Friday, August 30, 2013

ಯೋಗೀಶ್ ಮಾಸ್ಟರ್ ಎಂಬ ಅರೆ ಚಿಂತಕರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸಿದ ಪ್ರಣವಾನಂದ ಮತ್ತು ಮುತಾಲಿಕ್........

ಢುಂಢಿ ಎಂಬ ವಿವಾದಾತ್ಮಕ ಕಾದಂಬರಿ ಬರೆದ್ ಯೋಗಿಶ್ ಮಾಸ್ಟರ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಹಿಂದೂ ಮಹಾಸಭಾದ ಪ್ರಣವಾನಂದ್ ಸ್ವಾಮೀಜಿ ದೂರು ನೀಡಿದ್ದರು, ಅವರ ದೂರಿನ ಪ್ರಕಾರ ಯೋಗಿಶ್ ಮಾಸ್ಟರ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನ್ನು ಉಂಟು ಮಾಡಿದ್ದಾರೆ.
ಯೋಗೀಶ್ ಮಾಸ್ಟರ್ ಅವರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಅವರು ಬರೆದ ಯಾವುದೇ ಬರೆಹವನ್ನು ನಾನು ಓದಿಲ್ಲ. ಢುಂಢಿ ಕಾದಂಬರಿಯನ್ನು ನಾನು ಓದಿಲ್ಲ. ಪತ್ರಿಕೆಗಳನ್ನು ಈ ಕಾದಂಬರಿಯಲ್ಲಿ ಇರುವ ವಿಚಾರಗಳ ಬಗ್ಗೆ ಕೆಲವು ವಿವರಗಳು ಬಂದಿದ್ದರೂ ಅದರ ಆಧಾರದ ಮೇಲೆ ತೀರ್ಪು ನೀಡುವುದು ಸರಿಯಲ್ಲ.
ಆದರೆ ಯೋಗೀಶ್ ಮಾಸ್ಟರ್ ಅವರಿಗ ಕೇಳಬೇಕಾದ ಕೆಲವು ಪ್ರಶ್ನಗಳಿವೆ; ಈ ಪ್ರಶ್ನೆಗಳಿಗೆ ಅವರ ಯಾವುದೇ ಟೀವಿ ಸಂದರ್ಶನದಲ್ಲಿ, ಚರ್ಚಾ ಕಾರ್ಯಕ್ರಮಗಳಲ್ಲಿ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಯಾರೂ ಅವರನ್ನು ಪ್ರಶ್ನಿಸಿಯೂ ಇಲ್ಲ.
ಅವರು ಬರೆದ ಢುಂಢಿ- ಅರಣ್ಯಕನೊಬ್ಬ ಗಣೇಶನಾದ ಕಥೆ ಕಾದಂಬರಿಯೂ ಅಥವಾ ಸಂಶೋಧನಾ ಗ್ರಂಥವೂ ? ಅದು ಒಂದೊಮ್ಮೆ ಕಾದಂಬರಿಯಾಗಿದ್ದರೆ ನಮ್ಮ ಮುಂದೆ ಬರುವ ಪ್ರಶ್ನೆಗಳು ಬೇರೆ. ಅದು ಸಂಶೋಧನಾ ಗ್ರಂಥವಾಗಿದ್ದರೆ ಎದುರಾಗುವ ಪ್ರಶ್ನೆಗಳು ಬೇರೆ.
ಈ ಪುಸ್ತಕವನ್ನು ಕಾದಂಬರಿ ಎಂದು ಪತ್ರಿಕೆಗಳು ಕರೆದಿವೆ. ಆದರೆ ಯೋಗೀಶ್ ಮಾಸ್ಟರ್ ತಮ್ಮ ಮುನ್ನಡಿಯಲ್ಲಿ ಇದನ್ನು ಸಂಶೋಧನಾ ಗ್ರಂಥ ಎಂದು ಕರೆದಿದ್ದಾರೆ ಎಂದು ನಾನು ಕೇಳಿದ್ದೇನೆ. ಇದು ನಿಜವಾಗಿದ್ದರೆ ಇದು ಕಾದಂಬರಿಯೇ ಅಥವಾ ಸಂಶೋಧನಾ ಗ್ರಂಥವೇ ಎಂಬುದು ಮೊದಲು ತೀರ್ಮಾನವಾಗಬೇಕು. ಇದಾದ ಮೇಲೆ ಪುಸ್ತಕದ ಬಗ್ಗೆ ಚರ್ಚೆ ನಡೆಯಬೇಕು.
ಕಾದಂಬರಿ ಒಂದು ವಿಭಿನ್ನ ಸಾಹಿತ್ಯ ಪ್ರಕಾರ. ಅದನ್ನು ಆಂಗ್ಲ ಭಾಷೆಯಲ್ಲಿ ಫಿಕ್ಷನ್ ಎಂದು ಕರೆಯುವ ಪ್ರಕಾರಕ್ಕೆ ಸೇರಿದ್ದು. ಅಲ್ಲಿ ಇರುವುದೆಲ್ಲ ಸತ್ಯವಲ್ಲ. ಕಾದಂಬರಿಕಾರ ತಾನು ಹೇಳಲು ಹೊರಟಿದ್ದನ್ನು ಪರಿಣಾಮಕಾರಿ ಕಥೆಯ ಮೂಲಕ ಹೇಳುತ್ತಾನೆ. ಆದ್ದರಿಂದ ಕಥೆ ಕಾಲ್ಪನಿಕ. ಯೋಗಿಶ್ ಮಾಸ್ಟರ್ ಕಾದಂಬರಿ ಬರೆದಿದ್ದರೆ ಅದನ್ನು ಒಂದು ಸಾಹಿತ್ಯ ಕೃತಿಯಾಗಿ ನೋಡಬೇಕು, ಸಂತೋಷಪಡಬೇಕು. ಕಾದಂಬರಿ ಏನನ್ನು ಧ್ವನಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪೊಲೀಸ್ ಪ್ರಕರಣ ಹಾಕುವ ಮೂಲಕವಲ್ಲ..
ಇದು ಸಂಶೋಧನಾ ಗ್ರಂಥ ಎಂದು ತಕ್ಷಣ ಬರುವ ಸಮಸ್ಯೆಗಳು ಒಂದೆರಡಲ್ಲ.  ಮೊದನೆಯದಾಗಿ ಇತಿಹಾಸ ಮತ್ತು ಪುರಾಣದ ಮೂಲಭೂತ  ಸಮಸ್ಯೆ. ಇತಿಹಾಸವನ್ನು ಇತಿಹಾಸವನ್ನಾಗಿ ಸ್ವೀಕರಿಸಬೇಕು. ಪುರಾಣವನ್ನು ಪುರಾಣವನ್ನಾಗಿ ಸ್ವೀಕರಿಸಬೇಕು. ಪುರಾಣ ಮತ್ತಿ ಇತಿಹಾಸದ ನಡುವೆ ಸಂಘರ್ಷ ಉಂಟಾದಾಗ ಪುರಾಣವನ್ನು ನಂಬಿಕೆಯೆಂದು ಸ್ವೀಕರಿಸಿ ಅದಕ್ಕೆ ಕೊಡಬೇಕಾದ ಗೌರವವನ್ನು ಸಲ್ಲಿಸಬೇಕು. ಯಾಕೆಂದರೆ ಪುರಾಣಗಳ ಹಿಂದೆ ಬಲವಾದ ನಂಬಿಕೆಯ ಇತಿಹಾಸ ಇರುತ್ತದೆ. ಈ ನಂಬಿಕೆಯ ಇತಿಹಾಸ ಸಂಶೋಧಿತ ಇತಿಹಾಸದ ಜೊತೆ ಯಾವಾಗಲೂ ಸಂಘರ್ಷವನ್ನು ನಡೆಸುತ್ತಲೇ ಇರುತ್ತದೆ. ಸಂಶೋಧಿತ ಇತಿಹಾಸಕ್ಕೆ ಒಬ್ಬ ವ್ಯಕ್ತಿಯ ವಿಚಾರ ಲಹರಿ ಮತ್ತು ಆತ ನಂಬಿರುವ ಪಂಥವೇ ತಳಹದಿಯಾಗಿರುತ್ತದೆ. ಆದರೆ ಪುರಾಣ ಹಾಗಲ್ಲ. ಅದು ಜನರ ನಂಬಿಕೆಯ ನಡುವೆ ಬೆಳೆದ ಸತ್ಯವಾಗಿರುತ್ತದೆ. ಜನರ ನಂಬಿಕೆ ಎಂದೂ ತಾತ್ವಿಕ ಮತ್ತು ತಾರ್ಕಿಕ ಸತ್ಯವನ್ನು ನಂಬುವುದಿಲ್ಲ. ಅದು ಬಹುಮಟ್ಟಿಗೆ ಭಾವನಾತ್ಮಕವಾದುದು.
ಒಬ್ಬ ಸಂಶೋಧಕ ಇದನ್ನು ಅರ್ಥ ಮಾಡಿಕೊಳ್ಖಬೇಕು.
ನಂಬಿಕೆಯ ಮೇಲೆ ಬದುಕುವ ಜನ ತಮ್ಮ ನಂಬಿಕೆಗೆ ಪೂರಕವಾದ ಪುರಾಣದ ಸೃಷ್ಟಿಗೆ ಕಾರಣರಾಗಿರುತ್ತಾರೆ. ಈ ಪುರಾಣ ನಂಬಿಕೆಯ ಆಧಾರದ ಮೇಲೆ ದೇವರನ್ನು ಸೃಷ್ಟಿಸುತ್ತದೆ. ಈ ದೇವರು ಅವ್ಯಕ್ತದಿಂದ ವ್ಯಕ್ತವಾಗುವುದು ಹೀಗೆ. ವ್ಯಕ್ತವಾಗುವುದು ರೂಪದಿಂದ. ಈ ರೂಪವನ್ನು ನಾನು ಪ್ರತಿಮೆ ಅಥವಾ ಮೂರ್ತಿ ಎಂದು ಕರೆಯುತ್ತೇನೆ. ಜನರ ಪುರಾಣಾಧಾರಿತ ನಂಬಿಕೆಯ ಮೇಲೆ ಸೃಷ್ಟಿಯಾದ ಪ್ರತಿಮೆ ಇರುವುದು ಪೂಜೆಗಾಗಿ, ಪೂಜಿಸುವವರಿಗಾಗಿ. ಇದನ್ನು ಓಡೆದು ಹಾಕಲು ಇತಿಹಾಸ ಯತ್ನ ನಡೆಸಿದ ತಕ್ಷಣ ಸಮಸ್ಯೆ ಪ್ರಾರಂಭವಾಗುತ್ತದೆ. ಎಡಪಂಥೀಯ ವಿಚಾರವಾದಿಗಳು ಈಗ ಮಾಡುತ್ತಿರುವ ಕೆಲಸ ಇದೇ. ಅದೂ ನಂಬಿಕೆಯ ಮೂರ್ತಿಯನ್ನು ಭಂಜಿಸುವ ಕೆಲಸ. ಇದಕ್ಕೆ ಅವರು ಇತಿಹಾಸದ ಸತ್ಯದ ಲೇಪವನ್ನು ಹಾಕುತ್ತಿದ್ದಾರೆಹುಮುಖ್ಯ
ಇನ್ನು ಇದು ಸಂಶೋಧನಾ ಗ್ರಂಥವಾಗಿದ್ದರೆ ಇದರ ಒಳಗೆ ಇರುವ ವಿಚಾರಗಳ ಬಗ್ಗೆ ಸಂಶೋಧನೆ ನಡೆಸಬೇಕು, ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಬೇಕು. ಯಾವುದು ಸತ್ಯ ಎಂಬುದನ್ನು ತಿಳಿದುಕೊಳ್ಳಲುನ್ ಯತ್ನ ನಡೆಸಬೇಕು. ಆಗ್ಲೂ ಒಮ್ಮೆಲೆ ಪೋಲೀಸ್ ಪ್ರಕರಣ ದಾಖಲಿಸುವುದಲ್ಲ.
