Monday, December 26, 2022

ಗುರು ಗೋವಿಂದ ಭಟ್ಟರು ಈಗ ಬದುಕಿದಿದ್ದರೆ ? ತಮ್ಮ ಈ ಮರಿ ಮರಿ ಮೊಮ್ಮಗ ಜೋಷಿಯ ಬಗ್ಗೆ ಎನೆಂದುಕೊಳ್ಳುತ್ತಿದ್ದರು ?

 

ಮುಂಬರುವ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ. ಇದು ವಿವಾದಕ್ಕೆ ಕಾರಣವಾಗಿದೆ.. ಈ ವಿವಾದಕ್ಕೆ ಕಾರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಮಹೇಶ್ ಜೋಷಿ.. ಇವರು ತಮ್ಮನ್ನು ಶಿಶುನಾಳ್ ಶರೀಷ್ ಅವರ ಗುರು ಗೋಂವಿದ ಭಟ್ ಅವರ ವಂಶಜರು ಎಂದು ಹೇಳಿಕೊಳ್ಳುತ್ತಾರೆ.. ಅವರು ಗುರು ಗೋಂವಿದ ಭಟ್ಟರ ವಂಶಜರಾಗಿದ್ದರೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬೇಕಾಗಿಲ್ಲ..ಅವರು ತಮ್ಮನ್ನು ಗುರು ಗೋಂವಿದ ಭಟ್ಟರ ವಂಶಜ ಎಂದೂ ಸಂತೋಷಪಡಬಹುದು.. ಆದರೆ ಇವರು ಯಾವ ದೃಷ್ಟಿಯಿಂದ ಗುರು ಗೋವಿಂದ ಭಟ್ಟರ ವಂಶಜ ಎಂದು ಪ್ರಶ್ನೆ ಮಾಡಲೇಬೇಕಾಗುತ್ತದೆ.

ಗುರು ಗೋವಿಂದ ಭಟ್ಟ  ರು ಮುಸ್ಲೀಮ್ ಹುಡುಗ ಶರೀಫರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು.. ಆತನನ್ನು ಆಧ್ಯಾತ್ಮದ ದಾರಿಯಲ್ಲಿ ಕರೆದೊಯ್ಯದರು. ಎಲ್ಲ ಧರ್ಮಗಳೂ ಒಂದೇ. ಧರ್ಮಗಳ ನಡುವೆ ವ್ಯತ್ಯಾಸ ಇಲ್ಲ ಎಂದು ಕಲಿಸಿದರು. ಅಲ್ಲಾ ಈಶ್ವರ್ ತೇರೆ ನಾಮ ಎಂಬ ಸತ್ಯವನ್ನು ಅರುಹಿದರು. ಒಬ್ಬ ಮುಸ್ಲೀಮನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ ಗೋವಿಂದ ಭಟ್ಟರ ವಿರುದ್ಧ ಬ್ರಾಹ್ಮಣ ಸಮಾಜ್ ತಿರುಗಿ ಬಿತ್ತು. ಶರೀಫರನ್ನು ಬಿಟ್ಟು ಬಿಡುವಂತೆ ಒತ್ತಡ ಹೇರಿತು. ಗೋವಿಂದ ಭಟ್ಟರು ಈ ಬ್ರಾಹ್ಮಣ ಸಮಾಜವನ್ನೇ ತಿರಸ್ಕರಿಸಿ ತಮ್ಮ ಶಿಷ್ಯ ಷರೀಫನನ್ನು ಕರೆದುಕೊಂಡು ಆಧ್ಯಾತ್ಮವನ್ನು ಅರೆಸುತ್ತ ಹೊರಟು ಬಿಟ್ಟರು.

ಶಿಶುನಾಳ ಶರೀಫರು ಗುರುವನ್ನು ಒಪ್ಪಿಕೊಂಡರು. ಅಲ್ಲಾ ಮತ್ತು ಈಶ್ವರನ ನಡುವೆ ವ್ಯತ್ಯಾಸವಿಲ್ಲ ಎಂದು ಕಂಡುಕೊಂಡರು.. ಅವರು ಕೇವಲ ಆದ್ಯಾತ್ಮವಾದಿಯಾಗಿ ಉಳಿಯಲಿಲ್ಲ. ಅವರ ತತ್ವ ಪದಗಳು ಕನ್ನಡ ಸಾಹಿತ್ಯದಲ್ಲೇ ಅನನ್ಯವಾದವು.. ಸೋರುತಿಹುದು ಮನೆಯ ಮಾಳಿಗಿ ಎನ್ನುವ ತತ್ವ ಪದ ನನ್ನಗೆ ಈಗ ನೆನಪಾಗುತ್ತಿದೆ.

ಗುರು ಗೋವಿಂದ ಭಟ್ಟರನ್ನು ಸದಾ ನೆನಪು ಮಾಡಿಕೊಳ್ಳುವ ಮಹೇಶ್ ಜೋಷಿ ಸರ್ಕಾರಿ ನೌಕರರೆ ? ಪತ್ರಕರ್ತರೇ ಅಥವಾ ರಾಜಕಾರಣಿಯೆ ಅಥವಾ ಅವರೊಬ್ಬ ಸಾಹಿತಿಯೆ ? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ.. ಅವರು ರಾಜಕಾರಣಿಗಳ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ..  ದೂರದರ್ಶನ ಎಂಬ ಸರ್ಕಾರಿ ಮಾಧ್ಯಮದಲ್ಲಿ ಕೆಲಸ ಮಾಡುವ ಮೂಲಕ ಪತ್ರಕರ್ತರು ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ.. ಅವರು ದೆಹಲಿ ದೂರದರ್ಶನದಲ್ಲಿ ಕೆಲಸ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಸಂತೋಷ ಪಟ್ಟಿದ್ದಾರೆ..ಅವರ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಎಲ್ಲರಿಗೂ ತೋರಿಸಿ ಸಂತೋಷಪಟ್ಟಿದ್ದಾರೆ.

ವಿಧಾನ ಪರಿಷತ್ ಸಭಾಪತಿಗಳಾಗಿದ್ದ ಡಿ. ಬಿ. ಕಲ್ಮಣಕರ್ ಅವರ ಆಪ್ತ ಕಾರ್ಯದರ್ಶಿಯಾಗಿ ವಿಧಾನ ಸೌಧದ ಮೊಗಸಾಲೆಯಲ್ಲಿ ಒಡಾಡಿಕೊಂಡಿದ್ದ ಅವರು ರಾಜಕಾರಣಿಗಳ ಆಪ್ತೀಷ್ಟರಾಗಿ ಹೇಗೆ ಇರಬೇಕು ಎಂಬುದನ್ನು ಅರಿತವರು..

ಜೋಶಿ ಕುಮಾರಸ್ವಾಮಿ ಅವರಂತೆ ಎಲ್ಲರನ್ನೂ ಬ್ರದರ್ ಎಂದು ಪ್ರೀತಿಯಿಂದ ಮಾತನಾಡುತ್ತ ಹೆಗಲ ಮೇಲೆ ಕೈ ಹಾಕುತ್ತಾರೆ.. ಅವರ ಸಾಧನೆಗಳ ಪಟ್ಟಿ ಮಾಡುತ್ತ ಹೋದರೆ ಅದು ಮುಗಿಯುವುದಿಲ್ಲ..ಬೆಂಗಳೂರು ದೂರದರ್ಶನ ಕೇಂದ್ರದ ಮಂಜುಳ ಗಾನ ಕಾರ್ಯಕ್ರಮದಲ್ಲಿ ಮಂಜುಳವಾಗಿ ಹಾಡಿ ಎಲ್ಲರನ್ನೂ ಮುದಗೊಳಿಸಿದವರು. ಸದಾ ಒಂದು ಕ್ಯಾಮರಾ ತಮ್ಮ ಮೇಲೆ ಇರುವಂತೆ ನೋಡಿಕೊಂಡು ತಮ್ಮ ಭಾವ ಭಂಗಿಯನ್ನು ಜನರಿಗೆ ತಲುಪಿಸುತ್ತಾ ಬಂದವರು.. ಆಹ್ವಾನಿತ ಗಣ್ಯರ ಜೊತೆ ಎಂತಹ ಅತ್ಯುತ್ತಮ ಸಂಬಂಧವನ್ನು ಅವರು ಇಟ್ಟುಕೊಂಡು ಬಂದವರೆಂದರೆ ಅವರು ಹೇಗೆ ಹಾಡಲಿ, ಶ್ರುತಿ ಇರಲಿ ಶ್ರುತಿ ತಪ್ಪಿಲಿ ಈ ಗಣ್ಯರು ಚಪ್ಪಾಳೆ ಹೊಡೆದು ಹುರಿದುಂಬಿಸುವುದು ಎಲ್ಲರೂ ನೋಡಿರುವ ದೃಶ್ಯಗಳು. ಯಾರೇ ಹಾರಾಡಲಿ ಯಾರೇ ಕೂಗಾಡಲಿ ನಿನ್ ನೆಮ್ಮದಿಗೆ ಬಂಗವಿಲ್ಲ ಎಂಬ ಮನಸ್ಥಿತಿಯವರು ಜೋಷಿ.

ಜೋಷಿ ತಮ್ಮ ನಿವೃತ್ತಿಯ ನಂತರ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟರು. ಅದಕ್ಕಾಗಿ ತಯಾರಿ ನಡೆಸಿದರು..ಸಾಹಿತ್ಯ ಪರಿಷತ್ತಿನ ಮೇಲೆ ಅಪ್ರತ್ಯಕ್ಷವಾಗಿ ನಿಯಂತ್ರಣ ಹೊಂದಿದ್ದ ರಾಜಕಾರಣಿಗಳಿಗೆ ಕೆಂಪು ಹಾಸು ಹಾಕಿ ಕರೆದುಕೊಂಡು ಬಂದರು.. ಬಿಜೆಪಿ ಪಕ್ಷ ಜೋಷಿ ಅವರನ್ನು ಬೆಂಬಲಿಸಿತು.. ತಮ್ಮ ಕಾಲಾಳುಗಳಿಗೆ ಪತ್ರ ಬರೆದು ಅಧ್ಯಕ್ಷ ಚುನಾವಣೆಯಲ್ಲಿ ಜೋಷಿ ಅವರಿಗೆ ಬೆಂಬಲ ನೀಡುವಂತೆಯೂ ಕೆಲವು ಬಿಜೆಪಿ ನಾಯಕರ ಕರ ಪತ್ರ ಹೊರಡಿಸಿದರು..ಪ್ರಾಯಶಃ ರಾಜಕೀಯ ಪಕ್ಷವೊಂದು ಪರಿಷತ್ ಅಧ್ಯಕ್ಷ ಚುನಾವಣೆಯಲ್ಲಿ ನೇರೆವಾಗಿ ಪ್ರವೇಶಿಸಿದ ಮೊದಲ ಚುನಾವಣೆ ಇದು. ಹೀಗೆ ಸಾಹಿತ್ಯ ಪರಿಷತ್ತನ್ನು ರಾಜಕಾರಣದ ಅಂಗಳವನ್ನಾಗಿ ಮಾಡಿದ ಕೀರ್ತಿ ಮಹೇಶ್ ಜೋಷಿ ಅವರಿಗೆ ಸಲ್ಲಬೇಕು.

ಜೋಶಿಯವರಿಗೆ ಹೆಸರನ್ನು ಬದಲಿಸುವ ಬಿಜೆಪಿ ಗುಣ ಅಂತರ್ಗತವಾಗಿದೆ. ಚಾಮರಾಜಪೇಟೆಯಲ್ಲಿ ಸಾಹಿತ್ಯ ಪರಿಷತ್ ಎದುರಿನ ರಸ್ತೆಯ ಹೆಸರನ್ನೂ ಬದಲಿಸಲು ಹೊರಟಿದ್ದರು.. ಪಂಪನ ಹೆಸರನ್ನು ಬದಲಿಸಲು ಅವರು ಮುಂದಾಗಿದ್ದರು.. ಮನುಷ್ಯ ಕುಲ ತಾನೊಂದೇ ವಲಂ ಎಂದ ಪಂಪನನ್ನು ಒಪ್ಪಿಕೊಳ್ಳುವುದು ಇವರಿಗೆ ಹೇಗೆ ತಾನೇ ಸಾಧ್ಯವಾದೀತು ?

ಈಗ ಹಾವೇರಿ ಸಾಹಿತ್ಯ ಸಮ್ಮೇಳನವನ್ನೂ ವಿವಾದದ ಅಂಗಳವನ್ನಾಗಿ ಅವರು ಮಾಡಿದ್ದಾರೆ. ಮುಸ್ಲೀಂ ಬರಹಗಾರರನ್ನು ಕವಿಗಳನ್ನು ಸಾಹಿತಿಗಳನ್ನು ಅವರು ದೂರವಿಟ್ಟಿದ್ದಾರೆ. ತಮ್ಮ ರಾಜಕೀಯ ಸಂಪರ್ಕದಿಂದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸ್ಥಾನಕ್ಕೆ ಸಚಿವರ ಸ್ಥಾನವನ್ನು ಪಡೆದಿಕೊಂಡು ಬಿಜೆಪಿ ಎಜೆಂಡಾವನ್ನು ಅನುಷ್ಠಾನಗೊಳಿಸುವಲ್ಲಿ ನಿರತರಾಗಿದ್ದಾರೆ.

ಹಾವೇರಿ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಪಟ್ಟಿಯನ್ನು ನೋಡಿದಾಗ ಆಘಾತವಾಗುತ್ತದೆ. ಆದರೆ ಆಶ್ಚರ್ಯವಾಗುವುದಿಲ್ಲ. ಈ ವ್ಯಕ್ತಿಯಿಂದ ಇನ್ನೇನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ.. 

ಈ ಸಾಹಿತ್ಯ ಸಮ್ಮೇಳನ ರಾಜಕೀಯ ಸಮಾವೇಶದಂತೆ ಕಾಣುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯ ಮೇಲೆ ಇರುವ ಬಹುತೇಕ ಜನರು ರಾಜಕಾರಣಿಗಳು ಮತ್ತು ಅಧಿಕಾರ ವರ್ಗ..ಹಾಗೆ ಸ್ವಾಗತ ಸಮೀತಿ ಸಂಪೂರ್ಣವಾಗಿ ರಾಜಕಾರಣಿಗಳು ಮತ್ತು ಅಧಕಾರಿಗಳಿಂದ ತುಂಬಿ ಹೋಗಿದೆ. ಈ ಬಗ್ಗೆ ಪ್ರತಿಭಟನೆಯ ಕೂಗು ಕೇಳಿ ಬರುತ್ತಿದೆ. ಪರ್ಯಾಯ ಸಾಹಿತ್ಯ ಸಮ್ಮೇಳದ ಮಾತೂ ಕೇಳಿ ಬರುತ್ತಿದೆ..ಆದರೆ ಪ್ರತಿಭಟನೆಗೆ ಸೊಪ್ಪು ಹಾಕದೇ ತಮ್ಮ ಎಜೆಂಡಾವನ್ನು ಜೋಷಿ ಅನುಷ್ಟಾನಗೊಳಿಸಲಿದ್ದಾರೆ. ಸಾಹಿತ್ಯ ಸಮ್ಮೇಳನ ಬಿಜೆಪಿ ಪಕ್ಷದ ಸಾಹಿತ್ಯಿಕ  ಸಮ್ಮೇಳನವಾಗಿ ಸಂಪನ್ನಗೊಳ್ಳಲಿದೆ. ಈ ಬಗ್ಗೆ ಯಾವ ಅನುಮಾನವೂ ಬೇಡ,

ಗುರು ಗೋವಿಂದ ಭಟ್ಟರು ಈಗ ಬದುಕಿದಿದ್ದರೆ ? ತಮ್ಮ ಈ ಮರಿ ಮರಿ ಮೊಮ್ಮಗನ ಬಗ್ಗೆ ಎನೆಂದುಕೊಳ್ಳುತ್ತಿದ್ದರು ? ತಮ್ಮ ಸಂತಾನ ಈ ಹಂತಕ್ಕೆ ಬಂತಲ್ಲ ಎಂದು ಕೊರಗುತ್ತಿದ್ದರೆ ? ಬ್ರಾಹ್ಮಣ ಸಮುದಾಯವನ್ನೇ ಬಹಿಶ್ಕರಿಸಿದ್ದ ಅವರು ತಮ್ಮ ಈ ಮರಿ ಮರಿ ಮರಿ ಮೊಮ್ಮಗನನ್ನೇ ಒದ್ದು ಹೊರಹಾಕುತ್ತಿದ್ದರೆ ? ಗೊತ್ತಿಲ್ಲ.

ಅವರ ಆತ್ಮ ಎನ್ನುವುದಿದ್ದರೆ ಅದು ಈಗ ಪರಿತಪಿಸುತ್ತಾ ಇರುಬಹುದಲ್ಲವೆ ?


Sunday, December 25, 2022

ಪ್ರೀತಿಯ ಅಂಗಡಿ ತೆರೆಯುವ ಮಾತನಾಡುವಾಗಲೇ ಇಲ್ಲಿ ಈ ಘಟನೆ ನಡೆದೇ ಹೋಯಿತಲ್ಲ !

 


ಈ ಕೊಲೆ ಮತ್ತು ರಕ್ತ ಪಾತ ನಿಲ್ಲುವುದೇ ಇಲ್ಲವೆ ?


ನಿನ್ನೆ ಈ ಘಟನೆ ನಡೆದುಹೋಯಿತು. ತನ್ನ ಅಂಗಡಿಯಲ್ಲಿದ್ದ ಮಧ್ಯ ವಯಸ್ಸಿನ ವ್ಯಕ್ತಿ ತಾನು ಈ ರೀತಿ ದಾಳಿಗೆ ಒಳಗಾಗಬಹುದು ಎಂದು ಅಂದುಕೊಂಡಿರಲಿಕ್ಕಿಲ್ಲ.   ತನ್ನ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಅವನ ಮೇಲೆ ಮೂವರು ಮುಸುಕುದಾರಿಗಳು ದಾಳಿ ಮಾಡಿದರು. ಚಾಕುವಿನಿಂದ ಇರಿದರು. ಗಾಯಗೊಂಡ ಈ ಮಧ್ಯ ವಯಸ್ಸಿನ ವ್ಯಕ್ತಿಯನ್ನು ಅಕ್ಕಪಕ್ಕದ ಜನ ಆಸ್ಪತ್ರೆಗೆ ಸೇರಿಸಿದರು... ಆಗ ಅವನ ಸ್ಥಿತಿ ಗಂಭೀರವಾಗಿತ್ತು.. ಜೀವ ಮರಣದ ನಡುವಿನ ಹೋರಾಟ..

ಇದು ವೈಯಕ್ತಿಕ ಧ್ವೇಷದಿಂದ ನಡೆದ ಘಟನೆಯೇ ಅಥವಾ ಇದರ ಹಿಂದೆ ಕೋಮು ದ್ವೇಷದ ನೆರಳು ಇದೆಯೇ ?

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ..

ಆದರೆ ಸರತ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ..ಪೊಲೀಸರು ಈ ಪ್ರದೇಶಗಳಲ್ಲಿ ನಿಶೇಧಾಜ್ನೆಯನ್ನು ವಿಧಿಸಿದ್ದಾರೆ..

ಈ ಹತ್ಯೆ ಪ್ರಕರಣದ ಬಗ್ಗೆ ಯಾವ ಮಾಧ್ಯಮದಲ್ಲೂ ಗಂಭೀರ ಚರ್ಚೆ ನಡೆಯುತ್ತಿಲ್ಲ.. ರಾಜ್ಯದ ಜನ ಇಂತಹ ಘಟನೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನೊಂದು ಕೊಲೆಯಾಯಿತಂತೆ ಎಂದು ಜನ ಸುಮ್ಮನಾಗುವ ಸ್ಥಿತಿ. ಯಾಕೆಂದರೆ ಹತ್ಯೆ ಎನ್ನುವುದು ಯಾರನ್ನೂ ತಲ್ಲಣಗೊಳಿಸುತ್ತಿಲ್ಲ.. ಈತ ಅಮಾಯಕನೋ ಅಲ್ಲವೂ ಎಂಬುದು ಕೂಡ ಮುಖ್ಯವಾಗುತ್ತಿಲ್ಲ.

ಸತ್ತವರು ಯಾವ ಕೋಮಿನವರು ಎಂಬುದನ್ನು ನೋಡಿಕೊಂಡು ಜನ ಮತ್ತು ರಾಜಕಾರಣಿಗಳು ಪ್ರತಿಕ್ರಿಯೆ ನೀಡಬೇಕೋ ಬೇಡವೋ ಎಂದು ತೀರ್ಮಾನಿಸುತ್ತಾರೆ.. ಇಂತಹ ಹತ್ಯೆ ಮತ್ತು ಕೊಲೆ ಯತ್ನದ ನಂತರ ರಾಜಕಾರಣ ಪ್ರಾರಂಭವಾಗುತ್ತದೆ.. ಸತ್ತವನು ಬಹುಸಂಖ್ಯಾತನಾಗಿದ್ದರೆ ಮಂತ್ರಿಗಳು ಮತ್ತು ಶಾಸಕರು ಅವನ ಮನೆಗೆ ಭೇಟಿ ನೀಡುತ್ತಾರೆ. ಸರ್ಕಾರ ಸಹಾಯ ನೀಡಲು ಮುಂದಾಗುತ್ತದೆ. ಸಾರ್ವಜನಿಕರು ಅವರ ಮನೆಗೆ ಹೋಗಿ ಸಂತಾಪ ಹೇಳಿ ವಾಪಸ್ ಬರುತ್ತಾರೆ. ನಂತರ ಸಾರ್ವಜನಿಕ ಭಾಷಣಗಳಿಗೆ ಹೊಸ ಸರಕು ದೊರಕುತ್ತದೆ.. ಬಹುಸಂಖ್ಯಾತನ ಹತ್ಯೆ ಮಾಡಿದವನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ತನಿಖೆ ನಡೆಸಿ ಅರೋಪಿತನ ಬಾಯಿ ಬಿಡೀಸುವ ಮೊದಲು ಮಾಧ್ಯಮಗಳು ಈ ಆರೋಪಿತನಿಗೆ ಉಗ್ರಗಾಮಿ ಸಂಘಟನೆಗಳ ಸಂಪರ್ಕ ಇದೆ ಎಂದು ವಿವರಗಳನ್ನು ನೀಡಲು ಪ್ರಾರಂಬಿಸುತ್ತಾರೆ. ಆತನಿಗೆ ವಿದೇಶಗಳಿಂದ ಹಣ ಬಂದಿತ್ತು ಎಂದೂ ಮಾಧ್ಯಮಗಳೇ ಪ್ರಕರಣದ ತೀರ್ಪು ನೀಡಿಬಿಡುತ್ತಾರೆ,

ದಕ್ಷಿಣ ಕನ್ನಡ ಜಿಲ್ಲೆ ಈಗ ಕೋಮು ರಾಜಕಾರಣದ ಕುಲುಮೆಯಾಗಿದೆ.. ಇಂತಹ ಹತ್ಯೆ ನಡೆಯುವುದು ಸಾಮಾನ್ಯವಾಗಿದೆ.. ಹಾಗೆ ರಾಜಕಾರಣಿಗಳು ಮತ್ತು ಜನ ನೀಡುವ ಪ್ರತಿಕ್ರಿಯೆಗಳೂ ಏಕರೂಪವಾಗಿರುತ್ತದೆ.

ಒಬ್ಬ ಹಿಂದೂ ಹತ್ಯೆಯಾದರೆ ಆತ ಹಿಂದೂ ಧರ್ಮಕ್ಕಾಗಿ ಪ್ರಾಣ ನೀಡಿದ ಹುತಾತ್ಮನಾಗುತ್ತಾನೆ.. ಒಬ್ಬ ಮುಸ್ಲೀಂ ಹತ್ಯೆಯಾದರೆ ಆತ ಉಗ್ರಗಾಮಿ ಸಂಘಟನೆಗಳ ಸಂಪರ್ಕವಿರುವ ದೇಶದ್ರೋಹಿಯಾಗಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಪೋಲಿಸರು ಆಳುವ ಸರ್ಕಾರ ಅನುಕೂಲವಾಗುವ ರೀತಿಯಲ್ಲಿ ಮಾಧ್ಯಮಗಳಿಗೆ ಸುದ್ದಿಯನ್ನು ಪ್ಲಾಂಟ್ ಮಾಡುತ್ತಾರೆ.. ನಮ್ಮ ಮಾಧ್ಯಮ ದೇಶಭಕ್ತರ ಪಡೆಯ ಭಾಗವಾಗಿ ಈ ಸುದ್ದಿಯನ್ನು ಮಾರಾಟ ಮಾಡಲು ಪ್ರಾರಂಭಿಸುತ್ತವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಹತ್ಯೆ ಪ್ರಕರಣಗಳು ಇದೇ ಮಾದರಿಯಲ್ಲಿ ನಡೆಯುತ್ತವೆ.. ಹಾಗೆ ಪೋಲಿಸರು ಮತ್ತು ರಾಜಕಾರಣಿಗಳು ಒಂದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ..

ಪ್ರವೀಣ್ ನಿಟ್ಟಾರು ಆಗಲೀ ಶಿವಮೊಗ್ಗದ ಆ ಯುವಕನಾಗಲಿ ಹತ್ಯೆಯಾಗಬಾರದಿತ್ತು.. ಆದರೆ ಈ ಹತ್ಯೆ ಪ್ರಕರಣ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ರಾಜಕೀಯ ಲಾಭವನ್ನು ತಂದುಕೊಟ್ಟಿತು.. ದೇಶಭಕ್ತಿ ಮತ್ತು ದೇಶದ್ರೋಹದ ಭ್ರಮಾತ್ಮಕ ಬಂದೀಖಾನೆಯಿಂದ ಹೊರ ಬರುತ್ತಿದ್ದ ಸಂದರ್ಭದಲ್ಲೇ ಈ ಹತ್ಯೆ ಪ್ರಕರಣಗಳು ನಡೆದವು.. ಹೀಗಾಗಿ ಜನ ಮತ್ತೆ ಈ ಭ್ರಮಾತ್ಮಕ ಜಗತ್ತಿನಲ್ಲಿ ಬಂದಿಯಾದರು.. ಸರ್ಕಾರದ ವೈಫಲ್ಯವನ್ನು, ಸರ್ಕಾರದ ಮೇಲಿನ ಆರೋಪಗಳನ್ನು ಜನ ಮರೆತು ಧರ್ಮ ರಾಜಕಾರಣಕ್ಕೆ ಬಲಿಯಾದರು.. ಇದು ಸಾಮಾನ್ಯ ಜನರಿಗೆ ಅರ್ಥವಾಗಲೇ ಇಲ್ಲ. ಅರ್ಥವಾಗುವುದೂ ಇಲ್ಲ..

