Friday, September 20, 2013

ಇತಿಹಾಸ ಪುರಾಣವಾಗುವ ಬಗೆ; ಐತಿಹಾಸಿಕ ವ್ಯಕ್ತಿಗಳಿಗೆ ಅತಿಮಾನುಷ ಶಕ್ತಿ......

ಇತ್ತೀಚಿನ ದಿನಗಳಲ್ಲಿ ಇತಿಹಾಸ ನನಗೆ  ಹೆಚ್ಚು ಆಕರ್ಷಕ ಅನ್ನಿಸುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಒಂದು ದೇಶವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದೇ ಇತಿಹಾಸ, ಆದರೆ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಹೇಗೆ ? ಒಂದು ದೇಶದ ಇತಿಹಾಸ ಅಂದರೆ ಅದು ಒಂದು ದೇಶದ ಜನ ಜೀವನವನ್ನು ಸಂಸ್ಕೃತಿಯನ್ನು ಬೌಗೋಲಿಕ ವ್ಯಾಪ್ತಿಯನ್ನು, ಹಾಗೂ ಅವರು ಹೇಗೆ ಯೋಚಿಸುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಆಗಿದೆ, ಹೀಗಾಗಿ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದೇ ಬಹುದೊಡ್ದ ಸವಾಲಾಗಿದೆ.
ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ನೈಜ ಮತ್ತು ವಸ್ತು ನಿಷ್ಠ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಪೂರಕ ಸಾಮಗ್ರಿಗಳಿಲ್ಲ. ರಾಮಾಯಣ ಮತ್ತು ಮಹಾಭಾರತದಂತಹ ಮಹಾ ಕಾವ್ಯಗಳು ಒಂದು ಕಾಲ ಘಟ್ಟದ ರಾಜ ಮಹಾರಾಜರ ಕಥೆಗಳನ್ನು ಮಾತ್ರ  ಹೇಳುತ್ತವೆ. ಜೊತೆಗೆ ಮನುಷ್ಯ ಸಂಬಂಧಗಳು, ಅವರು ನಂಬಿದ್ದ ಜೀವನ ಮೌಲ್ಯಗಳ ಬಗ್ಗೆ ಮಾತನಾಡುತ್ತವೆ. ಆದರೆ ಇವು ಯಾವವೂ ಕೂಡ ವೈಚಾರಿಕ ಸಂಘರ್ಷಕ್ಕೆ ಎಡೆ ಮಾಡಿಕೊಡುವುದಿಲ್ಲ. ಜೊತೆಗೆ ಸತ್ಯ ಎಂದುಕೊಂಡಿದ್ದನ್ನು ಪ್ರಶ್ನಿಸುತ್ತ ಮುಖಾಮುಖಿಯಾಗುವುದಿಲ್ಲ.
ನಾವೆಲ್ಲ ಮಹಾಭಾರತ  ರಾಮಾಯಣದಂತಹ ಗ್ರಂಥಗಳನ್ನು ಓದಿ ಬೆಳೆದಿದ್ದೇವೆ. ಈ ಮಹಾ ಕಾವ್ಯಗಳು ನಮ್ಮಂತಹವರ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ಒಹಿಸಿವೆ. ಆದರೆ ರಾಮಾಯಣದಲ್ಲಿ ಅಥವಾ ಮಹಾ ಭಾರತದಲ್ಲಿ ಬರುವ ಪಾತ್ರಗಳು ನಮ್ಮ ಜೊತೆ ಯಾಕೆ ಮುಖಾಮುಖಿಯಾಗುವುದಿಲ್ಲ ? ನಮ್ಮಲ್ಲಿ ಹುಟ್ಟುವ ಪ್ರಶ್ನೆಗಳನ್ನು ಯಾಕೆ ಕೇಳಲು ಸಾಧ್ಯವಾಗುತ್ತಿಲ್ಲ ?
ಇದುಕ್ಕೆ ಬಹುಮುಖ್ಯವಾದ ಕಾರಣ ಈ ಮಹಾನ್ ಕಾವ್ಯಗಳಿಗೆ ಧರ್ಮದ ಲೇಪ ಇರುವುದೇ ಆಗಿದೆ. ರಾಮ ಮತ್ತು ಕೃಷ್ಣ ದೇವರಾಗಿದ್ದರಿಂದ ಅವರ ನಡವಳಿಕೆಯನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ನಮ್ಮ ಪರಂಪರೆ ನೀಡಿಲ್ಲ. ಹೀಗಾಗಿ ರಾಮ ಮರೆಯಲ್ಲಿ ನಿಂತು ವಾಲಿಯನ್ನು ವಧಿಸಿ ನಮ್ಮಂತೆ ಸಾಮಾನ್ಯ ಮನುಷ್ಯನಂತೆ ವರ್ತಿಸಿದರೂ ಅವನ ವರ್ತನೆಗೆ ದೈವತ್ವದ ಆರೋಪ ಮಾಡಿ ಕ್ಷಮಿಸಿ ಬಿಡುತ್ತೇವೆ. ರಾಮ ಎಂಬ ಒಬ್ಬ ರಾಜನ ಹೆಂಡತಿಯನ್ನು ರಾವಣ ಎಂಬ ಇನ್ನೊಬ್ಬ ರಾಜ ಹೊತ್ತೊಯ್ಸ ಘಟನೆಯನ್ನ್ಯು ಒಂದು ರಾಜ್ಯದ ಸಮಸ್ಯೆಯನ್ನಾಗಿ ಪರಿಗಣಿಸಿಬಿಡುತ್ತೇವೆ. ರಾಮ ದೇವರಾದ್ದರಿಂದ ಆತ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಿದ್ದು ಸರಿ. ಆತ ಮನುಷ್ಯನಾಗಿದ್ದರೆ ಆತ ತಪ್ಪಿತಸ್ಥ. ದೈವತ್ವ
ಆದರೆ ರಾಮ ಇದ್ದ ಕಾಲದಲ್ಲಿ ಸಾಮಾನ್ಯ ಜನ ಹೇಗಿದ್ದರು ? ರಾಮ ಸೀತೆಯನ್ನು ಕಳೆದಕೊಂಡ ಘಟನೆಯನ್ನು ಸಾಮಾನ್ಯ್ ಪ್ರಜೆಯೊಬ್ಬ ಸ್ವೀಕರಿಸಿದ ಬಗೆ ಯಾವುದು ಎಂಬ ವಾಲ್ಮೀಕಿ ರಾಮಾಯಣದಲ್ಲಿ ಹೆಚ್ಚಿನ ವಿವರಗಳು ದೊರಕುವುದಿಲ್ಲ. ಹಾಗೆ ಅಂದಿನ ಸಮಾಜದ ಸಂರಚನೆ ಹೇಗಿತ್ತು ? ಈ ಬಗ್ಗೆ ಹೆಚ್ಚಿನ ವಿವರಗಳು ದೊರಕುವುದಿಲ್ಲ.
ಅಂದರೆ ನಾವು ಮಹಾ ಕಾವ್ಯ ಎಂದು ಪರಿಗಣಿಸಿದ ರಾಮಾಯಣ ಮತ್ತು ಮಹಾಭಾರತದಲ್ಲಿ ಸಾಮಾನ್ಯ ಜನರ ಬದುಕಿನ ಬಗ್ಗೆ ಏನೂ ಇಲ್ಲ. ಈ ಎರಡೂ ಮಹಾ ಕಾವ್ಯಗಳು ಸಾಮಾನ್ಯ ಜನರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗೂ ಅವರ ಆಲೋಚನೆಗೆ ವೇದಿಕೆಯಾಗಿಲ್ಲ.
ರಾಮಾಯಣಕ್ಕಿಂತ ಮಹಾ ಭಾರತ ಹೆಚ್ಚು ಪರಿಣಾಮಕಾರಿ. ರಾಮಾಯಣ ಅಂದಿನ ಕಾಲಕ್ಕೆ ಮಾತ್ರವಲ್ಲದೇ ಇಂದಿನ ಕಾಲಕ್ಕೂ ಸಲ್ಲುವ ಕೆಲವು ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುವುದಕ್ಕೆ ಸೀಮಿತವಾಗಿದೆ. ಮಹಾಭಾರತ ಹಾಗಲ್ಲ, ಅದರ ಕ್ಯಾನವಾಸ್ ತುಂಬಾ ದೊಡ್ದದು. ಅದು ಯುದ್ಧದ ಬಗ್ಗೆಯೂ ಮಾತನಾಡುತ್ತದೆ, ಬದುಕಿನ ಬಗ್ಗೆಯೂ ಮಾತನಾಡುತ್ತದೆ. ಹಾಗೆ ರಾಮಾಯಣದ ರಾಮನಂತೆ, ಕೃಷ್ಣ ನೂರಕ್ಕೆ ನೂರರಷ್ಟು ಎಲ್ಲ ಕ್ರಿಯೆಗಳಿಂದಲೂ ದೈವತ್ವದ ಆರೋಪದಿಂದಾಗಿ ಬಚಾವಾಗುವ ದೈವ ನಾಯಕನಲ್ಲ. ಆತ ದೈವತ್ವವನ್ನು ಮೀರಿ ಮನುಷ್ಯನಂತೆ ಹಲವು ಬಾರಿ ವರ್ತಿಸಿ ಟೀಕೆಗೆ ಒಳಗಾಗುತ್ತಾನೆ. ಆತನ ಬಾಲ್ಯದ ಕಳ್ಳತನಕ್ಕೆ, ನಂತರದ ವ್ಯಾಮೋಹಕ್ಕೆ, ಸಾವಿರಾರು ಜನರನ್ನು ಸಾವಿನ ಕೂಪಕ್ಕೆ ತಳ್ಳುವ ಯುದ್ಧಕ್ಕೆ ಆತನ ದೈವತ್ವ ಸಂಪೂರ್ಣ ರಕ್ಶಣೆಯನ್ನು ನೀಡುವುದಿಲ್ಲ. ಹೀಗಾಗಿ ರಾಮನಿಗಿಂತ ಕೃಷ್ಣ ಹೆಚ್ಚು ಹತ್ತಿರದವನಾಗಿ ಕಾಣುತ್ತಾನೆ.
ಈ ಎರಡೂ ಮಹಾಕಾವ್ಯಗಳು ದೈವತ್ವವನ್ನು ಮೀರಿದ್ದರೆ ಅವುಗಳು ನಮ್ಮನ್ನು ಇನ್ನೂ ಹೆಚ್ಚು ವಿಸ್ತೃತವಾದ ಚಿಂತನೆಗಳಿಗೆ ಹಚ್ಚುತ್ತಿದ್ದವು. ಇದನ್ನು ಮೀರಿ ನೋಡುವುದಾದರೆ ರಾಮಾಯಣದ ರಾವಣ ರಾಮಾಯಣದಲ್ಲಿ ಪ್ರತಿಬಿಂಬಿತವಾಗಿದ್ದಕ್ಕಿಂತ ಭಿನ್ನವಾಗಿ ನಮಗೆ ಕಾಣುತ್ತಾನೆ. ಆತನ ಮನಸ್ಸಿನಲ್ಲಿ ತುಂಬಿದ ಪ್ರತಿಕಾರ ಆತನನ್ನು ಇನ್ನೊಬ್ಬರ ಹೆಂಡತಿಯನ್ನು ಎಳೆತರುವುದಕ್ಕೆ ಪ್ರೇರೇಪಿಸಿದ್ದನ್ನು ಬಿಟ್ಟರೆ ಆತ ಜನ ವಿರೋಧಿಯಾದ ಬಗ್ಗೆ ಬೇರೆ ಯಾವ ಸಮರ್ಥನೆಯೂ ದೊರುಕುವುದಿಲ್ಲ. ಜೊತೆಗೆ ರಾಮಾಯಣ ರಾಮ ಮತ್ತು ರಾವಣರ ನಡುವಿನ ವೈಯಕ್ತಿಕ ಧ್ವೇಷದ ಕಥೆಯೇ ಹೊರತೂ ಅದು ಜನ ಸಮುಧಾಯವನ್ನು ಒಳಗೊಂಡ ಕಥಾನಕವಾಗಿ ಬೆಳೆಯುವುದಿಲ್ಲ. ಮಹಾಭಾರತಕ್ಕಿಂತ ರಾಮಾಯಣ ಹಳೆಯದಾಗಿರುವುದು ಇದಕ್ಕೆ ಒಂದು ಕಾರಣವಾದರೆ ಇದನ್ನು ಬರೆದ ವಾಲ್ಮೀಕಿಯೇ ರಾಮನ ಭಕ್ತನಂತೆ ವರ್ತಿಸಿದ್ದು ಕಾರಣವಿರಬಹುದು. ಆತ ರಾಮಾಯಣವನ್ನು ನೋಡಿದ್ದು ರಾಮ ಕಥಾನಕವನ್ನಾಗಿ ಮಾತ್ರ. ಇದು ವಾಲ್ಮೀಕಿ ಮಿತಿ. . ಆತನ ಬದುಕಿನ ಅನುಭವ ವ್ಯಾಸನಿಗಿಂತ ವಿಸ್ತ್ರುತವಾಗಿದ್ದರೂ ಆತ ವಾಲ್ಮೀಕಿಯಾಗ ಬದಲಾಗುವಾಗಲೇ ರಾಮ ಭಕ್ತನಾಗಿಯೂ ಬದಲಾಗ. ಹೀಗಾಗಿ ಕವಿಯಾಗಿ ಎಂದು ಅನ್ನಿಸುತ್ತದೆ. ಹೀಗಾಗಿ ಈ ಮಹಾ ಕಾವ್ಯದಲ್ಲಿ ಆತನೂ ಒಂದು ಪಾತ್ರವಾಗಿ ಸೀತೆಯನ್ನು ತನ್ನ ಆಶ್ರಮದಲ್ಲಿ ಸಲುಹಿ, ಆಕೆಯ ಹೆರಿಗೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತಾನೆ. ಮತ್ತೆ ರಾಮ ಸೀತೆ ಒಂದಾಗುವಂತೆ ನೋಡಿಕೊಳ್ಳುತ್ತಾನೆ. ಆದರೆ ತಾನು ವರಿಸಿ ಮದುವೆಯಾದ ಸೀತೆಯನ್ನು ಕಾಡಿಗೆ ಆಟ್ಟಿದ್ದು ತಪ್ಪು ಎಂದು ರಾಮನಿಗೆ ಹೇಳದೇ ತನ್ನ ರಾಮ ಭಕ್ತಿಯನ್ನು ವಾಲ್ಮೀಕಿ ಪ್ರದರ್ಶಿಸುತ್ತಾನೆ. ಜೊತೆಗೆ ಇಡೀ ರಾಮಾಯಣದಲ್ಲಿ ರಾಮ ಅಗಸನೊಬ್ಬನ ಮಾತು ಕೇಳಿ ಹೆಂಡತಿಯನ್ನು ಕಾಡಿಗಟ್ಟಿದ ಎಂದು ಹೇಳುವ ಮೂಲಕ ಜನ ಸಾಮಾನ್ಯರ ಧ್ವನಿ ಪ್ರಕಟವಾಗುವ ಏಕ ಮೇವ ಘಟನೆಯೂ ಇದಾಗುತ್ತದೆ. ಇದನ್ನು ಬಿಟ್ಟರೆ ಇಡೀ ರಾಮಾಯಣದಲ್ಲಿ ಎಲ್ಲೂ ಜನಸಾಮಾನ್ಯರು ಪಾತ್ರವಾಗುವುದೇ ಇಲ್ಲ. ಉಳಿದಂತೆ ರಾಮ ಕಾಡಿಗೆ ಹೋಗುವಾಗ ಸಾಮೋಹೊಕವಾಗಿ ಅಳುವ ಪ್ರಜೆಗಳು ರಾಮ ತಿರುಗಿ ಬಂದಾಗ ಸಂತೋಷದಿಂದ ನಲಿಯುವುದಕ್ಕೆ ಮಾತ್ರ ಸೀಮಿತವಾಗುತ್ತಾರೆ.\
ನಾನು ಈ ಮಾತುಗಳನ್ನು ಹೇಳುವಾಗ ಒಂದು ವಿಷಯವನ್ನು ಸ್ಪಷ್ತಪಡಿಸಲೇ ಬೇಕು. ಅದು ರಾಮಾಯಣ ಮತ್ತು ಮಹಾಭಾರತವನ್ನು ನೋಡುವ ಬಗೆ. ಅದನ್ನು ಅರ್ಥ ಮಾಡಿಕೊಳ್ಳುವ ರೀತಿ. ಇದೊಂದು ಹಿಂದೂಗಳ ಪವಿತ್ರ ಗ್ರಂಥ ಎಂದುಕೊಂಡು ಪ್ರಾರಂಭಿಸಿದರೆ ಆಗ ಅರ್ಥಮಾಡಿಕೊಳ್ಳುವ ಉಳಿದೆಲ್ಲ ಬಾಗಿಲುಗಳು ಮುಚ್ಚುತ್ತವೆ. ಇದೊಂದು ಮಹಾ  ಕಾವ್ಯ ಎಂದು ಕೊಂಡರೆ ಆಗ ವಿಮರ್ಷೆಯ ಎಲ್ಲ ಮಾನದಂಡಗಳನ್ನು ಅನುಸರಿಸಿ ಈ ಗ್ರಂಥವನ್ನು ನೋಡಬೇಕಾಗುತ್ತದೆ. ಆದರೆ ಬಹುತೇಕ ಭಾರತೀಯರು ಇದನ್ನು ಪುರಾಣ ಎಂದು ಸ್ವೀಕರಿಸಿ ರಾಮನನ್ನು ದೇವರು ಎಂದು ಸ್ವೀಕರಿಸಿಯಾಗಿದೆ. ಹೀಗಾಗಿ ರಾಮಯಣವನ್ನು ವಿಭಿನ್ನ ದೃಷ್ಟಿಯಲ್ಲಿ

