Friday, December 31, 2021

TEMPLE FREEDOM

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸುತ್ತಾರಂತೆ,,,!
ದೇವಾಲಯಗಳ ಮೇಲಿನ ಸರ್ಕಾರದ ನಿಯಂತ್ರವನ್ನು ತೆಗೆದುಹಾಕುತ್ತಾರಂತೆ... 
ಹಾಗದರೆ ಮುಜ ರಾಯಿ ಇಲಾಖೆಗೆ ಬಾಗಿಲು ಹಾಕುತ್ತಾರಾ ? ಈ ಹಿಂದೂ ದೇವಾಲಯಗಳನ್ನು  ಅರ್ಚಕರಿಗೆ ಒಪ್ಪಿಸುತ್ತಾರಾ ?
ಆರ್ ಎಸ್ ಎಸ್ ಅಜೆಂಡಾವನ್ನು ತರಾತುರಿಯಿಂದ ಪೂರ್ಣ ಮಾಡಲು ಹೊರಟ ಬೊಮ್ಮಾಯಿ..
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,,

Tuesday, October 26, 2021

 ಹೊಟ್ಟೆ ತುಂಬಿದ ನಮ್ಮ ಕ್ರಿಕೆಟ್ ಹುಡುಗರು; ಹಸಿವಿನ ಪಾಕ್ ಆಟಗಾರರು.; ಭಾರತ ಪಾಕ್ ಕ್ರಿಕೆಟ್ ಕಲಿಸಿದ ಪಾಠ