ಆದರೆ ನಾವೆಲ್ಲ ತಪ್ಪುತ್ತಿದ್ದೇವೆ. ನಮಗೆ ಸಹನೆ ಕಡಿಮೆಯಾಗುತ್ತಿದ್ದೆ. ಫ್ಯಾಸಿಸ್ಟ್ ಭಾವನೆ ಹೆಚ್ಚುತ್ತಿದೆ. ನಮ್ಮ ನಂಬಿಕೆಗಳ ವಿರುದ್ಧ ಯಾರೂ ಮಾತನಾಡಿದರೂ ಅವರನ್ನು ಮುಗಿಸುವ ಮಾತು ಹೇಳುವಷ್ಟು ಹಿಂಸಾ ಪ್ರವೃತ್ತಿ ಹೆಚ್ಚುತ್ತಿದೆ. ಈ ವಿಚಾರದಲ್ಲಿ ಪರಂಪರೆಯ ಪರವಾಗಿ ಇರುವವರು ಮತ್ತು ಎಡಪಂಥೀಯ ವಿಚಾರಧಾರೆಯನ್ನು ಹೊಂದಿದವರು,   ಇಬ್ಬರೂ ತಪ್ಪು ಮಾಡುತ್ತಿದ್ದಾರೆ. ಇವರಲ್ಲಿ ಯಾರಿಗೂ ಸತ್ಯ ತಿಳಿದುಕೊಳ್ಳುವುದು ಬೇಕಾಗಿಲ್ಲ.
ಈ ದೇಶದಲ್ಲಿ ಎರಡು ರೀತಿಯ ಸಂಶೋಧಕರು ಮತ್ತು ಇತಿಹಾಸಕಾರರನ್ನು ನೋಡಬಹುದು. ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತರಾದ, ವಿದೇಷಿ ಮಾನದಂಡ ಬಳಸಿ ವಿಮರ್ಷಿಸುವ ಇತಿಹಾಸಕಾರರು ಒಂದೆಡೆಯಾದರೆ ಪಕ್ಕಾ ಬಲಪಂಥೀಯ ಇತಿಹಾಸಕಾರರು ಇನ್ನೊಂದೆಡೆ. ಇವರೆಬ್ಬರು ತಾವು ಹಾಕಿಕೊಂಡ ಬಣ್ಣದ ಕನ್ನಡಕದ ಮೂಲಕವೇ ಇತಿಹಾಸವನ್ನು ನೋಡುವವರು.
ಭಾರತಕ್ಕೆಬ್ರಿಟೀಶರು ಬಂದು ಪ್ರಭುತ್ವವನ್ನು ಸಾಧಿಸಿದ ಮೇಲೆಈ ಸಮಸ್ಯೆ ಪ್ರಾರಂಭವಾಯಿತು. ಬ್ರಿಟೀಷರು ಭಾರತದ ಇತಿಹಾಸವನ್ನು ಆಂಗ್ಲ ಕಣ್ಣುಗಳಿಂದ ನೋಡತೊಡಗಿದರು. ಹೀಗಾಗಿ ಭಾರತೀಯ ಇತಿಹಾಸ ನಮಗೆ ಅಪರಿಚಿತವಾಗುವಂತಾಯಿತು. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಬಲಪಂಥೀಯ ವೈಚಾರಿಕರು ಮತ್ತು ಇತಿಹಾಸಕಾರರು. ಇವರ ಇತಿಹಾಸ ಎಲ್ಲವನ್ನೂ ವೈಭವೀಕರಿಸಿವ, ದೈವತ್ವಕ್ಕೇರಿಸುವ ಇತಿಹಾಸವಾಗಿತ್ತು. ಒಂದೆಡೆ ಭಾರತೀಯತೆಯೂ ಸೇರಿದಂತೆ ಎಲ್ಲವನ್ನೂ ನಿರಾಕರಿಸುವ ವಿಚಾರಧಾರೆ ಮತ್ತು ಇತಿಹಾಸ. ಮತ್ತೊಂದೆಡೆ  ಎಲ್ಲವನ್ನೂ ಒಪ್ಪಿಕೊಂಡು ಚಿನ್ನದ ಬಟ್ಟಲಿನಲ್ಲಿ ಮುಂದಿಡುವ ವಿಚಾರಧಾರೆ ಮತ್ತು ಇತಿಹಾಸ.
ಯೋಗೀಷ್ ಮಾಸ್ಟರ್ ಮೊದಲನೆಯ ಗುಂಪಿಗೆ ಸೇರಿದ ವಿಚಾರಧಾರೆಯನ್ನು ಒಪ್ಪಿಕೊಂಡವರು ಎಂದು ಅನ್ನಿಸುತ್ತದೆ. ಅವರು ತಮ್ಮ ಪುಸ್ತಕಕ್ಕೆ ನೀಡಿದ ಬಹುತೇಕ ಆಕರ ಗ್ರಂಥಗಳು ನಾನು ಈ ಮೊದಲೇ ಹೇಳಿದ ಎಡಪಂಥೀಯ ವೈಚಾರಿಕರು ಮತ್ತು ಇತಿಹಾಸಜ್ನರು ಬರೆದ ಆಕರ ಗ್ರಂಥ ಗಳು ಎಂಬುದನ್ನು ಗಮನಿಸಿದ್ದೇನೆ. ಈ ಮೂಲಕ ಅವರು ತಮ್ಮ ನಿಲುಮೆಯನ್ನು ಸ್ಪಷ್ಟಪಡಿಸಿದ್ದಾರೆ.ತಾವು ಎಡಪಂಥೀಯರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರದು ಎಡಪಂಥೀಯ ವಿಚಾರಧಾರೆ, ಆದರೆ ಅವರು ಈಗ ನಾವು ನಂಬಿರುವ ನಮ್ಮೆಲ್ಲರ ಮನೆ ಮನಸ್ಸುಗಳಲ್ಲಿ ಸ್ಥಾಪಿತನಾದ ಗಣೇಶನ ಬಗ್ಗೆ ಮಾತನಾಡಿಲ್ಲ. ಅವರು ಹೇಳಿದ್ದು ಗಣೇಶ ಹೀಗಿದ್ದ ಎಂದು.ಹೀಗಾಗಿ ಯಾರೂ ತಲೆ ಕೆಡಿಸಿಕೊಳ್ಲಬೇಕಿಲ್ಲ. ನಮಗೆ ಈಗ ಗಣೇಶ ಏನಾಗಿದ್ದಾನೆ ಎಂಬುದು ಮುಖ್ಯ. ನಾವೆಲ್ಲ ನಾವು ಕಂಡುಕೊಂಡಿರುವ ಗಣೇಶನನ್ನು ಪೂಜೆ ಮಾಡೋಣ.
ಇದೆಲ್ಲ ಪಂಥಗಳಿಗೆ ಜೋತು ಬಿದ್ದವರ ಸಮಸ್ಯೆ. ಪಂಥಗಳಿಗೆ ಜೋತು ಬಿದ್ದವರು ಅದನ್ನು ಬಿಟ್ಟು ಯೋಚನೆ ಮಾಡುವುದಿಲ್ಲ.
ಗಣೇಶನ ಇತಿಹಾಸದ ಬಗ್ಗ್ರೆ ವೈಚಾರಿಕರು ಎಡಪಂಥೀಯರು ಆಡುವ ಮಾತುಗಳನ್ನು ವಿರೋಧಿಸುವವರು ನಿಜವಾದ ಧಾರ್ಮಿಕರಾಗಿದ್ದರೆ ಅವರ ಜೊತೆ ಮಾತನಾಡುವುದಕ್ಕೆ ಚರ್ಚಿಸುವುದಕ್ಕೆ ಸಿದ್ಧರಿರಬೇಕು. ಈ ದೇಶದಲ್ಲಿ ಧರ್ಮ ಸಂಸ್ಥಾಪನೆ ಮಾಡಿದ ಶಂಕಾರಾಚಾರ್ಯರಂಥವರೂ ಚರ್ಚೆಗೆ ಸದಾ ತೆರೆದುಕೊಂಡಿದ್ದರು. ಇಂತಹ ಮನಸ್ಥಿಯಿಂದಾಗಿಯೇ ಧಾರ್ಮಿಕರು ಇರುವಾಗಲೇ ಚಾರ್ವಾಕರಿಗೂ ಇಲ್ಲಿ ಅವಕಾಶವಿತ್ತು. ಚಾರ್ವಾಕರನ್ನು ಯಾವ ಧಾರ್ಮಿಕರೂ ಜೈಲಿಗೆ ಕಳುಹಿಸಲಿಲ್ಲ. ಅವರ ಕೊಲೆ ಮಾಡಲಿಲ್ಲ. ಹಾಗೆ ಈ ನೆಲದಲ್ಲಿ ಹಿಂದೂ ಧರ್ಮದ ಜೊತೆಗೆ ಜೈನ ಮತ್ತು ಬೌದ್ಧ ಧರ್ಮಗಳು ಹುಟ್ಟಿ ಬೆಳಯಲು ಕಾರಣವಾಗಿದ್ದು ಇಂತಹ ಮುಕ್ತ ಮನಸ್ಥಿತಿಯಿಂದಲೇ. ಆದರೆ ಇಂದು ಹಿಂದೂ ಧರ್ಮವನ್ನು ಉಳಿಸುತ್ತಿದ್ದೇವೆ ಎಂದು ಮಾತನಾಡುವವರು ಚರ್ಚೆಗೆ ಮುಂದೆ ಬರುತ್ತಿಲ್ಲ. ಕಾಲು ಕೆದರಿ ಜಗಳ ಮಾಡಲು ಮುಂದೆ ಬರುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ಮುಸ್ಲಿಂ ರ ಬಗ್ಗೆ ಮಾತನಾಡಿ ಎಂದು ಸವಾಲು ಹಾಕುತ್ತಾರೆ. ಆ ಮೂಲಕ ಹಿಂದೂ ಧರ್ಮವನ್ನು ಇನ್ನೊಂದು ಧರ್ಮಕ್ಕೆ ಸಮಾನ ಎಂಬಂತೆ ಪ್ರತಿಬಿಂಬಿಸಿ ತಪ್ಪು ಮಾಡುತ್ತಿದ್ದಾರೆ.
ಯೋಗೀಶ್ ಮಾಸ್ಟರ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪ್ರಣವಾನಂದ ಸ್ವಾಮೀಜಿ ಎನ್ನುವವರು ಟೀವಿ ಚರ್ಚೆಯಲ್ಲಿ ಆಡಿದ ಮಾತುಗಳು ಯಾರಿಗೂ ಶೋಭೆ ತರುವಂತೆ ಇರಲಿಲ್ಲ. ನಾನು ಈ ಕಾದಂಬರಿಯನ್ನು ಓದುವುದಿಲ್ಲ. ಇವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದರು. ಪುಸ್ತಕವನ್ನು ಓದದೇ ಅದರಲ್ಲಿ ಇರುವ ವಿಚಾರವನ್ನು ತಿಳಿದುಕೊಳ್ಳದೇ ಒಪ್ಪುವುದಾಗಲೀ ವಿರೋಧಿಸುವುದಾಗಲಿ ಸರಿಯಲ್ಲ ಎಂಬ ಸಾಮಾನ್ಯ ಜ್ನಾನ ಕೂಡ ಅವರಿಗೆ ಇದ್ದಂತಿರಲಿಲ್ಲ. ಹಾಗೆ ಇನ್ನೊಬ್ಬ ಜ್ಯೋತಿಷಿ ಟಿವಿ ಸ್ಟೂಡಿಯೋದಲ್ಲಿ ಪುಸ್ತಕವನ್ನು ಹರಿದುಹಾಕಿ ವೀರಾವೇಷದ ಮಾತುಗಳನ್ನು ಆಡಿದರು.