ನೋಡಲು ಅವರು ಒಪ್ಪುವುದಿಲ್ಲ.
ನಾನು ಇಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಇತಿಹಾಸ ಎಂದು ಸ್ವೀಕರಿಸಿ ಮಾತನಾಡುತ್ತಿದ್ದ್ಡೇನೆ. ಹೀಗಾಗಿ ಒಂದು ಇತಿಹಾಸವನ್ನು ಹೇಗೆ ನೋಡಬೇಕೋ ಹಾಗೆ ನೋಡಲು ಯತ್ನ ನಡೆಸಿದ್ದೇನೆ. ರಾಮ ಮತ್ತು ರಾವಣ ಇಲ್ಲಿದ್ದರು ಮತ್ತು ಅವರ ನಡುವೆ ಯುದ್ಧ ನಡೆದಿತ್ತು ಎಂಬುದನ್ನು ಒಪ್ಪಿಕೊಂಡು ಮಾತನಾಡುವುದಾದರೆ ಮಹಾಕಾವ್ಯದಲ್ಲಿ ಇರುವ ಭಕ್ತಿ ನಂಬಿಕೆ ಮತ್ತು ಭಕ್ತನೊಬ್ಬ ತನ್ನ ದೇವರ ಬಗ್ಗೆ ಬರೆದುದೆಲ್ಲ ಇತಿಹಾಸವಾಗುವುದಿಲ್ಲ. ಅದು ಕಾವ್ಯವನ್ನು ಬರೆದವನ ಅಭಿಪ್ರಾಯ ನಂಬಿಕೆ ಕೂದ ಎಂಬ ಎಚ್ಚರಿಕೆ ನಮಗೆಲ್ಲ ಇರಬೇಕು. ಆಗ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.
ಮಹಾಭಾರತ ರಾಮಾಯಣಕ್ಕಿಂತ ಹೆಚ್ದಿ ಇತಿಹಾಸಕ್ಕೆ ಹತ್ತಿರವಾಗಿದೆ ಎಂದು ನನಗೆ ಅನ್ನಿಸಿದೆ. ಅದು ಇತಿಹಾಸದ ಮೇಲೆ ಕಟ್ಟಿದ ಮಹಾ ಕಾವ್ಯ. ಹಾಗಂತ ಮಹಾಭಾರತದಲ್ಲಿ ಬಂದಿದ್ದೆಲ್ಲ ನೂರಕ್ಕೆ ನೂರರಷ್ಟು ಸತ್ಯ ಎಂದು ನಾವು ಅಂದುಕೊಳ್ಳಬೇಕಾಗಿಲ್ಲ. ಈಗ ಈ ಮೊದಲು ಪ್ರಸ್ತಾಪಿಸಿದ ಇತಿಹಾಸದ ವಿಚಾರಕ್ಕೆ ನಾನು ಬರುತ್ತೇನೆ. ಭಾರತೀಯ ಇತಿಹಾಸ ಹೀಗೆ ಇತ್ತು ಹೇಳುವ ಸ್ಪಷ್ಟ ಮತ್ತು ನಿಖರ ಮಾಹಿತಿಗಳು ಈಗಲೂ ಲಭ್ಯವಿಲ್ಲ. ಈ ಬಗ್ಗೆ ಸತತ ಸಂಶೋಧನೆ ಕೂಡ ನಡೆದಿಲ್ಲ. ಗುಪ್ತರ ಕಾಲದಿಂದ ಮೈಸೂರು ಸಂಸ್ಥಾನದ ವರೆಗೆ ಇತಿಹಾಸ ಏಕ ಮುಖವಾಗಿದೆ. ನಮ್ಮ ಇತಿಹಾಸಕಾರಲ್ಲಿ    ಎರಡು ಬಗೆಯ ಜನರಿದ್ದಾರೆ. ಕೆಲವರು ನಮ್ಮ ಇತಿಹಾಸವನ್ನು ವೈಭವೀಕರಿಸಿ ಹೇಳುವಂಥವರು. ಇನ್ನೊಂದು ಬಗೆಯ ಇತಿಹಾಸಕಾರರು ಎಡ ಪಂಥೀಯ ಮತ್ತು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಭಾರತೀಯ ಇತಿಹಾಸಕಾರರು.
   ಇವರಲ್ಲಿ ರೋಮಿಲಾ ಥಾಪರ್ ಅಂಥವರು ಪ್ರಮುಖರು.   ಇವರು ಎಂಥವರೆಂದರೆ ಅವರಿಗೆ ಶಂಕರಾಚಾರ್ಯ, ಮಧ್ವಚಾರ್ಯರಂಥವರ ವಿಚಾರಧಾರೆಯ ಮೇಲು ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಯ ಪ್ರಭಾವ ಕಾಣುತ್ತದೆ. ಭಾರತಕ್ಕೆ ಈ ಎರಡು ಧರ್ಮಗಳು ಬಂದಿದ್ದು ಯಾವಾಗ, ಹಿಂದೂ ಧರ್ಮ ಯಾವಾಗಿನಿಂದ ಇದೆ ಎಂಬ ಸಾಮಾನ್ಯ ಜ್ನಾನವೂ ಇಲ್ಲದಂತೆ ಈ ಇತಿಹಾಸಕಾರರು ವರ್ತಿಸುತ್ತಿದ್ದಾರೆ. ಇವರಿಗೆ ಇತಿಹಾಸವನ್ನು ಇತಿಹಾಸವನ್ನಾಗಿ ನೋಡುವುದು ಬೇಕಾಗಿಲ್ಲ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸಂಪೂರ್ಣ ನಿರಾಕರಣೆಯೇ ಇವರ ಮೂಲ ಉದ್ದೇಶ.
ಇನ್ನು ಭಾರತದಲ್ಲಿ ಇರುವುದೆಲ್ಲ ಅದ್ಭುತವಾದುದು ಎಂದು ಹೊರಡುವ ಬಲ ಪಂಥೀಯ ಇತಿಹಾಸಕಾರರು. ಇವರಿಗೂ ಈ ದೇಶದ ಸಾಮಾಜಿಕ ಸಂರಚನೆ ಇಲ್ಲಿರುವ ವೈರುಧ್ಯಗಳು ಮುಖ್ಯವಲ್ಲ. ಇವೂ ಸಹ ಎಲ್ಲವನ್ನೂ ವೈಭವಿಕರಿಸುವ ಮೂರ್ತಿ ಪೂಜಕರು. ಇತಿಹಾಸ ಯಾವುದೇ ಪಂಥದ ಮೇಲೆ ನಿಂತಿರುವುದಲ್ಲ. ಅದು ಕಳೆದುಹೋದ ಸತ್ಯವನ್ನು ಅನಾವರಣಗೊಳಿಸುವ ಕಾಯಕ. ಇಲ್ಲಿ ಬಣ್ಣದ ಕನ್ನಡಕವನ್ನು ಹಾಕಿಕೊಂಡು ನೋಡುವುದು ಸರಿಯಲ್ಲ.
ಇತ್ತೀಚಿನ ಕೆಲವು ಸಂಶೋಧನೆಗಳು ನಮ್ಮ ಇತಿಹಾಸಕಾರರ ಹಳೆಯ ನಂಬಿಕೆಗಳು ಸುಳ್ಲು ಎಂದು ಸಾಬೀತುಪಡಿಸಿವೆ. ಭಾರತದಲ್ಲಿ ಸರಸ್ವತಿ ನದಿ ಇತ್ತು ಎಂಬುದು ಸಾಟ್ ಲೈಟ್ ತಂತ್ರಜ್ನಾನ ಸಾಬೀತುಪಡಿಸಿದೆ. ಎಂದೋ ಬತ್ತಿ ಹೋದ ಈ ನದಿಯ ದಂಡೆಯ ಮೇಲೆ ನೂರಕ್ಕು ಹೆಚ್ಚು ನಾಗರೀಕತೆಗಳು ಇದ್ದವು. ಈ ನಾಗರೀಕತೆಗಳು ಹರಪ್ಪಾ ಮತ್ತು ಮಹಂಜೋದಾರ್ ನಾಗರೀಕತೆಗಿಂತ ಹಿಂದಿನವು. ಹೀಗಾಗಿ ಹರಪ್ಪ ಮತ್ತು ಮಹಂಜೋದಾರ್ ನಾಗರಿಕತೆಯೇ ಅತಿ ಪುರಾತನವಾದ ನಾಗರಿಕತೆ ಎಂಬ ಇತಿಹಾಸಕಾರರ ಪ್ರತಿಪಾದನೆಯನ್ನು  ಅಲ್ಲಗಳೆದಂತಾಗಿದೆ. ಹಾಗೆ ಆರ್ಯರು ಹೊರಗಿನಿಂದ ಭಾರತಕ್ಕೆ ಬಂದವರು ಎಂಬ ವಾದವೂ ಈ ಹೊಸ ಸಂಶೋಧನೆ ಸುಳ್ಳಾಗಿಸಿದೆ. ಯಾಕೆಂದರೆ ಸರಸ್ವನಿ ನದಿಯ ಮೇಲಿನ ನಾಗರೀಕತೆ ಸುಮಾರು ಕ್ರಿಸ್ತಪೂರ್ವ ೧೦,೦೦೦ ವರ್ಷಗಳಷ್ಟು ಹಿಂದಿನವು ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೆ ಡಾ. ಎಸ್ ಆರ್ ರಾವ ನೇತೃತ್ವದಲ್ಲಿ ಧ್ವಾರಕೆಯನ್ನು ಸಮುದ್ರದಾಳದಲ್ಲಿ ಪತ್ತೆ ಮಾಡಿದ್ದು ಮತ್ತೊಂದು ಐತಿಹಾಸಿಕ ಸಾಧನೆ. ಈ ಧ್ವಾರಕೆ ಎಂಬ ನಗರ ಕ್ರಿಸ್ತಪೂರ್ವ ೧೨,೦೦೦ ದಿಂದ ೩೦ ಸಾವಿರ ವರ್ಷಗಳ ಹಿಂದೆ ಎಂಬುದು ಸ್ಪಷ್ಟವಾಗಿದೆ. ಇದು ಭಾರತೀಯ ಇತಿಹಾಸವನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ದದ್ದು ಮಾತ್ರವಲ್ಲ,  ಭಾರತೀಯ ಇತಿಹಾಸದಲ್ಲಿ ಇರುವ ಮಿಥ್ಯೆಯನ್ನು ಬಯಲು ಮಾಡಿದೆ.
ಧ್ವಾರಕೆಯನ್ನು ಪತ್ತೆ ಮಾಡಿದ್ದು ಮಹಾ ಭಾರತ ಕೇವಲ ಕಾವ್ಯವಲ್ಲ ಅದು ಇತಿಹಾಸ ಎಂಬುದನ್ನು ಸಾಭೀತುಪಡಿಸುವುದರ ಜೊತೆಗೆ ಕೃಷ್ಣ ಐತಿಹಾಸಿಕ ವ್ಯಕ್ತಿ ಎಂಬ ಪುಳಕ ನಮಗೆ ಉಂಟಾಗುವಂತೆ ಮಾಡಿದೆ. ಈ ಪುಳಕವನ್ನು ಅನುಭವಿಸುವಾಗಲೇ ಈಗ ನಮ್ಮ ನಡುವೆ ಹಿಮಾಲಯದಂತೆ ಬೆಳೆದ ಕೃಷ್ಣನಿಗೂ ಐತಿಹಾಸಿಕ ಕೃಷ್ಣನಿಗೂ ವ್ಯತ್ಯಾಸ ಇದ್ದಿರಬಹುದು ಎಂಬ ಎಚ್ಚರ ಕೂಡ ನಮಗೆ ಇರಲೇಬೇಕು. ಯಾಕೆಂದರೆ ವ್ಯಕ್ತಿಯೊಬ್ಬ ಕಾಲ  ಕ್ರ‍ಮದಲ್ಲಿ ಸಂಪೂರ್ಣ ದೇವರಾಗಿ ಬೆಳೆದರೆ ಅವನ ಐತಿಹಾಸಿಕ ವ್ಯಕ್ತಿತ್ವ ಸಂಪೂರ್ಣವಾಗಿ ಬದಲಾಗಿರುತ್ತದೆ. ಇತಿಹಾಸ ಎನ್ನುವುದು ವಾಸ್ತವವಾದರೆ ಇತಿಹಾಸ ಪುರಾಣವಾದರೆ ಅದು ಮಾನವಾತೀತವಾದ ಗುಣಧರ್ಮವನ್ನು ಅಳವಡಿಸಿಕೊಂಡು ಬಿಡುತ್ತದೆ. ಹಾಗೆ ಪುರಾಣವಾಗಿ ಬದಲಾದ ಇತಿಹಾಸದಲ್ಲಿ ಬರುವ ವ್ಯಕ್ತಿಗಳು ಅತಿ ಮಾನುಷವಾದ ಶಕ್ತಿಯನ್ನು ಪಡೆದುಕೊಂಡೂ ಬಿಡುತ್ತಾರೆ. ಒಮ್ಮೆ ಹೀಗೆ ಬದಲಾದ ವೈಕ್ತಿಗಳು ಐತಿಹಾಸಿಕ ವ್ಯಕ್ತಿಗಳಾದರೂ ಅವರಿಗೆ ದೈವತ್ವದಿಂದಾಗಿ ದೊರಕಿದ ಅತಿಮಾನುಷ ಶಕ್ತಿ ಅವರನ್ನು ಕಾಲಾತೀತರನಾಗಿ ಮಾಡುಬಿಡುತ್ತದೆ. ಇನ್ನೊಂದು ಮಹತ್ವದ ವಿಷಯವನ್ನು ನಾವು ಮರೆಯುವಂತಿಲ್ಲ. ಇತಿಹಾಸ ಎಲ್ಲ ಕಾಲದಲ್ಲಿ ಸಂತೋಷವನ್ನು ನೀಡುತ್ತದೆ ಎಂದು ಹೇಳಲಾಗುವುದಿಲ್ಲ. ಐತಿಹಾಸಿಕ ವ್ಯಕ್ತಿಗಳು ನಮಗೆ ಇಷ್ಟವಾಗದೇ ಇರಬಹುದು. ಆದರೆ ಅತಿಮಾನುಷ ಶಕ್ತಿಯನ್ನು ಪಡದು ದೈವತ್ವಕ್ಕೆ ಏರಿದ ಐತಿಹಾಸಿಕ ಪಾತ್ರಗಳು ನಮ್ಮ ವಿಶ್ಲೇಷಣೆಯ ಪರಿದಿಯಿಂದ ಹೊರಕ್ಕೆ ಹೋಗಿಬಿಡುತ್ತಾರೆ. ಆದ್ದರಿಂದಲೇ ಪುರಾಣ ನೀಡುವ ಸಂತೋಷವನ್ನು ಇತಿಹಾಸ ನೀಡುವುದಿಲ್ಲ.
ರಾಮಕೃಷ್ಣರು ಹೀಗೆ ಐತಿಹಾಸಿಕ ಪಾತ್ರವಾಗಿದ್ದವರು ಪುರಾಣದ ಪಾತ್ರವಾದವರು. ನಮ್ಮ ವಿಮರ್ಷೆಯ ಪರಿದಿಯಿಂದ ಆಚೆ ಹೋದವರು. ಆದ್ದರಿಂದ ಅವರನ್ನು ಐತಿಹಾಸಿಕ ವ್ಯಕ್ತಿಗಳಾಗಿ ವಿಮರ್ಷಿಸಲು ಪ್ರಾರಂಭಿಸಿದರೆ ಪುರಾಣದ ರಾಮ ಕೃಷ್ಣರು ಎದುರಾಗಿ ಸಮಸ್ಯೆ ಪ್ರಾರಂಭವಾಗುತ್ತದೆ. ಹಾಗೆ ಮಹಾಭಾರತ ಮತ್ತು ರಾಮಾಯಣವನ್ನು ಕಾವ್ಯವನ್ನಾಗಿ ನೋಡಬೇಕೆ ಅಥವಾ ಪುರಾಣವಾಗಿ ನೋಡಬೇಕೇ ಎಂಬುದು. ಪುರಾಣದಲ್ಲಿ ಸಿಗುವ ಪಾತ್ರಗಳೇ ಬೇರೆ, ಪುರಾಣಕ್ಕೆ ಮೂಲವಾದ ಇತಿಹಾಸದ ಪಾತ್ರಗಳೇ ಬೇರೆ. ಇದನ್ನು ಸ್ಪಷ್ಜವಾಗಿ ಅರ್ಥಮಾಡಿಕೊಂಡರೆ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.