ಎರಡು ದಿನಗಳ ಹಿಂದಿನ ಮಾತು. ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತಿತು. ಪಾಕಿಸ್ಥಾನ ಅದ್ಭುತವಾಗಿ ಆಟ ಆಡಿ ವಿಜಯಿಯಾಯಿತು,,ಕ್ರಿಡೆ ಎಂದರೆ ಹಾಗೆ. ಚೆನ್ನಾಗಿ ಆಡಿದವರು ಗೆಲ್ಲುತ್ತಾರೆ, ಚೆನ್ನಾಗಿ ಆಡದಿದ್ದರೆ ಸೋಲುತ್ತಾರೆ.. ಈ ಪಂದ್ಯದಲ್ಲಿ ಆದದ್ದು ಅದೇ,
ಭಾರತದ ಈ ಸೋಲಿನಿಂದ ಭಾರತೀಯರಿಗೆ ನೋವಾಗಿದ್ದರೆ ಅದು ಸಹಜ, ನಮ್ಮ ತಂಡ ಗೆಲ್ಲಬೇಕು ಎಂದು ಬಯಸುವುದು ಅಸಹಜವೇನಲ್ಲ..ಜೊತೆಗೆ ಭಾರತದ ಉಪಖಂಡದಲ್ಲಿ ಕ್ರಿಕೆಟ್ ಎನ್ನುವುದು ದೇಶಪ್ರೇಮದ ಸಂಕೇತ ಕೂಡ ಆಗಿರುವುದು ನಿಜ. ಹಾಗೆ ಇದೊಂದು ರಿಲಿಜನ್. ಹಾಗೆ ಕ್ರಿಕೆಟ್ ನಂತಹ ಆಟ ದೇಶಪ್ರೇಮದ ಸಂಕೇತವಾಗಿದೆ. ನಮ್ಮ ದೇಶದ ತಂಡವನ್ನು ಬೆಂಬಲಿಸುವುದು ಧರ್ಮ, ಬೆಂಬಲಿಸದಿದ್ದರೆ ಅದು ದೇಶದ್ರೋಹ,,ನಿಜವಾದ ಕ್ರೀಡೆಯನ್ನು ಅಸ್ವಾದಸಲು ಸಾಧ್ಯವಾಗದ ಸ್ಥಿತಿ
ಇವತ್ತಿನ ದಿನ ದೇಶಪ್ರೇಮ ಎಂಬುದು ಹೆಚ್ಚು ಚಾಲ್ತಿಯಲ್ಲಿ ಇರುವ ಶಬ್ದ. ಪ್ರಭುತ್ವದ ವಿರುದ್ಧ ಮಾತನಾಡುವುದು ದೇಶದ್ರೋಹ. ಸಂಘ ಪರಿವಾರದ ಕಾರ್ಯಚಟುವಟಿಕೆಯನ್ನು ಪ್ರಶ್ನಿಸುವುದು ದೇಶದ್ರೋಹ. ಹಿಂದೂ ಹಿಂಸೆಯನ್ನು ಪ್ರಶ್ನಿಸುವುದು ದೇಶದ್ರೋಹ, ಅಲ್ಪಸಂಖ್ಯಾತರ ಮೇಲೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸುವುದು ದೇಶದ್ರೋಹ. ಇಂತಹ ದೇಶಪ್ರೇಮೆದ ಹೊಸ ವ್ಯಾಖ್ಯಾನದ ಮತ್ತು ದೇಶಪ್ರೇಮವನ್ನು ಕೋಮಿನ ಜೊತೆ ಜೋಡಿಸುವ ಕಾಲ ಘಟ್ಟ ಇದು. ಇಂತಹ ಸ್ಥಿತಿ ಈ ದೇಶದಲ್ಲಿ ಹಿಂದೆಂದೂ ಬಂದಿರಲಿಲ್ಲ.
ಈಗ ಮೊದಲು ಪ್ರಸ್ತಾಪಿಸಿದ ವಿಷಯಕ್ಕೆ ಬರುತ್ತೇನೆ. ಅದು ಭಾರತ ಮತ್ತು ಪಾಕಿಸ್ಥಾನದ ನಡುವಿನ ಕ್ರಿಕೆಟ್ ಪಂದ್ಯ ಮತ್ತು ಈ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದ್ದು,. ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಪಾಕಿಸ್ಥಾನದ ನಡುವೆ ಕ್ರಿಕೆಟ್ ಪಂದ್ಯ ನಡೆದಿರಲಿಲ್ಲ. ಅದೂ ಸಹ ದೇಶಪ್ರೇಮಕ್ಕೆ ಸಂಬಂಧಿಸಿಯೇ ತೆಗೆದುಕೊಂಡ ತೀರ್ಮಾನ, ಭಾರತದಲ್ಲಿ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಯನ್ನು ನಿಲ್ಲಿಸದಿರುವ ವರೆಗೆ ಆ ದೇಶದ ಜೊತೆ ಕ್ರಿಕೆಟ್ ಆಡಬಾರದು ಎಂಬ ನಿರ್ಧಾರ, ಹಾಗೆ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳಲ್ಲು ಆಡುವ ಅವಕಾಶವನ್ನು ಪಾಕಿಸ್ಥಾನದ ಆಟಗಾರರಿಗೆ ನೀಡದಿರುವುದೂ ಕೂಡ ದೇಶಪ್ರೇಮದ ಹೊಸ ನರೇಟೀವ್ ದ ಭಾಗವೇ ಆಗಿತ್ತು, ಇದೇ ನೆರೇಟೀವ್ ನಿಂದಾಗಿಯೇ ಪಾಕಿಸ್ಥಾನದ ಕ್ರಿಕೆಟ್ ವೀಕ್ಷಕವಿವರಣೆಕಾರರನ್ನು ಹೊರಹಾಕಲಾಗಿತ್ತು,, ಯಾವ ಕಾರಣಕ್ಕೂ ಪಾಕಿಸ್ಥಾನದ ಗಾಳಿ ಇಲ್ಲಿ ಬೀಸಕೂಡದು, ಹೀಗಾಗಿ ಪಾಕಿಸ್ಥಾನದ ಆಟಗಾರರು ಹೇಗಿದ್ದಾರೆ ಎಂಬ ಅರಿವು ನಮ್ಮ ತಂಡಕ್ಕೆ ಇರಲಿಲ್ಲ. ನಿಜ ಪಾಕಿಸ್ಥಾನದ ಆಟಗಾರರು ಹೇಗೆ ಆಡುತ್ತಾರೆ ಎಂಬುದನ್ನು ವೀಡಿಯೋ ಮೂಲಕ ನೋಡಿದ್ದರೂ ಅವರು ಜೊತೆ ಆಡದಿರುವುದು ಅವರ ಆಟವನ್ನು ನಿಜವಾಗಿ ತಿಳಿಯದಂತೆ ಮಾಡಿತ್ತು.
ಆದರೂ ನಮ್ಮ ಹುಡುಗರಲ್ಲಿ ಹುಮ್ಮಸು ಇತ್ತು.. ಪಾಕಿಸ್ಥಾನ ನಮಗೆ ಯಾವ ಲೆಕ್ಕ ಎಂದು ನಮ್ಮವರು ಅಂದುಕೊಂಡಿದ್ದರು, ಐ ಪಿ ಎಲ್ ಮತ್ತ್ತು ಕ್ರಿಕೆಟ್ ನೀಡಿದ ಕೋಟ್ಯಾಂತರ ರೂಪಾಯಿ ಹಣ ನಮ್ಮ ಆಟಗಾರರಿಗೆ ಈ ವಿಶ್ವಾಸವನ್ನು ತುಂಬಿತ್ತು.
ಬದುಕಿನ ಯಾವುದೇ ಕ್ಷೇತ್ರದಲ್ಲಿ ಅಹಂಕಾರವನ್ನೇ ವಿಶ್ವಾಸ ಎಂದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.. ಅವರು ವಿಶ್ವಾಸ ಎಂದುಕೊಂಡಿದ್ದು ವಿಶ್ವಾಸ ಆಗಿರಲಿಲ್ಲ. ಅದು ಅಹಂಕಾರವಾಗಿತ್ತು.
ಎರಡೂ ವರ್ಷಗಳ ನಂತರ ಪಾಕಿಸ್ಥಾನದ ವಿರುದ್ಧ ಆಡಲು ಮೈದಾನಕ್ಕೆ ಇಳಿದ ನಮ್ಮ ಹುಡುಗರು ಇದನ್ನು ನಿರೀಕ್ಷಿಸಿರಲಿಲ್ಲ. ಪಾಕಿಸ್ಥಾನ ಟಾಸ್ ಗೆದ್ದು ಭಾರತದ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದಾಗಲೇ ಎಚ್ಚರಿಕೆಯ ಗಂಟೆ ಬಡಿಯತೊಡಗಿತ್ತು,, ಭಾರತದ ಆರಂಭಿಕ ಆಟಗಾರರಾದ ಶರ್ಮಾ ರಾಹುಲ್ ಜೋಡಿಗೆ ಎದುರಾದವರು ಅಫ್ರೀದಿ ಎಂಬ ತೋಫಾನಿನಂತ ಬೌಲರ್,, ಅವನು ಎಸೆದ ಬೌಲುಗಳಿಗೆ ಇವರು ನಿರುತ್ತರರಾದರು. ಮುಂದಿನದನ್ನು ಹೇಳಬೇಕಾಗಿಲ್ಲ. ಅದು ಭಾರತದ ಪತನ..
ಮುಂದೆ ಎನಾಯಿತು ಎಂಬುದನ್ನು ವಿವರಿಸಬೇಕಾದ ಅಗತ್ಯ ಇಲ್ಲ. ಭಾರತ ಪಾಕಿಸ್ಥಾನದ ಎದುರು ತಲೆ ತಗ್ಗಿಸಿ ನಿಲ್ಲಬೇಕಾಯಿತು.. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮೆಂಟರ್ ಮಹೇಂದ್ರ ಸಿಂಗ್ ದೋನಿ ಕ್ರಿಡೆಯ ಗೌರವವನ್ನು ಎತ್ತಿ ಹಿಡಿದರು.. ಪಾಕಿಸ್ಥಾನದ ಆಟಗಾರರ ಮೈದಡವಿದರು,, ಆ ಹುಡುಗರಿಗೆ ದೋನಿಯ ಜೊತೆ ಮಾತನಾಡುವುದೇ ದೌಡ್ಡ ಗೌರವ ಅನ್ನಿಸಿದಂತಿತ್ತು,,
ಇಲ್ಲಿ ಗೆದ್ದಿದ್ದು ಕ್ರಿಕೆಟ್ ಎಂಬ ಅದ್ಭುತ ಕ್ರೀಡೆ. ಗೆಲ್ಲಿಸಿದವರು ವಿರಾಟ್ ಮತ್ತು ದೋನಿ..ವಿರಾಟ್ ಎದುರು ವಿದ್ಯಾರ್ಥಿಗಳಂತೆ ನಿಂತ ಪಾಕ್ ಆಟಗಾರರು, ಅವರತ್ತ ಪ್ರೀತಿಯ ನೋಟ ಬೀರಿದ ಕೋಹ್ಲಿ.. ಈ ಚಿತ್ರವನ್ನು ಮರೆಯುವುದು ಸಾಧ್ಯವೇ ಅಲ್ಲ..ಇದು ಕ್ರಿಕೆಟ್ ಎಂಬ ಕ್ರೀಡೆ ಇರುವವರೆಗೆ ನೆನಪಿನಲ್ಲಿ ಉಳಿಯುವ ಚಿತ್ರ
ಆದರೆ ಕ್ರೀಡಾ ಮನೋಭಾವನೆ ಎಂದರೇನು ಎಂದು ಅರಿಯದ ಕೆಲವು ವಾಹಿನಿಗಳು ಮತ್ತು ಮುಬ್ಬಕ್ತರು ಭಾರತದ ಸೋಲಿಗಾಗಿ ಅರಚಾಟ ಪ್ರಾರಂಭಿಸಿದರು. ಭಾರತ ಗೆದ್ದಿದ್ದರೆ ಅ ಗೆಲುವಿಗಾಗಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಗೌರವ ಸಲ್ಲಿಸಬೇಕು ಎಂದುಕೊಂಡವರಿಗೆ ನಿರಾಸೆಯಾಗಿತ್ತು,, ಆಗ ಈ ಜನ ಟಾರ್ಗೆಟ್ ಮಾಡಿದ್ದು ಭಾರತದ ಬೌಲರ್ ಮಹಮ್ಮದ್ ಶಮಿ ಅವರನ್ನು, ಅದೂ ಅವರು ಮುಸ್ಲಿಂ ಎಂಬ ಕಾರಣಕ್ಕೆ . ಆದರೆ ಭಾರತದ ಆರೋಗ್ಯಪೂರ್ಣ ಮನಸ್ಸುಗಳು ಶಮಿ ಅವರ ಬೆಂಬಲಕ್ಕೆ ನಿಂತವು, ಸಚಿನ್ ತೆಂಡೂಲ್ಕರ್ ಅವರಿಂದ ರಾಹುಲ್ ಗಾಂಧಿ ಅವರ ವರೆಗೆ ಎಲ್ಲರೂ ಶಮಿಗೆ ಬೆಂಬಲ ಸೂಚಿದರು, ಆದ್ರೆ ಈ ಕೋಮುವಾದಿ ಕ್ರಿಮಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ವಿಷ ಕಾರುವುದನ್ನು ನಿಲ್ಲಿಸಲಿಲ್ಲ.
ಈ ಸ್ಥಿತಿಯಲ್ಲಿ ಪಾಕಿಸ್ಥಾನದ ಒಪನರ್ ರಿಜ್ವಾನ್ ಶಮಿ ಅವರಿಗೆ ಬೆಂಬಲ ಸೂಚಿಸಿ ಹೇಳಿಕೆ ನೀಡಿದರು.. ಶಮಿ ವಿಶ್ವದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರು ಎಂದೂ ಶ್ಲಾಘಿಸಿದರು.ಪಾಕಿಸ್ಥಾನದ ಮೂರ್ಖ ಗೃಹ ಸಚಿವ ಪಾಕಿಸ್ಥಾನದ ವಿಜಯ ಇಸ್ಲಾಂ ಜಯ ಎಂದು ಹೇಳಿಕೆ ನೀಡಿ ಎಲ್ಲರಿಂದಲೂ ಉಗಿಸಿಕೊಂಡರು,. ಪಾಕಿಸ್ಥಾನದ ಮಾಧ್ಯಮಗಳು ಗೃಹ ಸಚಿವರಿಗೆ ಉಗಿದವು,, ಹಾಗೆ ಭಾರತದ ನಾಯಕ ವಿರಾಟ್ ಕೋಹ್ಲಿ ಮತ್ತು ಮಹೇಂದ್ರ ಸಿಂಗ್ ದೋನಿ ಅವರನ್ನು ಇಡೀ ಪಾಕಿಸ್ಥಾನ ದ ಮಾಧ್ಯಮ ಕೊಂಡಾಡಿತು,
ಪಾಕಿಸ್ಥಾನದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮೀರ್ ಭಾರತದ ಕ್ರೀಡಾ ಮನೋಭಾವನೆ ನಮಗೆಲ್ಲ ಆದರ್ಶ ಎಂದರು.. ಮುಂಬರುವ ದಿನಗಳಲ್ಲಿ ಈ ಕ್ರೀಡಾ ಮನೋಭಾವನೆಯಿಂದಲೇ ಭಾರತ ಮತ್ತೆ ಪುಟಿದೇಳುತ್ತದೆ ಎಂದರು. ಭಾರತ ತಂಡವನ್ನು ಮನಸಾರೆ ಶ್ಲಾಘಿಸಿದರು,, ನಮ್ಮಲ್ಲಿ ಯಾರದರೂ ಪಾಕಿಸ್ಥಾನ ತಂಡವನ್ನು ಶ್ಲಾಘಿಸುವ ಸ್ಥಿತಿ ಇದೆಯೆ ? ಯೋಚಿಸಿ. ಒಂದೊಮ್ಮೆ ಶ್ಲಾಘಿಸಿದರೆ ಅವರಿಗೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗೆ ಅಟ್ಟುವುದು ಗ್ಯಾರಂಟಿ,,
ನನಗೆ ಅನ್ನಿಸುವ ಹಾಗೆ ಪಾಕಿಸ್ಥಾನದ ಆಟಗಾರರು ಅದ್ಬುತವಾಗಿ ಕ್ರಿಕೆಟ್ ಆಡಬಲ್ಲರು. ನಿನ್ನೆ ನ್ಯೂಜಿಲೆಂಡ್ ತಂಡವನ್ನು ಅವರು ಬಗ್ಗು ಬಡಿದರು,, ಇದು ಅವರ ಸತತ ಎರಡನೆಯ ಜಯ. ಗೆಲುವಿನ ಲಯ ತಮಗೆ ದಕ್ಕಿದೆ ಎಂಬುದನ್ನು ತೋರಿಸಿಕೊಟ್ಟ ಪಂದ್ಯ ಅದಾಗಿತ್ತು
ಭಾರತ ಪಾಕಿಸ್ಥಾನದ ಜೊತೆ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬಾರದಿತ್ತು. ಹಾಗೆ ಐ ಪಿ ಎಲ್ ಪಂದ್ಯಗಳಲ್ಲೂ ಅವರಿಗೆ ಅವಕಾಶ ನೀಡಬೇಕಿತ್ತು. ಹಾಗೆ ಮಾಡಿದ್ದರೆ ಪಾಕಿಸ್ಥಾನದ ಆಟಗಾರರ ಗುಣ ದೌರ್ಬಲ್ಯಗಳು ನಮಗೆ ತಿಳಿಯುತ್ತಿದ್ದವು,, ಹಾಗಾಗಿದ್ದರೆ ವಿಶ್ವದ ಮಹತ್ವದ ಟೂರ್ನಿಗಳಲ್ಲಿ ಪಾಕಿಸ್ಥಾನವನ್ನ್ಯು ಸೋಲಿಸುವುದು ನಮಗೆ ಸುಲಭವಾಗುತ್ತಿತ್ತು,
ಈಗ ವಿಶ್ವ ಕ್ರಿಕೆಟ್ ಅನ್ನು ಭಾರತ ಹಣ ಬಲದಿಂದ ಆಳುತ್ತಿದೆ, ಆದರೆ ಪಂದ್ಯದ ಗೆಲುವಿಗೆ ಹಣ ಬಲ ಮಾತ್ರ ಸಾಲದು. ಗೆಲ್ಲಲು ಛಲ ಬೇಕು,, ಈ ಛಲ ಕೂಡ ಹಣದಿಂದ ಮಾತ್ರ ಬರುವುದಿಲ್ಲ. ಹಸಿವು ಗೆಲ್ಲುವ ಛಲ ನೀಡುತ್ತದೆ, ಭಾರತದ ಆಟಗಾರರು ಹೊಟ್ಟೆತುಂಬಿದವರು. ಹೀಗಾಗಿ ಗೆಲ್ಲುವ ಛಲ ಕಡಿಮೆ ಆಗಿದೆ.. ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಮತ್ತು ಆಟಗಾರರು ಬಡತನದಲ್ಲಿದ್ದಾರೆ. ಅದೇ ಅವರಿಗೆ ಗೆಲ್ಲುವ ಛಲವನ್ನು ನೀಡಿದೆ. ಗೆಲ್ಲಿವ ಚಾಕಚಕ್ಯತೆಯನ್ನು ಕಲಿಸಿದೆ,, ಹಸಿವು ಕಲಿಸುವ ಪಾಠ ಗೆಲುವಿನದ್ದೇ ಆಗಿರುತ್ತದೆ,
ಹೊಟ್ಟೆ ತುಂಬಿದ ಭಾರತದ ಕ್ರಿಕೆಟ್ ಮಂಡಳಿ ಈ ಬಗ್ಗೆ ಯೋಚಿಸಲಿ..ನಮ್ಮ ಆಟಗಾರರು ಈ ಸೋಲಿನಿಂದ ಪಾಠ ಕಲಿಯಲಿ
ಶಶಿಧರ್ ಭಟ್
Sheela Bhat, Tejasvi Naik and 14 others
                                 

