Friday, June 10, 2022

 ರಾಜ್ಯಸಭಾ ಚುನಾವಣೆ’ ಪ್ರತಿ ಪಕ್ಷಗಳ ಆತ್ಮಹತ್ಯೆ..

ಸಿದ್ದರಾಮಯ್ಯ ಆತ್ಮಸಾಕ್ಷಿ ಕರೆಗೆ ಬೆಲೆ ಇಲ್ಲ..

ಬೀಗಿದ ಬಿಜೆಪಿ..

ನೂಪುರ್ ಶರ್ಮ ಬಂಧನಕ್ಕೆ ಆಗ್ರಹ. ಮುಸ್ಲೀಮ್ ರಿಂದ ಪ್ರತಿಭಟನೆ.. ಕೆಲವೆಡೆ ಕಲ್ಲು ತೂರಾಟ,,

ಹಿಂಸಾ ಪ್ರತಿಭಟನೆ ಹಿಂಸೆಗೆ ಕಾರಣವಾಗುತ್ತಿದೆ.. ಹಿಂಸೆ ಬಿಡಿ, ಗಾಂಧಿ ಮಾರ್ಗ ಅನುಸರಿಸಿ,,

ಇದು ಪ್ರೈಮ್ ನ್ಯೂಸ್...ಇವತ್ತಿನ ವಿಶೇಷ

ನೋಡಿ ಪ್ರತಿಕ್ರಿಯೆ ನೀಡಿ shashidhar Bhat facebook page.. and shashidhar Bhat youtube channell..

https://www.facebook.com/nimmashashidharbhat  


Tuesday, June 7, 2022

ಬಿಜೆಪಿ ಮತ್ತು ಪ್ರಿಂಜ್ ಎಲೆಮೆಂಟ್ಸ್ ಕ್ರಮ ಕೈಗೊಳ್ಳಬೇಕಾದವರು ಯಾರು ?

 


ಕಳೆದ ಒಂದು ವಾರದಿಂದ ಈಚೆಗೆ ಫ್ರಿಂಜ್ ಎಲಿಮೆಂಟ್ಸ್ ಎಂಬ ಶಬ್ದ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿದೆ. ಭಾರತದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯೊಂದರಲ್ಲಿ ಈ ಶಬ್ದವನ್ನು ಬಳಸಿತು. ಅದು ನೂಪುರ್ ಶರ್ಮಾ ಎಂಬ ಬೆಜೆಪಿಯ ರಾಷ್ಟ್ರೀಯ ವಕ್ತಾರರು ಟಿವಿಯೊಂದರಲ್ಲಿ ಪ್ರವಾದಿ ಮಹಮ್ಮದ್ ರ ಬಗ್ಗೆ ಟೀಕಿಸಿ ಮುಸ್ಲೀಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾದ ನಂತರ ನೀಡಿದ ಪ್ರಕಟಣೆಯಲ್ಲಿ,,,

ಆಕ್ಸಫರ್ಡ್ ಶಬ್ದಕೋಶದ ಪ್ರಕಾರ ಫ್ರಿಂಜ್ ಎಲಿಮೆಂಟ್ಸ್ ಎಂದರೆ ಬಾರ್ಡರ್ ನಲ್ಲಿ ಇರುವವರು.. ಅವರು ಸಂಪೂರ್ಣವಾಗಿ ಒಳಗೆ ಇರುವವರಲ್ಲ. ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಲ್ ಅವರನ್ನೂ ಈ ಕೆಟಗರಿಗೆ ವಿದೇಶಾಂಗ ಸಚಿವಾಲಯ ಸೇರಿಸಿಯಾಗಿತ್ತು.. ಇದು ಕೇವಲ ವಿದೇಶಾಂಗ ಸಚಿವಾಲಯದ ಅಭಿಪ್ರಾಯವಾಗಿರದೇ ಸರ್ಕಾರದ ಅಭಿಪ್ರಾಯ ಕೂಡ.. ಜೊತೆಗೆ ವಿದೇಶಾಂಗ ಇಲಾಖೆಯನ್ನು ಪ್ರಿಂಜ್ ಎಲಿಮೆಂಟ್ಸ್ ಎಂದು ಟೀಕಿಸಲು ಸಾಧ್ಯವಿಲ್ಲ..

