಯಾಗಿ ಇರುತ್ತಿರಲಿಲ್ಲ. ಅದು ಅವನ ಹಣೆಯನ್ನು ದಾಟಿ ಹುಬ್ಬಿನ ಬಳಿ ಬಂದು ಕುಳಿತುಕೊಳ್ಳುತ್ತಿತ್ತು. ಹೀಗಾಗಿ ಅವನಿಗೆ ಹಣೆ ಇದೆ ಎಂಬುದು ನನಗೆ ಗ್ಯಾರಂಟಿಯಾಗಲು ಹಲವು ವರ್ಷಗಳೇ ಬೇಕಾದವು. ನನ್ನ ಅಜ್ಜ ಸ್ವಾತಂತ್ರ್ಯ ಸೇನಾನಿ. 1942 ರ ಕರ ನಿರಾಕರಣ ಚಳವಳಿಯಲ್ಲಿ ಪಾಲ್ಗೊಂಡು ಜೈಲು ವಾಸ ಅನುಭವಿಸಿದವ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಮನೆ ಮಠ ಕಳೆದುಕೊಂಡವ. ಕಟ್ಟಾ ಕಾಂಗ್ರೆಸಿಗನಾದ ಅವನಿಗೆ ಗಾಂಧೀಜಿಯ ಬಗ್ಗೆ ಅಂತಹ ಪ್ರೀತಿ ಇರಲಿಲ್ಲ. ನನ್ನ ಅಜ್ಜನ ಗುಣವೇ ಗಾಂಧಿ ತತ್ವಗಳಿಗೆ ವಿರೋಧವಾದುದು. ಆತನಿಗೆ ಜಗಳ ಮಾಡುವುದು ಅಂದರೆ ತುಂಬಾ ಇಷ್ಟ. ಅಕ್ಕ ಪಕ್ಕದ ಮನೆಯವರೋ ಊರಿನವರೋ ಯಾರೂ ಸಿಗದಿದ್ದರೆ ಮನೆಯವರ ಜೊತೆ ಮಕ್ಕಳ ಜೊತೆ ಜಗಳ ಪ್ರಾರಂಭಿಸಿ ಬಿಡುತ್ತಿದ್ದ. ಜಗಳ ವಿಲ್ಲದಿದ್ದರೆ ಅದು ಬದುಕೇ ಅಲ್ಲ ಎಂಬುದು ಅವನ ನಂಬಿಕೆ. ಹೀಗಾಗಿ ಶಾಂತಿ ಸಹನೆ ಬೋಧಿಸುತ್ತಿದ್ದ ಗಾಂಧಿ ಅವನಿಗೆ ಇಷ್ಟವಾಗುತ್ತಿರಲಿಲ್ಲ.
ಬದಲಾವಣೆಯ ಕನಸುಗಾರ
ನಾನು ಹುಟ್ಟುವ ಹೊತ್ತಿಗೆ ಗಾಂಧಿ ಯುಗ ಮುಗಿದು ನೆಹರೂ ಯುಗ ಮುಗಿದು ಇಂದಿರಾ ಯುಗ ಪ್ರಾರಂಭವಾಗಿತ್ತು. ಆಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಾಶನ ನೀಡಿದ್ದರು. ಅಜ್ಜನಿಗೆ ತಾಮ್ರ ಪತ್ರದ ಪ್ರಶಸ್ತಿಯೂ ಸಿಕ್ಕಿತ್ತು. ಹೀಗಾಗಿ ಅವನಿಗೆ ಇಂದಿರಾ ಗಾಂಧಿಯವರ ಮೇಲೆ ಅಪಾರ ಅಭಿಮಾನ. ಅವನು ಮಾತನಾಡುವಾಗಲೆಲ್ಲ ಮಹಾತ್ಮಾ ಗಾಂಧಿಯವರನ್ನು ಒಮ್ಮೆ ಬೈದು ಇಂದಿರಾ ಗಾಂಧಿ ಅವರನ್ನು ಒಮ್ಮೆ ಹೊಗಳಿ ಸುಮ್ಮನಾಗುತ್ತಿದ್ದ.  ನಾನು ದೊಡ್ಡವನಾಗುವ ಹೊತ್ತಿಗೆ ತುರ್ತು ಪರಿಸ್ಥಿತಿಯ ದಿನಗಳು ಮುಗಿದಿದ್ದವು. ಜೊತೆಗೆ ನನ್ನ ಮೇಲೆ ಪ್ರಭಾವ ಬೀರಿದ ಬಂಡಾಯ ಚಳವಳಿ ಮೈತು ರೈತ ಚಳವಳಿ ವ್ಯಕಿ ಪೂಜೆಯನ್ನು ಸರ್ವಾಧಿಕಾರಿ ಮನಸ್ಥಿತಿಯನ್ನು ವಿರೋಧಿಸುವಂತೆ ಮಾಡಿತ್ತು. ಜೊತೆಗೆ ಲೋಹಿಯಾ ಅವರ ಬರೆಹಗಳು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರಿಂದ ನಾನು ಇಂದಿರಾ ಗಾಂಧಿಯವರನ್ನು ಪ್ರಬಲವಾಗಿ ವಿರೋಧಿಸುತ್ತಿದ್ದೆ. ಈ ವಿಚಾರವಾಗಿ ನನ್ನ ಮತ್ತು ಅಜ್ಜನ ನಡುವೆ ಘೋರ ಯುದ್ಧವೇ ನಡೆದು ಬಿಡುತ್ತಿತ್ತು.
ಇಂದಿರಾ ಗಾಂಧಿ ಇಲ್ಲದಿದ್ದರೆ ನಾವೆಲ್ಲ ಭೀಕ್ಷೆ ಬೇಡಿ ಬದಕಬೇಕಿತ್ತು ತಿಳ್ಕ ಎಂದು ಹೇಳುತ್ತಿದ್ದ ಅಜ್ಜ ಇಂದಿರಾ ವಿರೋಧಿಯಾದ ನನಗೆ ಮನೆ ಬಿಟ್ಟು ಹೋಗು ಎಂದು ಹಲವು ಬಾರಿ ಹೇಳಿದ್ದ. ಇಂತಹ ಕುರುಕ್ಷೇತ್ರ ಯುದ್ಧ ನಡೆಯುತ್ತಿದ್ದಾಗ ಮನೆಯ ಹೆಂಗಸರು ಮಧ್ಯ ಪ್ರವೇಶ ಮಾಡಿ ನನ್ನನ್ನು ಸಮಾಧಾನ ಮಾಡಿ ಒಳಗೆ ಕರೆದುಕೊಂಡು ಹೋಗುತ್ತಿದ್ದರು. ವಿಚಿತ್ರ ಸಿಟ್ಟು ಜಗಳ ಹೋರಾಟದ ಮನೋಭಾವದ ಅಜ್ಜ ಗಾಂಧಿಜಿಯವರನ್ನ್ ವಿರೋಧಿಸುತ್ತಿದ್ದ ಕಾರಣದಿಂದಲೇ ನಾನು ಗಾಂಧಿಜಿಯವ ಬಗ್ಗೆ ಓದಲು ಪ್ರಾರಂಭಿಸಿದೆ. ಜ್Éತೆಗೆ ಖಾದಿ ನಮ್ಮ ಮನೆಯ ಅಡಿಕೃತ ವಸ್ತ್ರವಾಗಿತ್ತು. ಅಜ್ಜ ಮತ್ತು ಅಪ್ಪ ಖಾದಿಯನ್ನು ಬಿಟ್ಟು ಬೇರೆ ಬಟ್ಟೆಯನ್ನು ಧರಿಸುತ್ತಿರಲಿಲ್ಲ.
ಅಪ್ಪನೂ ಅಜ್ಜನಂತೆ ತಲೆಯ ಮೇಲೆ ಟೋಫಿ ಹಾಕಿಕೊಳ್ಳುತ್ತಿದ್ದ. ಆದರೆ ಅಪ್ಪನ ಟೋಪಿಯ ಮಧ್ಯದ ಗೆರೆ ಎಂದು ಅಳಿಸುತ್ತಿರಲಿಲ್ಲ. ಅವನ ಬಳಿ ಇದ್ದ ಹತ್ತಾರು ನೆಹರೂ ಜುಬ್ಬಾ ಮತ್ತು ಪಂಜೆಯನ್ನು ದೋಬಿಯ ಬಳಿ ತೊಳೆಸಿ ಅದಕ್ಕೆ ಗಂಜಿ ಹಾಕಿ ಇಸ್ತ್ರಿ ಇರುವಂತೆ ನೋಡಿಕೊಳ್ಳುತ್ತಿದ್ದ ಅಪ್ಪ. ಅವನ ಬಟ್ಟೆಯ ಇಸ್ತ್ರೀ ಎಂದೂ ಅಳಿಸುತ್ತಿರಲಿಲ್ಲ. ಎಂದೂ ಗರಿಗರಿಯಾಗಿ ಇರುತ್ತಿತ್ತು ಅವನ ಖಾದಿ ಬಟ್ಟೆ. ಜೊತೆಗೆ ಅಪ್ಪ ಬಿಳಿಯ ಬಣ್ಣದ ಖಾದಿ ಬಿಟ್ಟು ಬೇರೆ ಹಾಕಿಕೊಂಡವನಲ್ಲ. ಆದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಬಂದ ಮೇಲೆ ಅಪ್ಪ ಟೋಪಿಯನ್ನು ಹಾಕಿಕೊಳ್ಳುವುದನ್ನು ನಿಲ್ಲಿಸಿಬಿಟ್ಟ. ಆದರೆ ಖಾದಿಯನ್ನು ಮಾತ್ರ ಬಿಡಲಿಲ್ಲ.
ಇಂಗ್ಲೀಷ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದ ಅಪ್ಪ ಎಂದೂ ಗಾಂಧಿಯ ಬಗ್ಗೆ ಮಾತನಾಡಲಿಲ್ಲ. ಅವನಿಗೂ ಗಾಂಧಿ ಎಂದರೆ ಇಂದಿರಾ ಗಾಂಧಿ ಮಾತ್ರವೇ. ಇವರ ಈ ದಿವ್ಯ ಮೌನದಿಂದಾಗಿಯೇ ನಾನು ಗಾಂಧಿಯ ಬಗ್ಗೆ ಹೆಚ್ಚು ಆಸಕ್ತನಾದೆ. ಅವರತ್ತ ಆಕರ್ಷಿತನಾದೆ. ನಾನು ಕಾಲೇಜಿಗೆ ಹೋಗುವಾಗಲೂ ಅಪ್ಪ ನನಗೆ ಖಾದಿ ಪ್ಯಾಂಟು ಮತ್ತು ಶರ್ಟನ್ನೇ ಕೊಡಿಸಿದ್ದ. ಬಹುಶಃ ಖಾಲಿಜೆಗೆ ಖಾದಿ ಹಾಕಿಕೊಂಡು ಹೋಗುತ್ತಿದ್ದವ ನಾನೊಬ್ಬನೇ.
ನಾನು ಎಂದೂ ಗಾಂಧಿ ಆರಾಧಕನಾಗಲಿಲ್ಲ. ನಾನು ಆರಾಧನೆ ಮತ್ತು ಅಭಿಮಾನದ ವಿರೋಧಿ. ನಾವು ಯಾರನ್ನಾದರೂ ಆರಾಧಿಸಲು ಪ್ರಾರಂಭಿಸಿದ ತಕ್ಷಣ ಅವರನ್ನು ಅರ್ಥ ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇವೆ. ಗಾಂಧಿಜಿಯವರ ಹಲವಾರು ವಿಚಾರಗಳ ಬಗ್ಗೆ ನನಗೆ ಸಹಮತ ಇಲ್ಲದಿದ್ದರೂ ಅವರ ನಂಬಿಕೆಯಲ್ಲಿನ ಪ್ರಾಮಾಣಿಕತೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡ ಕೆಲವೇ ಕೆಲವು ಜನರಲ್ಲಿ ಗಾಂಧೀಜಿ ಕೂಡ ಒಬ್ಬರು. ಅವರ ಗ್ರಾಮ ಸ್ವರಾಜ್, ಅಹಿಂಸೆ ಮತ್ತು ಸತ್ಯ ನನಗೆ ಎಂದೂ ಆದರ್ಶಪಾಯ. ತಮ್ಮ ಬದುಕನ್ನು ಪ್ರಯೋಗಶಾಲೆ ಎಂದುಕೊಂಡ ಗಾಂಢಿಜಿಯವರಲ್ಲೂ ಪ್ರಯೋಗಶೀಲತೆ ಬದುಕಿನ ಭಾಗವಾಗಿ  ಬಂದಿರಲಿಲ್ಲ. ಅದಕ್ಕಿಂತ ಅವರಿಗೆ ಹಿಡಿದಿದ್ದ ಬ್ರಹ್ಮಚರ್ಯದ ಹುಚ್ಚು. ತಾವು ಭ್ರಹ್ಮಚಾರಿಯಾಗಿ ಇರಲು ಯತ್ನಿಸುತ್ತಿದ್ದ ಅವರು ಎಲ್ಲರ ಮೇಲೂ ಅದನ್ನು ಹೇರುತ್ತಿದ್ದರು. ಇಂತಹ ಕೆಲವು ನಂಬಿಕೆಗಳು ಗಾಂಧೀಜಿಯವರ ಬದುಕಿನ ಕಪ್ಪು ಚುಕ್ಕೆಗಳು.
ಎಪ್ಪತ್ತರ ದಶಕದಲ್ಲಿ ದೇಶದಲ್ಲಿ ಸಂಪೂರ್ಣ P್ಫ್ರಂತಿಯ ಕಹಳೆ ಊದಿ ಎರಡನೆಚಿiÀು ಸ್ವಾತಂತ್ರ್ಯ ಹೋರಾಟದ ಮುಂಚೋಣಿಯಲ್ಲಿದ್ದ ಜಯಪ್ರಕಾಶ್ ನಾರಾಯಣ್ ಅವರೂ ಗಾಂಧೀಜಿಯವರ ಸಾಮಿಪ್ಯವನ್ನು ಪಡೆದಿದ್ದವರು. ಜಯಪ್ರಕಾಶ್ ನಾರಾಯಣ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಇ ವಿದೇಶಕ್ಕೆ ಹೋದಾಗ ಜಯಪ್ರಕಾಶ ಅವರ ಪತ್ನಿ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲೇ ಉಳಿದುಕೊಳ್ಳುತ್ತಾರೆ. ಗಾಂಧೀಜಿ ಅವರಿಗೆ ಬ್ರಹ್ಮಚರ್ಯೆಯನ್ನು ಬೋಧಿಸುತ್ತಾರೆ. ಜಯಪ್ರಕಾಶರು ವಿದೇಶದಿಂದ ಹಿಂತಿರುಗಿ ತಮ್ಮ ಹೆಂಡತಿಯನ್ನು ನೋಡಲು ಆಶ್ರಮಕ್ಕೆ ಬಂದಾಗ ಅವರನ್ನು ಪ್ರೀತಿಯಿಂದ ಬರ ಮಾಡಿಕೊಳುವ ಮಹಾತ್ಮಾ ಗಾಂಧಿ ಬ್ರಹ್ಮಚರ್ಯೆಯನ್ನು ಮುಂದುವರಿಸುವಂತೆ ಸೂಚನೆ ನೀಡಲು ಮರೆಯುವುದಿಲ್ಲ.  ಹೊಸದಾಗಿ ಮದುವೆಯಾಗಿ ಮಧುಚಂದ್ರವನ್ನು ನಡೆಸದ ಯುವ ದಂಪತಿಗಳಿಗೆ ಇಂತಹ ಸಲಹೆ ನೀಡುವುದು ಜೀವ ವಿರೋಧಿ ಎಂದು ಗಾಂಧೀಜಿಯವರಿಗೆ ಅನ್ನಿಸುವುದಿಲ್ಲ.