 ಉಪ ಚುನಾವಣೆ ವೈಯಕ್ತಿಕ ಜಗಳ ಮತ್ತು ಕುಸಿದ ನೈತಿಕತೆ,,,




ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಭರದಿಂದ ನಡೆಯುತ್ತಿದೆ,,, ಮೂರು ರಾಜಕೀಯ ಪಕ್ಷಗಳು ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ,,  ಎರಡೂ ಕ್ಷೇತ್ರಗಳಲ್ಲಿ ಹೋರಾಟ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅನ್ನಿಸಿದರೂ ಜೆಡಿಎಸ್ ಪಕ್ಷವನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಎಂದಿನಂತೆ ಜೆಡಿಎಸ್ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದರೂ ಫಲಿತಾಂಶವನ್ನು ಬದಲಿಸುವ ಶಕ್ತಿ ಜೆಡಿಎಸ್ ಗೆ ಇದ್ದೇ ಇದೇ,,

ಚುನಾವಣಾ ಪ್ರಚಾರ ಕಣದಲ್ಲಿ ರಾಜ್ಯದ ಘಟಾನುಗಟಿ ನಾಯಕರು ಕಾಣಿಸಿಕೊಂಡಿದ್ದಾರೆ,, ತಮ್ಮ ಮಾತಿನ ವರಸೆಯನ್ನು ಬಳಸಿ ಮತದಾರರನ್ನು ಗೆಲ್ಲುವ ಯತ್ನವೂ ನಡೆಯುತ್ತಿದೆ,, ಅಧಿಕಾರರೂಡ ಬಿಜೆಪಿ ಪಕ್ಷದ ಪರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅವರ ಸಂಪುಟದ ಸಹೋದ್ಯೋಗಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ತಾರಾ ಪ್ರಚಾರಕರು. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಮುಖ ಪ್ರಚಾರಕರು. ಹಾಗೆ ಜೆಡಿಎಸ್ ಪಕ್ಷದ ಪರವಾಗಿ ಇಬ್ಬರೇ ಪ್ರಮುಖರು ಅವರು ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್. ಡಿ. ದೇವೇಗೌಡ.. ಉಳಿದವರು ಲೆಕ್ಕಕ್ಕಿಲ್ಲ...

ಸಾಧಾರಣವಾಗಿ ಎಲ್ಲ ಚುನಾವಣೆಯಲ್ಲೂ ಯಾವುದಾದರೊಂದು ಇಷ್ಯು ಅಥವಾ ವಿಚಾರ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ, ಅದು ಯಾವುದು ಎಂಬುದು ಮೇಲ್ನೋಟಕ್ಕೆ ಗೋಚರವಾಗುವುದಿಲ್ಲ. ಇಂತಹ ಇಷ್ಯೂ ಅಥವಾ ವಿಚಾರ ಮತ ಕ್ಷೇತ್ರದಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿರುತ್ತದೆ,, ಅದು ಸಾಮಾನ್ಯ ಮತದಾರನಿಗೆ, ರಾಜಕಾರಣಿಗಳಿಗೆ ಕಾಣುವುದಿಲ್ಲ.  ಆದರೆ ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲ ಮತದಾರರೂ ಒಂದೇ ರೀತಿ ಯೋಚಿಸುತ್ತಾರೆ. ಮತ್ತು ಒಂದೇ ರೀತಿ ಮತದಾನ ಮಾಡುತ್ತಾರೆ,

ಹೀಗೆ ಪ್ರಮುಖವಾದ ವಿಚಾರವೊಂದು ಎಮರ್ಜ್ ಅದಾಗ ಜಾತಿವಾದ, ಕೋಮುವಾದ, ಹಣ ಹಂಚಿಕೆ ಯಾವುದೂ ಮತದಾರರ ಮೇಲೆ ಪರಿಣಾಮ ಬೀರುವುದಿಲ್ಲ,, ಅದನ್ನೆಲ್ಲ ಮೀರಿ ಮತದಾರ ತನ್ನ ರ್ತೀರ್ಪು ನೀಡುತ್ತಾನೆ.. ಆದರೆ ಕೆಲವೊಮ್ಮೆ ಯಾವುದೇ ವಿಷಯ ವಿಚಾರ ಚುನಾವಣಾ ವಿಚಾರವಾಗಿ ಹೊರಹೊಮ್ಮದಿದ್ದಾಗ ಜಾತಿವಾದ ಕೋಮುವಾದವೇ ಪ್ರಮುಖ ಪಾತ್ರ ಒಹಿಸುತ್ತವೆ,,ಭಾರತದ ಚುನಾವಣಾ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದನ್ನು ಗುರುತಿಸಬಹುದು.. 