Monday, September 2, 2013

ಸೋನಿಯಾ ರೋಗಕ್ಕೆ ವಿದೇಶಿ ಮದ್ದು; ರಾಜಕೀಯಕ್ಕೆ ನವ ಧಾರ್ಮಿಕತೆ ಬೇಕು

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಮತ್ತೆ ಆರೋಗ್ಯ ಕೈ ಕೊಟ್ಟಿದೆ. ಅವರು ತಮ್ಮ ಆರೋಗ್ಯ ತಪಾಸಣೆಗೆ ವಿದೇಶಕ್ಕೆ ಹಾರಿದ್ದಾರೆ, ಅವರಿಗೆ ಆರೋಗ್ಯ ಕೈಕೊಟ್ಟಿದ್ದು ಇದೇ ಮೊದಲಲ್ಲ. ಈ ಮೊದಲು ಆರೋಗ್ಯ ವ್ಯತ್ಯಾಸವಾದಾಗಲೂ ಅವರು ಚಿಕಿತ್ಸೆಗೆ ವಿದೇಶದ ವಿಮಾನ ಹತ್ತಿದ್ದರು. ಆರೋಗ್ಯ ಸರಿಯಾದ ಮೇಲೆ ಭಾರತಕ್ಕೆ ಹಿಂತಿರುಗಿದ್ದರು. ಆದರೆ ಅವರ ಆರೋಗ್ಯಕ್ಕೆ ಏನಾಗಿತ್ತು ? ಅವರಿಗೆ ಆಗಿದ್ದೇನು ಎಂಬುದನ್ನು ಆಗಲೂ ಬಹಿರಂಗಪಡಿಸಿರಲಿಲ್ಲ. ಈಗಲೂ ಅವರಿಗೆ ಆಗಿರುವುದೇನು ಎಂಬ ಬಗ್ಗೆ ಯಾವುದೇ ವಿವರಗಳೂ ಲಭ್ಯವಿಲ್ಲ. ಏನೇ ಇರಲಿ ಅವರ ಆರೋಗ್ಯ ಸುಧಾರಿಸಲಿ, ಅವರು ಆರೋಗ್ಯವಂತರಾಗಿ ದೇಶಕ್ಕೆ ಹಿಂತಿರುಗಲಿ.
ಕಾಂಗ್ರೆಸ್ ಪಕ್ಷಕ್ಕೆ ೧೦೦ ಕ್ಕಿಂತ ಹೆಚ್ಚು  ವಯಸ್ಸಾಗಿದೆ. ಇಂತಹ ಪಕ್ಷದ ಅಧ್ಯಕ್ಷರಿಗೆ ಆರೋಗ್ಯ ಕೆಟ್ಟಿರುವುದು ಆತಂಕದ ವಿಷಯವೇ. ಆದರೆ ಅವರಿಗೆ ಉಂಟಾಗಿರುವ ಆರೋಗ್ಯ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಈ ದೇಶದ ಆರೋಗ್ಯ ವ್ಯವಸ್ಥೆಗೆ ಇಲ್ಲವೆ ? ಇಲ್ಲಿನ ವೈದ್ಯರಿಗೆ ಗುಣಪಡಿಸಲು ಆಗದಂತಹ ಸಮಸ್ಯೆ ಅವರಿಗಾಗಿದೆಯೆ ? ಗೊತ್ತಿಲ್ಲ. ಆದರೆ ಇಲ್ಲಿರುವ ಬಹುಮುಖ್ಯ ಪ್ರಶ್ನೆ ಎಂದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಚಿಕಿತ್ಸೆ ನೀದಲು ಸಾಧ್ಯವಾಗದಂತಹ ಆರೋಗ್ಯ ವ್ಯವಸ್ಥೆ ನಮ್ಮದಾದರೆ ? ಇಲ್ಲಿನ ಸಾಮಾನ್ಯ ಮನುಷ್ಯನ ಗತಿ ಏನು ? ಇದಕ್ಕೆ ಕಾಂಗ್ರೆಸ್ ಪಕ್ಷದ ಹೊಣೆಗಾರಿಕೆ ಉತ್ತರದಾಯಿತ್ವ ಇಲ್ಲವೆ ?
ಈ ದೇಶದ ನೂರಕ್ಕೆ ೯೦ ರಷ್ಟು ಜನರಿಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಶಕ್ತಿ ಇಲ್ಲ. ಅವರು ತಮ್ಮ ಅನಾರೋಗ್ಯಕ್ಕೆ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ದಾದಿಯರ ಸಹಾಯ ಪಡೆಯಬೇಕು, ಇಲ್ಲವೇ ಯಾವುದೋ ನಾಟಿ ವೈದ್ಯರ ಮೊರೆ ಹೋಗಬೇಕು. ಇನ್ನೂ ರೋಗ ಉಲ್ಬಣಗೊಂಡರೆ ಮನೆ ಮಠ ಮಾರಿ ಜಿಲ್ಲಾ ಆಸ್ಪತ್ರೆಗೋ, ಖಾಸಗಿ ಆಸ್ಪತ್ರೆಗೋ ಹೋಗಬೇಕು,. ಇಲ್ಲಿಯೋ ಅವರ ಜೀವ ಸುರಕ್ಷಿತ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಸಾಮಾನ್ಯ ಜನರಿಗೆ ಇಲ್ಲದ ವಿಶೇಷ ಸೌಲಭ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಇದೆ. ಅವರಿಗೆ ಜ್ವರ ಬಂದರೂ ಚಿಕಿತ್ಸೆಗೆ ಅಮೇರಿಕೆಗೆ ಹೋಗಬಹುದು.
ಇಂಥಹ ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಅಧ್ಯಕ್ಷರು ಹಾಗಿದ್ದರೆ ಈ ದೇಶದ ಆರೋಗ್ಯ ವ್ಯವಸ್ಥೆ ಯನ್ನು ನಂಬುವುದಿಲ್ಲ ಎಂದಾದರೆ ಅದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ. ಯಾಕೆಂದರೆ ಈ ದೇಶದಲ್ಲಿ ಏನೇ ಆಗಿರಲಿ, ಅದು ಋಣಾತ್ಮಕವಾಗಿರಲಿ, ಧನಾತ್ಮಕವಾಗಿರಲಿ ಅದರ ಸಂಪೂರ್ಣ ಹೊಣೆ ಕಾಂಗ್ರೆಸ್ ಪಕ್ಷದ್ದೇ. ನೆಹರೂ ಕುಟುಂಬದ್ದೇ. ಯಾಕೆಂದರೆ ಈ ದೇಶವನ್ನು ಬಹುಕಾಲ ಅಳಿದ್ದು, ಆಳುತ್ತಿರುವುದು ಕಾಂಗ್ರೆಸ್ ಪಕ್ಷವೇ. ಇಂದೂ ಸಹ ಆ ಪಕ್ಷ ನೆಹರೂ ಕುಟುಂಬದ ಗುಲಾಮ. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದ ಆತ್ಮ ಮತ್ತು ಜೀವವೇ ನೆಹರೂ ಕುಟುಂಬ   ಈ ಕುಟುಂಬದ ಇಂದಿನ ಯಜಮಾನರಿಗೆ ಈ ದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ನಂಬಿ ಕೆ ಇಲ್ಲ. ಇಲ್ಲಿ ಚಿಕಿತ್ಸೆ ಪಡೆದುಕೊಂಡರೆ ಗುಣವಾಗುತ್ತದೆ ಎಂಬ ನಂಬಿಕೆ ಇಲ್ಲ !
ಇದು ಮನೆಯ ಯಜಮಾನನಿಗೆ ತನ್ನ ಕುಟುಂಬದ ಸಮಸ್ಯರ ಮೇಲೆ ನಂಬಿಕೆ ಇಲ್ಲದ ಸ್ಥಿತಿ.
ಭಾರತದ ವೈದ್ಯಕೀಯ ವ್ಯವಸ್ಥೆಯನ್ನು ಸಾರಾಸಗಟಾಗಿ ತೆಗೆದುಹಾಕುವಂತಿಲ್ಲ. ಇಲ್ಲಿ ಹಣವಿದ್ದ ರೆ ವಿಶ್ವದ ಅತ್ತುಮ ಚಿಕಿತ್ಸೆ ಇಲ್ಲಿ ದೊರೆಯುತ್ತದೆ.  ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಏಷ್ಯಾದ ಮತ್ತು ಆಫ್ರಿಕಾದ ರೋಗಿಗಳು ಭಾರತದತ್ತ ಮುಖಮಾಡುತ್ತಿದ್ದಾರೆ. ಅವರಿಗೆ ಆಮೇರಿಕಾ ಮತ್ತು ಇಂಗ್ಲಂಡಿನಲ್ಲಿ ದೊರಕುವ ಚಿಕಿತ್ಸೆಯೇ ಇಲ್ಲಿ ಕಡಿಮೆ ವೆಚ್ಚದಲ್ಲಿ ದೊರಕುತ್ತಿದೆ. ಭಾರತೀಯರಿಗೆ ಇಲ್ಲಿನ ಹೈಟೆಕ್ ಆಸ್ಪತ್ರೆ ದುಬಾರಿಯನ್ನಿಸಿದರೂ ಅಮೇರಿಕ ಇರೋಪಿಗೆ ಹೋಲಿಸಿದರೆ ಇಲ್ಲಿನ ಚಿಕಿತ್ಸಾ ವೆಚ್ಚ ಕಡಿಮೆಯೇ.
ಇತ್ತೀಚೆಗೆ ಪಾಕಿಸ್ಥಾನದ ರೋಗಿಗಳೂ ಭಾರತಕ್ಕೆ ಬಂದು ನಾರಾಯಣ ಹೃದಯಾಲಯದಂತಹ ವಿಶ್ವ ದರ್ಜೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಉದಾಹರಣೆ ಇದೆ. ಅಂದರೆ ಭಾರತದ ವಿರೋಧವನ್ನು ತಮ್ಮ ಮನಸ್ಸಿನ ಭಾಗವಾಗಿ ಮಾಡಿಕೊಂಡುವರೇ ಹೆಚ್ಚಿರುವ ಪಾಕಿಸ್ಥಾನಿಗಳು ಈ ದೇಶದ ಆರೋಗ್ಯ ವ್ಯವಸ್ಥೆಯನ್ನು, ಇಲ್ಲಿನ ವೈದ್ಯರನ್ನು ನಂಬುತ್ತಾರೆ. ಆದರೆ ನಮ್ಮ ದೇಶದ ಸೋಸೆಗೆ ಆ ನಂಬಿಕೆ ಇಲ್ಲ.
ಸೋನಿಯಾ ಗಾಂಧಿ ಅವರ ಭಾರತ ಪ್ರೇಮವನ್ನು ನಾನು ಪ್ರಶ್ನಿಸುವುದಿಲ್ಲ. ಅವರು ಎಲ್ಲಿಂದಲೂ ಬಂದು ಈ ದೇಶವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ದೇಶವನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ. ಗಂಡ ರಾಜೀವ  ಗಾಂಧಿ ಹತ್ಯೆಯಾದರೂ ಎದೆಗುಂದದೇ ಪಕ್ಷದ ಜವಾಬ್ದಾರಿಯನ್ನು ಹೊತ್ತು ಆ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಹಾಗೆ ತನ್ನ ಮಗ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಪಣತೊಟ್ಟಿದ್ದಾರೆ. ಬೆನ್ನೆಲುಬು ಇಲ್ಲದೇ ನೆಹರೂ ಕುಟುಂಬದ ಗುಲಾಮರೇ ಆಗಿರುವ ಕಾಂಗ್ರೆಸ್ ಹಿರಿಯ ನಾಯಕರೂ ರಾಹುಲ್ ಪಟ್ಟಾಭಿಷೇಕ್ಕೆ ಗರಿ ಗರಿಯಾದ ನೆಹರೂ ಶರ್ಟ್ ತೊಟ್ಟು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆಇಷ್ಟು ವರ್ಷಗಳ ನಂತರವೂ ಸೋನಿಯಾ ಈ ದೇಶದ ಆರೋಗ್ಯ ವ್ಯವಸ್ಥೆಯ್ನ್ನು ನಂಬುತ್ತಿಲ್ಲ. ಅವರ ರೋಗಕ್ಕೆ ವಿದೇಶಿ ಚಿಕಿತ್ಸೆಯೇ ಬೇಕು. ದೇಶದ ಎಲ್ಲ ರೀತಿಯ ಸಮಸ್ಯೆಗಳಿಗೂ ವಿದೇಶಿ ಮಾಧರಿಯೇ ಪರಿಹಾರ ಎಂಬ ನಂಬಿಕೆ
ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಅವರಿಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತದ್ದು ಏನಾಗಿದೆ ಎಂಬುದನ್ನು ಹೇಳಬೇಕಿತ್ತು. ಹಾಗೇ ಬಹಿರಂಗವಾಗಿ ಹೇಳುವುದು ಆ ಪಕ್ಷದ ಕರ್ತವ್ಯವೂ ಆಗಿತ್ತು. ಆದರೆ ಅವರ ಆರೋಗ್ಯದ ಸಮಸ್ಯೆಯನ್ನು ಪಕ್ಷ ಗುಟ್ಟಾಗಿ ಇಟ್ಟಿದೆ. ಒಂದೊಮ್ಮೆ ವಿದೇಶದಲ್ಲಿ ಚಿಕಿತ್ಸೆ ಪಡೆಯದೇ ಬೇರೆ ದಾರಿಯೇ ಇಲ್ಲದಿದ್ದರೆ ಆಗ ಅದನ್ನು ಒಪ್ಪಿಕೊಳ್ಳಬಹುದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಲ್ಲವೂ ಗುಟ್ಟು.
ಸೋನಿಯಾ ಗಾಂಧಿ ಅವರೂ ಸಹ ತಮ್ಮ ಆರೋಗ್ಯಕ್ಕೆ ಈ ದೇಶದಲ್ಲೇ ಚಿಕಿತ್ಸೆ ಪಡೆಯಬಹುದಿತ್ತು. ಈ ದೇಶದ ಸಾಮಾನ್ಯ ನಾಗರಿಕನೊಬ್ಬನಿಗೆ ದೊರಕದ ಸೌಲಭ್ಯ ನನಗೂ ಬೇಡ ಎಂದು ಅವರು ಹೇಳಬಹುದಿತ್ತು. ಈ ದೇಶದ ಸೊಸೆಯಾಗಿ ಬಂದ ನಾನು ಇಲ್ಲಿಯೇ ಬದುಕುತ್ತೇನೆ, ಇಲ್ಲಿಯೇ ಸಾಯುತ್ತೇನೆ ಎಂದು ಹೇಳುವ ಮೂಲಕ ದೇಶದ ಜನರ ಹೃದಯವನ್ನು ಗೆಲ್ಲಬಹುದಿತ್ತು. ಪ್ರಧಾನಿ ಹುದ್ದೆಯಲ್ಲಿ ತಾವು ಕುಳಿತುಕೊಳ್ಳದೇ ಮನಮೋಹನ್ ಸಿಂಗ್ ಅವರನ್ನು ಕೂಡ್ರಿಸಿ ತ್ಯಾಗ ಜೀವಿಯಾದ ಅವರಿಗೆ ಇದೊಂದು ದೊಡ್ಡ ವಿಚಾರವಾಗಿರಲಿಲ್ಲ. ಆದರೆ ಸೋನಿಯಾ ಗಾಂಧಿ ಇಂತಹ ಅವಕಾಶವನ್ನು ಕಳೆದುಕೊಂಡರು.
ಈ ರೀತಿ ಹೇಳಲು ಎರಡರೂ ನೀತಿಯ ಮನಸ್ಥಿತಿ ಬೇಕಾಗುತ್ತದೆ. ಮೊದಲನೇಯದಾಗಿ ನಿಜವಾದ ದೇಶಪ್ರೇಮ ಮತ್ತು ಉತ್ತರದಾಯಿತ್ವ.  ನಾನು ಈ ದೇಶದ ಸಾಮಾನ್ಯ ನಾಗರಿಕಳು. ಕಾಂಗ್ರೆಸ್ ಅಧ್ಯಕ್ಶರಾಗಿದ್ದು ಕಾಕತಾಳೀಯ. ಈ ಹುದ್ದೆಗೆ ಬಂದ ಮೇಲೆ ಹುದ್ದೆಯ ಘನತೆ ಗಾಂಭೀರ್ಯವನ್ನು ಕಾಪಾಡುವುದು ನನ್ನ ಕರ್ತವ್ಯ. ಹೀಗಾಗಿ ದೇಶದ ಸಾಮಾನ್ಯ ನಾಗರಿಕರಿಗೆ ದೊರಕದಿರುವುದು ನನಗೆ ಬೇಡ ಎಂಬ ದೃಢ ನಿರ್ಧಾರದ ಮನಸ್ಸು. ಇಂತಹ ಮನಸ್ಸು ದೇಶ ಮತ್ತು ಸಾಮಾನ್ಯ ಜನರ ಮೇಲಿನ ಪ್ರೀತಿಯಿಂದ ಬರುತ್ತದೆ. ಗಾಂಧೀಜಿಯಂತವರಿಗೆ ಇಂತಹ ಮನಸ್ಸು ದೃಢ ನಿರ್ಧಾರ ಇತ್ತು. ಯಾಕೆಂದರೆ ಅವರ ದೇಶ ಪ್ರೇಮ ಸಾಮಾನ್ಯ ಜನರ ಮೇಲಿನ್ ಪ್ರೀತಿಯಿಂದಲೇ ಬಂದಿದ್ದು.
ಇಂಥಹ ಜನ ಪ್ರಧಾನಿಯಾಗಲೀ ಇನ್ಯಾವುದೇ ಹುದ್ದೆಗೆ ಹೋಗಲಿ ಅದು ತಮ್ಮ ಮತ್ತು ತಮ್ಮ ಕುಟುಂಬದ ಜನ್ಮ ಸಿದ್ಧ ಹಕ್ಕು ಎಂದು ಅಂದುಕೊಳ್ಳುವುದಿಲ್ಲ. ಅವರು ತಾವೊಬ್ಬ ಟ್ರಸ್ಟಿ ಎಂದು ಮಾತ್ರ ಅಂದುಕೊಳ್ಳುತ್ತಾರೆ.
ಸೋನಿಯಾ ಗಾಂಧಿ ಅವರ ಹೆಸರಿನ ಜೊತೆ ಗಾಂಧಿ ಎಂಬ ಸರ್ ನೇಮ್ ಇದ್ದರೂ ಅವರು ಮೋಹನ್ ದಾಸ್ ಕರಮ ಚಂದ್ ಗಾಂಧಿ ಅಲ್ಲ. ಅವರಿಗೆ ಇವರಿಗೆ ಹೋಲಿಕೆ ಮಾಡಲು ಸಾಧ್ಯವೂ ಇಲ್ಲ. ಜೊತೆಗೆ ಮಹಾತ್ಮಾ ಗಾಂಧಿ ಅವರು ಇದ್ದ ಕಾಲದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗೂ ಈಗಿನ ಸ್ಥಿತಿಗೂ ತುಂಬಾ ವ್ಯತ್ಯಾಸ ಇದೆ. ಈಗಿನ ಕಾಂಗ್ರೆಸ್ ಪಕ್ಶಕ್ಕೆ ಹಳೆಯ ಗಾಂಧಿ ಅಲ್ಲ, ಈಗಿನ ಡಿಫರೆಂಟ್ ಗಾಂಧಿಗಳೇ ಬೇಕು ಎಂಬುದು ಸತ್ಯ. ಇವರೆಲ್ಲ ಜಗತೀಕರಣದ ಇಂದಿನ ಸೃಷ್ಟಿಕರ್ತರಾದ ಗಾಂಧಿಗಳು. ಗ್ರಾಮ ಸ್ವರಾಜ್ಯ ಸ್ವದೇಶಿ ಚಳವಳಿಯ ಮಾತನಾಡಿದ ಗಾಂಧಿ ಅಲ್ಲ.
ಇಂಥಹ ನಿರ್ಧಾರ ಕೈಗೊಳ್ಳಲು ಬೇಕಾದ ಇನ್ನೊಂದು ರೀತಿಯ ಮನಸ್ಥಿತಿ ಎಂದರೆ ರಾಜಕೀಯ ಲಾಭವನ್ನೇ ಗಣನೆಗೆ ತೆಗೆದುಕೊಂಡೂ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವುದು. ಸೋನಿಯಾ ಗಾಂಧಿ ಅವರು ಎರಡನೇಯ ಮನಸ್ಥಿಯಂತೆ, ನಾನು ಇಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಘೋಷಿಸಿದ್ದರೆ ದೇಶದ ಜನ ಅವರ ದೇಶ ಪ್ರೇಮಕ್ಕೆ  ಹೌದು ಹೌದು ಎಂದು ತಲೆ ತೂಗುತ್ತಿದ್ದರು. ಇದು ಅವರ ಮಗನನ್ನು ಪ್ರಧಾನಿಯನ್ನಾಗಿ ಮಾಡುವ ಯತ್ನಕ್ಕೆ ಸಹಾಯವನ್ನು ಒದಗಿಸುತ್ತಿತ್ತು. ಆದರೆ ಸೋನಿಯಾ ಹಾಗೆ ಮಾಡಲಿಲ್ಲ. ಅವರು ತಮ್ಮ  ರೋಗಕ್ಕೆ ವಿದೇಶಿ ಮದ್ದು ಪಡೆಯುವ ದೃಡ ನಿರ್ಧಾರ ಮಾಡಿದ್ದರು. ನಮ್ಮೆಲ್ಲರಂತೆ ಅವರಲ್ಲಿಯೂ ಇರಬಹುದಾದ ಬದುಕುವ ಆಸೆ ಮತ್ತು ಜೀವ ಭಯಕ್ಕೆ ವಿದೇಶದ ಪರಿಹಾರವನ್ನೇ ಆಯ್ಕೆ ಮಾಡಿಕೊಂಡರು. ಹೀಗಾಗಿ ಅವರು ಮಹಾನ್ ದೇಶಪ್ರೇಮಿಯೂ ಅಗಲಿಲ್ಲ, ಇತ್ತ ಚಾಣಾಕ್ಷ ರಾಜಕಾರಣಿಯೂ ಆಗಲಿಲ್ಲ. ತಮ್ಮ ಎದುರಿಗೆ ಇದ್ದ ಅದ್ಬುತ ಅವಕಾಶವನ್ನು ಅವರು ಕಳೆದುಕೊಂಡರು.
ಯಾರೇ ಆಗಲಿ ಒಂದು ದೇಶವನ್ನುಆರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಭಾರತ ಎಂದರೇನು ಎಂದು ಕೇಳಿದರೆ ಏನು ಹೇಳುತ್ತೀರಿ ? ರಾಜ್ಯಗಳ ಲೆಕ್ಕವನ್ನು ಹೇಳುತ್ತೀರಾ ? ಎಲ್ಲೆಲ್ಲಿ ಗಡಿ ಇದೆ ಎಂದು ಹೇಳಿತ್ತೀರಾ ? ಹಾಗೆ ಹೇಳಿದರೆ ದೇಶವನ್ನು ಹೇಳಿದಂತಾಯಿತೆ ? ದೇಶ ಎನ್ನುವುದು ಕೇವಲ ಬೌಗೋಲಿಕ ವಿವರಗಳಲ್ಲ. ಹಾಗೆ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂದ ದೇಶವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಜೊತೆಗೆ ಒಂದು ದೇಶಕ್ಕೆ ಒಂದು ಮನಸ್ಸು ಎಂಬುದು ಇರುತ್ತದೆ. ಈ ಮನಸ್ಸು ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ, ನಂಬಿಕೆ, ಧರ್ಮ ಆಚಾರ ಮೊದಲಾದ ಅಂಶಗಳ ಆಧಾರದ ಮೇಲೆ ರೂಪಗೊಂಡಿರುತ್ತದೆ. ಭಾರತೀಯ ಮನಸ್ಸು ಎಂದರೆ ಅಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯ ರಾಮಾನುಜಾಚಾರ್ಯ, ಮಹಾವೀರ ಗೌತಮ ಬುದ್ಧ, ಸೂಪಿ ಸಂತರು, ಬಸವಣ್ಣ ಕಬೀರ ಎಲ್ಲರೂ ಇದ್ದಾರೆ. ಇವರೆಲ್ಲ ದೇಹವನ್ನಲ್ಲ ನಮ್ಮ ಮನಸ್ಸುಗಳನ್ನು ರೂಪಿಸಿದ್ದಾರೆ. ಬುದ್ದಿಗಿಂತ ಹೃದಯವಂತಿಕೆ ಮತ್ತು ಹೃದಯದ ಮೂಲಕವೇ ವಿಚಾರ ಮಾಡುವ ಪರಂಪರೆಯೊಂದನ್ನು ಬೆಳೆಸಿದ್ದಾರೆ. ಭಾರತೀಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದೇ ಆಗಿದೆ.
ಆದರೆ ವಿದೇಶಿ ಮನಸ್ಸುಗಳು ಇಂತಹ ವಾತಾವರಣದಲ್ಲಿ ರೂಪಗೊಂಡಿಲ್ಲ. ಬಹುಮಟ್ಟಿಗೆ ಅದು ವೈಜ್ನಾನಿಕ ಮನಸ್ಥಿತಿ ಅವರದು. ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ

ತಂದು ನಿಲ್ಲಿಸುವುದು ವಿದೇಶಿ ಜಾಯಮಾನ. ಅಲ್ಲಿ ಹೃದಯಕ್ಕೆ ಯಾವ ಕೆಲಸವೂ ಇರುವುದಿಲ್ಲ.
ನಮ್ಮ ಇವತ್ತಿನ ರಾಜಕಾರಣಿಗಳ ಬಹುಮುಖ್ಯ ಸಮಸ್ಯೆ ಎಂದರೆ ಅವರಿಗೆ ಧರ್ಮ ಎನ್ನುವುದು ಕೇವಲ ಮತ ಪಡೆಯುವ ಒಂದು ಆಯುಧ ಮಾತ್ರ. ಕೆಲವರು ಹಿಂದೂ ಧರ್ಮದ ಶ್ರೇಷ್ಥತೆಯ ಬಗ್ಗೆ ಮಾತನಾಡುತ್ತ ಮತ ಪಡೆಯುವವರಾದರೆ, ಇನ್ನೂ ಕೆಲವರು ಜಾತ್ಯತೀತ ತತ್ವದ ಬಗ್ಗೆ ಮಾತನಾಡುತ್ತ ಮತ ಪಡೆಯುವವರು. ಇವರಿಗೆ ಧರ್ಮ ಮತ್ತು ಧಾರ್ಮಿಕತೆಯ ನಡುವಿನ ವ್ಯತ್ಯಾಸವಾಗಲೀ, ವಿಭಿನ್ನವಾದ ಆಧ್ಯಾತ್ಮಿಕತೆ ಅರಿವಾಗಲಿ ಇಲ್ಲ. ರಾಜಕಾರಣಕ್ಕೂ ಧರ್ಮಕ್ಕೂ ಸಂಬಂಧ ಇಲ್ಲದಿದ್ದರೂ ಧಾರ್ಮಿಕತೆ ಇಲ್ಲದ ರಾಜಕಾರಣಕ್ಕೆ ಅಸ್ಥಿತ್ವ ಇಲ್ಲ. ರಾಜಕಾರಣಕ್ಕೆ ಒಂದು ಧಾರ್ಮಿಕತೆ ಬೇಕು. ಅದು ಇಂದಿನ ಆಧುನಿಕ ಬದುಕಿಗೆ ಸಹ್ಯವಾಗುವ, ಆಧುನಿಕ ಮನಸ್ಸುಗಳೂ ಒಪ್ಪಿಕೊಳ್ಳುವ ನವ ಧಾರ್ಮಿಕತೆ. ಇಲ್ಲಿ ವೈಜ್ಜಾನಿಕ ಮನೋಭಾವನೆಯ ಜೊತೆ ಹೃದಯ ಮತ್ತು ಮನಸ್ಸುಗಳು ಒಂದಾಗುವ ಧಾರ್ಮಿಕತೆ. ಇಂತಹ ಧಾರ್ಮಿಕತೆ ದೇಶದ ಇತಿಹಾಸ ಮತ್ತು ಪರಂಪರೆಯನ್ನು ಬಿಟ್ಟು ರೂಪಗೊಳ್ಳುವುದು ಸಾಧ್ಯವಿಲ್ಲ.
ಭಾರತೀಯತೆ ಅಂದರೆ ಅದೇ. ಅಲ್ಲಿ ಕೇವಲ ಬುದ್ದಿಯಲ್ಲ. ಹೃದಯವೂ ಮಾತನಾಡುತ್ತದೆ. ಕೆಲವೊಮ್ಮೆ ಬುದ್ದಿಗಿಂತ ಮನಸ್ಸೇ ಮುಖ್ಯವಾಗುತ್ತದೆ.
ಇದನ್ನು ನಮ್ಮ ರಾಜಕೀಯ ಮತ್ತು ರಾಜಕೀಯ ನಾಯಕರು ಅರಿಯದಿದ್ದರೆ ನಮಗೆ ಉಳಿಗಾಲ ಇಲ್ಲ.