ಈ ಹಿಂದೂ ರಕ್ಷಣೆಯ ಹೊಸ್ ನೆರೆಟೀವ್ ಹೇಗಿದೆ ಎಂದರೆ ಸರ್ಕಾರ ಕೂಡ ಹತ್ಯಾ ಪ್ರಕರಣಗಳಲ್ಲಿ ವಿಭಿನ್ನ ಮಾನದಂಡಗಳನ್ನು ಬಳಸುತ್ತದೆ.. ಹಿಂದೂ ಹತ್ಯೆ ಪ್ರಕರಣಗಳನ್ನು ನೋಡುವ ರೀತಿ ಒಂದು ರೀತಿ ಇದ್ದರೆ ಮುಸ್ಲೀಂ ಹತ್ಯೆ ಪ್ರಕರಣಗಳ ಮಾನದಂಡ ಬೇರೆಯಾಗಿರುತ್ತದೆ.. ಹತ್ಯೆಯಾದ ಹಿಂದೂ ಮನೆಗೆ ದೌಡಾಯಿಸುವ ಸರ್ಕಾರ ಮತ್ತು ಬಿಜೆಪಿ ಸಚಿವ ಶಾಸಕರು ಮುಸ್ಲೀಂ ಹತ್ಯೆಯಾದರೆ ಅವನ ಮನೆಯ ಕಡೆ ಮೂಸಿ ಕೂಡ ನೋಡುವುದಿಲ್ಲ್ಲ.. ಆತ ಕೇವಲ ಅನಾಥ ಹೆಣದಂತಾಗಿಬಿಡುತ್ತಾನೆ.. ಈ ರೀತಿ ತಾರ ತಮ್ಯ ನೀತಿಯನ್ನು ಅನುಸರಿಸುವ ಸರ್ಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವುದು ಮಾತ್ರವಲ್ಲ ತನ್ನ ಆತ್ಮವನ್ನೇ ಮಾರಿಕೊಂಡಂತೆ ಕಾಣುತ್ತದೆ..

ಕಳೆದ ಎರಡು ದಶಕಗಳ ಈಚೇಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯಾ ಪ್ರಕರಣಗಳ ಅಂಕಿಅಂಶಗಳನ್ನು ಗಮನಿಸಿದರೆ ಬಹುಸಂಖ್ಯಾಕ ರಾಜಕಾರಣ ಹೇಗೆ ಸಮಾನತೆ ಮತ್ತು ಸಮಾನ ಹಕ್ಕುಗಳ ತತ್ವಕ್ಕೆ ವಿರೋಧವಾಗಿದೆ ಎಂಬುದನ್ನು ಗಮನಿಸಬಹುದು.. ಹಿಂದೂ ಹತ್ಯಾ ಪ್ರಕರಣಗಳು ಕೇವಲ ರಾಜಕೀಯ ಅಸ್ತ್ರವಾಗಿ ಮಾತ್ರ ಬಳಕೆಯಾಗಿವೆ.. ಬಹುಸಂಖ್ಯಾಕ ಹಿಂದೂಗಳ ಮನಸ್ಸಿನಲ್ಲಿ ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿಯಲ್ಲಿ ಗಟ್ಟಿಗೊಳಿಸುವಲ್ಲಿ ಸಫಲವಾಗಿವೆ. ಹಾಗೂ ಹಿಂದೂ ಮತ್ತು ಮುಸ್ಲೀಮ್ ಪ್ರತ್ಯೇಕವಾದವನ್ನು ಬಲಪಡಿಸಿವೆ.. ಜೊತೆಗೆ ಹಲವು ಪ್ರಕರಣಗಳಲ್ಲಿ ರಆಜಕೀಯ  ಲಾಭ ಪಡೆದುಕೊಂಡ ಮೇಲೆ ಪ್ರಕರಣದ ಹಿಂದಿನ ನಿಗೂಢ ಸತ್ಯ ಬಯಲಾಗಿದೆ. ಇದಕ್ಕೆ ಉದಾಹರಣೆಯಾಗಿ ಪರೇರಾಜಕೀಯ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನೇ ನೋಡಬಹುದು.. ಮುಸ್ಲೀಂ ಅಲ್ಪಸಂಖ್ಯಾತರು ಮೇಸ್ತಾನನ್ನು ಕೊಲೆ ಮಾಡಿದ್ದಾರೆ ಎಂಬಾ ಆರೋಪ ಸುಳ್ಳಾಯಿತು.. ಆದರೆ ಈ ಸತ್ಯ ಹೊರಬರುವುದಕ್ಕೆ ಮೊದಲೇ ಬಿಜೆಪಿಗೆ ಬಯಸಿದ್ದ ಲಾಭ ದೊರಕಿಯಾಗಿತ್ತು..

ನಿನ್ನೆ ಮುಸ್ಲೀಮ್ ಒಬ್ಬನ ಹತ್ಯ ಪ್ರಕರಣ ನಡೆಯಿತು.. ಇದರ ರಾಜಕೀಯ ಲಾಭ ಯಾರಿಗೆ ದೊರಕುತ್ತದೆ ? ಸತ್ಯ ವ್ಯಕ್ತಿ ಬಡಪಾಯಿ ಆಗಿರಬಹುದು ಅಥವಾ ವೈಯಕ್ತಿಕ ಕಾರಣದಿಂದಲೂ ಈ ಪ್ರಕರಣ ನಡೆದಿರಬಹುದು.. ಆದರೆ ಇದು ಬಹುಸಂಖ್ಯಾಕರನ್ನು ಒಗ್ಗೂಡೀಸಲು ಬಿಜೆಪಿ ಸಹಾಯ ಮಾಡುವುದು ಸತ್ಯ..

ಚುನಾವಣೆ ಬರುವ ಹೊತ್ತಿಗೆ ಇನ್ನಷ್ಟು ಹತ್ಯೆಗಳು ನಡೆಯದಿರಲಿ ಎಂದು ಮಾತ್ರ ನಾವು ಆಶಿಸಬಹುದು.. ಆದರೆ ಇಂದಿನ ಕೋಮುವಾದಿ ರಾಜಕಾರಣದಲ್ಲಿ ಹೀಗೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ..

ಕೊನೆಯದಾಗಿ ರಾಹುಲ್ ಗಾಂಧಿ ಹೇಳಿದ ಮಾತು ಮತ್ತೆ ಮತ್ತೇ ನೆನಪಾಗುತ್ತದೆ.

ಇದು ದ್ವೇಷದ ಮಾರುಕಟ್ಟೆ. ಇಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಾಗಿದೆ.




Saturday, December 24, 2022

ದ್ವೇಷದ ಮಾರುಕಟ್ಟೆಯಲ್ಲಿ ನಾವೆಲ್ಲ ಪ್ರೀತಿಯ ಅಂಗಡಿ ತೆರೆಯೋಣ

 




ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ.. ಈಗಾಗಲೇ ನೂರು ದಿನ ಪೂರೈಸಿದೆ..ಈ ನೂರು ದಿನಗಳಲ್ಲಿ ಈ ಯಾತ್ರೆಯ ಫಲಶ್ರುತಿ ಏನು ಎಂಬುದನ್ನು ಚರ್ಚಿಸಬೇಕಾದ ಸಮಯ,, ಇವತ್ತು ಯಾತ್ರೆ ರಾಷ್ಟ್ರದ ರಾಜಧಾನಿ ದೇಹಲಿಯನ್ನು ಪ್ರವೇಶಿಸಿತು.. ದೆಹಲಿಯ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು,,

ಈ ತಿಂಗಳ ೧೬ ರಂದು ೧೦೦ ದಿನ ಪೂರೈಸಿದ ಈ ಯಾತ್ರೆಗೆ ಒಂದು ವಾರದ ಬಿಡುವು.. ದೆಹಲಿಯಿಂದ ಜನವರಿ ಮೂರರಿಂದ ಹೊರಡುವ ಯಾತ್ರೆಯ ಲಕ್ಷ್ಯ ಜಮ್ಮು ಮತ್ತು ಕಾಶ್ಮೀರದ ಕಡೆಗೆ...

ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಹೊರಟ ಯಾತ್ರೆ..ಆಗ ಪ್ರಾಯಶಃ ಇದು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುತ್ತದೆ ಎಂದು ಬಹಳಷ್ಟು ಜನ ಅಂದುಕೊಂಡಿರಲಿಲ್ಲ... ಕೆಲವು ದಿನ ಯಾತ್ರೆ ಮಾಡಿ ಕೈಬಿಡಬಹುದು ಎಂದು ಬಿಜೆಪಿಯ ಪ್ರಮುಖರು ಅಂದುಕೊಂಡಿದ್ದಹೀರು.. ಯಾಕೆಂದರೆ ಆಗಲೇ ರಾಹುಲ್ ಗಾಂಧಿ ಅವರ ಇಮೇಜ್ ಅನ್ನು ನಾಶಪಡಿಸಿಯಾಗಿತ್ತು.. ಪಪ್ಪು ರಜಾಕಾಲದ ರಾಜಕಾರಣಿ ಎಂದು ರಾಹುಲ್ ಗಾಂಧಿ ಅವರ ವಿರುದ್ಧ ಅಪಪ್ರಚಾರ ಮಾಡಿ ಬಿಜೆಪಿ ಯಶಸ್ವಿಯೂ ಆಗಿತ್ತು. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟವರು ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಿಯಾಯಿತು ಎಂಬ ಭ್ರಮೆಯಲ್ಲಿದ್ದರು. ಆದರೆ ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಯಾತ್ರೆ ಬಿಜೆಪಿಯ ಭ್ರಮೆಯನ್ನು ಕಳಚುವ ಕೆಲಸವನ್ನು ಮಾಡತೊಡಗಿತ್ತು..

ಯಾತ್ರೆ ತಮಿಳು ನಾಡಿನಿಂದ ಕೇರಳಕ್ಕೆ ಬಂದಾಗ ಆಯ್ಯೋ ಅದು ಕಮ್ಯುನಿಸ್ಟರ ಆಡಳಿತವಿರುವ ರಾಜ್ಯ ಜನ ಬೆಂಬಲ ದೊರಕಿದ್ದರಲ್ಲಿ ಆಶ್ಚರ್ಯವಿಲ್ಲ ಎಂಬು ಬಿಜೆಪಿ ಬೆಂಬಲಿಗರು ಹೇಳತೊಡಗಿದ್ದರು.. ಯಾತ್ರೆ ತಮಿಳು ನಾಡು ಮತ್ತು ಕೇರಳವನ್ನು ಮುಗಿಸಿ ಕರ್ನಾಟಕ್ಕೆ ಬಂದಾಗ ಬಿಜೆಪಿ ಅಧಿಕಾರದಲ್ಲಿರುವ ಈ ರಾಜ್ಯದಲ್ಲೂ ಜನ ಬೆಂಬಲ ದೊರಕಿತು..  ದಕ್ಷಿಣ ರಾಜ್ಯಗಳನ್ನು ಪೂರೈಸಿ ಮಹಾರಾಷ್ಟ್ರವನ್ನು ಪ್ರವೇಶಿಸುವ ಹೊತ್ತಿಗೆ ಒಂದು ಅಂಶ ಸ್ಪಷ್ಟವಾಗಿತ್ತು..ಈ ಯಾತ್ರೆಯನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಆದರೆ ಜನ ಬೆಂಬಲ ಮಾತ್ರ ಈ ಯಾತ್ರೆ ಯಶಸ್ವಿ ಎಂದು ಪರಿಗಣಿಸುವಂತೆ ಮಾಡಿರಲಿಲ್ಲ.. ಅದಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ತಾವೊಬ್ಬ ಪ್ರಬುದ್ಧ ರಾಜಕಾರಣಿಯಾಗುವ ಎಲ್ಲ ಲಕ್ಷಣಗಳನ್ನು ತೋರಿಸಿ ಬಿಟ್ಟಿದ್ದರು. ಈ ಯಾತ್ರೆಯ ಸಂದರ್ಭದಲ್ಲಿ ಾವರು ಕ್ಷುಲ್ಲಕ ರಾಜಕೀಯ ಭಾಷಣವನ್ನು ಮಾಡಲಿಲ್ಲ. ಬಿಜೆಪಿಯನ್ನು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕಾರಣಕ್ಕಾಗಿ ಟೀಕಿಸಲಿಲ್ಲ..ಅವರು ದೇಶದ ಮುಂದೆ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಎಜೆಂಡಾವನ್ನು ದೇಶದ ಜನರ ಮುಂದಿಟ್ಟರು.. ಈ ದೇಶದಲ್ಲಿ ಯಾವ ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕೋ ಆ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಿದರು..

ನಿರುದ್ಯೋಗ ಬೆಲೆ ಏರಿಕೆ, ಧರ್ಮ ರಾಜಕಾರಣದ ಅಪಾಯ, ಇವತ್ತಿನ ಯುವಕರು, ರೈತರು, ಸಣ್ಣ ಪುಟ್ಟ ಉದ್ಯಮಿಗಳು ಎದುರಿಸುತ್ತಿರುವ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸತೊಡಗಿದರು.. ಯುವಕರು ಮಕ್ಕಳ ಜೊತೆ ಸಾಮಾನ್ಯರಂತೆ ಬೆರತರು,ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ವಿಚಾರಗಳ ಬಗ್ಗೆ ಚರ್ಚೆಯೇ ನಿಂತು ಹೋಗಿತ್ತು. ಪಾಕಿಸ್ಥಾನ, ಭಯೋತ್ಪಾದನೆ, ಬುರ್ಖ್ಝಾ, ಮುಸ್ಲೀಂ ವ್ಯಾಪಾರ ನಿಷೇಧ ಇಂತಹ ವಿಚಾರಗಳನ್ನು ಬಿಟ್ಟು ಬೇರೇ ಮಾತೇ ಇರಲಿಲ್ಲ..ಹೀಗಾಗಿ ರಾಹುಲ್ ಅವರ ಮಾತುಗಳು ಹೊಸದಾಗಿದ್ದವು.. ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಹೊಸ ಅನುಭವ ನೀಡತೊಡಗಿತ್ತು.

ಈ ಯಾತ್ರೆ ಎರಡು ರೀತಿಯಲ್ಲಿ ಕೆಲಸ ಮಾಡುತ್ತಿತ್ತು.. ರಾಹುಲ್ ಎಂಬ ನೆಹರೂ ಕುಟುಂಬದ ಕುಡಿ ನಿಜ ಭಾರತವನ್ನು ಅರ್ಥ ಮಾಡಿಕೊಳ್ಳತೊಡಗಿದ್ದರು.. ಹಾಗೆ ಪಪ್ಪು ಎಂಬ ಇಮೇಜ್ ನಲ್ಲಿದ್ದ ರಾಹುಲ್ ಅವರನ್ನು ಈ ದೇಶದ ಜನ ಸಾಮಾನ್ಯರೂ ಅರ್ಥ ಮಾಡಿಕೊಳ್ಳತೊಡಗಿದ್ದರು.. ನಾವು ಅಂದುಕೊಂಡಂತೆ ರಾಹುಲ್ ಪಪ್ಪು ಅಲ್ಲ ಎಂದು ಜನರು ಅಂದುಕೊಳ್ಳತೊಡಗಿದ್ದರು. ರಾಹುಲ್ ಸಾಮಾನ್ಯ ಜನರಿಗೆ ಹತ್ತಿರವಾಗತೊಡಗಿದ್ದರು.

ಈ ಯಾತ್ರೆ ದೆಹಲಿ ಪ್ರವೇಶಿಸುವ ಸಮಯ ಬಂದಾಗ ಬಿಜೆಪಿಗೆ ನಿಜವಾಗಿ ಭಯ ಪ್ರಾರಂಭವಾಗಿತ್ತು.. ಹೀಗೆ ಮುಂದುವರಿದರೆ ಇದು ಬಿಜೆಪಿಯ ಯಶಸ್ಸಿನ ನಾಗಾಲೋಟಕ್ಕೆ ತಡೆ ಉಂಟಾಗಬಹುದು ಎಂಬ ಆತಂಕ.. ಅಷ್ಟ್ರರಲ್ಲಿ ಅವರ ಸಹಾಯಕ್ಕೆ ಬಂದಿದ್ದು ವಿಶ್ವದಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಕೊರೋನಾದ ಬಿಎಫ್ ೭ ತಳಿ..

ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಡಿಸೆಂಬರ್ ೨೨ ರಂದು ರಾಹುಲ್ ಗಾಂಧಿ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರಿಗೆ ಪತ್ರವೊಂದನ್ನು ಬರೆದರು. ಕೊರೋನಾ ಮಾರ್ಗದರ್ಶಿ ಸೂತ್ರವನ್ನು ಪಾಲಿಸಿ ಇಲ್ಲವೇ ಯಾತ್ರೆಯನ್ನು ನಿಲ್ಲಿಸಿಬಿಡಿ ಎಂದರು . ಆದರೆ ಕಾಂಗ್ರೆಸ್ ಗೆ ಈ ಪತ್ರ ಬರೆದ ಸಚಿವರು ಸದಾ ಯಾತ್ರೆಗಳನ್ನು ನಡೆಸುತ್ತಲೇ ಇರುವ ಬಿಜೆಪಿಗೆ ಯಾವ ಸೂಚನೆಯನ್ನೂ ನೀಡಲಿಲ್ಲ... ಜೊತೆಗೆ ಕೊರೋನಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಎಂಬ ಸೂಚನೆ ನೀಡುವ ಅಧಿಕಾರ ಅವರಿಗಿದೆ..ಆದರೆ ಯಾತ್ರೆಯನ್ನು ನಿಲ್ಲಿಸಿ ಎಂಬ ಸೂಚನೆಯನ್ನು ನೀಡುವ ಅಧಿಕಾರ ಆರೋಗ್ಯ ಸಚಿವರಿಗೆ ಇದೆಯೆ ಎಂಬ ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ..

ಏನೇ ಇರಲಿ ಸಚಿವರ ಈ ಸೂಚನೆ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಸರ್ಕಾರ ಭಾರತ್ ಜೋಡೋ ಯಾತ್ರೆಯಿಂದ ಭಯಗೊಂಡಿದೆ ಎಂಬುದನ್ನು ಇದು ಸೂಚಿಸುತ್ತದೆ..

ರಾಹುಲ್ ಗಾಂಧಿ ಅವರ ಈ ನೂರು ದಿನಗಳ ಪೂರೈಸಿದ ಯಾತ್ರೆಯಲ್ಲಿ ಅವರು ಆಡಿದ ಒಂದು ಮಾತು  ಬಹಳ ಮುಖ್ಯವಾದುದು..

ದ್ವೇಷದ ಮಾರುಕಟ್ಟೆಯಲ್ಲಿ ನಾನು ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ ಈ ಮಾತು ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಬಹಳ ಮುಖ್ಯವಾದುದು ಎಂದು ನನಗೆ ಅನ್ನಿಸುತ್ತದೆ..ಇವತ್ತು ದ್ವೇಷದ ಮಾರುಕಟ್ಟೆ ತುಂಬಾ ಪ್ರಬಲವಾಗಿದೆ.. ಈ ದ್ವೇಷ ವಿಶ್ವರೂಪ ತಾಳಿ ಭಾರತವನ್ನು ಆಕ್ರಮಿಸಿದೆ. ಭಾರತದ ರಾಜಕಾರಣವನ್ನು ತನ್ನ ವಶ ಮಾಡಿಕೊಂಡಿದೆ..ಪ್ರತಿ ದಿನ ರಾಜಕಾರಣಿಗಳು ವಿಷ ಬೀಜ ಬಿತ್ತ ಅಧಿಕಾರದ ಬೆಳೆ ತೆಗೆಯುತ್ತಿದ್ದಾರೆ..ಬಹುಸಂಖ್ಯಾತರು, ಅಲ್ಪ ಸಂಖ್ಯಾತರಲ್ಲಿ ಭಯವನ್ನು ಹರಡಲಾಗುತ್ತಿದೆ..ದೇಶ ಪ್ರೇಮ ಮತ್ತು ದೇಶದ್ರೋಹದ ವ್ಯಾಖ್ಯೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ,,

ಇಂತಹ ಸಂದರ್ಭದಲ್ಲಿ ಇರುವುದೆಂದರೆ ಪ್ರೀತಿಯ ಅಂಗಡಿಯನ್ನು ತೆರೆಯುವುದೇ ಆಗಿದೆ,, ದ್ವೇಷದ ಮಾರುಕಟ್ಟೆ ತೆರೆದವರು ಈ ಬಗ್ಗೆ ಯೋಚಿಸಲಿ.. ಭಾರತೀಯರೆಲ್ಲ ಪ್ರೀತಿಯ ಅಂಗಡಿ ತೆರೆಯಲು ಮುಂದಾಗಲಿ


Saturday, October 29, 2022

ಕವಲು ದಾರಿಯಲ್ಲಿ ಪತ್ರಿಕೋದ್ಯಮ. ಮಾಧ್ಯಮಗಳು ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕಾಗಿದೆ,,,


 ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿ.. ಇದು ಅಧಿಕಾರಸ್ಥರು ಮಾಧ್ಯಮ ಪ್ರತಿನಿಧಿಗಳಿಗೆ ದೀಪಾವಳಿ ಸಿಹಿ ಕೊಟ್ಟಿದ್ದು.. ಕೇವಲ ಸಿಹಿ ಕೊಟ್ಟಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ದೀಪಾವಳಿ ಸಂದರ್ಭದಲ್ಲಿ ಹೀಗಿ ಸಿಹಿ ಕೊಟ್ಟಿದ್ದು ಹೊಸದಲ್ಲ.. ಆದರೆ ಸಿಹಿಯ ಜೊತೆಗೆ ಲಕ್ಷಾಂತರ ರೂಪಾಯಿ ನಗದು ಕೊಟ್ಟಿದ್ದಾರೆ ಎಂಬುದು ಹೊಸದು.. ಇದೇ ವಿವಾದಕ್ಕೆ ಕಾರಣವಾಯಿತು..ಕೆಲವು ಪತ್ರಿಕೆಗಳ ಸಂಪಾದಕರು ಈ ಕೊಡುಗೆಯನ್ನು ನಿರಾಕರಿಸಿದರು. ಹೀಗೆ ನಿರಾಕರಿಸಿದವರ ಹೆಸರು ಬಹಿರ್ಂಗವಾಯಿತು. ಆದರೆ ಇಯರು ಯಾರು ಈ ನಗದು ಹಣವನ್ನು ತೆಗೆದುಕೊಂಡರು ಎಂಬ ವಿವರ ಪ್ರಕಟವಾಗಲಿಲ್ಲ.

ಇದರೊಂದಿಗೆ ಮಾಧ್ಯಮದ ಪ್ರಾಮಾಣಿಕತೆ ಚರ್ಚೆಗೆ ಗ್ರಾಸವನ್ನು ಒದಗಿಸಿತು,, ಸಾಮಾಜಿಕ ಜಾಲ ತಾಣಗಳಲ್ಲಿ ಜನ ಮಾಧ್ಯಮವನ್ನು ಉಗಿದು ಉಪ್ಪಿನ ಕಾಯಿ ಹಾಕಿದರು.. ಆಡಳಿತಾರೂಢ ಪಕ್ಷ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದಂತೆ ಮಾಧ್ಯಮವನ್ನು ಖರೀದಿ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂತು,, ಮಾಧ್ಯಮದ ಮೇಲೆ ಇಂತಹ ದಾಳಿ ನಡೆಯುತ್ತಿರುವಾಗಲೂ ಮಾಧ್ಯಮವನ್ನು ಪ್ರತಿನಿಧಿಸುವ ಸಂಘಟನೆಗಳು ತುಟಿ ಪಿಟಕ್ ಎನ್ನಲಿಲ್ಲ. ಹಾಗೆ ಬಿಜೆಪಿಯಿಂದಲಾಗಲೀ ಮುಖ್ಯಮಂತ್ರಿ ಕಚೇರಿಯಿಂದಾಗಲಿ ಯಾವುದೇ ಸ್ಪಷ್ಟೀಕರಣ ಬರಲಿಲ್ಲ. ಯಾರೂ ಈ ಘಟನೆಯನ್ನು ಖಂಡಿಸಲಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ಹೇಳಿಕೆ ನೀಡುತ್ತಾರೆ ಎಂದು ನಾನು ಕಾಯುತ್ತಿದ್ದೇನೆ. ನನ್ನ ಕಚೇರಿ ಈ ಕೆಲಸ ಮಾಡಿದ್ದು ತಪ್ಪು ಎಂದು ಹೇಳುತ್ತಾರೆ  ಎಂಬುದು ನನ್ನ ನಿರೀಕ್ಷೆ..ಆದರೆ ಮಾಹಿತಿಗಳ ಪ್ರಕಾರ ನಗುದು ಬಹುಮಾನವನ್ನು ತಿರಸ್ಕರಿಸಿದ ಪತ್ರಿಕಾ ಸಂಪಾದಕರಿಗೆ ಫೋನ್ ಮಾಡಿ ಸಾರಿ ಕೇಳಿದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರೂ ಏನೂ ಹೇಳಲಿಲ್ಲ.

ಮಾಧ್ಯಮ ಕ್ಷೇತ್ರ ಮತ್ತು ರಾಜಕೀಯ ವಲಯದ ನಿಗೂಢ ಮೌನ ನನಗೆ ಆಶ್ಚರ್ಯವನ್ನು ಉಂಟು ಮಾಡಿದೆ.. ಜೊತೆಗೆ ಹಲವು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡಿದೆ..ಈ ನಗುದು ಬಹುಮಾನ ನೀಡಿರುವುದರಲ್ಲಿ ಯಾವ ವಿಶೇಷವೂ ಇಲ್ಲ ಎಂಬುದು ಈ ಮೌನದ ಹಿಂದಿರುವ ಕಾರಣವಾಗಿರಬಹುದೆ ? ಕೆಲವು ದಿನ ಚರ್ಚೆ ನಡೆಯುತ್ತಾರೆ, ನಂತರ ಎಲ್ಲರೂ ಸುಮ್ಮನಾಗುತ್ತಾರೆ ಎಂಬುದೂ ಈ ನಿಗೂಢ ಮೌನದ ಹಿಂದಿನ ಗುಟ್ಟಾಗಿರಬಹುದೆ ?