ಯಾವುದೋ ಒಂದು ಪುಸ್ತಕದ ಮೂಲಕ ಹಿಂದೂ ಧರ್ಮ ನಶಿಸುವಂತಿದ್ದರೆ ಅದು ೫ ೦೦೦ ವರ್ಷಗಳಿಂದ ಇಲ್ಲಿ ಇರುತ್ತಿರಲಿಲ್ಲ. ಇಲ್ಲಿ ನಡೆಯುತ್ತಿರುವ ಬೇರೆ ಧರ್ಮಗಳ ಧಾಳಿ, ಮತಾಂತರಗಳ ಮೂಲಕ ಎಂದೋ ಮರೆಯಾಗಬೇಕಾಗಿತ್ತು. ಆದರೆ ಹಿಂದೂ ಧರ್ಮ ಕೇವಲ ಆಚರಣೆಯಾಗದೇ ಒಂದು ತಾತ್ವಿಕತೆ ಆದ್ದರಿಂದ ಅದು ಉಳಿದುಕೊಂಡಿದೆ. ಅದು ನಮಗೆ ಪರಮತ ಸಹಿಷ್ಣತೆಯನ್ನು ಬೇರೆಯವರ ವಿಚಾರವನ್ನು ಒಪ್ಪಿಕೊಳ್ಳದಿದ್ದರೂ ಅದನ್ನು ಗೌರವಿಸಬೇಕು ಎಂಬ ಸಜ್ಜನಿಕೆಯನ್ನು ನಮಗೆ ಕಲಿಸಿಕೊಟ್ಟಿದೆ.
ವೇದ ಕಾಲದಿಂದಲೂ ಈ ದೇಶದಲ್ಲಿ ಚಾರ್ವಾಕರಿದ್ದರು. ಅವರ ಜೊತೆ ಮುಖಾಮುಖಿಯಾಗಿಯೇ ಈ ಧರ್ಮದಲ್ಲಿ ಹಲವು ರೀತಿಯ ರೂಪಾಂತರಗಳು ಸಂಭವಿಸಿದ್ದು. ಪ್ರಕೃತಿ ಪೂಜೆಯಿಂದ ಮನುಷ್ಯರಂತೆ ದೈಹಿವಾಗಿ ಕಾಣುವ ದೇವರುಗಳವರೆಗೆ ದೈವ ಪೂಜೆ ಬೆಳೆದುಬಂದಿದ್ದು. ಇದೇ ಹಿಂದೂ ಧರ್ಮ ವಿಭಿನ್ನ ಧರ್ಮವಾಗಿ ಉಳಿದುಕೊಂಡಿದ್ದು.
ಆದರೆ ಪ್ರಣವಾನಂದ ಅಂಥವರಿಗೆ ಇದೆಲ್ಲ ಅರ್ಥವಾಗುವುದಿಲ್ಲ. ಧರ್ಮ ಮತ್ತು ಧಾರ್ಮಿಕತೆಯ ನಡುವೆ  ಇರುವ ವ್ಯತ್ಯಾಸ ತಿಳಿಯುವುದಿಲ್ಲ. ಧಾರ್ಮಿಕತೆ ಇರದವರ ಕೈಯಲ್ಲಿ ಯಾವಾಗಲೂ ಧರ್ಮ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಧರ್ಮ ಆಂತರಿಕವಾಗಿ ಘಟಿಸುವಂತಹುದು. ಅದು ಬಹಿರಂಗವಾಗಿ ಪ್ರದರ್ಶಿಸುವುದಲ್ಲ.    ಜೊತೆಗೆ ವಿಚಾರಗಳು ಮತ್ತು ವ್ಯಕ್ತಿಗಳ ನಡುವಿನ ವ್ಯತ್ಯಾಸ  ಅರ್ಥ ಆಗದಿದ್ದರೆ ಯಾರೊಬ್ಬರು ಧಾರ್ಮಿಕನಾಗಲು ಸಾದ್ಚ್ಯವಿಲ್ಲ. ಆದರೆ ವಿಚಾರಗಳನ್ನು ವಿರೋಧಿಸುವವರು  ದುರ್ಬಲರಾಗಿದ್ದರೆ ಆಗ ವ್ಯಕ್ತಿಗಳ ಮೇಲೆ ಪ್ರಹಾರ ಮಾಡಲು ಪ್ರಾರಂಭಿಸುತ್ತಾರೆ.
ನನಗೆ  ಯೋಗೀಶ್ ಮಾಸ್ಟರ್ ಅಂತಹ ಮಹಾನ್ ಸಂಶೋಧಕ ಎಂದು ಅನ್ನಿಸುತ್ತಿಲ್ಲ.ಅವರು ವಿಕ್ಷಿಪ್ತರೂ ಆಗಿರಬಹುದು, ವಿಕೃತಿಯೂ ಅವರಲ್ಲಿ ಇರಬಹುದು,  ಆದರೆ ಆತ ಮೆಂಟಲ್ ಎಂಬ ಮಾತುಗಳು ಮಾಧ್ಯಮದಲ್ಲಿ ಕೇಳಿ ಬರತೊಡಗಿದೆ, ಹಾಗೆ ಇನ್ನೂ ಕೆಲವರು ಅವರನ್ನು ಹಿರೋ ಮಾಡುತ್ತಿದ್ದಾರೆ. ಯೋಗೀಶ್ ಮಾಸ್ಟರ್ ಎನೇ ಆಗಿರಲಿ, ಅವರು ವ್ಯಕ್ತಪಡಿಸಿದ ವಿಚಾರಗಳ ಬಗ್ಗೆ  ಚರ್ಚೆ ನಡೆದು ಒಂದು ತಾರ್ಕಿಕ ಅಂತ್ಯಕ್ಕೆ ಬರುವದು ಅಗತ್ಯ. ಆದರೆ ಇಲ್ಲಿ ವಿಚಾರಕ್ಕಿಂತ ವ್ಯಕ್ತಿಯನ್ನು ನಾವು ಮುಖ್ಯರನ್ನಾಗಿ ಮಾಡುತ್ತಿದ್ದೇವೆ., ಇದು ವಿಚಾರವನ್ನು ಎದುರಿಸಲಾಗದೇ ವ್ಯಕ್ತಿಗಳ ಮೇಲೆ ಆಕ್ರಮಣ ನಡೆಸುವ ಅಸಹಾಯಕ ಸ್ಥಿತಿ. ಇಂತಹ ಅಸಾಯಕ ಸ್ಥಿತಿಗೆ ನಿಜವಾದ ಧಾರ್ಮಿಕರು ಬರಲು ಸಾಧ್ಯವಿಲ್ಲ. ಆದರೆ ಹಿಂದೂ ಧರ್ಮದ ಪ್ರತಿಪಾದಕರು ಇಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಅವರು ನಿಜವಾದ ಧಾರ್ಮಿಕರಲ್ಲ. ಅವರು ನಿಜವಾದ ಹಿಂದೂಗಳಲ್ಲ. ಜೊತೆಗೆ ಇವರಿಗೆ ನಿಜವಾಗಿ ಧರ್ಮ ಕಾಳಜಿ ಇದೆಯೆ ಎಂಬ ಬಗ್ಗೆ ಕೂಡ ಅನುಮಾನ ಮೂಡುತ್ತದೆ.
ಈಗ ಯೋಗಿಶ್ ಅವರು ಜೈಲಿಗೆ ಹೋಗುವ ಮೂಲಕ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಾಯುವುದಿಲ್ಲ. ಯಾಕೆಂದರೆ ವ್ಯಕ್ತಿಗಳಿಗೆ ಸಾವಿದೆ. ವಿಚಾರಕ್ಕೆ ಸಾವಿಲ್ಲ. ವ್ಯಕ್ತಿ ಜೈಲಿಗೆ ಹೋದರೆ ಅವರ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಜೈಲಿಗೆ ಹಾಕುವುದು ಸಾಧ್ಯವಿಲ್ಲ. ಧಾರ್ಮಿಕತೆ ಯಾರಲ್ಲಿ ಇದೆಯೋ ಅವರು ಮನಸ್ಸನ್ನು ಮುಚ್ಚಿಕೊಂಡಿರುವುದಿಲ್ಲ. ಮನಸ್ಸನ್ನು ತೆರೆದಿಟ್ಟುಕೊಂಡರೆ ಮಾತ್ರ ದೇವರ ದರ್ಶನವಾಗುತ್ತದೆ. ದರ್ಶನ ಎಂದು ಹೇಳುವುದಕ್ಕಿಂತ ಅನುಭವವಾಗುತ್ತದೆ ಎಂದು ಹೇಳುವುದು ಹೆಚ್ಚು ಸೂಕ್ತ.
ಪ್ರ ಣವಾನಂದ ಸ್ವಾಮೀಜಿ, ಪ್ರಮೋದ್ ಮುತಾಲಿಕ್ ಹಾಗೂ ಇತರ ಹಿಂದೂ ಸಂಘಟನೆಗಳ ನಾಯಕರು ಮೊದಲು ಪುಸ್ತಕವನ್ನು ಓದಬೇಕು. ಅದನ್ನು ಓದಿದ ಮೇಲೆ ಯಾವ ಯಾವ ಅಂಶಗಳ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯಗಳಿವೆಯೋ ಅದರ ಬಗ್ಗೆ ಲೇಖಕರ ಜೊತೆ ಮುಕ್ತ ಚರ್ದೆ ನಡೆಸಬೇಕು. ಅದನ್ನು ಬಿಟ್ಟು ಜೈಲು ಹೊಡೆದಾಟ ಪ್ರತಿಭಟನೆಯ ಬಗ್ಗೆ ಮಾತನಾಡಿದರೆ ಅದರಿಂದ ಯಾವ ಸಾಧನೆಯನ್ನು ಮಾಡಿದಂತಾಗುವುದಿಲ್ಲ. ಹಿಂದೂ ಧರ್ಮಕ್ಕೂ ಕೊಡುಗೆ ನೀಡುವುದಕ್ಕಿಂತ ಕೆಡುಕು ಮಾಡಿದಂತಾಗುತ್ತದೆ ಎಂಬುದನ್ನು ಇವರೆಲ್ಲ ಅರ್ಥ ಮಾಡಿಕೊಳ್ಳಬೇಕು.
ಯೋಗೀಶ್ ಮಾಸ್ಟರ್ ಕೂಡ ತಾವು ಬರೆದ ವಿಚಾರಗಳಿಗೆ ತಾವೇ ಜವಾಬ್ದಾರರು. ತಾವು ಯಾವ ಯಾವ ಗ್ರ್ಸಂಥಗಳ ಆಧಾರದ ಮೇಲೆ ಈ ಅಂಶಗಳನ್ನು ಪ್ರತಿಪಾದಿಸಿದರೋ ಅದನ್ನು ಸಾಬೀತುಪಡಿಸುವುದು ಅವರ ಹೊಣೆಗಾರಿಕೆ. 

Wednesday, August 28, 2013

ಕೃಷ್ಣಾಷ್ಟಮಿಯಂದು ರಾಮ ಕೃಷ್ಣರನ್ನು ನೆನೆದು ..........




ಇಂದು ಕೃಷ್ಣ ಜನ್ಮಾಷ್ಟಮಿ. ವಿಶ್ವಾದ್ಯಂತ ಇರುವ ಹಿಂದೂಗಳು ಇಂದು ಕೃಷ್ಣನ ಪೂಜೆ ಮಾಡುತ್ತಿದ್ದಾರೆ. ಭಜನೆ ಸಂಕೀರ್ತನೆಗಳು ನಡೆಯುತ್ತಿವೆ. ಕೃಷ್ಣನ ಹೆಸರಿನಲ್ಲಿ ಬಗೆ ಬಗೆಯ ತಿಂಡಿಗಳನ್ನು ಮಾಡಿ ಸಂತೋಷಪಡುತ್ತಿದ್ದಾರೆ. ಇಂತಹ ಆಚರಣೆಗಳು ಸಾಮುದಾಯಿಕ ಭಾವನೆಯನ್ನು ನೀಡುವುದರಿಂದ ಇವೆಲ್ಲ ನಮಗೆ ಬೇಕು. ಆದರೆ ಕೃಷ್ಣ ದೇವರಾಗಿ ನಮ್ಮೆಲ್ಲರ ಪೂಜೆಗೆ ಪಾತ್ರನಾಗಿರುವುದರಿಂದ ನಮಗೆ ಬೇರೆ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.