ಗಾಂಧೀಜಿಯವರ ನಂಬಿಕೆಯ ನಿಷ್ಟೆ ಅಂತಹದು. ಆ ವಿಚಾರದಲ್ಲಿ ಅವರು ಕಠೋರ ಹೃದಯಿ. ಗಾಂಧೀಜಿ ಇಂದಿನ ಅರ್ಥದಲ್ಲಿ ರಾಜಕಾರಣಿ ಅಲ್ಲ. ಆದರೆ ಅವರೂ ರಾಜಕಾರಣಿಯೇ. ಅದು ತಮ್ಮ ಗುರಿಯನ್ನು ತಲುಪಲೇ ಬೇಕು ಎಂಬ ನಿಷ್ಟೆಯಿಂದ ಬಂದ ರಾಜಕಾರಣ.  ಗಾಂಧಿ ಮತ್ತು ನೆಹರೂ ನಡುವಿನ ಸಂಬಂಧ ವ್ಯಕ್ತಿಗತ ನೆಲೆಯ ಸಂಬಂಧವಾಗಿದ್ದರೂ ಅದು ರಾಜಕಾರಣದ ಆಯಾಮವನ್ನು ಹೊಂಡಿತ್ತು. ಈ ಕಾರಣದಿಂದಾಗಿಯೇ ತಮ್ಮ ವ್ಯಕ್ತಿತ್ವ ಮತ್ತು ನಂಬಿಕೆಗೆ ವಿರೋಢವಾದ ವ್ಯಕ್ತಿತ್ವ ಮತ್ತು ನಂಬಿಕೆಯನ್ನು ರೂಢಿಸಿಕೊಂಡಿದ್ದ ನೆಹರೂ ಅವರನ್ನು ಗಾಂಧಿ ಒಪ್ಪಿಕೊಂಡಿದ್ದರು. ಲಿಬರಲ್ ಆಗಿದ್ದ ನೆಹರೂ ಸರ್ಹಾರ್ ಪಟೇಲ್ ರಾಜಗೋಪಾಲ್ ಆಚಾರಿ ಅವರಂತೆ ಇರಲಿಲ್ಲ. ನೆಹರು ಆಧುನಿಕತೆಯ ಜೊತೆ ಸಂವಾದ ಮತ್ತು ಸಂವಹನ ನಡೆಸಬಲ್ಲವರಾಗಿದ್ದರು. ಆಧುನಿಕತೆ ಮತ್ತು ಮನುಷ್ಯ ಪ್ರೀತಿಯ ವಿಚಾರದಲ್ಲಿ ತಮ್ಮ ಬದ್ಧತೆಯನ್ನು ಮೀರಬಲ್ಲವರಾಗಿದ್ದ ನೆಹರೂ ಗಾಂಧಿಜಿಯವರ ಆಯ್ಕೆಯಾಗಿದ್ದು ರಾಜಕಾರಣವೇ. ಗಾಂಧೀಜಿಯವರಿಗೆ ಸ್ವತಂತ್ರ ಭಾರತ ಆಧುನಿಕತೆಯ ಜೊತೆ ಸಂವಾದ ನಡೆಸೇಕು, ಆ ಮೂಲಕ ಅಭಿವೃದ್ಧಿ ಹೊಂದಬೇಕು ಎಂಬ ಒಳ ಆಸೆ ಇತ್ತು. ಅದಕ್ಕಾಗಿ ಅವರು ಆರಿಸಿಕೊಂಡಿದ್ದು ನೆಹರೂ ಅವರನ್ನು.
ಗಾಂಧೀಜಿ ಮತ್ತು ಅವರ ಹೆಂಡತಿ ಕಸ್ತೂರಿ ಬಾ ಅವರ ಸಂಬಂಧವನ್ನು ನೋಡಿ. ಗಾಂಧೀಜಿಯವರ ಹೆಜ್ಜೆ ಗುರುಗಳಲ್ಲೇ ಹೆಜ್ಜೆ ಇಡುತ್ತ ಬಂದವರು ಎಂದು ಅವರನ್ನು ಶ್ಲಾಘಿಸಲಾಗುತ್ತದೆ. ಗಾಂಧೀಜಿಯವರ ಯಶಸ್ಸಿನಲ್ಲಿ ಅವರ ಹೆಂಡತಿಯ ಪಾತ್ರ ದೊಡ್ಡದು ಎಂದು ಹೇಳಲಾಗುತ್ತದೆ. ಆದರೆ ಇವರ ದಾಂಪತ್ಯದ ಮೂಲಕ ಅವರಿಗೆ ಮಕ್ಕಳಾದರು ಎಂಬುದನ್ನು ಬಿಟ್ಟರೆ ಅವರದು ನಿಜವಾದ ದಾಂಪತ್ಯವಾಗಿರಲಿಲ್ಲ. ಗಾಂಧೀಜಿಯವರ ಬದ್ಧತೆ ಎಂತಹ ವಿಪರೀತ ಎಂದರೆ ತಮ್ಮ ಹೆಂಡತಿಗೆ ಪ್ರತ್ಯ್ರೇಕ ಅಸ್ಥಿತ್ವವಿದೆ ಎಂದು ಅವರು ಪರಿಗಣೀಸಲೇ ಇಲ್ಲ. ತನ್ನ ಹೆಂಡತಿಯನ್ನು ತನ್ನ ನಂಬಿಕೆಗಾಗಿ ಅಗ್ನಿಪರೀಕ್ಷೆಗೆ ಒಡ್ಡಿದ ರಾಮ ಕೂಡ ಸೀತೆಯ ಪ್ರತ್ಯೇಕ ಅಸ್ಥಿತ್ವವನ್ನು ಪರಿಗಣನೆಗೆ ತೆಗೆದುಕೊಂಡವನಲ್ಲ. ಇಂತಹ ರಾಮ ಗಾಂಧೀಜಿಗೆ ತುಂಬಾ ಇಷ್ಟ. ಇದು ಅವರ ಮನಸ್ಥಿತ್ಯ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೆ ರಾಮನನ್ನು ಆರಾಧಿಸುವ ಗಾಂಧೀಜಿ ಅವರನ್ನು ರಾಮ ಮಂದಿರ ಕಟ್ಟಲು ಇಟ್ಟಿಗೆ ಹೊತ್ತ ಸಂಘ ಪರಿವಾರ ಮತ್ತು ಬಿಜೆಪಿಯವರಿಗ್ ಸ್ವೀಕಾರಾರ್ಹರಾಗಿರಲಿಲ್ಲ. ಇವರೆಲ್ಲ ಮಂದಿರದಲ್ಲಿ ಇಟ್ಟಿಗೆಗಳಲ್ಲಿ ರಾಮನನ್ನು ಕಾಣುತ್ತಿದ್ದರೆ ಗಾಂಧಿಜಿ ಮನುಷ್ಯನ ಹೃದಯಗಳಲ್ಲಿ, ನಡವಳಿಕೆಯಲ್ಲಿ ರಾಮನನ್ನು ಕಾಣಲು ಯತ್ನಿಸುತ್ತಿದ್ದರು.
ಗಾಂಧೀಜಿಯವರು ದೇವರಾಗಿರಲಿಲ್ಲ. ಅವರಲ್ಲಿಯೂ ಮನುಷ್ಯ ಸಹಜವಾದ ದೌರ್ಬಲ್ಯಗಳಿದ್ದವು. ಎಲ್ಲ ಮನುಷ್ಯ ಸಹಜವಾದ ದೌರ್ಬಲ್ಯಗಳ ನಡುವೆ ಎಲ್ಲರು ಮೆಚ್ಚಬಹುದಾದ ನಿಜವಾದ ಮಹಾ ನಾಯಕರು ಗಾಂಧೀಜಿ. ಧಾರ್ಮಿಕ ಮನಸ್ಥಿತಿಯನ್ನು ಹೊಂದಿದ್ದ ಕೋಮುವಾದಿ ಜಾತೀಯವಾದಿ ಅವರಾಗಿರಲಿಲ್ಲ. ಭಾರತದ ಶಕ್ತಿ ಎಲ್ಲಿದೆ ಎಂಬುದು ಅವರಿಗೆ ಗೊತ್ತಿತ್ತು. ಕಾಂಗ್ರೆಸ್ ಎಂಬ ಪುರಾತನ ಪಕ್ಷಕ್ಕೇ ಮಹಾತ್ಮಾ ಗಾಂಧಿ ನೆನಪಿನಲ್ಲಿ ಇದ್ದಿದ್ದರೆ ದೇಶಕ್ಕೆ ಇಂದಿನ ಸ್ಥಿತಿ ಬರುತ್ತಿರಲಿಲ್ಲ.  ಗಾಂಧಿ ಸ್ವಾವಲಂಬನೆಯ ಮಾತನಾಡಿದವರು. ಅಹಿಂಸೆಯನ್ನು ನಂಬಿದವರು. ಶಾಂತಿಯ ಪ್ರತಿಪಾದಕರಾಗಿದ್ದವರು. ಮನುಷ್ಯ ದೌರ್ಬಲ್ಯಗಳ ನಡುವೆ ಅದನ್ನು ಮೀರಲು ಯತ್ನಿಸಿದವರು.
ಕೆಲವು ತಿಂಗಳುಗಳ ಹಿಂದೆ ಊರಿಗೆ ಹೋದಾಗ ನಮ್ಮ ಮೂಲ ಮನೆಯ ವರಾಂಡಾದ ಗೋಡೆಯ ಮೇಲೆ ಇದ್ದ ಈ ಮಹಾತ್ಮರ ಫೆÇೀಟೋಗಳನ್ನೆಲ್ಲ ನೋಡಿದೆ. ಅದರೆ ಈ ಫೆÇೀಟೋಗಳಲ್ಲಿ ಮೊದಲಿನ Œಜೀವ ಕಳೆ ಕಂಡುಬರಲಿಲ್ಲ. ನಮ್ಮ ಮನೆಯಲ್ಲಿದ್ದ ಇಂಡೀನ ತಲೆ ಮಾರಿನ ಹುಡುಗರಿಗೆ ಗಾಂಧಿ ಗೊತ್ತಿರಬಹುದು ಎಂದು ಅನ್ನಿಸಲಿಲ್ಲ. ಗಾಂಧಿಯ ಬಗ್ಗೆ ಮಾತನಾಡುವವರು ಈ ಬಗ್ಗೆ ಜಗಳವಾಡುವವರು ಇರಲಿಲ್ಲ.
ನಮ್ಮ ಚಿಕ್ಕಪ್ಪ ಇರುವ ಈ ಹಳೆಯ ಮನೆಯ ವರಾಂಡದಲ್ಲಿ ಕುಳಿತಿರುತ್ತಿದ್ದ ನನ್ನ ಅಜ್ಜ ಕೊನೆಯ ದಿನಗಳಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ. ಕಾಲಿಗೆ ಕಸ ಎಂದು ಹೇಳುತ್ತ ಯಾವುದೋ ಎಣ್ಣೆ ತಿಕ್ಕಿಸಿಕೊಂಡು ತೆವಳುತ್ತಿದ್ದ ಆಗಲೂ ಆತ ಗಾಂಧೀಜಿಯನ್ನು ಬೈಯುವುದನ್ನು ನಿಲ್ಲಿಸಿರಲಿಲ್ಲ. ನಾನು ಬೆಂಗಳೂರಿನಿಂದ ಮನೆಗೆ ಹೋದಾಗಲೆಲ್ಲ ನನ್ನ ಮತ್ತು ಅವನ ನಡುವೆ ಕಾಂಗ್ರೆಸ್ ವಿಚಾರವಾಗಿಯೇ ಜಗಳವಾಗುತ್ತಿತ್ತು. ಅವನು ಎಂತಹ ವ್ಯಕ್ತಿ ಎಂದರೆ, ನಾನು ಪತ್ರಕರ್ತನಾಗಿ ಹೆಗಡೆ ದೇವೇಗೌಡರ ಪತ್ರಿಕಾಗೋಷ್ಠಿಗೆ ಹೋದರೂ ಆತ ಸಹಿಸುತ್ತಿರಲಿಲ್ಲ. ಕಾಂಗ್ರೆಸ್ ವಿರೋಧಿಗಳ ಜೊತೆ ನಾನು ಸಂಪರ್ಕ ಇಟ್ಟುಕೊಳ್ಳುವುದನ್ನು ಬಯಸದ ನನ್ನ ಅಜ್ಜ ಗಾಂಧೀಜಿಯವರನ್ನು ಟೀಕಿಸುವವರನ್ನು ಮಾತ್ರ ಇಷ್ಟ ಪಡುತ್ತಿದ್ದ. ಆದರೆ ಗಾಂಧೀಜಿಯವರ ವಿಚಾರದಲ್ಲಿ ತಾತ್ವಿಕವಾಗಿ ತಾರ್ಕಿಕವಾಗಿ ಜಗಳವಾಡುವವರೂ ಇಲ್ಲ.
ಜಾಗತೀಕರಣದ ಹುಸಿ ಮತ್ತು ಭ್ರಮೆಯ ನಡುವೆ ಗಾಂಧಿ ಎಷ್ಟು ದೊಡ್ಡ ಮನುಷ್ಯರಾಗಿದ್ದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗೆ ನಮ್ಮ ಇಂದಿನ ಯುವಕರು ಗಾಂಧಿ ಏನು ಹೇಳಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸಬೇಕು. ಆದರೆ ಇಂದು ಸಾಮಾಜಿಕ ತಾಣಗ¼ಲ್ಲಿ ಗಾಂಧೀಜಿಯವರನ್ನು ಅವಹೇಳನ ಮಾಡುವಂಥಹ ಮಾತುಗಳು ಹರಿದಾಡುತ್ತಿವೆ. ಅವರೊಬ್ಬ ಟೆರಿರಿಸ್ಟ್ ಎಂದು ಯಾರೋ ಒಬ್ಬರು ಹಾಕಿದ್ದ ಅಪ್ ಡೆಟ್ ನೋಡಿ ಮನಸ್ಸಿಗೆ ನೋವಾಯಿತು.