ಇನ್ನು ಸಾರ್ವತಿಕ ಚುನಾವಣೆಗೂ ಉಪಚುನಾವಣೆಗೂ ವ್ಯತ್ಯಾಸವಿದೆ. ಹಾಗೆ ಲೋಕಸಭಾ ಚುನಾವಣೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗೂ ವ್ಯತ್ಯಾಸವಿದೆ, ಸಾಧಾರವಾಗಿ ಉಪಚುನಾವಣೆಗಳಲ್ಲಿ ಬಹುಮುಖ್ಯವಾದ ವಿಷಯ ವಿಚಾರ ಪ್ರಮುಖ ವಿಷಯವಾಗಿ ಎಮರ್ಜ್ ಆಗುವ ಸಂದರ್ಭ ಕಡಿಮೆ. ಹೀಗಾಗಿ ಸ್ಥಳೀಯ ವಿಚಾರಗಳು ಪ್ರಭಾವ ಬೀರುವ ಸಾಧ್ಯತೆ ಹೆಚ್ಚು ಕಾಣುತ್ತದೆ. ಜೊತೆಗೆ ಅಧಿಕಾರದಲ್ಲಿ ಇರುವ ಪಕ್ಷ ತನ್ನ ಅಧಿಕಾರವನ್ನು ಬಳಸಿಕೊಂಡು ಜಯಗಳಿಸುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ,

ಈಗಿನ ಉಪ ಚುನಾವಣೆಯ ವಿಚಾರಕ್ಕೆ ಬರೋಣ.. ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಈ ಚುನಾವಣೆಯನ್ನು ಗೆಲ್ಲಬೇಕಾದ ಅನಿವಾರ್ಯತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗಿದೆ. ಜೆಡಿಎಸ್ ಪಕ್ಷಕ್ಕೆ ಅಂತಹದೇನೂ ಇಲ್ಲ.. ಈ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿದ್ದರಿಂದ ಈ ಫಲಿತಾಂಶ ಬಂತು ಎಂಬುದು ಆ ಪಕ್ಷಕ್ಕೆ ಸಾಕು. ಅದನ್ನ್ ಇಟ್ಟುಕೊಂಡು ಆ ಪಕ್ಷದ ನಾಯಕರು ಆಟ ಆಡಬಲ್ಲರು..

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಾಣುತ್ತಿದೆ. ಇದೇ ಪಕ್ಷ ಗೆಲ್ಲುತ್ತದೆ ಎಂದು ಹೇಳುವ ಸ್ಥಿತಿ ಇಲ್ಲ ಎಂಬುದು ಬಿಜೆಪಿ ಹಿರಿಯ ನಾಯಕರೊಬ್ಬರ ಹೇಳಿಕೆ..ಅವರ ಪ್ರಕಾರ ಈ ಚುನಾವಣೆಯಲ್ಲಿ ಮೋದಿ ಅವರ ವರ್ಚಸ್ಸು ಪ್ರಭಾವ ಬೀರಲಾರದು. ಇದು ಬಿಜೆಪಿ ಮೈನಸ್ ಪೈಂಟ್. ಜೊತೆಗೆ ಏನೇ ಇರಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರೆ ಆಗಿನ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. 

ಈ ಮಾತನ್ನು ಕಾಂಗ್ರೆಸ್ ನಾಯಕರು ಒಪ್ಪುತ್ತಾರೆ. ಯಡಿಯೂರಪ್ಪನವರನ್ನು ಬದಲಿಸಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಮಗೆ ಪ್ಲಸ್ ಪಾಯಿಂಟ್ ಎನ್ನುತ್ತಾಎರ್ರೆ ಕಾಂಗ್ರೆಸ್ ನಾಯಕರು,,

ಜೊತೆಗೆ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನ ತಮಗೆ ಬೆಂಬಲ ನೀಡಬಹುದು ಎನ್ನುವ ನಂಬಿಕೆಯೂ ಕಾಂಗ್ರೆಸ್ ನಾಯಕರಿಗಿದೆ,,

ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಚಿಂತನಾ ಲಹರಿಯಲ್ಲಿ ಸಾಮಾನ್ಯ ಅಂಶವೊಂದಿದೆ.. ಅದು ಈ ಚುನಾವಣಾ ಫಲಿತಾಂಶ ಹೀಗೆ ಆಗುತ್ತಿದೆ ಎಂಬ ನಂಬಿಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸೇರಿದಂತೆ ಯಾವ ನಾಯಕರಿಗೂ ಇಲ್ಲ. ಎಲ್ಲ ನಾಯಕರು ಖಾಸಗಿಯಾಗಿ ಮಾತನಾಡುವಾಗ ಕಷ್ಟ ಇದೇ ಎಂಬ ಮಾತನ್ನು ಆಡುತ್ತಾರೆ.

ಇಂತಹ ಸ್ಥಿತಿಯಲ್ಲಿ ಭಯಗ್ರಸ್ಥರಾದ ನಾಯಕರು ಪರಸ್ಪರ ವೈಯಕ್ತಿಕ ನಿಂಧನೆಯಲ್ಲಿ ತೊಡಗಿದ್ದಾರೆ.  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ನಡುವಿನ ಜಗಳ ಇವತ್ತಿನ ರಾಜಕೀಯ ಬದುಕು ಎಂತಹ ಹೀನಾಯ ಸ್ಥಿತಿಯನ್ನು ತಲುಪಿದೆ ಎಂಬುದಕ್ಕೆ ಧ್ಯೂತಕವಾಗಿದೆ. ಈ ಇಬ್ಬರು ನಾಯಕರಿಗೆ ರಾಜ್ಯದ ಸಮಸ್ಯೆಗಿಂತ ವ್ಯಕ್ತಿಗತ ಜಗಳವೇ ಮುಖ್ಯವಾಗಿದೆ,

ಇನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ನಡುವಿನ ಕಂಬಳಿ ಜಗಳ ಕೂಡ ಇದೇ ರೀತಿಯ ಜಗಳ..ದೇಶದಲ್ಲಿ ಕೋಮುವಾದ ಹೆಡೆ ಬಿಚ್ಚಿ ನರ್ತಿಸುತ್ತಿದೆ.. ನಾಗರಿಕ ಸ್ವಾತಂತ್ರ್ಯದ ಹರಣ ನಡೆಯುತ್ತಿದೆ.. ಬೆಲೆ ಏರಿಕೆಯಿಂದ ಜನ ಬೀದಿಗೆರ್ ಬಿದ್ದಿದ್ದಾರೆ. ಕೃಷಿ ಕ್ಷೇತ್ರ ಮಹತ್ವ ಕಳೆದುಕೊಳ್ಳುತ್ತಿದೆ. ಕಾರ್ಪುರೇಟ್ ಜಗತ್ತಿಗೆ ಎಲ್ಲವನ್ನೂ ಮಾರಾಟ ಮಾಡಲಾಗುತ್ತಿದೆ.. ಸರ್ಕಾರಿ ಆಸ್ತಿಯ ಪರಭಾರೆ ಮಾಡಲಾಗುತ್ತಿದೆ.. ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ.. ದೇಶ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ.

ಇದ್ಯಾವುದೂ ಕೂಡ ಈ ಕಚ್ಚಾಟದ ನಾಯಕರಿಗೆ ಮುಖ್ಯ ಅನ್ನಿಸುತ್ತಲೇ ಇಲ್ಲ.

ಈ ನಡುವೆ ಜೆಡಿಎಸ್ ಮತ್ತೆ ಪ್ರಾದೇಶಿಕ ರಾಜಕಾರಣ ಮತ್ತು ಅಲ್ಪಸಂಖ್ಯಾತ ಮತಗಳ ಕ್ರೋಡಿಕರಣಕ್ಕೆ ಹೊರಟಿದೆ.. ಜೊತೆಗೆ ಬಿಜೆಪಿ ಗೆದ್ದರೆ ಗೆಲ್ಲಲಿ, ಸಿದ್ದರಾಮಯ್ಯನವರಿಗೆ ಮಹತ್ವ ಇರುವ ಕಾಂಗ್ರೆಸ್ ಗೆಲ್ಲಕೂಡದು ಎಂಬ ತೀರ್ಮಾನಕ್ಕೆ ಬಂದ ಜೆಡಿಎಸ್ ಭಸ್ಮಾಸುರ ರಾಜಕಾರಣ ಮಾಡುತ್ತಿದೆ,, ಆರ್ ಎಸ್ ಎಸ್ ಅನ್ನು ಬಲವಾಗಿ ಟೀಕಿಸುತ್ತ ಮುಸ್ಲೀಂ ಮತವನ್ನು ಆದಷ್ಟು ಪಡೆಯೋಣ ಎಂದು ತೀರ್ಮಾನಿಸಿರುವ ಕುಮಾರಸ್ವಾಮಿ ಮತ್ತಿ ಎಚ್,ಡಿ. ದೇವೇಗೌಡರು ಬೆಡ್ ರೂಮಿನಲ್ಲಿ ಈಗ ದೊಡ್ಡ ಗಣಾಚಾರಿಯಾಗಲು ಹೊರಟಿರುವ ಮುಖ್ಯಮಂತ್ರಿ ಬೊಮ್ಮಾಯಿಯವನ್ನು ಭೇಟಿ ಮಾಡಿ ಅವರಿಗೆ ಆಶೀರ್ವಾದ ಮಾಡುತ್ತಾರೆ. ನಮ್ಮಿಂದ ನಿಮಗೆ ಯಾವುದೇ ತೊಂದರೆ ಇರುವುದಿಲ್ಲ ಎಂಬ ಆಶ್ವಾಸನೆಯನ್ನು ನೀಡುತ್ತಾರೆ,,

ಈಗ ಆರ್ ಎಸ್ ಎಸ್ ಕಾರ್ಯಕರ್ತರಾಗಿ ಬದಲಾಗುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಅಪ್ಪ ಅಮ್ಮ ಇಲ್ಲ, ನೀವೇ ಅಪ್ಪ ಅಮ್ಮ ಎಂದು ದೇವೇಗೌಡರ ಕಾಲಿಗೆ ಬೀಳುತ್ತಾರೆ, ಈ ಸಂದರ್ಭದಲ್ಲಿ ದೇವೇಗೌಡರು ತಮ್ಮ ತಂದೆ ಎಸ್ ಆರ್ ಬೊಮ್ಮಾಯಿ ಅವರ ಸರ್ಕಾರವನ್ನೂ ಎಂಟು ತಿಂಗಳ ಒಳಗೆ ಉರುಳಿಸಿದ್ದು ಬೊಮ್ಮಾಯಿ ಅವರಿಗೆ ನೆನಪಿನಲ್ಲಿ ಇರುವುದಿಲ್ಲ...

