Monday, December 26, 2022

ಗುರು ಗೋವಿಂದ ಭಟ್ಟರು ಈಗ ಬದುಕಿದಿದ್ದರೆ ? ತಮ್ಮ ಈ ಮರಿ ಮರಿ ಮೊಮ್ಮಗ ಜೋಷಿಯ ಬಗ್ಗೆ ಎನೆಂದುಕೊಳ್ಳುತ್ತಿದ್ದರು ?

 

ಮುಂಬರುವ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ. ಇದು ವಿವಾದಕ್ಕೆ ಕಾರಣವಾಗಿದೆ.. ಈ ವಿವಾದಕ್ಕೆ ಕಾರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಮಹೇಶ್ ಜೋಷಿ.. ಇವರು ತಮ್ಮನ್ನು ಶಿಶುನಾಳ್ ಶರೀಷ್ ಅವರ ಗುರು ಗೋಂವಿದ ಭಟ್ ಅವರ ವಂಶಜರು ಎಂದು ಹೇಳಿಕೊಳ್ಳುತ್ತಾರೆ.. ಅವರು ಗುರು ಗೋಂವಿದ ಭಟ್ಟರ ವಂಶಜರಾಗಿದ್ದರೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬೇಕಾಗಿಲ್ಲ..ಅವರು ತಮ್ಮನ್ನು ಗುರು ಗೋಂವಿದ ಭಟ್ಟರ ವಂಶಜ ಎಂದೂ ಸಂತೋಷಪಡಬಹುದು.. ಆದರೆ ಇವರು ಯಾವ ದೃಷ್ಟಿಯಿಂದ ಗುರು ಗೋವಿಂದ ಭಟ್ಟರ ವಂಶಜ ಎಂದು ಪ್ರಶ್ನೆ ಮಾಡಲೇಬೇಕಾಗುತ್ತದೆ.

ಗುರು ಗೋವಿಂದ ಭಟ್ಟ  ರು ಮುಸ್ಲೀಮ್ ಹುಡುಗ ಶರೀಫರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು.. ಆತನನ್ನು ಆಧ್ಯಾತ್ಮದ ದಾರಿಯಲ್ಲಿ ಕರೆದೊಯ್ಯದರು. ಎಲ್ಲ ಧರ್ಮಗಳೂ ಒಂದೇ. ಧರ್ಮಗಳ ನಡುವೆ ವ್ಯತ್ಯಾಸ ಇಲ್ಲ ಎಂದು ಕಲಿಸಿದರು. ಅಲ್ಲಾ ಈಶ್ವರ್ ತೇರೆ ನಾಮ ಎಂಬ ಸತ್ಯವನ್ನು ಅರುಹಿದರು. ಒಬ್ಬ ಮುಸ್ಲೀಮನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ ಗೋವಿಂದ ಭಟ್ಟರ ವಿರುದ್ಧ ಬ್ರಾಹ್ಮಣ ಸಮಾಜ್ ತಿರುಗಿ ಬಿತ್ತು. ಶರೀಫರನ್ನು ಬಿಟ್ಟು ಬಿಡುವಂತೆ ಒತ್ತಡ ಹೇರಿತು. ಗೋವಿಂದ ಭಟ್ಟರು ಈ ಬ್ರಾಹ್ಮಣ ಸಮಾಜವನ್ನೇ ತಿರಸ್ಕರಿಸಿ ತಮ್ಮ ಶಿಷ್ಯ ಷರೀಫನನ್ನು ಕರೆದುಕೊಂಡು ಆಧ್ಯಾತ್ಮವನ್ನು ಅರೆಸುತ್ತ ಹೊರಟು ಬಿಟ್ಟರು.

ಶಿಶುನಾಳ ಶರೀಫರು ಗುರುವನ್ನು ಒಪ್ಪಿಕೊಂಡರು. ಅಲ್ಲಾ ಮತ್ತು ಈಶ್ವರನ ನಡುವೆ ವ್ಯತ್ಯಾಸವಿಲ್ಲ ಎಂದು ಕಂಡುಕೊಂಡರು.. ಅವರು ಕೇವಲ ಆದ್ಯಾತ್ಮವಾದಿಯಾಗಿ ಉಳಿಯಲಿಲ್ಲ. ಅವರ ತತ್ವ ಪದಗಳು ಕನ್ನಡ ಸಾಹಿತ್ಯದಲ್ಲೇ ಅನನ್ಯವಾದವು.. ಸೋರುತಿಹುದು ಮನೆಯ ಮಾಳಿಗಿ ಎನ್ನುವ ತತ್ವ ಪದ ನನ್ನಗೆ ಈಗ ನೆನಪಾಗುತ್ತಿದೆ.

ಗುರು ಗೋವಿಂದ ಭಟ್ಟರನ್ನು ಸದಾ ನೆನಪು ಮಾಡಿಕೊಳ್ಳುವ ಮಹೇಶ್ ಜೋಷಿ ಸರ್ಕಾರಿ ನೌಕರರೆ ? ಪತ್ರಕರ್ತರೇ ಅಥವಾ ರಾಜಕಾರಣಿಯೆ ಅಥವಾ ಅವರೊಬ್ಬ ಸಾಹಿತಿಯೆ ? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ.. ಅವರು ರಾಜಕಾರಣಿಗಳ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ..  ದೂರದರ್ಶನ ಎಂಬ ಸರ್ಕಾರಿ ಮಾಧ್ಯಮದಲ್ಲಿ ಕೆಲಸ ಮಾಡುವ ಮೂಲಕ ಪತ್ರಕರ್ತರು ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ.. ಅವರು ದೆಹಲಿ ದೂರದರ್ಶನದಲ್ಲಿ ಕೆಲಸ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಸಂತೋಷ ಪಟ್ಟಿದ್ದಾರೆ..ಅವರ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಎಲ್ಲರಿಗೂ ತೋರಿಸಿ ಸಂತೋಷಪಟ್ಟಿದ್ದಾರೆ.