ಹೊಸ ಗಾಂಧಿಗಳನ್ನು ಹಿಡಿದುಕೊಂಡಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರನ್ನು ಕೈ ಬಿಟ್ಟಿದೆ. ನಾಥೂರಾಮ್ ಗೋಡ್ಸೆ ಅವರ ನಂಬಿಕೆಯನ್ನೇ ಹೊಂದಿರುವ ಬಿಜೆಪಿಗೆ ಗಾಂಧಿ ಪರಮ ಶತ್ರು. ಬಿಜೆಪಿಯ ಅಜೆಂಡಾದ ಅನುಷ್ಠಾನಕ್ಕೆ ಇರುವ ದೊಡ್ಡ ಅಡ್ಡಿ ಎಂದರೆ ಗಾಂಧಿ ಮತ್ತು ಅವರ ತತ್ವಾದರ್ಶಗಳು.
ಹೀಗಾಗಿ ಭಾರತದಲ್ಲೇ ಗಾಂಧಿ ಅನಾಥರಾಗಿದ್ದಾರೆ…

Saturday, September 21, 2013

ಪತ್ರಿಕೆ ಓದುವಾಗಲೆಲ್ಲ ನನ್ನಪ್ಪ ಎದುರಿಗೆ ಬಂದು ನಿಲ್ಲುತ್ತಾನೆ......!

ನಾನು ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದ್ದು ಯಾವಾಗ ಎಂದು ಯೋಚಿಸಿದರೆ ತಕ್ಷಣ ಉತ್ತರ ಹೊಳೆಯುವುದಿಲ್ಲ. ನಾನು ಶಾಲೆಗೆ ಹೋಗಲು ಪ್ರಾರಂಭಿಸಿದಾಗಲೇ ನಮ್ಮ ಮನೆಗೆ ಪ್ರಜಾವಾಣಿ, ದಿ ಹಿಂದೂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳು ಬರುತ್ತಿದ್ದವು.ಅಪ್ಪ ದೊಡ್ಡ ಧ್ವನಿಯನ್ನು ಪತ್ರಿಕೆಗಳ ಪಠಣ ಮಾಡುತ್ತಿದ್ದ.
ನನ್ನ ಅಪ್ಪ ಪತ್ರಿಕೆಗಳನ್ನು ದೊಡ್ದ ಧ್ವನಿಯಲ್ಲಿ ಓದುತ್ತಿದ್ದ ದೃಶ್ಯ ನನ್ನ ಕಣ್ಣ ಮುಂದೆ ಈಗಲೂ ಬರುತ್ತದೆ. ಅಪ್ಪ ಹೀಗೆ ಪತ್ರಿಕೆಯನ್ನು ದೊಡ್ದ ಧ್ವನಿಯಲ್ಲಿ ಓದುವುದು ನನ್ನ ಅಜ್ಜನಿಗೆ ಇಷ್ಟವಾಗುತ್ತಿರಲಿಲ್ಲ.
ಮಾಣಿ ಮನಸಿನಲ್ಲೇ ಪತ್ರಿಕೆ ಓದು ಎಂದು ಅಜ್ಜ ಅಪ್ಪನಿಗೆ ಬೈಯುತ್ತಿದ್ದ. ಆದರೆ ಅಪ್ಪ ದೊಡ್ಡದಾಗಿ ಪತ್ರಿಕೆ ಓದುವುದನ್ನು ನಿಲ್ಲಿಸುತ್ತಿರಲಿಲ್ಲ. ಅವನ ಪ್ರಕಾರ ಇಂಡಿಯಾ ಎಂಬ ಈ ದೇಶದಲ್ಲಿ ಇಂಗ್ಲೀಷ್ ಸರಿಯಾಗಿ ಬರೆಯುವ ಏಕಮೇವ ಇಂಗ್ಲೀಷ್ ಪತ್ರಿಕೆ ಎಂದರೆ ಅದು ದಿ.ಹಿಂದೂ ಮಾತ್ರ. ಉಳಿದ ಆಂಗ್ಲ ದಿನ ಪತ್ರಿಕೆಗಳಿಗೆ ಇಂಗ್ಲೀಷ್ ಬರುವುದಿಲ್ಲ ಎಂದು ಅವನ ನಂಬಿಕೆಯಾಗಿತ್ತು. ನಾಟಕಗಳ ವಿಚಿತ್ರ   ಬಗ್ಗೆ ಸೆಳೆತವಿದ್ದ ಅಪ್ಪ ಶೇಕ್ಸಫಿಯರ್ ನ ಎಲ್ಲ ನಾಟಕಗಳನ್ನು ಮನೆಯಲ್ಲಿ ತಂದಿಟ್ಟಿದ್ದ. ಆದರೆ ಪತ್ರಿಕೆಗಳನ್ನು ದೊಡ್ಡ ಧ್ವನಿಯಲ್ಲಿ ಓದುತ್ತಿದ್ದ ಅಪ್ಪ ಕಾವ್ಯ, ನಾಟಕ ಮತ್ತು ಕಾದಂಬರಿಗಳನ್ನು ಮಾತ್ರ ದೊಡ್ಡ ಧ್ವನಿಯಲ್ಲಿ ಓದುತ್ತಿರಲಿಲ್ಲ.
ಹಿಂದೂ ಪತ್ರಿಕೆಯನ್ನು ಇಡಿ ಜಗತ್ತಿಗೆ ಕೇಳುವಂತೆ ಓದುತ್ತಿದ್ದ ಅಪ್ಪ ನಾನೂ ಆ ಪತ್ರಿಕೆಯನ್ನು ಓದಬೇಕು ಎಂದು ಕಡ್ಡಾಯ ಮಾಡಿ ಬಿಟ್ಟಿದ್ದ. ಆದರೆ ಆ ಪತ್ರಿಕೆಯಲ್ಲಿ ಬರುತ್ತಿದ್ದ ಯಾವುದೇ ವರದಿ ಅಥವಾ ಲೇಖನದ ತಲೆ ಬುಡ ನನಗೆ ಅರ್ಥವಾಗುತ್ತಿರಲಿಲ್ಲ ಆದರೆ ಅಪ್ಪನ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಅದನ್ನು ಓದಲೇ ಬೇಕಾದ ದುರಂತ ಸ್ಥಿತಿ ನನ್ನದಾಗಿತ್ತು. ನನ್ನ ಅಪ್ಪನಿಗೆ ಕನ್ನಡದ ಮೇಲೂ ಪಾಂಡಿತ್ಯವಿತ್ತು. ಹಳೆಗನ್ನಡ ಸಾಹಿತ್ಯವನ್ನು ತನ್ನ ನಾಲಿಗೆಯ ಮೇಲೆ ಇಟ್ಟುಕೊಂಡಿದ್ದ ಆತ ರನ್ನ, ಪಂಪ ಹರಿಹರ, ರಾಘವಾಂಕ, ಜನ್ನ ಪೆÇನ್ನ ಎಲ್ಲರ ಕರೆತಂದು ನಮ್ಮ ಎದುರು ನಿಲ್ಲಿಸಿ ಬಿಡುತ್ತಿದ್ದ. ಹರಿಹರನ ರಗಳೆಯನ್ನು, ದೊಡ್ದ ಧ್ವನಿಯಲ್ಲಿ ಓದುತ್ತಿದ್ದ ಅವನಿಗೆ ರಾಘವಾಂಕನೆಂದರೆ ಅಪಾರ ಪ್ರೀತಿ.  ಕರ್ನಾಟಕ ಭಾರತ ಕಥಾ ಮಂಜರಿಯನ್ನು ತನ್ನ ಬಾಯಲ್ಲೇ ಇಟ್ಟುಕೊಂಡಿದ್ದ ಅವನಿಗೆ ಜೈಮಿನಿ ಭಾರತವನ್ನು ದೊಡ್ದ ದಾಗಿ ಓದುವುದೆಂದರೆ ಖುಷಿ.
ನಾನು ಹೈಸ್ಕೂಲಿಗೆ ಬರುವ ಹೊತ್ತಿಗೆ ಪತ್ರಿಕೆ ಮತ್ತು ಸಾಹಿತ್ಯದ ರುಚಿ ನನಗೆ ಹತ್ತತೊಡಗಿತ್ತು. ಅಪ್ಪ ಮನೆಗೆ ತರುತ್ತಿದ್ದ, ಸುಧಾ, ಕಸ್ತೂರಿ, ಕರ್ಮವೀರ, ಮೊದಲಾದ ನಿಯತಕಾಲಿಕೆಗಳು ನನ್ನನ್ನು ಓದಿನೆಡೆಗೆ ಎಳೆದೊಯ್ದು ಬಿಟ್ಟಿದ್ದವು. ಎಲ್ಲ ಪತ್ರಿಕೆಗಳು ನಮ್ಮ ಮನೆಗೆ ಬರುತ್ತಿದ್ದುದು ರಾತ್ರಿ. ಬೆಳಿಗ್ಗೆ ತಾಲೂಕು ಕೇಂದ್ರವಾದ ಸಿದ್ದಾಪುರಕ್ಕೆ ಹೋಗುತ್ತಿದ್ದ ಅಪ್ಪ, ರಾತ್ರಿ ಮನೆಗೆ ಬರುವಾಗ ಚೀಲದ ತುಂಬಾ ಪತ್ರಿಕೆಗಳನ್ನು ಹೊತ್ತು ತರುತ್ತಿದ್ದ. ಆದರೆ ಅವನ   ಕೈಚೀಲದಲ್ಲಿ      ಇರುತ್ತಿದ್ದ ಪತ್ರಿಕೆಗಳು, ನಿಯತಕಾಲಿಕೆಗಳು ನಮಗೆ ಸಿಗಬೇಕು ಎಂದರೆ ಅದನ್ನೆಲ್ಲ ಅಪ್ಪ ಓದಿ ಮುಗಿಸಬೇಕಾಗಿತ್ತು. ತಾನು ಓದು ಮುಗಿಸುವವರೆಗೆ ಯಾವ ಪತ್ರಿಕೆಯನ್ನು ನಿಯತಕಾಲಿಕೆಯನ್ನು ಆತ ನಮಗೆ ಮುಟ್ಟಲು ಕೊಡುತ್ತಿರಲಿಲ್ಲ.  ಅಪ್ಪ ಪತ್ರಿಕೆಗಳನ್ನು ಓದಿ ಮುಗಿಸಿದ ಮೇಲೆ ನಾನು ಓದಲು ಪ್ರಾರಂಭಿಸುತ್ತಿದ್ದೆ.
ಅಪ್ಪನ ಬಳಿ ದೊಡ್ದದಾದ ಪುಸ್ತಕ ಭಂಡಾರವೇ ಇತ್ತು. ಹೀಗಾಗಿ ಆತ ನಮ್ಮ ಮನೆಗೆ ಶಾರದಾ ನಿಲಯ ಎಂದು ಹೆಸರಿಟ್ಟಿದ್ದ, ಕುವೆಂಪು, ಶಿವರಾಮ ಕಾರಂತ, ಚಿತ್ತಾಲ, ಬೆಂದ್ರೆ, ಕಣವಿ    ಮೊದಲಾದವರ ಗ್ರಂಥಗಳು ಬಿಡುಗಡೆಯಾದ ತಕ್ಷಣ ಶಾರದಾ ನಿಲಯವನ್ನು ಸೇರುತ್ತಿದ್ದವು. ಹೀಗೆ ಬಂದ ಹೊಸ ಪುಸ್ತಕಗಳನ್ನು ಅಪ್ಪ ಓದಿ ಮುಗಿಸಿದ ಮೇಲೆ ನಾನು ಓದಬೇಕಾಗಿತ್ತು.  ಅಪ್ಪ ನನಗೆ ಮೊದಲು    ಓದಲು ಕೊಟ್ಟ ಕಾದಂಬರಿ ಎಂದರೆ ಸಮರ್‍ಸೆಟ್ ಮಾಮ್ ನ ನವ್ ಅಂಡ್ ದೆನ್ ಕಾದಂಬರಿ. ಈ ಕಾದಂಬರಿ ಹೇಗಿದೆ ಎಂದು ಕೇಳಿದ ಅಪ್ಪನಿಗೆ ನನಗೆ ಏನೂ ತಿಳಿಯುತ್ತಿಲ್ಲ ಎಂದು ಉತ್ತರ ಕೊಟ್ಟಿದ್ದೆ. ಇದರಿಂದ ಅಪ್ಪನಿಗೆ ತುಂಬಾ ಸಿಟ್ಟು ಬಂದಿತ್ತು. ಆತನಿಗೆ ಸಿಟ್ಟು ಬಂತೆಂದರೆ ನನಗೆ ಹಿಂದೆ ಮುಂದೆ ನೋಡದೇ ಬಡಿಯುತ್ತಿದ್ದ.
ಅಪ್ಪ ನನಗೆ ಹೀಗೆ ಬಡಿದಾಗಲೆಲ್ಲ ನನ್ನ ರಕ್ಷಣೆಗೆ ಬರುತ್ತಿದ್ದವಳು ನನ್ನ ಅಮ್ಮಮ್ಮ. ಅಮ್ಮಮ್ಮ ಎಂದರೆ ಅಪ್ಪನ ಅಮ್ಮ. ಆಕೆಗೆ ನನ್ನ ಮೇಲೆ ಅಪಾರವಾದ ಪ್ರೀತಿ. ನಾನು ಮಾಡಬಾರದ ಕೆಲಸವನ್ನು ಮಾಡಿ ಅಪ್ಪನಿಂದ ಹೊಡೆತ ತಿಂದಾಗ ಆಕೆ ಆಯ್ಯೋ ಅವನನ್ನು ಕೊಲ್ಲಡಾ ಮಾಣಿ ಎಂದು ಹೇಳಿ ತನ್ನ ಸೀರೆಯ ಸೆರೆಗಿನಡಿ ಆಕೆ ಬಚ್ಚಿಟ್ಟುಕೊಳ್ಳುತ್ತಿದ್ದಳು. ನಂತರ ನಾನು ಅಮ್ಮಮ್ಮನ ಮಡಿಲಲ್ಲಿ ತಲೆ ಇಟ್ಟು ನಿದ್ರೆ ಮಾಡುತ್ತಿದ್ದೆ. ಹೀಗಾಗಿ ಅಮ್ಮಮ್ಮನ ಸೀರೆಯ ಸೆರಗಿನ ವಾಸನೆ ನನ್ನಿಂದ ದೂರವಾಗಲೇ ಇಲ್ಲ. ಆಕೆ ನನ್ನ ಪಾಲಿಗೆ ರಕ್ಷಕಿ. ನನ್ನ ತಪ್ಪುಗಳನ್ನೆಲ್ಲ ಕ್ಶಮಿಸುವ ಕರುಣಾಮಯಿ.