Friday, August 30, 2013

ಯೋಗೀಶ್ ಮಾಸ್ಟರ್ ಎಂಬ ಅರೆ ಚಿಂತಕರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸಿದ ಪ್ರಣವಾನಂದ ಮತ್ತು ಮುತಾಲಿಕ್........

ಢುಂಢಿ ಎಂಬ ವಿವಾದಾತ್ಮಕ ಕಾದಂಬರಿ ಬರೆದ್ ಯೋಗಿಶ್ ಮಾಸ್ಟರ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಹಿಂದೂ ಮಹಾಸಭಾದ ಪ್ರಣವಾನಂದ್ ಸ್ವಾಮೀಜಿ ದೂರು ನೀಡಿದ್ದರು, ಅವರ ದೂರಿನ ಪ್ರಕಾರ ಯೋಗಿಶ್ ಮಾಸ್ಟರ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನ್ನು ಉಂಟು ಮಾಡಿದ್ದಾರೆ.
ಯೋಗೀಶ್ ಮಾಸ್ಟರ್ ಅವರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಅವರು ಬರೆದ ಯಾವುದೇ ಬರೆಹವನ್ನು ನಾನು ಓದಿಲ್ಲ. ಢುಂಢಿ ಕಾದಂಬರಿಯನ್ನು ನಾನು ಓದಿಲ್ಲ. ಪತ್ರಿಕೆಗಳನ್ನು ಈ ಕಾದಂಬರಿಯಲ್ಲಿ ಇರುವ ವಿಚಾರಗಳ ಬಗ್ಗೆ ಕೆಲವು ವಿವರಗಳು ಬಂದಿದ್ದರೂ ಅದರ ಆಧಾರದ ಮೇಲೆ ತೀರ್ಪು ನೀಡುವುದು ಸರಿಯಲ್ಲ.
ಆದರೆ ಯೋಗೀಶ್ ಮಾಸ್ಟರ್ ಅವರಿಗ ಕೇಳಬೇಕಾದ ಕೆಲವು ಪ್ರಶ್ನಗಳಿವೆ; ಈ ಪ್ರಶ್ನೆಗಳಿಗೆ ಅವರ ಯಾವುದೇ ಟೀವಿ ಸಂದರ್ಶನದಲ್ಲಿ, ಚರ್ಚಾ ಕಾರ್ಯಕ್ರಮಗಳಲ್ಲಿ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಯಾರೂ ಅವರನ್ನು ಪ್ರಶ್ನಿಸಿಯೂ ಇಲ್ಲ.
ಅವರು ಬರೆದ ಢುಂಢಿ- ಅರಣ್ಯಕನೊಬ್ಬ ಗಣೇಶನಾದ ಕಥೆ ಕಾದಂಬರಿಯೂ ಅಥವಾ ಸಂಶೋಧನಾ ಗ್ರಂಥವೂ ? ಅದು ಒಂದೊಮ್ಮೆ ಕಾದಂಬರಿಯಾಗಿದ್ದರೆ ನಮ್ಮ ಮುಂದೆ ಬರುವ ಪ್ರಶ್ನೆಗಳು ಬೇರೆ. ಅದು ಸಂಶೋಧನಾ ಗ್ರಂಥವಾಗಿದ್ದರೆ ಎದುರಾಗುವ ಪ್ರಶ್ನೆಗಳು ಬೇರೆ.
ಈ ಪುಸ್ತಕವನ್ನು ಕಾದಂಬರಿ ಎಂದು ಪತ್ರಿಕೆಗಳು ಕರೆದಿವೆ. ಆದರೆ ಯೋಗೀಶ್ ಮಾಸ್ಟರ್ ತಮ್ಮ ಮುನ್ನಡಿಯಲ್ಲಿ ಇದನ್ನು ಸಂಶೋಧನಾ ಗ್ರಂಥ ಎಂದು ಕರೆದಿದ್ದಾರೆ ಎಂದು ನಾನು ಕೇಳಿದ್ದೇನೆ. ಇದು ನಿಜವಾಗಿದ್ದರೆ ಇದು ಕಾದಂಬರಿಯೇ ಅಥವಾ ಸಂಶೋಧನಾ ಗ್ರಂಥವೇ ಎಂಬುದು ಮೊದಲು ತೀರ್ಮಾನವಾಗಬೇಕು. ಇದಾದ ಮೇಲೆ ಪುಸ್ತಕದ ಬಗ್ಗೆ ಚರ್ಚೆ ನಡೆಯಬೇಕು.
ಕಾದಂಬರಿ ಒಂದು ವಿಭಿನ್ನ ಸಾಹಿತ್ಯ ಪ್ರಕಾರ. ಅದನ್ನು ಆಂಗ್ಲ ಭಾಷೆಯಲ್ಲಿ ಫಿಕ್ಷನ್ ಎಂದು ಕರೆಯುವ ಪ್ರಕಾರಕ್ಕೆ ಸೇರಿದ್ದು. ಅಲ್ಲಿ ಇರುವುದೆಲ್ಲ ಸತ್ಯವಲ್ಲ. ಕಾದಂಬರಿಕಾರ ತಾನು ಹೇಳಲು ಹೊರಟಿದ್ದನ್ನು ಪರಿಣಾಮಕಾರಿ ಕಥೆಯ ಮೂಲಕ ಹೇಳುತ್ತಾನೆ. ಆದ್ದರಿಂದ ಕಥೆ ಕಾಲ್ಪನಿಕ. ಯೋಗಿಶ್ ಮಾಸ್ಟರ್ ಕಾದಂಬರಿ ಬರೆದಿದ್ದರೆ ಅದನ್ನು ಒಂದು ಸಾಹಿತ್ಯ ಕೃತಿಯಾಗಿ ನೋಡಬೇಕು, ಸಂತೋಷಪಡಬೇಕು. ಕಾದಂಬರಿ ಏನನ್ನು ಧ್ವನಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪೊಲೀಸ್ ಪ್ರಕರಣ ಹಾಕುವ ಮೂಲಕವಲ್ಲ..
ಇದು ಸಂಶೋಧನಾ ಗ್ರಂಥ ಎಂದು ತಕ್ಷಣ ಬರುವ ಸಮಸ್ಯೆಗಳು ಒಂದೆರಡಲ್ಲ.  ಮೊದನೆಯದಾಗಿ ಇತಿಹಾಸ ಮತ್ತು ಪುರಾಣದ ಮೂಲಭೂತ  ಸಮಸ್ಯೆ. ಇತಿಹಾಸವನ್ನು ಇತಿಹಾಸವನ್ನಾಗಿ ಸ್ವೀಕರಿಸಬೇಕು. ಪುರಾಣವನ್ನು ಪುರಾಣವನ್ನಾಗಿ ಸ್ವೀಕರಿಸಬೇಕು. ಪುರಾಣ ಮತ್ತಿ ಇತಿಹಾಸದ ನಡುವೆ ಸಂಘರ್ಷ ಉಂಟಾದಾಗ ಪುರಾಣವನ್ನು ನಂಬಿಕೆಯೆಂದು ಸ್ವೀಕರಿಸಿ ಅದಕ್ಕೆ ಕೊಡಬೇಕಾದ ಗೌರವವನ್ನು ಸಲ್ಲಿಸಬೇಕು. ಯಾಕೆಂದರೆ ಪುರಾಣಗಳ ಹಿಂದೆ ಬಲವಾದ ನಂಬಿಕೆಯ ಇತಿಹಾಸ ಇರುತ್ತದೆ. ಈ ನಂಬಿಕೆಯ ಇತಿಹಾಸ ಸಂಶೋಧಿತ ಇತಿಹಾಸದ ಜೊತೆ ಯಾವಾಗಲೂ ಸಂಘರ್ಷವನ್ನು ನಡೆಸುತ್ತಲೇ ಇರುತ್ತದೆ. ಸಂಶೋಧಿತ ಇತಿಹಾಸಕ್ಕೆ ಒಬ್ಬ ವ್ಯಕ್ತಿಯ ವಿಚಾರ ಲಹರಿ ಮತ್ತು ಆತ ನಂಬಿರುವ ಪಂಥವೇ ತಳಹದಿಯಾಗಿರುತ್ತದೆ. ಆದರೆ ಪುರಾಣ ಹಾಗಲ್ಲ. ಅದು ಜನರ ನಂಬಿಕೆಯ ನಡುವೆ ಬೆಳೆದ ಸತ್ಯವಾಗಿರುತ್ತದೆ. ಜನರ ನಂಬಿಕೆ ಎಂದೂ ತಾತ್ವಿಕ ಮತ್ತು ತಾರ್ಕಿಕ ಸತ್ಯವನ್ನು ನಂಬುವುದಿಲ್ಲ. ಅದು ಬಹುಮಟ್ಟಿಗೆ ಭಾವನಾತ್ಮಕವಾದುದು.
ಒಬ್ಬ ಸಂಶೋಧಕ ಇದನ್ನು ಅರ್ಥ ಮಾಡಿಕೊಳ್ಖಬೇಕು.
ನಂಬಿಕೆಯ ಮೇಲೆ ಬದುಕುವ ಜನ ತಮ್ಮ ನಂಬಿಕೆಗೆ ಪೂರಕವಾದ ಪುರಾಣದ ಸೃಷ್ಟಿಗೆ ಕಾರಣರಾಗಿರುತ್ತಾರೆ. ಈ ಪುರಾಣ ನಂಬಿಕೆಯ ಆಧಾರದ ಮೇಲೆ ದೇವರನ್ನು ಸೃಷ್ಟಿಸುತ್ತದೆ. ಈ ದೇವರು ಅವ್ಯಕ್ತದಿಂದ ವ್ಯಕ್ತವಾಗುವುದು ಹೀಗೆ. ವ್ಯಕ್ತವಾಗುವುದು ರೂಪದಿಂದ. ಈ ರೂಪವನ್ನು ನಾನು ಪ್ರತಿಮೆ ಅಥವಾ ಮೂರ್ತಿ ಎಂದು ಕರೆಯುತ್ತೇನೆ. ಜನರ ಪುರಾಣಾಧಾರಿತ ನಂಬಿಕೆಯ ಮೇಲೆ ಸೃಷ್ಟಿಯಾದ ಪ್ರತಿಮೆ ಇರುವುದು ಪೂಜೆಗಾಗಿ, ಪೂಜಿಸುವವರಿಗಾಗಿ. ಇದನ್ನು ಓಡೆದು ಹಾಕಲು ಇತಿಹಾಸ ಯತ್ನ ನಡೆಸಿದ ತಕ್ಷಣ ಸಮಸ್ಯೆ ಪ್ರಾರಂಭವಾಗುತ್ತದೆ. ಎಡಪಂಥೀಯ ವಿಚಾರವಾದಿಗಳು ಈಗ ಮಾಡುತ್ತಿರುವ ಕೆಲಸ ಇದೇ. ಅದೂ ನಂಬಿಕೆಯ ಮೂರ್ತಿಯನ್ನು ಭಂಜಿಸುವ ಕೆಲಸ. ಇದಕ್ಕೆ ಅವರು ಇತಿಹಾಸದ ಸತ್ಯದ ಲೇಪವನ್ನು ಹಾಕುತ್ತಿದ್ದಾರೆಹುಮುಖ್ಯ
ಇನ್ನು ಇದು ಸಂಶೋಧನಾ ಗ್ರಂಥವಾಗಿದ್ದರೆ ಇದರ ಒಳಗೆ ಇರುವ ವಿಚಾರಗಳ ಬಗ್ಗೆ ಸಂಶೋಧನೆ ನಡೆಸಬೇಕು, ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಬೇಕು. ಯಾವುದು ಸತ್ಯ ಎಂಬುದನ್ನು ತಿಳಿದುಕೊಳ್ಳಲುನ್ ಯತ್ನ ನಡೆಸಬೇಕು. ಆಗ್ಲೂ ಒಮ್ಮೆಲೆ ಪೋಲೀಸ್ ಪ್ರಕರಣ ದಾಖಲಿಸುವುದಲ್ಲ.
ಆದರೆ ನಾವೆಲ್ಲ ತಪ್ಪುತ್ತಿದ್ದೇವೆ. ನಮಗೆ ಸಹನೆ ಕಡಿಮೆಯಾಗುತ್ತಿದ್ದೆ. ಫ್ಯಾಸಿಸ್ಟ್ ಭಾವನೆ ಹೆಚ್ಚುತ್ತಿದೆ. ನಮ್ಮ ನಂಬಿಕೆಗಳ ವಿರುದ್ಧ ಯಾರೂ ಮಾತನಾಡಿದರೂ ಅವರನ್ನು ಮುಗಿಸುವ ಮಾತು ಹೇಳುವಷ್ಟು ಹಿಂಸಾ ಪ್ರವೃತ್ತಿ ಹೆಚ್ಚುತ್ತಿದೆ. ಈ ವಿಚಾರದಲ್ಲಿ ಪರಂಪರೆಯ ಪರವಾಗಿ ಇರುವವರು ಮತ್ತು ಎಡಪಂಥೀಯ ವಿಚಾರಧಾರೆಯನ್ನು ಹೊಂದಿದವರು,   ಇಬ್ಬರೂ ತಪ್ಪು ಮಾಡುತ್ತಿದ್ದಾರೆ. ಇವರಲ್ಲಿ ಯಾರಿಗೂ ಸತ್ಯ ತಿಳಿದುಕೊಳ್ಳುವುದು ಬೇಕಾಗಿಲ್ಲ.
ಈ ದೇಶದಲ್ಲಿ ಎರಡು ರೀತಿಯ ಸಂಶೋಧಕರು ಮತ್ತು ಇತಿಹಾಸಕಾರರನ್ನು ನೋಡಬಹುದು. ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತರಾದ, ವಿದೇಷಿ ಮಾನದಂಡ ಬಳಸಿ ವಿಮರ್ಷಿಸುವ ಇತಿಹಾಸಕಾರರು ಒಂದೆಡೆಯಾದರೆ ಪಕ್ಕಾ ಬಲಪಂಥೀಯ ಇತಿಹಾಸಕಾರರು ಇನ್ನೊಂದೆಡೆ. ಇವರೆಬ್ಬರು ತಾವು ಹಾಕಿಕೊಂಡ ಬಣ್ಣದ ಕನ್ನಡಕದ ಮೂಲಕವೇ ಇತಿಹಾಸವನ್ನು ನೋಡುವವರು.
ಭಾರತಕ್ಕೆಬ್ರಿಟೀಶರು ಬಂದು ಪ್ರಭುತ್ವವನ್ನು ಸಾಧಿಸಿದ ಮೇಲೆಈ ಸಮಸ್ಯೆ ಪ್ರಾರಂಭವಾಯಿತು. ಬ್ರಿಟೀಷರು ಭಾರತದ ಇತಿಹಾಸವನ್ನು ಆಂಗ್ಲ ಕಣ್ಣುಗಳಿಂದ ನೋಡತೊಡಗಿದರು. ಹೀಗಾಗಿ ಭಾರತೀಯ ಇತಿಹಾಸ ನಮಗೆ ಅಪರಿಚಿತವಾಗುವಂತಾಯಿತು. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಬಲಪಂಥೀಯ ವೈಚಾರಿಕರು ಮತ್ತು ಇತಿಹಾಸಕಾರರು. ಇವರ ಇತಿಹಾಸ ಎಲ್ಲವನ್ನೂ ವೈಭವೀಕರಿಸಿವ, ದೈವತ್ವಕ್ಕೇರಿಸುವ ಇತಿಹಾಸವಾಗಿತ್ತು. ಒಂದೆಡೆ ಭಾರತೀಯತೆಯೂ ಸೇರಿದಂತೆ ಎಲ್ಲವನ್ನೂ ನಿರಾಕರಿಸುವ ವಿಚಾರಧಾರೆ ಮತ್ತು ಇತಿಹಾಸ. ಮತ್ತೊಂದೆಡೆ  ಎಲ್ಲವನ್ನೂ ಒಪ್ಪಿಕೊಂಡು ಚಿನ್ನದ ಬಟ್ಟಲಿನಲ್ಲಿ ಮುಂದಿಡುವ ವಿಚಾರಧಾರೆ ಮತ್ತು ಇತಿಹಾಸ.