ವಿಧಾನ ಪರಿಷತ್ ಸಭಾಪತಿಗಳಾಗಿದ್ದ ಡಿ. ಬಿ. ಕಲ್ಮಣಕರ್ ಅವರ ಆಪ್ತ ಕಾರ್ಯದರ್ಶಿಯಾಗಿ ವಿಧಾನ ಸೌಧದ ಮೊಗಸಾಲೆಯಲ್ಲಿ ಒಡಾಡಿಕೊಂಡಿದ್ದ ಅವರು ರಾಜಕಾರಣಿಗಳ ಆಪ್ತೀಷ್ಟರಾಗಿ ಹೇಗೆ ಇರಬೇಕು ಎಂಬುದನ್ನು ಅರಿತವರು..

ಜೋಶಿ ಕುಮಾರಸ್ವಾಮಿ ಅವರಂತೆ ಎಲ್ಲರನ್ನೂ ಬ್ರದರ್ ಎಂದು ಪ್ರೀತಿಯಿಂದ ಮಾತನಾಡುತ್ತ ಹೆಗಲ ಮೇಲೆ ಕೈ ಹಾಕುತ್ತಾರೆ.. ಅವರ ಸಾಧನೆಗಳ ಪಟ್ಟಿ ಮಾಡುತ್ತ ಹೋದರೆ ಅದು ಮುಗಿಯುವುದಿಲ್ಲ..ಬೆಂಗಳೂರು ದೂರದರ್ಶನ ಕೇಂದ್ರದ ಮಂಜುಳ ಗಾನ ಕಾರ್ಯಕ್ರಮದಲ್ಲಿ ಮಂಜುಳವಾಗಿ ಹಾಡಿ ಎಲ್ಲರನ್ನೂ ಮುದಗೊಳಿಸಿದವರು. ಸದಾ ಒಂದು ಕ್ಯಾಮರಾ ತಮ್ಮ ಮೇಲೆ ಇರುವಂತೆ ನೋಡಿಕೊಂಡು ತಮ್ಮ ಭಾವ ಭಂಗಿಯನ್ನು ಜನರಿಗೆ ತಲುಪಿಸುತ್ತಾ ಬಂದವರು.. ಆಹ್ವಾನಿತ ಗಣ್ಯರ ಜೊತೆ ಎಂತಹ ಅತ್ಯುತ್ತಮ ಸಂಬಂಧವನ್ನು ಅವರು ಇಟ್ಟುಕೊಂಡು ಬಂದವರೆಂದರೆ ಅವರು ಹೇಗೆ ಹಾಡಲಿ, ಶ್ರುತಿ ಇರಲಿ ಶ್ರುತಿ ತಪ್ಪಿಲಿ ಈ ಗಣ್ಯರು ಚಪ್ಪಾಳೆ ಹೊಡೆದು ಹುರಿದುಂಬಿಸುವುದು ಎಲ್ಲರೂ ನೋಡಿರುವ ದೃಶ್ಯಗಳು. ಯಾರೇ ಹಾರಾಡಲಿ ಯಾರೇ ಕೂಗಾಡಲಿ ನಿನ್ ನೆಮ್ಮದಿಗೆ ಬಂಗವಿಲ್ಲ ಎಂಬ ಮನಸ್ಥಿತಿಯವರು ಜೋಷಿ.

ಜೋಷಿ ತಮ್ಮ ನಿವೃತ್ತಿಯ ನಂತರ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟರು. ಅದಕ್ಕಾಗಿ ತಯಾರಿ ನಡೆಸಿದರು..ಸಾಹಿತ್ಯ ಪರಿಷತ್ತಿನ ಮೇಲೆ ಅಪ್ರತ್ಯಕ್ಷವಾಗಿ ನಿಯಂತ್ರಣ ಹೊಂದಿದ್ದ ರಾಜಕಾರಣಿಗಳಿಗೆ ಕೆಂಪು ಹಾಸು ಹಾಕಿ ಕರೆದುಕೊಂಡು ಬಂದರು.. ಬಿಜೆಪಿ ಪಕ್ಷ ಜೋಷಿ ಅವರನ್ನು ಬೆಂಬಲಿಸಿತು.. ತಮ್ಮ ಕಾಲಾಳುಗಳಿಗೆ ಪತ್ರ ಬರೆದು ಅಧ್ಯಕ್ಷ ಚುನಾವಣೆಯಲ್ಲಿ ಜೋಷಿ ಅವರಿಗೆ ಬೆಂಬಲ ನೀಡುವಂತೆಯೂ ಕೆಲವು ಬಿಜೆಪಿ ನಾಯಕರ ಕರ ಪತ್ರ ಹೊರಡಿಸಿದರು..ಪ್ರಾಯಶಃ ರಾಜಕೀಯ ಪಕ್ಷವೊಂದು ಪರಿಷತ್ ಅಧ್ಯಕ್ಷ ಚುನಾವಣೆಯಲ್ಲಿ ನೇರೆವಾಗಿ ಪ್ರವೇಶಿಸಿದ ಮೊದಲ ಚುನಾವಣೆ ಇದು. ಹೀಗೆ ಸಾಹಿತ್ಯ ಪರಿಷತ್ತನ್ನು ರಾಜಕಾರಣದ ಅಂಗಳವನ್ನಾಗಿ ಮಾಡಿದ ಕೀರ್ತಿ ಮಹೇಶ್ ಜೋಷಿ ಅವರಿಗೆ ಸಲ್ಲಬೇಕು.

ಜೋಶಿಯವರಿಗೆ ಹೆಸರನ್ನು ಬದಲಿಸುವ ಬಿಜೆಪಿ ಗುಣ ಅಂತರ್ಗತವಾಗಿದೆ. ಚಾಮರಾಜಪೇಟೆಯಲ್ಲಿ ಸಾಹಿತ್ಯ ಪರಿಷತ್ ಎದುರಿನ ರಸ್ತೆಯ ಹೆಸರನ್ನೂ ಬದಲಿಸಲು ಹೊರಟಿದ್ದರು.. ಪಂಪನ ಹೆಸರನ್ನು ಬದಲಿಸಲು ಅವರು ಮುಂದಾಗಿದ್ದರು.. ಮನುಷ್ಯ ಕುಲ ತಾನೊಂದೇ ವಲಂ ಎಂದ ಪಂಪನನ್ನು ಒಪ್ಪಿಕೊಳ್ಳುವುದು ಇವರಿಗೆ ಹೇಗೆ ತಾನೇ ಸಾಧ್ಯವಾದೀತು ?