ಇದು ಇವತ್ತಿನ ರಾಜಕಾರಣದ ಮಾಧರಿ ಎಂದು ನನಗೆ ಅನ್ನಿಸುತ್ತದೆ....

ಇಲ್ಲಿ ಎಲ್ಲರೂ ಮುಖವಾಡ ಧರಿಸಿದ್ದಾರೆ.. ಇವರ ನಿಜವಾದ ಮುಖ ದರ್ಶನ ಯಾವಾಗ ಆಗುತ್ತದೇಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇವತ್ತಿನ ರಾಜಕಾರಣ ಮೌಲಿಕತೆಯನ್ನು ಕಳೆದುಕೊಂಡಿದೆ, ಎಲ್ಲರೂ ಅಂಗಡಿ ತೆಗೆದು ಕುಳಿತ ವ್ಯಾಪಾರಿಗಳಂತೆ ಕಾಣುತ್ತಾರೆ..


ಶಶಿಧರ್ ಭಟ್

Friday, May 7, 2021

send him to jail

ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರು ಕೋವಿಡ್ ವಾರ್ ರೂಂ ಮೇಲೆ ದಾಳಿ ಹಿಂದಿನ ಷಡ್ಯಂತ್ರ ಬಯಲು..
೧೭ ಮುಸ್ಲಿಂ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ತಮ್ಮವರನ್ನು ತೆಗೆದುಕೊಳ್ಳಲು ಒತ್ತಡ. ಅಧಿಕಾರಿಗಳು ನಿರಾಕರಿಸಿದಾಗ ದಾಳಿಯ ನಾಟಕ..
ವಾರ್ ರೂಮ್ ನಿಯಂತ್ರಿಸಲು ಶಾಸಕರ ಯತ್ನ.. ತಮ್ಮ ಚೇಲಾವನ್ನು ಅಲ್ಲಿ ನಿಯೋಜಿಸಿದ ಶಾಸಕರು. ಅವನನ್ನು ಹೊರದಬ್ಬಿದ ಅಧಿಕಾರಿಗಳು.
ಇದಕ್ಕಾಗಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ..
ಇವರ ಮೇಲೆ ನ್ಯಾಯಾಲಯ ಪ್ರಕರಣ ದಾಖಲಿಸಿಕೊಳ್ಳಲಿ.. ಇಲ್ಲ ಯಾರಾದರೂ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಿ..
ಇವರನ್ನು ಜೈಲಿಗೆ ಕಳುಹಿಸಿ...
ಇದು ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

Wednesday, March 17, 2021

Swamy and friends

ಪೇಜಾವರ ಸ್ವಾಮಿಗಳ ಹೇಳಿಕೆ; ಬ್ರಾಹ್ಮಣ ಹೆಣ್ಣು ಮಕ್ಕಳು ಬೇರೆ ಜಾತಿಯವರನ್ನು ಮದುವೆಯಾಗುವಂತಿಲ್ಲ !
ಇದನ್ನು ತಡೆಯಲು ಮಾತೃ ಮಂಡಳಿ.
ಸ್ವಾಮೀಜಿಗಳ ಸಂವಿಧಾನ ವಿರೋಧಿ ಹೇಳಿಕೆ.. ಬ್ರಾಹ್ಮಣ ಹೆಣ್ಣು ಮಕ್ಕಳ ಸ್ವಾತಂತ್ರ್ಯದ ಮೇಲೆ ಹಲ್ಲೆ.
ಕೃಷ್ಣ ಯಾವ ಜಾತಿಯವ ? ಕೃಷ್ಣ ಯಾವ ಜಾತಿಯವರನ್ನು ಪ್ರೀತಿಸಿದ..?
ಕೃಷ್ಣನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದವರು ಕೃಷ್ಣನನ್ನು ಪೂಜಿಸಕೂಡದು..
ಸುದ್ದಿ ಸಂವಾದ
ಶಶಿಧರ್ ಭಟ್ ಮತ್ತು ವೆಂಕಟ್ರಮಣ ಗೌಡ



Monday, March 15, 2021

 ಸಾಮಾಜಿಕ ಬದುಕು, ನೈತಿಕತೆ ಮತ್ತು ಲೈಂಗಿಕ ಹಗರಣಗಳು


ರಮೇಶ್ ಜಾರಕೀಹೊಳಿ ಅವರ ಸಿಡಿ ಹಗರಣ ಹಲವು ಮುಖ್ಯ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ... ರಾಜಕೀಯ ಮತ್ತು ನೈತಿಕತೆಯ ಪ್ರಶ್ನೆ ಇದರಲ್ಲಿ ಬಹುಮುಖ್ಯವಾದುದು. ಸಾರ್ವಜನಿಕ ಬದುಕಿನಲ್ಲಿ ಇರುವವರು ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು ಎಂದು ಜನ ಅಪೇಕ್ಷೆಪಡುವುದು ತುಂಬಾ ಸಹಜ.. ಹಾಗೆ ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಖಾಸಗಿ ಬದುಕು ಎನ್ನುವುದು ಇರುವುದಿಲ್ಲ. ಅವರ ಖಾಸಗಿ ಬದುಕು ಸಾಮಾಜಿಕ ಆಯಾಮವನ್ನು ಪಡೆದೇ ಪಡೆಯುತ್ತಿದೆ.. ಹೀಗಾಗಿ ರಮೇಶ್ ಜಾರಕೀಹೊಳಿ ಅವರ ಮೇಲಿನ ಆರೋಪವನ್ನು ಈ ಹಿನ್ನೆಲೆಯಲ್ಲಿ ನಾವು ನೋಡಬೇಕಾಗುತ್ತದೆ, ಆದರೆ ಈಗ ಈ  ವಿಚಾರ ಸಂಪೂರ್ಣವಾಗಿ ದಾರಿ ತಪ್ಪಿದೆ,, ರಾಜಕಾರಣದಲ್ಲಿ ನೈತಿಕ ದಿವಾಳಿತನದ ಕುರಿತು ಚರ್ಚೆ ನಡೆಯಬೇಕಾಗಿತ್ತು. ಆದರೆ ಈಗ ಸಿಡಿ ಮಾಡಿದವರು ಯಾರು ಎಂಬ ಬಗ್ಗೆಯೇ ತನಿಖಾ ವರದಿಗಳು ಬರಲು ಪ್ರಾರಂಭಿಸಿವೆ.

ಹಾಗೆ ನೋಡಿದರೆ ಇಂತಹ ಆರೋಪಗಳಿಗೆ ಒಳಗಾದ ಮೊದಲ ವ್ಯಕ್ತಿ ಜಾರಕೀಹೊಳಿ ಅಲ್ಲ. ಅವರು , ಅವರು ಕೊನೆಯ ವ್ಯಕ್ತಿಯೂ ಆಗಲಾರರು. ಅಧಿಕಾರ  ಹಣ ಬರುವಂತೆ ಮಾಡುತ್ತದೆ ಹಣ ಅನ್ಯ ಮಾರ್ಗಗಳ ಮೂಲಕ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತದೆ,, ಲೈಂಗಿಕತೆ ನಮ್ಮ ಅವಶ್ಯಕತೆಗಳಲ್ಲಿ  ಒಂದಾದರೂ ಈ ಅವಶ್ಯಕತೆಯನ್ನು ನಾವು ಹೇಗೆ ಪೂರೈಸಿಕೊಳ್ಳುತ್ತೇವೆ ಎನ್ನುವುದು ನೈತಿಕತೆಯ ನಿಕಷಕ್ಕೆ ಒಳಗಾಗಲೇ ಬೇಕಾಗುತ್ತದೆ.

