Friday, January 6, 2017

ಅವಳು


ಕೆಂಪು ರವಿಕೆಯ ಒಳಗೆ ಬಚ್ಚಿಟ್ಟುಕೊಂಡವಳು
ಅತ್ತಾಗ, ರಚ್ಚೆ ಹಿಡಿದಾಗ ಬಚ್ಚಿಟ್ಟಿಕೊಂಡಿದ್ದನ್ನು ಬಿಚ್ಚಿಟ್ಟು ಕೊಟ್ಟವಳು
ಪುಟ್ಟ ಕೆನ್ನೆಯ ಸವರಿ, ಲೊಚ ಲೊಚನೆ ಮುತ್ತುಕೊಟ್ಟವಳು.
ಹಠ ಹಿಡಿದು ಬಿದ್ದು ಹೊರಳಿದಾಗ ಮತ್ತೆ ಬಿಗಿದಪ್ಪಿಕೊಂಡವಳು
ಆಗ ನಾನಲ್ಲಿ ಹುಡುಕಿದ್ದಾದರೂ ಏನನ್ನು ?

ರಸ್ತೆ ಅಂಚಿನಲ್ಲಿ ಕದ್ದು ನಿಂತು ನೋಡುವಾಗ ಹಾಗೆ ತಲೆ ತಗ್ಗಿಸಿ ನಡೆದವಳು
ಅರ್ಧ ತಿಂದ ಮಾವಿನ ಕಾಯಿ, ಪೇರಲೆ ಹಣ್ಣು ಪಡೆದು
ಕೆಂಪು ಲಂಗದ ಒಳಗೆ ಬಚ್ಚಿಟ್ಟುಕೊಂಡವಳು
ಮುಖದ ಹತ್ತಿರ ಮುಖ ಒಯ್ದಾಗ ನಾಚಿ ನೀರಾದವಳು.
ಅದೊಂದು ದಿನ ಯಾರದೂ ಕೈ ಹಿಡಿದು ಹೋರಟು ಬಿಟ್ಟವಳು
ಆಗ ನಾನಲ್ಲಿ ಹುಡುಕಿದ್ದಾದರೂ ಏನನ್ನು ?

ಹಾಗೆ ಅಚಾನಕ್ ಆಗಿ ಬಂದು ಹುಡುಕುತ್ತಿರುವದನ್ನು
ಕೊಡುವಂತೆ ಮುಂದೆ ಬಂದು ನಿಂತವಳು.
ಕೈ ಬೆರಳುಗಳ ನಡುವೆ ಬೆರಳು ಸಿಕ್ಕಿಸಿ
ಮುಂದೆ ನಡೆಯಲು ಹೆಜ್ಜೆ ಇಟ್ಟವಳು.
ದಾರಿ ಸವೆಸುವಾಗ, ಹಾಗೆ ಕಾಣದಾದವಳು
ಆಗ ನಾನಲ್ಲಿ ಹುಡುಕಿದ್ದಾದರೂ ಏನನ್ನು ?

ಅರ್ಧ ಸವೆಸಿದ ಹಾದಿ. ಬಾನ ತುಂಬಾ ಕಾರ್ಮೋಡ.
ಅಲ್ಲಲ್ಲಿ ಸುಳಿ ಮಿಂಚು ಕಣ್ಣು ಮುಚ್ಚುವ ಬೆಳಕು.
ದಾರಿ ತುಂಬಾ ಕತ್ತಲೆಯಲ್ಲೂ ಕಾಣುವ ನೆರಳುಗಳು.
ಅದ್ಯಾವ ಪ್ರತಿಮೆ ? ಅದ್ಯಾವ ದಿವ್ಯ ಪ್ರಭೆ ?
ನೆರಳುಗಳ ಹಿಂದೆ ನಿಂತಿರುವ ದಿವ್ಯಾತ್ಮ ಯಾವುದು ?
ಆಗಲ್ಲಿ ನಾನು ಹುಡುಕುತ್ತಿರುವುದಾದರೂ ಏನನ್ನು ?

ಅವಳು ಅವಳೇ ಇರಬೇಕು.ಇಲ್ಲ ಇವಳು ಅವಳಾಗಿರಬೇಕು.
ಇವಳು ಅವಳಾಗುವುದೆಂದರೆ, ಅವಳು ಇವಳಾಗುವುದೇ ಅಲ್ಲವೆ ?
ಇವಳು ಅವಳಾಗುವ, ಅವಳು ಇವಳಾಗುವ ನಡುವೆ.
ನಾನು ಹುಡುಕುತ್ತಿರುವುದಾದರೂ ಯಾರನ್ನು 

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...