ಈಗ ಹಾವೇರಿ ಸಾಹಿತ್ಯ ಸಮ್ಮೇಳನವನ್ನೂ ವಿವಾದದ ಅಂಗಳವನ್ನಾಗಿ ಅವರು ಮಾಡಿದ್ದಾರೆ. ಮುಸ್ಲೀಂ ಬರಹಗಾರರನ್ನು ಕವಿಗಳನ್ನು ಸಾಹಿತಿಗಳನ್ನು ಅವರು ದೂರವಿಟ್ಟಿದ್ದಾರೆ. ತಮ್ಮ ರಾಜಕೀಯ ಸಂಪರ್ಕದಿಂದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸ್ಥಾನಕ್ಕೆ ಸಚಿವರ ಸ್ಥಾನವನ್ನು ಪಡೆದಿಕೊಂಡು ಬಿಜೆಪಿ ಎಜೆಂಡಾವನ್ನು ಅನುಷ್ಠಾನಗೊಳಿಸುವಲ್ಲಿ ನಿರತರಾಗಿದ್ದಾರೆ.

ಹಾವೇರಿ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಪಟ್ಟಿಯನ್ನು ನೋಡಿದಾಗ ಆಘಾತವಾಗುತ್ತದೆ. ಆದರೆ ಆಶ್ಚರ್ಯವಾಗುವುದಿಲ್ಲ. ಈ ವ್ಯಕ್ತಿಯಿಂದ ಇನ್ನೇನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ.. 

ಈ ಸಾಹಿತ್ಯ ಸಮ್ಮೇಳನ ರಾಜಕೀಯ ಸಮಾವೇಶದಂತೆ ಕಾಣುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯ ಮೇಲೆ ಇರುವ ಬಹುತೇಕ ಜನರು ರಾಜಕಾರಣಿಗಳು ಮತ್ತು ಅಧಿಕಾರ ವರ್ಗ..ಹಾಗೆ ಸ್ವಾಗತ ಸಮೀತಿ ಸಂಪೂರ್ಣವಾಗಿ ರಾಜಕಾರಣಿಗಳು ಮತ್ತು ಅಧಕಾರಿಗಳಿಂದ ತುಂಬಿ ಹೋಗಿದೆ. ಈ ಬಗ್ಗೆ ಪ್ರತಿಭಟನೆಯ ಕೂಗು ಕೇಳಿ ಬರುತ್ತಿದೆ. ಪರ್ಯಾಯ ಸಾಹಿತ್ಯ ಸಮ್ಮೇಳದ ಮಾತೂ ಕೇಳಿ ಬರುತ್ತಿದೆ..ಆದರೆ ಪ್ರತಿಭಟನೆಗೆ ಸೊಪ್ಪು ಹಾಕದೇ ತಮ್ಮ ಎಜೆಂಡಾವನ್ನು ಜೋಷಿ ಅನುಷ್ಟಾನಗೊಳಿಸಲಿದ್ದಾರೆ. ಸಾಹಿತ್ಯ ಸಮ್ಮೇಳನ ಬಿಜೆಪಿ ಪಕ್ಷದ ಸಾಹಿತ್ಯಿಕ  ಸಮ್ಮೇಳನವಾಗಿ ಸಂಪನ್ನಗೊಳ್ಳಲಿದೆ. ಈ ಬಗ್ಗೆ ಯಾವ ಅನುಮಾನವೂ ಬೇಡ,

ಗುರು ಗೋವಿಂದ ಭಟ್ಟರು ಈಗ ಬದುಕಿದಿದ್ದರೆ ? ತಮ್ಮ ಈ ಮರಿ ಮರಿ ಮೊಮ್ಮಗನ ಬಗ್ಗೆ ಎನೆಂದುಕೊಳ್ಳುತ್ತಿದ್ದರು ? ತಮ್ಮ ಸಂತಾನ ಈ ಹಂತಕ್ಕೆ ಬಂತಲ್ಲ ಎಂದು ಕೊರಗುತ್ತಿದ್ದರೆ ? ಬ್ರಾಹ್ಮಣ ಸಮುದಾಯವನ್ನೇ ಬಹಿಶ್ಕರಿಸಿದ್ದ ಅವರು ತಮ್ಮ ಈ ಮರಿ ಮರಿ ಮರಿ ಮೊಮ್ಮಗನನ್ನೇ ಒದ್ದು ಹೊರಹಾಕುತ್ತಿದ್ದರೆ ? ಗೊತ್ತಿಲ್ಲ.

ಅವರ ಆತ್ಮ ಎನ್ನುವುದಿದ್ದರೆ ಅದು ಈಗ ಪರಿತಪಿಸುತ್ತಾ ಇರುಬಹುದಲ್ಲವೆ ?


Sunday, December 25, 2022

ಪ್ರೀತಿಯ ಅಂಗಡಿ ತೆರೆಯುವ ಮಾತನಾಡುವಾಗಲೇ ಇಲ್ಲಿ ಈ ಘಟನೆ ನಡೆದೇ ಹೋಯಿತಲ್ಲ !

 


ಈ ಕೊಲೆ ಮತ್ತು ರಕ್ತ ಪಾತ ನಿಲ್ಲುವುದೇ ಇಲ್ಲವೆ ?