ಇದು ದೇವರಾಗುವ ಅಥª ದೇವರನ್ನಾಗಿ ಮಾಡುವುದರಿಂದ ಉಂಟಾಗುವ ಸಮಸ್ಯೆ. ನಾವು ದೇವರನ್ನು ಪೂಜೆ ಮಾಡಲು ಪ್ರಾರಂಭ ಮಾಡಿದ ತಕ್ಷಣ ಅವನನ್ನು ಅರ್ಥ ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇವೆ. ಆತನನ್ನು ಗುಡಿ ಗೋಪುರಗಳಲ್ಲಿ ಬಂಧಿಸಿಟ್ಟುಬಿಡುತ್ತೇವೆ. ಮಂಗಳಾರತಿ ಮಾಡಿ ಕೃತಾರ್ಥರಾಗಿಬಿಡುತ್ತೇವೆ. ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು.
ಭಾರತೀಯ ಪರಂಪರೆಯಲ್ಲಿ ಮತ್ತು ಪುರಾಣ ಇಲಿಹಾಸಗಳಲ್ಲಿ ಬರುವ ಎರಡು ಅದ್ಭುತ ಪಾತ್ರಗಳೆಂದರೆ ರಾಮ ಮತ್ತು ಕೃಷ್ಣ. ರಾಮನ ಬದುಕು ಮತ್ತು ನಂಬಿಕೆ ತುಂಬಾ ಸರಳವಾದುದು. ಆದರೆ ಅವನಂತೆ ಬದುಕುವುದು ಕಷ್ಟ. ಕೃಷ್ಣ ವ್ಯಕ್ತಿತ್ವ ತುಂಬಾ ಸಂಕೀರ್ಣವಾದುದು. ಹೀಗಾಗಿ ಕೃಷ್ಣನಾಗುವುದು ಸಾಧ್ಯವೇ  ಇಲ್ಲ. ರಾಮಕೃಷ್ಣನಂತವರು ವಿಶ್ವದ ಬೇರೆ ಯಾವುದೇ ದೇಶದ ಪುರಾಣ ಮತ್ತು ಇತಿಹಾಸದಲಿ ಕಾಣ ಸಿಗುವುದಿಲ್ಲ. ಇತಿಹಾಸ ಎಂಬ ಶಬ್ದವನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ಬಹುತೇಕ ಪುರಾಣಗಳ ಮೂಲಧ್ರವ್ಯ ಇತಿಹಾಸವೇ. ಐತಿಹಾಸಿಕ ಪುರುಷರು ಕಾಲಕ್ರಮೇಣ ಪುರಾಣಕ್ಕೆ ಬೇಕಾದ ಬುನಾದಿಯನ್ನು ಒದಗಿಸುತ್ತಾರೆ. ಐತಿಹಾಸಿಕ ಪುರುಷರ ಅಸ್ತಿ ಪಂಜರಕ್ಕೆ ಪುರಾಣದ ಮಾಂಸ ಖಂಡಗಳು ತುಂಬಿಕೊಳ್ಳುತ್ತವೆ. ಇತಿಹಾಸದಲ್ಲಿ ಕಪ್ಪು ಬಿಳುಪು ಮಾತ್ರ ಇದ್ದರೆ ಪುರಾಣ ಬಣ್ಣಗಳನ್ನು ಒಳಗೊಂಡಿರುತ್ತದೆ
ರಾಮ ಮತ್ತು ಕೃಷ್ಣ ಇಬ್ಬರೂ ಐತಿಹಾಸಿಕ ಪುರುಷರು ಎಂಬ ಬಗ್ಗೆ ಯಾವ ಅನುಮಾನವೂ ಬೇಡ. ಅವರಿಬ್ಬರೂ ಈ ದೇಶದ ಮಣ್ಣಿನಲ್ಲಿ ಓಡಾಡಿದವರು. ತಮ್ಮ ವ್ಯಕ್ತಿತ್ವದ ಮೂಲಕ ಐದು ಸಾವಿರ ವರ್ಷಗಳ ನಂತರವೂ ಜೀವಂತವಾU ಇರುವವರು. ಆದರೆ ಇವರ ಐತಿಹಾಸಿಕ ವ್ಯಕ್ತಿತ್ಬಕ್ಕೂ ಪುರಾಣದ ರಂಜಕತೆ ಮತ್ತು ದೈವತ್ವಕ್ಕೂ ತುಂಬಾ ವ್ಯತ್ಯಾಸವಿದೆ. ಆದರೆ ಅವರು ಈಗ ನಮಗೆ ನೆನಪಿನಲ್ಲಿ ಉಳಿದಿರುವುದು ಪುರಾಣದ ಮಹಾ ಪುರುಷರಾಗಿ. ಕೇವಲ ಐತಿಹಾಸಿಕ ವ್ಯಕ್ತಿಗಳಾಗಿ ಅಲ್ಲ. ಕೇವಲ ಐತಿಹಾಸಿಕ ವ್ಯಕ್ತಿಗಳಾಗಿ ಮಾತ್ರ ಅವರು ಉಳಿದಿದ್ದರೆ ಇನ್ನೊಬ್ಬ ರಾಜಕುವರ ನಂತೆಯೂ ಮಹಾರಾಜಂತೆಯೂ ಪಠ್ಯ ಪುಸ್ತಕದ ಭಾಗವಾಗಿ ಮಾತ್ರ ಅವರು ಉಳಿದು ಬಿಡುತ್ತಿದ್ದರು.
ನಾವು ಕೃಷ್ಣನನ್ನು ಪೂಜೆ ಮಾಡಿ ಸುಮ್ಮನಾಗಿ ಬಿಡುವುದಿದ್ದರೆ ನಮಗೆ ಪುರಾಣ ಮಾತ್ರ ಸಾಕು, ಆದರೆ ಕೇವಲ ಪೂಜೆ ಮಾಡಿ ಸುಮ್ಮನಾಗಿ ಬಿಟ್ಟರೆ ಈ ಮಹಾಪುರುಷರ ಸ್ಪರ್ಷ ನಮಗಾಗುವುದಿಲ್ಲ. ನಾವು ಇವರನ್ನು ನಮ್ಮೊಳಗೆ ಅಹ್ವಾನಿಸಿಕೊಳ್ಳುವುದಿದ್ದರೆ ನಾವು ಅವರನ್ನು ಅರ್ಥ ಮಾಡಿಕೊಳ್ಳಬೇಕು. ಹೀಗೆ ಅರ್ಥ ಮಾಡಿಕೊಳ್ಳುವುದಕ್ಕೆ ಪೂಜೆ ಮಾತ್ರ ಸಾಲದು. ಪುರಾಣ ಮತ್ತು ಇತಿಹಾಸದ ಮೂಲಕ ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.
ರಾಮ ಕೃಷ್ಣರನ್ನು ಪೂಜಿಸುವ ಬಹುತೇಕರು ಅವರನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸುವುದೇ ಇಲ್ಲ. ರಾಮ ಕೃಷ್ಣರ ಕಥೆಯನ್ನು ಕೇಳಿ ಸುಮ್ಮನಾಗಿ ಬಿಡುತ್ತಾರೆ. ಆದರೆ ನಾವು ರಾಮ ಕೃಷ್ಣರನ್ನು ಅರ್ಥ ಮಾಡಿಕೊಂಡು ನಾವೇ ಅವರಾಗಲು ಯತ್ನ ನಡೆಸುವುದೇ ಅತ್ಯುತ್ತಮ ಅಧ್ಯಾತ್ಮಿಕತೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಅವರಾಗುವುದು ಬೇಕಾಗಿಲ್ಲ. ಯಾಕೆಂದರೆ ಪೂಜೆ ಮಾಡುವುದು ತುಂಬಾ ಸುಲಭ. ಅವರಂತಾಗುವುದು ಕಷ್ಟ. ಕಷ್ಟ ಪಡುವುದು ಯಾರಿಗೂ ಬೇಕಾಗಿಲ್ಲ.
ರಾಮ ಪ್ರತಿಪಾದಿಸುವ ಜೀವನ ಮೌಲ್ಯಗಳನ್ನು ಅಳವಡಿಸುವುದಕ್ಕಿಂತ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದು ಅದಕ್ಕೆ ಇಟ್ಟಂಗಿಗಳನ್ನು ಹೊರುವುದು ಹೆಚ್ಚು ಸುಲಭ. ಅದು ಹಲವು ರೀತಿಯ ಲಾಭವನ್ನು ಕೊಡುತ್ತದೆ.  ರಾಮನಂತೆ ಬದುಕಿದರೆ ಕಾಡಿಗೆ  ಹೋಗಬೇಕಾಬಹುದು. ಒಂದೇ ಹೆಂಡತಿಯ ಜೊತೆ ಜೀವನ ಪೂರ್ತಿ ಬದುಕಬೇಕಾಗಬಹುದು. ಹಾಗೆ ಪಿತ್ರವಾಕ್ಯ ಪರಿಪಾಲನೆ ಮಾಡಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗಬಹುದು, ಹೀಗೆ ಯೋಚನೆ ಮಾಡುವ ಭಕ್ತರು ಆಂತರಿಕವಾಗಿ ರಾಮ ಪ್ರತಿಪಾದಿಸಿದ ಮೌಲ್ಯಗಳು ಇವತ್ತು ಪ್ರಸ್ತುತವಲ್ಲ ಎಂದುಕೊಂಡಿರುತ್ತಾರೆ. ಹೀಗಾಗಿ ರಾಮ ನಾಮದ ಜಪ ಮಾಡಿ ಕೈತೊಳೆದುಕೊಂಡು ಬಿಡುತ್ತಾರೆ. ಆದರೆ ರಾಮ ಇಂದಿಗೂ ಪ್ರಸ್ತುತ. ಆತ ನಮಗೆಲ್ಲ ಬೇಕು.
ರಾಮ ಮತ್ತು ಕೃಷ್ಣರನ್ನು ಹೋಲಿಸಿದಾಗ ಇವರಿಬ್ಬರ ವ್ಯಕ್ತಿತ್ವದಲ್ಲಿ ಇರುವ ಅಗಾಧ ಪ್ರಮಾಣದ ವ್ಯತ್ಯಾಸ ಗೋಚರಿಸುತ್ತದೆ. ರಾಮ ಗಂಭೀರ ವ್ಯಕ್ತಿತ್ವದವ. ಆತ ಎಂದಾದರೂ ನಕ್ಕಿರಬಹುದೇ ಎಂಬ ಪ್ರಶ್ನೆಗೆ ಉತ್ತರ ಸಿಗದು. ಆತ ಮೌಲ್ಯಗಳಿಗಾಗಿ ಬದುಕಿದವನು. ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರದಲ್ಲಿ ಅವನಿಗೆ ಸ್ಪಷ್ಟತೆ ಇತ್ತು. ಆತನಿಗೆ ಸ್ತ್ರಿಯರ ಬಗ್ಗೆ ಇದ್ದುದು ಮಾತ್ರ ಭಾವ ಮಾತ್ರ. ಪ್ರೇಮ ಎನ್ನುವುದು ಅವನಿಗೆ ಅಪರಿಚಿತ. ರಾಜ್ಯಾಡಳಿತದಲ್ಲೂ ಆತ ಪ್ರಜಾಪಾಲಕ. ತಾಯಿಗಾಗಿ ರಾಜ್ಯ ತ್ಯಾಗ ಮಾಡಿz. ಪ್ರಜೆಯೊಬ್ಬ ಮಾಡಿದ ಟೀಕೆಯಿಂದ ಪತಿಯನ್ನು ಕಾಡಿಗಟ್ಟಿದ. ಆತ ಸೀತೆಯನ್ನು ಮದುವೆಯಾಗಿದ್ದೂ ಒಂದು ರೀತಿಯಲ್ಲಿ ಗುರುವಿನ ಆದೇಶದ ಅನುಸಾರವಾಗಿ.  ವಿಶ್ವಾಮಿತ್ರರು ಆತನನ್ನು ಮಿಥಿಲೆಗೆ ಕರೆದುಕೊಂಡು ಹೋದ್ದರಿಂದ ಶಿವ ಧನಸ್ಸನ್ನು ಮುರಿದ. ಮದುವೆಯಾದ. ಹಾಗೆ ಸುಗ್ರೀವನಿಗಾಗಿ ಮರೆಯಲ್ಲಿ ನಿಂತು ವಾಲಿ ವಧೆ ಮಾಡಿದ. ಇಲ್ಲಿ ಯಾವ ಪ್ರಕರಣದಲ್ಲಿಯೂ ಆತ ತನಗಾಗಿ ಏನನ್ನೂ ಮಾಡಲಿಲ್ಲ. ಅತ ಮಾಡಿದ್ದೆಲ್ಲ ಬೇರೆಯವರಿಗಾಗಿ.