ಅಪ್ಪ ನನ್ನ ಬಡಿಯುವಾಗ ಅಮ್ಮ ನನ್ನತ್ತ ನೋವು ಮತ್ತು ಕರುಣೆಯಿಂದ ನೋಡುತ್ತಿದ್ದಳು. ಅವಳಿಗೆ ಅಪ್ಪನಿಗೆ ವಿರುದ್ಧ ಮಾತನಾಡುವ ದೈರ್ಯ ಇರಲಿಲ್ಲ. ಹಾಗೆ ಹೆಚ್ಚೆಂದರೆ ತನ್ನ ಅತ್ತೆ ಅಂದರೆ ಅಮ್ಮಮ್ಮನ ಬಳಿ ಓಡಿ ಹೋಗಿ ಅತ್ತೆರೆ, ಶಶಿಗೆ ಬಡಿದು ಹಾಕ್ತಾ ಇದ್ದ ಎಂದು ಎಂದು ದೂರು ನೀಡಿ ಅಮ್ಮಮ್ಮ ರಂಗ ಪ್ರವೇಶಿಸುವಂತೆ ಮಾಡುತ್ತಿದ್ದಳು. ಅಮ್ಮಮ್ಮ ನ ಮುಂದೆ ಅಪ್ಪನ ಪೌರುಷ ತಣ್ಣಗಾಗುತ್ತಿತ್ತು. ಆತ ನನಗೆ ಹೊಡೆಯುವುದನ್ನು ನಿಲ್ಲಿಸಿ ಜಾಗ ಖಾಲಿ ಮಾಡುತ್ತಿದ್ದ.
ಅದೊಂದು ದಿನ ಅಪ್ಪ ಪೇಟೆಯಿಂದ ಮನೆಗೆ ಹಿಂತಿರುಗುವ ಹೊತ್ತಿಗೆ ನಾನು ಮನೆಯ ಅಂಗಳದಲ್ಲಿ ನಿಂತಿದ್ದೆ. ಆಗಲೇ ಯಕ್ಷಗಾನದ ಹಾಡುಗಳು ನನ್ನನ್ನು ಸೆಳೆದಿದ್ದವು. ಅಪ್ಪ ಎರಡು ಯಕ್ಷಗಾನವನ್ನು ಬರೆದಿದ್ದ. ನನಗೂ ಯಕ್ಷಗಾನ ಬರೆಯಬೇಕು ಎಂಬ ಆಸೆ. ಹೀಗಾಗಿ ಪ್ರಾಸದ ಬಗ್ಗೆ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅಪ್ಪನ ಮುಖ ಕಂಡು ನನ್ನೊಳಗೆ ಇದ್ದ ಕವಿ ಹೃದಯ ಜಾಗ್ರತವಾಗಿ ಯಕ್ಷಗಾನದ ಹಾಡು ಬಂದೇ ಬಿಟ್ಟಿತು.
ತಾಕು ತರಕಿಟ ಬಳಗುಳಿ ವೆಂಕಟ…..
ಬಳಗುಳಿ ನಮ್ಮ ಊರು. ಅಪ್ಪನ ಹೆಸರು ವೆಂಕಟ್ರಮಣ. ನಾನು ಹೇಳಿದ ಈ ಚರಣ ಅಧ್ಬುತವಾಗಿದೆ ಎಂದು ಅಂದುಕೊಳ್ಳುವಾಗಲೇ ಅಪ್ಪ ಜಮದಗ್ನಿಯಾಗಿ ಬಿಟ್ಟಿದ್ದ. ಪಕ್ಕದಲ್ಲಿದ್ದ ಬಾರುಕೋಲನ್ನು ತೆಗೆದುಕೊಂಡು ನನ್ನನ್ನು ಅಟ್ಟಿಸಿಕೊಂಡು ಬಂದ. ನಾನು ಮನೆಯ ಹಿಂದಕ್ಕೆ ಓಡಿದೆ ಮನೆಯ ಹಿಂದೆ ಇರುವ ದೊಡ್ದ ದರೆಯನ್ನು ಹತ್ತಿ ಮರ ಒಂದನ್ನು ಹತ್ತಿ ಕುಳಿತು ಬಿಟ್ಟೆ. ಅಪ್ಪ ಕೆಳಗೆ ಬಾರು ಕೋಲು ಹಿಡಿದು ಕಾದು ನಿಂತೆ ಇದ್ದ. ನನ್ನ ಮತ್ತು ಅಪ್ಪನ ಈ ಜಗಳದಲ್ಲಿ ಅಮ್ಮಮ್ಮ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಾಗ ಸಂಜೆಯಾಗಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ನಾನು ಮರದ ಮೇಲೆ ಕುಳಿತಿದ್ದೆ.
ಇವೆಲ್ಲ ಕಾರಣದಿಂದ ನನಗೆ ಹಲವಾರು ಅನ್ವರ್ಥ ನಾಮಗಳು ಬರತೊಡಗಿದ್ದವು. ಸೂಜಿಮೆಣಸಿನ ಕಾಯಿ ಎಂಬುದು ಇಂತಹ ಹೆಸರುಗಳಲ್ಲಿ ಒಂದು. ಮಲೆನಾಡಿನಲ್ಲಿ ಬೆಳೆಯುವ ಸೂಜಿ ಮೆಣಸಿನ ಕಾಯಿ ನೋಡುವುದಕ್ಕೆ ತುಂಬಾ ಚಿಕ್ಕದು. ಆದರೆ ತುಂಬಾ ಖಾರ. ಬಾಯಿಗಿಟ್ತರೆ ಕಣ್ನಲ್ಲಿ ನೀರು. ನಾನಾಗ ತುಂಬಾ ಸಣ್ನಗೆ ಇದ್ದುದರಿಂದ ಊರ ಜನ ನನಗೆ ಈ ಹೆಸರು ಇಟ್ಟಿದ್ದರು.
ಊರಿನ ಜನರೆಲ್ಲ ನನ್ನನ್ನು ಕರೆಯುತ್ತಿದ್ದ ಇನ್ನೊಂದು ಹೆಸರೆಂದರೆ ಕೆಂಪು ತುಟಿ ಹೆಗಡೇರು. ನನಗೆ ಮೊದಲಿನಿಂದಲೂ ಕೆಂಪು ತುಟಿ ಎಂದು ಅಮ್ಮ ಈಗಲೂ ಹೇಳುವುದುಂಟು, ಈ ಕೆಂಪು ತುಟಿ ನಾನು ತಿನ್ನುವ ಎಲೆ ಎಡಕೆಯಿಂದ ಇನ್ನಷ್ಟು ಕೆಂಪಗಾಗಿ ನನ್ನನ್ನು ಕೆಂಪತುಟಿಯ ಹೆಗಡೆಯವರನ್ನಾಗಿ ಮಾಡಿತ್ತು.
ಹೀಗೆ ನನ್ನ ಬೆನ್ನ ಚರ್ಮವನ್ನು ತನ್ನ ಬಾರು ಕೋಲಿನಿಂದ ಆಗಾಗ ಮುತ್ತಿಕ್ಕುತ್ತಿದ್ದ ಅಪ್ಪ ನಾನು ಕಾಲೇಜು ಪ್ರವೇಶಿಸುತ್ತಿದ್ದಂತೆ ಸಂಪೂರ್ಣವಾಗಿ ಬದಲಾಗಿ ಹೋದ. ಆತ ನನ್ನನ್ನು ಸ್ಣೇಹಿತನಂತೆ ಕಾಣತೊಡಗಿದ. ಒಂದು ವರ್ಷ ಸಿದ್ದಾಪುರದ ಕಾಲೇಜಿನಲ್ಲಿ   ನಾನು   ಇರುವಾಗ ಮಾಡಿಕೊಂಡ ಯಾವುದೇ ಲಫಡಾದಲ್ಲಿ ಆತ ಮಧ್ಯ ಪ್ರವೇಶಿಸಲಿಲ್ಲ. ಹಲವಾರು ಹುಡುಗಿಯರ ತಂದೆ ತಾಯಿಯರು ನನ್ನ ಬಗ್ಗೆ ದೂರು ನೀಡಿದಾಗ ನಾನು ಮಧ್ಯ ಪ್ರವೇಶಿಸುವುದಿಲ್ಲ, ಮಗ ಬೆಳೆದಿದ್ದಾನೆ ಎಂದು ಹೇಳಿ ಸುಮ್ಮನಾದ. ಕಾಲೇಜಿನ ಪ್ರಾಂಶುಪಾಲರೇ ನನ್ನ ಬಗ್ಗೆ ದೂರು ನೀಡಿದಾಗ ಮುಂದಿನ ಓದಿಗಾಗಿ ಬೆಳಗಾವಿಗೆ ಹೋಗಲು ವ್ಯವಸ್ಥೆ ಮಾಡಿದ. ಆದರೆ ಮಗನೆ ನೀನು ಮಾಡಿದ್ದು ತಪ್ಪು ಎಂದು ಒಂದು ದಿನವೂ ಹೇಳಲಿಲ್ಲ.
ನಂತರದ ದಿನಗಳಲ್ಲಿ ನಾನು ಓದು ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಅಪ್ಪ ನನ್ನ ಜೊತೆ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದನೇ ಹೊರತೂ ಬೇರೆ ಯಾವ ವಿಚಾರವನ್ನು ಮಾತನಾಡುತ್ತಿರಲಿಲ್ಲ. ಆತನ ಆರೋಗ್ಯ ಕೆಟ್ತ ಮೇಲೆ ಮಾತು ಕಡಿಮೆಯಾಗಿತ್ತು. ಆತ ನನ್ನನ್ನು ನೋಡುವಾಗ ಪ್ರೀತಿಯಿಂದ ವಿಶ್ವಾಸದಿಂದ ನೋಡುತ್ತಿದ್ದ.  ಅವನ ನೋಟದಲ್ಲಿ  ಸಣ್ಣವನಿರುವಾಗ ಹೊಡೆತ ಕೊಡುತ್ತಿದ್ದ ಬಗ್ಗೆ ಒಂದು ಪಶ್ಚಾತ್ತಾಪದ ಭಾವ ಯಾವಾಗಲೂ ಇರುತ್ತಿತ್ತು. ಅಪ್ಪನಿಗೆ ಕೊನೆಯವರೆಗೆ ನನ್ನ ಮೇಲಿದ್ದ ಬೇಸರವೆಂದರೆ ನನಗೆ ಆಂಗ್ಲ ಭಾಷೆಯ ಮೇಲೆ ಪ್ರಭುತ್ವ ಇಲ್ಲ ಎನ್ನುವುದು. ಸದಾ ಖಾದಿದಾರಿಯಾಗಿರುತ್ತಿದ್ದ ನಿಜವಾದ ಅರ್ಥದಲ್ಲಿ ಗಾಂಧಿವಾದಿ. ಆತ ತೊಡುತ್ತಿದ್ದ ಒಳ ಊಡುಪುಗಳು ಕೂಡ ಖಾದಿ. ನಮ್ಮ ಕುಟುಂಬವೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಎಲ್ಲವನ್ನೂ ಕಳೆದುಕೊಂಡಿತ್ತು. ಆದರೆ ಅಪ್ಪ ಇಂಗ್ಲೀಷರನ್ನು ವಿರೋಧಿಸುತ್ತಿದ್ದವ ಆಂಗ್ಲ ಭಾಷೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ !
ಅಪ್ಪ ಸಂಸ್ಕೃತ ಕಲಿಯಲಿಲ್ಲ. ಪ್ರತಿ ದಿನ ದೇವರ ಪೂಜೆ ಮಾಡಲಿಲ್ಲ.
ಪ್ರತಿ ದಿನ ಬೆಳಿಗ್ಗೆ ಪತ್ರಿಕೆ ಒದುವಾಗ ಅಪ್ಪ ನೆನಪಾಗುತ್ತಾನೆ. ನನ್ನಪ್ಪ ನಿಜವಾಗಿ ದೊಡ್ದವ. ಅವನ ಮುಂದೆ ನಾನು ಏನೂ ಅಲ್ಲ.
ಇಂದು ಭಾನುವಾರ ಪ್ರಜಾವಣಿಯನ್ನು ನೋಡುತ್ತಿದ್ದಾಗ ಮತ್ತೆ ಅಪ್ಪ ಎದುರು ಬಂದು ನಿಂತ. ಆಗಲೇ ನಾನು ಕಂಪ್ಯೂಟರ್ ಆನ್ ಮಾಡಿದೆ.

Friday, September 20, 2013

ಇತಿಹಾಸ ಪುರಾಣವಾಗುವ ಬಗೆ; ಐತಿಹಾಸಿಕ ವ್ಯಕ್ತಿಗಳಿಗೆ ಅತಿಮಾನುಷ ಶಕ್ತಿ......

ಇತ್ತೀಚಿನ ದಿನಗಳಲ್ಲಿ ಇತಿಹಾಸ ನನಗೆ  ಹೆಚ್ಚು ಆಕರ್ಷಕ ಅನ್ನಿಸುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಒಂದು ದೇಶವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದೇ ಇತಿಹಾಸ, ಆದರೆ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಹೇಗೆ ? ಒಂದು ದೇಶದ ಇತಿಹಾಸ ಅಂದರೆ ಅದು ಒಂದು ದೇಶದ ಜನ ಜೀವನವನ್ನು ಸಂಸ್ಕೃತಿಯನ್ನು ಬೌಗೋಲಿಕ ವ್ಯಾಪ್ತಿಯನ್ನು, ಹಾಗೂ ಅವರು ಹೇಗೆ ಯೋಚಿಸುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಆಗಿದೆ, ಹೀಗಾಗಿ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದೇ ಬಹುದೊಡ್ದ ಸವಾಲಾಗಿದೆ.
ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ನೈಜ ಮತ್ತು ವಸ್ತು ನಿಷ್ಠ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಪೂರಕ ಸಾಮಗ್ರಿಗಳಿಲ್ಲ. ರಾಮಾಯಣ ಮತ್ತು ಮಹಾಭಾರತದಂತಹ ಮಹಾ ಕಾವ್ಯಗಳು ಒಂದು ಕಾಲ ಘಟ್ಟದ ರಾಜ ಮಹಾರಾಜರ ಕಥೆಗಳನ್ನು ಮಾತ್ರ  ಹೇಳುತ್ತವೆ. ಜೊತೆಗೆ ಮನುಷ್ಯ ಸಂಬಂಧಗಳು, ಅವರು ನಂಬಿದ್ದ ಜೀವನ ಮೌಲ್ಯಗಳ ಬಗ್ಗೆ ಮಾತನಾಡುತ್ತವೆ. ಆದರೆ ಇವು ಯಾವವೂ ಕೂಡ ವೈಚಾರಿಕ ಸಂಘರ್ಷಕ್ಕೆ ಎಡೆ ಮಾಡಿಕೊಡುವುದಿಲ್ಲ. ಜೊತೆಗೆ ಸತ್ಯ ಎಂದುಕೊಂಡಿದ್ದನ್ನು ಪ್ರಶ್ನಿಸುತ್ತ ಮುಖಾಮುಖಿಯಾಗುವುದಿಲ್ಲ.
ನಾವೆಲ್ಲ ಮಹಾಭಾರತ  ರಾಮಾಯಣದಂತಹ ಗ್ರಂಥಗಳನ್ನು ಓದಿ ಬೆಳೆದಿದ್ದೇವೆ. ಈ ಮಹಾ ಕಾವ್ಯಗಳು ನಮ್ಮಂತಹವರ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ಒಹಿಸಿವೆ. ಆದರೆ ರಾಮಾಯಣದಲ್ಲಿ ಅಥವಾ ಮಹಾ ಭಾರತದಲ್ಲಿ ಬರುವ ಪಾತ್ರಗಳು ನಮ್ಮ ಜೊತೆ ಯಾಕೆ ಮುಖಾಮುಖಿಯಾಗುವುದಿಲ್ಲ ? ನಮ್ಮಲ್ಲಿ ಹುಟ್ಟುವ ಪ್ರಶ್ನೆಗಳನ್ನು ಯಾಕೆ ಕೇಳಲು ಸಾಧ್ಯವಾಗುತ್ತಿಲ್ಲ ?