ಹಾಗೆ ಒಪ್ಪಿತ ಲೈಂಗಿಕತೆಯನ್ನು ಯಾರೂ ವಿರೋಧಿಸುವುದು ಸಾಧ್ಯವಿಲ್ಲ. ಕಾನೂನು ಸಹ ಒಪ್ಪಿತ ಲೈಂಗಿಕತೆಗೆ ಪುರಸ್ಕಾರ ನೀಡುತ್ತದೆ. ಆದರೆ ಒಂದು ಗಂಡು ಮತ್ತು ಹೆಣ್ಣು ನಡೆಸುವ ಒಪ್ಪಿತ ಲೈಂಗಿಕತೆಯಲ್ಲಿ ಅಧಿಕಾರ ಯಾವ ರೀತಿ ಪ್ರಭಾವ ಭೀರಿದೆ ? ಅಧಿಕಾರನ್ನು ಬಳಸಿಕೊಂಡು ಲೈಂಗಿಕ ಚಟುವಟಿಕೆಗೆ ಭಾಗಿದಾರರನ್ನಾಗಿ ಮಾಡಿಕೊಂಡರೆ ಅದು ಅಪರಾಧ, ರಮೇಶ ಜಾರಕೀಹೊಳಿ ಪ್ರಕರಣದಲ್ಲಿ ಈಗಾಗಲೇ ಆರೋಪಿಸಿದಂತೆ ಕೆಲಸ ಕೊಡಿಸುವ ಭರವಸೆ ನೀಡಿ ಆಕೆಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎನ್ನುವುದು. ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ, 

ಕಾನೂನು ಪ್ರಕಾರ ನಡೆಸುವ ಲೈಂಗಿಕ ಚಟುವಟಿಕೆಗೂ ಕಾನೂನು ವಿರುದ್ಧವಾಗಿ ನಡೆಸುವ ಲೈಂಗಿಕ ಚಟುವಟಿಕೆಗೆ ಇರುವ ಈ ವ್ಯತ್ಯಾಸ ಒಂದೆಡೆಯಾದರೆ, ಗಂಡು ಹೆಣ್ಣಿನ ಸೂಕ್ಷ್ಮ ಸಂಬಂಧವನ್ನು ಅಶ್ಲೀಲತೆಯ ಹಂತಕ್ಕೆ ತೆಗೆದುಕೊಂಡೂ ಹೋಗುವುದು ಮತ್ತು ಅದನ್ನು ಚೀತ್ರಿಕರಿಸುವುದು ಕೂಡ ಸಾಮಾಜಿಕ ಸ್ವಾಸ್ಠ್ಯಕ್ಕೆ ಪೂರಕವಾದುದಲ್ಲ.

ಈ ಹಿನ್ನೆಲೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ರಾಜ್ಯದಲ್ಲಿನ ರಾಜಕಾರಣ ಮತ್ತು ಲೈಂಗಿಕ ಹಗರಣದ ಬಹುಮುಖ್ಯ ವಿಚಾರವನ್ಜು ನಾವು ನೋಡಬಹುದು,

ರಾಜ್ಯದಲ್ಲಿ ನಡೆದ  ರಾಜಕೀಯ ಲೈಂಗಿಕ ಹಗರಣಗಳನ್ನು ನಾವು ನೋಡುವಾಗ ನಮಗೆ ದೊರಕುವ ಮೊದಲ ಹಗರಣ ನಡೆದಿದ್ದು ೧೯೭೩ ರಲ್ಲಿ.. ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಆರಸು..ಅವರ ಸಂಪುಟದಲ್ಲಿ ಗೃಹ ರಾಜ್ಯ ಸಚಿವರಾಗಿದ್ದವರು ಆರ್. ಡಿ. ಕಿತ್ತೂರ್.  ಅವರ ಮೇಲಿದ್ದ ಆರೋಪ ಕಾಣೆಯಾಗಿದ್ದ ಹೆಣ್ಣು ಮಗಳೊಬ್ಬಳು ಸಚಿವ ಕಿತ್ತೂರ್ ಅವರ ಮನೆಯಲ್ಲಿ ಇದ್ದರು ಎಂಬುದು ಆರೋಪ.. ಆರೋಪದ ಕಾರಣದಿಂದ ಕಿತ್ತೂರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಹುಶಃ ಲೈಂಗಿಕ ಹಗರಣದ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಸಚಿವರೂ ಅವರೇ,,, ಬಹಿರಂಗವಾದ ಮೊದಲ ಪ್ರಕರಣವೂ ಇದೇ.

ಇವತ್ತಿನ ಸಂದರ್ಭದಲ್ಲಿ ಈ ಹಗರಣವನ್ನು ನೋಡುವಾಗ ಇದೊಂದು ದೊಡ್ಡ ಹಗರಣ ಎಂದು ಅನ್ನಿಸುವುದಿಲ್ಲ. ಆಕೆಯ ಮನೆಯಲ್ಲಿ ಇದ್ದಳು ಎನ್ನಲಾದ ಆ ಹೆಣ್ಣು ಮಗಳ ಜೊತೆ ಕಿತ್ತೂರ್ ಬೇರೆ ರೀತಿ ಸಂಬಂಧ ಹೊಂದಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ಇರಲಿಲ್ಲ.. ಆಕೆ ಸಚಿವರ ಮನೆಯಲ್ಲಿ ಇದ್ದರು ಅಷ್ಟೇ..  ಆ ಸಂದರ್ಭದಲ್ಲಿ ಬಂದ ವರದಿಗಳ ಪ್ರಕಾರ ಈ ಕತೆ ತುಂಬಾ ಸಿನಿಮೀಯವೂ ರೋಚಕವೂ ಆಗಿದೆ..

ಈ ಹೆಣ್ಣುಮಗಳು ಅದೊಂದು ದಿನ ಭಾರಿ ಮಳೆ ಬೀಳುತ್ತಿದ್ದ ಸಂದರ್ಭದಲ್ಲಿ ಸಚಿವರ ಅಧಿಕೃತ ನಿವಾಸದ ಕಂಪೌಂಡ್  ಒಳಗಿನ ಮರದ ಕೆಳಗೆ ನಿಂತಿರುತ್ತಾಳೆ..ಸಚಿವರು ಆಕೆಯನ್ನು ಮನೆಯ ಒಳಗೆ ಕರೆಯುತ್ತಾರೆ. ಇಲ್ಲಿಂದ ಕಥೆ ಬೇರೆ ಬೇರೆ ತಿರುವುಗಳನ್ನು ಪಡೆದು ಸಚಿವ ಕಿತ್ತೂರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ..೧೯೭೩ ರ ಸಂದರ್ಭದಲ್ಲಿ ಇದ್ದ ನೈತಿಕತೆಯ ವ್ಯಾಖ್ಯೆ ಈಗ ಸಂಪೂರ್ಣವಾಗಿ ಬದಲಾಗಿದೆ. ಆ ಸಂದರ್ಭದಲ್ಲಿ ಸಿಡಿಯ ಸಾಕ್ಷ್ಯ ಇಲ್ಲದಿದ್ದರೂ ಕೇವಲ ಆರೋಪದ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಿದರು. ಈಗ ಸಿಡಿ ಇದ್ದರೂ ಅದು ನಕಲಿ ಎಂದು ಆರೋಪಿಸಬಹುದು.. ಇದು ನಕಲಿ ಸಿಡಿ ಎಂದು ಮಾಧ್ಯಮಗಳು ವಾದ ಮಾಡಬಹುದು. ಸಚಿವನಾದವನು ತನ್ನ ಸ್ಥಾನದಲ್ಲಿ ಉಳಿದುಕೊಳ್ಳಲು ಯತ್ನ ನಡೆಸಬಹುದು.

ಇದಾದ ನಂತರ ರಾಜಕಾರಣಿಗಳ ಲೈಂಗಿಕ ಹಗರಣ ಬಹಳ ವರ್ಷಗಳ ಕಾಲ ವರದಿಯಾಗಲಿಲ್ಲ.. ೨೦೦೭ ರಲ್ಲಿ ಶಾಸಕ ರೇಣುಕಾಚಾರ್ಯ ಅವರ ಲೈಂಗಿಕ ಹಗರಣ ವರದಿಯಾಯಿತು. ಸ್ವಲ್ಪ ಕಾಲ ಬಾರಿ ಸದ್ದು ಮಾಡಿತು. ನರ್ಸ್ ಒಬ್ಬರ ಜೊತೆ ರೇಣುಕಾಚಾರ್ಯ ಚುಂಬನದಲ್ಲಿ ತೊಡಗಿರುವ ದೃಶ್ಯಗಳು ಬಹಿರಂಗಗೊಂಡವು.  ಇದು ಭಾರತೀಯ ಜನತಾ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿತು. ರಾಜಕಾರಣಿಗಳ ನೈತಿಕತೆಯ ಪ್ರಶ್ನೆ ಮತ್ತೆ ಚರ್ಚೆಗೆ ಕಾರಣವಾಯಿತು.. ಸಾರ್ವಜನಿಕ ಬದುಕಿನಲ್ಲಿ ಇರುವವರು ನೈತಿಕತೆಗೆ ಮಹತ್ವ ನೀಡದಿರುವುದು ಸಾಮಾಜಿಕ ವಲಯದ  ಚರ್ಚೆಗೆ ಕಾರಣವಾಯಿತು. ಈ ಆರೋಪದ ನಡುವೆಯೂ ರೇಣುಕಾಚಾರ್ಯ ೨೦೦೮ ರಲ್ಲಿ ಸಚಿವರಾದರು.. ಅವರ ಮೇಲೆ ಬಂದಿದ್ದ  ಅನೈತಿಕತ ಸಂಬಂಧದ ಪ್ರಶ್ನೆಯನ್ನು ನೇಪತ್ಯಕ್ಕೆ ಸರಿಸಲಾಯಿತು.