ನಿನ್ನೆ ಈ ಘಟನೆ ನಡೆದುಹೋಯಿತು. ತನ್ನ ಅಂಗಡಿಯಲ್ಲಿದ್ದ ಮಧ್ಯ ವಯಸ್ಸಿನ ವ್ಯಕ್ತಿ ತಾನು ಈ ರೀತಿ ದಾಳಿಗೆ ಒಳಗಾಗಬಹುದು ಎಂದು ಅಂದುಕೊಂಡಿರಲಿಕ್ಕಿಲ್ಲ.   ತನ್ನ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಅವನ ಮೇಲೆ ಮೂವರು ಮುಸುಕುದಾರಿಗಳು ದಾಳಿ ಮಾಡಿದರು. ಚಾಕುವಿನಿಂದ ಇರಿದರು. ಗಾಯಗೊಂಡ ಈ ಮಧ್ಯ ವಯಸ್ಸಿನ ವ್ಯಕ್ತಿಯನ್ನು ಅಕ್ಕಪಕ್ಕದ ಜನ ಆಸ್ಪತ್ರೆಗೆ ಸೇರಿಸಿದರು... ಆಗ ಅವನ ಸ್ಥಿತಿ ಗಂಭೀರವಾಗಿತ್ತು.. ಜೀವ ಮರಣದ ನಡುವಿನ ಹೋರಾಟ..

ಇದು ವೈಯಕ್ತಿಕ ಧ್ವೇಷದಿಂದ ನಡೆದ ಘಟನೆಯೇ ಅಥವಾ ಇದರ ಹಿಂದೆ ಕೋಮು ದ್ವೇಷದ ನೆರಳು ಇದೆಯೇ ?

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ..

ಆದರೆ ಸರತ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ..ಪೊಲೀಸರು ಈ ಪ್ರದೇಶಗಳಲ್ಲಿ ನಿಶೇಧಾಜ್ನೆಯನ್ನು ವಿಧಿಸಿದ್ದಾರೆ..

ಈ ಹತ್ಯೆ ಪ್ರಕರಣದ ಬಗ್ಗೆ ಯಾವ ಮಾಧ್ಯಮದಲ್ಲೂ ಗಂಭೀರ ಚರ್ಚೆ ನಡೆಯುತ್ತಿಲ್ಲ.. ರಾಜ್ಯದ ಜನ ಇಂತಹ ಘಟನೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನೊಂದು ಕೊಲೆಯಾಯಿತಂತೆ ಎಂದು ಜನ ಸುಮ್ಮನಾಗುವ ಸ್ಥಿತಿ. ಯಾಕೆಂದರೆ ಹತ್ಯೆ ಎನ್ನುವುದು ಯಾರನ್ನೂ ತಲ್ಲಣಗೊಳಿಸುತ್ತಿಲ್ಲ.. ಈತ ಅಮಾಯಕನೋ ಅಲ್ಲವೂ ಎಂಬುದು ಕೂಡ ಮುಖ್ಯವಾಗುತ್ತಿಲ್ಲ.

ಸತ್ತವರು ಯಾವ ಕೋಮಿನವರು ಎಂಬುದನ್ನು ನೋಡಿಕೊಂಡು ಜನ ಮತ್ತು ರಾಜಕಾರಣಿಗಳು ಪ್ರತಿಕ್ರಿಯೆ ನೀಡಬೇಕೋ ಬೇಡವೋ ಎಂದು ತೀರ್ಮಾನಿಸುತ್ತಾರೆ.. ಇಂತಹ ಹತ್ಯೆ ಮತ್ತು ಕೊಲೆ ಯತ್ನದ ನಂತರ ರಾಜಕಾರಣ ಪ್ರಾರಂಭವಾಗುತ್ತದೆ.. ಸತ್ತವನು ಬಹುಸಂಖ್ಯಾತನಾಗಿದ್ದರೆ ಮಂತ್ರಿಗಳು ಮತ್ತು ಶಾಸಕರು ಅವನ ಮನೆಗೆ ಭೇಟಿ ನೀಡುತ್ತಾರೆ. ಸರ್ಕಾರ ಸಹಾಯ ನೀಡಲು ಮುಂದಾಗುತ್ತದೆ. ಸಾರ್ವಜನಿಕರು ಅವರ ಮನೆಗೆ ಹೋಗಿ ಸಂತಾಪ ಹೇಳಿ ವಾಪಸ್ ಬರುತ್ತಾರೆ. ನಂತರ ಸಾರ್ವಜನಿಕ ಭಾಷಣಗಳಿಗೆ ಹೊಸ ಸರಕು ದೊರಕುತ್ತದೆ.. ಬಹುಸಂಖ್ಯಾತನ ಹತ್ಯೆ ಮಾಡಿದವನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ತನಿಖೆ ನಡೆಸಿ ಅರೋಪಿತನ ಬಾಯಿ ಬಿಡೀಸುವ ಮೊದಲು ಮಾಧ್ಯಮಗಳು ಈ ಆರೋಪಿತನಿಗೆ ಉಗ್ರಗಾಮಿ ಸಂಘಟನೆಗಳ ಸಂಪರ್ಕ ಇದೆ ಎಂದು ವಿವರಗಳನ್ನು ನೀಡಲು ಪ್ರಾರಂಬಿಸುತ್ತಾರೆ. ಆತನಿಗೆ ವಿದೇಶಗಳಿಂದ ಹಣ ಬಂದಿತ್ತು ಎಂದೂ ಮಾಧ್ಯಮಗಳೇ ಪ್ರಕರಣದ ತೀರ್ಪು ನೀಡಿಬಿಡುತ್ತಾರೆ,

ದಕ್ಷಿಣ ಕನ್ನಡ ಜಿಲ್ಲೆ ಈಗ ಕೋಮು ರಾಜಕಾರಣದ ಕುಲುಮೆಯಾಗಿದೆ.. ಇಂತಹ ಹತ್ಯೆ ನಡೆಯುವುದು ಸಾಮಾನ್ಯವಾಗಿದೆ.. ಹಾಗೆ ರಾಜಕಾರಣಿಗಳು ಮತ್ತು ಜನ ನೀಡುವ ಪ್ರತಿಕ್ರಿಯೆಗಳೂ ಏಕರೂಪವಾಗಿರುತ್ತದೆ.