ಇದುಕ್ಕೆ ಬಹುಮುಖ್ಯವಾದ ಕಾರಣ ಈ ಮಹಾನ್ ಕಾವ್ಯಗಳಿಗೆ ಧರ್ಮದ ಲೇಪ ಇರುವುದೇ ಆಗಿದೆ. ರಾಮ ಮತ್ತು ಕೃಷ್ಣ ದೇವರಾಗಿದ್ದರಿಂದ ಅವರ ನಡವಳಿಕೆಯನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ನಮ್ಮ ಪರಂಪರೆ ನೀಡಿಲ್ಲ. ಹೀಗಾಗಿ ರಾಮ ಮರೆಯಲ್ಲಿ ನಿಂತು ವಾಲಿಯನ್ನು ವಧಿಸಿ ನಮ್ಮಂತೆ ಸಾಮಾನ್ಯ ಮನುಷ್ಯನಂತೆ ವರ್ತಿಸಿದರೂ ಅವನ ವರ್ತನೆಗೆ ದೈವತ್ವದ ಆರೋಪ ಮಾಡಿ ಕ್ಷಮಿಸಿ ಬಿಡುತ್ತೇವೆ. ರಾಮ ಎಂಬ ಒಬ್ಬ ರಾಜನ ಹೆಂಡತಿಯನ್ನು ರಾವಣ ಎಂಬ ಇನ್ನೊಬ್ಬ ರಾಜ ಹೊತ್ತೊಯ್ಸ ಘಟನೆಯನ್ನ್ಯು ಒಂದು ರಾಜ್ಯದ ಸಮಸ್ಯೆಯನ್ನಾಗಿ ಪರಿಗಣಿಸಿಬಿಡುತ್ತೇವೆ. ರಾಮ ದೇವರಾದ್ದರಿಂದ ಆತ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಿದ್ದು ಸರಿ. ಆತ ಮನುಷ್ಯನಾಗಿದ್ದರೆ ಆತ ತಪ್ಪಿತಸ್ಥ. ದೈವತ್ವ
ಆದರೆ ರಾಮ ಇದ್ದ ಕಾಲದಲ್ಲಿ ಸಾಮಾನ್ಯ ಜನ ಹೇಗಿದ್ದರು ? ರಾಮ ಸೀತೆಯನ್ನು ಕಳೆದಕೊಂಡ ಘಟನೆಯನ್ನು ಸಾಮಾನ್ಯ್ ಪ್ರಜೆಯೊಬ್ಬ ಸ್ವೀಕರಿಸಿದ ಬಗೆ ಯಾವುದು ಎಂಬ ವಾಲ್ಮೀಕಿ ರಾಮಾಯಣದಲ್ಲಿ ಹೆಚ್ಚಿನ ವಿವರಗಳು ದೊರಕುವುದಿಲ್ಲ. ಹಾಗೆ ಅಂದಿನ ಸಮಾಜದ ಸಂರಚನೆ ಹೇಗಿತ್ತು ? ಈ ಬಗ್ಗೆ ಹೆಚ್ಚಿನ ವಿವರಗಳು ದೊರಕುವುದಿಲ್ಲ.
ಅಂದರೆ ನಾವು ಮಹಾ ಕಾವ್ಯ ಎಂದು ಪರಿಗಣಿಸಿದ ರಾಮಾಯಣ ಮತ್ತು ಮಹಾಭಾರತದಲ್ಲಿ ಸಾಮಾನ್ಯ ಜನರ ಬದುಕಿನ ಬಗ್ಗೆ ಏನೂ ಇಲ್ಲ. ಈ ಎರಡೂ ಮಹಾ ಕಾವ್ಯಗಳು ಸಾಮಾನ್ಯ ಜನರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗೂ ಅವರ ಆಲೋಚನೆಗೆ ವೇದಿಕೆಯಾಗಿಲ್ಲ.
ರಾಮಾಯಣಕ್ಕಿಂತ ಮಹಾ ಭಾರತ ಹೆಚ್ಚು ಪರಿಣಾಮಕಾರಿ. ರಾಮಾಯಣ ಅಂದಿನ ಕಾಲಕ್ಕೆ ಮಾತ್ರವಲ್ಲದೇ ಇಂದಿನ ಕಾಲಕ್ಕೂ ಸಲ್ಲುವ ಕೆಲವು ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುವುದಕ್ಕೆ ಸೀಮಿತವಾಗಿದೆ. ಮಹಾಭಾರತ ಹಾಗಲ್ಲ, ಅದರ ಕ್ಯಾನವಾಸ್ ತುಂಬಾ ದೊಡ್ದದು. ಅದು ಯುದ್ಧದ ಬಗ್ಗೆಯೂ ಮಾತನಾಡುತ್ತದೆ, ಬದುಕಿನ ಬಗ್ಗೆಯೂ ಮಾತನಾಡುತ್ತದೆ. ಹಾಗೆ ರಾಮಾಯಣದ ರಾಮನಂತೆ, ಕೃಷ್ಣ ನೂರಕ್ಕೆ ನೂರರಷ್ಟು ಎಲ್ಲ ಕ್ರಿಯೆಗಳಿಂದಲೂ ದೈವತ್ವದ ಆರೋಪದಿಂದಾಗಿ ಬಚಾವಾಗುವ ದೈವ ನಾಯಕನಲ್ಲ. ಆತ ದೈವತ್ವವನ್ನು ಮೀರಿ ಮನುಷ್ಯನಂತೆ ಹಲವು ಬಾರಿ ವರ್ತಿಸಿ ಟೀಕೆಗೆ ಒಳಗಾಗುತ್ತಾನೆ. ಆತನ ಬಾಲ್ಯದ ಕಳ್ಳತನಕ್ಕೆ, ನಂತರದ ವ್ಯಾಮೋಹಕ್ಕೆ, ಸಾವಿರಾರು ಜನರನ್ನು ಸಾವಿನ ಕೂಪಕ್ಕೆ ತಳ್ಳುವ ಯುದ್ಧಕ್ಕೆ ಆತನ ದೈವತ್ವ ಸಂಪೂರ್ಣ ರಕ್ಶಣೆಯನ್ನು ನೀಡುವುದಿಲ್ಲ. ಹೀಗಾಗಿ ರಾಮನಿಗಿಂತ ಕೃಷ್ಣ ಹೆಚ್ಚು ಹತ್ತಿರದವನಾಗಿ ಕಾಣುತ್ತಾನೆ.
ಈ ಎರಡೂ ಮಹಾಕಾವ್ಯಗಳು ದೈವತ್ವವನ್ನು ಮೀರಿದ್ದರೆ ಅವುಗಳು ನಮ್ಮನ್ನು ಇನ್ನೂ ಹೆಚ್ಚು ವಿಸ್ತೃತವಾದ ಚಿಂತನೆಗಳಿಗೆ ಹಚ್ಚುತ್ತಿದ್ದವು. ಇದನ್ನು ಮೀರಿ ನೋಡುವುದಾದರೆ ರಾಮಾಯಣದ ರಾವಣ ರಾಮಾಯಣದಲ್ಲಿ ಪ್ರತಿಬಿಂಬಿತವಾಗಿದ್ದಕ್ಕಿಂತ ಭಿನ್ನವಾಗಿ ನಮಗೆ ಕಾಣುತ್ತಾನೆ. ಆತನ ಮನಸ್ಸಿನಲ್ಲಿ ತುಂಬಿದ ಪ್ರತಿಕಾರ ಆತನನ್ನು ಇನ್ನೊಬ್ಬರ ಹೆಂಡತಿಯನ್ನು ಎಳೆತರುವುದಕ್ಕೆ ಪ್ರೇರೇಪಿಸಿದ್ದನ್ನು ಬಿಟ್ಟರೆ ಆತ ಜನ ವಿರೋಧಿಯಾದ ಬಗ್ಗೆ ಬೇರೆ ಯಾವ ಸಮರ್ಥನೆಯೂ ದೊರುಕುವುದಿಲ್ಲ. ಜೊತೆಗೆ ರಾಮಾಯಣ ರಾಮ ಮತ್ತು ರಾವಣರ ನಡುವಿನ ವೈಯಕ್ತಿಕ ಧ್ವೇಷದ ಕಥೆಯೇ ಹೊರತೂ ಅದು ಜನ ಸಮುಧಾಯವನ್ನು ಒಳಗೊಂಡ ಕಥಾನಕವಾಗಿ ಬೆಳೆಯುವುದಿಲ್ಲ. ಮಹಾಭಾರತಕ್ಕಿಂತ ರಾಮಾಯಣ ಹಳೆಯದಾಗಿರುವುದು ಇದಕ್ಕೆ ಒಂದು ಕಾರಣವಾದರೆ ಇದನ್ನು ಬರೆದ ವಾಲ್ಮೀಕಿಯೇ ರಾಮನ ಭಕ್ತನಂತೆ ವರ್ತಿಸಿದ್ದು ಕಾರಣವಿರಬಹುದು. ಆತ ರಾಮಾಯಣವನ್ನು ನೋಡಿದ್ದು ರಾಮ ಕಥಾನಕವನ್ನಾಗಿ ಮಾತ್ರ. ಇದು ವಾಲ್ಮೀಕಿ ಮಿತಿ. . ಆತನ ಬದುಕಿನ ಅನುಭವ ವ್ಯಾಸನಿಗಿಂತ ವಿಸ್ತ್ರುತವಾಗಿದ್ದರೂ ಆತ ವಾಲ್ಮೀಕಿಯಾಗ ಬದಲಾಗುವಾಗಲೇ ರಾಮ ಭಕ್ತನಾಗಿಯೂ ಬದಲಾಗ. ಹೀಗಾಗಿ ಕವಿಯಾಗಿ ಎಂದು ಅನ್ನಿಸುತ್ತದೆ. ಹೀಗಾಗಿ ಈ ಮಹಾ ಕಾವ್ಯದಲ್ಲಿ ಆತನೂ ಒಂದು ಪಾತ್ರವಾಗಿ ಸೀತೆಯನ್ನು ತನ್ನ ಆಶ್ರಮದಲ್ಲಿ ಸಲುಹಿ, ಆಕೆಯ ಹೆರಿಗೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತಾನೆ. ಮತ್ತೆ ರಾಮ ಸೀತೆ ಒಂದಾಗುವಂತೆ ನೋಡಿಕೊಳ್ಳುತ್ತಾನೆ. ಆದರೆ ತಾನು ವರಿಸಿ ಮದುವೆಯಾದ ಸೀತೆಯನ್ನು ಕಾಡಿಗೆ ಆಟ್ಟಿದ್ದು ತಪ್ಪು ಎಂದು ರಾಮನಿಗೆ ಹೇಳದೇ ತನ್ನ ರಾಮ ಭಕ್ತಿಯನ್ನು ವಾಲ್ಮೀಕಿ ಪ್ರದರ್ಶಿಸುತ್ತಾನೆ. ಜೊತೆಗೆ ಇಡೀ ರಾಮಾಯಣದಲ್ಲಿ ರಾಮ ಅಗಸನೊಬ್ಬನ ಮಾತು ಕೇಳಿ ಹೆಂಡತಿಯನ್ನು ಕಾಡಿಗಟ್ಟಿದ ಎಂದು ಹೇಳುವ ಮೂಲಕ ಜನ ಸಾಮಾನ್ಯರ ಧ್ವನಿ ಪ್ರಕಟವಾಗುವ ಏಕ ಮೇವ ಘಟನೆಯೂ ಇದಾಗುತ್ತದೆ. ಇದನ್ನು ಬಿಟ್ಟರೆ ಇಡೀ ರಾಮಾಯಣದಲ್ಲಿ ಎಲ್ಲೂ ಜನಸಾಮಾನ್ಯರು ಪಾತ್ರವಾಗುವುದೇ ಇಲ್ಲ. ಉಳಿದಂತೆ ರಾಮ ಕಾಡಿಗೆ ಹೋಗುವಾಗ ಸಾಮೋಹೊಕವಾಗಿ ಅಳುವ ಪ್ರಜೆಗಳು ರಾಮ ತಿರುಗಿ ಬಂದಾಗ ಸಂತೋಷದಿಂದ ನಲಿಯುವುದಕ್ಕೆ ಮಾತ್ರ ಸೀಮಿತವಾಗುತ್ತಾರೆ.\
ನಾನು ಈ ಮಾತುಗಳನ್ನು ಹೇಳುವಾಗ ಒಂದು ವಿಷಯವನ್ನು ಸ್ಪಷ್ತಪಡಿಸಲೇ ಬೇಕು. ಅದು ರಾಮಾಯಣ ಮತ್ತು ಮಹಾಭಾರತವನ್ನು ನೋಡುವ ಬಗೆ. ಅದನ್ನು ಅರ್ಥ ಮಾಡಿಕೊಳ್ಳುವ ರೀತಿ. ಇದೊಂದು ಹಿಂದೂಗಳ ಪವಿತ್ರ ಗ್ರಂಥ ಎಂದುಕೊಂಡು ಪ್ರಾರಂಭಿಸಿದರೆ ಆಗ ಅರ್ಥಮಾಡಿಕೊಳ್ಳುವ ಉಳಿದೆಲ್ಲ ಬಾಗಿಲುಗಳು ಮುಚ್ಚುತ್ತವೆ. ಇದೊಂದು ಮಹಾ  ಕಾವ್ಯ ಎಂದು ಕೊಂಡರೆ ಆಗ ವಿಮರ್ಷೆಯ ಎಲ್ಲ ಮಾನದಂಡಗಳನ್ನು ಅನುಸರಿಸಿ ಈ ಗ್ರಂಥವನ್ನು ನೋಡಬೇಕಾಗುತ್ತದೆ. ಆದರೆ ಬಹುತೇಕ ಭಾರತೀಯರು ಇದನ್ನು ಪುರಾಣ ಎಂದು ಸ್ವೀಕರಿಸಿ ರಾಮನನ್ನು ದೇವರು ಎಂದು ಸ್ವೀಕರಿಸಿಯಾಗಿದೆ. ಹೀಗಾಗಿ ರಾಮಯಣವನ್ನು ವಿಭಿನ್ನ ದೃಷ್ಟಿಯಲ್ಲಿ

ನೋಡಲು ಅವರು ಒಪ್ಪುವುದಿಲ್ಲ.