೨೦೦೭ ರ ನಂತರ  ಅನೈತಿಕ ಲೈಂಗಿಕತೆ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರತೊಡಗಿದವು. ಇದಕ್ಕೆ ಮಾಧ್ಯಮಗಳು ರಾಜಕಾರಣಿಗಳ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಮಹತ್ವ ನೀಡಲು ಪ್ರಾರಂಭಿಸಿದ್ದು ಒಂದು ಕಾರಣವಾದರೆ, ಟ್ಯಾಬಲೈಡ್ ಪತ್ರಿಕೋದ್ಯಮ ಮುಖ್ಯವಾಹಿನಿಗೆ ಬಂದಿದ್ದೂ ಕಾರಣ ಇರಬಹುದು. ಒಟ್ಟಿನಲ್ಲಿ ರಾಜಕಾರಣಿಗಳು ತುಂಬು ಎಚ್ಚರದಿಂದ ಇರಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ನಿಜ. ಏನೇ ಇರಲಿ ೨೦೧೦ ರಲ್ಲಿ ಇನ್ನೊಬ್ಬ ಸಚಿವರು ಲೈಂಗಿಕ ಹಗರಣಕ್ಕೆ ಸಿಲುಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರು ಯಡಿಯೂರಪ್ಪ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪ..

ಸ್ನೇಹಿತನ ಹೆಂಡಿತಿಯ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಹೊತ್ತಿದ್ದ ಹರತಾಳು ಹಾಲಪ್ಪ ೨೦೧೭ ರಲ್ಲಿ ಈ ಆರೋಪದಿಂದ ಮುಕ್ತರಾದರು, ಹರತಾಳು ಹಾಲಪ್ಪ ಅವರ ಸ್ನೇಹಿತರೇ ತಮ್ಮ ಹೆಂಡತಿಯ ಜೊತೆ ಹಾಲಪ್ಪ ಅವರ ಸಂಬಂಧವಿದೆ ಎಂದು ಆರೋಪ ಮಾಡಿದ್ದರು.

ಈ ಪ್ರಕರಣ ನಡೆದ ಎರಡೇ ವರ್ಷಗಳಲ್ಲಿ ಬೆಳಕಿಗೆ ಬಂದಿದ್ದು ಮೂವರು ಶಾಸಕರು ವಿಧಾನಸಭೆಯಲ್ಲಿ ಇರುವಾಗ ತಮ್ಮ ಮೊಬೈಲ್ ನಲ್ಲಿ ನೀಲಿ ಚಿತ್ರದ ವೀಕ್ಷಣೆ ಮಾಡಿದ್ದು..  ಅವರೆಂದರೇ ಈಗಿನ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಕೃಷ್ಣಪಾಲೇಮಾರ್ ಮತ್ತು ಸಿ.ಸಿ. ಪಾಟೀಲ್. ಸಿ. ಸಿ, ಪಾಟೀಲ್ ಈಗ ಸಚಿವರು.

ಈ ಪ್ರಕರಣ ಸಾಕಷ್ಟು ಸದ್ದು ಮಾಡಿತು. ಮತ್ತೆ ಸಾರ್ವಜನಿಕ ಬದುಕಿನಲ್ಲಿ ಇರುವವರ ನೈತಿಕತೆ ಮತ್ತು ಅನೈತಿಕತೆ ಕುರಿತು ಚರ್ಚೆ ನಡೆಯಿತು.. ಹಾಗೆ ಈ ಬಗ್ಗೆ ತನಿಖೆ ನಡೆಸಲು ನೇಮಕವಾದ ಸದನ ಸಮೀತಿ ಲಕ್ಶ್ಮಣ ಸವದಿ ಮತ್ತು ಸಿ.ಸಿ. ಪಾಟೀಲರನ್ನು ಆರೋಪ ಮುಕ್ತರನ್ನಾಗಿ ಮಾಡಿತು, ಪಾಲೇಮಾರ್ ಮಾತ್ರ ತಪ್ಪಿತಸ್ಥರಾದರು.

ಇಷ್ಟಕ್ಕೆ ಶಾಸಕರ ಮೇಲಿನ ಲೈಂಗಿಕ ಹಗರಣ ಆರೋಪ ನಿಲ್ಲಲಿಲ್ಲ. ಕೇವಲ ಒಂದು ವರ್ಷದ ನಂತರ ಪ್ರಕಟವಾದದ್ದು ಇನ್ನೊಂದು ಲೈಂಗಿಕ ಹಗರಣ.. ಅದು ಉಡುಪು ಶಾಸಕ ರಘುಪತಿ ಭಟ್ಟರದು..ಮಹಿಳೆಯೊಬ್ಬಳ ಜೊತೆ ಅವರಿದ್ದ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಯಿತು.. ಭಟ್ಟರು ಚುನಾವಣೆಯಿಂದಲೇ ಹಿಂದೆ ಸರಿದರು. ಐದು ವರ್ಷ ವನವಾಸ ಅನುಭವಿಸಿದರು.. ಯಾವಾಗಲೂ ಸಾಮಾನ್ಯ ಜನರಿಗೆ ನೆನಪು ಕಡಿಮೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಭಟ್ಟರು ಉಡುಪಿ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು..

೨೦೧೫ ರಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿದ ಇನ್ನೊಬ್ಬ ಶಾಸಕ, ಮಾಜಿ ಸಚಿವ ಎ. ರಾಮದಾಸ್. ಮಹಿಳೆಯೊಬ್ಬಳನ್ನು ಲೈಂಗಿಕವಾಗಿ ರಾಮದಾಸ್ ಬಳಸಿಕೊಂಡರು ಎಂಬುದು ಅವರ ಮೇಲಿನ ಆರೋಪವಾಗಿತ್ತು. ಆದರೆ ಈ ಆರೋಪದಿಂದಾಗಿ ರಾಮದಾಸ್ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ನಂತರ ಈ ಆರೋಪದ ಬಗ್ಗೆ ತನಿಖೆ ನಡೆಸಿದ ಸಿಐಡಿ ಪೊಲೀಸರು ರಾಮದಾಸ್ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಿದರು.

೨೦೧೫ ರ ಈ ಪ್ರಕರಣದ ನಂತರ ೨೦೧೬ ರಲ್ಲಿ ಬೆಳಕಿಗೆ ಬಂದಿದ್ದು ಇನ್ನೊಂದು ಪ್ರಕರಣ..ಈ ಪ್ರಕರಣದ ಆರೋಪಿ ೭೧ ವರ್ಷ ವಯಸ್ಸಿನ ಅಬ್ಕಾರಿ ಸಚಿವರಾಗಿದ್ದ ಎಚ್. ವೈ. ಮೇಟಿ. ಅವರು ಮಹಿಳೆಯೊಬ್ಬರ ಜೊತೆ ನಡೆಸುತ್ತಿದ್ದ ಕ್ಲಿಪಿಂಗ್ ಎಲ್ಲ ವಾಹಿನಿಗಳನ್ನು ತಲುಪಿ ಪ್ರಸಾರವಾಯಿತು. ವರ್ಗಾವಣೆ ಬಯಸಿದ ಮಹಿಳೆಯ ಜೊತೆ ಅವರು ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಅವರ ಮೇಲಿತ್ತು. ೨೦೧೭ ರಲ್ಲಿ ಸಿಐಡಿ ಈ ಬಗ್ಗೆ ತನಿಖೆ ನಡೆಸಿ ಮೇಟಿ ಅವರನ್ನು ದೋಷಮುಕ್ತರನ್ನಾಗಿ ಮಾಡಿತು..

ಇದಾದ ಮೇಲೆ ಈಗ ಬಹಿರಂಗವಾಗಿದ್ದು ರಮೇಶ್ ಜಾರಕೀಹೊಳಿ ಅವರ ಪ್ರಕರಣ...

ಸ್ವಾತಂತ್ರೋತ್ತರ ಕರ್ನಾಟಕದ ರಾಜಕಿಯ ಇತಿಹಾಸದಲ್ಲಿ ಬಹಿರಂಗಗೊಂಡ ಲೈಗಿಂಕ ಹಗರಣಗಳ ದಾಖಲಿತ ವಿವರಗಳು ಇವಾದರೆ ರಾಜಕೀಯ ನಾಯಕರ ಲೈಂಗಿಕ ಚಟುವಟಿಕೆಗಳ ಬಗ್ಗೆ ಬಹಳಷ್ಟು ಸುದ್ದಿಗಳು ವೈರಲ್ ಆದದ್ದಿದೆ..