ಯೋಗೀಷ್ ಮಾಸ್ಟರ್ ಮೊದಲನೆಯ ಗುಂಪಿಗೆ ಸೇರಿದ ವಿಚಾರಧಾರೆಯನ್ನು ಒಪ್ಪಿಕೊಂಡವರು ಎಂದು ಅನ್ನಿಸುತ್ತದೆ. ಅವರು ತಮ್ಮ ಪುಸ್ತಕಕ್ಕೆ ನೀಡಿದ ಬಹುತೇಕ ಆಕರ ಗ್ರಂಥಗಳು ನಾನು ಈ ಮೊದಲೇ ಹೇಳಿದ ಎಡಪಂಥೀಯ ವೈಚಾರಿಕರು ಮತ್ತು ಇತಿಹಾಸಜ್ನರು ಬರೆದ ಆಕರ ಗ್ರಂಥ ಗಳು ಎಂಬುದನ್ನು ಗಮನಿಸಿದ್ದೇನೆ. ಈ ಮೂಲಕ ಅವರು ತಮ್ಮ ನಿಲುಮೆಯನ್ನು ಸ್ಪಷ್ಟಪಡಿಸಿದ್ದಾರೆ.ತಾವು ಎಡಪಂಥೀಯರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರದು ಎಡಪಂಥೀಯ ವಿಚಾರಧಾರೆ, ಆದರೆ ಅವರು ಈಗ ನಾವು ನಂಬಿರುವ ನಮ್ಮೆಲ್ಲರ ಮನೆ ಮನಸ್ಸುಗಳಲ್ಲಿ ಸ್ಥಾಪಿತನಾದ ಗಣೇಶನ ಬಗ್ಗೆ ಮಾತನಾಡಿಲ್ಲ. ಅವರು ಹೇಳಿದ್ದು ಗಣೇಶ ಹೀಗಿದ್ದ ಎಂದು.ಹೀಗಾಗಿ ಯಾರೂ ತಲೆ ಕೆಡಿಸಿಕೊಳ್ಲಬೇಕಿಲ್ಲ. ನಮಗೆ ಈಗ ಗಣೇಶ ಏನಾಗಿದ್ದಾನೆ ಎಂಬುದು ಮುಖ್ಯ. ನಾವೆಲ್ಲ ನಾವು ಕಂಡುಕೊಂಡಿರುವ ಗಣೇಶನನ್ನು ಪೂಜೆ ಮಾಡೋಣ.
ಇದೆಲ್ಲ ಪಂಥಗಳಿಗೆ ಜೋತು ಬಿದ್ದವರ ಸಮಸ್ಯೆ. ಪಂಥಗಳಿಗೆ ಜೋತು ಬಿದ್ದವರು ಅದನ್ನು ಬಿಟ್ಟು ಯೋಚನೆ ಮಾಡುವುದಿಲ್ಲ.
ಗಣೇಶನ ಇತಿಹಾಸದ ಬಗ್ಗ್ರೆ ವೈಚಾರಿಕರು ಎಡಪಂಥೀಯರು ಆಡುವ ಮಾತುಗಳನ್ನು ವಿರೋಧಿಸುವವರು ನಿಜವಾದ ಧಾರ್ಮಿಕರಾಗಿದ್ದರೆ ಅವರ ಜೊತೆ ಮಾತನಾಡುವುದಕ್ಕೆ ಚರ್ಚಿಸುವುದಕ್ಕೆ ಸಿದ್ಧರಿರಬೇಕು. ಈ ದೇಶದಲ್ಲಿ ಧರ್ಮ ಸಂಸ್ಥಾಪನೆ ಮಾಡಿದ ಶಂಕಾರಾಚಾರ್ಯರಂಥವರೂ ಚರ್ಚೆಗೆ ಸದಾ ತೆರೆದುಕೊಂಡಿದ್ದರು. ಇಂತಹ ಮನಸ್ಥಿಯಿಂದಾಗಿಯೇ ಧಾರ್ಮಿಕರು ಇರುವಾಗಲೇ ಚಾರ್ವಾಕರಿಗೂ ಇಲ್ಲಿ ಅವಕಾಶವಿತ್ತು. ಚಾರ್ವಾಕರನ್ನು ಯಾವ ಧಾರ್ಮಿಕರೂ ಜೈಲಿಗೆ ಕಳುಹಿಸಲಿಲ್ಲ. ಅವರ ಕೊಲೆ ಮಾಡಲಿಲ್ಲ. ಹಾಗೆ ಈ ನೆಲದಲ್ಲಿ ಹಿಂದೂ ಧರ್ಮದ ಜೊತೆಗೆ ಜೈನ ಮತ್ತು ಬೌದ್ಧ ಧರ್ಮಗಳು ಹುಟ್ಟಿ ಬೆಳಯಲು ಕಾರಣವಾಗಿದ್ದು ಇಂತಹ ಮುಕ್ತ ಮನಸ್ಥಿತಿಯಿಂದಲೇ. ಆದರೆ ಇಂದು ಹಿಂದೂ ಧರ್ಮವನ್ನು ಉಳಿಸುತ್ತಿದ್ದೇವೆ ಎಂದು ಮಾತನಾಡುವವರು ಚರ್ಚೆಗೆ ಮುಂದೆ ಬರುತ್ತಿಲ್ಲ. ಕಾಲು ಕೆದರಿ ಜಗಳ ಮಾಡಲು ಮುಂದೆ ಬರುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ಮುಸ್ಲಿಂ ರ ಬಗ್ಗೆ ಮಾತನಾಡಿ ಎಂದು ಸವಾಲು ಹಾಕುತ್ತಾರೆ. ಆ ಮೂಲಕ ಹಿಂದೂ ಧರ್ಮವನ್ನು ಇನ್ನೊಂದು ಧರ್ಮಕ್ಕೆ ಸಮಾನ ಎಂಬಂತೆ ಪ್ರತಿಬಿಂಬಿಸಿ ತಪ್ಪು ಮಾಡುತ್ತಿದ್ದಾರೆ.
ಯೋಗೀಶ್ ಮಾಸ್ಟರ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪ್ರಣವಾನಂದ ಸ್ವಾಮೀಜಿ ಎನ್ನುವವರು ಟೀವಿ ಚರ್ಚೆಯಲ್ಲಿ ಆಡಿದ ಮಾತುಗಳು ಯಾರಿಗೂ ಶೋಭೆ ತರುವಂತೆ ಇರಲಿಲ್ಲ. ನಾನು ಈ ಕಾದಂಬರಿಯನ್ನು ಓದುವುದಿಲ್ಲ. ಇವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದರು. ಪುಸ್ತಕವನ್ನು ಓದದೇ ಅದರಲ್ಲಿ ಇರುವ ವಿಚಾರವನ್ನು ತಿಳಿದುಕೊಳ್ಳದೇ ಒಪ್ಪುವುದಾಗಲೀ ವಿರೋಧಿಸುವುದಾಗಲಿ ಸರಿಯಲ್ಲ ಎಂಬ ಸಾಮಾನ್ಯ ಜ್ನಾನ ಕೂಡ ಅವರಿಗೆ ಇದ್ದಂತಿರಲಿಲ್ಲ. ಹಾಗೆ ಇನ್ನೊಬ್ಬ ಜ್ಯೋತಿಷಿ ಟಿವಿ ಸ್ಟೂಡಿಯೋದಲ್ಲಿ ಪುಸ್ತಕವನ್ನು ಹರಿದುಹಾಕಿ ವೀರಾವೇಷದ ಮಾತುಗಳನ್ನು ಆಡಿದರು.
ಯಾವುದೋ ಒಂದು ಪುಸ್ತಕದ ಮೂಲಕ ಹಿಂದೂ ಧರ್ಮ ನಶಿಸುವಂತಿದ್ದರೆ ಅದು ೫ ೦೦೦ ವರ್ಷಗಳಿಂದ ಇಲ್ಲಿ ಇರುತ್ತಿರಲಿಲ್ಲ. ಇಲ್ಲಿ ನಡೆಯುತ್ತಿರುವ ಬೇರೆ ಧರ್ಮಗಳ ಧಾಳಿ, ಮತಾಂತರಗಳ ಮೂಲಕ ಎಂದೋ ಮರೆಯಾಗಬೇಕಾಗಿತ್ತು. ಆದರೆ ಹಿಂದೂ ಧರ್ಮ ಕೇವಲ ಆಚರಣೆಯಾಗದೇ ಒಂದು ತಾತ್ವಿಕತೆ ಆದ್ದರಿಂದ ಅದು ಉಳಿದುಕೊಂಡಿದೆ. ಅದು ನಮಗೆ ಪರಮತ ಸಹಿಷ್ಣತೆಯನ್ನು ಬೇರೆಯವರ ವಿಚಾರವನ್ನು ಒಪ್ಪಿಕೊಳ್ಳದಿದ್ದರೂ ಅದನ್ನು ಗೌರವಿಸಬೇಕು ಎಂಬ ಸಜ್ಜನಿಕೆಯನ್ನು ನಮಗೆ ಕಲಿಸಿಕೊಟ್ಟಿದೆ.
ವೇದ ಕಾಲದಿಂದಲೂ ಈ ದೇಶದಲ್ಲಿ ಚಾರ್ವಾಕರಿದ್ದರು. ಅವರ ಜೊತೆ ಮುಖಾಮುಖಿಯಾಗಿಯೇ ಈ ಧರ್ಮದಲ್ಲಿ ಹಲವು ರೀತಿಯ ರೂಪಾಂತರಗಳು ಸಂಭವಿಸಿದ್ದು. ಪ್ರಕೃತಿ ಪೂಜೆಯಿಂದ ಮನುಷ್ಯರಂತೆ ದೈಹಿವಾಗಿ ಕಾಣುವ ದೇವರುಗಳವರೆಗೆ ದೈವ ಪೂಜೆ ಬೆಳೆದುಬಂದಿದ್ದು. ಇದೇ ಹಿಂದೂ ಧರ್ಮ ವಿಭಿನ್ನ ಧರ್ಮವಾಗಿ ಉಳಿದುಕೊಂಡಿದ್ದು.
ಆದರೆ ಪ್ರಣವಾನಂದ ಅಂಥವರಿಗೆ ಇದೆಲ್ಲ ಅರ್ಥವಾಗುವುದಿಲ್ಲ. ಧರ್ಮ ಮತ್ತು ಧಾರ್ಮಿಕತೆಯ ನಡುವೆ  ಇರುವ ವ್ಯತ್ಯಾಸ ತಿಳಿಯುವುದಿಲ್ಲ. ಧಾರ್ಮಿಕತೆ ಇರದವರ ಕೈಯಲ್ಲಿ ಯಾವಾಗಲೂ ಧರ್ಮ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಧರ್ಮ ಆಂತರಿಕವಾಗಿ ಘಟಿಸುವಂತಹುದು. ಅದು ಬಹಿರಂಗವಾಗಿ ಪ್ರದರ್ಶಿಸುವುದಲ್ಲ.    ಜೊತೆಗೆ ವಿಚಾರಗಳು ಮತ್ತು ವ್ಯಕ್ತಿಗಳ ನಡುವಿನ ವ್ಯತ್ಯಾಸ  ಅರ್ಥ ಆಗದಿದ್ದರೆ ಯಾರೊಬ್ಬರು ಧಾರ್ಮಿಕನಾಗಲು ಸಾದ್ಚ್ಯವಿಲ್ಲ. ಆದರೆ ವಿಚಾರಗಳನ್ನು ವಿರೋಧಿಸುವವರು  ದುರ್ಬಲರಾಗಿದ್ದರೆ ಆಗ ವ್ಯಕ್ತಿಗಳ ಮೇಲೆ ಪ್ರಹಾರ ಮಾಡಲು ಪ್ರಾರಂಭಿಸುತ್ತಾರೆ.
ನನಗೆ  ಯೋಗೀಶ್ ಮಾಸ್ಟರ್ ಅಂತಹ ಮಹಾನ್ ಸಂಶೋಧಕ ಎಂದು ಅನ್ನಿಸುತ್ತಿಲ್ಲ.ಅವರು ವಿಕ್ಷಿಪ್ತರೂ ಆಗಿರಬಹುದು, ವಿಕೃತಿಯೂ ಅವರಲ್ಲಿ ಇರಬಹುದು,  ಆದರೆ ಆತ ಮೆಂಟಲ್ ಎಂಬ ಮಾತುಗಳು ಮಾಧ್ಯಮದಲ್ಲಿ ಕೇಳಿ ಬರತೊಡಗಿದೆ, ಹಾಗೆ ಇನ್ನೂ ಕೆಲವರು ಅವರನ್ನು ಹಿರೋ ಮಾಡುತ್ತಿದ್ದಾರೆ. ಯೋಗೀಶ್ ಮಾಸ್ಟರ್ ಎನೇ ಆಗಿರಲಿ, ಅವರು ವ್ಯಕ್ತಪಡಿಸಿದ ವಿಚಾರಗಳ ಬಗ್ಗೆ  ಚರ್ಚೆ ನಡೆದು ಒಂದು ತಾರ್ಕಿಕ ಅಂತ್ಯಕ್ಕೆ ಬರುವದು ಅಗತ್ಯ. ಆದರೆ ಇಲ್ಲಿ ವಿಚಾರಕ್ಕಿಂತ ವ್ಯಕ್ತಿಯನ್ನು ನಾವು ಮುಖ್ಯರನ್ನಾಗಿ ಮಾಡುತ್ತಿದ್ದೇವೆ., ಇದು ವಿಚಾರವನ್ನು ಎದುರಿಸಲಾಗದೇ ವ್ಯಕ್ತಿಗಳ ಮೇಲೆ ಆಕ್ರಮಣ ನಡೆಸುವ ಅಸಹಾಯಕ ಸ್ಥಿತಿ. ಇಂತಹ ಅಸಾಯಕ ಸ್ಥಿತಿಗೆ ನಿಜವಾದ ಧಾರ್ಮಿಕರು ಬರಲು ಸಾಧ್ಯವಿಲ್ಲ. ಆದರೆ ಹಿಂದೂ ಧರ್ಮದ ಪ್ರತಿಪಾದಕರು ಇಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಅವರು ನಿಜವಾದ ಧಾರ್ಮಿಕರಲ್ಲ. ಅವರು ನಿಜವಾದ ಹಿಂದೂಗಳಲ್ಲ. ಜೊತೆಗೆ ಇವರಿಗೆ ನಿಜವಾಗಿ ಧರ್ಮ ಕಾಳಜಿ ಇದೆಯೆ ಎಂಬ ಬಗ್ಗೆ ಕೂಡ ಅನುಮಾನ ಮೂಡುತ್ತದೆ.
ಈಗ ಯೋಗಿಶ್ ಅವರು ಜೈಲಿಗೆ ಹೋಗುವ ಮೂಲಕ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಾಯುವುದಿಲ್ಲ. ಯಾಕೆಂದರೆ ವ್ಯಕ್ತಿಗಳಿಗೆ ಸಾವಿದೆ. ವಿಚಾರಕ್ಕೆ ಸಾವಿಲ್ಲ. ವ್ಯಕ್ತಿ ಜೈಲಿಗೆ ಹೋದರೆ ಅವರ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಜೈಲಿಗೆ ಹಾಕುವುದು ಸಾಧ್ಯವಿಲ್ಲ. ಧಾರ್ಮಿಕತೆ ಯಾರಲ್ಲಿ ಇದೆಯೋ ಅವರು ಮನಸ್ಸನ್ನು ಮುಚ್ಚಿಕೊಂಡಿರುವುದಿಲ್ಲ. ಮನಸ್ಸನ್ನು ತೆರೆದಿಟ್ಟುಕೊಂಡರೆ ಮಾತ್ರ ದೇವರ ದರ್ಶನವಾಗುತ್ತದೆ. ದರ್ಶನ ಎಂದು ಹೇಳುವುದಕ್ಕಿಂತ ಅನುಭವವಾಗುತ್ತದೆ ಎಂದು ಹೇಳುವುದು ಹೆಚ್ಚು ಸೂಕ್ತ.
ಪ್ರ ಣವಾನಂದ ಸ್ವಾಮೀಜಿ, ಪ್ರಮೋದ್ ಮುತಾಲಿಕ್ ಹಾಗೂ ಇತರ ಹಿಂದೂ ಸಂಘಟನೆಗಳ ನಾಯಕರು ಮೊದಲು ಪುಸ್ತಕವನ್ನು ಓದಬೇಕು. ಅದನ್ನು ಓದಿದ ಮೇಲೆ ಯಾವ ಯಾವ ಅಂಶಗಳ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯಗಳಿವೆಯೋ ಅದರ ಬಗ್ಗೆ ಲೇಖಕರ ಜೊತೆ ಮುಕ್ತ ಚರ್ದೆ ನಡೆಸಬೇಕು. ಅದನ್ನು ಬಿಟ್ಟು ಜೈಲು ಹೊಡೆದಾಟ ಪ್ರತಿಭಟನೆಯ ಬಗ್ಗೆ ಮಾತನಾಡಿದರೆ ಅದರಿಂದ ಯಾವ ಸಾಧನೆಯನ್ನು ಮಾಡಿದಂತಾಗುವುದಿಲ್ಲ. ಹಿಂದೂ ಧರ್ಮಕ್ಕೂ ಕೊಡುಗೆ ನೀಡುವುದಕ್ಕಿಂತ ಕೆಡುಕು ಮಾಡಿದಂತಾಗುತ್ತದೆ ಎಂಬುದನ್ನು ಇವರೆಲ್ಲ ಅರ್ಥ ಮಾಡಿಕೊಳ್ಳಬೇಕು.
ಯೋಗೀಶ್ ಮಾಸ್ಟರ್ ಕೂಡ ತಾವು ಬರೆದ ವಿಚಾರಗಳಿಗೆ ತಾವೇ ಜವಾಬ್ದಾರರು. ತಾವು ಯಾವ ಯಾವ ಗ್ರ್ಸಂಥಗಳ ಆಧಾರದ ಮೇಲೆ ಈ ಅಂಶಗಳನ್ನು ಪ್ರತಿಪಾದಿಸಿದರೋ ಅದನ್ನು ಸಾಬೀತುಪಡಿಸುವುದು ಅವರ ಹೊಣೆಗಾರಿಕೆ. 