ಒಬ್ಬ ಹಿಂದೂ ಹತ್ಯೆಯಾದರೆ ಆತ ಹಿಂದೂ ಧರ್ಮಕ್ಕಾಗಿ ಪ್ರಾಣ ನೀಡಿದ ಹುತಾತ್ಮನಾಗುತ್ತಾನೆ.. ಒಬ್ಬ ಮುಸ್ಲೀಂ ಹತ್ಯೆಯಾದರೆ ಆತ ಉಗ್ರಗಾಮಿ ಸಂಘಟನೆಗಳ ಸಂಪರ್ಕವಿರುವ ದೇಶದ್ರೋಹಿಯಾಗಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಪೋಲಿಸರು ಆಳುವ ಸರ್ಕಾರ ಅನುಕೂಲವಾಗುವ ರೀತಿಯಲ್ಲಿ ಮಾಧ್ಯಮಗಳಿಗೆ ಸುದ್ದಿಯನ್ನು ಪ್ಲಾಂಟ್ ಮಾಡುತ್ತಾರೆ.. ನಮ್ಮ ಮಾಧ್ಯಮ ದೇಶಭಕ್ತರ ಪಡೆಯ ಭಾಗವಾಗಿ ಈ ಸುದ್ದಿಯನ್ನು ಮಾರಾಟ ಮಾಡಲು ಪ್ರಾರಂಭಿಸುತ್ತವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಹತ್ಯೆ ಪ್ರಕರಣಗಳು ಇದೇ ಮಾದರಿಯಲ್ಲಿ ನಡೆಯುತ್ತವೆ.. ಹಾಗೆ ಪೋಲಿಸರು ಮತ್ತು ರಾಜಕಾರಣಿಗಳು ಒಂದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ..

ಪ್ರವೀಣ್ ನಿಟ್ಟಾರು ಆಗಲೀ ಶಿವಮೊಗ್ಗದ ಆ ಯುವಕನಾಗಲಿ ಹತ್ಯೆಯಾಗಬಾರದಿತ್ತು.. ಆದರೆ ಈ ಹತ್ಯೆ ಪ್ರಕರಣ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ರಾಜಕೀಯ ಲಾಭವನ್ನು ತಂದುಕೊಟ್ಟಿತು.. ದೇಶಭಕ್ತಿ ಮತ್ತು ದೇಶದ್ರೋಹದ ಭ್ರಮಾತ್ಮಕ ಬಂದೀಖಾನೆಯಿಂದ ಹೊರ ಬರುತ್ತಿದ್ದ ಸಂದರ್ಭದಲ್ಲೇ ಈ ಹತ್ಯೆ ಪ್ರಕರಣಗಳು ನಡೆದವು.. ಹೀಗಾಗಿ ಜನ ಮತ್ತೆ ಈ ಭ್ರಮಾತ್ಮಕ ಜಗತ್ತಿನಲ್ಲಿ ಬಂದಿಯಾದರು.. ಸರ್ಕಾರದ ವೈಫಲ್ಯವನ್ನು, ಸರ್ಕಾರದ ಮೇಲಿನ ಆರೋಪಗಳನ್ನು ಜನ ಮರೆತು ಧರ್ಮ ರಾಜಕಾರಣಕ್ಕೆ ಬಲಿಯಾದರು.. ಇದು ಸಾಮಾನ್ಯ ಜನರಿಗೆ ಅರ್ಥವಾಗಲೇ ಇಲ್ಲ. ಅರ್ಥವಾಗುವುದೂ ಇಲ್ಲ..

ಈ ಹಿಂದೂ ರಕ್ಷಣೆಯ ಹೊಸ್ ನೆರೆಟೀವ್ ಹೇಗಿದೆ ಎಂದರೆ ಸರ್ಕಾರ ಕೂಡ ಹತ್ಯಾ ಪ್ರಕರಣಗಳಲ್ಲಿ ವಿಭಿನ್ನ ಮಾನದಂಡಗಳನ್ನು ಬಳಸುತ್ತದೆ.. ಹಿಂದೂ ಹತ್ಯೆ ಪ್ರಕರಣಗಳನ್ನು ನೋಡುವ ರೀತಿ ಒಂದು ರೀತಿ ಇದ್ದರೆ ಮುಸ್ಲೀಂ ಹತ್ಯೆ ಪ್ರಕರಣಗಳ ಮಾನದಂಡ ಬೇರೆಯಾಗಿರುತ್ತದೆ.. ಹತ್ಯೆಯಾದ ಹಿಂದೂ ಮನೆಗೆ ದೌಡಾಯಿಸುವ ಸರ್ಕಾರ ಮತ್ತು ಬಿಜೆಪಿ ಸಚಿವ ಶಾಸಕರು ಮುಸ್ಲೀಂ ಹತ್ಯೆಯಾದರೆ ಅವನ ಮನೆಯ ಕಡೆ ಮೂಸಿ ಕೂಡ ನೋಡುವುದಿಲ್ಲ್ಲ.. ಆತ ಕೇವಲ ಅನಾಥ ಹೆಣದಂತಾಗಿಬಿಡುತ್ತಾನೆ.. ಈ ರೀತಿ ತಾರ ತಮ್ಯ ನೀತಿಯನ್ನು ಅನುಸರಿಸುವ ಸರ್ಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವುದು ಮಾತ್ರವಲ್ಲ ತನ್ನ ಆತ್ಮವನ್ನೇ ಮಾರಿಕೊಂಡಂತೆ ಕಾಣುತ್ತದೆ..