ಇರಬಹುದು,, ಆದರೆ ಮಾಧ್ಯಮ ಮತ್ತು ರಾಜಕೀಯ ವ್ಯವಸ್ಥೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು..ಇದು ಸಾಮಾನ್ಯ ಇದು ನಡೆಯುತ್ತಲೇ ಬಂದಿದೆ ನಡೆಯುತ್ತಲೇ ಇರುತ್ತದೆ ಎಂಬ ಸಿನಿಕತ ಒಳ್ಳೆಯದಲ್ಲ..

ಬೊಮ್ಮಾಯಿಯವರಿಗೆ ಹಬ್ಬದ ಸಂದರ್ಭದಲ್ಲಿ ಸಿಹಿ ಕೊಡಬೇಕು ಎಂದು ಅನ್ನಿಸಿದರೆ ಅದು ತಪ್ಪಲ್ಲ..ಸಿಹಿ ಹಂಚುವುದು ಸಂಪ್ರದಾಯ. ಎಲ್ಲ ಹಬ್ಬಗಳ ಸಂದರ್ಭದಲ್ಲೂ ಸಿಹಿ ಹಂಚಬಹುದು. ಆದರೆ ಈ ನಿಲುವಿನ ಹಿಂದೆಯೂ ಪ್ರಶ್ನೆಗಳಿವೆ...

ಸಾಧಾರಣವಾಗಿ ಊರಿಗೆಲ್ಲ ಸಿಹಿ ಹಂಚುವುದು ಸಾಧ್ಯವಿಲ್ಲ. ಯಾರೇ ಆಗಲಿ ತಮಗೆ ಬೇಕಾದವರಿಗೆ ಆಪ್ತರಾದವರೆ ಸಿಹಿ ಹಂಚುವುದು ಸಾಮಾನ್ಯ..ಹಾಗಿದ್ದರೆ ಪತ್ರಕರ್ತರು ರಾಜಕಾರಣಿಗಳಿಗೆ ಬೇಕಾದವರೂ ಆಪ್ತರು ಆಗಲು ಸಾಧ್ಯವಿಲ್ಲ.. ಮಾಧ್ಯಮ ಪ್ರತಿ ಪಕ್ಷವಾಗಿ ಕೆಲಸ ಮಾಡಬೇಕು ಎನ್ನುವುದು ಪತ್ರಿಕೋದ್ಯಮದ ಧರ್ಮ..ಈ ಧರ್ಮವನ್ನು ಮಾಧ್ಯಮ ಪಾಲಿಸಿದರೆ ಆಪ್ತರಾಗುವುದು ಬೇಕಾದವರೂ ಆಗುವುದು ಸಾಧ್ಯವೇ ಇಲ್ಲ. ಜೊತೆಗೆ ರಾಜಕಾರಣಿಗಳಿಗೆ ಮಾಧ್ಯಮಗಳ ಮೇಲೆ ಭಯ ಮಿಶ್ರಿತವಾದ ಗೌರವ ಇರಬೇಕು.. ಆದರೆ ಇಲ್ಲಿ ಮಾಧ್ಯಮಗಳ ಬಗ್ಗೆ ಬೊಮ್ಮಾಯಿಯವರಿಗೆ ಮತ್ತು ಅವರ ಸರ್ಕಾರಕ್ಕೆ ಭಯ ಮಿಶ್ರಿತ ಗೌರವ ಇಲ್ಲ. ಅವರಿಗೆ ಮಾಧ್ಯಮ ಅವರ ಆಪ್ತ ವಲಯಕ್ಕೆ ಸೇರಿದೆ ಎಂಬುದು ಅವರ ವರ್ತನೆ ತೋರಿಸಿಕೊಡುತ್ತದೆ.. ಈ ಆಪ್ತತೆ ಬರುವುದು ನೀವು ಅವರ ಪರವಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ,,ಹೀಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ನಗದು ಬಹುಮಾನ ಕೂಡುವಷ್ಟು ಸ್ವಾತಂತ್ರ್ಯವನ್ನು ಮುಖ್ಯಮಂತ್ರಿಗಳ ಕಚೇರಿ ತೆಗೆದುಕೊಂಡಿದೆ..ಹೀಗೆ ಸ್ವಾತಂತ್ರ್ಯ ತೆಗೆದುಕೊಂಡು ನಗದು ಬಹುಮಾನ ಕೊಡುವುದಕ್ಕೆ ಮೊದಲು ಇದು  ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲ ಎಂಬುದನ್ನು ನಂಬುವುದು ಕಷ್ಟ. ಮುಖ್ಯಮಂತ್ರಿಗಳ ಗಮನಕ್ಕೆ ತರದೇ ಅವರ ಸಿಬ್ಬಂದಿಗಳು ಮಾಧ್ಯಮಗಳಿಗೆ ನಗದು ಬಹುಮಾನ ನೀಡುವ ತೀರ್ಮಾನ ತೆಗೆದುಕೊಂಡಿದ್ದರೆ ತಮ್ಮ ಸಿಬ್ಬಂದಿಗಳ ಮೇಲೆ ಮುಖ್ಯಮಂತ್ರಿಗಳಿಗೆ ನಿಯಂತ್ರಣ ಇಲ್ಲ ಎಂದುಕೊಳ್ಳಬೇಕಾಗುತ್ತದೆ.. ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಗದು ಹಂಚುವ ಕೆಲಸ ಮಾಡಿದ್ದರೆ ಇದಕ್ಕೆ ಮುಖ್ಯಮಂತ್ರಿಗಳೇ ಸಂಪೂರ್ಣ ಜವಾಬ್ದಾರರಾಗಬೇಕಾಗುತ್ತದೆ,

ಇನ್ನು ಮಾಧ್ಯಮಗಳ ವಿಚಾರಕ್ಕೆ ಬರೋಣ. ಕೆಲವು ಪತ್ರಿಕಾ ಸಂಪಾದಕರು ಈ ನಗದು ಬಹುಮಾನವನ್ನು ತಿರಸ್ಕರಿಸುವ ಮೂಲಕ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಒಂದೊಮ್ಮೆ ಇವರೂ ಸಹ ಸುಮ್ಮನಿದ್ದು ಬಿಟ್ಟಿದ್ದರೆ ? ಸತ್ಯ ಹೊರಕ್ಕೆ ಬರುತ್ತಲೇ ಇರುತ್ತಿರಲಿಲ್ಲ.. ಇದಕ್ಕಾಗಿ ನಗದು ಬಹುಮಾನವನ್ನು ತಿರಸ್ಕರಿಸಿದ ಸಂಪಾದಕರನ್ನು ಶ್ಲಾಘಿಸಲೇ ಬೇಕು..

ಇವತ್ತು ಮಾಧ್ಯಮ ಸ್ವತಂತ್ರವಾಗಿಲ್ಲ.. ಪ್ರತಿ ಪಕ್ಷವಾಗಿ ಕೆಲಸ ಮಾಡುವುದಕ್ಕೆ ಬದಲಾಗಿ ಬಹುಫರಾಕ್ ಪತ್ರಿಕೋದ್ಯಮ ವಿಜೃಂಭಿಸುತ್ತಿದೆ.. ಮಾಧ್ಯಮದಲ್ಲಿ ಭಟ್ಟಿಂಗಿ ಪತ್ರಿಕೋದ್ಯಮಿಗಳು ಹೆಚ್ಚುತ್ತಿದ್ದಾರೆ..ಬಿಜೆಪಿ ಮತ್ತು ಸಂಘಪರಿವಾರದ ಎಜೆಂಡಾವನ್ನು ಅನುಷ್ಠಾನಕ್ಕೆ ತರುವ ಕಾಯಕದಲ್ಲಿ ಮಾಧ್ಯಮ ನಿರತವಾಗಿದೆ. ಇದಕ್ಕಾಗಿ ಕೇವಲ ಪತ್ರಿಕೋದ್ಯಮಿಗಳನ್ನು ಮಾತ್ರ ದೂಷಿಸಿ ಪ್ರಯೋಜನ ಇಲ್ಲ..ಯಾವುದೇ ಬದ್ಧತೆ ಇಲ್ಲದ ಮಾಧ್ಯಮಗಳ ಮಾಲೀಕರೂ ಇದರ ಹೊಣೆ ಹೊರಬೇಕು..ಈ ಸಂದರ್ಭದಲ್ಲಿ ಪ್ರಜಾವಾಣಿ ಮಾಲಿಕರನ್ನು ನಾವು ನೆನಪು ಮಾಡಿಕೊಳ್ಳಬೇಕು..ಸಾಮಾಜಿಕ ಬದ್ಧತೆಯ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದವರು ಈ ಪತ್ರಿಕೆಯ ಮಾಲಿಕರು.. ಕರ್ನಾಟಕದ ಎಲ್ಲ ಜನಪರ ಮನುಷ್ಯಪರ ಹೋರಾಟಗಳಿಗೆ ಬೆಂಬಲ ನೀಡುತ್ತಲೇ ಬಂದವರು. ಹೀಗಾಗಿ ಪ್ರಜಾವಣಿ ಉಳಿದ ಪತ್ರಿಕೆ ಮತ್ತು ಪತ್ರಕರ್ತರಷ್ಟು ಕೆಟ್ಟು ಹೋಗಿಲ್ಲ. ಇನ್ನೂ ಕೂಡ ಸಾಮಾಜಿಕ ಬದ್ಧತೆ ಇರುವುದು ಪ್ರಜಾವಾಣಿ ಮಾತ್ರ..


Thursday, October 27, 2022

ಜೆಡಿಎಸ್ ಮುಂದಿನ ದಾರಿ ಸುಲಭವಾಗಿಲ್ಲ..


 ಜಾತ್ಯಾತೀತ ಜನತಾ ದಳ ತನ್ನ ಪಂಚರತ್ನ ಯಾತ್ರೆಗೆ ಚಾಲನೆ ನೀಡಿದೆ. ನಿನ್ನೆ ಜೆಡಿಎಸ್ ನ ರಾಷ್ಟೀಯ ಕಾರ್ಯಕಾರಿಣಿ ಸಭೆ ನಡೆದ ಸಂದರ್ಭದಲ್ಲಿ ಯಾತ್ರೆಗೆ ಚಾಲನೆ ನೀಡುವ ಕೆಲಸವೂ ನಡೆಯಿತು. ೧೩ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಕಾರ್ಯಕಾರಿಣಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ರಾಷ್ಟೀಯ ಅಧ್ಯಕ್ಷರನ್ನಾಗಿ ಮುಂದುವರಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು,

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಜಕೀಯ ನಿಲುವು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಪಂಚರತ್ನ ಯಾತ್ರೆಗೆ ಪಂಚರತ್ನ ರಥಯಾತ್ರೆ ಎಂದು ಕರೆಯಲಾಗಿದೆ.. ಹಾಗೆ ಮುಳಬಾಗಿಲಿನ ಕುರುಡುಮಲೆ ದೇವಾಲಯದಿಂದ ಪಂಚರತ್ನ ಯಾತ್ರೆ ನಡೆಯಲಿದೆ. ಅಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಸುಮಾರು ೩೫ ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ಹಾಗೆ ಈ ರಥ ಯಾತ್ರೆಯ ಜೊತೆಗೆ ಕುಮಾರಸ್ವಾಮಿಯವರ ಯಶಸ್ವಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕೂಡ ನಡೆಯಲಿದೆ. ಕುಮಾರಸ್ವಾಮಿ ಅವರ ಪ್ರಕಾರ ಈ ಯಾತ್ರೆ ಜೆಡಿಎಸ್ ಪಕ್ಷಕ್ಕೆ ಒಂದು ಸವಾಲು ಈ ಮಾತನ್ನು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಈ ಬಗ್ಗೆ ಯಾವ ಸಂಶಯವೂ ಬೇಕಾಗಿಲ್ಲ. ಇದು ಜೆಡಿಎಸ್ ಪಕ್ಷಕ್ಕೆ ಸವಾಲಿನ ದಿನಗಳೇ.  ಮುಂದಿನ ೬ ತಿಂಗಳಿನಲ್ಲಿ ಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಶಕ್ತಿಯಿಂದ ಸರ್ಕಾರ ರಚಿಸುವ ಮಾತನ್ನು ಅವರು ಹೇಳಿದ್ದರೂ ಅದು ಸುಲಭವಂತೂ ಅಲ್ಲ.  ಯಾಕೆಂದರೆ ಅವರು ಎದುರಿಸುತ್ತಿರುವ ಸವಾಲಿನ ಸ್ವರೂಪವೇ ಹಾಗಿದೆ.. ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಜನಮನ ಗೆಲ್ಲಲು ತಮ್ಮದೇ ಚುನಾವಣೆ ತಂತ್ರವನ್ನು ರೂಪಿಸಿ ಅದನ್ನು ಅನುಷ್ಠಾನಗೊಳಿಸಲು ಮುಂದಾಗಿವೆ. ರಾಜ್ಯ ಬಿಜೆಪಿ ಹಿಂದುತ್ವದ ಅಜೆಂಡಾದೊಂದಿಗೆ ಮುನ್ನುಗ್ಗುತ್ತಿದೆ. ಪ್ರತಿ ಹಂತದಲ್ಲೂ ಬಹುಸಂಖ್ಯಾತ ಮತಗಳನ್ನು ಕ್ರೋಡೀಕರಿಸತೊಡಗಿದೆ. ಹಿಜಾಬ್ ಮತ್ತು ಮುಸ್ಲೀಂ ವ್ಯಾಪಾರಿಗಳ ನಿಷೇಧದಂತಹ ವಿಚಾರಗಳನ್ನು ತಂದು ಮತದಾರರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ.. ಹಾಗೆ ಈಗ ಅರೇಬಿಕ್ ಶಾಲೆಗಳಲ್ಲಿ ಪರಿಶೀಲಿಸುವುದು, ಮದ್ರಾಸ್ ಗಳ ಮೇಲೆ ನಿಯಂತ್ರಣ ಹೇರುವ ವಿಚಾರವನ್ನು ಜನರ ಮುಂದಿಟ್ಟಿದೆ. ಈ ನಡುವೆ ಅಭಿವೃದ್ಧಿಯ ವಿಚಾರಗಳ ಬಗ್ಗೆ ಮಾತನಾಡುವ ನಾಟಕ ಮಾಡುತ್ತಿದೆ.  ಮೀಸಲಾತಿ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ, ಆ ಮೂಲಕ ದಲಿತರಲ್ಲಿ ವಾಲ್ಮೀಕಿ ಜನಾಂಗದ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ, ಹಿಂದುತ್ವ ಮತ್ತು ಅಭಿವೃದ್ಧಿ ಮೀಸಲಾತಿಯ ವಿಚಾರಗಳು ಭಾರತೀಯ ಜನತಾ ಪಕ್ಷದ ಟ್ರಂಪ್ ಕಾರ್ಡ್ ಆಗಿವೆ.

ಕಾಂಗ್ರೆಸ್ ತನ್ನ ಯಾತ್ರೆಗಳ ಮೂಲಕ ಸಂಘಟನೆಯನ್ನು ಬಲಪಡಿಸುವ ಮತ್ತು ತನ್ನ ಬಲವನ್ನು ವೃದ್ಧಿಸಿಕೊಳ್ಳುತ್ತಿದೆ.. ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿಯವರ ಇಮೇಜ್ ಬದಲಿಸುವ ಕೆಲಸವನ್ನು ಮಾಡಿದೆ. ಅವರು ಗಂಭೀರ ರಾಜಕಾರಣಿ ಅಲ್ಲ ರಜಾ ಕಾಲದ ಪಪ್ಪೂ ಎಂಬ ಬಿಜೆಪಿ ಮತ್ತು ಸಂಘಪರಿವಾರದ ಅಪಪ್ರಚಾರವನ್ನು  ಹಿಮ್ಮೆಟ್ಟಿಸುವ ಕೆಲಸವನ್ನೂ ರಾಹುಲ್ ಗಾಂಧಿ ಮಾಡಿದ್ದಾರೆ. ತಾವು ಈ ದೇಶ ಒಪ್ಪುವ ನಾಯಕ ಎಂದು ಪ್ರತಿಬಿಂಬಿಸುವ ಕೆಲಸವನ್ನೂ ರಾಹುಲ್ ಮಾಡುತ್ತಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಸಾಮಾನ್ಯ ಜನರ ಜೊತೆ ಅವರು ಬೆರೆಯುತ್ತಿರುವ ರೀತಿ ಅವರಲ್ಲಿ ಬದಲಾಗುತ್ತಿರುವ ನಾಯಕನ ಲಕ್ಷಣಗಳು ಕಾಣತೊಡಗಿದೆ.  ಪಾತಾಳಕ್ಕೆ ಕುಸಿಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ತಡೆದು ನಿಲ್ಲಿಸುವ ಕೆಲಸವನ್ನು ಈ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಮಾಡುತ್ತಿದ್ದಾರೆ.

ಇನ್ನೂ ರಾಜ್ಯ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಮೇಕೆದಾಟೃ ಯಾತ್ರೆಯ ನಂತರ ಪಕ್ಷಕ್ಕೆ ಬಲ ತುಂಬುವ ಸಂಘಟನೆಯನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ರಾಜ್ಯದ ಇಬ್ಬರು ಪ್ರಮುಖ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ.ಶಿವಕುಮಾರ್ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಹಿನ್ನೆಡೆಗೆ ಕಾರಣವಾಗಿದ್ದು ನಿಜ. ಆದರೆ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಇದಕ್ಕೆ ತೇಪೆ ಹಾಕುವ ತಾತ್ಕಾಲಿಕವಾಗಿಯಾದರು ಯುದ್ಧ ವಿರಾಮ ಘೋಷಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. 

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರಾಷ್ಟೀಯ ಅಧ್ಯಕ್ಷರಾಗಿರುವುದು ರಾಜ್ಯದ ದಲಿತ ಮತದಾರರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕು. ಸ್ವಲ್ಪ ಮಟ್ಟಿಗೆ ಸೀಮಿತ ಪರಿಣಾಮವನ್ನು ಇದು ಬೀರಬಹುದು.

ಇಂತಹ ಸ್ಥಿತಿಯಲ್ಲಿ ಜೆಡಿಎಸ್ ಸ್ಥಿತಿ ಏನು ? ಜಿಏದಿಎಸ್ ಪಕ್ಷದ ಮತ ಬ್ಯಾಂಕ್ ಯಾವುದು ? ನಿಜ ಹಳೇ ಮೈಸೂರು ಪ್ರದೇಶದಲ್ಲಿ ಈ ಪಕ್ಷ ಬಲವಾಗಿದೆ. ಆದರೆ ಇದು ಮಾತ್ರ ಸಾಕೆ ?  ೧೦೦ ಕ್ಕಿಂತ ಹೆಚ್ಚು ಸ್ಥಾನ ಪಡೆಯುವ ಜೆಡಿಎಸ್ ಗುರಿ ತಲುಪಲು ಇಷ್ಟೆ ಸಾಕೆ ? ಇಲ್ಲ. ಇದು ಸಾಲದು.. ಉತ್ತರ ಕರ್ನಾಟಕ ಪ್ರದೇಶದಲ್ಲಿ  ಪಕ್ಷವನ್ನು ಬಲಪಡಿಸದ ಹೊರತೂ ಈ ಗುರಿ ಗಗನ ಕುಸುಮವಾಗಿಯೇ ಉಳಿಯುತ್ತದೆ.

ಹೀಗಾಗಿ ಜೆಡಿಎಸ್ ಮೊದಲ ತಮ್ಮ ಸೈದ್ಧಾಂತಿಕ ಬದ್ಧತೆಯನ್ನು ಸ್ಪಷ್ಟಪಡಿಸಬೇಕು.. ತಾವು ಯಾವುದರ ಪರ ಯಾವುದಕ್ಕೆ ವಿರೋಧ ಎಂಬುದು ಸ್ಪಷ್ಟವಾಗದಿದ್ದರೆ ಜನರನ್ನು ಆಕರ್ಶಿಸುವುದು ಕಷ್ಟ. ಅವರಾದರೂ ಸರಿ, ಇವರಾದರೂ ಸರಿ ಎಂಬ ಸಮಯಸಾಧಕ ರಾಜಕಾರಣ ನಿರೀಕ್ಷಿತ ಫಲವನ್ನು ನೀಡಲಾರದು.. ಇದಕ್ಕಿರುವ ದಾರಿ ಎಂದರೆ ಜನತಾ ಪರಿವಾರದ ಲೀಗಸಿಯನ್ನು ಮುಂದುವರಿಸುವುದೇ ಆಗಿದೆ.

ಆದರೆ ಜೆಡಿಎಸ್ ನ ಈ ಯಾತ್ರೆಯ ಹೆಸರು ಮತ್ತು ಅದು ಪ್ರತಿನಿಧಿಸುವ ತಾತ್ವಿಕತೆ ಯಾಕೋ ಅನುಮಾನಕ್ಕೆ ಕಾರಣವಾಗಿದೆ.. ರಥ ಯಾತ್ರೆ ಎನ್ನುವುದೇ ಬಿಜೆಪಿಯ ಪರಿಕಲ್ಪನೆ.. ಇದು ಎಲ್, ಕೆ. ಅಡ್ವಾಣಿಯವರ ರಥ ಯಾತ್ರೆಯನ್ನು ನೆನಪಿಸುತ್ತದೆ. ಹಾಗೆ ರಥ ಯಾತ್ರೆ ಸಾಮಾನ್ಯರ ಯಾತ್ರೆಯಲ್ಲ. ರಥದಲ್ಲಿ ಕುಳಿತುಕೊಳ್ಳುವವನು ಮಹಾರಾಜ. ಸಾಮಾನ್ಯ ರಸ್ತೆಯಲ್ಲಿರುತ್ತಾನೆ. ಆಥನಿಗೆ ರಥ ಎನ್ನುವುದೇ ಭಯವನ್ನು ಉಂಟು ಮಾಡುತ್ತದೆ.. ಇದು ಸಾಮಾನ್ಯ ಜನರನ್ನು ಕನೆಕ್ಟ್ ಮಾಡುವುದಿಲ್ಲ..

ಒಂದಂತೂ ನಿಜ..ಜೆಡಿಎಸ್ ಮುಂದಿನ ದಾರಿ ಸುಲಭವಾಗಿಲ್ಲ..

ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಿತಾ ಈ ಅಮಾನವೀಯ ಘಟನೆ ?


 ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಿತಾ ಈ ಅಮಾನವೀಯ ಘಟನೆ ?

ನೆಲದ ಮೇಲೆ ಬಿದ್ದ ಅನ್ನವನ್ನೇ ತಿನ್ನುವಂತೆ ಒತ್ತಡ ಹೇರಲಾಯಿತಾ ?

ಈ ಬಗ್ಗೆ ಮಠವೇ ವಿವರಣೆ ನೀಡಬೇಕು,, ಮಠದ ಭಕ್ತರೊಬ್ಬರು ಕಳುಹಿಸಿದ ವಿವರ ಇಲ್ಲಿದೆ...


ಇಂದು ಶ್ರೀಕೃಷ್ಣ ಮಠದ ಭೋಜನಾ ಶಾಲೆಯಲ್ಲಿ ಮಾನವ ಕುಲಕ್ಕೆ ಆದ ಹೀನ ಘಟನೆ,(ದಿನಾಂಕ 

24-10-2022 ಸಮಯ 2.00PM).


ನಾನು ಸುರೇಶ್ ,ಉಡುಪಿ ಜಿಲ್ಲೆಯ ಹೆಬ್ರಿಯಿಂದ.

ಈ ಮೇಲೆ ತಿಳಿಸಿದ ದಿನಾಂಕ ಮತ್ತು ಸಮಯಕ್ಕೆ ನಾನು ,ನನ್ನ ಹೆಂಡತಿ,ಇಬ್ಬರು ಮಕ್ಕಳು ,ತಮ್ಮ               ಶ್ರೀ ಕ್ಷೇತ್ರದ ಭೋಜನಾ ಶಾಲೆಗೆ ಊಟ ಮಾಡಲೆಂದು ಹೋಗಿದ್ದೆವು.

ಆ ಸಮಯದಲ್ಲಿ ನನ್ನ ಮಗಳು (10 age) ಅನ್ನಕ್ಕೆ ತಟ್ಟೆ ಹಿಡಿಯುವಾಗ ಅಕಸ್ಮಾತ್ತಾಗಿ ಅನ್ನದ ಬಿಸಿ ತಡೆಯಲಾರದೆ  ಅನ್ನದ ಬಟ್ಟಲು ಕೆಳಗೆ ಬಿದ್ದು ಅನ್ನ ಪೂರ್ತಿ ಚೆಲ್ಲಿ ಹೋಯಿತು.

ಇಬ್ಬರು ಅನ್ನ ಬಡಿಸುತ್ತಿದ್ದರು.ಅದರಲ್ಲಿ ಅನ್ನ ಬಡಿಸುತ್ತಿದ್ದ ಒಬ್ಬ  ವ್ಯಕ್ತಿ(ಎತ್ತರದ ವ್ಯಕ್ತಿ,ಕೈಯಲ್ಲಿ ಶಂಖದ ಮುದ್ರೆ ಹೊಂದಿದ್ದಾನೆ).ಅವನು  ಆ ಸಮಯದಲ್ಲಿ  ನನ್ನ ಮಗಳಿಗೆ ಅನ್ನವನ್ನು ಹಾಕದೆ, ಬಿದ್ದ ಅನ್ನವನ್ನು ತಟ್ಟೆಗೆ  ಹಾಕಿಕೊಂಡು ಊಟ ಮಾಡಲು ತಾಕೀತು ಮಾಡಿದ.ನಂತರ ಸಾರು ಬಡಿಸುತ್ತಾ ಬಂದ ಸರಿಸುಮಾರು 75 age ಹಿರಿಯರು ನನ್ನ ಮಗಳ ತಟ್ಟೆ ಖಾಲಿ ಇರುವುದನ್ನು ನೋಡಿ ತಟ್ಟೆ ಹಿಡಿಕೊಂಡು ಆತ ಇರುವಲ್ಲಿ ಅನ್ನ ಹಾಕಿ ಕೊಡಲು ಹೇಳಿದ್ದಾರೆ .ಆದರೆ ಅವನು ಅನ್ನವನ್ನು ಹಾಕದೆ ಅವರ ಬಳಿಯೂ ಕೆಳಗೆ ಬಿದ್ದ ಅನ್ನವನ್ನು ಹಾಕಿಕೊಂಡು ತಿನ್ನಲು ಹೇಳಿದ್ದಾನೆ.ಆ ಹಿರಿಯರು ವಿಧಿ ಇಲ್ಲದೆ ಖಾಲಿ ತಟ್ಟೆಯೊಂದಿಗೆ ಬಂದಿದ್ದಾರೆ.ನಂತರ ಎರಡನೇ ಬಾರಿ ಅವನೇ ಅನ್ನ ತಂದಾಗ ಖಾಲಿ ತಟ್ಟೆ ನೋಡಿ ಅವನು ಅನ್ನ ಹಾಕುವ ರೀತಿ ಇರಲಿಲ್ಲ ನಾವು ಹೇಳಿದ್ದಕ್ಕೆ ಅನ್ನ ಹಾಕಿದ್ದಾನೆ.