ವಿದೇಶಾಂಗ ಇಲಾಖೆ ಹಾಗೂ ಸರ್ಕಾರ ಮುಸ್ಲೀಂ ದೇಶಗಳ ಅತೃಪ್ತಿಯನ್ನು ಶಮನಗೊಳಿಸಲು ನೂಪುರ್ ಶರ್ಮ ಅವರ ಜೊತೆಗೆ ಸರ್ಕಾರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿತು.. ಬಿಜೆಪಿ ಪಕ್ಷ ಕೂಡ ತನ್ನದೇ ರಾಷ್ಟೀಯ ವಕ್ತಾರರಿಂದ ದೂರವನ್ನು ಕಾಪಾಡಿಕೊಂಡು ಬರಲು ಯತ್ನಿಸಿತು. ಮುಸ್ಲೀಂ ರಾಷ್ಟ್ರಗಳ ಕೋಪವನ್ನು ತಣಿಸಲು ಸರ್ಕಾರಕ್ಕೆ ವಿದೇಶಾಂಗ ಇಲಾಖೆಗೆ ಬೇರೆ ಮಾರ್ಗವೂ ಇರಲಿಲ್ಲ.

ಈ ಹೇಳಿಕೆಯ ಮೂಲಕ ನೂಪುರ್ ಶರ್ಮಾ ಅವರು ಮಾಡಿದ್ದು ಹೇಳಿದ್ದು ತಪ್ಪು ಎಂದು ಸರ್ಕಾರ ಒಪ್ಪಿಕೊಂಡಂತೆ ಆಗಿದೆ. ಅದಕ್ಕಾಗಿ ಶಿಕ್ಷೆಯನ್ನೂ ವಿಧಿಸಲಾಗಿದೆ.. ಹಾಗಿದ್ದರೆ ಇದೇ ತಪ್ಪು ಮಾಡಿದವರು ಬಿಜೆಪಿಯಲ್ಲಿ ಇಲ್ಲವೆ ? ಕೇವಲ ನೂಪುರ್ ಶರ್ಮಾ ತಪ್ಪು ಮಾಡಿದ ಮೊದಲ ವ್ಯಕ್ತಿಯೇ ? ಒಂದೊಮ್ಮ್ರೆ ಬೇರೆಯವರೂ ಇದ್ದರೆ ಅವರಿಗೂ ಶಿಕ್ಜ್ಷೆಯಾಗಬೇಕು ಅಲ್ಲವೆ ?

ಕಳೆದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಪ್ರಚಾರ ಬಹುಸಂಖ್ಯಾತ ಮತಗಳ ಕ್ರೋಡೀಕರಣಕ್ಕಾಗಿ ಮುಸ್ಲಿಂ ವಿರೋಧ ಮತ್ತು ಅಲ್ಪಸಂಖ್ಯಾತರನ್ನು ಅವಮಾನಿಸುವ ಕೆಲಸ ಸತತವಾಗಿ ನಡೆಯಿತು,,ಯೋಗಿ ಆದಿತ್ಯನಾಥ್ ಮತ್ತು ಇತರ ಬಿಜೆಪಿ ನಾಯಕರು ತಮ್ಮ ಭಾಷಣದಲ್ಲಿ ಈ ವಿಚಾರವನ್ನೇ ಚುನಾವಣೆಯ ಪ್ರಮುಖ ವಿಷಯವನ್ನಾಗಿ ಮತದಾರರ ಮುಂದಿಟ್ಟರು.. ಅಲಸಂಖ್ಯಾತರ ವಿರೋಧ ಅವರಿಗೆ ಹಿಂದೂ ಮತಗಳನ್ನಉ ಕ್ರೋಡೀಕರಿಸಲು ಸಹಾಯ ಮಾಡಿತು.. ಈಗ ಅವರೆಲ್ಲರನ್ನು ಫ್ರೀಂಜ್ ಎಲಿಮೆಂಟ್ಸ್ ಎಂದು ಪರಿಗಣಿಸಬೇಕಲ್ಲವೆ ? ಹಾಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇವಲ ನುಪೂರ್ ಶರ್ಮ ಅವರ ವಿರುದ್ಧ ಕ್ರಮ ಕೈಗೊಂಡರೆ ಅದು ಹಿಪಾಕ್ರಸಿ ಅನ್ನಿಸಿಕೊಳ್ಳುತ್ತದೆ.