ಕಳೆದ ಎರಡು ದಶಕಗಳ ಈಚೇಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯಾ ಪ್ರಕರಣಗಳ ಅಂಕಿಅಂಶಗಳನ್ನು ಗಮನಿಸಿದರೆ ಬಹುಸಂಖ್ಯಾಕ ರಾಜಕಾರಣ ಹೇಗೆ ಸಮಾನತೆ ಮತ್ತು ಸಮಾನ ಹಕ್ಕುಗಳ ತತ್ವಕ್ಕೆ ವಿರೋಧವಾಗಿದೆ ಎಂಬುದನ್ನು ಗಮನಿಸಬಹುದು.. ಹಿಂದೂ ಹತ್ಯಾ ಪ್ರಕರಣಗಳು ಕೇವಲ ರಾಜಕೀಯ ಅಸ್ತ್ರವಾಗಿ ಮಾತ್ರ ಬಳಕೆಯಾಗಿವೆ.. ಬಹುಸಂಖ್ಯಾಕ ಹಿಂದೂಗಳ ಮನಸ್ಸಿನಲ್ಲಿ ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿಯಲ್ಲಿ ಗಟ್ಟಿಗೊಳಿಸುವಲ್ಲಿ ಸಫಲವಾಗಿವೆ. ಹಾಗೂ ಹಿಂದೂ ಮತ್ತು ಮುಸ್ಲೀಮ್ ಪ್ರತ್ಯೇಕವಾದವನ್ನು ಬಲಪಡಿಸಿವೆ.. ಜೊತೆಗೆ ಹಲವು ಪ್ರಕರಣಗಳಲ್ಲಿ ರಆಜಕೀಯ  ಲಾಭ ಪಡೆದುಕೊಂಡ ಮೇಲೆ ಪ್ರಕರಣದ ಹಿಂದಿನ ನಿಗೂಢ ಸತ್ಯ ಬಯಲಾಗಿದೆ. ಇದಕ್ಕೆ ಉದಾಹರಣೆಯಾಗಿ ಪರೇರಾಜಕೀಯ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನೇ ನೋಡಬಹುದು.. ಮುಸ್ಲೀಂ ಅಲ್ಪಸಂಖ್ಯಾತರು ಮೇಸ್ತಾನನ್ನು ಕೊಲೆ ಮಾಡಿದ್ದಾರೆ ಎಂಬಾ ಆರೋಪ ಸುಳ್ಳಾಯಿತು.. ಆದರೆ ಈ ಸತ್ಯ ಹೊರಬರುವುದಕ್ಕೆ ಮೊದಲೇ ಬಿಜೆಪಿಗೆ ಬಯಸಿದ್ದ ಲಾಭ ದೊರಕಿಯಾಗಿತ್ತು..

ನಿನ್ನೆ ಮುಸ್ಲೀಮ್ ಒಬ್ಬನ ಹತ್ಯ ಪ್ರಕರಣ ನಡೆಯಿತು.. ಇದರ ರಾಜಕೀಯ ಲಾಭ ಯಾರಿಗೆ ದೊರಕುತ್ತದೆ ? ಸತ್ಯ ವ್ಯಕ್ತಿ ಬಡಪಾಯಿ ಆಗಿರಬಹುದು ಅಥವಾ ವೈಯಕ್ತಿಕ ಕಾರಣದಿಂದಲೂ ಈ ಪ್ರಕರಣ ನಡೆದಿರಬಹುದು.. ಆದರೆ ಇದು ಬಹುಸಂಖ್ಯಾಕರನ್ನು ಒಗ್ಗೂಡೀಸಲು ಬಿಜೆಪಿ ಸಹಾಯ ಮಾಡುವುದು ಸತ್ಯ..

ಚುನಾವಣೆ ಬರುವ ಹೊತ್ತಿಗೆ ಇನ್ನಷ್ಟು ಹತ್ಯೆಗಳು ನಡೆಯದಿರಲಿ ಎಂದು ಮಾತ್ರ ನಾವು ಆಶಿಸಬಹುದು.. ಆದರೆ ಇಂದಿನ ಕೋಮುವಾದಿ ರಾಜಕಾರಣದಲ್ಲಿ ಹೀಗೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ..

ಕೊನೆಯದಾಗಿ ರಾಹುಲ್ ಗಾಂಧಿ ಹೇಳಿದ ಮಾತು ಮತ್ತೆ ಮತ್ತೇ ನೆನಪಾಗುತ್ತದೆ.

ಇದು ದ್ವೇಷದ ಮಾರುಕಟ್ಟೆ. ಇಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಾಗಿದೆ.




Saturday, December 24, 2022

ದ್ವೇಷದ ಮಾರುಕಟ್ಟೆಯಲ್ಲಿ ನಾವೆಲ್ಲ ಪ್ರೀತಿಯ ಅಂಗಡಿ ತೆರೆಯೋಣ

 




ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ.. ಈಗಾಗಲೇ ನೂರು ದಿನ ಪೂರೈಸಿದೆ..ಈ ನೂರು ದಿನಗಳಲ್ಲಿ ಈ ಯಾತ್ರೆಯ ಫಲಶ್ರುತಿ ಏನು ಎಂಬುದನ್ನು ಚರ್ಚಿಸಬೇಕಾದ ಸಮಯ,, ಇವತ್ತು ಯಾತ್ರೆ ರಾಷ್ಟ್ರದ ರಾಜಧಾನಿ ದೇಹಲಿಯನ್ನು ಪ್ರವೇಶಿಸಿತು.. ದೆಹಲಿಯ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು,,

ಈ ತಿಂಗಳ ೧೬ ರಂದು ೧೦೦ ದಿನ ಪೂರೈಸಿದ ಈ ಯಾತ್ರೆಗೆ ಒಂದು ವಾರದ ಬಿಡುವು.. ದೆಹಲಿಯಿಂದ ಜನವರಿ ಮೂರರಿಂದ ಹೊರಡುವ ಯಾತ್ರೆಯ ಲಕ್ಷ್ಯ ಜಮ್ಮು ಮತ್ತು ಕಾಶ್ಮೀರದ ಕಡೆಗೆ...

ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಹೊರಟ ಯಾತ್ರೆ..ಆಗ ಪ್ರಾಯಶಃ ಇದು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುತ್ತದೆ ಎಂದು ಬಹಳಷ್ಟು ಜನ ಅಂದುಕೊಂಡಿರಲಿಲ್ಲ... ಕೆಲವು ದಿನ ಯಾತ್ರೆ ಮಾಡಿ ಕೈಬಿಡಬಹುದು ಎಂದು ಬಿಜೆಪಿಯ ಪ್ರಮುಖರು ಅಂದುಕೊಂಡಿದ್ದಹೀರು.. ಯಾಕೆಂದರೆ ಆಗಲೇ ರಾಹುಲ್ ಗಾಂಧಿ ಅವರ ಇಮೇಜ್ ಅನ್ನು ನಾಶಪಡಿಸಿಯಾಗಿತ್ತು.. ಪಪ್ಪು ರಜಾಕಾಲದ ರಾಜಕಾರಣಿ ಎಂದು ರಾಹುಲ್ ಗಾಂಧಿ ಅವರ ವಿರುದ್ಧ ಅಪಪ್ರಚಾರ ಮಾಡಿ ಬಿಜೆಪಿ ಯಶಸ್ವಿಯೂ ಆಗಿತ್ತು. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟವರು ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಿಯಾಯಿತು ಎಂಬ ಭ್ರಮೆಯಲ್ಲಿದ್ದರು. ಆದರೆ ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಯಾತ್ರೆ ಬಿಜೆಪಿಯ ಭ್ರಮೆಯನ್ನು ಕಳಚುವ ಕೆಲಸವನ್ನು ಮಾಡತೊಡಗಿತ್ತು..