Wednesday, August 28, 2013

ಕೃಷ್ಣಾಷ್ಟಮಿಯಂದು ರಾಮ ಕೃಷ್ಣರನ್ನು ನೆನೆದು ..........




ಇಂದು ಕೃಷ್ಣ ಜನ್ಮಾಷ್ಟಮಿ. ವಿಶ್ವಾದ್ಯಂತ ಇರುವ ಹಿಂದೂಗಳು ಇಂದು ಕೃಷ್ಣನ ಪೂಜೆ ಮಾಡುತ್ತಿದ್ದಾರೆ. ಭಜನೆ ಸಂಕೀರ್ತನೆಗಳು ನಡೆಯುತ್ತಿವೆ. ಕೃಷ್ಣನ ಹೆಸರಿನಲ್ಲಿ ಬಗೆ ಬಗೆಯ ತಿಂಡಿಗಳನ್ನು ಮಾಡಿ ಸಂತೋಷಪಡುತ್ತಿದ್ದಾರೆ. ಇಂತಹ ಆಚರಣೆಗಳು ಸಾಮುದಾಯಿಕ ಭಾವನೆಯನ್ನು ನೀಡುವುದರಿಂದ ಇವೆಲ್ಲ ನಮಗೆ ಬೇಕು. ಆದರೆ ಕೃಷ್ಣ ದೇವರಾಗಿ ನಮ್ಮೆಲ್ಲರ ಪೂಜೆಗೆ ಪಾತ್ರನಾಗಿರುವುದರಿಂದ ನಮಗೆ ಬೇರೆ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.
ಇದು ದೇವರಾಗುವ ಅಥª ದೇವರನ್ನಾಗಿ ಮಾಡುವುದರಿಂದ ಉಂಟಾಗುವ ಸಮಸ್ಯೆ. ನಾವು ದೇವರನ್ನು ಪೂಜೆ ಮಾಡಲು ಪ್ರಾರಂಭ ಮಾಡಿದ ತಕ್ಷಣ ಅವನನ್ನು ಅರ್ಥ ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇವೆ. ಆತನನ್ನು ಗುಡಿ ಗೋಪುರಗಳಲ್ಲಿ ಬಂಧಿಸಿಟ್ಟುಬಿಡುತ್ತೇವೆ. ಮಂಗಳಾರತಿ ಮಾಡಿ ಕೃತಾರ್ಥರಾಗಿಬಿಡುತ್ತೇವೆ. ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು.
ಭಾರತೀಯ ಪರಂಪರೆಯಲ್ಲಿ ಮತ್ತು ಪುರಾಣ ಇಲಿಹಾಸಗಳಲ್ಲಿ ಬರುವ ಎರಡು ಅದ್ಭುತ ಪಾತ್ರಗಳೆಂದರೆ ರಾಮ ಮತ್ತು ಕೃಷ್ಣ. ರಾಮನ ಬದುಕು ಮತ್ತು ನಂಬಿಕೆ ತುಂಬಾ ಸರಳವಾದುದು. ಆದರೆ ಅವನಂತೆ ಬದುಕುವುದು ಕಷ್ಟ. ಕೃಷ್ಣ ವ್ಯಕ್ತಿತ್ವ ತುಂಬಾ ಸಂಕೀರ್ಣವಾದುದು. ಹೀಗಾಗಿ ಕೃಷ್ಣನಾಗುವುದು ಸಾಧ್ಯವೇ  ಇಲ್ಲ. ರಾಮಕೃಷ್ಣನಂತವರು ವಿಶ್ವದ ಬೇರೆ ಯಾವುದೇ ದೇಶದ ಪುರಾಣ ಮತ್ತು ಇತಿಹಾಸದಲಿ ಕಾಣ ಸಿಗುವುದಿಲ್ಲ. ಇತಿಹಾಸ ಎಂಬ ಶಬ್ದವನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ಬಹುತೇಕ ಪುರಾಣಗಳ ಮೂಲಧ್ರವ್ಯ ಇತಿಹಾಸವೇ. ಐತಿಹಾಸಿಕ ಪುರುಷರು ಕಾಲಕ್ರಮೇಣ ಪುರಾಣಕ್ಕೆ ಬೇಕಾದ ಬುನಾದಿಯನ್ನು ಒದಗಿಸುತ್ತಾರೆ. ಐತಿಹಾಸಿಕ ಪುರುಷರ ಅಸ್ತಿ ಪಂಜರಕ್ಕೆ ಪುರಾಣದ ಮಾಂಸ ಖಂಡಗಳು ತುಂಬಿಕೊಳ್ಳುತ್ತವೆ. ಇತಿಹಾಸದಲ್ಲಿ ಕಪ್ಪು ಬಿಳುಪು ಮಾತ್ರ ಇದ್ದರೆ ಪುರಾಣ ಬಣ್ಣಗಳನ್ನು ಒಳಗೊಂಡಿರುತ್ತದೆ
ರಾಮ ಮತ್ತು ಕೃಷ್ಣ ಇಬ್ಬರೂ ಐತಿಹಾಸಿಕ ಪುರುಷರು ಎಂಬ ಬಗ್ಗೆ ಯಾವ ಅನುಮಾನವೂ ಬೇಡ. ಅವರಿಬ್ಬರೂ ಈ ದೇಶದ ಮಣ್ಣಿನಲ್ಲಿ ಓಡಾಡಿದವರು. ತಮ್ಮ ವ್ಯಕ್ತಿತ್ವದ ಮೂಲಕ ಐದು ಸಾವಿರ ವರ್ಷಗಳ ನಂತರವೂ ಜೀವಂತವಾU ಇರುವವರು. ಆದರೆ ಇವರ ಐತಿಹಾಸಿಕ ವ್ಯಕ್ತಿತ್ಬಕ್ಕೂ ಪುರಾಣದ ರಂಜಕತೆ ಮತ್ತು ದೈವತ್ವಕ್ಕೂ ತುಂಬಾ ವ್ಯತ್ಯಾಸವಿದೆ. ಆದರೆ ಅವರು ಈಗ ನಮಗೆ ನೆನಪಿನಲ್ಲಿ ಉಳಿದಿರುವುದು ಪುರಾಣದ ಮಹಾ ಪುರುಷರಾಗಿ. ಕೇವಲ ಐತಿಹಾಸಿಕ ವ್ಯಕ್ತಿಗಳಾಗಿ ಅಲ್ಲ. ಕೇವಲ ಐತಿಹಾಸಿಕ ವ್ಯಕ್ತಿಗಳಾಗಿ ಮಾತ್ರ ಅವರು ಉಳಿದಿದ್ದರೆ ಇನ್ನೊಬ್ಬ ರಾಜಕುವರ ನಂತೆಯೂ ಮಹಾರಾಜಂತೆಯೂ ಪಠ್ಯ ಪುಸ್ತಕದ ಭಾಗವಾಗಿ ಮಾತ್ರ ಅವರು ಉಳಿದು ಬಿಡುತ್ತಿದ್ದರು.
ನಾವು ಕೃಷ್ಣನನ್ನು ಪೂಜೆ ಮಾಡಿ ಸುಮ್ಮನಾಗಿ ಬಿಡುವುದಿದ್ದರೆ ನಮಗೆ ಪುರಾಣ ಮಾತ್ರ ಸಾಕು, ಆದರೆ ಕೇವಲ ಪೂಜೆ ಮಾಡಿ ಸುಮ್ಮನಾಗಿ ಬಿಟ್ಟರೆ ಈ ಮಹಾಪುರುಷರ ಸ್ಪರ್ಷ ನಮಗಾಗುವುದಿಲ್ಲ. ನಾವು ಇವರನ್ನು ನಮ್ಮೊಳಗೆ ಅಹ್ವಾನಿಸಿಕೊಳ್ಳುವುದಿದ್ದರೆ ನಾವು ಅವರನ್ನು ಅರ್ಥ ಮಾಡಿಕೊಳ್ಳಬೇಕು. ಹೀಗೆ ಅರ್ಥ ಮಾಡಿಕೊಳ್ಳುವುದಕ್ಕೆ ಪೂಜೆ ಮಾತ್ರ ಸಾಲದು. ಪುರಾಣ ಮತ್ತು ಇತಿಹಾಸದ ಮೂಲಕ ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.
ರಾಮ ಕೃಷ್ಣರನ್ನು ಪೂಜಿಸುವ ಬಹುತೇಕರು ಅವರನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸುವುದೇ ಇಲ್ಲ. ರಾಮ ಕೃಷ್ಣರ ಕಥೆಯನ್ನು ಕೇಳಿ ಸುಮ್ಮನಾಗಿ ಬಿಡುತ್ತಾರೆ. ಆದರೆ ನಾವು ರಾಮ ಕೃಷ್ಣರನ್ನು ಅರ್ಥ ಮಾಡಿಕೊಂಡು ನಾವೇ ಅವರಾಗಲು ಯತ್ನ ನಡೆಸುವುದೇ ಅತ್ಯುತ್ತಮ ಅಧ್ಯಾತ್ಮಿಕತೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಅವರಾಗುವುದು ಬೇಕಾಗಿಲ್ಲ. ಯಾಕೆಂದರೆ ಪೂಜೆ ಮಾಡುವುದು ತುಂಬಾ ಸುಲಭ. ಅವರಂತಾಗುವುದು ಕಷ್ಟ. ಕಷ್ಟ ಪಡುವುದು ಯಾರಿಗೂ ಬೇಕಾಗಿಲ್ಲ.
ರಾಮ ಪ್ರತಿಪಾದಿಸುವ ಜೀವನ ಮೌಲ್ಯಗಳನ್ನು ಅಳವಡಿಸುವುದಕ್ಕಿಂತ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದು ಅದಕ್ಕೆ ಇಟ್ಟಂಗಿಗಳನ್ನು ಹೊರುವುದು ಹೆಚ್ಚು ಸುಲಭ. ಅದು ಹಲವು ರೀತಿಯ ಲಾಭವನ್ನು ಕೊಡುತ್ತದೆ.  ರಾಮನಂತೆ ಬದುಕಿದರೆ ಕಾಡಿಗೆ  ಹೋಗಬೇಕಾಬಹುದು. ಒಂದೇ ಹೆಂಡತಿಯ ಜೊತೆ ಜೀವನ ಪೂರ್ತಿ ಬದುಕಬೇಕಾಗಬಹುದು. ಹಾಗೆ ಪಿತ್ರವಾಕ್ಯ ಪರಿಪಾಲನೆ ಮಾಡಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗಬಹುದು, ಹೀಗೆ ಯೋಚನೆ ಮಾಡುವ ಭಕ್ತರು ಆಂತರಿಕವಾಗಿ ರಾಮ ಪ್ರತಿಪಾದಿಸಿದ ಮೌಲ್ಯಗಳು ಇವತ್ತು ಪ್ರಸ್ತುತವಲ್ಲ ಎಂದುಕೊಂಡಿರುತ್ತಾರೆ. ಹೀಗಾಗಿ ರಾಮ ನಾಮದ ಜಪ ಮಾಡಿ ಕೈತೊಳೆದುಕೊಂಡು ಬಿಡುತ್ತಾರೆ. ಆದರೆ ರಾಮ ಇಂದಿಗೂ ಪ್ರಸ್ತುತ. ಆತ ನಮಗೆಲ್ಲ ಬೇಕು.
ರಾಮ ಮತ್ತು ಕೃಷ್ಣರನ್ನು ಹೋಲಿಸಿದಾಗ ಇವರಿಬ್ಬರ ವ್ಯಕ್ತಿತ್ವದಲ್ಲಿ ಇರುವ ಅಗಾಧ ಪ್ರಮಾಣದ ವ್ಯತ್ಯಾಸ ಗೋಚರಿಸುತ್ತದೆ. ರಾಮ ಗಂಭೀರ ವ್ಯಕ್ತಿತ್ವದವ. ಆತ ಎಂದಾದರೂ ನಕ್ಕಿರಬಹುದೇ ಎಂಬ ಪ್ರಶ್ನೆಗೆ ಉತ್ತರ ಸಿಗದು. ಆತ ಮೌಲ್ಯಗಳಿಗಾಗಿ ಬದುಕಿದವನು. ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರದಲ್ಲಿ ಅವನಿಗೆ ಸ್ಪಷ್ಟತೆ ಇತ್ತು. ಆತನಿಗೆ ಸ್ತ್ರಿಯರ ಬಗ್ಗೆ ಇದ್ದುದು ಮಾತ್ರ ಭಾವ ಮಾತ್ರ. ಪ್ರೇಮ ಎನ್ನುವುದು ಅವನಿಗೆ ಅಪರಿಚಿತ. ರಾಜ್ಯಾಡಳಿತದಲ್ಲೂ ಆತ ಪ್ರಜಾಪಾಲಕ. ತಾಯಿಗಾಗಿ ರಾಜ್ಯ ತ್ಯಾಗ ಮಾಡಿz. ಪ್ರಜೆಯೊಬ್ಬ ಮಾಡಿದ ಟೀಕೆಯಿಂದ ಪತಿಯನ್ನು ಕಾಡಿಗಟ್ಟಿದ. ಆತ ಸೀತೆಯನ್ನು ಮದುವೆಯಾಗಿದ್ದೂ ಒಂದು ರೀತಿಯಲ್ಲಿ ಗುರುವಿನ ಆದೇಶದ ಅನುಸಾರವಾಗಿ.  ವಿಶ್ವಾಮಿತ್ರರು ಆತನನ್ನು ಮಿಥಿಲೆಗೆ ಕರೆದುಕೊಂಡು ಹೋದ್ದರಿಂದ ಶಿವ ಧನಸ್ಸನ್ನು ಮುರಿದ. ಮದುವೆಯಾದ. ಹಾಗೆ ಸುಗ್ರೀವನಿಗಾಗಿ ಮರೆಯಲ್ಲಿ ನಿಂತು ವಾಲಿ ವಧೆ ಮಾಡಿದ. ಇಲ್ಲಿ ಯಾವ ಪ್ರಕರಣದಲ್ಲಿಯೂ ಆತ ತನಗಾಗಿ ಏನನ್ನೂ ಮಾಡಲಿಲ್ಲ. ಅತ ಮಾಡಿದ್ದೆಲ್ಲ ಬೇರೆಯವರಿಗಾಗಿ.
ರಾವಣನ ವಧೆಯನ್ನು ಆತ ಸೀತೆಗಾಗಿ ಮಾಡಿದ ಎಂದು ಹೇಳುವುದು ಕಷ್ಟ. ಅದು ಕೇವಲ ನೆಪ ಮಾತ್ರ ಆಗಿತ್ತು. ಅಂದಿನ ಆರ್ಯಾವರ್ತದಲ್ಲಿ ಕ್ಶತ್ರಿಯರ ಪ್ರಾಬಲ್ಯವನ್ನು ಉಳಿಸುವುದಕ್ಕಾಗಿ ಆತ ರಾವಣನ ವಧೆ ಮಾಡಲೇ ಬೇಕಿತ್ತು. ವೈದಿಕ ಪರಂಪರೆಯಲ್ಲಿ ಯಜ್ನ ಯಾಗ ಮಾಡುತ್ತಿದ್ದ ಋಷಿಗಳ ರಕ್ಷಣೆ ಮಾಡುವುದು ಕ್ಶತ್ರಿಯ ರಾಜರ ಪರಮ ಕರ್ತವ್ಯವಾಗಿತ್ತು. ಅದಕ್ಕಾಗಿ ರಾಕ್ಷಸರನ್ನು ಆತ ವಧಿಸಲೇ ಬೇಕಾಗಿತ್ತು.
ಕೃಷ್ಣ ರಾಮನಂತಲ್ಲ.  ಬದುಕಿದ್ದಷ್ಟು ಕಾಲ ಈ ದೇಶದಲ್ಲಿ ನಡೆದ ಎಲ್ಲ ಬೆಳವಣಿಗಳೆ ಹಿಂದೆÉ ಕೃಷ್ಣನಿದ್ದ. ಆದರೆ ಆತ ಎಲ್ಲವನ್ನು ತನ್ನ ಚಾಣಕ್ಷತನದ ಮೂಲಕವೇ ಮಾಡಿ ಮುಗಿಸಿದ ರಾಜ ನೀತಜ್ನ. ಆತ ತನ್ನ ಕೈಯಲ್ಲಿ ಅಸ್ತ್ರವನ್ನು ಹಿಡಿಯದೇ ಎಂತೆಂತಹ ಪ್ರಚಂಡರನ್ನು ಮಿಗಿಸಿಬಿಟ್ಟ. ಸೋದರ ಮಾವ ಕಂಸನನ್ನು ಮುಗಿಸುವುದರೊಂದಿಗೆ ಪ್ರಾರಂಭವಾಗುವ ಕೃಷ್ಣನ ಶತ್ರು ಸಂಹಾರ ಕುರುಕ್ಷೇತ್ರ ಯುದ್ಧದೊಂದಿಗೆ ಮುಕ್ತಾಯವಾಗುತ್ತದೆ.
ಕೃಷ್ಣನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಅವನ ವ್ಯಕ್ತಿತ್ವದಲ್ಲಿ ಇರುವ ಸಂಕೀರ್ಣತೆ ರಾಮನ ವ್ಯಕ್ತಿತ್ವದಲ್ಲಿ ಇಲ್ಲ. ರಾಮ ಎಲ್ಲ ಸಿದ್ಧಾಂತಿಗಳ ಹಾಗೆ ತುಂಬಾ ನೀರಸ. ಆದರೆ ಕೃಷ್ಣನ ಬದುಕೇ ನವರಸ. ಆತನ ಬದುಕಿನ ಮೊದಲ ಭಾಗದಲ್ಲಿ  ನವಿಲುಗರಿ ಮತ್ತು ಕೊಳಲು ಸದಾ ಅವನ ಜೊತೆ ಇರುತ್ತಿದ್ದವು. ಕಿರೀಟದ ಮೇಲೆ ನವಿಲುಗರಿ ಇಟ್ಟುಕೊಂಡ ಆತ ಪ್ರೀತಿಗೆ ಹೊಸ ವ್ಯಾಖ್ಯೆಯನ್ನೆ ಬರೆದು ಬಿಟ್ಟ. ಅವನ ಕೈಯಲ್ಲಿನ ಕೊಳಲು ಅವನ ಕೈಯಲ್ಲಿ ಇರುವುದೇ ಪರಮ ಭಾಗ್ಯ ಎನ್ನುವಂತಾಯಿತು. ಯಮುನಾ ನದಿಯ ತೀರದಲ್ಲಿ ಆತ ಕೊಳಲು ನುಡಿಸುತ್ತಿದ್ದರೆ ಆ ರಾಗ ಚುಂಬಕ ಶಕ್ತಿಯಾಗಿ ಎಲ್ಲರನ್ನೂ ಆಕರ್ಷಿಸಿಬಿಡುತ್ತಿತ್ತು. ಗೋಪಿಕೆಯರೆಲ್ಲ ಮೈಮರೆತ್ ರಾಗ ಸುಧೆಯಲ್ಲಿ ಕಳೆದು ಹೋಗುತ್ತಿದ್ದರು ಕೃಷ್ಣ ಕೊಳಲು ಭಾರಿಸುತ್ತ ನಗುತ್ತಿದ್ದ. ಗೋಪಿಕೆಯರು ನರ್ತಿಸುತ್ತಿದ್ದರು. ಅವನ ತುಟಿಯಂಚಿನಲ್ಲಿ ಸಣ್ಣ ನಗು. ಅದು ಎಂದೂ ಮಾಸದ ನಗು.
ಕೃಷ್ಣ ಮಾನವ ಇತಿಹಾಸದಲ್ಲಿ ಪ್ರೀತಿಯ ಮೊದಲು ಸಾಲುಗಳನ್ನು ಬರೆದವನು. ಪ್ರೀತಿಯ ಮೊದಲ ಪಾಠ ಹೇಳಿದವನು. ಅವನ ಪ್ರೀತಿ ನಿಷ್ಕಲ್ಮಷ. ಅಲ್ಲಿ ಕಾಮದ ವಾಂಛೆಯಿಲ್ಲ. ಅದೊಂದು ಅನುಭೂತಿ. ಆತ ಸಾವಿರಾರು ಗೋಪಿಕೆಯರಿಗೆ ತನ್ಮಯತೆಯನ್ನು ಕಲಿಸಿದ. ಪ್ರೀತಿಸುವುದ್ ಹೇಗೆ ಎಂಬುದನ್ನು ಹೇಳಿಕೊಟ್ಟ.
ಪ್ರೀತಿಯನ್ನು ತನ್ನ ಎದೆಯಲ್ಲಿ ಇಟ್ಟುಕೊಂಡು ಸಾಕಿದ ಕೃಷ್ಣ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಂಡ ಮೇಲೆ ಸಂಪೂರ್ಣವಾಗಿ ಬದಲಾದ. ಆತನ ಹೃದಯದಲ್ಲಿದ್ದ ಪ್ರೀತಿಯ ಸೇಲೆ ವರತೆಯಾಗಿ ಹೊರಕ್ಕೆ ಬರಲಿಲ್ಲ. ಆದರೆ ಆಗ ಪ್ರೀತಿಯ ವ್ಯಾಖ್ಯೆಯನ್ನು ಆತನೇ ಬದಲಿಸಿದ. ಗೋಕುಲ ಕೃಷ್ಣ ರಾಜಕಾರಣಿಯಾದ. ಹಾಗಿ ಆತ ಮತ್ತೆ ಎಂದೂ ಕೊಳಲು ನುಡಿಸಲಿಲ್ಲ. ಕೊಳಲನ್ನು ಯಮುನಾ ನದಿಯ ದಡದಲ್ಲೇ ಬಿಟ್ಟು ಬಂದ. ಅವನ ಕೊಳಲು ಅನಾಥವಾಯಿತು. ಆ ಕೊಳಲಿನಲ್ಲಿ ಮತ್ತೆ ನಾದ ಹೊರಡಲೇ ಇಲ್ಲ. ಆದರೆ ಗೋಪಿಕೆಯರ ಮನಸ್ಸಿನಲ್ಲಿ ಆತ ಬಿತ್ತಿದ್ದ ಪ್ರೀತಿಯ ಬೀಜ ವಿರಹವಾಯಿತು. ಕೃಷ್ಣ ಮತ್ತು ಗೋಪಿಕೆಯರ ನಡುವಿನ ಸಂಬಂಧ ಸಾಮಾನ್ಯ ಸಂಬಂಧವಾಗಿರಲಿಲ್ಲ. ರಾಜಕಾರಣಿ ಕಷ್ಣನನ್ನು ನೋಡಲು ಗೋಪಿಯರು ಎಂದೂ ರಾಜಧಾನಿಗೆ ಬರಲಿಲ್ಲ. ಅವರ ಪ್ರೀತಿ ಆರಾಧನೆಯಾಯಿತು. ಪ್ರತಿ ದಿನ ಯಮುನಾ ನದಿಯ ದಂಡೆಗೆ ಬರುತ್ತಿದ್ದ ಗೋಪಿಕೆಯರು ಅನಾಥವಾಗಿದ್ದ ಕೊಳಲನ್ನು ಮುಟ್ಟಿ ಸಂತೋಷಪಡುತ್ತಿದ್ದರು. ಅದರಿಂದ ರಾಗ ಬರುತ್ತಿದೆ ಎಂಬ ಭಾವನೆ ಅವರಿಗೆ ಅನ್ನಿಸುತ್ತಿತ್ತು, ತಕ್ಷಣ ಅವರಿಗೆ ಅಲ್ಲಿ ಕೃಷ್ಣ ಇದ್ದ ಭಾವ ಬರುತ್ತಿತ್ತು. ಮುದುಡಿದ ಮನಸ್ಸು ಹಾರಾಡತೊಡಗುತ್ತಿತ್ತು. ಅವರಿಗೆ ಆ ಕೊಳಲಿನಲ್ಲೇ ಕೃಷ್ಣ ಕಾಣುತ್ತಿದ್ದ.
ಪ್ರೀತಿ ಅರಾಧನೆಯಾಗುವ ಅದ್ಭುತ. ಎಲ್ಲರ ಪ್ರೀತಿಯೂ ಆರಾಧನೆಯಾಗುವುದಿಲ್ಲ. ಆರಾಧಿಸುವುದಕ್ಕೂ ವಿಭಿನ್ನವಾದ ಮನಸ್ಥಿತಿ ಬೇಕು. ಆರಾಧನೆಯಲ್ಲಿ ನಾನು ಎಂಬುದು ಮರೆಯಾಗಬೇಕು. ನಾನು ಎಂಬುದು ಮರೆಯಾಗದಿದ್ದರೆ ಆರಾಧನೆ ಸಾಧ್ಯವಿಲ್ಲ. ಹಾಗೆ ಅಲ್ಲಿರುವುದು ಸಮರ್ಪಣಾ ಭಾವ. ಅಹಂ ಸಮರ್ಪಣೆಗೆ ಯಾವಾಗಲೊ ವಿರೋಧವನ್ನು ವ್ಯಕ್ತಪಡಿಸುತ್ತದೆ. ಪ್ರೀತಿಯಲ್ಲಿರುವ ಅಹಂ ಪ್ರೀತಿ ಇನ್ನೊಂದು ಹಂತಕ್ಕೆ ಏರುವುದಕ್ಕೆ ತಡೆಯನ್ನು ಉಂಟು ಮಾಡುತ್ತದೆ. ಪ್ರೀತಿ ಕೇವಲ ಕಾಮವಾಗಿಬಿಡುತ್ತದೆ. ಆದರೆ ಕಾಮ ಪ್ರೀತಿ ಅಲ್ಲವೇ ಅಲ್ಲ.
ಕೋಪಿಕೆಯರಿಗೆ ಕೃಷ್ಣನ ಬಗ್ಗೆ ಇದ್ದುದು ಕಾಮವಲ್ಲ. ವಾಂಛ್ಯೆಯಲ್ಲ. ಹೀಗಾಗಿ ಅವರಿಗೆ ಕೃಷ್ಣನನ್ನು ಆರಾಧಿಸುವುದು ಸಾಧ್ಯವಾಯಿತು, ಕೃಷ್ಣ ಎದುರಿಗೆ ಇಲ್ಲದಿದ್ದರೂ ಅವನ ಇರುವನ್ನು ಅನೂಭವಿಸಲು  ಸಾಧ್ಯವಾಗುತ್ತಿತ್ತು . 
ಬೀಸುವ ಗಾಳಿಯಲ್ಲಿ, ಹರಿಯುವ ಯಮುನಾ ನದಿಯ ಅಲೆಗಳಲ್ಲಿ ಅಲ್ಲಿದ್ದ ಕೊಳಲಿನಲ್ಲಿ ಕಷ್ಣ ಗೋಪಿಕೆಯರನ್ನು ತಲುಪುತ್ತಿದ್ದ . ಹೀಗೆ ಕೃಷ್ಣನನ್ನು ಆರಾಧಿಸುತ್ತಿದ್ದ ಗೋಪಿಕೆಯರಲ್ಲಿ ರಾಧೆಯ ಸ್ಥಾನವೇ ಬೇರೆ. ಕೃಷ್ಣನಿಗಿಂತ ಸ್ವಲ್ಪ ದೊಡ್ಡವಳಾದ ರಾಧೆಗೆ ಆಗಲೇ ಮದುವೆಯಾಗಿತ್ತು. ಆದರೆ ಆಕೆ ಕೃಷ್ಣನನ್ನು ಆರಾಧಿಸುತ್ತಿದ್ದಳು. ಆಕೆಗೆ ಕೃಷ್ಣನೇ ಸರ್ವಸ್ವ. ಆತನ ಕೊಳಲಿನ ನಾದಕ್ಕೆ ಆಕೆ ಹಾರುವ ಹಕ್ಕಿಯಾಗುತ್ತಿದ್ದಳು. ಬೆಳದಿಂಗಳ ರಾತ್ರಿಯಲ್ಲಿ ಯಮುನಾ ನದಿಯ ದಂಡೆಯಲ್ಲಿ ಕೃಷ್ಣನನ್ನು ತನ್ನೊಳಗೆ ತುಂಬಿಕೊಳ್ಳುತ್ತ ಅವಳೇ ಕೃಷ್ಣನಾಗುತ್ತಿದ್ದಳು. ಆದರೆ ಕೃಷ್ಣ ಮತ್ತು ರಾಧೆಯರ ನಡುವಿನ ಸಂಬಂಧ ಎಲ್ಲವನ್ನೂ ಮೀರಿದ ಸಂಬಂಧವಾಗಿತ್ತು. ಅದು ಯಾವುದೇ ವ್ಯಾಖ್ಯೆಗೆ ಸಿಗುವಂತಹುದಾಗಿರಲಿಲ್ಲ.
ಕೃಷ್ಣನ ಪ್ರೀತಿ ರಾಜಕಾರಣಕ್ಕೆ ಬಂದ ಮೇಲೆ ಬದಲಾದ ಪರಿ ಕೂಡ ಬೇರೆಯದು. ಅವನ ಗೋಪಿಕೆಯರ ಮೇಲಿನ ಪ್ರೀತಿ ಪಾಂಡವರ ಮೇಲಿನ ಪ್ರೀತಿಯಾಗಿ ಬದಲಾಯಿತು. ಅರ್ಜುನ ಆತನ ಸಖನಾದ. ಕುಂತಿಯ ಮೇಲೆ ಕಷ್ಣನಿಗಿದ್ದ ಪ್ರೀತಿ ತಾಯಿಯ ಮೇಲೆ ಮಗ ಇಡುವ ಪ್ರೀತಿಯಾಗಿತ್ತು. ದ್ರೌಪದಿಯ ಬಗ್ಗೆಯೂ ಅವನಿಗೆ ವಿಶೇಷ ಗೌರವಾದರಗಳಿದ್ದವು. ಆದರೆ ಕೃಷ್ಣ ದ್ರೌಪದಿ ಮತ್ತು ಕುಂತಿಯ ಎದುರು ಮಾತ್ರ ಮೌನಿಯಾಗುತ್ತಿದ್ದ. ಅವನ ಎಂದಿನ ನಗೆ ಮುಖದ ಮೇಲೆ ಇರುತ್ತಿರಲಿಲ್ಲ. ಅವರ ಮಾತುಗಳನ್ನು ಕೇಳಿಸಿಕೊಳ್ಳುವುದೇ ಅವನಿಗೆ ಖುಷಿ
ಕೃಷ್ಣ ದ್ರೌಪದಿಗೆ ಕೊಡುತ್ತಿದ್ದ ಗೌರವ ಯಾವ ರೀತಿಯದಾಗಿತ್ತೆಂದರೆ ಆತ ಆಕೆಯ ಎದುರು ಏನೂ ಅಲ್ಲದವನಂತೆ ಇರುತ್ತಿದ್ದ. ಆತ ಆಕೆಗೆ ಸ್ಪಂದಿಸುತ್ತಿದ್ದ ರೀತಿ, ಅವಳ ಕೆರೆಗೆ ಓಗೊಡುತ್ತಿದ್ದ ರೀತಿಯೂ ಅನನ್ಯವೇ.
ತನ್ನ ಹೆಂಡಿರಲ್ಲಿ ರುಕ್ಮಿಣಿಯ ಜೊತೆಗೆ  ಗೌರವಸ್ಥ ಸದ್ ಗ್ರಹಸ್ತನ ಹಾಗೆ ಇರುತ್ತಿದ್ದ ಕಷ್ಣ ಸತ್ಯಭಾಮೆಯ ಜೊತೆಗೆ ಕಿಲಾಡಿ. ಉಳಿದ ಹೆಂಡಿರ ಜೊತೆಗೂ ಆತ ಬೇರೆಯ ವ್ಯಕ್ತಿಯ ಹಾಗೆ ಕಾಣುತ್ತಿದ್ದ. ಆದರೆ ತನ್ನ ಹೆಂಡಿರ ಜೊತೆಗೂ ಆತ ಗೋಪಿಕೆಯರ ಜೊತೆ ಇದ್ದಂತಹ ವ್ಯಾಖ್ಯಾನಕ್ಕೆ ಸಿಗದ ಭಾವವನ್ನು ಹೊಂದಿರುತ್ತಿರಲಿಲ್ಲ