ಯೋಗಿ ಆದಿತ್ಯನಾಥ್ ಅವರು ಚುನಾವಣೆ ಸಂದರ್ಭದಲ್ಲಿ ಮಾಡಿದ ೩೪ ಭಾಷಣಗಳು ಯುಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲ ತಾಣಗಳಲ್ಲಿ ಸಿಗುತ್ತವೆ. ಈ ಎಲ್ಲ ಭಾಷಣಗಳೂ ಹೇಟ್ ಸ್ಪೀಚ್ ಗೆ ಉದಾಹರಣೆಗಳಾಗಿವೆ.. ನಾಯಿ ಕೂಗುತ್ತಿರುತ್ತದೆ ಎಂದು ಅವರು ಹೇಳಿದ್ದು ಯಾರ ವಿರುದ್ಧ ಎಂದು ಹೇಳಲು ಹೆಚ್ಚಿನ ಬುದ್ದಿವಂತಿಗೆ ಬೇಕಾಗಿಲ್ಲ..ಹಾಗೂ ಹಲವು ಭಾಷಣಗಳಲ್ಲಿ ಯೋಗಿ ಆದಿತ್ಯನಾಥ್, ಮುಸ್ಲಿಂ ಸಮುದಾಯಕ್ಕೆ ತಾಲಿಬಾನಿಗಳ ಪಟ್ಟ ಕಟ್ಟಿದರು, ಬುಲ್ಡೋಜರ್ ಶಬ್ದವನ್ನು ಬೆದರಿಕೆ ಅಸ್ತ್ರವನ್ನಾಗಿ ಬಳಸಲಾಯಿತು,, ಹಾಗೆ ೮೦ ಪರ್ಸೆಂಟ್ ವರ್ಸಸ್ ೨೦ ಪರ್ಸೆಂಟ್ ಎಂದು ಮತದಾರರಿಗೆ ಕರೆ ನೀಡಿದರು, ಇದೆಲ್ಲ ಏನು ?

ಮೇ ತಿಂಗಳಿನಲ್ಲಿ ಮಧ್ಯ ಪ್ರದೇಶದಲ್ಲಿ ಬವರಲಾಲ್ ಜೈನ್ ಎಂಬ ೬೫ ವರ್ಷದ ವ್ಯಕ್ತಿ ಮದುವೆ ಮುಗಿಸಿ ಮನೆಗೆ ಬರುತ್ತಿದ್ದರು,  ಬಿಜೆಪಿ ಕಾರ್ಯಕರ್ತ ಹರಿಭೂಷಣ್ ಕುಶ್ವಾ ಅವರ ಮೇಲೆ ಹಲ್ಲೆ ನಡೆಸಿದ.. ನೀನು ಮಹಮ್ಮದ ಅಲ್ಲವೆ ಎಂದು ಪ್ರಶ್ನೆ ಮಾಡಿ ಹಲ್ಲೆ ಮಾಡಿದ,,

ಬಿಹಾರದ ಬಿಜೆಪಿ ಶಾಸಕ ಮುಸ್ಲೀಂ ಮತದಾನದ ಹಕ್ಕನ್ನು ವಾಪಸ್ ಪಡೆದು ಅವರನ್ನು ಎರಡನೆ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸಬೇಕು ಎಂದು ಕರೆ ನೀಡಿದ,,ಅಶ್ವಿನ್ ಉಪಾದ್ಯಾಯ ಎಂಬ ಬಿಜೆಪಿ ನಾಯಕನ ವಿರುದ್ಧ ಹೇಟ್ ಸ್ಪೀಚ್ ಕಾರಣಕ್ಕಾಗಿ ಪ್ರಕರಣ ದಾಖಲಾಯಿತು,