ಯಾತ್ರೆ ತಮಿಳು ನಾಡಿನಿಂದ ಕೇರಳಕ್ಕೆ ಬಂದಾಗ ಆಯ್ಯೋ ಅದು ಕಮ್ಯುನಿಸ್ಟರ ಆಡಳಿತವಿರುವ ರಾಜ್ಯ ಜನ ಬೆಂಬಲ ದೊರಕಿದ್ದರಲ್ಲಿ ಆಶ್ಚರ್ಯವಿಲ್ಲ ಎಂಬು ಬಿಜೆಪಿ ಬೆಂಬಲಿಗರು ಹೇಳತೊಡಗಿದ್ದರು.. ಯಾತ್ರೆ ತಮಿಳು ನಾಡು ಮತ್ತು ಕೇರಳವನ್ನು ಮುಗಿಸಿ ಕರ್ನಾಟಕ್ಕೆ ಬಂದಾಗ ಬಿಜೆಪಿ ಅಧಿಕಾರದಲ್ಲಿರುವ ಈ ರಾಜ್ಯದಲ್ಲೂ ಜನ ಬೆಂಬಲ ದೊರಕಿತು..  ದಕ್ಷಿಣ ರಾಜ್ಯಗಳನ್ನು ಪೂರೈಸಿ ಮಹಾರಾಷ್ಟ್ರವನ್ನು ಪ್ರವೇಶಿಸುವ ಹೊತ್ತಿಗೆ ಒಂದು ಅಂಶ ಸ್ಪಷ್ಟವಾಗಿತ್ತು..ಈ ಯಾತ್ರೆಯನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಆದರೆ ಜನ ಬೆಂಬಲ ಮಾತ್ರ ಈ ಯಾತ್ರೆ ಯಶಸ್ವಿ ಎಂದು ಪರಿಗಣಿಸುವಂತೆ ಮಾಡಿರಲಿಲ್ಲ.. ಅದಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ತಾವೊಬ್ಬ ಪ್ರಬುದ್ಧ ರಾಜಕಾರಣಿಯಾಗುವ ಎಲ್ಲ ಲಕ್ಷಣಗಳನ್ನು ತೋರಿಸಿ ಬಿಟ್ಟಿದ್ದರು. ಈ ಯಾತ್ರೆಯ ಸಂದರ್ಭದಲ್ಲಿ ಾವರು ಕ್ಷುಲ್ಲಕ ರಾಜಕೀಯ ಭಾಷಣವನ್ನು ಮಾಡಲಿಲ್ಲ. ಬಿಜೆಪಿಯನ್ನು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕಾರಣಕ್ಕಾಗಿ ಟೀಕಿಸಲಿಲ್ಲ..ಅವರು ದೇಶದ ಮುಂದೆ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಎಜೆಂಡಾವನ್ನು ದೇಶದ ಜನರ ಮುಂದಿಟ್ಟರು.. ಈ ದೇಶದಲ್ಲಿ ಯಾವ ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕೋ ಆ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಿದರು..

ನಿರುದ್ಯೋಗ ಬೆಲೆ ಏರಿಕೆ, ಧರ್ಮ ರಾಜಕಾರಣದ ಅಪಾಯ, ಇವತ್ತಿನ ಯುವಕರು, ರೈತರು, ಸಣ್ಣ ಪುಟ್ಟ ಉದ್ಯಮಿಗಳು ಎದುರಿಸುತ್ತಿರುವ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸತೊಡಗಿದರು.. ಯುವಕರು ಮಕ್ಕಳ ಜೊತೆ ಸಾಮಾನ್ಯರಂತೆ ಬೆರತರು,ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ವಿಚಾರಗಳ ಬಗ್ಗೆ ಚರ್ಚೆಯೇ ನಿಂತು ಹೋಗಿತ್ತು. ಪಾಕಿಸ್ಥಾನ, ಭಯೋತ್ಪಾದನೆ, ಬುರ್ಖ್ಝಾ, ಮುಸ್ಲೀಂ ವ್ಯಾಪಾರ ನಿಷೇಧ ಇಂತಹ ವಿಚಾರಗಳನ್ನು ಬಿಟ್ಟು ಬೇರೇ ಮಾತೇ ಇರಲಿಲ್ಲ..ಹೀಗಾಗಿ ರಾಹುಲ್ ಅವರ ಮಾತುಗಳು ಹೊಸದಾಗಿದ್ದವು.. ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಹೊಸ ಅನುಭವ ನೀಡತೊಡಗಿತ್ತು.

ಈ ಯಾತ್ರೆ ಎರಡು ರೀತಿಯಲ್ಲಿ ಕೆಲಸ ಮಾಡುತ್ತಿತ್ತು.. ರಾಹುಲ್ ಎಂಬ ನೆಹರೂ ಕುಟುಂಬದ ಕುಡಿ ನಿಜ ಭಾರತವನ್ನು ಅರ್ಥ ಮಾಡಿಕೊಳ್ಳತೊಡಗಿದ್ದರು.. ಹಾಗೆ ಪಪ್ಪು ಎಂಬ ಇಮೇಜ್ ನಲ್ಲಿದ್ದ ರಾಹುಲ್ ಅವರನ್ನು ಈ ದೇಶದ ಜನ ಸಾಮಾನ್ಯರೂ ಅರ್ಥ ಮಾಡಿಕೊಳ್ಳತೊಡಗಿದ್ದರು.. ನಾವು ಅಂದುಕೊಂಡಂತೆ ರಾಹುಲ್ ಪಪ್ಪು ಅಲ್ಲ ಎಂದು ಜನರು ಅಂದುಕೊಳ್ಳತೊಡಗಿದ್ದರು. ರಾಹುಲ್ ಸಾಮಾನ್ಯ ಜನರಿಗೆ ಹತ್ತಿರವಾಗತೊಡಗಿದ್ದರು.