ರಾವಣನ ವಧೆಯನ್ನು ಆತ ಸೀತೆಗಾಗಿ ಮಾಡಿದ ಎಂದು ಹೇಳುವುದು ಕಷ್ಟ. ಅದು ಕೇವಲ ನೆಪ ಮಾತ್ರ ಆಗಿತ್ತು. ಅಂದಿನ ಆರ್ಯಾವರ್ತದಲ್ಲಿ ಕ್ಶತ್ರಿಯರ ಪ್ರಾಬಲ್ಯವನ್ನು ಉಳಿಸುವುದಕ್ಕಾಗಿ ಆತ ರಾವಣನ ವಧೆ ಮಾಡಲೇ ಬೇಕಿತ್ತು. ವೈದಿಕ ಪರಂಪರೆಯಲ್ಲಿ ಯಜ್ನ ಯಾಗ ಮಾಡುತ್ತಿದ್ದ ಋಷಿಗಳ ರಕ್ಷಣೆ ಮಾಡುವುದು ಕ್ಶತ್ರಿಯ ರಾಜರ ಪರಮ ಕರ್ತವ್ಯವಾಗಿತ್ತು. ಅದಕ್ಕಾಗಿ ರಾಕ್ಷಸರನ್ನು ಆತ ವಧಿಸಲೇ ಬೇಕಾಗಿತ್ತು.
ಕೃಷ್ಣ ರಾಮನಂತಲ್ಲ.  ಬದುಕಿದ್ದಷ್ಟು ಕಾಲ ಈ ದೇಶದಲ್ಲಿ ನಡೆದ ಎಲ್ಲ ಬೆಳವಣಿಗಳೆ ಹಿಂದೆÉ ಕೃಷ್ಣನಿದ್ದ. ಆದರೆ ಆತ ಎಲ್ಲವನ್ನು ತನ್ನ ಚಾಣಕ್ಷತನದ ಮೂಲಕವೇ ಮಾಡಿ ಮುಗಿಸಿದ ರಾಜ ನೀತಜ್ನ. ಆತ ತನ್ನ ಕೈಯಲ್ಲಿ ಅಸ್ತ್ರವನ್ನು ಹಿಡಿಯದೇ ಎಂತೆಂತಹ ಪ್ರಚಂಡರನ್ನು ಮಿಗಿಸಿಬಿಟ್ಟ. ಸೋದರ ಮಾವ ಕಂಸನನ್ನು ಮುಗಿಸುವುದರೊಂದಿಗೆ ಪ್ರಾರಂಭವಾಗುವ ಕೃಷ್ಣನ ಶತ್ರು ಸಂಹಾರ ಕುರುಕ್ಷೇತ್ರ ಯುದ್ಧದೊಂದಿಗೆ ಮುಕ್ತಾಯವಾಗುತ್ತದೆ.
ಕೃಷ್ಣನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಅವನ ವ್ಯಕ್ತಿತ್ವದಲ್ಲಿ ಇರುವ ಸಂಕೀರ್ಣತೆ ರಾಮನ ವ್ಯಕ್ತಿತ್ವದಲ್ಲಿ ಇಲ್ಲ. ರಾಮ ಎಲ್ಲ ಸಿದ್ಧಾಂತಿಗಳ ಹಾಗೆ ತುಂಬಾ ನೀರಸ. ಆದರೆ ಕೃಷ್ಣನ ಬದುಕೇ ನವರಸ. ಆತನ ಬದುಕಿನ ಮೊದಲ ಭಾಗದಲ್ಲಿ  ನವಿಲುಗರಿ ಮತ್ತು ಕೊಳಲು ಸದಾ ಅವನ ಜೊತೆ ಇರುತ್ತಿದ್ದವು. ಕಿರೀಟದ ಮೇಲೆ ನವಿಲುಗರಿ ಇಟ್ಟುಕೊಂಡ ಆತ ಪ್ರೀತಿಗೆ ಹೊಸ ವ್ಯಾಖ್ಯೆಯನ್ನೆ ಬರೆದು ಬಿಟ್ಟ. ಅವನ ಕೈಯಲ್ಲಿನ ಕೊಳಲು ಅವನ ಕೈಯಲ್ಲಿ ಇರುವುದೇ ಪರಮ ಭಾಗ್ಯ ಎನ್ನುವಂತಾಯಿತು. ಯಮುನಾ ನದಿಯ ತೀರದಲ್ಲಿ ಆತ ಕೊಳಲು ನುಡಿಸುತ್ತಿದ್ದರೆ ಆ ರಾಗ ಚುಂಬಕ ಶಕ್ತಿಯಾಗಿ ಎಲ್ಲರನ್ನೂ ಆಕರ್ಷಿಸಿಬಿಡುತ್ತಿತ್ತು. ಗೋಪಿಕೆಯರೆಲ್ಲ ಮೈಮರೆತ್ ರಾಗ ಸುಧೆಯಲ್ಲಿ ಕಳೆದು ಹೋಗುತ್ತಿದ್ದರು ಕೃಷ್ಣ ಕೊಳಲು ಭಾರಿಸುತ್ತ ನಗುತ್ತಿದ್ದ. ಗೋಪಿಕೆಯರು ನರ್ತಿಸುತ್ತಿದ್ದರು. ಅವನ ತುಟಿಯಂಚಿನಲ್ಲಿ ಸಣ್ಣ ನಗು. ಅದು ಎಂದೂ ಮಾಸದ ನಗು.
ಕೃಷ್ಣ ಮಾನವ ಇತಿಹಾಸದಲ್ಲಿ ಪ್ರೀತಿಯ ಮೊದಲು ಸಾಲುಗಳನ್ನು ಬರೆದವನು. ಪ್ರೀತಿಯ ಮೊದಲ ಪಾಠ ಹೇಳಿದವನು. ಅವನ ಪ್ರೀತಿ ನಿಷ್ಕಲ್ಮಷ. ಅಲ್ಲಿ ಕಾಮದ ವಾಂಛೆಯಿಲ್ಲ. ಅದೊಂದು ಅನುಭೂತಿ. ಆತ ಸಾವಿರಾರು ಗೋಪಿಕೆಯರಿಗೆ ತನ್ಮಯತೆಯನ್ನು ಕಲಿಸಿದ. ಪ್ರೀತಿಸುವುದ್ ಹೇಗೆ ಎಂಬುದನ್ನು ಹೇಳಿಕೊಟ್ಟ.
ಪ್ರೀತಿಯನ್ನು ತನ್ನ ಎದೆಯಲ್ಲಿ ಇಟ್ಟುಕೊಂಡು ಸಾಕಿದ ಕೃಷ್ಣ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಂಡ ಮೇಲೆ ಸಂಪೂರ್ಣವಾಗಿ ಬದಲಾದ. ಆತನ ಹೃದಯದಲ್ಲಿದ್ದ ಪ್ರೀತಿಯ ಸೇಲೆ ವರತೆಯಾಗಿ ಹೊರಕ್ಕೆ ಬರಲಿಲ್ಲ. ಆದರೆ ಆಗ ಪ್ರೀತಿಯ ವ್ಯಾಖ್ಯೆಯನ್ನು ಆತನೇ ಬದಲಿಸಿದ. ಗೋಕುಲ ಕೃಷ್ಣ ರಾಜಕಾರಣಿಯಾದ. ಹಾಗಿ ಆತ ಮತ್ತೆ ಎಂದೂ ಕೊಳಲು ನುಡಿಸಲಿಲ್ಲ. ಕೊಳಲನ್ನು ಯಮುನಾ ನದಿಯ ದಡದಲ್ಲೇ ಬಿಟ್ಟು ಬಂದ. ಅವನ ಕೊಳಲು ಅನಾಥವಾಯಿತು. ಆ ಕೊಳಲಿನಲ್ಲಿ ಮತ್ತೆ ನಾದ ಹೊರಡಲೇ ಇಲ್ಲ. ಆದರೆ ಗೋಪಿಕೆಯರ ಮನಸ್ಸಿನಲ್ಲಿ ಆತ ಬಿತ್ತಿದ್ದ ಪ್ರೀತಿಯ ಬೀಜ ವಿರಹವಾಯಿತು. ಕೃಷ್ಣ ಮತ್ತು ಗೋಪಿಕೆಯರ ನಡುವಿನ ಸಂಬಂಧ ಸಾಮಾನ್ಯ ಸಂಬಂಧವಾಗಿರಲಿಲ್ಲ. ರಾಜಕಾರಣಿ ಕಷ್ಣನನ್ನು ನೋಡಲು ಗೋಪಿಯರು ಎಂದೂ ರಾಜಧಾನಿಗೆ ಬರಲಿಲ್ಲ. ಅವರ ಪ್ರೀತಿ ಆರಾಧನೆಯಾಯಿತು. ಪ್ರತಿ ದಿನ ಯಮುನಾ ನದಿಯ ದಂಡೆಗೆ ಬರುತ್ತಿದ್ದ ಗೋಪಿಕೆಯರು ಅನಾಥವಾಗಿದ್ದ ಕೊಳಲನ್ನು ಮುಟ್ಟಿ ಸಂತೋಷಪಡುತ್ತಿದ್ದರು. ಅದರಿಂದ ರಾಗ ಬರುತ್ತಿದೆ ಎಂಬ ಭಾವನೆ ಅವರಿಗೆ ಅನ್ನಿಸುತ್ತಿತ್ತು, ತಕ್ಷಣ ಅವರಿಗೆ ಅಲ್ಲಿ ಕೃಷ್ಣ ಇದ್ದ ಭಾವ ಬರುತ್ತಿತ್ತು. ಮುದುಡಿದ ಮನಸ್ಸು ಹಾರಾಡತೊಡಗುತ್ತಿತ್ತು. ಅವರಿಗೆ ಆ ಕೊಳಲಿನಲ್ಲೇ ಕೃಷ್ಣ ಕಾಣುತ್ತಿದ್ದ.
ಪ್ರೀತಿ ಅರಾಧನೆಯಾಗುವ ಅದ್ಭುತ. ಎಲ್ಲರ ಪ್ರೀತಿಯೂ ಆರಾಧನೆಯಾಗುವುದಿಲ್ಲ. ಆರಾಧಿಸುವುದಕ್ಕೂ ವಿಭಿನ್ನವಾದ ಮನಸ್ಥಿತಿ ಬೇಕು. ಆರಾಧನೆಯಲ್ಲಿ ನಾನು ಎಂಬುದು ಮರೆಯಾಗಬೇಕು. ನಾನು ಎಂಬುದು ಮರೆಯಾಗದಿದ್ದರೆ ಆರಾಧನೆ ಸಾಧ್ಯವಿಲ್ಲ. ಹಾಗೆ ಅಲ್ಲಿರುವುದು ಸಮರ್ಪಣಾ ಭಾವ. ಅಹಂ ಸಮರ್ಪಣೆಗೆ ಯಾವಾಗಲೊ ವಿರೋಧವನ್ನು ವ್ಯಕ್ತಪಡಿಸುತ್ತದೆ. ಪ್ರೀತಿಯಲ್ಲಿರುವ ಅಹಂ ಪ್ರೀತಿ ಇನ್ನೊಂದು ಹಂತಕ್ಕೆ ಏರುವುದಕ್ಕೆ ತಡೆಯನ್ನು ಉಂಟು ಮಾಡುತ್ತದೆ. ಪ್ರೀತಿ ಕೇವಲ ಕಾಮವಾಗಿಬಿಡುತ್ತದೆ. ಆದರೆ ಕಾಮ ಪ್ರೀತಿ ಅಲ್ಲವೇ ಅಲ್ಲ.