೨೦೨೧ ರ ಡಿಸೆಂಬರ್ ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ನಲ್ಲಿ ರೋಹಿಂಗ್ಯಾ ಮುಸ್ಲೀಂ ರಂತೆ ಭಾರತದ ಮುಸ್ಲೀಂರಿಗೂ ಶಿಕ್ಷೆ ನೀಡಬೇಕು ಎಂಡು ಕರೆ ನೀಡಲಾಯಿತು, ಪೂಜಾ ಶಕಿನ್ ಪಾಂಡೆ ಎಂಬವರು ಮುಸ್ಮಿಂರ ಹತ್ಯೆಗೆ ಕರೆ ನೀಡಿದ್ದರು. ಹಾಗೆ ಉತ್ತರ ಪ್ರದೇಶದ ಮಯಾಂಕೇಶ್ವರ್ ಸಿಂಗ್ ಎಂಬ ಸ್ಬಿಜೆಪಿ ಶಾಸಕರು ತಮ್ಮನ್ನು ಎರಡನೆಯ ಬಾರಿ ಆರಿಸಿದರೆ ಮುಸ್ಲೀಂ ರ ಗಡ್ಡ ಕತ್ತರಿಸುವುದಾಗಿ ಹೇಳಿದ್ದರು.. ನಾನು ಮೊದಲ ಬಾರಿ ಆಯ್ಕೆ ಆದಾಗ ಮುಸ್ಲೀಂ ರು ಹೆಸರಿ ಸ್ಕಲ್ ಕ್ಯಾಪ್ ಹಾಕುವುದನ್ನು ನಿಲ್ಲಿಸಿದ್ದರು. ನಾನು ಎರಡನೆಯ ಬಾರಿ ಆಯ್ಕೆ ಮಾಡಿದರೆ ಅವರ ಹಣೆಯ ಮೇಲೆ ತಿಲಕ ಬರುತ್ತದೆ ಎಂದಿದ್ದರು !

ಇಂತಹ ಸಾವಿರಾರು ಉದಾಹರಣೆಗಳು ಇವೆ. ಬಿಜೆಪಿ ಮತ್ತು ಸಂಘಪರಿವಾರ ಕೋಮು ಧ್ವೇಶವನ್ನು ಬಿತ್ತಿ ಅಧಿಕಾರಕ್ಕೆ  ಏರುವ ಮಾರ್ಗವನ್ನು ಕಂಡುಕೊಂಡಿವೆ. ಹಾಗೆ ನೋಡಿದರೆ ಇದೆಲ್ಲ ಪ್ರಾರಂಭವಾಗಿದ್ದು ೨೦೦೧ ಮತ್ತು ೨೦೦೨ರಲ್ಲಿ.. ಗುಜರಾಥ್ ನಲ್ಲಿ ನಡೆದ ಹತ್ಯಾಕಾಂಡ ಅವರಿಗೆ ಅಧಿಕಾರಕ್ಕೆ ಏರಲು ಹೊಸ ಆಯುಧವನ್ನು ನೀಡಿತ್ತು. ಈ ಆಯುಧವನ್ನು ನಂತರದ ದಿನಗಳಲ್ಲಿ ಎಲ್ಲೆಡೆ ಬಳಸಲಾಯಿತು.

ಈಗ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈಗ ಕೆಲವು ತಿಂಗಳುಗಳ ಹಿಂದೆ ಕೊಡಗಿನಲ್ಲಿ ಭಜರಂಗದಳದ ತರಬೇತಿ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು. ಈ ತರಬೇತಿಯಲ್ಲಿ ಏರ್ ಗನ್ ಮತ್ತು ತ್ರಿಶೂಲವನ್ನು ನೀಡಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮೂರು ಶಾಸಕರು ಪಾಲ್ಗೊಂಡಿದ್ದರು..