ನಂತರ ಅವನ ಬಳಿ ನಿನಗೆ ಮನುಷ್ಯತ್ವ ಇಲ್ವ,ಒಂದು ಮಗುವಿಗೆ ಬಿದ್ದ ಅನ್ನ ತಿನ್ನಲು ಹೇಳುತಿಯಲ್ಲ  ಮತ್ತು ಆ ಹಿರಿಯರು ಅಷ್ಟು  ದೂರ ನಿನ್ನ ಹತ್ತಿರ ಬಂದು ಅನ್ನ ಹಾಕು ಅಂತ ತಟ್ಟೆ ಕೊಟ್ಟರೂ ನೀನು ಅನ್ನ ಹಾಕದೆ ಅವರನ್ನು ವಾಪಾಸು ಕಳುಸಿದಿಯಲ್ಲ  ಅಂತ ನಾವು ಕೇಳಿದಾಗ ಅವನು ನಮಗೂ ಮಾತಾಡೋಕು ಬರುತ್ತೆ ಆ ಮೇಲೆ ಸಿಗಿ ನಿಮ್ಮ ಹತ್ತಿರ ಮಾತಾಡುತ್ತೇನೆ ಅಂತ ಗದರಿಸಿದ್ದಾನೆ.

ನಮಗೆ ತುಂಬಾ ಬೇಜಾರು ಆಗಿ ಭೋಜನಾ ಶಾಲೆಯ ಆಡಳಿತ ಮಂಡಳಿಯಲ್ಲಿ ನಡೆದ ವಿಷಯದ ಬಗ್ಗೆ ಹೇಳಿದ್ದೇವೆ.ಅವರು ವಿಚಾರಿಸುತ್ತೇವೆ ಎಂದು ಹೇಳಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ.

ನನ್ನ ಮಗಳೆ ಅನ್ನವನ್ನು ಬೀಳಿಸಿಕೊಂಡು ಕೆಳಗೆ ಹಾಕಿ ಕೊಂಡಿದ್ದಾಳೆ ಅಂದ್ರುನು ನಾನು ಒಪ್ಪಿಕೊಳ್ಳುತ್ತೇನೆ.ಆದರೆ ನನಗೆ ಬೇಜಾರು ಆಗಿದ್ದು ಎಲ್ಲಿ ಎಂದರೆ ಸಾವಿರಾರು ಜನ ಓಡಾಡುವ ಜಾಗದಲ್ಲಿ ಬಿದ್ದ ಅನ್ನವನ್ನು ಬಾಚಿಕೊಂಡು ತಟ್ಟೆಗೆ ಹಾಕಿಕೊಂಡು ತಿನ್ನಲು ಹೇಳಿದ್ದು ಮತ್ತು ಆ ಹಿರಿಯರು ಅಷ್ಟು ದೂರ ಹೋಗಿ ತಟ್ಟೆಗೆ ಅನ್ನ ಹಾಕು ಅಂತ ಹೇಳಿದರೂ ಅವನು ಅನ್ನ ಹಾಕದೇ ಬಿದ್ದ ಅನ್ನವನ್ನು ಹಾಕಿಕೊಂಡು ತಿನ್ನಲು ಹೇಳಿದ್ದು. ಆ ಸಮಯದಲ್ಲಿ ಎಲ್ಲರೂ ಊಟ ಮಾಡುತ್ತಿದ್ದಳು.ಆದರೆ ನನ್ನ ಮಗಳಿಗೆ ಊಟ ಇಲ್ಲದೇ ಸುಮ್ಮನೆ ಕುಳಿತ್ತಿದ್ದಳು.ಅವನೇ ನನ್ನ ಮಗಳ ಸ್ಥಾನದಲ್ಲಿ ಇದ್ದಿದ್ದರೆ ಅವನು ಸಾವಿರಾರು ಜನರು ಓಡಾಡುವ ಜಾಗದಲ್ಲಿ ಬಿದ್ದ ಅನ್ನವನು ಬಾಚಿ ಹಾಕಿಕೊಂಡು ತಿನ್ನುತ್ತಿದ್ದನೇ? .ಯಾರಿಗೂ ಕೂಡ ಈ ರೀತಿ ಆಗಬಾರದು.ಮನಸ್ಸಿಗೆ ತುಂಬಾ ಬೇಜಾರಾಯಿತು.ಅವನಿಗೆ ಮನುಷ್ಯತ್ವವೇ ಇಲ್ಲ ಅಂತ ಅನಿಸುತ್ತೆ.ಮಠದವರು ಭಕ್ತಾದಿಗಳಿಗೆ ಉತ್ತಮ ಭೋಜನವನ್ನು ನೀಡುತ್ತಿದ್ದಾರೆ ಆದರೆ ಇಂತ ನೀಚ ಮನಸ್ತಿತಿ ಇರುವ ಇವನಿಗೆ ಅನ್ನ ಬಡಿಸುವ ವಿಚಾರದಲ್ಲಿ ಅಹಂಕಾರ ದರ್ಪ.ಇವನ ವರ್ತನೆ ನೋಡಿದರೆ ಇವನ ಮನೆಯ ಊಟ ನಮಗೆ ಬಡಿಸಿದ ಹಾಗೆ ಇದೆ.ಊಟ ಹಾಕುವ ವಿಚಾರದಲ್ಲಿ ಅವನು ನಡೆದುಕೊಂಡಿದ್ದು ತುಂಬಾ ಬೇಜಾರಾಯಿತು.ಅವನ ರೀತಿಯಲ್ಲಿ ನೋಡಿದರೆ ಇದೊಂದು ಪನಿಶ್ಮೆಂಟ್ ರೀತಿ ಇತ್ತು.ಅವನ ಜಾಗದಲ್ಲಿ ಬೇರೆ ಯಾರೂ ಇದ್ದರೂ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ.ಅಲ್ಲಿದ್ದ ಕೆಲವರು ಈ ವಿಷಯ ನೋಡಿದ ಬಳಿಕ ರಾಜ್ಯಸರಕಾರಕ್ಕೆ ,ಪ್ರಧಾನಿಗೆ,ಡಿಸಿ ಗೆ,ಹೈಕೋರ್ಟ್ ಜಡ್ಜ್ ಗೆ ಪತ್ರ ಬರೆಯಿರಿ ಎಂದು ಸಲಹೆ ಕೊಟ್ಟಿದ್ದಾರೆ  .ಆದರೆ ನನ್ನ ಮನಸ್ಸಿಗೆ ಆದ ನೋವನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದೇನೆ.ನನ್ನ  ಮಗಳಿಗೆ ಆದ ರೀತಿ ಬೇರೆ ಯಾರಿಗೂ ಆಗೋದು ಬೇಡ.ಅಂತಹ ದುಷ್ಟವ್ಯಕ್ತಿಯನ್ನು  ಶ್ರೀಕೃಷ್ಣ ಪರಮಾತ್ಮ ಮತ್ತು ಮುಖ್ಯಪ್ರಾಣ ನೋಡಿಕೊಳ್ಳಲಿ...............

ಕೇಜ್ರಿವಾಲ್. ಬಿಜೆಪಿ ಬುಡಕ್ಕೆ ಹಿಂದುತ್ವದ ಬಾಂಬ್..!


 ಅರವಿಂದ್ ಕೇಜ್ರಿವಾಲ್...

ಸರ್ಕಾರಿ ನೌಕರಿಯನ್ನು ಬಿಟ್ಟು ಸಾಮಾಜಿಕ ಬದುಕಿಗೆ ಕಾಲಿಟ್ಟವರು.. ಅಣ್ಣಾ ಹಜಾರೆಯ ಜೊತೆ ಕೈಜೋಡಿಸಿ ಅವರ ಜೊತೆ ಹೋರಾಟದ ಹಾದಿಯಲ್ಲಿ ಮುನ್ನಡೆದವರು.. ಆ ಅ ಸಮಯದಲ್ಲಿ ಅವರು ದೆಹಲಿಯ ಮುಖ್ಯಮಂತ್ರಿಯಾಗಬಹುದು ಎಂದು ಯಾರೂ ನಿರೀಕ್ಷಿಸರಲಿಲ್ಲ. ಹಾಗೆ ಪಂಜಾಬ್ ರಾಜ್ಯದ ಅಧಿಕಾರವನ್ನು ಆಮ್ ಆದ್ಮಿ ಪಾರ್ಟಿ ಪಡೆದಾಗ ಹಲವರಿಗೆ ಆಶ್ಚರ್ಯವಾಗಿತ್ತು,, ಬುಶ್ ಶರ್ಟ್ ಧರಿಸಿ ಆಗಾಗ ಕೆಮ್ಮುತ್ತ ಗಂಟಲು ಸರಿಮಾಡಿಕೊಂಡು ಮಾತನಾಡುವ ಕೇಜ್ರಿವಾಲ್ ಅಂತಹ ಜನಪ್ರಿಯ ನಾಯಕ ಎಂದೂ ಅನ್ನಿಸಿರಲಿಲ್ಲ.

ಆದರೆ ದೆಹಲಿಯಲ್ಲಿ ಅವರು ನೀಡಿದ ಆಡಳಿತ ಮತ್ತು ಅವರ ಆದ್ಯತೆಗಳು ಸಾಂಪ್ರದಾಯಿಕ ರಾಜಕಾರಣಕ್ಕೆ ಸಡ್ದು ಹೊಡೆದಂತೆ ಇತ್ತು. ಅವರು ಭಾರತದ ರಾಜಕಾರಣದ ವ್ಯಾಖ್ಯೆಯನ್ನು ಬದಲಿಸುತ್ತಿದ್ದಾರೆ ಎಂದು ಅನ್ನಿಸುತ್ತಿತ್ತು.. ಪ್ರಾಯಶಃ ದೆಹಲಿಯ ಜನ ಕೂಡ ಹಾಗೆ ಅಂದುಕೊಂಡಿದ್ದರು. ಶಿಕ್ಷಣ ಆರೋಗ್ಯದಂತಹ ಜನರ ಮೂಲಭೂತ ಅವಶ್ಯಕತೆಗಳತ್ತ ಅವರು ನೀಡುತ್ತಿದ್ದ ಲಕ್ಷ್ಯ ಮತ್ತು ಆದ್ಯತೆ ಬೆರಗು ಮೂಡಿಸುವಂತೆ ಇತ್ತು.. ಆದರೆ ಅವರ ಒಳಗೆ ಒಬ್ಬ ರಾಜಕಾರಣಿ ಇದ್ದ. ಅವನಲ್ಲಿ ರಾಜಕೀಯ ಚಾಕಚಕ್ಯತೆ ಇತ್ತು. ಬದ್ಧತೆಗಿಂತ ರಾಜಕೀಯ ಗೆಲವು ಅವನಿಗೆ ಮುಖ್ಯವಾಗಿತ್ತು..

ಹಾಗೆ ನೋಡಿದರೆ ಅಣ್ಣಾ ಹಜಾರೆ ಕೂಡ ಮುಖವಾಡ ಧರಿಸಿದ್ದರು. ಆ ಮುಖವಾಡದ ಹಿಂದಿದ್ದ ನೈಜ ಮುಖ ಹಿಂದುತ್ವದ ಮುಖವಾಗಿತ್ತು.. ಬೆಜೆಪಿಗೆ ಸಹಾಯ ಮಾಡುವ ಹೋರಾಟ ಅವರದಾಗಿತ್ತು.. ಅವರು ನಡೆಸಿದ ಎಲ್ಲ ಹೋರಾಟಗಳ ಹಿಂದೆ ಬಿಜೆಪಿಯ ವರದ ಹಸ್ತ, ಲೋಕಪಾಲ್ ವ್ಯವಸ್ಥೆಗಾಗಿ ಅವರು ನಡೆಸುತ್ತಿದ್ದ ಹೋರಾಟಕ್ಕೆ ವ್ಯವಸ್ಥೆಯ ಹಿಂದೆ ಬಿಜೆಪಿಯ ಉದ್ಯಮಪತಿಗಳ ಬೆಂಬಲವಿತ್ತು.. ಆದರೆ ಇದಕ್ಕೆ ಹೆಚ್ಚಿನ ಮಹತ್ವವವನ್ನು ಯಾರೂ ನೀಡಲೇ ಇಲ್ಲ. ಆಣ್ಣಾ ಹಜಾರೆ ಮಹಾತ್ಮಾ ಗಾಂಧಿಯವರ ನಂತರದ ಮಹತ್ವದ ಹೋರಾಟಗಾರ ಎಂಬಂತೆ ಮಾಧ್ಯಮಗಳು ಬಿಂಬಿಸಿದವು.. ಇದರ ಹಿಂದೆಯೂ ಬಿಜೆಪಿಯ ಕೈವಾಡವಿತ್ತು.

ಈ ಎಲ್ಲ ಸಂದರ್ಭಗಳಲ್ಲಿ ಅರವಿಂದ್ ಕೇಜ್ರಿವಾಲ್ ರಾಮನ ಮುಂದೆ ಹನುಮಂತ ತಲೆ ಬಗ್ಗಿಸಿ ಕುಳಿತ ಹಾಗೆ ಕೇಜ್ರಿವಾಲ್ ಕುಳಿತಿದ್ದರು..ಅಣ್ಣಾ ಹಜಾರೆಯ ಈ ಮುಖವಾಡದ ಹೋರಾಟ ತಿಳಿಯದಷ್ಟು ಕೇಜ್ರಿವಾಲ್ ಮೂರ್ಖರಾಗಿರಲಿಲ್ಲ. ಅವರು ತಮ್ಮ ಸಮಯಕ್ಕಾಗಿ ಕಾಯುತ್ತಿದ್ದರು. ಯಾಕೆಂದರೆ ಅವರೂ ಸಹ ಮುಖವಾಡದ ವ್ಯಕ್ತಿಯಾಗಿದ್ದರು.

ಅವರು ದೆಹಲಿ ಮುಖ್ಯಮಂತ್ರಿಯಾಗುವ ಹೊತ್ತಿಗೆ ಅವರ ಜೊತೆಗಿದ್ದ ಹಲವರು ಅವರನ್ನು ತೊರೆದರು. ಯೋಗೇಂದ್ರ ಯಾದವ್ ಅವರಂತವರು ಕೇಜ್ರಿವಾಲ್ ಅವರನ್ನು ಬಹುಬೇಗ ಅರ್ಥಮಾಡಿಕೊಂಡಿದ್ದರು.. ಆದರೆ ಅಷ್ಟರಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದರು.. ದೆಹಲಿಯ ಸರ್ಕಾರಿ ಶಾಲೆಗಳು ತಮ್ಮ ರೂಪ ಬಣ್ಣವನ್ನು ಬದಲಿಸಿದ್ದವು.. ಖಾಸಗಿ ಶಾಲೆಗಳ ಜೊತೆ ಪೈಪೋಟಿ ನೀಡುವಷ್ಟು ಸರ್ಕಾರಿ ಶಾಲೆಗಳು ಬದಲಾದವು. ಸರ್ಕಾರಿ ಆಸ್ಪತ್ರೆಗಳು ಸುಧಾರಿಸಿದವು.. ದೇಶದ ಸಾಮಾನ್ಯ ಜನ ಅರವಿಂದ್ ಕೇಜ್ರಿವಾಲ್ ಅವರತ್ತ ಆಸೆ ಗಣ್ಣುಗಳಿಂ ನೋಡತೊಡಗಿದರು.. ದೇಹಲಿಗೆ ಭೇಟಿ ನೀಡುವ ರಾಜಕಾರಣಿಗಳು ಸಾಮಾನ್ಯ ಜನ ಅಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಯಿತು.

ಕೇಜ್ರಿವಾಲ್ ತಮ್ಮ ವ್ಯಕ್ತಿತ್ವಕ್ಕಿಂತ ದೊಡ್ಡದಾಗಿ ಬೆಳೆಯತೊಡಗಿದರು...ಆದರೆ ಆಗಲೇ ಅವರು ಸಾಫ್ಟ್ ಹಿಂದುತ್ವದ ಆರಾಧಕರಾಗಿದ್ದರು. ದೆಹಲಿಯಲ್ಲಿ ಹಿಂಸೆ ತಾಂಡವಾಡುತ್ತಿದ್ದಾಗ ಅವರು ಹಿಂಸಾಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿಲ್ಲ. ಹಿಂಸೆಯಿಂದ ನಲುಗಿದ ಜನರಿಗೆ ಸಾಂತ್ವನ ಹೇಳುವ ಕೆಲಸವನ್ನು ಮಾಡಲಿಲ್ಲ...ಪ್ರತಿಷ್ಟಿತ ಜವಾಹರ್ ನೆಹರೂ ವಿಶ್ವಾವಿದ್ಯಾಲಯವನ್ನು ಕೇಸರಿಕರಣ ಮಾಡುವ ಪ್ರಕ್ರಿಯೆಗಳು ನಡೆಯುವಾಗ ಅವರ ಬಾಯಿಯಿಂದ ಯಾವ ಮಾತೂ  ಬರಲಿಲ್ಲ. ಜೊತೆಗೆ ಅವರು ಬಿಜೆಪಿಯ ಎಜೆಂಡಾವನ್ನು ಅನುಷ್ಠಾನಗೊಳಿಸುವುದರಲ್ಲಿ ನಿರತರಾದರು..

ಕೇಂದ್ರ ಪ್ರಭುತ್ವ ದೇವಾಲಯಗಳನ್ನು ನಿರ್ಮಿಸಲು ಆದ್ಯತೆ ನೀಡಿದರೆ, ಕೇಜ್ರೀವಾಲ್ ಈ ದೇವಾಲಯಗಳಿಗೆ ಭಕ್ತರನ್ನು ಸರಬರಾಜು ಮಾಡುವ ಯೋಜನೆಗಳನ್ನು ರೂಪಿಸತೊಡಗಿದರು, ವಯಸ್ಕರಿಗೆ ಉಚಿತ ತೀರ್ಥಯಾತ್ರೆ ಮಾಡಿಸತೊಡಗಿದರು..

ಕೇಜ್ರಿವಾಲ್ ಬದಲಾಗಿರಲಿಲ್ಲ. ಅವರು ಇದ್ದುದೇ ಹಾಗಾಗಿತ್ತು.

ಅವರ ಸಂಪುಟ ಸದಸ್ಯರ ಮೇಲೆ ಬಂದ ಭ್ರಷ್ಟಾಚಾರದ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಅದು ರಾಜಕೀಯ ಪ್ರೇರಿತ ಆರೋಪಗಳು ಇರಬಹುದು.. ಆದರೆ ಅಷ್ಟರಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಕ್ಷದ ಅಪಾಯ ಅರಿವಾಗಿತ್ತು.. ಅಭಿವೃದ್ಧಿಯ ಮಾತನಾಡುತ್ತ ಹಿಂದು ಮತಗಳನ್ನು ಅವರು ಕ್ರೋಡಿಕರಿಸುತ್ತಿರುವ ರೀತಿಯಿಂದ ಬಿಜೆಪಿ ಎಚ್ಚರಗೊಂಡಿತು..ಅಷ್ಟರಲ್ಲಿ ದೆಹಲಿ ಪಂಜಾಬ್ ನಂತರ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್ ಗೂ ಕಾಲಿಟ್ಟಾಗಿತ್ತು.. ಅಲ್ಲಿಯೂ ಜನ ಆಮ್ ಆದ್ಮಿ ಪಕ್ಷದತ್ತ ನೋಡತೊಡಗಿದ್ದರು. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಹಿಂದೂ ಮತ ಬ್ಯಾಂಕ್ ಅನ್ನು ಕೇಜ್ರಿವಾಲ್ ಪಕ್ಷ ಒಡೆಯಬಹುದು ಎಂಬ ಆತಂಕ ಬಿಜೆಪಿಯದು..

ಅರವಿಂದ್ ಕೇಜ್ರಿವಾಲ್ ತಮ್ಮ ಮೃದು ಹಿಂದುತ್ವದ ಅಜೆಂಡಾವನ್ನು ಪರಿಣಾಮಕಾರಿಯಾಗಿ ಜಾರಿಗೆ ತರತೊಡಗಿದರು..ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ ಎಂಬ ಘೋಷಣೆಯನ್ನು ಕೂಗಿದರು. ರಾಮ ರಾಜ್ಯದ ಮಾತನಾಡತೊಡಗಿದರು. ಕೃಷ್ಣನನ್ನೂ ನೆನಪು ಮಾಡಿಕೊಳ್ಳತೊಡಗಿದರು..

ಬಿಜೆಪಿ ಕೇಜ್ರಿವಾಲ್ ಮೇಲೆ ಸತತ ದಾಳಿಯನ್ನು ಮುಂದುವರಿಸಿತು. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಅವರ ಬಾಯಿ ಮುಚ್ಚಿಸಲು ಯತ್ನ ನಡೆಸಾಲಾಯಿತು.. ಆದರೆ ಇದೆಲ್ಲ ನಿರೀಕ್ಷಿತ ಪರಿಣಾಮ ನೀಡಲಿಲ್ಲ. ಸಚಿವ ಸಿಸೋಡಿಯಾ ಅವರನ್ನು ಜೈಲಿಗೆ ಕಳುಹಿಸುವ ಯತ್ನವನ್ನೂ ಮುಂದುವರಿಸಲಾಯಿತು..

ಈಗ ಅರವಿಂದ್ ಕೇಜ್ರಿವಾಲ್ ಹಿಂದೂ ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟಿದ್ದಾರೆ. ಅದಕಾಗ್ಗಿ ಅವರು ಯಾವ ಹಂತವನ್ನು ತಲುಪಿದ್ದಾರೆ ಎಂದರೆ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಮ್ಮ ಸಹೋದ್ಯೋಗಿ ಗೌತಮ್ ಅವರನ್ನು ಸಂಪುಟದಿಂದ ಹೊರಹಾಕಿದ್ದಾರೆ.. ಹಿಂದೂಗಳ ಮನವೊಲಿಕೆಗೆ ಏನನ್ನಾದರೂ ಮಾಡಲು ಅವರು ಸಿದ್ದರಾಗಿದ್ದಾರೆ..

ಅವರು ಇತ್ತೀಚಿಗೆ ನೀಡಿದ ಒಂದು ಹೇಳಿಕೆಯನ್ನೇ ಗಮನಿಸಿ.. ನಮ್ಮ ನೋಟುಗಳಲ್ಲಿ ಲಕ್ಷ್ಮಿ ಮತ್ತು ಗಣೇಶನ ಚಿತ್ರವನ್ನು ಮುದ್ರಿಸಬೇಕು ಎಂಬ ಅವರ ಹೇಳಿಕೆ ಬಿಜೆಪಿ ಒಳಗೆ ತಲ್ಲಣವನ್ನು ಸೃಷ್ಟಿಸಿದೆ..ಬಿಜೆಪಿಯ ವಕ್ತಾರರು ಕೇಜ್ರಿವಾಲ್ ಅವರನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಆದರೆ ಕೇಜ್ರಿವಾಲ್ ಬಿಜೆಪಿಯ ಬಾಣವನ್ನು ಅವರ ಮೇಲೆ ತಿರುಗಿಸಿಬಿಟ್ಟಿದ್ದಾರೆ..ಭಾರತದ ನೋಟುಗಳ ಮೇಲೆ ಹಿಂದೂ ದೇವರ ಚಿತ್ರ ಹಾಕಬೇಕು ಎಂಬ ಬೇಡಿಕೆಯನ್ನು ಬಿಜೆಪಿ ಮತ್ತು ಕೇಂದ್ರ ಪ್ರಭುತ್ವ ತಿರಸ್ಕರಿಸುವಂತೆಯೂ ಇಲ್ಲ, ಒಪ್ಪಿಕೊಳ್ಳುವಂತೆಯೂ ಇಲ್ಲ. ಒಂದೊಮ್ಮೆ ಒಪ್ಪಿಕೊಂಡರೆ ಕೇಜ್ರಿವಾಲ್ ಹಿಂದೂಗಳ ಹೃದಯ ಸಾಮ್ರಾಟನಾಗುವತ್ತ ಇನ್ನೊಂದು ಹೆಜ್ಜೆಯನ್ನು ಇಟ್ಟುಬಿಡುತ್ತಾರೆ. ಹೀಗಾಗಿ ಬಿಜೆಪಿ ಅಡಗತ್ತರಿಯಲ್ಲಿ ಸಿಲುಕಿಕೊಂಡ ಅಡಕೆಯಂತಾಗಿದೆ..

ಈ ಮೃದು ಹಿಂದುತ್ವ ಗುಜರಾತ್ ಚುನಾವಣೆಯಲ್ಲಿ ಕೇಜ್ರಿವಾಲ್ ಅವರಿಗೆ ಲಾಭವನ್ನು ತಂದುಕೊಡಬಲ್ಲದೇ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಬಿಜೆಪಿಗೆ ದೊಡ್ಡ ತೊಡರುಗಾಲು ಎಂಬುದು ಮಾತ್ರ ನಿಜ..