ಕೋಪಿಕೆಯರಿಗೆ ಕೃಷ್ಣನ ಬಗ್ಗೆ ಇದ್ದುದು ಕಾಮವಲ್ಲ. ವಾಂಛ್ಯೆಯಲ್ಲ. ಹೀಗಾಗಿ ಅವರಿಗೆ ಕೃಷ್ಣನನ್ನು ಆರಾಧಿಸುವುದು ಸಾಧ್ಯವಾಯಿತು, ಕೃಷ್ಣ ಎದುರಿಗೆ ಇಲ್ಲದಿದ್ದರೂ ಅವನ ಇರುವನ್ನು ಅನೂಭವಿಸಲು  ಸಾಧ್ಯವಾಗುತ್ತಿತ್ತು . 
ಬೀಸುವ ಗಾಳಿಯಲ್ಲಿ, ಹರಿಯುವ ಯಮುನಾ ನದಿಯ ಅಲೆಗಳಲ್ಲಿ ಅಲ್ಲಿದ್ದ ಕೊಳಲಿನಲ್ಲಿ ಕಷ್ಣ ಗೋಪಿಕೆಯರನ್ನು ತಲುಪುತ್ತಿದ್ದ . ಹೀಗೆ ಕೃಷ್ಣನನ್ನು ಆರಾಧಿಸುತ್ತಿದ್ದ ಗೋಪಿಕೆಯರಲ್ಲಿ ರಾಧೆಯ ಸ್ಥಾನವೇ ಬೇರೆ. ಕೃಷ್ಣನಿಗಿಂತ ಸ್ವಲ್ಪ ದೊಡ್ಡವಳಾದ ರಾಧೆಗೆ ಆಗಲೇ ಮದುವೆಯಾಗಿತ್ತು. ಆದರೆ ಆಕೆ ಕೃಷ್ಣನನ್ನು ಆರಾಧಿಸುತ್ತಿದ್ದಳು. ಆಕೆಗೆ ಕೃಷ್ಣನೇ ಸರ್ವಸ್ವ. ಆತನ ಕೊಳಲಿನ ನಾದಕ್ಕೆ ಆಕೆ ಹಾರುವ ಹಕ್ಕಿಯಾಗುತ್ತಿದ್ದಳು. ಬೆಳದಿಂಗಳ ರಾತ್ರಿಯಲ್ಲಿ ಯಮುನಾ ನದಿಯ ದಂಡೆಯಲ್ಲಿ ಕೃಷ್ಣನನ್ನು ತನ್ನೊಳಗೆ ತುಂಬಿಕೊಳ್ಳುತ್ತ ಅವಳೇ ಕೃಷ್ಣನಾಗುತ್ತಿದ್ದಳು. ಆದರೆ ಕೃಷ್ಣ ಮತ್ತು ರಾಧೆಯರ ನಡುವಿನ ಸಂಬಂಧ ಎಲ್ಲವನ್ನೂ ಮೀರಿದ ಸಂಬಂಧವಾಗಿತ್ತು. ಅದು ಯಾವುದೇ ವ್ಯಾಖ್ಯೆಗೆ ಸಿಗುವಂತಹುದಾಗಿರಲಿಲ್ಲ.
ಕೃಷ್ಣನ ಪ್ರೀತಿ ರಾಜಕಾರಣಕ್ಕೆ ಬಂದ ಮೇಲೆ ಬದಲಾದ ಪರಿ ಕೂಡ ಬೇರೆಯದು. ಅವನ ಗೋಪಿಕೆಯರ ಮೇಲಿನ ಪ್ರೀತಿ ಪಾಂಡವರ ಮೇಲಿನ ಪ್ರೀತಿಯಾಗಿ ಬದಲಾಯಿತು. ಅರ್ಜುನ ಆತನ ಸಖನಾದ. ಕುಂತಿಯ ಮೇಲೆ ಕಷ್ಣನಿಗಿದ್ದ ಪ್ರೀತಿ ತಾಯಿಯ ಮೇಲೆ ಮಗ ಇಡುವ ಪ್ರೀತಿಯಾಗಿತ್ತು. ದ್ರೌಪದಿಯ ಬಗ್ಗೆಯೂ ಅವನಿಗೆ ವಿಶೇಷ ಗೌರವಾದರಗಳಿದ್ದವು. ಆದರೆ ಕೃಷ್ಣ ದ್ರೌಪದಿ ಮತ್ತು ಕುಂತಿಯ ಎದುರು ಮಾತ್ರ ಮೌನಿಯಾಗುತ್ತಿದ್ದ. ಅವನ ಎಂದಿನ ನಗೆ ಮುಖದ ಮೇಲೆ ಇರುತ್ತಿರಲಿಲ್ಲ. ಅವರ ಮಾತುಗಳನ್ನು ಕೇಳಿಸಿಕೊಳ್ಳುವುದೇ ಅವನಿಗೆ ಖುಷಿ
ಕೃಷ್ಣ ದ್ರೌಪದಿಗೆ ಕೊಡುತ್ತಿದ್ದ ಗೌರವ ಯಾವ ರೀತಿಯದಾಗಿತ್ತೆಂದರೆ ಆತ ಆಕೆಯ ಎದುರು ಏನೂ ಅಲ್ಲದವನಂತೆ ಇರುತ್ತಿದ್ದ. ಆತ ಆಕೆಗೆ ಸ್ಪಂದಿಸುತ್ತಿದ್ದ ರೀತಿ, ಅವಳ ಕೆರೆಗೆ ಓಗೊಡುತ್ತಿದ್ದ ರೀತಿಯೂ ಅನನ್ಯವೇ.
ತನ್ನ ಹೆಂಡಿರಲ್ಲಿ ರುಕ್ಮಿಣಿಯ ಜೊತೆಗೆ  ಗೌರವಸ್ಥ ಸದ್ ಗ್ರಹಸ್ತನ ಹಾಗೆ ಇರುತ್ತಿದ್ದ ಕಷ್ಣ ಸತ್ಯಭಾಮೆಯ ಜೊತೆಗೆ ಕಿಲಾಡಿ. ಉಳಿದ ಹೆಂಡಿರ ಜೊತೆಗೂ ಆತ ಬೇರೆಯ ವ್ಯಕ್ತಿಯ ಹಾಗೆ ಕಾಣುತ್ತಿದ್ದ. ಆದರೆ ತನ್ನ ಹೆಂಡಿರ ಜೊತೆಗೂ ಆತ ಗೋಪಿಕೆಯರ ಜೊತೆ ಇದ್ದಂತಹ ವ್ಯಾಖ್ಯಾನಕ್ಕೆ ಸಿಗದ ಭಾವವನ್ನು ಹೊಂದಿರುತ್ತಿರಲಿಲ್ಲ

 ಕಷ್ಣನ ಬಗ್ಗೆ ಹೇಳುವುದು ಇನ್ನೂ ತುಂಬಾ ಇದೆ. ಇವತ್ತಿಗೆ ಇಷ್ಟೇ ಸಾಕು,




Tuesday, August 27, 2013

ಓಂ ಶ್ರೀ ಗಣೇಶಾಯ ನಮ:..........







ವಿಘ್ನ ವಿನಾಶಕ ಎಂದು ಹಿಂದೂಗಳು ನಂಬಿರುವ ಗಣೇಶ
 ಈಗ  ವಿವಾದದ ಕೇಂದ್ರವಾಗಿದ್ದಾನೆ. ದೇವರನ್ನು ಸೃಷ್ಟಿಸಿದವರು, ಈಗ ತಮ್ಮ ದೇವರನ್ನೇ ವಿವಾದ  ಕ್ಕೆ ಎಳೆದಿದ್ದಾರೆ. ಹಾಗೆ ನೋಡಿದರೆ ನಮ್ಮ ಕೋಟ್ಯಾಂತರ  ದೇವರುಗಳಲ್ಲಿ ಗಣೇಶ ಅಂತಹ ವಿವಾದಾತ್ಮಕ ದೇವರಲ್ಲ. ಆದರೂ ನಾವು ಎಂತಹ ಪ್ರಚಂಡರೆಂದರೆ ಈ ಟೀವಿ ಯುಗದಲ್ಲಿ ಯಾರನ್ನು ಸುಮ್ಮನೆ ಇರಲು ಬಿಡುವವರಲ್ಲ. ದೇವರನ್ನೂ ಸಹ…..!

ಪಾರ್ವತಿ ಪುತ್ರನಾದ ಗಣೇಶ ಪಿತ್ರವಾಕ್ಯ ಪರಿಪಾಲಕ. ತಂದೆ ತಾಯಿಯರ ಅಚ್ಚುಮೆಚ್ಚಿನ ಮಗ. ಆತ ತುಂಟ ಜಗಳಗಂಟ. ನಂಬಿದವರನ್ನು ಕೈಬಿಡದ ಅವರನ್ನು ಎಲ್ಲ ವಿಘ್ನಗಳಿಂದ ಪಾರು ಮಾಡುವ ಮೊದಲ ಪೂಜೆಗೆ ಅರ್ಹನಾದವನು ವಿನಾಯಕ.
ಪ್ರಾಯಶ ಈ ದೇಶದಲ್ಲಿ ಎಲ್ಲ ಜಾತಿ ಪಂಗಡಗಳನ್ನು ಮೀರಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ದೇವರು ಎಂದರೆ ವಕ್ರ ತುಂಡನೇ. ಬಾಲಗಂಗಾಧರ ತಿಲಕರಿಂದಾಗಿ ಸಾರ್ವಜನಿಕ ಗಣೇಶೋತ್ಸವದ ಆಚರಣೆ ಪ್ರಾರಂಭವಾದ ಮೇಲೆ ವಿನಾಯಕ ವಿಶ್ವ ವಂದ್ಯನಾದ. ಇಂತಹ ದೇವರನ್ನು ವಿವಾದಕ್ಕೆ ಸಿಲುಕಿಸಿದವರು ಯೋಗಿಶ್ ಮಾಸ್ಟರ್. ಅವರ ಬರೆದ ಢುಂಢಿ ಎಂಬ ಕಾದಂಬರಿ ಅರಣ್ಯಕನೊಬ್ಬ ಗಣೇಶನಾದ ಕಥೆ. ಈ ಕಾದಂಬರಿಯಲ್ಲಿ ಬಂದ ವಿಚಾರಗಳ ಬಗ್ಗೆ  ಕಾವಿದಾರಿಗಳು ಕೆಂಡ ಕಾರಿದ್ದಾರೆ. ರಸ್ತೆಗಿಳಿಯುವ ಮಾತನಾಡಿದ್ದಾರೆ. ಯಾಕೆ ಹಿಂದೂ ದೇವತೆಗಳು ಮಾತ್ರ ಈ ರೀತಿ ಅವಹೇಳನಕ್ಕೆ ತುತ್ತಾಗಬೇಕು ಎಂದು ಪ್ರಶ್ನಿಸಿದ್ದಾರೆ, ಅನ್ಯ ಧರ್ಮಗಳ ಬಗ್ಗೆ ಹೀಗೆ ಬರೆಯಿರಿ ಎಂದು ಸವಾಲು ಹಾಕಿದ್ದಾರೆ.