ಕೆಲವು ರಾಜಕೀಯ ನಾಯಕರ ಮದುವೆಯೇತರ ಸಂಬಂಧಗಳು ಸಾರ್ವಜನಿಕ ಚರ್ಚೆಗೆ ಕಾರಣವೂ ಆಗಿದ್ದವು. ಆದರೆ ಅದ್ಯಾವುದೂ ಕೂಡ ಈಗ ಪ್ರಸ್ತಾಪಿಸಿರುವ ಪ್ರಕರಣಗಳಂತೆ ಹಗರಣ ಆಗಿರಲಿಲ್ಲ. ಅಲ್ಲಿ ಅಧಿಕಾರ ದುರೂಪಯೋಗ ಚೀಟೀಂಗ್ ಅಂತಹ ಆರೋಪವೂ ಇರಲಿಲ್ಲ. ಅದು ಕೇವಲ ಗಂಡು ಹೆಣ್ಣಿನ ಒಪ್ಪಿತ ಲೈಂಗಿಕ ಚಟುವಟಿಕೆ ಮಾತ್ರ ಆಗಿದ್ದವು. ಇಲ್ಲಿ ನೈತಿಕತೆಯ ಪ್ರಶ್ನೆ ಅಷ್ಟು ಮುಖ್ಯ ಆಗಲೇ ಇಲ್ಲ.

ಇಂತಹ ಮದುವೆಯೇತರ ಸಂಬಂಧ ಅಥವಾ ಸ್ನೇಹಿತೆಯರನ್ನು ಹೊಂದಿದ್ದಾರೆ ಎಂದು ಹೇಳಲಾದ ದೇವರಾಜ್ ಅರಸು, ರಾಮಕೃಷ್ಣ ಹೆಗಡೆ, ಆರ್. ಗುಂಡೂರಾವ್, ಜೆ. ಎಚ್. ಪಟೇಲರ ಸುತ್ತ ಸಾಕಷ್ಟು ರಂಜನೀಯ ಕಥೆಗಳು ಕೇಳಿ ಬಂದಿದ್ದವು. ಜೊತೆಗೆ ಈ ಸಂಬಂಧಗಳನ್ನು ಒಪ್ಪಿಕೊಂಡ ಈ ಹಿರಿಯ ರಾಜಕಾರಣಿಗಳು ತಾವು ಶ್ರೀರಾಮಚಂದ್ರ ಅಲ್ಲ ಎಂದು ಜನರ ಎದುರು ಸ್ಪಷ್ಟ ಪಡಿಸಿದ್ದರು. ಜೊತೆಗೆ ಇವರ ಈ ಮದುವೆಯೇತರ ಸಂಬಂಧಗಳು ಅಸಹ್ಯ ಹುಟ್ಟಿಸುವಂತೆ ಇರಲಿಲ್ಲ..ಅದು ಸಭ್ಯತೆಯ ಎಲ್ಲೆಯನ್ನೂ ಮೀರಿರಲಿಲ್ಲ..ಜೊತೆಗೆ ಅಧಿಕಾರ ದುರೂಪಯೋಗ ಮಾಡಿ ಲೈಂಗಿಕ ಸುಖ ಪಡೆಯಲು ಯತ್ನಸಿದ ದೂರು ಕೂಡ ಇವರ ಮೇಲಿರಲಿಲ್ಲ. ಅದು ಕೇವಲ ರಂಜನೀಯ ಕಥೆಗಳಾಗಿ ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡವು..

ಆದರೆ ೧೯೭೩ ರ ಆರ್. ಡಿ. ಕಿತ್ತೂರ್ ಅವರ ಪ್ರಕರಣದಿಂದ ರಮೇಶ್ ಜಾರಕೀಹೊಳಿ ವರೆಗಿನ ಲೈಂಗಿಕ ಹಗರಣ ಒಪ್ಪಿತ ಲೈಂಗಿಕ ಚಟುವಟಿಕೆ ಆಗಿರಲಿಲ್ಲ. ಅದು ತಮ್ಮ ಅಧಿಕಾರ ದುರೂಪಯೋಗ ಪಡಿಸಿಕೊಂಡು ಮಹಿಳೆಯನ್ನು ಬಳಸಿಕೊಂಡ ಆರೋಪಗಳಾಗಿವೆ.. ಹೀಗಾಗಿ ಇದು ಕೇವಲ ಗಂಡು ಹೆಣ್ಣಿನ ಸಂಬಂಧಕ್ಕೆ ಮಾತ್ರ ಸೀಮಿತವಾಗದೇ ಸಾಮಾಜಿಕ ಆಯಾಮವನ್ನು ಪಡೆಯುತ್ತದೆ. ಈ ಕಾರಣದಿಂದ ಸಾಮಾಜಿಕ ಬದುಕು ಮತ್ತು ನೈತಿಕತೆ ಕುರಿತು ಚರ್ಚೆ ನಡೆಸಲೇಬೇಕಾದ ಅನಿವಾರ್ಯತೆ ಮೂಡಿದೆ.

article published in prajavani 

kannadada atanka

ಈ ವರ್ಷದ ಮುಂಗಡ ಪತ್ರದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳಿಗೆ ಕೊಡುವ ಅನುದಾನವನ್ನು ಕಡಿತಗೊಳಿಸಲಾಗಿದೆ.
ಇದಕ್ಕೆ ಬದಲಾಗಿ ಜಾತಿ ಸಂಘಟನೆಗಳಿಗೆ, ಪ್ರಾಧಿಕಾರಗಳಿಗೆ ಹಾಗೂ ಮಠ ಮಾನ್ಯಗಳಿಗೆ ಮುಖ್ಯಮಂತ್ರಿ ಕೊಡುಗೈ ದೊರೆಯಾಗಿದ್ದಾರೆ. ಈ ಬಗ್ಗೆ ಸಾಂಸ್ಕೃತಿಕ ರಂಗ ಆತಂಕಗೊಂಡಿದೆ.
ಕನ್ನಡ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯದ ಸಮಾಧಿ ಮಾಡಲು ಸರ್ಕಾರ ಹೊರಟಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿರುವುದು ಕನ್ನಡಿಗರ ಕರ್ತವ್ಯ.
ಸುದ್ದಿ ಸಂವಾದ
ವೆಂಕಟ್ರಮಣ ಗೌಡ ಮತ್ತು ಶಶಿಧರ್ ಭಟ್

Monday, March 8, 2021

good response to my chaanel

ನಿಜ ಇದನ್ನೆಲ್ಲ ನಿರೀಕ್ಷಿಸಿರಲಿಲ್ಲ. ನನ್ನ ಉದ್ದೇಶ ಸ್ಪಷ್ಟವಿತ್ತು. ಜನಪರ ವಾಹಿನಿಯೊಂದನ್ನು ಕಟ್ಟಬೇಕು,, ಈ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡಕೂಡದು...
ಜೊತೆಗೆ ಈ ಹಿಂದಿನ ರಾಜಕೀಯ ಒತ್ತಡಗಳು, ಪಿತೂರಿಗಳು, ಷಡ್ಯಂತ್ರಗಳು ಎಲ್ಲವೂ ನನ್ನ ನೆನಪಿನಲ್ಲಿದ್ದವು..
ಜೊತೆಗೆ ಇವತ್ತಿನ ಮಾಧ್ಯಮ ಸಾಗುತ್ತಿರುವ ದಾರಿ.. ಆಗ ನಾನು ನಿರ್ಧರಿಸಿದ್ದು ಕ್ರೌಡ್ ಫಂಡಿಂಗ್ ಮೂಲಕ ವಾಹಿನಿಯನ್ನು ಕಟ್ಟಬೇಕು,,
ನನ್ನ ಜೊತೆ ಕೈಜೋಡಿಸಿ ಎಂದ ತಕ್ಷಣ ಅದೆಷ್ಟು ಜನ ನನ್ನ ಜೊತೆಗೆ ನಿಂತರು...ಪ್ರತಿ ದಿನ ಹಲವರು ನನ್ನ ಜೊತೆ ಕೈಜೋಡಿಸಲು ಮುಂದಕ್ಕೆ ಬರುತ್ತಿದ್ದಾರೆ,,
ನಮ್ಮ ಹೊಸ ವಾಹಿನಿಯ ಕುಟುಂಬ ದೊಡ್ಡದಾಗುತ್ತಿದೆ,,
ಬನ್ನಿ ಜೊತೆಯಾಗಿ ಹೆಜ್ಜೆ ಹಾಕೋಣ,, ಬುದ್ಧ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳು ನಮ್ಮ ವಾಹಿನಿಗೆ ದಾರಿದೀಪವಾಗಲಿ,,,
ಇದು ಶಶಿಧರ್ ಭಟ್ ಅಂತರಾಳದ ಮಾತು

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...