ಈ ಬೆಳವಣಿಗೆ ಇನ್ನೊಂದು ಅಂಶವನ್ನು ಸ್ಪಷ್ಟಪಡಿಸಿದೆ.. ಕೇಜ್ರಿವಾಲ್ ಬಿಜೆಪಿಯ ಇನ್ನೊಂದು ಮುಖ.. ಅವರ ಅಜೆಂಡಾ ಸಂಘ ಪರಿವಾರ ಮತ್ತು ಬಿಜ್ರ್ಪಿಯ ಅಜೆಂಡಾಗಿಂತ ಭಿನ್ನವಾಗಿಲ್ಲ ಎಂಬುದು

Wednesday, October 26, 2022

ಬಸವಲಿಂಗ್ ಸ್ವಾಮಿ ಹನಿಟ್ರಾಪ್ ?

 


ಬಸವಲಿಂಗ್ ಸ್ವಾಮಿ ಹನಿಟ್ರಾಪ್ ?  

ಆಸ್ತಿಗಾಗಿ ನಡೆಯಿತೇ ? ಷಡ್ಯಂತ್ರ ?

ಡೆತ್ ನೋಟ್...ನಲ್ಲಿ ಏನಿದೆ ?

ಒಳಗಿನವರೇ ಶತ್ರುಗಳು...

ಮರ್ಯಾದೆಗೆ ಹೆದರಿ ಆತ್ಮಹತ್ಯೆ,,

Saturday, October 22, 2022

ಬಲಿಯಿಂದ್ರ ಬಂದು ಬಾಗ್ಲಾಗೆ ನಿಂದಾಗ ಹೊನ್ನಂಥ ಮಳೆಯೇ ಸುರಿದಾವೂ,,,





ದೀಪಾವಳಿ ದೊಡ್ಡ ಹಬ್ಬ..ಇದನ್ನು ಕರೆಯುವುದೇ ಹಾಗೆ.. ಮೂರು ದಿನಗಳ ಈ ಹಬ್ಬದಲ್ಲಿ ಸಂಭ್ರಮ.. ನರಕ ಚತುರ್ದಶಿಯಿಂದ ಬಲಿ ಪಾಡ್ಯದವರೆಗೆ.. ಈ ಮೂರು ದಿನಗಳಲ್ಲಿ ಮೊದಲ ದಿನ ದೀಪ ಹಚ್ಚುವುದು ಮುಖ್ಯ.. ದೀಪದ ದೊಂದಿಯನ್ನು ಹಿಡಿದು ತೋಟಕ್ಕೆ ಹೋಗಿ ಹಬ್ಬವನ್ನು ಕಳಿಸುವುದು ಮೂರನೆಯ ದಿನ.. ಅಂದೇ ಗೋಪೂಜೆ ಮತ್ತು ಗೋಗಳನ್ನು ಸಿಂಗಾರ ಮಾಡಿ ಊರ ಹೊರಗೆ ಕರೆದೊಯ್ಯಲಾಗುತ್ತದೆ.. ಅಡಿಕೆ ಸರಗಳಿಂದ ಶ್ರಂಗಾರ ಮಾಡಿದ ಎಲ್ಲರ ಮನೆಯ ಗೋವುಗಳು ಊರ ಹೊರಗಿನ ಮೈದಾನಕ್ಕೆ ಬರುತ್ತವೆ. ಅಲ್ಲಿ ಗೋ ಬೆಚ್ಚುವ ಕಾರ್ಯಕ್ರಮ ನಡೆಯುತ್ತದೆ.
ನಾನು ಹೇಳಲು ಹೊರಟಿದ್ದು ಇದನ್ನಲ್ಲ.. ಬಲಿ ಬಲಿಯಾದ ಕಥೆ ಮತ್ತು ಬಿಂಗಿ ಪದ ನನ್ನನ್ನು ಹೆಚ್ಚು ಹೆಚ್ಚು ಕಾಡುತ್ತಿದೆ. ಬಾಲ್ಯದಲ್ಲಿ ದೊಡ್ಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಾಗ ಏನೂ ಅನ್ನಿಸುತ್ತಿರಲಿಲ್ಲ. ಆಗ ಕೊಟ್ಟಿಗೆಯಲ್ಲಿರುವ ದನ ಎಮ್ಮೆ ಎತ್ತುಗಳಿಗೆ ಮೈತೊಳೆಯುವುದು ಶ್ರಂಗಾರ ಮಾಡುವುದು ಅತಿ ಸಂತೋಷದ ಕೆಲಸವಾಗಿತ್ತು.. ಜೊತೆಗೆ ವಾರಾಂತ್ಯದಲ್ಲಿ ದನ ಕಾಯುವವರು ಬರದಿದ್ದಾಗ ದನ ಕಾಯಲು ಹೋಗುತ್ತಿದ್ದೆ. ಹೀಗಾಗಿ ಕೊಟ್ಟೆಗೆಯಲ್ಲಿರುವ ದನ ಎಮ್ಮೆ ಎತ್ತುಗಳ ಜೊತೆ ಆತ್ಮೀಯ ಸಂಬಂಧ ಬೆಳೆದಿರುತ್ತಿತ್ತು. ಹೀಗಾಗಿ  ಅವುಗಳ ಮೈ ತೊಳೆಯಲು ಕೊಟ್ಟಿಗೆಯಿಂದ ಹೊರಕ್ಕೆ ಕರೆದುಕೊಂಡು ಬಂದಾಗ ಅವುಗಳಿಗೂ ಸಂಭ್ರಮ.. ಮೈತೊಳೆಯುವಾಗ ಈ ಮೂಕ ಪ್ರಾಣಿಗಳು ಸಂಭ್ರಮಿಸುವ ರೀತಿ ನನಗೂ ಸಂತೋಷವನ್ನು ನೀಡುತ್ತಿತ್ತು.
ಈ ದೊಡ್ಡ ಹಬ್ಬವನ್ನು ದೊಡ್ಡ ಹಬ್ಬ ಎಂದು ಯಾಕೆ ಕರೆಯಲಾಗುತ್ತಿದೆ ? ಮೂರು ದಿನಗಳ ಕಾಲ ನಡೆಯುತ್ತಿರುವುದರಿಂದ ಇದು ದೊಡ್ಡ ಹಬ್ಬವಾಯಿತೇ ? ಅಥವಾ ಬಲಿಯಿಂದ್ರನನ್ನ್ನು ವಾಮನ ಭೂಮಿಯ ಒಳಗೆ ತುಳಿದಿದ್ದರಿಂದ ಇದನ್ನು ದೊಡ್ಡ ಹಬ್ಬ ಎಂದು kಅರೆಯಲಾಯಿತೆ ? ಈ ಪುರಾಣದಲ್ಲಿ ಇರುವ ಪ್ರಮುಖ ಪಾತ್ರ ಎರಡೇ.. ಒಬ್ಬ ವಾಮನ ಇನ್ನೊಬ್ಬ ಬಲಿಯಿಂದ್ರ.. ವಾಮನ ವಿಶ್ಣುವಿನ ಅವತಾರ.. ಆತ ಬಲಿಯಿಂದ್ರನನ್ನು ಭೂಮಿಯ ಒಳಗೆ ತಳ್ಳಲು ಬ್ರಾಹ್ಮಣವೇಶಧಾರಿಯಾಗಿ ಬರುತ್ತಾನೆ. ನೆಲ ಸಂಸ್ಕೃತಿಯನ್ನು ಪ್ರತಿನಿಧಿಸುವ ಬಲಿಯನ್ನು ಸನಾತನ ಧರ್ಮದ ಪರಿಪಾಲಕರಾದ ಬ್ರಾಹ್ಮಣ ವೇಷಧಾರಿ ವಿಷ್ಣು ನೆಲಕ್ಕೆ ಕುಸಿಯುವಂತೆ ಮಾಡುವ ಮೂಲಕ ನೆಲ ಸಂಸ್ಕೃತಿಯ ವಿರುದ್ಧ ಬ್ರಾಹ್ಮಣ ಸಂಸ್ಕೃತಿ ಜಯಿಸುವಂತೆ ಮಾಡುತ್ತಾನೆ.. ಹೀಗಾಗಿ ನೆಲ ಸಂಸ್ಕೃತಿ ಕುಸಿದಿದ್ದು ಸನಾತನ ಧರ್ಮ ಜಯಿಸಿದ್ದು ದೊಡ್ಡ ಹಬ್ಬವಾಯಿತೆ..? ನನಗೆ ಹಾಗೇ ಅನಿಸುತ್ತದೆ..
ಹೀಗೆ ನೆಲಕ್ಕೆ ತಳ್ಳಲ್ಪಟ್ಟ ಬಲಿ ವರ್ಷಕ್ಕೆ ಮೂರು ದಿನ ಭೂಮಿಗೆ ಬರಲು ವಿಷ್ಣು ಅವಕಾಶ ನೀಡುತ್ತಾನೆ..ಅಂದರೆ ಸನಾತನ ಧರ್ಮ ನೆಲ ಸಂಸ್ಕೃತಿಗೆ ವರ್ಷಕ್ಕೆ ಮೂರು ದಿನದ ವರ ನೀಡುತ್ತದೆ.. ಪ್ರಾಯಶಃ ಈ ಹಬ್ಬಕ್ಕೆ ನೆಲದ ಜೊತೆ ನೇರವಾದ ಸಂಬಂಧವಿದೆ.. ಮನೆಯಲ್ಲಿರುವ ಜಾನುವಾರುಗಳ ಪೂಜೆಯಿಂದ ಕೃಷಿ ಉಪಕರಣಗಳ ಪೂಜೆಯವರೆಗೆ...
ಬಲಿಯಿಂದ್ರನ ಮೂಲ ಹೆಸರು ಬಲಿ ಎಂದು ಇರಲಿಕ್ಕಿಲ್ಲ. ಆತ ವಾಮನನಿಗೆ ಬಲಿಯಾದ್ದರಿಂದ ಬಲಿ ಎಂಬ ಹೆಸರು ಬಂದಿರಲಿಕ್ಕೂ ಸಾಕು.. ವಿಷ್ಣು ಕುಬ್ಜ ರೂಪದಲ್ಲಿ ಬಂದು ಬಾಹುಬಲಿಯನ್ನು ಬಲಿ ಹಾಕಿದ... ಬಲಿ ನಿಜವಾದ ಅರ್ಥದಲ್ಲಿ ಬಾಹುಬಲಿಯೇ.. ಆತ ಶಕ್ತಿ ಸಂಪನ್ನನಾಗಿದ್ದ. ದೈವ ಭಕ್ತನಾಗಿದ್ದ,, ಆದರೂ ಆತ ಬಲಿಯಾದ. ಅದೂ ಬ್ರಾಹ್ಮಣ ರೂಪದಲ್ಲಿ.. ಇದನ್ನು ಇನ್ನೂ ವಿಶದೀಕರಿಸುವುದಾದರೆ ಬ್ರಾಹ್ಮಣರು ಬಲಿಯಿಂದ್ರನನ್ನು ಬಲಿ ಹಾಕಿದರು ಎಂದೂ ಹೇಳಬಹುದಲ್ಲವೆ ?  ಸನಾತನ ಧರ್ಮ ನೆಲ ಧರ್ಮದ ಮೇಲೆ ವಿಜಯ ಸಾಧಿಸುವಂತೆ ಮಾಡಲಾಯಿತು ಎಂದೂ ವ್ಯಾಖ್ಯಾನಿಸಬಹುದು ಅಲ್ಲವೆ ?
ಈ ದೇಶದ ಬಹುತೇಕ ಹಬ್ಬ ಹರಿದಿನಗಳು ನೆಲ ಸಂಸ್ಕೃತಿ ಮತ್ತು ಸನಾತನ ಸಂಸ್ಕೃತಿಯ ನಡುವಿನ ಸಂಘರ್ಷವೇ ಆಗಿದೆ.  ರಾಕ್ಷಸರು ನೆಲದ ಜೊತೆ ಸಂಬಂಧ ಹೊಂದಿದವರಾದರೇ ದೇವತೆಗಳು ದೇವಲೋಕದಿಂದ ಬಂದವರಾಗಿದ್ದಾರೆ.. ಅವರು ದೇವಲೋಕದಿಂಡ ಕೆಳಗಿಳಿದು ಬಂದು ಸನಾತನ ಧರ್ಮಕ್ಕೆ ಜಯ ತ್ಂದುಕೊಟ್ಟು ತಮ್ಮ ಲೋಕಕ್ಕೆ ವಾಪಸ್ಸಾಗಿದ್ದಾರೆ..
ನಾನು ಲೇಖನದ ಪ್ರಾರಂಭದಲ್ಲಿ ಹೇಳಿದ್ದು ಬಿಂಗಿ ಕುರಿತು.. ಬಿಂಗಿ ಪದ ಹೇಳುವವರು, ಬಲಿಯನ್ನು ಇಂದ್ರ ಎಂದು ಕರೆಯುವವರು ಹಸಲರು.. ಸಮಾಜದ ಅತಿ ಕೆಳ ಹ್ಂತದಲ್ಲಿ ಇರುವ ಪರಿಶಿಷ್ಟರು..ಪರಿಶಿಷ್ಟ ಜನಾಂಗದ ಇವರಿಗೆ ತಮ್ಮ ಮನೆಯಲ್ಲಿ ಮಾಡಿದ ವಿಶೇಷ ಆದುಗೆಯನ್ನು ನೀಡುವವರು ಬ್ರಾಹ್ಮಣರು.. ಈ ಬ್ರಾಹ್ಮಣರು ಮಾಡುವ ದೊಡ್ಡ ಹಬ್ಬಕ್ಕೆ ವಿಶೇಷ ಮಂತ್ರಗಳಿಲ್ಲ.. ಬಲಿಯಿಂದ್ರನ ಸ್ತುತಿಸುವ ಮಂತ್ರಗಳೂ ಇಲ್ಲ. ಅಂದರೆ ಬಲಿ ಬಲಿಯಾದ ಬಗ್ಗೆ ಇವರಿಗೆ ಸಂತೋಷವಿದೆ. ಆತ ನೆಲ ಸಂಸ್ಖೃತಿಯನ್ನು ಪ್ರತಿನಿಧಿಸುವ ವ್ಯಕ್ತಿ ನೆಲದ ಒಳಗೆ ಸೇರಿಸಿದ್ದಿ ಅವರಿಗೆ ಸಂಭ್ರಮದ ದಿನ.
ಭಾರತಿಯಾ ಹಬ್ಬಗಳಲ್ಲಿ ಸಂಭ್ರಮವಿದೆ. ಈ ಸಂಭ್ರಮದ ಆಚರಣೆಯ ಹಿಂದೆ ಸತ್ಯ ಅಡಗಿ ಕುಳಿತಿದೆ..ಆ ಸತ್ಯ ಸನಾತನ ಧರ್ಮ ಮತ್ತು ನೆಲ ಸಂಸ್ಕೃತಿಯ ನಡುವಿನ ಸಂಘರ್ಷವೇ ಆಗಿದೆ.. ನಿಜ ಹಬ್ಬವನ್ನು ಆಚರಿಸುವ ಸಾಮಾನ್ಯ ಜನ ಇದನ್ನೆಲ್ಲ ಯೋಚಿಸುವುದಿಲ್ಲ. ಅವರಿಗೆ ಹಬ್ಬ ಮಾತ್ರ ಮುಖ್ಯ..ಆಚರಣೆ ಮಾತ್ರ ಮುಖ್ಯ.. ಆದರೆ ಪುರಾಣಗಳನ್ನು ಅರ್ಥೈಸುವ ಅದರ ಹಿಂದಿನ ಸತ್ಯವನ್ನು ತೆರೆದಿಡುವ ಕೆಲಸವೂ ಆಗಬೇಕು.. ಸತ್ಯವನ್ನು ಅನಾವರಣಗೊಳಿಸಿದ ಮೇಲೆ ಸಂಭ್ರಮಪಡುವುದು ಸರಿಯೇ ತಪ್ಪೇ ಎಂದು ತೀರ್ಮಾನಿಸಬೇಕು

ಮುಂಬರುವ ವಿಧಾನ ಸಭಾ ಚುನಾವಣೆ; ಬಿಜೆಪಿ ಗೇಮ್ ಪ್ಲಾನ್ ಬದಲು; ಗುಪ್ತ ಹಿಂದುತ್ವ ಬಹಿರಂಗ ಮೀಸಲಾತಿ ಅಸ್ತ್ರ...


 ಇನ್ನು ಆರು ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಬರಲಿದೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ರಂಗಸ್ಥಳಕ್ಕೆ ಇಳಿದಿವೆ.. ನಾಟಕ ಪ್ರಾರಂಭವಾಗಬೇಕು,, ಅಂಕದ ಪರದೆ ಮೇಲೇಳಬೇಕು.

ಇಂತಹ ಸ್ಥಿತಿಯಲ್ಲಿ ಬಿಜೆಪಿಯಲ್ಲಿ ಆತಂಕ ಪ್ರಾರಂಭವಾಗಿದೆ. ಯಾವ ವಿಚಾರವನ್ನು ಜನರ ಮುಂದೆ ತೆಗೆದುಕೊಂಡು ಹೋಗಬೇಕು,, ಯಾವುದು ಚುನಾವಣಾ ವಿಚಾರವಾಗಿ ಹೊರಹೊಮ್ಮಬಹುದು ? ಯಾವ ವಿಚಾರವನ್ನು ಜನರ ಮುಂದಿಟ್ಟು ಅವರ ಮನವೊಲಿಸಿ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿಗೆ ಸಾವಿರ ಡಾಲರ್ ಪ್ರಶ್ನೆ,, ಈ ಹಿಂದಿನ ಚುನಾವಣೆಗಳಲ್ಲಿ  ಬಿಜೆಪಿಗೆ ಇಂತಹ ಸಮಸ್ಯೆ ಇರಲಿಲ್ಲ.. ಹಿಂದುತ್ವ ಪ್ಲಸ್ ಅಭಿವೄದ್ಧಿ ಅವರ ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು,, ಆದರೆ ಈಗ ಪರಿಸ್ಥಿತಿ ಇಷ್ಟು ಸುಲಭವಾಗಿಲ್ಲ..

ಹಿಂದುತ್ವದ ಅಸ್ತ್ರವನ್ನು ಬಳಸುವಷ್ಟು ಬಳಸಿ ಆಗಿದೆ. ಅದೂ ಗರಿಷ್ಠ ಫಲವನ್ನು ನೀಡಿದೆ. ಕರಾವಳಿ ಕರ್ನಾಟಕ ಮತ್ತು ಮಲೇನಾಡಿನ ಕೆಲವು ಪ್ರದೇಶಗಳಲ್ಲಿ ಹಿಂದುತ್ವದ ಕಟ್ಟಾಳುಗಳಿದ್ದಾರೆ. ಅಲ್ಲಿ ಸಣ್ಣ ಪುಟ್ಟ ಗಲಭೆ ಎದ್ದರೆ ಸಾಕು ಆ ಮತ ಬ್ಯಾಂಕ್ ಬಲವಾಗಿ ಉಳಿಯುತ್ತದೆ,, ಹಾಗೂ ಉತ್ತರ ಕರ್ನಾಟಕದಲ್ಲೂ ಬಿಜೆಪಿ ತನ್ನ ಬಲವನ್ನು ಉಳಿಸಿಕೊಂಡಿದೆ, ಇನ್ನೂ ಉಳಿದ ಪ್ರದೇಶ ಎಂದರೆ ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕದ ಕೆಲವು ಪ್ರದೇಶಗಳು.. ಆದರೆ ಈ ಪ್ರದೇಶಗಳಲ್ಲಿ ಹಿಂದುತ್ವ ಪ್ರಭಾವ ಮತ್ತು ಪರಿಣಾಮ ಸೀಮಿತ,,

ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಮುಂದಿರುವ ಸಮಸ್ಯೆ ದೊಡ್ಡದು  ಮತ್ತು ಮುಂದಿನ ದಾರಿ ಕಠಿಣ, ಕರ್ನಾಟಕದಲ್ಲಿ ಬಿಜೆಪಿ ಈ ವರೆಗೆ ಅಧಿಕಾರಕ್ಕೆ ಬಂದಿದ್ದು ಅನ್ಯ ದಾರಿಗಳನ್ನು ಅನುಸರಿಸುವ ಮೂಲಕ ಎಂಬುದನ್ನು ಗಮನಿಸಬೇಕಾಗಿದೆ,, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವರ್ಚಸ್ಸು ಎಲ್ಲೆಡೆಗೆ ಪಸರಿಸಿದಾಗಲೂ ಅವರು ಸರ್ಕಾರ ನಡೆಸುವಷ್ಟು ಸಂಖ್ಯಾ ಬಲವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಯಡಿಯೂರಪ್ಪನವರ ವರ್ಚಸ್ಸು ಕುಂದಿದೆ. ಅವರು ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಇಲ್ಲ. ಇದರಿಂದಾಗಿ ಮತಗಳನ್ನು ತರುವ ಅವರ ಶಕ್ತಿ ಕುಂದಿದೆ. ಇನ್ನೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪ ಅವರಂತೆ ಜನ ನಾಯಕರಲ್ಲ. ಸ್ವಂತ ಶಕ್ತಿಯ ಮೇಲೆ ಮತ ತರುವ ಶಕ್ತಿ ಇಲ್ಲ. ಇನ್ನೂ ಪಕ್ಷ ರಾಜ್ಯ ಘಟಕದ  ಅಧ್ಯಕ್ಶ ನಳೀನ್ ಕುಮಾರ್ ಕಟೀಲ್ ಯಕ್ಷಗಾನದ ಹಾಸ್ಯ ಪಾತ್ರಧಾರಿಯಂತೆ ಕಾಣುತ್ತಾರೆ. ಅವರು ಮತ ತಾರುವುದು ಇರಲಿ, ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಲಾರರು.

ಜೊತೆಗೆ ಸರ್ಕಾರಕ್ಕೆ ಒಳ್ಲೆಯ ಹೆಸರಿಲ್ಲ. ಭ್ರಷ್ಟಾಚಾರದ ಆರೋಪಗಳಿಂದ ಸರ್ಕಾರದ ಇಮೇಜ್ ನಾಶವಾಗುತ್ತಲೇ ಇದೆ,,ಇಂತಹ ಸ್ಥಿತಿಯಲ್ಲಿ ರಾಜ್ಯ ಬಿಜೆಪಿಗೆ ಮತ ತರುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ.. ಆದ್ರೆ ೨೦೧೪ರಿಂದ ೨೦೧೮ ರ ಸಮಯದಲ್ಲಿ ಮೋದಿಯವರನ್ನು ಪ್ರಶ್ನಿಸುವವರೇ ಇರಲಿಲ್ಲ,, ಅವರನ್ನು ದೇವಧೂತ ಎನ್ನುವ ಮಟ್ಟಿಗೆ ದೇಶದ ಜನ ನಂಬಿದ್ದರು..ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ನರೇಂದ್ರ ಮೋದಿ ಅವರ ವರ್ಚಸ್ಸು ಕುಂದುತ್ತಿದೆ.. ಮೋದಿ ಅವರ ಬಗ್ಗೆ ಭಾರತದ ಜನರಿಗೆ ಭ್ರಮನಿರಸನವಾಗುತ್ತಿದೆ..

ಈಗ ಮತ್ತೆ ಕರ್ನಾಟಕದತ್ತ ಬರೋಣ. ಕರ್ನಾಟಕದಲ್ಲಿ ಯಾವ ವಿಚಾರಗಳು ಆ ಪಕ್ಷಕ್ಕೆ ಮತಗಳನ್ನು ತರುತ್ತವೆ ? ಯಾವ ನಾಯಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತಾನೆ ?

ಈ ಪ್ರಶ್ನೆಗಳಿಗೆ ಉತ್ತರ ಪಡೆಯುವ ಭರಾಟೆಯಲ್ಲಿ ಬಿಜೆಪಿ ತನ್ನ ಗೇಮ್ ಪ್ಲಾನ್ ಬದಲಿಸಿದೆ.. ಹಿಂದುತ್ವ ಅಜೆಂಡಾವನ್ನು ಗುಪ್ತವಾಗಿ ಜಾರಿಗೆ ತರಬೇಕು, ಹಿಂದುತ್ವದ ವಿಚಾರ, ಸಮಾಜವನ್ನು ಒಡೆಯುವ ಕೆಲಸವನ್ನು ಕಾಲಾಳುಗಳಿಗೆ ಬಿಟ್ಟು ಬಿಡಬೇಕು.. ನಾಯಕರು ಅಭಿವೄದ್ಧಿಯ ಬಗ್ಗೆ ಮಾತನಾಡಬೇಕು, ಮೀಸಲಾತಿ ವಿಚಾರವನ್ನು ಮುಂಡಿಟ್ಟುಕೊಂಡು ದಲಿತರು ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಬೇಕು.. ಇದು ಬಿಜೆಪಿಯ ಗೇಮ್ ಪ್ಲಾನ್.

ಈ ಸೂತ್ರದಂತೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ.

ಇದು ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆಗೆ ಏರಿಸಬಹುದೇ ? ಈ ಪ್ರಶ್ನೆಗೆ ಈಗಲೇ ಉತ್ತರ ನೀಡುವುದು ಕಷ್ಟ,,


BJP NEW GAME PLAN#Shashidharbhat#Sudditv#Karnatakapolitics

ಬಿಜೆಪಿ ಹೊಸ ಗೇಮ್ ಪ್ಲಾನ್.. ಚುನಾವಣೆ ಗೆಲ್ಲಲು ಹೂಸ ಕಾರ್ಯತಂತ್ರ
ಹಿಂದುತ್ವ ಹಿನ್ನೆಲೆಗೆ. ದಲಿತ ಹಿಂದುಳಿದ ವರ್ಗಗಳ ಮೇಲೆ ಕಣ್ಣು..
ಮೀಸಲಾತಿ ಹೊಸ ಅಸ್ತ್ರ; ಜೆಡಿಎಸ್ ಜೊತೆ ಆಪ್ಷನ್ ಓಪನ್,,,,
ಈ ಕಾರ್ಯತಂತ್ರ ಬಿಜೆಪಿಗೆ ಯಶಸ್ಸು ತರಬಹುದಾ ?
ಪ್ರೈಮ್ ನ್ಯೂಸ್ ನಲ್ಲಿ ಶಶಿಧರ್ ಭಟ್ ವಿಶ್ಲೇಷಣೆ

ಸಾಮಾಜಿಕ ಜಾಲತಾಣಗಳು ಮತ್ತು ಬೇಜವಾಬ್ದಾರಿ ನಡವಳಿಕೆ,,


 ಇದು ಸಾಮಾಜಿಕ ಜಾಲತಾಣಗಳ ಯುಗ,,,ಸುದ್ದಿ ಮನರಂಜನೆ, ಎಲ್ಲವೂ ಬೆರಳ ತುದಿಯಲ್ಲಿ ಲಭ್ಯ,,,ನಿಮಗೆ ಏನು ಬೇಕು ಅದೆಲ್ಲ ಸಿಗುತ್ತದೆ. ಏನು ಬೇಕಾದರೂ ಗೂಗಲ್ ಮಾಡಿ ಮಾಹಿತಿ ಪಡೆಯಬಹುದು,,ಇದು ಒಂದು ರೀತಿಯಲ್ಲಿ ಮಾಹಿತಿಗಳ ಕಣಜ..