 ಕಷ್ಣನ ಬಗ್ಗೆ ಹೇಳುವುದು ಇನ್ನೂ ತುಂಬಾ ಇದೆ. ಇವತ್ತಿಗೆ ಇಷ್ಟೇ ಸಾಕು,




Tuesday, August 27, 2013

ಓಂ ಶ್ರೀ ಗಣೇಶಾಯ ನಮ:..........







ವಿಘ್ನ ವಿನಾಶಕ ಎಂದು ಹಿಂದೂಗಳು ನಂಬಿರುವ ಗಣೇಶ
 ಈಗ  ವಿವಾದದ ಕೇಂದ್ರವಾಗಿದ್ದಾನೆ. ದೇವರನ್ನು ಸೃಷ್ಟಿಸಿದವರು, ಈಗ ತಮ್ಮ ದೇವರನ್ನೇ ವಿವಾದ  ಕ್ಕೆ ಎಳೆದಿದ್ದಾರೆ. ಹಾಗೆ ನೋಡಿದರೆ ನಮ್ಮ ಕೋಟ್ಯಾಂತರ  ದೇವರುಗಳಲ್ಲಿ ಗಣೇಶ ಅಂತಹ ವಿವಾದಾತ್ಮಕ ದೇವರಲ್ಲ. ಆದರೂ ನಾವು ಎಂತಹ ಪ್ರಚಂಡರೆಂದರೆ ಈ ಟೀವಿ ಯುಗದಲ್ಲಿ ಯಾರನ್ನು ಸುಮ್ಮನೆ ಇರಲು ಬಿಡುವವರಲ್ಲ. ದೇವರನ್ನೂ ಸಹ…..!