ಆದರೆ ಧರ್ಮ ಎಂದರೆ ಅದು ಜಗಳವಲ್ಲ. ವೀರಾವೇಶದ ಮಾತುಗಳನ್ನು ಅಡುವುದಲ್ಲ. ಅದು ತುಂಬಾ ಖಾಸಗಿಯಾದುದು. ಜೊತೆಗೆ ಧರ್ಮ ಜನರ ಜೊತೆ ಮುಖಾಮುಖಿಯಾಗುತ್ತ ಬೆಳೆಯುತ್ತ ಹೋಗಬೇಕು. ಹಿಂದೂ ಧರ್ಮದ ಶ್ರೇಷ್ಠತೆ ಇರುವುದು ಇಂತಹ ಮುಖಾಮುಖಿಯಲ್ಲೆ. ಒಂದು ಧರ್ಮ ಇನ್ನೊಂದು ಧರ್ಮದ ಜೊತೆ, ವಿಭಿನ್ನ ತಾತ್ವಿಕ ಚಿಂತನೆಗಳ ಜೊತೆ ಮುಖಾಮುಖಿಯಾದಾಗಲೇ ಅದರ ಶೇಷ್ಠತೆಗೆ ಇನ್ನಷ್ಟು ಮೆರಗು ಬರುತ್ತದೆ. ಆದರೆ ಧರ್ಮವನ್ನು ಲಾಭದ ದೃಷ್ಟಿಯಿಂದ ನೋಡುವವರು ಮುಖಾಮುಖಿಗೆ ಅಂಜುತ್ತಾರೆ. ಅವರು ಧರ್ಮ ಗ್ರಂಥಗಳನ್ನು ಹಿಡಿದುಕೊಂಡು ಅದನ್ನು ಗಟ್ಟಿ ಮಾಡಿ ಭಟ್ಟಿ ಇಳಿಸುತ್ತಾರೆ. ಒಷೋ ಹೇಳುವಂತೆ ಧರ್ಮವನ್ನು ಗ್ರಂಥಗಳ ಮೂಲಕ ತಿಳಿದುಕೊಳ್ಳುವವರು ಧರ್ಮ ಪಂಡಿತರು ಆಗಬಹುದೇ ಹೊರತೂ ಧರ್ಮ ಔನ್ನತ್ಯ ಅವರ ಅರಿವಿಗೆ ಬರುವುದಿಲ್ಲ.
ಈ ಗಣೇಶನ ಪರವಾಗಿರುವವರು ಮತ್ತು ಆತನನ್ನು ವೈಜ್ನಾನಿಕ ಸಂಶೋಧನೆಗಳಿಗೆ ಒಳಪಡಿಸುವವರನ್ನು ನೋಡಿದ ತಕ್ಷಣ ಪಾಪ ಅನ್ನಿಸುತ್ತದೆ.  ಗಣೇಶ ಎಂದರೆ ಹೀಗೆ ಆತ ಇರುವುದು ಹೀಗೆ ಎಂದು ನಂಬಿಕೊಂಡವರು ಮೂರ್ತಿ ಪೂಜಕರು. ಅವರು ತಾವು ಫುಜಿಸುವ ಮೂರ್ತಿ ಹೀಗೆ ಇದೆ, ಹೀಗೆ ಇರಬೇಕು ಎಂದು ನಂಬಿಕೊಂಡವರು. ಅವರು ಗಣಪತಿಯ ಸೊಂಡಿಲು ಕೊಂಕುವುದಕ್ಕೂ ಬಿಡಲಾರರು. ಇನ್ನು ಗಣೇಶನ ಬಗ್ಗೆ ಆತನ ಹಿನ್ನೆಲೆಯಲ್ಲಿ ಬಗ್ಗೆ ಆತನ ಜಾತಿಯ ಬಗ್ಗೆ ಸಂಶೋಧನೆ ಮಾಡಲು ಹೊರಟವರು ಕೂಡ ಇವರಿಗಿಂತ ಭಿನ್ನವಾಗಿಲ್ಲ. ಮೂರ್ತಿ ಭಂಜನೆ ಅವರ ಕಾಯಕ.
ಗಣೇಶನಿಗೆ ಜನಿವಾರ ಹಾಕಿ ಕುಳ್ಳರಿಸುವವರು ಒಂದೆಡೆಯಾದರೆ, ಆತ ಕೀಳು ಜಾತಿಯಿಂದ ಬಂದವ ಎಂದು ಭಾರಿ ಸಂಶೋಧನೆ ಮಾಡಿ ಹೆಮ್ಮೆಯಿಂದ bI ಗುವ ವೈಚಾರಿಕ ಸಮುದಾಯ. ಅವರಿಗೆ ಎಲ್ಲೆಡೆ ಕಾಣುವುದು ಜಾತಿ ಮತ್ತು ಶೋಷಣೆ ಮಾತ್ರ. ಈ ಎರಡೂ ಪ್ರಕಾರದ ಜನ ಬಣ್ಣದ ಕನ್ನಡ ಹಾಕಿಕೊಂಡವರೆ. ಅವರಿಗೆ  ಎಲ್ಲವೂ ಈಸ್ಟ್ ಮನ್ ಕಲರಿನಲ್ಲೇ ಕಾಣುತ್ತದೆ.
ಗಣೇಶನನ್ನು ಪೂಜಿಸುವವರು ಆತನನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸುತ್ತಿಲ್ಲ. ದೇವರು ಎಂದರೆ ಒಂದು ತತ್ವ. ಅದು ಬದುಕಿಗೆ ದಾರಿ ತೋರಿಸುವ ಬೆಳಕು. ಬೆಳಕು ಎಂದರೆ ಬೆಳಕು ಮಾತ್ರ. ಬೆಳಕನ್ನು ನೋಡುವವರಿಗೆ ದಾರಿ ಕಾಣುತ್ತದೆ. ನೋಡದೇ ನಿರಾಕರಿಸುವವರಿಗೆ ಕತ್ತಲಿಂದ ಹೊರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಬೆಳಕಿಗೆ ಜಾತಿ ಇದೆಯಾ ? ಬೆಳಕಿನ ಮೂಲವನ್ನು ಕಂಡು ಹಿಡಿಯುವುದು ಹುಚ್ಚುತನವಲ್ಲವೆ ?
ಗಣೇಶನನ್ನು ಕೇವಲ ಮೂರ್ತಿಯನ್ನಾಗಿ ನೋಡವವರಿಗೆ ಆತನಿಂದ ಏನೂ ದಕ್ಕುವುದಿಲ್ಲ. ಆತನೂ ಅವರಿಗೆ ದಕ್ಕುವುದಿಲ್ಲ. ಇಂತವರಿಗೆ ಯಾವತ್ತೂ ಗಣೇಶನನ್ನು ಸ್ಪರ್ಶಿಸುವುದು ಸಾಧ್ಯವಿಲ್ಲ. ಆತನನ್ನು ಹಾಗೆ ಪಕ್ಕಕ್ಕೆ ಕರೆದುಕೊಂಡು ತನ್ನವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.  ದೇವರನ್ನಿ ನಮ್ಮವರನ್ನಾಗಿ ಮಾಡಿಕೊಳ್ಳದಿದ್ದರೆ ಯಾವ ಪ್ರಯೋಜನವೂ ಇಲ್ಲ. ಆಗ ದೇವರೆಂದರೆ ಕೇವಲ ಪ್ರತಿಮೆಯಾಗಿ ಉಳಿದು ಬಿಡುತ್ತದೆ.
ಗಣೇಶ ಕಾಡಿನಲ್ಲಿ ವಾಸಿಸುವ ಕೆಳ ಜಾತಿಯ ವ್ಯಕ್ತಿಯಾಗಿದ್ದ ಎಂದು ಹೇಳಿದರೆ ಏನು ಹೇಳಿದಂತಾಯಿತು ? ಆತ ಕಾಡಿನಲ್ಲೇ ವಾಸಿಸಿದ್ದರಬಹುದು. ಕೆಳ ಜಾತಿಯವನೇ ಆಗಿರಬಹುದು. ಈ ಇತಿಹಾಸ ಗಣೇಶನನ್ನು ಬದಲಿಸಲಾರದು. ಹಿಂದೂಗಳ ಮನಸ್ಸಿನಲ್ಲಿ ಗಣೇಶನ ಬಗ್ಗೆ ಇರುವ ಸ್ಥಾನಕ್ಕೆ ಚ್ಯುತಿ ಬರಲಾರದು. ಗಣೇಶ ಈಗ ಏನು ಎಂಬುದು ನಮಗೆ ಮುಖ್ಯ. ಜೊತೆಗೆ ಕೆಳ ಜಾತಿಯ ವ್ಯP್ತಯೊಬ್ಬ ದೇವರಾದರೆ ನಾವೆಲ್ಲ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು. ಇದಕ್ಕೆ ಬದಲಾಗಿ ಗಣೇಶ ಕೆಳ ಜಾತಿಯವ ಆತನನ್ನು ಪೂಜಿಸಬೇಡಿ ಎಂದು ಮೇಲ್ಜಾತಿಯ ಜನರಿಗೆ ಹೇಳಲು ಹೊರಟರೆ ಅದು ವಿಕೃತಿ.
ಗಣೇಶನ ದೇಹವೇ ಒಂದು ವಿಸ್ಮಯ. ಆತನ ದೇಹದ ಕೆಳಭಾಗ ಮನುಷ್ಯನದು. ತಲೆ ಆನೆಯದು. ಪ್ರಕೃತಿ ಮತ್ತು ಮನುಷ್ಯನ ಸಹಬಾಳ್ವೆ. ಆತ ನಡೆಯುವಾಗ ಮನುಷ್ಯನ ದೇಹವನ್ನು ಆನೆಯ ತಲೆಯನ್ನು ಹೊತ್ತು ಒಯ್ಯುತ್ತಾನೆ  ಆತನಲ್ಲಿ ಆನೆ ಮರಿಯ ತುಂಟತನವಿದೆ. ಜೊತೆಗೆ ವೈಚಾರಿಕ ಪ್ರಜ್ನೆಯಿದೆ. ವಿಶ್ವ ಪರ್ಯಟನ ಮಾಡು ಎಂದರೆ ತಂದೆ ತಾಯಿಯ ಸುತ್ತ ಬಂದು ಅಪ್ಪ ಅಮ್ಮನೇ ಸರ್ವಸ್ವ ಎಂದು ತೋರಿದ ಜಾಣ ಮಗ. ಹೀಗಾಗಿ ಎಲ್ಲರೂ ಗಣೇಶನಂತಹ ಮಗ ನನಗೆ ಬೇಕು ಎಂದು ಆಸೆ ಪಟ್ಟರೆ ಅಶ್ಚರ್ಯವಿಲ್ಲ.
ಗ‹ಣೇಶನ ಕಿವಿ ದೊಡ್ದದು. ಅಂದರೆ ಎಲ್ಲವನ್ನೂ ಕೇಳುವುದಕ್ಕೆ ಆತ ಸಿದ್ಧ. ಕೇಳುವಿಕೆಯೇ ಒಂದು ಅದ್ಭುತ. ಯಾಕೆಂದರೆ ಕೇಳುವುದು ಸುಲಭವಲ್ಲ. ಹೇಳುವುದು ಸುಲಭ. ನಾವೆಲ್ಲ ಹೇಳುವವರು, ಕೇಳುವವರಲ್ಲ. ಕೇಳುವುದಕ್ಕೆ ತಾಳ್ಮೆ ಬೇಕು. ಹೇಳುವುದಕ್ಕೆ ತಾಳ್ಮೆ ಬೇಕಾಗಿಲ್ಲ. ನಮ್ಮ ಒಳಗಿರುವುದನ್ನು ಹೊರಹಾಕುವುದು ಸುಲಭ. ಆದರೆ ಹೇಳಿದ್ದನ್ನು ಕೇಳಿಸಿಕೊಳ್ಳುವುದು ಕಷ್ಟ. ದೊಡ್ಡ ಕಿವಿಯ ಗಣೇಶ ಸಾವಿರಾರು ಭಕ್ತರು ಹೇಳಿದ್ದನ್ನು ಏಕಕಾಲದಲ್ಲಿ ಕೇಳಿಸಿಕೊಳ್ಳಬಲ್ಲ. ಅವನ ಕಿವಿ ಅಷ್ಟು ದೊಡ್ಡದು.
ಗಣೇಶನ ವಾಹನ ಇಲಿ. ನೀವು ಎಂದಾದರೂ ಇಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ ? ಅದು ಎಂದೂ ಸಹ ಸುಮ್ಮನೆ ಕುಳಿತುಕೊಳುವುದಿಲ್ಲ ಚಾಂಚಲ್ಯವೇ ಅದರ ಪ್ರವೃತಿ. ಇಂತಹ ಪ್ರಾಣಿಯನ್ನು ವಾಹನವನ್ನಾಗಿ ಗಣೇಸ ಯಾಕೆ ಮಾಡಿಕೊಂಡ ? ಚಂಚಲತೆಯನ್ನು ನಿಯಂತ್ರಣದಲ್ಲಿ ಇಟ್ತುಕೊಳ್ಳುವ ತತ್ವ ಇದರಲ್ಲಿ ಅಡಗಿರಬಹುದೇ ?