ಇಷ್ಟೇ ಹೇಳಿದರೆ ಎಲ್ಲವನ್ನೂ ಹೇಳಿದಂತೆ ಆಗುವುದಿಲ್ಲ.. ಇದು ಎರಡು ಅಲುಗಿನ ಕತ್ತಿ. ಬಳಸುವಾಗ ಜವಾಬ್ದಾರಿ ಬೇಕು.. ಇಲ್ಲದಿದ್ದರೆ ಇದು ಏನುಬೇಕಾದರೂ ಕೊರೆದು ಬಿಡಬಹುದು. ಕೊರೆಯುವಾಗ ಗೊತ್ತಾಗುವುದಿಲ್ಲ. ರಕ್ತಸ್ರಾವವಾಗುವಾಗ ಗೊತ್ತಾಗುತ್ತದೆ,, ನಾನು ಈ ಮಾತುಗಳನ್ನು ಸಾಮಾಜಿಕ ಜಾಲತಾಣಗಳ ಪಾಲುದಾರನಾಗಿ ಹೇಳುತ್ತೇನೆ,, ನೀವು ಯಾವುದೇ ಸ್ಟೇಟಸ್ ಅಪ್ ಡೇಟ್ ಮಾಡಿದರೆ ತಕ್ಷಣ ಪ್ರತಿಕ್ರಿಯೆಗಳ ಸುರಿಮಳೆ ಪ್ರಾರಂಭ,, ಬರುವವರು ಯಾರೋ ? ಅವರದು ನಿಜವಾದ ಖಾತೆ ಹೌದೋ ಅಲ್ಲವೋ ಯಾವುದೂ ಗೊತ್ತಿರುವುದಿಲ್ಲ,, ಬೇರೆಯವರ ಖಾತೆಗೆ ಬಂದು ತಮ್ಮ ಮನಸ್ಸಿನಲ್ಲಿ ಇರುವ ಹೊಲಸನ್ನು ಹೊರಹಾಕಿ ಓಡಿ ಹೋಗುವುದು ಸಾಮಾನ್ಯ,, ನೀವು ಅವರ ಬೆನ್ನು ಹತ್ತಿ ಹೋಗಬೇಕು, ಇಲ್ಲವೇ ಅವರನ್ನು ಬ್ಲಾಕ್ ಮಾಡಬೇಕು ಅಷ್ಟೇ,,

ಆದರೆ ಸಾಮಾಜಿಕ ಜಾಲತಾಣ ಬಳಸುವವರು ತಮ್ಮ ನಡವಳಿಕೆಯ ಬಗ್ಗೆ ಜಾಗರೂಕರಾಗಿರಬೇಕು,, ಇದು ಒಂದು ರೀತಿಯಲ್ಲಿ ಸಾರ್ವಜನಿಕ ಶೌಚ ಗೃಹ ಇದ್ದಂತೆ,, ಸಾರ್ವಜನಿಕ ಶೌಚ ಗೃಹವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಅದರಲ್ಲಿಯೂ ಶೌಚಗೃಹವನ್ನು ಬಳಸುವವರು ಸ್ವಚ್ಚವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚಿಸಬೇಕು..

ಆದರೆ ವಿಕೃತ ಮನಸ್ಥಿತಿಯವರು ತಮ್ಮ ವಿಕೃತಿಯನ್ನು ಹೊರಹಾಕುತ್ತಾರೆ. ವಿಕೃತ ಕಾಮಿಗಳು ಅಮ್ಮ ಅಕ್ಕ ಎಂದು ಮಾತನಾಡಲು ಪ್ರಾರಂಭಿಸುತ್ತಾರೆ. ಆ ಮೂಲಕ ಒಂದು ವಿಕೃತ ಮತ್ತು ಅತೃಪ್ತ ಸಮಾಜವನ್ನು ನಿರ್ಮಿಸಿಬಿಡುತ್ತಾರೆ..

ಒಬ್ಬ ಇಂತಹ ವಿಕೃತಿಯನ್ನು ಪ್ರಾರಂಭಿಸಿದರೆ ಉಳಿದವರೂ ಅದನ್ನು ಅನುಸರಿಸುತ್ತಾರೆ,, ಹಾಗಿದ್ದರೆ ಇದನ್ನೆಲ್ಲ ತಡೆಯುವುದು ಸಾಧ್ಯವಿಲ್ಲವೆ ? ಸಾಧ್ಯವಿದೆ.. ಅದು ನಮ್ಮ ಯುವ ಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಮಾಡುವುದರ ಮೂಲಕ.. ಈ ಮಾರ್ಗದರ್ಶನ ಅವರ ಶೈಕ್ಷಣಿಕ ಅವಧಿಯಲ್ಲೇ ಪ್ರಾರಂಭವಾಗಬೇಕು.. ಆದರೆ ಇಂದಿನ ಶಿಕ್ಷಣ ಬದುಕಿನ ಜೊತೆಗಿನ ಸಂಬಂಧವನ್ನೇ ಕಡಿದುಕೊಂಡಿದೆ.. ಎರಡನೆಯ ದರ್ಜೆಯ ಗುಮಾಸ್ತರನ್ನೋ ಐಟಿ ಬಿಟಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ತಯಾರು ಮಾಡುವ ಶಿಕ್ಷಣವನ್ನು ನಾವು ನೀಡುತ್ತಿದ್ದೇವೆ.. ಇದರ ಜೊತೆಗೆ ಬದುಕಿನ ಮೌಲ್ಯಗಳ ಬಗ್ಗೆ ತರಬೇತಿ ನೀಡುವ ಕೆಲಸ ಆಗಬೇಕು.. ನಮ್ಮ ಸಂವಿಧಾನದ ಪಾಠ ಆಗಬೇಕು.. ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಒಬ್ಬ ವ್ಯಕ್ತಿಗೆ ನಮ್ಮ ಸಂವಿಧಾನದಲ್ಲಿ ಏನಿದೆ ಎಂಬ ಅರಿವು ಇರಬೇಕು.. ಅರಿವು ಇದ್ದರಷ್ಟೆ ಸಾಲದು.. ಸಂವಧಾನದ ಆಶಯದಂತೆ ನಡೆದುಕೊಳ್ಳುವ ಬದ್ಧತೆ ಬೇಕು.

ಆದರೆ ಇಂದು ಸಿನಿಮಾಗಳು ಪ್ರತಿಪಾದಿಸುವ ಮನುಷ್ಯ ವಿರೋಧಿ ಅಂಶಗಳು, ಅವು ಪ್ರತಿಪಾದಿಸುವ ಹಿಂಸೆ, ಕೋಮುವಾದಗಳು ಯುವಕರ ಮನಸ್ಸನ್ನು ಆಕ್ರಮಿಸಿಕೊಂಡಿವೆ, ಭೂಗತ ಜಗತ್ತಿನ ವೈಭವೀಕರಣ, ಅಂಡರ್ ವರ್ಲ್ಡ್ ಡಾನ್ ಆಗಬೇಕು ಎಂಬ ಕನಸನ್ನು ಯುವಕರಲ್ಲಿ ಬಿತ್ತುತ್ತಿದೆ,, ಮೋಹನ್ ದಾಸ್ ಕರಮಚಂದ್ ಗಾಂಧಿಯ ಈ ನಾಡಿನಲ್ಲಿ ಈಗ ಗಾಂಧಿಯ ಬದಲು ಗೋಡ್ಸೆಯನ್ನು ಪ್ರತಿಷ್ಠಾಪಿಸುವ ಕೆಲಸ ನಡೆಯುತ್ತಿದೆ,,,ಇತಿಹಾಸವನ್ನು ತಿರುಚುತ್ತ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಅದನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ,, ಅದರ ಜೊತೆಗೆ ಪ್ರತೊಯೊಂದು ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ತಂಡವನ್ನು ಹೊಂದಿವೆ.. ಇವರು ಸುಳ್ಳು ಸುದ್ದಿ ಹರಡುವುದರಲ್ಲಿ, ಸತ್ಯವನ್ನು ಅಸತ್ಯ ಎಂದು ತಿರುಚುವುದರಲ್ಲಿ ಅಗ್ರಗಣ್ಯರು,,,ಇವರೆಲ್ಲ ಸೇರಿ ಸಾಮಾಜಿಕ ಜಾಲತಾಣಗಳನ್ನು ಸುಳ್ಳಿನ ಮಾರುಕಟ್ಟೆಯನ್ನಾಗಿ ಬದಲಿಸಿದ್ದಾರೆ.. ಇಲ್ಲಿ ಸುಳ್ಳು ಮತ್ತು ಸತ್ಯದ ನಡುವಿನ ವ್ಯತ್ಯಾಸ ಮರೆಯಾಗಿದೆ,

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ರಾಜಕಾರಣಿ ತಮ್ಮ ಹೆಸರಿನ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದಾರೆ. ಇವರು ಎಂದು ಯಾರು ಹುಟ್ಟಿದರು ಯಾರು ಸತ್ತರು ಎಂಬ ಅಂಕಿ ಅಂಶಗಳನ್ನು ಇಟ್ಟುಕೊಂಡು ಪ್ರತ್ರಿದಿನ ಸ್ಟೇಟಸ್ ಅಪಡೆಟ್ ಮಾಡುತ್ತಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ತಮ್ಮ ಹೆಸರಿನಲ್ಲಿ ಬರುವ ಪ್ರತಿಕ್ರಿಯೆಗಳು ಹೇಳಿಕೆಗಳು ಅವರಿಗೇ ತಿಳಿದಿರುವುದಿಲ್ಲ...

?

ಧ್ವೇಷ ಭಾಷಣಕ್ಕೆ ಸುಪ್ರೀಂ ಕಡಿವಾಣ

 ಧ್ವೇಷ ಭಾಷಣಕ್ಕೆ ಸರ್ವೋಚ್ಚ ನ್ಯಾಯಾಲಯ ಕಡಿವಾಣ ಹಾಕಿದೆ.. ಧ್ವೇಷ ಭಾಷಣ ಮಾಡುವವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆಯೂ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ..

ಈ ಸೂಚನೆಯ ನಂತರವಾದರೂ ದೇಶದಲ್ಲಿ ಹೊತ್ತಿ ಉರಿಯುತ್ತಿರುವ ಧ್ವೇಷದ ಬೆಂಕಿ ಕಡಿಮೆಯಾಗಬಹುದೆ ?

ಇಂತಹ ನಿರೀಕ್ಷೆ ಇರಲೇ ಬೇಕು,,ಆದರೆ ? ಗೊತ್ತಿಲ್ಲ..

Friday, June 10, 2022

 ರಾಜ್ಯಸಭಾ ಚುನಾವಣೆ’ ಪ್ರತಿ ಪಕ್ಷಗಳ ಆತ್ಮಹತ್ಯೆ..

ಸಿದ್ದರಾಮಯ್ಯ ಆತ್ಮಸಾಕ್ಷಿ ಕರೆಗೆ ಬೆಲೆ ಇಲ್ಲ..

ಬೀಗಿದ ಬಿಜೆಪಿ..

ನೂಪುರ್ ಶರ್ಮ ಬಂಧನಕ್ಕೆ ಆಗ್ರಹ. ಮುಸ್ಲೀಮ್ ರಿಂದ ಪ್ರತಿಭಟನೆ.. ಕೆಲವೆಡೆ ಕಲ್ಲು ತೂರಾಟ,,

ಹಿಂಸಾ ಪ್ರತಿಭಟನೆ ಹಿಂಸೆಗೆ ಕಾರಣವಾಗುತ್ತಿದೆ.. ಹಿಂಸೆ ಬಿಡಿ, ಗಾಂಧಿ ಮಾರ್ಗ ಅನುಸರಿಸಿ,,

ಇದು ಪ್ರೈಮ್ ನ್ಯೂಸ್...ಇವತ್ತಿನ ವಿಶೇಷ

ನೋಡಿ ಪ್ರತಿಕ್ರಿಯೆ ನೀಡಿ shashidhar Bhat facebook page.. and shashidhar Bhat youtube channell..

https://www.facebook.com/nimmashashidharbhat  


Tuesday, June 7, 2022

ಬಿಜೆಪಿ ಮತ್ತು ಪ್ರಿಂಜ್ ಎಲೆಮೆಂಟ್ಸ್ ಕ್ರಮ ಕೈಗೊಳ್ಳಬೇಕಾದವರು ಯಾರು ?

 


ಕಳೆದ ಒಂದು ವಾರದಿಂದ ಈಚೆಗೆ ಫ್ರಿಂಜ್ ಎಲಿಮೆಂಟ್ಸ್ ಎಂಬ ಶಬ್ದ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿದೆ. ಭಾರತದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯೊಂದರಲ್ಲಿ ಈ ಶಬ್ದವನ್ನು ಬಳಸಿತು. ಅದು ನೂಪುರ್ ಶರ್ಮಾ ಎಂಬ ಬೆಜೆಪಿಯ ರಾಷ್ಟ್ರೀಯ ವಕ್ತಾರರು ಟಿವಿಯೊಂದರಲ್ಲಿ ಪ್ರವಾದಿ ಮಹಮ್ಮದ್ ರ ಬಗ್ಗೆ ಟೀಕಿಸಿ ಮುಸ್ಲೀಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾದ ನಂತರ ನೀಡಿದ ಪ್ರಕಟಣೆಯಲ್ಲಿ,,,

ಆಕ್ಸಫರ್ಡ್ ಶಬ್ದಕೋಶದ ಪ್ರಕಾರ ಫ್ರಿಂಜ್ ಎಲಿಮೆಂಟ್ಸ್ ಎಂದರೆ ಬಾರ್ಡರ್ ನಲ್ಲಿ ಇರುವವರು.. ಅವರು ಸಂಪೂರ್ಣವಾಗಿ ಒಳಗೆ ಇರುವವರಲ್ಲ. ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಲ್ ಅವರನ್ನೂ ಈ ಕೆಟಗರಿಗೆ ವಿದೇಶಾಂಗ ಸಚಿವಾಲಯ ಸೇರಿಸಿಯಾಗಿತ್ತು.. ಇದು ಕೇವಲ ವಿದೇಶಾಂಗ ಸಚಿವಾಲಯದ ಅಭಿಪ್ರಾಯವಾಗಿರದೇ ಸರ್ಕಾರದ ಅಭಿಪ್ರಾಯ ಕೂಡ.. ಜೊತೆಗೆ ವಿದೇಶಾಂಗ ಇಲಾಖೆಯನ್ನು ಪ್ರಿಂಜ್ ಎಲಿಮೆಂಟ್ಸ್ ಎಂದು ಟೀಕಿಸಲು ಸಾಧ್ಯವಿಲ್ಲ..

ವಿದೇಶಾಂಗ ಇಲಾಖೆ ಹಾಗೂ ಸರ್ಕಾರ ಮುಸ್ಲೀಂ ದೇಶಗಳ ಅತೃಪ್ತಿಯನ್ನು ಶಮನಗೊಳಿಸಲು ನೂಪುರ್ ಶರ್ಮ ಅವರ ಜೊತೆಗೆ ಸರ್ಕಾರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿತು.. ಬಿಜೆಪಿ ಪಕ್ಷ ಕೂಡ ತನ್ನದೇ ರಾಷ್ಟೀಯ ವಕ್ತಾರರಿಂದ ದೂರವನ್ನು ಕಾಪಾಡಿಕೊಂಡು ಬರಲು ಯತ್ನಿಸಿತು. ಮುಸ್ಲೀಂ ರಾಷ್ಟ್ರಗಳ ಕೋಪವನ್ನು ತಣಿಸಲು ಸರ್ಕಾರಕ್ಕೆ ವಿದೇಶಾಂಗ ಇಲಾಖೆಗೆ ಬೇರೆ ಮಾರ್ಗವೂ ಇರಲಿಲ್ಲ.

ಈ ಹೇಳಿಕೆಯ ಮೂಲಕ ನೂಪುರ್ ಶರ್ಮಾ ಅವರು ಮಾಡಿದ್ದು ಹೇಳಿದ್ದು ತಪ್ಪು ಎಂದು ಸರ್ಕಾರ ಒಪ್ಪಿಕೊಂಡಂತೆ ಆಗಿದೆ. ಅದಕ್ಕಾಗಿ ಶಿಕ್ಷೆಯನ್ನೂ ವಿಧಿಸಲಾಗಿದೆ.. ಹಾಗಿದ್ದರೆ ಇದೇ ತಪ್ಪು ಮಾಡಿದವರು ಬಿಜೆಪಿಯಲ್ಲಿ ಇಲ್ಲವೆ ? ಕೇವಲ ನೂಪುರ್ ಶರ್ಮಾ ತಪ್ಪು ಮಾಡಿದ ಮೊದಲ ವ್ಯಕ್ತಿಯೇ ? ಒಂದೊಮ್ಮ್ರೆ ಬೇರೆಯವರೂ ಇದ್ದರೆ ಅವರಿಗೂ ಶಿಕ್ಜ್ಷೆಯಾಗಬೇಕು ಅಲ್ಲವೆ ?

ಕಳೆದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಪ್ರಚಾರ ಬಹುಸಂಖ್ಯಾತ ಮತಗಳ ಕ್ರೋಡೀಕರಣಕ್ಕಾಗಿ ಮುಸ್ಲಿಂ ವಿರೋಧ ಮತ್ತು ಅಲ್ಪಸಂಖ್ಯಾತರನ್ನು ಅವಮಾನಿಸುವ ಕೆಲಸ ಸತತವಾಗಿ ನಡೆಯಿತು,,ಯೋಗಿ ಆದಿತ್ಯನಾಥ್ ಮತ್ತು ಇತರ ಬಿಜೆಪಿ ನಾಯಕರು ತಮ್ಮ ಭಾಷಣದಲ್ಲಿ ಈ ವಿಚಾರವನ್ನೇ ಚುನಾವಣೆಯ ಪ್ರಮುಖ ವಿಷಯವನ್ನಾಗಿ ಮತದಾರರ ಮುಂದಿಟ್ಟರು.. ಅಲಸಂಖ್ಯಾತರ ವಿರೋಧ ಅವರಿಗೆ ಹಿಂದೂ ಮತಗಳನ್ನಉ ಕ್ರೋಡೀಕರಿಸಲು ಸಹಾಯ ಮಾಡಿತು.. ಈಗ ಅವರೆಲ್ಲರನ್ನು ಫ್ರೀಂಜ್ ಎಲಿಮೆಂಟ್ಸ್ ಎಂದು ಪರಿಗಣಿಸಬೇಕಲ್ಲವೆ ? ಹಾಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇವಲ ನುಪೂರ್ ಶರ್ಮ ಅವರ ವಿರುದ್ಧ ಕ್ರಮ ಕೈಗೊಂಡರೆ ಅದು ಹಿಪಾಕ್ರಸಿ ಅನ್ನಿಸಿಕೊಳ್ಳುತ್ತದೆ.

ಯೋಗಿ ಆದಿತ್ಯನಾಥ್ ಅವರು ಚುನಾವಣೆ ಸಂದರ್ಭದಲ್ಲಿ ಮಾಡಿದ ೩೪ ಭಾಷಣಗಳು ಯುಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲ ತಾಣಗಳಲ್ಲಿ ಸಿಗುತ್ತವೆ. ಈ ಎಲ್ಲ ಭಾಷಣಗಳೂ ಹೇಟ್ ಸ್ಪೀಚ್ ಗೆ ಉದಾಹರಣೆಗಳಾಗಿವೆ.. ನಾಯಿ ಕೂಗುತ್ತಿರುತ್ತದೆ ಎಂದು ಅವರು ಹೇಳಿದ್ದು ಯಾರ ವಿರುದ್ಧ ಎಂದು ಹೇಳಲು ಹೆಚ್ಚಿನ ಬುದ್ದಿವಂತಿಗೆ ಬೇಕಾಗಿಲ್ಲ..ಹಾಗೂ ಹಲವು ಭಾಷಣಗಳಲ್ಲಿ ಯೋಗಿ ಆದಿತ್ಯನಾಥ್, ಮುಸ್ಲಿಂ ಸಮುದಾಯಕ್ಕೆ ತಾಲಿಬಾನಿಗಳ ಪಟ್ಟ ಕಟ್ಟಿದರು, ಬುಲ್ಡೋಜರ್ ಶಬ್ದವನ್ನು ಬೆದರಿಕೆ ಅಸ್ತ್ರವನ್ನಾಗಿ ಬಳಸಲಾಯಿತು,, ಹಾಗೆ ೮೦ ಪರ್ಸೆಂಟ್ ವರ್ಸಸ್ ೨೦ ಪರ್ಸೆಂಟ್ ಎಂದು ಮತದಾರರಿಗೆ ಕರೆ ನೀಡಿದರು, ಇದೆಲ್ಲ ಏನು ?

ಮೇ ತಿಂಗಳಿನಲ್ಲಿ ಮಧ್ಯ ಪ್ರದೇಶದಲ್ಲಿ ಬವರಲಾಲ್ ಜೈನ್ ಎಂಬ ೬೫ ವರ್ಷದ ವ್ಯಕ್ತಿ ಮದುವೆ ಮುಗಿಸಿ ಮನೆಗೆ ಬರುತ್ತಿದ್ದರು,  ಬಿಜೆಪಿ ಕಾರ್ಯಕರ್ತ ಹರಿಭೂಷಣ್ ಕುಶ್ವಾ ಅವರ ಮೇಲೆ ಹಲ್ಲೆ ನಡೆಸಿದ.. ನೀನು ಮಹಮ್ಮದ ಅಲ್ಲವೆ ಎಂದು ಪ್ರಶ್ನೆ ಮಾಡಿ ಹಲ್ಲೆ ಮಾಡಿದ,,

ಬಿಹಾರದ ಬಿಜೆಪಿ ಶಾಸಕ ಮುಸ್ಲೀಂ ಮತದಾನದ ಹಕ್ಕನ್ನು ವಾಪಸ್ ಪಡೆದು ಅವರನ್ನು ಎರಡನೆ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸಬೇಕು ಎಂದು ಕರೆ ನೀಡಿದ,,ಅಶ್ವಿನ್ ಉಪಾದ್ಯಾಯ ಎಂಬ ಬಿಜೆಪಿ ನಾಯಕನ ವಿರುದ್ಧ ಹೇಟ್ ಸ್ಪೀಚ್ ಕಾರಣಕ್ಕಾಗಿ ಪ್ರಕರಣ ದಾಖಲಾಯಿತು,

೨೦೨೧ ರ ಡಿಸೆಂಬರ್ ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ರೋಹಿಂಗ್ಯಾ ಮುಸ್ಲೀಂ ರಂತೆ ಭಾರತದ ಮುಸ್ಲೀಂರಿಗೂ ಶಿಕ್ಷೆ ನೀಡಬೇಕು ಎಂಡು ಕರೆ ನೀಡಲಾಯಿತು, ಪೂಜಾ ಶಕಿನ್ ಪಾಂಡೆ ಎಂಬವರು ಮುಸ್ಮಿಂರ ಹತ್ಯೆಗೆ ಕರೆ ನೀಡಿದ್ದರು. ಹಾಗೆ ಉತ್ತರ ಪ್ರದೇಶದ ಮಯಾಂಕೇಶ್ವರ್ ಸಿಂಗ್ ಎಂಬ ಸ್ಬಿಜೆಪಿ ಶಾಸಕರು ತಮ್ಮನ್ನು ಎರಡನೆಯ ಬಾರಿ ಆರಿಸಿದರೆ ಮುಸ್ಲೀಂ ರ ಗಡ್ಡ ಕತ್ತರಿಸುವುದಾಗಿ ಹೇಳಿದ್ದರು.. ನಾನು ಮೊದಲ ಬಾರಿ ಆಯ್ಕೆ ಆದಾಗ ಮುಸ್ಲೀಂ ರು ಹೆಸರಿ ಸ್ಕಲ್ ಕ್ಯಾಪ್ ಹಾಕುವುದನ್ನು ನಿಲ್ಲಿಸಿದ್ದರು. ನಾನು ಎರಡನೆಯ ಬಾರಿ ಆಯ್ಕೆ ಮಾಡಿದರೆ ಅವರ ಹಣೆಯ ಮೇಲೆ ತಿಲಕ ಬರುತ್ತದೆ ಎಂದಿದ್ದರು !

ಇಂತಹ ಸಾವಿರಾರು ಉದಾಹರಣೆಗಳು ಇವೆ. ಬಿಜೆಪಿ ಮತ್ತು ಸಂಘಪರಿವಾರ ಕೋಮು ಧ್ವೇಶವನ್ನು ಬಿತ್ತಿ ಅಧಿಕಾರಕ್ಕೆ  ಏರುವ ಮಾರ್ಗವನ್ನು ಕಂಡುಕೊಂಡಿವೆ. ಹಾಗೆ ನೋಡಿದರೆ ಇದೆಲ್ಲ ಪ್ರಾರಂಭವಾಗಿದ್ದು ೨೦೦೧ ಮತ್ತು ೨೦೦೨ರಲ್ಲಿ.. ಗುಜರಾಥ್ ನಲ್ಲಿ ನಡೆದ ಹತ್ಯಾಕಾಂಡ ಅವರಿಗೆ ಅಧಿಕಾರಕ್ಕೆ ಏರಲು ಹೊಸ ಆಯುಧವನ್ನು ನೀಡಿತ್ತು. ಈ ಆಯುಧವನ್ನು ನಂತರದ ದಿನಗಳಲ್ಲಿ ಎಲ್ಲೆಡೆ ಬಳಸಲಾಯಿತು.