ಪಾರ್ವತಿ ಪುತ್ರನಾದ ಗಣೇಶ ಪಿತ್ರವಾಕ್ಯ ಪರಿಪಾಲಕ. ತಂದೆ ತಾಯಿಯರ ಅಚ್ಚುಮೆಚ್ಚಿನ ಮಗ. ಆತ ತುಂಟ ಜಗಳಗಂಟ. ನಂಬಿದವರನ್ನು ಕೈಬಿಡದ ಅವರನ್ನು ಎಲ್ಲ ವಿಘ್ನಗಳಿಂದ ಪಾರು ಮಾಡುವ ಮೊದಲ ಪೂಜೆಗೆ ಅರ್ಹನಾದವನು ವಿನಾಯಕ.
ಪ್ರಾಯಶ ಈ ದೇಶದಲ್ಲಿ ಎಲ್ಲ ಜಾತಿ ಪಂಗಡಗಳನ್ನು ಮೀರಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ದೇವರು ಎಂದರೆ ವಕ್ರ ತುಂಡನೇ. ಬಾಲಗಂಗಾಧರ ತಿಲಕರಿಂದಾಗಿ ಸಾರ್ವಜನಿಕ ಗಣೇಶೋತ್ಸವದ ಆಚರಣೆ ಪ್ರಾರಂಭವಾದ ಮೇಲೆ ವಿನಾಯಕ ವಿಶ್ವ ವಂದ್ಯನಾದ. ಇಂತಹ ದೇವರನ್ನು ವಿವಾದಕ್ಕೆ ಸಿಲುಕಿಸಿದವರು ಯೋಗಿಶ್ ಮಾಸ್ಟರ್. ಅವರ ಬರೆದ ಢುಂಢಿ ಎಂಬ ಕಾದಂಬರಿ ಅರಣ್ಯಕನೊಬ್ಬ ಗಣೇಶನಾದ ಕಥೆ. ಈ ಕಾದಂಬರಿಯಲ್ಲಿ ಬಂದ ವಿಚಾರಗಳ ಬಗ್ಗೆ  ಕಾವಿದಾರಿಗಳು ಕೆಂಡ ಕಾರಿದ್ದಾರೆ. ರಸ್ತೆಗಿಳಿಯುವ ಮಾತನಾಡಿದ್ದಾರೆ. ಯಾಕೆ ಹಿಂದೂ ದೇವತೆಗಳು ಮಾತ್ರ ಈ ರೀತಿ ಅವಹೇಳನಕ್ಕೆ ತುತ್ತಾಗಬೇಕು ಎಂದು ಪ್ರಶ್ನಿಸಿದ್ದಾರೆ, ಅನ್ಯ ಧರ್ಮಗಳ ಬಗ್ಗೆ ಹೀಗೆ ಬರೆಯಿರಿ ಎಂದು ಸವಾಲು ಹಾಕಿದ್ದಾರೆ.
ಆದರೆ ಧರ್ಮ ಎಂದರೆ ಅದು ಜಗಳವಲ್ಲ. ವೀರಾವೇಶದ ಮಾತುಗಳನ್ನು ಅಡುವುದಲ್ಲ. ಅದು ತುಂಬಾ ಖಾಸಗಿಯಾದುದು. ಜೊತೆಗೆ ಧರ್ಮ ಜನರ ಜೊತೆ ಮುಖಾಮುಖಿಯಾಗುತ್ತ ಬೆಳೆಯುತ್ತ ಹೋಗಬೇಕು. ಹಿಂದೂ ಧರ್ಮದ ಶ್ರೇಷ್ಠತೆ ಇರುವುದು ಇಂತಹ ಮುಖಾಮುಖಿಯಲ್ಲೆ. ಒಂದು ಧರ್ಮ ಇನ್ನೊಂದು ಧರ್ಮದ ಜೊತೆ, ವಿಭಿನ್ನ ತಾತ್ವಿಕ ಚಿಂತನೆಗಳ ಜೊತೆ ಮುಖಾಮುಖಿಯಾದಾಗಲೇ ಅದರ ಶೇಷ್ಠತೆಗೆ ಇನ್ನಷ್ಟು ಮೆರಗು ಬರುತ್ತದೆ. ಆದರೆ ಧರ್ಮವನ್ನು ಲಾಭದ ದೃಷ್ಟಿಯಿಂದ ನೋಡುವವರು ಮುಖಾಮುಖಿಗೆ ಅಂಜುತ್ತಾರೆ. ಅವರು ಧರ್ಮ ಗ್ರಂಥಗಳನ್ನು ಹಿಡಿದುಕೊಂಡು ಅದನ್ನು ಗಟ್ಟಿ ಮಾಡಿ ಭಟ್ಟಿ ಇಳಿಸುತ್ತಾರೆ. ಒಷೋ ಹೇಳುವಂತೆ ಧರ್ಮವನ್ನು ಗ್ರಂಥಗಳ ಮೂಲಕ ತಿಳಿದುಕೊಳ್ಳುವವರು ಧರ್ಮ ಪಂಡಿತರು ಆಗಬಹುದೇ ಹೊರತೂ ಧರ್ಮ ಔನ್ನತ್ಯ ಅವರ ಅರಿವಿಗೆ ಬರುವುದಿಲ್ಲ.
ಈ ಗಣೇಶನ ಪರವಾಗಿರುವವರು ಮತ್ತು ಆತನನ್ನು ವೈಜ್ನಾನಿಕ ಸಂಶೋಧನೆಗಳಿಗೆ ಒಳಪಡಿಸುವವರನ್ನು ನೋಡಿದ ತಕ್ಷಣ ಪಾಪ ಅನ್ನಿಸುತ್ತದೆ.  ಗಣೇಶ ಎಂದರೆ ಹೀಗೆ ಆತ ಇರುವುದು ಹೀಗೆ ಎಂದು ನಂಬಿಕೊಂಡವರು ಮೂರ್ತಿ ಪೂಜಕರು. ಅವರು ತಾವು ಫುಜಿಸುವ ಮೂರ್ತಿ ಹೀಗೆ ಇದೆ, ಹೀಗೆ ಇರಬೇಕು ಎಂದು ನಂಬಿಕೊಂಡವರು. ಅವರು ಗಣಪತಿಯ ಸೊಂಡಿಲು ಕೊಂಕುವುದಕ್ಕೂ ಬಿಡಲಾರರು. ಇನ್ನು ಗಣೇಶನ ಬಗ್ಗೆ ಆತನ ಹಿನ್ನೆಲೆಯಲ್ಲಿ ಬಗ್ಗೆ ಆತನ ಜಾತಿಯ ಬಗ್ಗೆ ಸಂಶೋಧನೆ ಮಾಡಲು ಹೊರಟವರು ಕೂಡ ಇವರಿಗಿಂತ ಭಿನ್ನವಾಗಿಲ್ಲ. ಮೂರ್ತಿ ಭಂಜನೆ ಅವರ ಕಾಯಕ.
ಗಣೇಶನಿಗೆ ಜನಿವಾರ ಹಾಕಿ ಕುಳ್ಳರಿಸುವವರು ಒಂದೆಡೆಯಾದರೆ, ಆತ ಕೀಳು ಜಾತಿಯಿಂದ ಬಂದವ ಎಂದು ಭಾರಿ ಸಂಶೋಧನೆ ಮಾಡಿ ಹೆಮ್ಮೆಯಿಂದ bI ಗುವ ವೈಚಾರಿಕ ಸಮುದಾಯ. ಅವರಿಗೆ ಎಲ್ಲೆಡೆ ಕಾಣುವುದು ಜಾತಿ ಮತ್ತು ಶೋಷಣೆ ಮಾತ್ರ. ಈ ಎರಡೂ ಪ್ರಕಾರದ ಜನ ಬಣ್ಣದ ಕನ್ನಡ ಹಾಕಿಕೊಂಡವರೆ. ಅವರಿಗೆ  ಎಲ್ಲವೂ ಈಸ್ಟ್ ಮನ್ ಕಲರಿನಲ್ಲೇ ಕಾಣುತ್ತದೆ.
ಗಣೇಶನನ್ನು ಪೂಜಿಸುವವರು ಆತನನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸುತ್ತಿಲ್ಲ. ದೇವರು ಎಂದರೆ ಒಂದು ತತ್ವ. ಅದು ಬದುಕಿಗೆ ದಾರಿ ತೋರಿಸುವ ಬೆಳಕು. ಬೆಳಕು ಎಂದರೆ ಬೆಳಕು ಮಾತ್ರ. ಬೆಳಕನ್ನು ನೋಡುವವರಿಗೆ ದಾರಿ ಕಾಣುತ್ತದೆ. ನೋಡದೇ ನಿರಾಕರಿಸುವವರಿಗೆ ಕತ್ತಲಿಂದ ಹೊರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಬೆಳಕಿಗೆ ಜಾತಿ ಇದೆಯಾ ? ಬೆಳಕಿನ ಮೂಲವನ್ನು ಕಂಡು ಹಿಡಿಯುವುದು ಹುಚ್ಚುತನವಲ್ಲವೆ ?
ಗಣೇಶನನ್ನು ಕೇವಲ ಮೂರ್ತಿಯನ್ನಾಗಿ ನೋಡವವರಿಗೆ ಆತನಿಂದ ಏನೂ ದಕ್ಕುವುದಿಲ್ಲ. ಆತನೂ ಅವರಿಗೆ ದಕ್ಕುವುದಿಲ್ಲ. ಇಂತವರಿಗೆ ಯಾವತ್ತೂ ಗಣೇಶನನ್ನು ಸ್ಪರ್ಶಿಸುವುದು ಸಾಧ್ಯವಿಲ್ಲ. ಆತನನ್ನು ಹಾಗೆ ಪಕ್ಕಕ್ಕೆ ಕರೆದುಕೊಂಡು ತನ್ನವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.  ದೇವರನ್ನಿ ನಮ್ಮವರನ್ನಾಗಿ ಮಾಡಿಕೊಳ್ಳದಿದ್ದರೆ ಯಾವ ಪ್ರಯೋಜನವೂ ಇಲ್ಲ. ಆಗ ದೇವರೆಂದರೆ ಕೇವಲ ಪ್ರತಿಮೆಯಾಗಿ ಉಳಿದು ಬಿಡುತ್ತದೆ.
ಗಣೇಶ ಕಾಡಿನಲ್ಲಿ ವಾಸಿಸುವ ಕೆಳ ಜಾತಿಯ ವ್ಯಕ್ತಿಯಾಗಿದ್ದ ಎಂದು ಹೇಳಿದರೆ ಏನು ಹೇಳಿದಂತಾಯಿತು ? ಆತ ಕಾಡಿನಲ್ಲೇ ವಾಸಿಸಿದ್ದರಬಹುದು. ಕೆಳ ಜಾತಿಯವನೇ ಆಗಿರಬಹುದು. ಈ ಇತಿಹಾಸ ಗಣೇಶನನ್ನು ಬದಲಿಸಲಾರದು. ಹಿಂದೂಗಳ ಮನಸ್ಸಿನಲ್ಲಿ ಗಣೇಶನ ಬಗ್ಗೆ ಇರುವ ಸ್ಥಾನಕ್ಕೆ ಚ್ಯುತಿ ಬರಲಾರದು. ಗಣೇಶ ಈಗ ಏನು ಎಂಬುದು ನಮಗೆ ಮುಖ್ಯ. ಜೊತೆಗೆ ಕೆಳ ಜಾತಿಯ ವ್ಯP್ತಯೊಬ್ಬ ದೇವರಾದರೆ ನಾವೆಲ್ಲ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು. ಇದಕ್ಕೆ ಬದಲಾಗಿ ಗಣೇಶ ಕೆಳ ಜಾತಿಯವ ಆತನನ್ನು ಪೂಜಿಸಬೇಡಿ ಎಂದು ಮೇಲ್ಜಾತಿಯ ಜನರಿಗೆ ಹೇಳಲು ಹೊರಟರೆ ಅದು ವಿಕೃತಿ.
ಗಣೇಶನ ದೇಹವೇ ಒಂದು ವಿಸ್ಮಯ. ಆತನ ದೇಹದ ಕೆಳಭಾಗ ಮನುಷ್ಯನದು. ತಲೆ ಆನೆಯದು. ಪ್ರಕೃತಿ ಮತ್ತು ಮನುಷ್ಯನ ಸಹಬಾಳ್ವೆ. ಆತ ನಡೆಯುವಾಗ ಮನುಷ್ಯನ ದೇಹವನ್ನು ಆನೆಯ ತಲೆಯನ್ನು ಹೊತ್ತು ಒಯ್ಯುತ್ತಾನೆ  ಆತನಲ್ಲಿ ಆನೆ ಮರಿಯ ತುಂಟತನವಿದೆ. ಜೊತೆಗೆ ವೈಚಾರಿಕ ಪ್ರಜ್ನೆಯಿದೆ. ವಿಶ್ವ ಪರ್ಯಟನ ಮಾಡು ಎಂದರೆ ತಂದೆ ತಾಯಿಯ ಸುತ್ತ ಬಂದು ಅಪ್ಪ ಅಮ್ಮನೇ ಸರ್ವಸ್ವ ಎಂದು ತೋರಿದ ಜಾಣ ಮಗ. ಹೀಗಾಗಿ ಎಲ್ಲರೂ ಗಣೇಶನಂತಹ ಮಗ ನನಗೆ ಬೇಕು ಎಂದು ಆಸೆ ಪಟ್ಟರೆ ಅಶ್ಚರ್ಯವಿಲ್ಲ.
ಗ‹ಣೇಶನ ಕಿವಿ ದೊಡ್ದದು. ಅಂದರೆ ಎಲ್ಲವನ್ನೂ ಕೇಳುವುದಕ್ಕೆ ಆತ ಸಿದ್ಧ. ಕೇಳುವಿಕೆಯೇ ಒಂದು ಅದ್ಭುತ. ಯಾಕೆಂದರೆ ಕೇಳುವುದು ಸುಲಭವಲ್ಲ. ಹೇಳುವುದು ಸುಲಭ. ನಾವೆಲ್ಲ ಹೇಳುವವರು, ಕೇಳುವವರಲ್ಲ. ಕೇಳುವುದಕ್ಕೆ ತಾಳ್ಮೆ ಬೇಕು. ಹೇಳುವುದಕ್ಕೆ ತಾಳ್ಮೆ ಬೇಕಾಗಿಲ್ಲ. ನಮ್ಮ ಒಳಗಿರುವುದನ್ನು ಹೊರಹಾಕುವುದು ಸುಲಭ. ಆದರೆ ಹೇಳಿದ್ದನ್ನು ಕೇಳಿಸಿಕೊಳ್ಳುವುದು ಕಷ್ಟ. ದೊಡ್ಡ ಕಿವಿಯ ಗಣೇಶ ಸಾವಿರಾರು ಭಕ್ತರು ಹೇಳಿದ್ದನ್ನು ಏಕಕಾಲದಲ್ಲಿ ಕೇಳಿಸಿಕೊಳ್ಳಬಲ್ಲ. ಅವನ ಕಿವಿ ಅಷ್ಟು ದೊಡ್ಡದು.
ಗಣೇಶನ ವಾಹನ ಇಲಿ. ನೀವು ಎಂದಾದರೂ ಇಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ ? ಅದು ಎಂದೂ ಸಹ ಸುಮ್ಮನೆ ಕುಳಿತುಕೊಳುವುದಿಲ್ಲ ಚಾಂಚಲ್ಯವೇ ಅದರ ಪ್ರವೃತಿ. ಇಂತಹ ಪ್ರಾಣಿಯನ್ನು ವಾಹನವನ್ನಾಗಿ ಗಣೇಸ ಯಾಕೆ ಮಾಡಿಕೊಂಡ ? ಚಂಚಲತೆಯನ್ನು ನಿಯಂತ್ರಣದಲ್ಲಿ ಇಟ್ತುಕೊಳ್ಳುವ ತತ್ವ ಇದರಲ್ಲಿ ಅಡಗಿರಬಹುದೇ ?
ಈ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲಾಗಿ ನಮ್ಮ ದೇವರುಗಳು ಪ್ರಾಣಿಗಳನ್ನು ತಮ್ಮ ವಾಹನವನ್ನಾಗಿ ಮಾಡಿಕೊಂಡಿರುವುದು ಅಪರಾಧ. ಇದು ಅರಣ್ಯ ಕಾನೂನಿಗೆ ವಿರುದ್ಧ ಎಂದು ಮಾತನಾದಿದರೆ ? ಕಾನೂನು ಪ್ರಕಾರ ಈ ವಾದ ಸರಿ ಇರಬಹುದು. ಆದರೆ ನಮ್ಮ ಕಾನೂನಿಗೆ ದೇವರನ್ನು ಒಳಪಡಿಸುವುದು ಮೂರ್ಖತನ. ದೇವರಿಗೆ ಮನುಷ್ಯ ನಿರ್ಮಿತ ಕಾನೂನು ಅನ್ವಯವಾಗುವುದಿಲ್ಲ ಯಾಕೆಂದರೆ ಆತ ದೇವರು. ಹಾಗೆ ನಮ್ಮ ಜಾತಿ ಪದ್ಧತಿ ಜಾತಿ ಸಂಘರ್ಷ ದೇವರಿಗೆ ಸಂಬಂಧವಿಲ್ಲ.
ದೇವರು ಮನುಷ್ಯನ ಅಸಹಾಯಕತೆಯಲ್ಲಿ ದು:ಖದಲ್ಲಿ ಹುಟ್ಟುತ್ತಾನೆ. ಕೆಲವೊಮ್ಮೆ ನಡುವಿನ ಅಸಮಾನ್ಯ ವ್ಯಕ್ತಿಗಳು ದೇವರಾಗುತ್ತಾರೆ. ಹೀಗೆ ದೇವರಾಗುವ ಪ್ರಕ್ರಿಯೆ ಒಮ್ಮೆಲೆ ಆಗುವುದಲ್ಲ.  ಅದು ಕಾಲ ಕ್ರಮೇಣ ನಡೆಯುವ ಪ್ರಕ್ರಿಯೆ. ದೇವರು ಶಕ್ತಿ ತುಂಬಿಕೊಳ್ಳುವುದು ಹಾಗೆ. ನಮ್ಮಲ್ಲಿ ಪ್ರಜಾಪಾಲಕ ದೇವರಾದ ಹಲವು ಉದಾಹರಣೆಗಳಿವೆ. ಹಾಗೆ ಸಿನೆಮಾ ನಟ ನಟಿಯರೂ ದೇವರಾದದ್ದಿದೆ. ಒಮ್ಮೆ ದೇವರಾದ ಮೇಲೆ ಆತ ತನ್ನ ರೂಪವನ್ನು ಕಳೆದುಕೊಂಡು ತತ್ವವಾಗುತ್ತಾನೆ. ಹೀಗೆ ತತ್ವವಾಗಿ ಬೆಳೆದ ದೇವರು ತತ್ವ ರೂಪದಲ್ಲಿ ಕಾಣುತ್ತಾನೆಯೇ ಹೋರತೂ ದೈಹಿಕವಾಗಿ ಅಲ್ಲ.
ಗಣೇಶ ಕೂಡ ಒಂದು ತತ್ವ. ಆತನ ತತ್ವವನ್ನು ನಾನು ಗಣ ತತ್ವ ಎಂದು ಕರೆಯುತ್ತೇನೆ. ಈ ತತ್ವ ಉಳಿದೆಲ್ಲ ತತ್ವಕ್ಕಿಂತ ಭಿನ್ನವೂ ಶತಿಯುತವೂ ಆಗಿದೆ. ಯಾಕೆಂದರೆ ಮನುಷ್ಯರೂ ಮತ್ತು ಪ್ರಾಣಿಗಳ ಸಹಬಾಳ್ವೆ ಇಲ್ಲಿ ಅಡಗಿದೆ. ಜೊತೆಗೆ ಆತ ಯೋನಿಜನಲ್ಲ. ಆತ ಹುಟ್ಟಿದ್ದು ಮಣ್ಣಿನಿಂದ. ಮಣ್ನು ಎಂದರೆ ಭೂಮಿ. ಹೀಗಾಗಿ ಆತ ಭೂಮಿ ಪುತ್ರನೂ ಕೂಡ. ಇದು ಭೂಮಿ ನಮ್ಮ ತಂದೆ ತಾಯಿ ಎಂಬ ತತ್ವವನ್ನು ಒಳಗೊಂಡಿದೆ. ಭೂಮಿ ಪೂಜೆ ಮಾಡುವ ಈ ದೇಶದಲ್ಲಿ ಭೂಮಿಯಿಂದ ಹುಟ್ಟಿದ ಎಂದರೆ ಆತ ಕೆಳ ಜಾತಿಯವನಿರಬೇಕು ಎಂದು ಕುತರ್ಕ ಮಾಡಬೇಕಾದ ಅಗತ್ಯವಿಲ್ಲ.  ಆತ ಮಣ್ಣಿನ ಮಗ ಎಂದುಕೊಂಡರೆ ಸಾಕು.
ಗಣೇಶ ಮನುಷ್ಯರನ್ನು ಪ್ರತಿನಿಧಿಸುತ್ತಾನೆ. ಪ್ರಾಣಿ ಸಂಕುಲದ ಪ್ರತಿನಿಧಿಯಾಗುತ್ತಾನೆ. ಈ ಭೂಮಿಯ ಮಗನಾಗುತ್ತಾನೆ. ಶಿವ ತತ್ವದ ಮುಂದುವರಿಕೆಯಾಗುತ್ತಾನೆ. ಹೀಗಾಗಿಯೇ ಅವನಿಗೆ ದೈವ ಪಟ್ಟ ಸಿಕ್ಕಿದ್ದು ಸ್ವಾಭಾವಿಕವೇ ಹೊರತೂ ಅಸ್ವಾಭಾವಿಕವಲ್ಲ.
ಶಿವ ನಟರಾಜನಾದರೆ ಗಣೇಶ ನರ್ತನಪ್ರಿಯ. ಜೊತೆಗೆ ಆತ ಮದುವೆಯಾಗದವ. ಆತನಿಗೆ ಸಿದ್ಧಿ ಬುದ್ಧಿ ಎಂಬ ಇಬ್ಬರು ಹೆಂಡಿರು ಎಂದು ಹೇಳಲಾಗುತ್ತಿದೆಯಾದರೆ ಇದಕ್ಕೆ ಹೆಚ್ಚಿನ ಆಧಾರವಿಲ್ಲ್ ಜೊತೆಗೆ ಗಣೇಶನ ಹೆಂಡಂದಿರು ಕೈಲಾಸದಲ್ಲ್ಲಿ ಕಾಣುಸಿಕೊಂಡ ಉದಾಹರಣೆಯೂ ಇಲ್ಲ. ಆದ್ದರಿಂದ ಆತನನ್ನು ಬ್ರಹ್ಮಚಾರಿ ದೇವರು ಎಂದೂ ಪರಿಗಣಿಸಬಹುದು. ಆತ ಬ್ರಹ್ಮಚಾರಿ ದೇವರಾದ್ದರಿಂದ ಆತನಿಗೆ ಹೆಂಡಂದಿರ ಕಾಟವೂ ಇಲ್ಲ.
ಗಣೇಶನ ಹುಟ್ಟನ್ನು ಸಂಶೋಧನೆ ಮಾಡಿರುವ ಯೋಗಿಶ್ ಮಾಸ್ಟರ್ ಆತನ ಕೈಯಲ್ಲಿ ಕತ್ತಿ ಮಚ್ಚು ನೀಡಿದ್ದಾರೆ ಎಂಬುದು ಇನ್ನೊಂದು ಆರೋಪ. ಆದರೆ ಗಣೇಶ ಶಸ್ತ್ರಾಸ್ತ್ರಗಳಿಗಿಂತ ಹೆಚ್ಚಾಗಿ ಬುದ್ದಿಯನ್ನು ಪ್ರತಿನಿಧಿಸುವ ದೇವರು. ಆತ ಜಾಣತನಕ್ಕೆ ಹೆಸರು ವಾಸಿ. ಆತ ಲೋಕ ಕಲ್ಯಾಣಕ್ಕಾಗಿ ಮಾಡಿದ ಯಾವುದೇ ಕೆಲಸವೂ ಆಗಿದ್ದು ಜಾಣತನದಿಂದ. ಆತ ನೇರ ಯುದ್ಧ ಮಾಡಿದ್ದಕ್ಕಿತ ಪರೋಕ್ಷ ಯುದ್ಧ ಮಾಡಿದ್ದೇ ಹೆಚ್ಚು.
ಗಣೇಶ£ ದೇಹ ಕೂಡ ಬೃಹತ್ ಅದುದು. ಆತನದು ಸಿಕ್ಸ್ ಪ್ಯಾಕ್ ದೇಹವಲ್ಲ. ವಿಷ್ಣುವಿನಂತೆ ಸುಕೋಮಲ ದೇವವನ್ನಾಗಲಿ, ಅವನ ಅಪ್ಪ ಶಿವನಂತಹ ಕಾಠಿಣ್ಯವನ್ನು ಹೊರಸೂಸುವ ದೇಹವನ್ನು ಆತ ಹೊಂದಿಲ್ಲ. ಅವನ ಮನುಷ್ಯ ದೇಹದ ಭಾಗದಲ್ಲಿ ಬೊಜ್ಜು ಕಂಡು ಬಂದರೆ ವಿನಾಯಕನ ತಲೆಯ ಭಾಗ ಸದಾ ಜಾಗೃತ
ಇದಕ್ಕೆ ಪೂರಕವಾದ ಕಥೆಯೊಂದಿದೆ. ಅದು ಕೇವಲ ಪುರಾಣವೇ ಆಗಿರಬಹುದು, ಆದರೆ ಅದು ನಮಗೆ ಮುಖ್ಯವಲ್ಲ. ಮಹಾಭಾರತ ಬರೆದ ವ್ಯಾಸನಿಗೆ ಬರವಣಿಗೆಯಲ್ಲಿ ಅಂತಹ ಪ್ರಾವಿಣ್ಯತೆ ಇತ್ತೊ ಇಲ್ಲವೋ ಅಂತೂ ಮಹಾಭಾರತವನ್ನು ಬರೆಯಲು ಆತ ನಿಯೋಜಿಸಿಕೊಂಡಿದ್ದು ಗಣೇಶನನ್ನು. ವ್ಯಾಸ ಮಹಾಭಾರತದ ಕಥೆಯನ್ನು ವ್ಯಾಸ ಬಾಯಲ್ಲಿ ಹೇಳಿತ್ತಿದ್ದರೆ, ಹೇಳಿ ಮುಗಿಸುವುದಕ್ಕಿಂತ ಮೊದಲು ಗಣೇಶ ಬರೆದು ಮುಗಿಸಿ ಬಿಡುತ್ತಿದ್ದನಂತೆ. ಈ ಕಥೆ ಅಥವಾ ಪುರಾಣ ಒಪ್ಪಿಕೊಳ್ಳುವುದೆಂದರೆ ಗಣೇಶನ ಬುದ್ದಿ ಮತ್ತೆಯನ್ನು. ಆತ ಬರೆಹದಲ್ಲಿ ಪ್ರಾವಿಣ್ಯತೆಯನ್ನು ಹೊಂದಿದ್ದ ಎಂಬುದನ್ನು.
ನಮ್ಮ ನಂಬಿಕೆಯ ಪ್ರಕಾರ ಸರಸ್ವತಿ ವಿದ್ಯಾ ದೇವತೆ. ಆದರೆ ಸರಸ್ವತಿ ಸದಾ ವೀಣೆಯನ್ನು ಭಾರಿಸುತ್ತ ಕುಳಿತಿರುವವಳು. ಹೀಗಾಗಿ ಈ ಪೋರ್ಟ್ ಫೋಲಿಯೋ ಗಣೇಶನ ಪಾಲಿಗೆ ಬಂದಿದೆ. ಆತ ವಿದ್ಯಾ ದೇವತೆಯೂ ಆಗಿಬಿಟ್ಟಿದ್ದಾನೆ

Saturday, March 30, 2013

ಈ ಟೀವಿಯಲ್ಲಿ ಪ್ರಸಾರವಾದ ನನ್ನ ಸಂದರ್ಶನ..

ಈ ಟೀವಿ ಕನ್ನಡ ವಾಹಿನಿಯಲ್ಲಿ ಭಾನಾಮತಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ನನ್ನ ಸಂದರ್ಶನವೊಂದು ಪ್ರಸಾರವಾಗಿತ್ತು. ಈ ನೋಟ ಕಾರ್ಯಕ್ರಮದಲ್ಲಿ ಪ್ರಸಾರವಾದ ಈ ಸಂದರ್ಶನದಲ್ಲಿ ಭಾನಾಮತಿ ಬಗ್ಗೆ ನಾನು ಮಾತನಾಡಿದ್ದೇನೆ. ನಿಗೂಢ ಜಗತ್ತಿನ್ನ್ನು ಅನಾವರಣಗೊಳಿಸುವಾಗ ಒಹಿಸಬೇಕಾದ ಜಾಗರೂಕತೆಯ ಬಗ್ಗೆ ಮಾತನಾಡಿದ್ದೇನೆ. ಇಂದು ಇದು ಪ್ರಸ್ತುತ ಎಂದು ನಂಬಿ ಸಂದರ್ಶನವನ್ನು  ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದೇನೆ. ಯು ಟ್ಯುಬ್ ನಲ್ಲಿ ಈ ಸಂದರ್ಶನ ಲಭ್ಯವಿದೆ. ಲಿಂಕ್ ಇಲ್ಲಿದೆ.

https://www.youtube.com/watch?v=bSUMQcI-sDY

Friday, March 29, 2013

ಮಾಟ ಮಂತ್ರ- ನಿಗೂಢ ಜಗತ್ತಿನಲ್ಲಿ ಪಯಣ

೨೦೦೪ರಲ್ಲಿ ನಾನು ನಿರ್ಮಿಸಿ ನಿರ್ದೇಶಿಸಿದ ಧಾರಾವಾಹಿ ಭಾನಾಮತಿ. ಈ ಟೀವಿ ಕನ್ನಡದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರಸಾರವಾದ ಈ ಧಾರಾವಾಹಿ ನಂಬರ್ ಒನ್ ಆಗಿ ಜನಪ್ರಿಯವಾಗಿತ್ತು. ಈ ಧಾರಾವಾಹಿಗೆ ನಾನು ನೀಡಿದ ಉಪ ಶೀರ್ಷಿಕೆ ನಿಗೂಢ ಜಗತ್ತಿನಲ್ಲಿ ಪಯಣ.
ಈ ಧಾರಾವಾಹಿಯ ವಿಷಯ ಪ್ರವೇಶಿಕೆ ಇದು.

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...