ಈ ಯಾತ್ರೆ ದೆಹಲಿ ಪ್ರವೇಶಿಸುವ ಸಮಯ ಬಂದಾಗ ಬಿಜೆಪಿಗೆ ನಿಜವಾಗಿ ಭಯ ಪ್ರಾರಂಭವಾಗಿತ್ತು.. ಹೀಗೆ ಮುಂದುವರಿದರೆ ಇದು ಬಿಜೆಪಿಯ ಯಶಸ್ಸಿನ ನಾಗಾಲೋಟಕ್ಕೆ ತಡೆ ಉಂಟಾಗಬಹುದು ಎಂಬ ಆತಂಕ.. ಅಷ್ಟ್ರರಲ್ಲಿ ಅವರ ಸಹಾಯಕ್ಕೆ ಬಂದಿದ್ದು ವಿಶ್ವದಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಕೊರೋನಾದ ಬಿಎಫ್ ೭ ತಳಿ..

ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಡಿಸೆಂಬರ್ ೨೨ ರಂದು ರಾಹುಲ್ ಗಾಂಧಿ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರಿಗೆ ಪತ್ರವೊಂದನ್ನು ಬರೆದರು. ಕೊರೋನಾ ಮಾರ್ಗದರ್ಶಿ ಸೂತ್ರವನ್ನು ಪಾಲಿಸಿ ಇಲ್ಲವೇ ಯಾತ್ರೆಯನ್ನು ನಿಲ್ಲಿಸಿಬಿಡಿ ಎಂದರು . ಆದರೆ ಕಾಂಗ್ರೆಸ್ ಗೆ ಈ ಪತ್ರ ಬರೆದ ಸಚಿವರು ಸದಾ ಯಾತ್ರೆಗಳನ್ನು ನಡೆಸುತ್ತಲೇ ಇರುವ ಬಿಜೆಪಿಗೆ ಯಾವ ಸೂಚನೆಯನ್ನೂ ನೀಡಲಿಲ್ಲ... ಜೊತೆಗೆ ಕೊರೋನಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಎಂಬ ಸೂಚನೆ ನೀಡುವ ಅಧಿಕಾರ ಅವರಿಗಿದೆ..ಆದರೆ ಯಾತ್ರೆಯನ್ನು ನಿಲ್ಲಿಸಿ ಎಂಬ ಸೂಚನೆಯನ್ನು ನೀಡುವ ಅಧಿಕಾರ ಆರೋಗ್ಯ ಸಚಿವರಿಗೆ ಇದೆಯೆ ಎಂಬ ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ..

ಏನೇ ಇರಲಿ ಸಚಿವರ ಈ ಸೂಚನೆ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಸರ್ಕಾರ ಭಾರತ್ ಜೋಡೋ ಯಾತ್ರೆಯಿಂದ ಭಯಗೊಂಡಿದೆ ಎಂಬುದನ್ನು ಇದು ಸೂಚಿಸುತ್ತದೆ..

ರಾಹುಲ್ ಗಾಂಧಿ ಅವರ ಈ ನೂರು ದಿನಗಳ ಪೂರೈಸಿದ ಯಾತ್ರೆಯಲ್ಲಿ ಅವರು ಆಡಿದ ಒಂದು ಮಾತು  ಬಹಳ ಮುಖ್ಯವಾದುದು..

ದ್ವೇಷದ ಮಾರುಕಟ್ಟೆಯಲ್ಲಿ ನಾನು ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ ಈ ಮಾತು ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಬಹಳ ಮುಖ್ಯವಾದುದು ಎಂದು ನನಗೆ ಅನ್ನಿಸುತ್ತದೆ..ಇವತ್ತು ದ್ವೇಷದ ಮಾರುಕಟ್ಟೆ ತುಂಬಾ ಪ್ರಬಲವಾಗಿದೆ.. ಈ ದ್ವೇಷ ವಿಶ್ವರೂಪ ತಾಳಿ ಭಾರತವನ್ನು ಆಕ್ರಮಿಸಿದೆ. ಭಾರತದ ರಾಜಕಾರಣವನ್ನು ತನ್ನ ವಶ ಮಾಡಿಕೊಂಡಿದೆ..ಪ್ರತಿ ದಿನ ರಾಜಕಾರಣಿಗಳು ವಿಷ ಬೀಜ ಬಿತ್ತ ಅಧಿಕಾರದ ಬೆಳೆ ತೆಗೆಯುತ್ತಿದ್ದಾರೆ..ಬಹುಸಂಖ್ಯಾತರು, ಅಲ್ಪ ಸಂಖ್ಯಾತರಲ್ಲಿ ಭಯವನ್ನು ಹರಡಲಾಗುತ್ತಿದೆ..ದೇಶ ಪ್ರೇಮ ಮತ್ತು ದೇಶದ್ರೋಹದ ವ್ಯಾಖ್ಯೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ,,

ಇಂತಹ ಸಂದರ್ಭದಲ್ಲಿ ಇರುವುದೆಂದರೆ ಪ್ರೀತಿಯ ಅಂಗಡಿಯನ್ನು ತೆರೆಯುವುದೇ ಆಗಿದೆ,, ದ್ವೇಷದ ಮಾರುಕಟ್ಟೆ ತೆರೆದವರು ಈ ಬಗ್ಗೆ ಯೋಚಿಸಲಿ.. ಭಾರತೀಯರೆಲ್ಲ ಪ್ರೀತಿಯ ಅಂಗಡಿ ತೆರೆಯಲು ಮುಂದಾಗಲಿ


ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...