ಈಗ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈಗ ಕೆಲವು ತಿಂಗಳುಗಳ ಹಿಂದೆ ಕೊಡಗಿನಲ್ಲಿ ಭಜರಂಗದಳದ ತರಬೇತಿ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು. ಈ ತರಬೇತಿಯಲ್ಲಿ ಏರ್ ಗನ್ ಮತ್ತು ತ್ರಿಶೂಲವನ್ನು ನೀಡಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮೂರು ಶಾಸಕರು ಪಾಲ್ಗೊಂಡಿದ್ದರು..

ಈಗ ಗುಜರಾತ್ ನಲ್ಲಿ ಪ್ರಾರಂಭಿಸಿದ ಕೋಮುವಾದದ ಆಯುಧವನ್ನು ದೇಶದ ಎಲ್ಲೆಡೆ ಬಳಸಲಾಗುತ್ತಿದೆ. ಧರ್ಮ ನಿರಪೇಕ್ಷಗಳೂ ಸಾಫ್ಟ್ ಹಿಂದುತ್ವದ ಬಗ್ಗೆ ಮಾತನಾಡುವಂತಾಗಿದೆ,

ಈಗ ನೂಪುರ್ ಶರ್ಮಾ ಪ್ರಕರಣದತ್ತ ಬರೋಣ.. ಈ ಪ್ರಕರಣದಲ್ಲಿ ಬಹುತೇಕ ಮುಸ್ಲಿಂ ರಾಷ್ಟ್ರಗಳು ತೀವ್ರ್ ಪ್ರತಿರೋಧವನ್ನು ವ್ಯಕ್ತಪಡಿಸಿದವು.. ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಕರೆದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಇದು ಭಾರತವನ್ನು ಆತಂಕಕ್ಕೆ ದೂಡಿತು.. ಈ ಪ್ರತಿರೋಧವನ್ನು ಶಮನಗೊಳಿಸುವುದಕ್ಕಾಗಿ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಮೇಲೆ ಕ್ರಮಕೈಗೊಳ್ಳಲಾಯಿತು... ಅದರೆ ಇದೇ ಕೆಲಸದಲ್ಲಿ ನಿರತರಾದವರ ಮೇಲೆ ಕ್ರಮ ಕೈಗೊಳ್ಳಬೇಕಲ್ಲವೆ ?

ಜೊತೆಗೆ ಇದೆಲ್ಲವುದರ ಬೀಜ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಲ್ಲಿದೆ ? ಹೀಗಿರುವಾಗ ಯಾರು ಯಾರ ಮೇಲೆ ಕ್ರಮಕೈಗೊಳ್ಳಬೇಕು ?


Monday, June 6, 2022

ಚಡ್ಡಿಯ ರೋಚಕ ಇತಿಹಾಸ, ಚಡ್ಡಿಯ ಬಗ್ಗೆ ಗೊತ್ತಿಲ್ಲದ ಅಂಶಗಳು..ಹಾಗೂ ಚಡ್ದಿ ಪುರಾಣ



 ಕಾಂಗ್ರೆಸ್ ಚಡ್ಡಿ ಸುಡುವ ಚಳವಳಿ ಹಮ್ಮಿಕೊಳ್ಳಲು ಮುಂದಾಗಿದೆ. ಬಿಜೆಪಿ ಚಡ್ಡಿ ಕಳುಹಿಸಿಕೊಡುವ ಮಾತನಾಡಿದೆ. ಒಟ್ಟಿನಲ್ಲಿ ಚೆಡ್ದಿಗೆ ಈಗ ಭಾರಿ ಬೇಡಿಕೆ ಬಂದಿದೆ..

ಚಡ್ದಿ ಹಾಕಿಕೊಳ್ಳುವುದು ಯಾವಾಗ ಪ್ರಾರಂಭವಾಗಿರಬಹುದು ? ಹೇಳುವುದು ಕಷ್ಟ.. ಆದರೆ ಇದು ಭಾರತೀಯ ಉಡುಪಂತೂ ಅಲ್ಲ.. ಪ್ಯಾಂಟಿನ ಜೊತೆಗೆ ಚಡ್ದಿ ಕೂಡ ಈ ದೇಶಕ್ಕೆ ಬಂದಿರಬಹುದು,,

ವಿದೇಶಿಯರು ಬಿಸಿಲಿಗೆ ಮೈಯೊಡ್ಡುವಾಗ ಚಡ್ಡಿ ಹಾಕಿಕೊಳ್ಳುವುದನ್ನು ಇಷ್ಟಪಡುತ್ತಾರೆ.. ಕಾಲಿನ ಭಾಗವನ್ನು ಬಿಸಿಲಿಗೆ ಒಡ್ಡಿ ಮಲಗುವುದು ಅವರಿಗೆ ಖುಷಿ ನೀಡುವಂತಹದು.. ಹಾಗೆ ಸಮುದ್ರ ದಂಡೆಗಳಲ್ಲಿ ಬಿಸಿಲು ಕಾಸುತ್ತ ಮನಗುವಾಗ ಚಡ್ಡಿಯೇ ಪ್ರಾಧಾನ್ಯ..ಚಡ್ಡಿ ಹಾಕಿಕೊಂಡು ಮೈ ಬಿಟ್ಟುಕೊಂಡು ಮಲಗುವುದು, ಕಣ್ಣಿಗೆ ಬಿಸಿಲು ಬೀಳದಂತೆ ಸನ್ ಗ್ಲಾಸ್ ಧರಿಸುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ,

ಪ್ಯಾಂಟಿನ ಜೊತೆ ಚಡ್ಡಿ ಬಂದಿದ್ದರೂ ಇವರೆಡರ ನಡುವೆ ತುಂಬಾ ವ್ಯತ್ಯಾಸವಿದೆ. ಪ್ಯಾಂಟು ಕಾಲನ್ನು ಪೂರ್ಣವಾಗಿ ಆವರಿಸಿಬಿಡುತ್ತದೆ. ಜೊತೆಗೆ ಶಿಸ್ತನ್ನು ಅದು ಹೊತ್ತುಕೊಂಡು ಬಂದಿರುತ್ತದೆ. ಚಡ್ಡಿ ಹಾಗಲ್ಲ. ಅದು ಫ್ರೀ ಎಂಬ ಫಿಲಿಂಗ್ ಕೊಡುತ್ತದೆ.. ಹೀಗಾಗಿ  ವೈಯಕ್ತಿಕವಾಗಿ ನನಗೆ ಚಡ್ದಿ ಎಂದರೆ ಇಷ್ಟ,,ನಮ್ಮ ಹಳ್ಳಿಗಳಲ್ಲಿ ಚಡ್ಡಿಗೆ ವಿಶೇಷ ಮರ್ಯಾದೆ ಇದೆ. ಜೊತೆಗೆ ತೋಟ ಗದ್ದೆಗಳಲ್ಲಿ ಕೆಲಸ ಮಾಡುವಾಗ ಚೆಡ್ದಿಯೇ ಒಳ್ಳೆಯದು. ಪಂಚೆ ಆದರೆ ಆಗಾಗ ಎತ್ತಿಕಟ್ಟಿ ಕೆಲಸ ಮಾಡಬೇಕು. ಚೆಡ್ದಿ ಹಾಗಲ್ಲ..

ಬ್ರೀಟೀಶರು ಈ ದೇಶಕ್ಕೆ ಬರುವಾಗ ತಂಡ ಚೆಡ್ದಿ ಈ ದೇಶವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲು ಹೆಚ್ಚಿನ ಸಮಯ ಹಿಡಿಯಲಿಲ್ಲ. ಆದರೆ ಸಂಪ್ರದಾಯಸ್ಥರು ಮತ್ತು ಸನಾತನಿಗಳಿಗೆ ಮಾತ್ರ ಚೆಡ್ದಿ ಹೆಚ್ಚು ಇಷ್ಟವಾಗುತ್ತಿರಲಿಲ್ಲ. ಯಾಕೆಂದರೆ ಇದು ಭಾರತೀಯ ಉಡುಪಿನ ಪಟ್ಟಿಯಲ್ಲಿ ಸೇರಿಲ್ಲ.. ಹಿಂದಿನ ಜನ ಚಡ್ದಿಗಿಂತ ಪಂಚೆಗೆ ಹೆಚ್ಚಿನ ಒಲವು ತೋರುತ್ತಿದ್ದರು..

ಹಾಗಿದ್ದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್ ಎಸ್ ಎಸ್ ಚಡ್ದಿಯನ್ನು ತನ್ನ ಸಾಂಪ್ರದಾಯಿಕ ಉಡುಪು ಅಥವಾ ಸಮವಸ್ತ್ರವನ್ನಾಗಿ ಯಾಕೆ ಸ್ವೀಕರಿಸಿತು ? ಈ ಪ್ರಶ್ನೆಗೆ ನಾವು ಅಂದಾಜಿನ ಉತ್ತರವನ್ನು ಕೊಡಬಹುದು.. ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೆವಾರ್ ಅವರನ್ನು ಕೇಳೋಣ ಎಂದರೆ ಅವರೀಗ ಬದುಕಿಲ್ಲ. ಈಗಿನ ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್ ಅವರನ್ನು ಈ ಬಗ್ಗೆ ಕೇಳಬಹುದು. ಆದರೆ ಅವರು ಚೆಡ್ದಿಯ ಸಮವಸ್ತ್ರವನ್ನು ಪ್ಯಾಂಟಿಗೆ ಬದಲಿಸಿದ್ದರಿಂದ ಅವರಿಗೆ ಚೆಡ್ಡಿಯ ಬಗ್ಗೆ ಅಂತಹ ವಿಶ್ವಾಸ ಇರಲಿಕ್ಕಿಲ್ಲ ಅನ್ನಿಸುತ್ತದೆ. ಹೀಗಾಗಿ ಈ ಪ್ರಶ್ನೆಯನ್ನು ಅವರಿಗೆ ಕೇಳಿ ಪ್ರಯೋಜನ ಇಲ್ಲ..

ಆರ್ ಎಸ್ ಎಸ್ ಸದಾ ಬ್ರಿಟೀಷರನ್ನು ಬೆಂಬಲಿಸುತ್ತಲೇ ಬಂದಿದೆ. ಹೀಗಾಗಿ ಸಂಘದ ಕಾರ್ಯಕರ್ತರು ಸ್ವಾತಂತ್ರ್ಯ ಚಳವಳಿಯಲ್ಲಿ ಹೆಚ್ಚಾಗಿ ಪಾಲ್ಗೊಂಡಿರಲಿಲ್ಲ. ಜೊತೆಗೆ ಬಹಳಷ್ಟು ಸಂಘದ ಕಾರ್ಯಕರ್ತರು ಬ್ರಿಟೀಷರ ಎಜೆಂಟರಾಗಿ ಕೆಲಸಮಾಡಿದವರು. ಹೀಗಾಗಿ ಅವರಿಗೆ ಬ್ರಿಟೀಷರ ಬಗ್ಗೆ ಅಂತರಿಕ ಪ್ರೀತಿ ಇರುವ ಸಾಧ್ಯತೆ ಇದೆ..ಹೀಗಾಗಿ ಬ್ರಿಟೀಷರ ಉಡುಪಾದ ಪ್ಯಾಂಟಿಗೆ ಬದಲಾಗಿ ಚಡ್ದಿಯನ್ನು ಒಪ್ಪಿಕೊಂಡಿರಬಹುದು.ಅದು ದೇಶೀಯ ಉಡುಪಿನಂತೆಯೂ ಅವರಿಗೆ ಕಂಡಿರಬಹುದು..

ಇದರ ಜೊತೆಗೆ ಬ್ರಿಟೀಷ್ ಕಾಲದಿಂದ ಪೊಲೀಸರು ಚಡ್ದಿಯನ್ನೇ ಹಾಕಿಕೊಳ್ಳುತ್ತಿದ್ದರು..ಅಧಿಕಾರಿಗಳಿಗೆ ಮಾತ್ರ ಪ್ಯಾಂಟು. ಇದನ್ನು ಗಮನಿಸಿದ ಸಂಘದ ಸಂಸ್ಥಾಪಕರು ತಮ್ಮ ಕಾರ್ಯಕರ್ತರು ಪೊಲೀಸರಂತೆ ಕಂಡರೆ ಒಳ್ಳೆಯದು ಎಂದು ಈ ಸಮವಸ್ತ್ರ ಧರಿಸುವ ತೀರ್ಮಾನಕ್ಕೆ ಬಂದಿರಬಹುದು..ಪೊಲೀಸರು ಮಾಡಬೇಕಾದ ಕೆಲಸವನ್ನು ಸಂಘದ ಕಾರ್ಯಕರ್ತರೇ ಮಾಡಲಿ ಎಂಬುದು ಅವರ ಮನಸ್ಸಿನಲ್ಲಿ ಇದ್ದುದು ಇದಕ್ಕೆ ಕಾರಣವಿರಬಹುದು..ಇತ್ತೀಚಿನ ದಿನಗಳಲ್ಲಿ ನೈತಿಕ ಮತ್ತು ಅನೈತಿಕ ಪೊಲೀಸ್ ಗಿರಿ,, ದಾದಾಗಿರಿಯನ್ನು ಮಾಡುವುದರಿಂದ ಈ ಸಮವಸ್ತ್ರ ಅವರಿಗೆ ಹೊಂದುತ್ತದೆ ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ..

ಈಗ ಹಲವು ವರ್ಷಗಳ ಹಿಂದೆ ಪೊಲೀಸರಿಗೆ ಸಮವಸ್ತ್ರದ ವಿಚಾರದಲ್ಲಿ ಪ್ರಮೋಷನ್ ನೀಡಿ ಪ್ಯಾಂಟಿಗೆ ಬಡ್ತಿ ನೀಡಲಾಯಿತು.. ಇದನ್ನು ಬಹಳ ವರ್ಷಗಳ ಕಾಲ ಮೌನವಾಗಿ ಅಧ್ಯಯನ ಮಾಡಿದ ಸರಸಂಘ ಚಾಲಕರು ತಮ್ಮ ಕಾರ್ಯಕರ್ತರಿಗೂ ಬಡ್ತಿ ನೀಡುವ ನಿರ್ಧಾರಕ್ಕೆ ಬಂದರು.. ಅವರೂ ಬದಲಾದರು.

ಪೊಲೀಸರಾಗಲಿ ಸಂಘದ ಕಾರ್ಯಕರ್ತರಾಗಲಿ ಚೆಡ್ದಿ ಧರಿಸಿದಾಗ ಕೆಲವೊಮ್ಮೆ ಅವರನ್ನು ನೋಡಲು ಕಷ್ಟವಾಗುತ್ತಿತ್ತು.. ಯಾಕೆಂದರೆ ಇವರ ದೆಹದ ಆಕಾರ ಇದಕ್ಕೆ ಕಾರಣ. ದೇಹದ ಮೇಲ್ಬಾಗ ದೊಡ್ಡದಾಗಿ ಇದ್ದು ಕಾಲುಗಳು ಸಣಕಲಾಗಿದ್ದವರು ಈ ಸಮವಸ್ತ್ರದಲ್ಲಿ ವಿಚಿತ್ರವಾಗಿ ಕಾಣುತ್ತಿದ್ದರು. ಅವರ ಕಾಲುಗಳು ಸಣ್ಣದಾಗಿದ್ದು ದೊಡ್ಡ ಚಡ್ದಿ ಆ ಕಡೆಯಿಂದ  ಈ ಕಡೆಗೆ ನರ್ತನ ಮಾಡುವಾಗ ಬೇಸರವಾಗುತ್ತಿತ್ತು.. ಜೊತೆಗೆ ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿತ್ತು..ಪ್ಯಾಂಟಿಗೆ ಬದಲಾದ ಮೇಲೆ ಈ ಸಮಸ್ಯೆ ಬಗೆಹರಿಯಿತು.

ಜೋತೆಗೆ ಇತ್ತೀಚಿನ ದಿನಗಳಲ್ಲ್ಲಿ ಸಂಘಪರಿವಾರದ ಕಾರ್ಯಕರ್ತರು ಶಸ್ತ್ರಾಭ್ಯಾಸವನ್ನು ಮಾಡುವುದರಿಂದ ಅವರಿಗೆ ಪ್ಯಾಂಟೇ ಹೆಚ್ಚು ಅನುಕೂಲ..ಪ್ಯಾಂಟಿನ ಎರಡೂ ಕಿಸೆಯಲ್ಲಿ ಮದ್ದು ಗುಂಡುಗಳನ್ನು ಇಟ್ಟುಕೊಳ್ಳಬಹುದು.. ಶ್ರೀರಾಮ ಸೇನೆ, ಬಜರಂಗದಳದ ಕಾರ್ಯಕರ್ತರು ಇಂಥ ಸಶಸ್ತ್ರ ತರಬೇತಿ ಪಡೆಯುವಾಗ ಅವರು ಖುಶಿಯಿಂದ ಇರುವುದನ್ನು ನಾನು ಗಮನಿಸಿದ್ದೇನೆ..

ಚಡ್ಡಿ ಬಗ್ಗೆ ಜಗಳ ತೆಗೆದವರು ಈ ಬಗ್ಗೆ ಯೋಚಿಸಲಿ.. ಚಡ್ದಿಗಳು ಈಗ ಪ್ಯಾಂಟು ಹಾಕುತ್ತಿದ್ದರೂ ಚೆಡ್ಡಿಗೆ ಇರುವ ಸಾಂಕೇತಿಕ ಅರ್ಥ ಪ್ಯಾಂಟಿಗೆ ಇಲ್ಲ..ಜೊತೆಗೆ ಈಗಲೂ ಚಡ್ದಿಯನ್ನು ಒಳಗೆ ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಅದಕ್ಕೆ ಗುಪ್ತತೆ ಇದೆ..ಪ್ಯಾಂಟಿಗೆ ಇಲ್ಲ. ಪ್ಯಾಂಟನ್ನು ಮುಚ್ಚಿಟ್ಟುಕೊಳ್ಳುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂಡ ಸಂಘ ಪರಿವಾರ ಮತ್ತೆ ಚೆಡ್ಡಿಗೆ ಹಿಂತಿರುಗುದು ಒಳ್ಳೆಯದು.

ಆಗ ಅವರಿಗೂ ಗೌರವ ಚಡ್ಡಿ ಆಂದೋಲನ ನಡೆಸುವುದು ಅರ್ಥಪೂರ್ಣ ಅನ್ನಿಸಿಕೊಳ್ಳುತ್ತದೆ. ಎಲ್ಲರೂ ಈ ಬಗ್ಗೆ ಯೋಚಿಸಲಿ

Sunday, June 5, 2022

ಬಿಜೆಪಿ ವಕ್ತಾರರು ಹಚ್ಚಿದ ಬೆಂಕಿ..ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ವಸ್ತುಗಳ ನಿಷೇದ; ಕೋಮುವಾದಿ ಆಡಳಿತಕ್ಕೆ ದೇಶದ ಹಿತಾಸಕ್ತಿಯ ಬಲಿ.

 



ಈಗ ಎರಡು ಮೂರು ದಿನಗಳ ಹಿಂದೆ;; ಟೈಂಸ್ ನೌ ಎಂಬ ವಾಹಿನಿಯಲ್ಲಿ ಚರ್ಚೆಯೊಂದು ನಡೆಯುತ್ತಿತ್ತು.. ಈ ಚರ್ಚೆ ನಡೆಸಿಕೊಡುತ್ತಿದ್ದವರು ನಾವಿಕಾ ಕುಮಾರ್ ಎಂಬ ಯಾಂಕರ್. ಚರ್ಚೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಪ್ರಮುಖರೆಂದರೆ ಬಿಜೆಪಿಯ ಪ್ರಭಾವಿ ವಕ್ತಾರರಾದ  ನೂಪುರ್ ಶರ್ಮಾ..

ಯಾಂಕರ್ ಮತ್ತು ಬಿಜೆಪಿ ವಕ್ತಾರಿಬ್ಬರೂ ಸೇರಿ ಮುಸ್ಲೀಂ ರ ಮೇಲೆ ದಾಳಿ ನಡೆಸುತ್ತಿದ್ದರು.. ಇಬ್ಬರೂ ತಮಗೆ ತಾವೇ ಸಂತೋಷಪಡುತ್ತಿದ್ದರು. ಹಾಗೆ ನೋಡಿದರೆ ಈ ವಾಹಿನಿಯಲ್ಲಿ ಇಂತಹ ಚರ್ಚೆ ನಡೆಯುತ್ತಿರುವುದು ಇದೇ ಮೊದಲಾಗಿರಲಿಲ್ಲ. ಇಂತಹ ಚರ್ಚೆಗಳಿಗೆ ಈ ವಾಹಿನಿ ಹೆಸರುವಾಸಿ.. ಗೋದಿ ಮೀಡಿಯಾದ ಪ್ರಮುಖ ವಾಹಿನಿಯಾಗಿರುವ ಟೈಂಸ್ ನೌ ಸ್ಪರ್ಧೆ ನಡೆಸುತ್ತಿರುವುದು ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯ ಜೊತೆ,,

ಇಂತಹ ಚರ್ಚೆಗಳನ್ನು ನಡೆಸುತ್ತ ಬಿಜೆಪಿ ವಲಯದಲ್ಲಿ ತಮ್ಮನ್ನು ಗುರುತಿಸಕೊಂಡ ನಾವಿಕಾ ಕುಮಾರ್ ಈ ಬಾರಿ ಇಂತಹ ವಿವಾದ ಸೃಷ್ಟಿಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ,,

ದಿವಂಗತ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರಿಗೆ ತುಂಬಾ ಹತ್ತಿರವಾಗಿದ್ದವರು ನಾವಿಕಾ ಕುಮಾರ್. ಅವರ ನಿಧನದ ನಂತರ ಈ ನಾವಿಕಾ ಕುಮಾರ್ ಗೃಹ ಸಚಿವ ಅಮಿತ್ ಶಾ ಅವರಿಗೆ ಹತ್ತಿರವಾಗಿದ್ದರು,, ಆಗಾಗ ಅಮಿತ್ ಶಾ ಅವರ ಸಂದರ್ಶನ ಮಾಡುತ್ತಿದ್ದ ನಾವಿಕಾ ಯಾವ ಸಂದರ್ಭದಲ್ಲೂ ತಾವೊಬ್ಬ ಪತ್ರಕರ್ತ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡವರೇ ಅಲ್ಲ.. ಸದಾ ಅಮಿತ್ ಶಾ ಅವರನ್ನು ಸಂತೋಷ ಪಡುವ ರೀತಿಯಲ್ಲೇ ಸಂದರ್ಶನ ಮಾಡುತ್ತಲೇ ಬಂದವರು.

ಇನ್ನು ಈ ನೂಪುರ್ ಶರ್ಮಾ.. ಬಿಜೆಪಿಯ ವಕ್ತಾರರಾದ ಇವರು ಬಿಜೆಪಿಯ ಹಲವು ನಾಯಕರಿಗೆ ಆಪ್ತರಾದವರು.. ಅವರೇ ಹೇಳಿಕೊಂಡಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್, ಗೃಹ ಸಚಿವ ಅಮಿತ್ ಶಾ ತಮ್ಮ ಬೆಂಬಲಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು

ಇವರಿಬ್ಬರು ತಮ್ಮ ಚರ್ಚೆ ಎಂಬ ಮುಸ್ಲೀಂ ವಿರೋಧಿ ಭಾಷಣದ ಕಾರ್ಯಕ್ರಮವನ್ನು ಮುಂದುವರಿಸಿದ್ದರು,, ಆದರೆ ಈ ಬಾರಿ ಇವರಿಬ್ಬರ ಈ ದಾಳಿಯಿಂದ ತೊಂದರೆಗೆ ಸಿಲುಕಿಕೊಂಡವರು ಪ್ರಧಾನಿ ನರೇಂದ್ರ ಮೋದಿ, ಗೄಹ ಸಚಿವ ಅಮಿತ್ ಶಾ, ಕೇಸರಿ ಪಕ್ಷ ಬಿಜೆಪಿ.. ಇವಲ್ಲಕ್ಕಿಂತ ಮುಖ್ಯ ಎಂದರೆ ಈ ಮೂರ್ಖರಿಂದಾಗಿ ಭಾರತ ತಮ್ಮ ಆಪ್ತ ಸ್ನೇಹಿತರ ಬೇಸರಕ್ಕೆ ಕಾರಣವಾದದ್ದು,

ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಯಿತು.. ಸಾಮಾಜಿಕ ಜಾಲ ತಾಣಗಳಲ್ಲಿ ಈ ಕೋಮುವಾದಿ ವಕ್ತಾರರು ಮತ್ತು ಯಾಂಕರ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಜೊತೆಗೆ ಸೌದಿ ಅರೇಬಿಯಾ, ಕುವೈತ್, ಒಮಾನ್, ಮೊದಲಾದ ಟ್ರಗರಾಯಭಾರಿಗಳನ್ನು ಕರೆಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಇಮಾನ್ ಧರ್ಮಗುರು ಹೇಳಿಕೆಯೊಂದನ್ನು ನೀಡಿ ಪ್ರವಾದಿ ಮೊಹಮ್ಮದ್ ಅವರಿಗೆ ಆದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಆಗ ಜಾಗೃತವಾದ ವಿದೇಶಾಂಗ ಇಲಾಖೆ ಪರಿಸ್ಥಿತಿಯನ್ನು ಸರ್ಕಾರಕ್ಕೆ ವಿವರಿಸಿತು,,ತಕ್ಷಣ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಲಹೆ ನೀಡಿತು.. ಕೋಮುವಾದಿ ರಾಜಕಾರಣದಲ್ಲಿ ನಿರತರಾಗಿದ್ದ ಬಿಜೆಪಿಗೆ ಇದರಿಂದ ಉಂಟಾದದ್ದು ಮುಜುಗರ. ಪ್ರಧಾನಿ ನರೇಂದ್ರ ಮೋದಿ ಅವರ ಬುಡಕ್ಕೆ ಇದು ಬಂದಿತ್ತು.. ಬಹುತೇಕ ಕೊಲ್ಲಿ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಸಹಾಯಕರು ಎಂದು ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಅವರಸ್ನು ಗುರುತಿಸಿದ್ದರು.. ಇದು ನಿಜವೂ ಆಗಿತ್ತು,

ಹೀಗಾಗಿ ಬಿಜೆಪಿ ತೆಗೆದುಕೊಂಡ ತೀರ್ಮಾನ ನವೀನ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವುದು ಮತ್ತು ನೂಪುರ್ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಅಮಾನತಿನಲ್ಲಿ ಇಡುವುದು.. ಅದರೆ ಹಿಂದಿನ ತರ್ಕ ಏನು ? ಟಿವಿ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಅವರಿಗೆ ಅವಮಾನ ಮಾಡಿದ್ದು ಪಕ್ಷದ ವಕ್ತಾರರಾದ ನೂಪುರ್ ಶರ್ಮಾ. ಇವಳಿಗೆ ಪಕ್ಕ ವಾದ್ಯ ನುಡಿಸಿದ್ದು ಟೈಂಸ್ ನೌ.. ನೂಪುರ್ ಶರ್ಮಾ ಅವರ ಅಭಿಪ್ರಾಯಗಳಿಗೆ ಟ್ವೀಟ್ ಮೂಲಕ ಸಹಮತ ವ್ಯಕ್ತಪಡಿಸಿದ್ದು ದೆಹಲಿ ಬಿಜೆಪಿ ಮಾಧ್ಯಮ ಸಂಘಟಕ ನವೀನ್ ಕುಮಾರ್. ಆದರೆ ನೂಪುರ್ ಶರ್ಮಾ ಅವರಸ್ನು ಅಮಾನತಿನಲ್ಲಿ ಮಾತ್ರ ಇಡಲಾಗಿದೆ. ನಿಜವಾಗಿ ಈ ಮುಜುಗರಕ್ಕಾಗಿ ಶರ್ಮಾ ಅವರನ್ನು ಉಚ್ಚಾಟನೆ ಮಾಡಬೇಕಿತ್ತು,,ನವೀನ್ ಕುಮಾರ್ ಅವರನ್ನು ಅಮಾನತಿನಲ್ಲಿ ಇಟ್ಟರೂ ಸಾಕಿತ್ತು.. ಆದರೆ ನೂಪುರ್ ಅವರನ್ನು ಅಮಾನತಿನಲ್ಲಿ ಮಾತ್ರ ಇಟ್ಟಿರುವುದು ಆಕೆ ಎಷ್ಟು ಪ್ರಭಾವಶಾಲಿ ಎಂಬುದನ್ನು ತೋರಿಸಿಕೊಡುತ್ತದೆ.