ನಾನು ಇಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಇತಿಹಾಸ ಎಂದು ಸ್ವೀಕರಿಸಿ ಮಾತನಾಡುತ್ತಿದ್ದ್ಡೇನೆ. ಹೀಗಾಗಿ ಒಂದು ಇತಿಹಾಸವನ್ನು ಹೇಗೆ ನೋಡಬೇಕೋ ಹಾಗೆ ನೋಡಲು ಯತ್ನ ನಡೆಸಿದ್ದೇನೆ. ರಾಮ ಮತ್ತು ರಾವಣ ಇಲ್ಲಿದ್ದರು ಮತ್ತು ಅವರ ನಡುವೆ ಯುದ್ಧ ನಡೆದಿತ್ತು ಎಂಬುದನ್ನು ಒಪ್ಪಿಕೊಂಡು ಮಾತನಾಡುವುದಾದರೆ ಮಹಾಕಾವ್ಯದಲ್ಲಿ ಇರುವ ಭಕ್ತಿ ನಂಬಿಕೆ ಮತ್ತು ಭಕ್ತನೊಬ್ಬ ತನ್ನ ದೇವರ ಬಗ್ಗೆ ಬರೆದುದೆಲ್ಲ ಇತಿಹಾಸವಾಗುವುದಿಲ್ಲ. ಅದು ಕಾವ್ಯವನ್ನು ಬರೆದವನ ಅಭಿಪ್ರಾಯ ನಂಬಿಕೆ ಕೂದ ಎಂಬ ಎಚ್ಚರಿಕೆ ನಮಗೆಲ್ಲ ಇರಬೇಕು. ಆಗ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.
ಮಹಾಭಾರತ ರಾಮಾಯಣಕ್ಕಿಂತ ಹೆಚ್ದಿ ಇತಿಹಾಸಕ್ಕೆ ಹತ್ತಿರವಾಗಿದೆ ಎಂದು ನನಗೆ ಅನ್ನಿಸಿದೆ. ಅದು ಇತಿಹಾಸದ ಮೇಲೆ ಕಟ್ಟಿದ ಮಹಾ ಕಾವ್ಯ. ಹಾಗಂತ ಮಹಾಭಾರತದಲ್ಲಿ ಬಂದಿದ್ದೆಲ್ಲ ನೂರಕ್ಕೆ ನೂರರಷ್ಟು ಸತ್ಯ ಎಂದು ನಾವು ಅಂದುಕೊಳ್ಳಬೇಕಾಗಿಲ್ಲ. ಈಗ ಈ ಮೊದಲು ಪ್ರಸ್ತಾಪಿಸಿದ ಇತಿಹಾಸದ ವಿಚಾರಕ್ಕೆ ನಾನು ಬರುತ್ತೇನೆ. ಭಾರತೀಯ ಇತಿಹಾಸ ಹೀಗೆ ಇತ್ತು ಹೇಳುವ ಸ್ಪಷ್ಟ ಮತ್ತು ನಿಖರ ಮಾಹಿತಿಗಳು ಈಗಲೂ ಲಭ್ಯವಿಲ್ಲ. ಈ ಬಗ್ಗೆ ಸತತ ಸಂಶೋಧನೆ ಕೂಡ ನಡೆದಿಲ್ಲ. ಗುಪ್ತರ ಕಾಲದಿಂದ ಮೈಸೂರು ಸಂಸ್ಥಾನದ ವರೆಗೆ ಇತಿಹಾಸ ಏಕ ಮುಖವಾಗಿದೆ. ನಮ್ಮ ಇತಿಹಾಸಕಾರಲ್ಲಿ    ಎರಡು ಬಗೆಯ ಜನರಿದ್ದಾರೆ. ಕೆಲವರು ನಮ್ಮ ಇತಿಹಾಸವನ್ನು ವೈಭವೀಕರಿಸಿ ಹೇಳುವಂಥವರು. ಇನ್ನೊಂದು ಬಗೆಯ ಇತಿಹಾಸಕಾರರು ಎಡ ಪಂಥೀಯ ಮತ್ತು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಭಾರತೀಯ ಇತಿಹಾಸಕಾರರು.
   ಇವರಲ್ಲಿ ರೋಮಿಲಾ ಥಾಪರ್ ಅಂಥವರು ಪ್ರಮುಖರು.   ಇವರು ಎಂಥವರೆಂದರೆ ಅವರಿಗೆ ಶಂಕರಾಚಾರ್ಯ, ಮಧ್ವಚಾರ್ಯರಂಥವರ ವಿಚಾರಧಾರೆಯ ಮೇಲು ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಯ ಪ್ರಭಾವ ಕಾಣುತ್ತದೆ. ಭಾರತಕ್ಕೆ ಈ ಎರಡು ಧರ್ಮಗಳು ಬಂದಿದ್ದು ಯಾವಾಗ, ಹಿಂದೂ ಧರ್ಮ ಯಾವಾಗಿನಿಂದ ಇದೆ ಎಂಬ ಸಾಮಾನ್ಯ ಜ್ನಾನವೂ ಇಲ್ಲದಂತೆ ಈ ಇತಿಹಾಸಕಾರರು ವರ್ತಿಸುತ್ತಿದ್ದಾರೆ. ಇವರಿಗೆ ಇತಿಹಾಸವನ್ನು ಇತಿಹಾಸವನ್ನಾಗಿ ನೋಡುವುದು ಬೇಕಾಗಿಲ್ಲ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸಂಪೂರ್ಣ ನಿರಾಕರಣೆಯೇ ಇವರ ಮೂಲ ಉದ್ದೇಶ.
ಇನ್ನು ಭಾರತದಲ್ಲಿ ಇರುವುದೆಲ್ಲ ಅದ್ಭುತವಾದುದು ಎಂದು ಹೊರಡುವ ಬಲ ಪಂಥೀಯ ಇತಿಹಾಸಕಾರರು. ಇವರಿಗೂ ಈ ದೇಶದ ಸಾಮಾಜಿಕ ಸಂರಚನೆ ಇಲ್ಲಿರುವ ವೈರುಧ್ಯಗಳು ಮುಖ್ಯವಲ್ಲ. ಇವೂ ಸಹ ಎಲ್ಲವನ್ನೂ ವೈಭವಿಕರಿಸುವ ಮೂರ್ತಿ ಪೂಜಕರು. ಇತಿಹಾಸ ಯಾವುದೇ ಪಂಥದ ಮೇಲೆ ನಿಂತಿರುವುದಲ್ಲ. ಅದು ಕಳೆದುಹೋದ ಸತ್ಯವನ್ನು ಅನಾವರಣಗೊಳಿಸುವ ಕಾಯಕ. ಇಲ್ಲಿ ಬಣ್ಣದ ಕನ್ನಡಕವನ್ನು ಹಾಕಿಕೊಂಡು ನೋಡುವುದು ಸರಿಯಲ್ಲ.
ಇತ್ತೀಚಿನ ಕೆಲವು ಸಂಶೋಧನೆಗಳು ನಮ್ಮ ಇತಿಹಾಸಕಾರರ ಹಳೆಯ ನಂಬಿಕೆಗಳು ಸುಳ್ಲು ಎಂದು ಸಾಬೀತುಪಡಿಸಿವೆ. ಭಾರತದಲ್ಲಿ ಸರಸ್ವತಿ ನದಿ ಇತ್ತು ಎಂಬುದು ಸಾಟ್ ಲೈಟ್ ತಂತ್ರಜ್ನಾನ ಸಾಬೀತುಪಡಿಸಿದೆ. ಎಂದೋ ಬತ್ತಿ ಹೋದ ಈ ನದಿಯ ದಂಡೆಯ ಮೇಲೆ ನೂರಕ್ಕು ಹೆಚ್ಚು ನಾಗರೀಕತೆಗಳು ಇದ್ದವು. ಈ ನಾಗರೀಕತೆಗಳು ಹರಪ್ಪಾ ಮತ್ತು ಮಹಂಜೋದಾರ್ ನಾಗರೀಕತೆಗಿಂತ ಹಿಂದಿನವು. ಹೀಗಾಗಿ ಹರಪ್ಪ ಮತ್ತು ಮಹಂಜೋದಾರ್ ನಾಗರಿಕತೆಯೇ ಅತಿ ಪುರಾತನವಾದ ನಾಗರಿಕತೆ ಎಂಬ ಇತಿಹಾಸಕಾರರ ಪ್ರತಿಪಾದನೆಯನ್ನು  ಅಲ್ಲಗಳೆದಂತಾಗಿದೆ. ಹಾಗೆ ಆರ್ಯರು ಹೊರಗಿನಿಂದ ಭಾರತಕ್ಕೆ ಬಂದವರು ಎಂಬ ವಾದವೂ ಈ ಹೊಸ ಸಂಶೋಧನೆ ಸುಳ್ಳಾಗಿಸಿದೆ. ಯಾಕೆಂದರೆ ಸರಸ್ವನಿ ನದಿಯ ಮೇಲಿನ ನಾಗರೀಕತೆ ಸುಮಾರು ಕ್ರಿಸ್ತಪೂರ್ವ ೧೦,೦೦೦ ವರ್ಷಗಳಷ್ಟು ಹಿಂದಿನವು ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೆ ಡಾ. ಎಸ್ ಆರ್ ರಾವ ನೇತೃತ್ವದಲ್ಲಿ ಧ್ವಾರಕೆಯನ್ನು ಸಮುದ್ರದಾಳದಲ್ಲಿ ಪತ್ತೆ ಮಾಡಿದ್ದು ಮತ್ತೊಂದು ಐತಿಹಾಸಿಕ ಸಾಧನೆ. ಈ ಧ್ವಾರಕೆ ಎಂಬ ನಗರ ಕ್ರಿಸ್ತಪೂರ್ವ ೧೨,೦೦೦ ದಿಂದ ೩೦ ಸಾವಿರ ವರ್ಷಗಳ ಹಿಂದೆ ಎಂಬುದು ಸ್ಪಷ್ಟವಾಗಿದೆ. ಇದು ಭಾರತೀಯ ಇತಿಹಾಸವನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ದದ್ದು ಮಾತ್ರವಲ್ಲ,  ಭಾರತೀಯ ಇತಿಹಾಸದಲ್ಲಿ ಇರುವ ಮಿಥ್ಯೆಯನ್ನು ಬಯಲು ಮಾಡಿದೆ.
ಧ್ವಾರಕೆಯನ್ನು ಪತ್ತೆ ಮಾಡಿದ್ದು ಮಹಾ ಭಾರತ ಕೇವಲ ಕಾವ್ಯವಲ್ಲ ಅದು ಇತಿಹಾಸ ಎಂಬುದನ್ನು ಸಾಭೀತುಪಡಿಸುವುದರ ಜೊತೆಗೆ ಕೃಷ್ಣ ಐತಿಹಾಸಿಕ ವ್ಯಕ್ತಿ ಎಂಬ ಪುಳಕ ನಮಗೆ ಉಂಟಾಗುವಂತೆ ಮಾಡಿದೆ. ಈ ಪುಳಕವನ್ನು ಅನುಭವಿಸುವಾಗಲೇ ಈಗ ನಮ್ಮ ನಡುವೆ ಹಿಮಾಲಯದಂತೆ ಬೆಳೆದ ಕೃಷ್ಣನಿಗೂ ಐತಿಹಾಸಿಕ ಕೃಷ್ಣನಿಗೂ ವ್ಯತ್ಯಾಸ ಇದ್ದಿರಬಹುದು ಎಂಬ ಎಚ್ಚರ ಕೂಡ ನಮಗೆ ಇರಲೇಬೇಕು. ಯಾಕೆಂದರೆ ವ್ಯಕ್ತಿಯೊಬ್ಬ ಕಾಲ  ಕ್ರ‍ಮದಲ್ಲಿ ಸಂಪೂರ್ಣ ದೇವರಾಗಿ ಬೆಳೆದರೆ ಅವನ ಐತಿಹಾಸಿಕ ವ್ಯಕ್ತಿತ್ವ ಸಂಪೂರ್ಣವಾಗಿ ಬದಲಾಗಿರುತ್ತದೆ. ಇತಿಹಾಸ ಎನ್ನುವುದು ವಾಸ್ತವವಾದರೆ ಇತಿಹಾಸ ಪುರಾಣವಾದರೆ ಅದು ಮಾನವಾತೀತವಾದ ಗುಣಧರ್ಮವನ್ನು ಅಳವಡಿಸಿಕೊಂಡು ಬಿಡುತ್ತದೆ. ಹಾಗೆ ಪುರಾಣವಾಗಿ ಬದಲಾದ ಇತಿಹಾಸದಲ್ಲಿ ಬರುವ ವ್ಯಕ್ತಿಗಳು ಅತಿ ಮಾನುಷವಾದ ಶಕ್ತಿಯನ್ನು ಪಡೆದುಕೊಂಡೂ ಬಿಡುತ್ತಾರೆ. ಒಮ್ಮೆ ಹೀಗೆ ಬದಲಾದ ವೈಕ್ತಿಗಳು ಐತಿಹಾಸಿಕ ವ್ಯಕ್ತಿಗಳಾದರೂ ಅವರಿಗೆ ದೈವತ್ವದಿಂದಾಗಿ ದೊರಕಿದ ಅತಿಮಾನುಷ ಶಕ್ತಿ ಅವರನ್ನು ಕಾಲಾತೀತರನಾಗಿ ಮಾಡುಬಿಡುತ್ತದೆ. ಇನ್ನೊಂದು ಮಹತ್ವದ ವಿಷಯವನ್ನು ನಾವು ಮರೆಯುವಂತಿಲ್ಲ. ಇತಿಹಾಸ ಎಲ್ಲ ಕಾಲದಲ್ಲಿ ಸಂತೋಷವನ್ನು ನೀಡುತ್ತದೆ ಎಂದು ಹೇಳಲಾಗುವುದಿಲ್ಲ. ಐತಿಹಾಸಿಕ ವ್ಯಕ್ತಿಗಳು ನಮಗೆ ಇಷ್ಟವಾಗದೇ ಇರಬಹುದು. ಆದರೆ ಅತಿಮಾನುಷ ಶಕ್ತಿಯನ್ನು ಪಡದು ದೈವತ್ವಕ್ಕೆ ಏರಿದ ಐತಿಹಾಸಿಕ ಪಾತ್ರಗಳು ನಮ್ಮ ವಿಶ್ಲೇಷಣೆಯ ಪರಿದಿಯಿಂದ ಹೊರಕ್ಕೆ ಹೋಗಿಬಿಡುತ್ತಾರೆ. ಆದ್ದರಿಂದಲೇ ಪುರಾಣ ನೀಡುವ ಸಂತೋಷವನ್ನು ಇತಿಹಾಸ ನೀಡುವುದಿಲ್ಲ.
ರಾಮಕೃಷ್ಣರು ಹೀಗೆ ಐತಿಹಾಸಿಕ ಪಾತ್ರವಾಗಿದ್ದವರು ಪುರಾಣದ ಪಾತ್ರವಾದವರು. ನಮ್ಮ ವಿಮರ್ಷೆಯ ಪರಿದಿಯಿಂದ ಆಚೆ ಹೋದವರು. ಆದ್ದರಿಂದ ಅವರನ್ನು ಐತಿಹಾಸಿಕ ವ್ಯಕ್ತಿಗಳಾಗಿ ವಿಮರ್ಷಿಸಲು ಪ್ರಾರಂಭಿಸಿದರೆ ಪುರಾಣದ ರಾಮ ಕೃಷ್ಣರು ಎದುರಾಗಿ ಸಮಸ್ಯೆ ಪ್ರಾರಂಭವಾಗುತ್ತದೆ. ಹಾಗೆ ಮಹಾಭಾರತ ಮತ್ತು ರಾಮಾಯಣವನ್ನು ಕಾವ್ಯವನ್ನಾಗಿ ನೋಡಬೇಕೆ ಅಥವಾ ಪುರಾಣವಾಗಿ ನೋಡಬೇಕೇ ಎಂಬುದು. ಪುರಾಣದಲ್ಲಿ ಸಿಗುವ ಪಾತ್ರಗಳೇ ಬೇರೆ, ಪುರಾಣಕ್ಕೆ ಮೂಲವಾದ ಇತಿಹಾಸದ ಪಾತ್ರಗಳೇ ಬೇರೆ. ಇದನ್ನು ಸ್ಪಷ್ಜವಾಗಿ ಅರ್ಥಮಾಡಿಕೊಂಡರೆ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.