ಈ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲಾಗಿ ನಮ್ಮ ದೇವರುಗಳು ಪ್ರಾಣಿಗಳನ್ನು ತಮ್ಮ ವಾಹನವನ್ನಾಗಿ ಮಾಡಿಕೊಂಡಿರುವುದು ಅಪರಾಧ. ಇದು ಅರಣ್ಯ ಕಾನೂನಿಗೆ ವಿರುದ್ಧ ಎಂದು ಮಾತನಾದಿದರೆ ? ಕಾನೂನು ಪ್ರಕಾರ ಈ ವಾದ ಸರಿ ಇರಬಹುದು. ಆದರೆ ನಮ್ಮ ಕಾನೂನಿಗೆ ದೇವರನ್ನು ಒಳಪಡಿಸುವುದು ಮೂರ್ಖತನ. ದೇವರಿಗೆ ಮನುಷ್ಯ ನಿರ್ಮಿತ ಕಾನೂನು ಅನ್ವಯವಾಗುವುದಿಲ್ಲ ಯಾಕೆಂದರೆ ಆತ ದೇವರು. ಹಾಗೆ ನಮ್ಮ ಜಾತಿ ಪದ್ಧತಿ ಜಾತಿ ಸಂಘರ್ಷ ದೇವರಿಗೆ ಸಂಬಂಧವಿಲ್ಲ.
ದೇವರು ಮನುಷ್ಯನ ಅಸಹಾಯಕತೆಯಲ್ಲಿ ದು:ಖದಲ್ಲಿ ಹುಟ್ಟುತ್ತಾನೆ. ಕೆಲವೊಮ್ಮೆ ನಡುವಿನ ಅಸಮಾನ್ಯ ವ್ಯಕ್ತಿಗಳು ದೇವರಾಗುತ್ತಾರೆ. ಹೀಗೆ ದೇವರಾಗುವ ಪ್ರಕ್ರಿಯೆ ಒಮ್ಮೆಲೆ ಆಗುವುದಲ್ಲ.  ಅದು ಕಾಲ ಕ್ರಮೇಣ ನಡೆಯುವ ಪ್ರಕ್ರಿಯೆ. ದೇವರು ಶಕ್ತಿ ತುಂಬಿಕೊಳ್ಳುವುದು ಹಾಗೆ. ನಮ್ಮಲ್ಲಿ ಪ್ರಜಾಪಾಲಕ ದೇವರಾದ ಹಲವು ಉದಾಹರಣೆಗಳಿವೆ. ಹಾಗೆ ಸಿನೆಮಾ ನಟ ನಟಿಯರೂ ದೇವರಾದದ್ದಿದೆ. ಒಮ್ಮೆ ದೇವರಾದ ಮೇಲೆ ಆತ ತನ್ನ ರೂಪವನ್ನು ಕಳೆದುಕೊಂಡು ತತ್ವವಾಗುತ್ತಾನೆ. ಹೀಗೆ ತತ್ವವಾಗಿ ಬೆಳೆದ ದೇವರು ತತ್ವ ರೂಪದಲ್ಲಿ ಕಾಣುತ್ತಾನೆಯೇ ಹೋರತೂ ದೈಹಿಕವಾಗಿ ಅಲ್ಲ.
ಗಣೇಶ ಕೂಡ ಒಂದು ತತ್ವ. ಆತನ ತತ್ವವನ್ನು ನಾನು ಗಣ ತತ್ವ ಎಂದು ಕರೆಯುತ್ತೇನೆ. ಈ ತತ್ವ ಉಳಿದೆಲ್ಲ ತತ್ವಕ್ಕಿಂತ ಭಿನ್ನವೂ ಶತಿಯುತವೂ ಆಗಿದೆ. ಯಾಕೆಂದರೆ ಮನುಷ್ಯರೂ ಮತ್ತು ಪ್ರಾಣಿಗಳ ಸಹಬಾಳ್ವೆ ಇಲ್ಲಿ ಅಡಗಿದೆ. ಜೊತೆಗೆ ಆತ ಯೋನಿಜನಲ್ಲ. ಆತ ಹುಟ್ಟಿದ್ದು ಮಣ್ಣಿನಿಂದ. ಮಣ್ನು ಎಂದರೆ ಭೂಮಿ. ಹೀಗಾಗಿ ಆತ ಭೂಮಿ ಪುತ್ರನೂ ಕೂಡ. ಇದು ಭೂಮಿ ನಮ್ಮ ತಂದೆ ತಾಯಿ ಎಂಬ ತತ್ವವನ್ನು ಒಳಗೊಂಡಿದೆ. ಭೂಮಿ ಪೂಜೆ ಮಾಡುವ ಈ ದೇಶದಲ್ಲಿ ಭೂಮಿಯಿಂದ ಹುಟ್ಟಿದ ಎಂದರೆ ಆತ ಕೆಳ ಜಾತಿಯವನಿರಬೇಕು ಎಂದು ಕುತರ್ಕ ಮಾಡಬೇಕಾದ ಅಗತ್ಯವಿಲ್ಲ.  ಆತ ಮಣ್ಣಿನ ಮಗ ಎಂದುಕೊಂಡರೆ ಸಾಕು.
ಗಣೇಶ ಮನುಷ್ಯರನ್ನು ಪ್ರತಿನಿಧಿಸುತ್ತಾನೆ. ಪ್ರಾಣಿ ಸಂಕುಲದ ಪ್ರತಿನಿಧಿಯಾಗುತ್ತಾನೆ. ಈ ಭೂಮಿಯ ಮಗನಾಗುತ್ತಾನೆ. ಶಿವ ತತ್ವದ ಮುಂದುವರಿಕೆಯಾಗುತ್ತಾನೆ. ಹೀಗಾಗಿಯೇ ಅವನಿಗೆ ದೈವ ಪಟ್ಟ ಸಿಕ್ಕಿದ್ದು ಸ್ವಾಭಾವಿಕವೇ ಹೊರತೂ ಅಸ್ವಾಭಾವಿಕವಲ್ಲ.
ಶಿವ ನಟರಾಜನಾದರೆ ಗಣೇಶ ನರ್ತನಪ್ರಿಯ. ಜೊತೆಗೆ ಆತ ಮದುವೆಯಾಗದವ. ಆತನಿಗೆ ಸಿದ್ಧಿ ಬುದ್ಧಿ ಎಂಬ ಇಬ್ಬರು ಹೆಂಡಿರು ಎಂದು ಹೇಳಲಾಗುತ್ತಿದೆಯಾದರೆ ಇದಕ್ಕೆ ಹೆಚ್ಚಿನ ಆಧಾರವಿಲ್ಲ್ ಜೊತೆಗೆ ಗಣೇಶನ ಹೆಂಡಂದಿರು ಕೈಲಾಸದಲ್ಲ್ಲಿ ಕಾಣುಸಿಕೊಂಡ ಉದಾಹರಣೆಯೂ ಇಲ್ಲ. ಆದ್ದರಿಂದ ಆತನನ್ನು ಬ್ರಹ್ಮಚಾರಿ ದೇವರು ಎಂದೂ ಪರಿಗಣಿಸಬಹುದು. ಆತ ಬ್ರಹ್ಮಚಾರಿ ದೇವರಾದ್ದರಿಂದ ಆತನಿಗೆ ಹೆಂಡಂದಿರ ಕಾಟವೂ ಇಲ್ಲ.
ಗಣೇಶನ ಹುಟ್ಟನ್ನು ಸಂಶೋಧನೆ ಮಾಡಿರುವ ಯೋಗಿಶ್ ಮಾಸ್ಟರ್ ಆತನ ಕೈಯಲ್ಲಿ ಕತ್ತಿ ಮಚ್ಚು ನೀಡಿದ್ದಾರೆ ಎಂಬುದು ಇನ್ನೊಂದು ಆರೋಪ. ಆದರೆ ಗಣೇಶ ಶಸ್ತ್ರಾಸ್ತ್ರಗಳಿಗಿಂತ ಹೆಚ್ಚಾಗಿ ಬುದ್ದಿಯನ್ನು ಪ್ರತಿನಿಧಿಸುವ ದೇವರು. ಆತ ಜಾಣತನಕ್ಕೆ ಹೆಸರು ವಾಸಿ. ಆತ ಲೋಕ ಕಲ್ಯಾಣಕ್ಕಾಗಿ ಮಾಡಿದ ಯಾವುದೇ ಕೆಲಸವೂ ಆಗಿದ್ದು ಜಾಣತನದಿಂದ. ಆತ ನೇರ ಯುದ್ಧ ಮಾಡಿದ್ದಕ್ಕಿತ ಪರೋಕ್ಷ ಯುದ್ಧ ಮಾಡಿದ್ದೇ ಹೆಚ್ಚು.
ಗಣೇಶ£ ದೇಹ ಕೂಡ ಬೃಹತ್ ಅದುದು. ಆತನದು ಸಿಕ್ಸ್ ಪ್ಯಾಕ್ ದೇಹವಲ್ಲ. ವಿಷ್ಣುವಿನಂತೆ ಸುಕೋಮಲ ದೇವವನ್ನಾಗಲಿ, ಅವನ ಅಪ್ಪ ಶಿವನಂತಹ ಕಾಠಿಣ್ಯವನ್ನು ಹೊರಸೂಸುವ ದೇಹವನ್ನು ಆತ ಹೊಂದಿಲ್ಲ. ಅವನ ಮನುಷ್ಯ ದೇಹದ ಭಾಗದಲ್ಲಿ ಬೊಜ್ಜು ಕಂಡು ಬಂದರೆ ವಿನಾಯಕನ ತಲೆಯ ಭಾಗ ಸದಾ ಜಾಗೃತ
ಇದಕ್ಕೆ ಪೂರಕವಾದ ಕಥೆಯೊಂದಿದೆ. ಅದು ಕೇವಲ ಪುರಾಣವೇ ಆಗಿರಬಹುದು, ಆದರೆ ಅದು ನಮಗೆ ಮುಖ್ಯವಲ್ಲ. ಮಹಾಭಾರತ ಬರೆದ ವ್ಯಾಸನಿಗೆ ಬರವಣಿಗೆಯಲ್ಲಿ ಅಂತಹ ಪ್ರಾವಿಣ್ಯತೆ ಇತ್ತೊ ಇಲ್ಲವೋ ಅಂತೂ ಮಹಾಭಾರತವನ್ನು ಬರೆಯಲು ಆತ ನಿಯೋಜಿಸಿಕೊಂಡಿದ್ದು ಗಣೇಶನನ್ನು. ವ್ಯಾಸ ಮಹಾಭಾರತದ ಕಥೆಯನ್ನು ವ್ಯಾಸ ಬಾಯಲ್ಲಿ ಹೇಳಿತ್ತಿದ್ದರೆ, ಹೇಳಿ ಮುಗಿಸುವುದಕ್ಕಿಂತ ಮೊದಲು ಗಣೇಶ ಬರೆದು ಮುಗಿಸಿ ಬಿಡುತ್ತಿದ್ದನಂತೆ. ಈ ಕಥೆ ಅಥವಾ ಪುರಾಣ ಒಪ್ಪಿಕೊಳ್ಳುವುದೆಂದರೆ ಗಣೇಶನ ಬುದ್ದಿ ಮತ್ತೆಯನ್ನು. ಆತ ಬರೆಹದಲ್ಲಿ ಪ್ರಾವಿಣ್ಯತೆಯನ್ನು ಹೊಂದಿದ್ದ ಎಂಬುದನ್ನು.
ನಮ್ಮ ನಂಬಿಕೆಯ ಪ್ರಕಾರ ಸರಸ್ವತಿ ವಿದ್ಯಾ ದೇವತೆ. ಆದರೆ ಸರಸ್ವತಿ ಸದಾ ವೀಣೆಯನ್ನು ಭಾರಿಸುತ್ತ ಕುಳಿತಿರುವವಳು. ಹೀಗಾಗಿ ಈ ಪೋರ್ಟ್ ಫೋಲಿಯೋ ಗಣೇಶನ ಪಾಲಿಗೆ ಬಂದಿದೆ. ಆತ ವಿದ್ಯಾ ದೇವತೆಯೂ ಆಗಿಬಿಟ್ಟಿದ್ದಾನೆ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...