ಈ ರೀತಿಯ ಕೋಮು ರಾಜಕಾರಣ ಎಲ್ಲಕಾಲದಲ್ಲೂ ನಿರಿಕ್ಷಿತ ಲಾಭವನ್ನು ತಂದುಕೊಡುವುದಿಲ್ಲ...ಅದು ನಮ್ಮ ಸ್ನೇಹಿತರನ್ನು ದೂರಮಾಡುತ್ತದೆ. ವೈರಿಗಳನ್ನು ಪ್ರಬಲರನ್ನಾಗಿ ಮಾಡುತ್ತದೆ.. ದೇಶದಲ್ಲಿ ಬಿಜೆಪಿ ಮತ ಬ್ಯಾಂಕ್ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡ ಬಿಜೆಪಿಗೆ ಇಂತಹ ಘಟನೆಗಳು ತಮ್ಮ ವೈರಿಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂಬುದು ಅರ್ಥವಾದಂತಿಲ್ಲ..ಈಗಾಗಲೇ ಪಾಕಿಸ್ಥಾನದಲ್ಲಿ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ನಮ್ಮ್ ಸ್ನೇಹಿತರರಾದ ಕೊಲ್ಲಿ ರಾಷ್ಟ್ರಗಳು ಮತ್ತು ಪಾಕಿಸ್ಥಾನದ ನಿಲುಮೆ ಒಂದೇ ಆಗಿದೆ.. ಅಂದರೆ ನೂಪುರ್ ಶರ್ಮಳ ಮೂರ್ಖತನ ಪಾಕಿಸ್ಥಾನವನ್ನು ಕೊಲ್ಲಿ ರಾಷ್ಟ್ರಗಳನ್ನು ಒಂದು ಮಾಡಿದೆ.

ಈ ಕೋಮುವಾದಿಗಳಿಂದಾಗಿ ಭಾರತ ತಲೆ ತಗ್ಗಿಸುವಂತೆ ಆಗಿದೆ. ಭಾರತ ತಲೆ ತಗ್ಗಿಸುವಂತೆ ಆಗಿದೆ...ಒಟ್ಟಿನಲ್ಲಿ ಇವರು ದೇಶವನ್ನು ಉಳಿಸುವುದಿಲ್ಲ.. ತಮ್ಮ ಅಧಿಕಾರಕ್ಕಾಗಿ ದೇಶವನ್ನು ಇನ್ನಷ್ಟು ಸಂಕಟಕ್ಕೆ ಸಿಲುಕಿಸುತ್ತಾರೆ..

ಕಲುಷಿತಗೊಂಡ ರಾಜಕೀಯ ವಾತಾವರಣ; ಸಿದ್ದರಾಮಯ್ಯನವರ ಚಡ್ಡಿ ಸುಡುವ ಚಳವಳಿ ಮತ್ತು ಬಿಜೆಪಿ ಸಿಟ್ಟು

ಕಲುಷಿತಗೊಂಡ ರಾಜಕೀಯ ವಾತಾವರಣ; ಸಿದ್ದರಾಮಯ್ಯನವರ ಚಡ್ಡಿ ಸುಡುವ ಚಳವಳಿ ಮತ್ತು ಬಿಜೆಪಿ ಸಿಟ್ಟು

 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚೆಡ್ಡಿ ಸುಡುವ ಚಳವಳಿಯ ಪ್ರಸ್ತಾಪ ಈಗ ಚೆಡ್ಡಿ ಜಗಳವಾಗಿದೆ.. ಸಿದ್ದರಾಮಯ್ಯ  ಅವರ ಈ ಹೇಳಿಕೆಗೆ ಬಿಜೆಪಿ ನಾಯಕರುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ,,,ಸಿದ್ದರಾಮಯ್ಯನವರ ಮೇಲೆ ವೈಯಕ್ತಿಕ ದಾಳಿಯೂ ಪ್ರಾರಂಭವಾಗಿದೆ. ಸಿದ್ದರಾಮಯ್ಯನವರ ಮಾಜಿ ಸಹೋದ್ಯೋಗಿಗಳು ಈಗ ಬಿಜೆಪಿಯಲ್ಲಿ ಆಶ್ರಯ ಪಡೆದಿರುವವರು ತಿರುಗಿಬಿದ್ದಿದ್ದಾರೆ,, 

ಸಿದ್ದರಾಮಯ್ಯ ಆರ್ ಎಸ್ ಎಸ್ ಬಗ್ಗೆ ಮಾತನಾಡಿದಾಗಲೂ ಇದೇ 


ಆಗಿತ್ತು.. ಬಿಜೆಪ್ಪಿಯ ಹಲವು ನಾಯಕರು ತಿರುಗಿಬಿದ್ದಿದ್ದರು..ಆರ್ಯ ಮತ್ತು ದ್ರಾವಿಡ ಪ್ರಶ್ನೆ ಬಂದಾಗಲು ಕೂಡ ಸಿದ್ದರಾಮಯ್ಯ ಟಿಕೆಗೆ ಗುರಿಯಾಗಿದ್ದರು,,

ಕಳೆದ ಒಂದೆರಡು ತಿಂಗಳಿನಿಂದ ಈಚೆಗೆ ಸಿದ್ದರಾಮಯ್ಯ ಹೆಚ್ಚು ಆಕ್ರಮಣಕಾರಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. ಸಂಘ ಪರಿವಾರದ ವಿರುದ್ಧ ಸಿದ್ದರಾಮಯ್ಯ ಸ್ಪಷ್ಟ ನಿಲುವು ಹೊಂದಿದ್ದಾರೆ. ಈ ವಿಚಾರದಲ್ಲಿ ಅವರಿಗೆ ವೈಚಾರಿಕ ಸ್ಪಷ್ಟತೆ ಇದೆ. ಆದರೆ ಅವರು ಈ ವಿಚಾರದಲ್ಲಿ ಅವರು ಆಕ್ರಮಣಕಾರಿ ನಿಲುವು ಪ್ರದರ್ಶಿಸಿದ್ದು ಕಡಿಮೆ.. ತಮ್ಮ ಸೈದ್ಧಾಂತಿಕ ನಿಲುವಿನಲ್ಲಿ ಅವರು ಯಾವುದೇ ರಾಜಿ ಮಾಡಿಕೊಳ್ಳದಿದ್ದರು ಮಾತಿನಲ್ಲಿ ಕೆಲವೊಮ್ಮೆ ಮೃದು ನಿಲುವು ತಳೆದಿದ್ದೂ ಉಂಟು.. ಆದರೆ ಈ ಬಾರಿ ಹಾಗಿಲ್ಲ. ಅವರು ಹೆಚ್ಚು ಆಕ್ರಮಣಕಾರಿ ನಿಲುವು ಪ್ರದರ್ಶಿಸಿದ್ದು..

ಇದಕ್ಕೆ ಮುಖ್ಯ ಕಾರಣ ಬಹುಸಂಖ್ಯಾತರ ಮನಸ್ಸನ್ನು ನೋಯಿಸಬಾರದು ಎಂಬ ಮತ ಬ್ಯಾಂಕ್ ರಾಜಕಾರಣದಿಂದ ಅವರು ಸಂಫೂರ್ಣವಾಗಿ ಹೊರಗೆ ಬಂದಿದ್ದೂ ಕಾರಣವಿರಬಹುದು. ಇದಕ್ಕೆ ಕಾಂಗ್ರೆಸ್ ವರಿಷ್ಠ್ರರು ಗ್ರೀನ್ ಸಿಗ್ನಲ್ ನೀಡಿರಲೂ ಬಹುದು.. ಜೊತೆಗೆ ಚುನಾವಣೆ ಬರುತ್ತಿರುವ ಈ ಸಂದರ್ಭದಲ್ಲಿ ಸಿದ್ಧಾಂತಿಕವಾಗಿ ಸ್ಫಷ್ಟ ನಿಲುವು ಹೊಂದುದುವುದು ಅಗತ್ಯ ಎಂಬ ಅರಿವಾಗಿರುವುದು ಇರಬಹುದು,, ಯಾಕೆಂದರೆ ಬಹುಸಂಖ್ಯಾತರ ಮನಸ್ಸಿಗೆ ನೋವಾಗಬಾರದು ಎಂಬ ನಿಲುವಿನಿಂದ ಕಾಂಗ್ರೆಸ್ ಗೆ ಯಾವ ರೀತಿಯ ಲಾಭ ಕೂಡ ಇಲ್ಲ.. ಈಗಾಗಲೇ ಬಹುಸಂಖ್ಯಾತ ಮತಗಳ ಕ್ರೋಡೀಕರಣದ ರಾಜಕಾರಣದಲ್ಲಿ ಬಿಜೆಪಿ ಯಶಸ್ವಿಯಾಗಿದೆ.. ಈಗ ಕಾಂಗ್ರೆಸ್ ಗೆ ಉಳಿದಿರುವುದು ತಮ್ಮ ಸೈದ್ಧಾಂತಿಕ ನಿಲುವಾದ ಅಲ್ಪಂಸಖ್ಯಾತರು, ದಲಿತರು ಮತ್ತು ಹಿಂದುಳಿದವರ ಮತವನ್ನು ಗಟ್ಟಿಗೊಳಿಸುವ ದಾರಿ ಮಾತ್ರ.

ಈ ಕಾರಣದಿಂದ ಸಿದ್ದರಾಮಯ್ಯ ಹೆಚ್ಚು ಆಕ್ರಮಣಶೀಲ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿರಬಹುದು.

ಈಗ ಸಿದ್ದರಾಮಯ್ಯ ಚೆಡ್ದಿಗೆ ಬೆಂಕಿ ಹಚ್ಚುವ ಅಥವಾ ಸುಡುವ ಮಾತನಾಡಿದ್ದಾರೆ..ಚೆಡ್ಡಿ ಸುಡುವುದು ಎಂದರೇನು ? ಎಲ್ಲೆಡೆ ಚಡ್ಡಿಯನ್ನು ರಾಶಿ ಹಾಕಿ ಬೆಂಕಿ ಹಚ್ಚುತ್ತಾರೆಯೆ ?

ಅಥವಾ ಚೆಡ್ಡಿ ಸುಡುವುದು ಎನ್ನುವುದು ಒಂದು ಸಾಂಕೇತೇಕ ನಿಲುವು ಮಾತ್ರವೆ ? ಚೆಡ್ಡಿ ಎನ್ನುವುದು ಸಂಘ ಪರಿವಾರವನ್ನು ಸಂಕೇತಿಸುತ್ತದೆ, ಸಂಘ ಪರಿವಾರದ ಮನುಷ್ಯ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿಯನ್ನು ಸಂಕೇತಿಸುತ್ತದೆ.. ಹಾಗೆ, ಮನುವಾದ ಈ ಮನಸ್ಥಿತಿಯ ಭಾಗವಾಗಿದೆ.. ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಚಡ್ಡಿ ಸುಡುವುದನ್ನು ಅರ್ಥ ಮಾಡಿಕೊಳ್ಳಬೇಕು,,

ಬಿಜೆಪಿಯ ಹಲವು ನಾಯಕರಿಗೆ ಇದೆಲ್ಲ ಅರ್ಥವಾಗುವುದಿಲ್ಲ..ಅವರಿಗೆ ಸಂಘಪರಿವಾರದ ಅಪಾಯದ ಅರಿವಿಲ್ಲ. ಅರಿವಿದ್ದರೂ ಅವರು ಬಯಸುವುದು ಸಂಘ ಪರಿವಾರ ಬಯಸುವ ಪ್ರತಿಪಾದಿಸುವ ಸಮಾಜವನ್ನೇ. ಅದೇ ಅವರ ರಾಜಕೀಯ ಮೌಲ್ಯ..

ಇತ್ತೀಚಿಗೆ ಅಧಿಕಾರಕ್ಕಾಗಿ ಬಿಜೆಪಿ ಸೇರಿರುವ ಸೋಮಶೇಖರ್ ಅಂತವರಿಂದ ಈ ಮಟ್ಟದ ಬೌದ್ದಿಕತೆಯನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ..

ಇವತ್ತು ಬಿಜೆಪಿ ಸೇರಿ ವಿಧಾನ ಪರಿಷತ್ ಸದಸ್ಯರಾಗಲು ಹೊರಟೀರುವ ನಾರಾಯಣಸ್ವಾಮಿ ಅವರ ಹೇಳಿಕೆಯನ್ನೂ ನೋಡಬೇಕು.. ವರು ಸಿದ್ದರಾಮಯ್ಯ ತಿಕ್ಕಲು ಎಂದಿದ್ದಾರೆ. ತಿಕ್ಕಲು ಎಂದರೆ ತಲೆ ಸರಿಯಿಲ್ಲ ಎಂಬ ಅರ್ಥವಿವರಣೆಯನ್ನೂ ಅವರೇ ನೀಡಿದ್ದಾರೆ.. ಆದರೆ ಸಿದ್ದರಾಮಯ್ಯನವರ ಸೈದ್ಧಾಂತಿಕ ನಿಲುವು ಹೇಗೆ ತಪ್ಪು ಎಂದು ವಿವರಿಸಿದ್ದರೆ ಅವರ ಮಾತಿಗೆ ಬೆಲೆ ಬರುತ್ತಿತ್ತು. ಅದರ ಬದಲಿಗೆ ಅವರಿಗೆ ತಲೆ ಸರಿ ಇಲ್ಲ ಎಂದು ಹೇಳುವುದು ತುಂಬಾ ಸುಲಭ. ಇದಕ್ಕೆ ಯಾವುದೇ ಓದು ತಿಳುವಳಿಕೆ ಬೇಕಾಗಿಲ್ಲ. ಮಾತನ್ನು ಬಟ್ಟೆ ಒಗೆಯುವಂತೆ ಇಗೆಯುವುದು ಅಷ್ಟೇ. ಇದರಿಂದ ಕೊಳೆ ಹೋಗುವುದಕ್ಕೆ ಬದಲು ಮತ್ತಷ್ಟು ಕೊಳೆಯಾಗುತ್ತದೆ. ಹೀಗೆ ಕೊಳೆಯಾದ ರಾಜಕಾರಣದಲ್ಲಿ ಇವರೆಲ್ಲ ಈಜಾಡಬೇಕು.. ಅದನ್ನೇ ಇವರೆಲ್ಲ ಮಾಡುತ್ತಿದ್ದಾರೆ.

ಮಾತು ಮುತ್ತಿನ ಹಾರದಂತಿರಬೇಕು ಎಂದು ಹೇಳಿದವರು ಬಸವಣ್ಣ. ಆದರೆ ಇವರ ಮಾತುಗಳು ಮುತ್ತಿನ ಹಾರದಂತಿಲ್ಲ. ಬದಲಾಗಿ ರಾಜಕೀಯ ಮೌಲ್ಯಗಳ ಉರುಳಿನಂತಿದೆ.. ಅದು ರಾಜಕಾರಣವನ್ನು ಇನ್ನಷ್ಟು ಕಲುಷಿತಗೊಳಿಸುತ್ತದೆ.. ಕಲುಷಿತಗೊಂಡ ರಾಜಕಾರಣದಲ್ಲಿ ತಮ್ಮ ಅಧಿಕಾರ ರಾಜಕಾರಣದ ಭಗವಾ ಝೇಂಡಾವನ್ನು ಹಾರಿಸುವುದು ಇವರ ಉದ್ದೇಶ,,

ಒಟ್ಟಾರೆಯಾಗಿ ಇವತ್ತಿನ ರಾಜಕಾರಣ ಮೌಲ್ಯವನ್ನು ಕಳೆದುಕೊಂಡಿದೆ..ಕೇವಲ ಅಧಿಕಾರವೇ ರಾಜಕಾರಣದ ಪರಮ ಗುರಿ ಎಂಬಂತಾಗಿದೆ,,

ಇಲ್ಲಿ ಮಾತುಗಳಿಗೆ ಬೆಲೆ ಇಲ್ಲ. ಘನತೆ ಇಲ್ಲ..ಇದಕ್ಕೆ ಎಲ್ಲ ರಾಜಕಾರಣಿಗಳೂ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ,

ಸಿದ್ದರಾಮಯ್ಯನವರ ಮೂಲ ಹೇಳಿಕೆಗೆ ಬರೋಣ.. ಅವರು ಯಾವ ಉದ್ದೇಶದಿಂದ ಚಡ್ಡಿ ಸುಡುವ ಕಾರ್ಯಕ್ರಮದ ಬಗ್ಗೆ ಮಾತನಾಡಲಿ, ಅವರು ಹೇಳಬೇಕಾದ್ದನ್ನು ಇನ್ನಷ್ಟು ಗೌರವದಿಂದ ಹೇಳಬಹುದಿತ್ತು..ಆದರೆ ಅವರೂ ಸಹ ತಮ್ಮ ಮಾತನ್ನು ಹೇಳಿದ ರೀತಿ ಸರಿಯಿರಲಿಲ್ಲ...

ಕರ್ನಾಟಕದ ಹಿರಿಯ ರಾಜಕಾರಣಿ ಆಗಿರುವ ಸಿದ್ದರಾಮಯ್ಯನವರಾದರೂ ಈ ಬಗ್ಗೆ ಯೋಚಿಸಲಿ.. ಮಾತನ್ನು ಒಮ್ಮೆ ಆಡಿದ ಮೇಲೆ ಮುಗಿಯಿತು ಅದನ್ನು ವಾಪಸ್ಸು ಪಡೆಯುವುದು ಸಾಧ್ಯವಿಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ

 

 ನಾನು ಕಳೆದ ಕಲವು ತಿಂಗಳುಗಳಿಂದ ಏನನ್ನೂ ಬರೆದಿಲ್ಲ.. ಬರೆಯುವುದು ಎಂದರೆ ಅದು ಹೃದಯವನ್ನು ಬಸಿಯುವ ಕೆಲಸ..ನಾನು ಸುದ್ದಿ ಟಿವಿ ಡಿಜಿಟಲ್ ವಾಹಿನಿಯ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದರಿಂದ ಬರೆಯಲು ಸಾಧ್ಯವಾಗಿರಲಿಲ್ಲ.

ಆದರೆ ಬರವಣಿಗೆ ನನ್ನ ಮೂಲ ಪ್ರವೃತ್ತಿ.. ನಾನು ಬರೆಯುತ್ತಲೇ ಇದ್ದವನು.. ನನ್ನ ಕಾಲೇಜು ದಿನಗಳಲ್ಲಿ ಕಥೆ ಕವನಗಳನ್ನು ಬರೆಯುತ್ತಿದ್ದೆ.. ೮೦ ರ ದಶಕದಲ್ಲಿ ನಾನು ಬರೆದ ಕಥೆ ಸಾವು ಮಯೂರ ಮಾಸಿಕದಲ್ಲಿ ಪ್ರಕಟವಾಗಿತ್ತು. ಆಗ ನಾನು ಸಂಭ್ರಮ ಪಟ್ಟಿದ್ದು ನನಗೆ ನೆನಪಿದೆ. ನನ್ನ ಮೊದಲ ಕವನ ಪ್ರಕಟವಾಗಿದ್ದು ಸಂಕ್ರಮಣ ಮಾಸಿಕದಲ್ಲಿ..ಚಂದ್ರಶೇಖರ ಪಾಟೀಲರು ಇದರ ಸಂಪಾದಕರಾಗಿದ್ದರು.. ಬುದ್ದಣ್ಣ ಹಿಂಗಮಿರೆ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿ ಅವರೂ ಚಂದ್ರಶೇಖರ್ ಪಾಟೀಲ್ ಅವರ ಜೊತೆಗಿದ್ದರು,

ಇದಾದ ಮೇಲೆ ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟೆ.. ಮೊದಲು ನಮ್ಮೂರಿನಿಂದ ಬರುತ್ತಿದ್ದ ಕಡಲಧ್ವನಿ ಪತ್ರಿಕೆಯಲ್ಲಿ ವಾರದ ಅಂಕಣ ಬರೆಯುತ್ತಿದ್ದೆ. ಆ ಪತ್ರಿಕೆಯಲ್ಲಿ ಬರೆದ ಭ್ರಷ್ಟಾಚಾರ ಪ್ರಕರಣದ ವರದಿಯಿಂದಾಗಿ ನಾನು ಮಾನಹಾನಿ ಕಟ್ಲೆ ಎದುರಿಸಬೇಕಾಯಿತು..ಆಗ ನನ್ನ ಪರವಾಗಿ ವಾದಿಸಿದವರು ಧಾರೇಶ್ವರ ವಕೀಲರು. ಅವರು ಏನನ್ನೂ ತೆಗೆದುಕೊಳ್ಳದೇ ವಾದ ಮಾಡಿ ನನ್ನನ್ನು ಗೆಲ್ಲಿಸಿದರು.

ಇದೇ ಸಂದರ್ಭದಲ್ಲಿ ಹೋರಾಟಗಳಲ್ಲಿ ಪಾಲ್ಗೊಂಡು ನಾನು ಊರು ಬಿಡಬೇಕಾಯಿತು.. ಊರು ಬಿಟ್ಟವನು ಬೆಂಗಳೂರಿಗೆ ಬಂದೆ.. ಆಕಾಶವಾಣಿ ನಂತರ ಸಂಯುಕ್ತ ಕರ್ನಾಟಕ ಸೇರಿದೆ. ಅಲ್ಲಿಂದ ನನ್ನ ಪತ್ರಿಕೋದ್ಯಮದ ಜರ್ನಿ ಪ್ರಾರಂಭವಾಯಿತು.. ಪತ್ರಿಕೋದ್ಯಮದ ಅವಸರದ ಸಾಹಿತ್ಯದಲ್ಲಿ ಕಳೆದು ಹೋದೆ.. ನನ್ನ ಕ್ರಿಯಾಶೀಲ ಬರವಣಿಗೆಗೆ ತಡೆ ಉಂಟಾಯಿತು,, ಆಗಾಗ ಬರೆಯುತ್ತಿದ್ದೆ. ಕುಮ್ರಿ ಬ್ಲ್ಲಾಗ್ ಗೆ ಅಗಾಗ ಬರೆಯುತ್ತಿದ್ದರೂ ಅಲ್ಲಿ ಶಿಸ್ತು ಇರಲಿಲ್ಲ,, 

ಈಗ ಮತ್ತೆ ಬರೆಯಬೇಕು ಅಲ್ಲಿಸುತ್ತಿದೆ..

ಯಾಕೆಂದರೆ ದೃಶ್ಯ ಮಾಧ್ಯಮ ಬರೆಯುವ ಸುಖ ನೀಡಲಾರದು..ಇದು ಈಗ ನನಗೆ ಅರ್ಥವಾಗುತ್ತಿದೆ, ನಾನು ಮತ್ತೆ ಬರೆಯಲು ಪ್ರಾರಂಭಿಸುತ್ತಿದ್ದೇನೆ.. ನನ್ನೊಳಗೆ ಇರುವುದಕ್ಕೆ ಅಕ್ಷರ ರೂಪ ಕೊಡುತ್ತೇನೆ,,

ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಸದಾ ಇರಲಿ

Monday, January 3, 2022

RAMANAGARA RAMPATA

ರಾಮನಗರ ರಂಪಾಟ..
ವೇದಿಕೆಯ ಮೇಲೆ ರಂಪಾಟ..ಸಚಿವರು ಮತ್ತು ಸಂಸತ್ ಸದಸ್ಯರ ನಡುವೆ ಹಗ್ಗಜೆಗ್ಗಾಟ,,,
ಸಸಂತ್ ಸದಸ್ಯ ಡಿ.ಕೆ. ಸುರೇಶ್ ಕೋಪಾಟೋಪ;;
ಕಾಲು ಕರೆದು ಜಗಳ ಪ್ರಾರಂಭಿಸಿದ ಡಾ.ಅಶ್ವತ್ಠನಾರಾಯಣ,,,,
ರಾಮನಗರದಲ್ಲಿ ಇಂದು ನಡೆದಿದ್ದು ಜನತಂತ್ರದ ನಗ್ನ ಪ್ರದರ್ಶನ,,,ಮಾನ ಮರ್ಯಾದೆ ಬೀದಿಗೆ ಹಾಕಿದ ರಾಜಕಾರಣಿಗಳು.
ಎಲ್ಲವೂ ಮುಖ್ಯಮಂತ್ರಿಗಳ ಕಣ್ಣೆದುರೇ ನಡೆದುಹೋಯಿತು,,,!
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ..

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...