Monday, September 2, 2013

ಸೋನಿಯಾ ರೋಗಕ್ಕೆ ವಿದೇಶಿ ಮದ್ದು; ರಾಜಕೀಯಕ್ಕೆ ನವ ಧಾರ್ಮಿಕತೆ ಬೇಕು

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಮತ್ತೆ ಆರೋಗ್ಯ ಕೈ ಕೊಟ್ಟಿದೆ. ಅವರು ತಮ್ಮ ಆರೋಗ್ಯ ತಪಾಸಣೆಗೆ ವಿದೇಶಕ್ಕೆ ಹಾರಿದ್ದಾರೆ, ಅವರಿಗೆ ಆರೋಗ್ಯ ಕೈಕೊಟ್ಟಿದ್ದು ಇದೇ ಮೊದಲಲ್ಲ. ಈ ಮೊದಲು ಆರೋಗ್ಯ ವ್ಯತ್ಯಾಸವಾದಾಗಲೂ ಅವರು ಚಿಕಿತ್ಸೆಗೆ ವಿದೇಶದ ವಿಮಾನ ಹತ್ತಿದ್ದರು. ಆರೋಗ್ಯ ಸರಿಯಾದ ಮೇಲೆ ಭಾರತಕ್ಕೆ ಹಿಂತಿರುಗಿದ್ದರು. ಆದರೆ ಅವರ ಆರೋಗ್ಯಕ್ಕೆ ಏನಾಗಿತ್ತು ? ಅವರಿಗೆ ಆಗಿದ್ದೇನು ಎಂಬುದನ್ನು ಆಗಲೂ ಬಹಿರಂಗಪಡಿಸಿರಲಿಲ್ಲ. ಈಗಲೂ ಅವರಿಗೆ ಆಗಿರುವುದೇನು ಎಂಬ ಬಗ್ಗೆ ಯಾವುದೇ ವಿವರಗಳೂ ಲಭ್ಯವಿಲ್ಲ. ಏನೇ ಇರಲಿ ಅವರ ಆರೋಗ್ಯ ಸುಧಾರಿಸಲಿ, ಅವರು ಆರೋಗ್ಯವಂತರಾಗಿ ದೇಶಕ್ಕೆ ಹಿಂತಿರುಗಲಿ.
ಕಾಂಗ್ರೆಸ್ ಪಕ್ಷಕ್ಕೆ ೧೦೦ ಕ್ಕಿಂತ ಹೆಚ್ಚು  ವಯಸ್ಸಾಗಿದೆ. ಇಂತಹ ಪಕ್ಷದ ಅಧ್ಯಕ್ಷರಿಗೆ ಆರೋಗ್ಯ ಕೆಟ್ಟಿರುವುದು ಆತಂಕದ ವಿಷಯವೇ. ಆದರೆ ಅವರಿಗೆ ಉಂಟಾಗಿರುವ ಆರೋಗ್ಯ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಈ ದೇಶದ ಆರೋಗ್ಯ ವ್ಯವಸ್ಥೆಗೆ ಇಲ್ಲವೆ ? ಇಲ್ಲಿನ ವೈದ್ಯರಿಗೆ ಗುಣಪಡಿಸಲು ಆಗದಂತಹ ಸಮಸ್ಯೆ ಅವರಿಗಾಗಿದೆಯೆ ? ಗೊತ್ತಿಲ್ಲ. ಆದರೆ ಇಲ್ಲಿರುವ ಬಹುಮುಖ್ಯ ಪ್ರಶ್ನೆ ಎಂದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಚಿಕಿತ್ಸೆ ನೀದಲು ಸಾಧ್ಯವಾಗದಂತಹ ಆರೋಗ್ಯ ವ್ಯವಸ್ಥೆ ನಮ್ಮದಾದರೆ ? ಇಲ್ಲಿನ ಸಾಮಾನ್ಯ ಮನುಷ್ಯನ ಗತಿ ಏನು ? ಇದಕ್ಕೆ ಕಾಂಗ್ರೆಸ್ ಪಕ್ಷದ ಹೊಣೆಗಾರಿಕೆ ಉತ್ತರದಾಯಿತ್ವ ಇಲ್ಲವೆ ?
ಈ ದೇಶದ ನೂರಕ್ಕೆ ೯೦ ರಷ್ಟು ಜನರಿಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಶಕ್ತಿ ಇಲ್ಲ. ಅವರು ತಮ್ಮ ಅನಾರೋಗ್ಯಕ್ಕೆ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ದಾದಿಯರ ಸಹಾಯ ಪಡೆಯಬೇಕು, ಇಲ್ಲವೇ ಯಾವುದೋ ನಾಟಿ ವೈದ್ಯರ ಮೊರೆ ಹೋಗಬೇಕು. ಇನ್ನೂ ರೋಗ ಉಲ್ಬಣಗೊಂಡರೆ ಮನೆ ಮಠ ಮಾರಿ ಜಿಲ್ಲಾ ಆಸ್ಪತ್ರೆಗೋ, ಖಾಸಗಿ ಆಸ್ಪತ್ರೆಗೋ ಹೋಗಬೇಕು,. ಇಲ್ಲಿಯೋ ಅವರ ಜೀವ ಸುರಕ್ಷಿತ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಸಾಮಾನ್ಯ ಜನರಿಗೆ ಇಲ್ಲದ ವಿಶೇಷ ಸೌಲಭ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಇದೆ. ಅವರಿಗೆ ಜ್ವರ ಬಂದರೂ ಚಿಕಿತ್ಸೆಗೆ ಅಮೇರಿಕೆಗೆ ಹೋಗಬಹುದು.
ಇಂಥಹ ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಅಧ್ಯಕ್ಷರು ಹಾಗಿದ್ದರೆ ಈ ದೇಶದ ಆರೋಗ್ಯ ವ್ಯವಸ್ಥೆ ಯನ್ನು ನಂಬುವುದಿಲ್ಲ ಎಂದಾದರೆ ಅದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ. ಯಾಕೆಂದರೆ ಈ ದೇಶದಲ್ಲಿ ಏನೇ ಆಗಿರಲಿ, ಅದು ಋಣಾತ್ಮಕವಾಗಿರಲಿ, ಧನಾತ್ಮಕವಾಗಿರಲಿ ಅದರ ಸಂಪೂರ್ಣ ಹೊಣೆ ಕಾಂಗ್ರೆಸ್ ಪಕ್ಷದ್ದೇ. ನೆಹರೂ ಕುಟುಂಬದ್ದೇ. ಯಾಕೆಂದರೆ ಈ ದೇಶವನ್ನು ಬಹುಕಾಲ ಅಳಿದ್ದು, ಆಳುತ್ತಿರುವುದು ಕಾಂಗ್ರೆಸ್ ಪಕ್ಷವೇ. ಇಂದೂ ಸಹ ಆ ಪಕ್ಷ ನೆಹರೂ ಕುಟುಂಬದ ಗುಲಾಮ. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದ ಆತ್ಮ ಮತ್ತು ಜೀವವೇ ನೆಹರೂ ಕುಟುಂಬ   ಈ ಕುಟುಂಬದ ಇಂದಿನ ಯಜಮಾನರಿಗೆ ಈ ದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ನಂಬಿ ಕೆ ಇಲ್ಲ. ಇಲ್ಲಿ ಚಿಕಿತ್ಸೆ ಪಡೆದುಕೊಂಡರೆ ಗುಣವಾಗುತ್ತದೆ ಎಂಬ ನಂಬಿಕೆ ಇಲ್ಲ !
ಇದು ಮನೆಯ ಯಜಮಾನನಿಗೆ ತನ್ನ ಕುಟುಂಬದ ಸಮಸ್ಯರ ಮೇಲೆ ನಂಬಿಕೆ ಇಲ್ಲದ ಸ್ಥಿತಿ.
ಭಾರತದ ವೈದ್ಯಕೀಯ ವ್ಯವಸ್ಥೆಯನ್ನು ಸಾರಾಸಗಟಾಗಿ ತೆಗೆದುಹಾಕುವಂತಿಲ್ಲ. ಇಲ್ಲಿ ಹಣವಿದ್ದ ರೆ ವಿಶ್ವದ ಅತ್ತುಮ ಚಿಕಿತ್ಸೆ ಇಲ್ಲಿ ದೊರೆಯುತ್ತದೆ.  ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಏಷ್ಯಾದ ಮತ್ತು ಆಫ್ರಿಕಾದ ರೋಗಿಗಳು ಭಾರತದತ್ತ ಮುಖಮಾಡುತ್ತಿದ್ದಾರೆ. ಅವರಿಗೆ ಆಮೇರಿಕಾ ಮತ್ತು ಇಂಗ್ಲಂಡಿನಲ್ಲಿ ದೊರಕುವ ಚಿಕಿತ್ಸೆಯೇ ಇಲ್ಲಿ ಕಡಿಮೆ ವೆಚ್ಚದಲ್ಲಿ ದೊರಕುತ್ತಿದೆ. ಭಾರತೀಯರಿಗೆ ಇಲ್ಲಿನ ಹೈಟೆಕ್ ಆಸ್ಪತ್ರೆ ದುಬಾರಿಯನ್ನಿಸಿದರೂ ಅಮೇರಿಕ ಇರೋಪಿಗೆ ಹೋಲಿಸಿದರೆ ಇಲ್ಲಿನ ಚಿಕಿತ್ಸಾ ವೆಚ್ಚ ಕಡಿಮೆಯೇ.
ಇತ್ತೀಚೆಗೆ ಪಾಕಿಸ್ಥಾನದ ರೋಗಿಗಳೂ ಭಾರತಕ್ಕೆ ಬಂದು ನಾರಾಯಣ ಹೃದಯಾಲಯದಂತಹ ವಿಶ್ವ ದರ್ಜೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಉದಾಹರಣೆ ಇದೆ. ಅಂದರೆ ಭಾರತದ ವಿರೋಧವನ್ನು ತಮ್ಮ ಮನಸ್ಸಿನ ಭಾಗವಾಗಿ ಮಾಡಿಕೊಂಡುವರೇ ಹೆಚ್ಚಿರುವ ಪಾಕಿಸ್ಥಾನಿಗಳು ಈ ದೇಶದ ಆರೋಗ್ಯ ವ್ಯವಸ್ಥೆಯನ್ನು, ಇಲ್ಲಿನ ವೈದ್ಯರನ್ನು ನಂಬುತ್ತಾರೆ. ಆದರೆ ನಮ್ಮ ದೇಶದ ಸೋಸೆಗೆ ಆ ನಂಬಿಕೆ ಇಲ್ಲ.
ಸೋನಿಯಾ ಗಾಂಧಿ ಅವರ ಭಾರತ ಪ್ರೇಮವನ್ನು ನಾನು ಪ್ರಶ್ನಿಸುವುದಿಲ್ಲ. ಅವರು ಎಲ್ಲಿಂದಲೂ ಬಂದು ಈ ದೇಶವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ದೇಶವನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ. ಗಂಡ ರಾಜೀವ  ಗಾಂಧಿ ಹತ್ಯೆಯಾದರೂ ಎದೆಗುಂದದೇ ಪಕ್ಷದ ಜವಾಬ್ದಾರಿಯನ್ನು ಹೊತ್ತು ಆ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಹಾಗೆ ತನ್ನ ಮಗ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಪಣತೊಟ್ಟಿದ್ದಾರೆ. ಬೆನ್ನೆಲುಬು ಇಲ್ಲದೇ ನೆಹರೂ ಕುಟುಂಬದ ಗುಲಾಮರೇ ಆಗಿರುವ ಕಾಂಗ್ರೆಸ್ ಹಿರಿಯ ನಾಯಕರೂ ರಾಹುಲ್ ಪಟ್ಟಾಭಿಷೇಕ್ಕೆ ಗರಿ ಗರಿಯಾದ ನೆಹರೂ ಶರ್ಟ್ ತೊಟ್ಟು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆಇಷ್ಟು ವರ್ಷಗಳ ನಂತರವೂ ಸೋನಿಯಾ ಈ ದೇಶದ ಆರೋಗ್ಯ ವ್ಯವಸ್ಥೆಯ್ನ್ನು ನಂಬುತ್ತಿಲ್ಲ. ಅವರ ರೋಗಕ್ಕೆ ವಿದೇಶಿ ಚಿಕಿತ್ಸೆಯೇ ಬೇಕು. ದೇಶದ ಎಲ್ಲ ರೀತಿಯ ಸಮಸ್ಯೆಗಳಿಗೂ ವಿದೇಶಿ ಮಾಧರಿಯೇ ಪರಿಹಾರ ಎಂಬ ನಂಬಿಕೆ
ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಅವರಿಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತದ್ದು ಏನಾಗಿದೆ ಎಂಬುದನ್ನು ಹೇಳಬೇಕಿತ್ತು. ಹಾಗೇ ಬಹಿರಂಗವಾಗಿ ಹೇಳುವುದು ಆ ಪಕ್ಷದ ಕರ್ತವ್ಯವೂ ಆಗಿತ್ತು. ಆದರೆ ಅವರ ಆರೋಗ್ಯದ ಸಮಸ್ಯೆಯನ್ನು ಪಕ್ಷ ಗುಟ್ಟಾಗಿ ಇಟ್ಟಿದೆ. ಒಂದೊಮ್ಮೆ ವಿದೇಶದಲ್ಲಿ ಚಿಕಿತ್ಸೆ ಪಡೆಯದೇ ಬೇರೆ ದಾರಿಯೇ ಇಲ್ಲದಿದ್ದರೆ ಆಗ ಅದನ್ನು ಒಪ್ಪಿಕೊಳ್ಳಬಹುದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಲ್ಲವೂ ಗುಟ್ಟು.
ಸೋನಿಯಾ ಗಾಂಧಿ ಅವರೂ ಸಹ ತಮ್ಮ ಆರೋಗ್ಯಕ್ಕೆ ಈ ದೇಶದಲ್ಲೇ ಚಿಕಿತ್ಸೆ ಪಡೆಯಬಹುದಿತ್ತು. ಈ ದೇಶದ ಸಾಮಾನ್ಯ ನಾಗರಿಕನೊಬ್ಬನಿಗೆ ದೊರಕದ ಸೌಲಭ್ಯ ನನಗೂ ಬೇಡ ಎಂದು ಅವರು ಹೇಳಬಹುದಿತ್ತು. ಈ ದೇಶದ ಸೊಸೆಯಾಗಿ ಬಂದ ನಾನು ಇಲ್ಲಿಯೇ ಬದುಕುತ್ತೇನೆ, ಇಲ್ಲಿಯೇ ಸಾಯುತ್ತೇನೆ ಎಂದು ಹೇಳುವ ಮೂಲಕ ದೇಶದ ಜನರ ಹೃದಯವನ್ನು ಗೆಲ್ಲಬಹುದಿತ್ತು. ಪ್ರಧಾನಿ ಹುದ್ದೆಯಲ್ಲಿ ತಾವು ಕುಳಿತುಕೊಳ್ಳದೇ ಮನಮೋಹನ್ ಸಿಂಗ್ ಅವರನ್ನು ಕೂಡ್ರಿಸಿ ತ್ಯಾಗ ಜೀವಿಯಾದ ಅವರಿಗೆ ಇದೊಂದು ದೊಡ್ಡ ವಿಚಾರವಾಗಿರಲಿಲ್ಲ. ಆದರೆ ಸೋನಿಯಾ ಗಾಂಧಿ ಇಂತಹ ಅವಕಾಶವನ್ನು ಕಳೆದುಕೊಂಡರು.
ಈ ರೀತಿ ಹೇಳಲು ಎರಡರೂ ನೀತಿಯ ಮನಸ್ಥಿತಿ ಬೇಕಾಗುತ್ತದೆ. ಮೊದಲನೇಯದಾಗಿ ನಿಜವಾದ ದೇಶಪ್ರೇಮ ಮತ್ತು ಉತ್ತರದಾಯಿತ್ವ.  ನಾನು ಈ ದೇಶದ ಸಾಮಾನ್ಯ ನಾಗರಿಕಳು. ಕಾಂಗ್ರೆಸ್ ಅಧ್ಯಕ್ಶರಾಗಿದ್ದು ಕಾಕತಾಳೀಯ. ಈ ಹುದ್ದೆಗೆ ಬಂದ ಮೇಲೆ ಹುದ್ದೆಯ ಘನತೆ ಗಾಂಭೀರ್ಯವನ್ನು ಕಾಪಾಡುವುದು ನನ್ನ ಕರ್ತವ್ಯ. ಹೀಗಾಗಿ ದೇಶದ ಸಾಮಾನ್ಯ ನಾಗರಿಕರಿಗೆ ದೊರಕದಿರುವುದು ನನಗೆ ಬೇಡ ಎಂಬ ದೃಢ ನಿರ್ಧಾರದ ಮನಸ್ಸು. ಇಂತಹ ಮನಸ್ಸು ದೇಶ ಮತ್ತು ಸಾಮಾನ್ಯ ಜನರ ಮೇಲಿನ ಪ್ರೀತಿಯಿಂದ ಬರುತ್ತದೆ. ಗಾಂಧೀಜಿಯಂತವರಿಗೆ ಇಂತಹ ಮನಸ್ಸು ದೃಢ ನಿರ್ಧಾರ ಇತ್ತು. ಯಾಕೆಂದರೆ ಅವರ ದೇಶ ಪ್ರೇಮ ಸಾಮಾನ್ಯ ಜನರ ಮೇಲಿನ್ ಪ್ರೀತಿಯಿಂದಲೇ ಬಂದಿದ್ದು.
ಇಂಥಹ ಜನ ಪ್ರಧಾನಿಯಾಗಲೀ ಇನ್ಯಾವುದೇ ಹುದ್ದೆಗೆ ಹೋಗಲಿ ಅದು ತಮ್ಮ ಮತ್ತು ತಮ್ಮ ಕುಟುಂಬದ ಜನ್ಮ ಸಿದ್ಧ ಹಕ್ಕು ಎಂದು ಅಂದುಕೊಳ್ಳುವುದಿಲ್ಲ. ಅವರು ತಾವೊಬ್ಬ ಟ್ರಸ್ಟಿ ಎಂದು ಮಾತ್ರ ಅಂದುಕೊಳ್ಳುತ್ತಾರೆ.
ಸೋನಿಯಾ ಗಾಂಧಿ ಅವರ ಹೆಸರಿನ ಜೊತೆ ಗಾಂಧಿ ಎಂಬ ಸರ್ ನೇಮ್ ಇದ್ದರೂ ಅವರು ಮೋಹನ್ ದಾಸ್ ಕರಮ ಚಂದ್ ಗಾಂಧಿ ಅಲ್ಲ. ಅವರಿಗೆ ಇವರಿಗೆ ಹೋಲಿಕೆ ಮಾಡಲು ಸಾಧ್ಯವೂ ಇಲ್ಲ. ಜೊತೆಗೆ ಮಹಾತ್ಮಾ ಗಾಂಧಿ ಅವರು ಇದ್ದ ಕಾಲದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗೂ ಈಗಿನ ಸ್ಥಿತಿಗೂ ತುಂಬಾ ವ್ಯತ್ಯಾಸ ಇದೆ. ಈಗಿನ ಕಾಂಗ್ರೆಸ್ ಪಕ್ಶಕ್ಕೆ ಹಳೆಯ ಗಾಂಧಿ ಅಲ್ಲ, ಈಗಿನ ಡಿಫರೆಂಟ್ ಗಾಂಧಿಗಳೇ ಬೇಕು ಎಂಬುದು ಸತ್ಯ. ಇವರೆಲ್ಲ ಜಗತೀಕರಣದ ಇಂದಿನ ಸೃಷ್ಟಿಕರ್ತರಾದ ಗಾಂಧಿಗಳು. ಗ್ರಾಮ ಸ್ವರಾಜ್ಯ ಸ್ವದೇಶಿ ಚಳವಳಿಯ ಮಾತನಾಡಿದ ಗಾಂಧಿ ಅಲ್ಲ.
ಇಂಥಹ ನಿರ್ಧಾರ ಕೈಗೊಳ್ಳಲು ಬೇಕಾದ ಇನ್ನೊಂದು ರೀತಿಯ ಮನಸ್ಥಿತಿ ಎಂದರೆ ರಾಜಕೀಯ ಲಾಭವನ್ನೇ ಗಣನೆಗೆ ತೆಗೆದುಕೊಂಡೂ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವುದು. ಸೋನಿಯಾ ಗಾಂಧಿ ಅವರು ಎರಡನೇಯ ಮನಸ್ಥಿಯಂತೆ, ನಾನು ಇಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಘೋಷಿಸಿದ್ದರೆ ದೇಶದ ಜನ ಅವರ ದೇಶ ಪ್ರೇಮಕ್ಕೆ  ಹೌದು ಹೌದು ಎಂದು ತಲೆ ತೂಗುತ್ತಿದ್ದರು. ಇದು ಅವರ ಮಗನನ್ನು ಪ್ರಧಾನಿಯನ್ನಾಗಿ ಮಾಡುವ ಯತ್ನಕ್ಕೆ ಸಹಾಯವನ್ನು ಒದಗಿಸುತ್ತಿತ್ತು. ಆದರೆ ಸೋನಿಯಾ ಹಾಗೆ ಮಾಡಲಿಲ್ಲ. ಅವರು ತಮ್ಮ  ರೋಗಕ್ಕೆ ವಿದೇಶಿ ಮದ್ದು ಪಡೆಯುವ ದೃಡ ನಿರ್ಧಾರ ಮಾಡಿದ್ದರು. ನಮ್ಮೆಲ್ಲರಂತೆ ಅವರಲ್ಲಿಯೂ ಇರಬಹುದಾದ ಬದುಕುವ ಆಸೆ ಮತ್ತು ಜೀವ ಭಯಕ್ಕೆ ವಿದೇಶದ ಪರಿಹಾರವನ್ನೇ ಆಯ್ಕೆ ಮಾಡಿಕೊಂಡರು. ಹೀಗಾಗಿ ಅವರು ಮಹಾನ್ ದೇಶಪ್ರೇಮಿಯೂ ಅಗಲಿಲ್ಲ, ಇತ್ತ ಚಾಣಾಕ್ಷ ರಾಜಕಾರಣಿಯೂ ಆಗಲಿಲ್ಲ. ತಮ್ಮ ಎದುರಿಗೆ ಇದ್ದ ಅದ್ಬುತ ಅವಕಾಶವನ್ನು ಅವರು ಕಳೆದುಕೊಂಡರು.
ಯಾರೇ ಆಗಲಿ ಒಂದು ದೇಶವನ್ನುಆರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಭಾರತ ಎಂದರೇನು ಎಂದು ಕೇಳಿದರೆ ಏನು ಹೇಳುತ್ತೀರಿ ? ರಾಜ್ಯಗಳ ಲೆಕ್ಕವನ್ನು ಹೇಳುತ್ತೀರಾ ? ಎಲ್ಲೆಲ್ಲಿ ಗಡಿ ಇದೆ ಎಂದು ಹೇಳಿತ್ತೀರಾ ? ಹಾಗೆ ಹೇಳಿದರೆ ದೇಶವನ್ನು ಹೇಳಿದಂತಾಯಿತೆ ? ದೇಶ ಎನ್ನುವುದು ಕೇವಲ ಬೌಗೋಲಿಕ ವಿವರಗಳಲ್ಲ. ಹಾಗೆ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂದ ದೇಶವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಜೊತೆಗೆ ಒಂದು ದೇಶಕ್ಕೆ ಒಂದು ಮನಸ್ಸು ಎಂಬುದು ಇರುತ್ತದೆ. ಈ ಮನಸ್ಸು ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ, ನಂಬಿಕೆ, ಧರ್ಮ ಆಚಾರ ಮೊದಲಾದ ಅಂಶಗಳ ಆಧಾರದ ಮೇಲೆ ರೂಪಗೊಂಡಿರುತ್ತದೆ. ಭಾರತೀಯ ಮನಸ್ಸು ಎಂದರೆ ಅಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯ ರಾಮಾನುಜಾಚಾರ್ಯ, ಮಹಾವೀರ ಗೌತಮ ಬುದ್ಧ, ಸೂಪಿ ಸಂತರು, ಬಸವಣ್ಣ ಕಬೀರ ಎಲ್ಲರೂ ಇದ್ದಾರೆ. ಇವರೆಲ್ಲ ದೇಹವನ್ನಲ್ಲ ನಮ್ಮ ಮನಸ್ಸುಗಳನ್ನು ರೂಪಿಸಿದ್ದಾರೆ. ಬುದ್ದಿಗಿಂತ ಹೃದಯವಂತಿಕೆ ಮತ್ತು ಹೃದಯದ ಮೂಲಕವೇ ವಿಚಾರ ಮಾಡುವ ಪರಂಪರೆಯೊಂದನ್ನು ಬೆಳೆಸಿದ್ದಾರೆ. ಭಾರತೀಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದೇ ಆಗಿದೆ.
ಆದರೆ ವಿದೇಶಿ ಮನಸ್ಸುಗಳು ಇಂತಹ ವಾತಾವರಣದಲ್ಲಿ ರೂಪಗೊಂಡಿಲ್ಲ. ಬಹುಮಟ್ಟಿಗೆ ಅದು ವೈಜ್ನಾನಿಕ ಮನಸ್ಥಿತಿ ಅವರದು. ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ

ತಂದು ನಿಲ್ಲಿಸುವುದು ವಿದೇಶಿ ಜಾಯಮಾನ. ಅಲ್ಲಿ ಹೃದಯಕ್ಕೆ ಯಾವ ಕೆಲಸವೂ ಇರುವುದಿಲ್ಲ.
ನಮ್ಮ ಇವತ್ತಿನ ರಾಜಕಾರಣಿಗಳ ಬಹುಮುಖ್ಯ ಸಮಸ್ಯೆ ಎಂದರೆ ಅವರಿಗೆ ಧರ್ಮ ಎನ್ನುವುದು ಕೇವಲ ಮತ ಪಡೆಯುವ ಒಂದು ಆಯುಧ ಮಾತ್ರ. ಕೆಲವರು ಹಿಂದೂ ಧರ್ಮದ ಶ್ರೇಷ್ಥತೆಯ ಬಗ್ಗೆ ಮಾತನಾಡುತ್ತ ಮತ ಪಡೆಯುವವರಾದರೆ, ಇನ್ನೂ ಕೆಲವರು ಜಾತ್ಯತೀತ ತತ್ವದ ಬಗ್ಗೆ ಮಾತನಾಡುತ್ತ ಮತ ಪಡೆಯುವವರು. ಇವರಿಗೆ ಧರ್ಮ ಮತ್ತು ಧಾರ್ಮಿಕತೆಯ ನಡುವಿನ ವ್ಯತ್ಯಾಸವಾಗಲೀ, ವಿಭಿನ್ನವಾದ ಆಧ್ಯಾತ್ಮಿಕತೆ ಅರಿವಾಗಲಿ ಇಲ್ಲ. ರಾಜಕಾರಣಕ್ಕೂ ಧರ್ಮಕ್ಕೂ ಸಂಬಂಧ ಇಲ್ಲದಿದ್ದರೂ ಧಾರ್ಮಿಕತೆ ಇಲ್ಲದ ರಾಜಕಾರಣಕ್ಕೆ ಅಸ್ಥಿತ್ವ ಇಲ್ಲ. ರಾಜಕಾರಣಕ್ಕೆ ಒಂದು ಧಾರ್ಮಿಕತೆ ಬೇಕು. ಅದು ಇಂದಿನ ಆಧುನಿಕ ಬದುಕಿಗೆ ಸಹ್ಯವಾಗುವ, ಆಧುನಿಕ ಮನಸ್ಸುಗಳೂ ಒಪ್ಪಿಕೊಳ್ಳುವ ನವ ಧಾರ್ಮಿಕತೆ. ಇಲ್ಲಿ ವೈಜ್ಜಾನಿಕ ಮನೋಭಾವನೆಯ ಜೊತೆ ಹೃದಯ ಮತ್ತು ಮನಸ್ಸುಗಳು ಒಂದಾಗುವ ಧಾರ್ಮಿಕತೆ. ಇಂತಹ ಧಾರ್ಮಿಕತೆ ದೇಶದ ಇತಿಹಾಸ ಮತ್ತು ಪರಂಪರೆಯನ್ನು ಬಿಟ್ಟು ರೂಪಗೊಳ್ಳುವುದು ಸಾಧ್ಯವಿಲ್ಲ.
ಭಾರತೀಯತೆ ಅಂದರೆ ಅದೇ. ಅಲ್ಲಿ ಕೇವಲ ಬುದ್ದಿಯಲ್ಲ. ಹೃದಯವೂ ಮಾತನಾಡುತ್ತದೆ. ಕೆಲವೊಮ್ಮೆ ಬುದ್ದಿಗಿಂತ ಮನಸ್ಸೇ ಮುಖ್ಯವಾಗುತ್ತದೆ.
ಇದನ್ನು ನಮ್ಮ ರಾಜಕೀಯ ಮತ್ತು ರಾಜಕೀಯ ನಾಯಕರು ಅರಿಯದಿದ್ದರೆ ನಮಗೆ ಉಳಿಗಾಲ ಇಲ್ಲ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...