ಈಗ ಗುಜರಾತ್ ನಲ್ಲಿ ಪ್ರಾರಂಭಿಸಿದ ಕೋಮುವಾದದ ಆಯುಧವನ್ನು ದೇಶದ ಎಲ್ಲೆಡೆ ಬಳಸಲಾಗುತ್ತಿದೆ. ಧರ್ಮ ನಿರಪೇಕ್ಷಗಳೂ ಸಾಫ್ಟ್ ಹಿಂದುತ್ವದ ಬಗ್ಗೆ ಮಾತನಾಡುವಂತಾಗಿದೆ,

ಈಗ ನೂಪುರ್ ಶರ್ಮಾ ಪ್ರಕರಣದತ್ತ ಬರೋಣ.. ಈ ಪ್ರಕರಣದಲ್ಲಿ ಬಹುತೇಕ ಮುಸ್ಲಿಂ ರಾಷ್ಟ್ರಗಳು ತೀವ್ರ್ ಪ್ರತಿರೋಧವನ್ನು ವ್ಯಕ್ತಪಡಿಸಿದವು.. ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಕರೆದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಇದು ಭಾರತವನ್ನು ಆತಂಕಕ್ಕೆ ದೂಡಿತು.. ಈ ಪ್ರತಿರೋಧವನ್ನು ಶಮನಗೊಳಿಸುವುದಕ್ಕಾಗಿ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಮೇಲೆ ಕ್ರಮಕೈಗೊಳ್ಳಲಾಯಿತು... ಅದರೆ ಇದೇ ಕೆಲಸದಲ್ಲಿ ನಿರತರಾದವರ ಮೇಲೆ ಕ್ರಮ ಕೈಗೊಳ್ಳಬೇಕಲ್ಲವೆ ?

ಜೊತೆಗೆ ಇದೆಲ್ಲವುದರ ಬೀಜ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಲ್ಲಿದೆ ? ಹೀಗಿರುವಾಗ ಯಾರು ಯಾರ ಮೇಲೆ ಕ್ರಮಕೈಗೊಳ್ಳಬೇಕು ?


Monday, June 6, 2022

ಚಡ್ಡಿಯ ರೋಚಕ ಇತಿಹಾಸ, ಚಡ್ಡಿಯ ಬಗ್ಗೆ ಗೊತ್ತಿಲ್ಲದ ಅಂಶಗಳು..ಹಾಗೂ ಚಡ್ದಿ ಪುರಾಣ



 ಕಾಂಗ್ರೆಸ್ ಚಡ್ಡಿ ಸುಡುವ ಚಳವಳಿ ಹಮ್ಮಿಕೊಳ್ಳಲು ಮುಂದಾಗಿದೆ. ಬಿಜೆಪಿ ಚಡ್ಡಿ ಕಳುಹಿಸಿಕೊಡುವ ಮಾತನಾಡಿದೆ. ಒಟ್ಟಿನಲ್ಲಿ ಚೆಡ್ದಿಗೆ ಈಗ ಭಾರಿ ಬೇಡಿಕೆ ಬಂದಿದೆ..

ಚಡ್ದಿ ಹಾಕಿಕೊಳ್ಳುವುದು ಯಾವಾಗ ಪ್ರಾರಂಭವಾಗಿರಬಹುದು ? ಹೇಳುವುದು ಕಷ್ಟ.. ಆದರೆ ಇದು ಭಾರತೀಯ ಉಡುಪಂತೂ ಅಲ್ಲ.. ಪ್ಯಾಂಟಿನ ಜೊತೆಗೆ ಚಡ್ದಿ ಕೂಡ ಈ ದೇಶಕ್ಕೆ ಬಂದಿರಬಹುದು,,

ವಿದೇಶಿಯರು ಬಿಸಿಲಿಗೆ ಮೈಯೊಡ್ಡುವಾಗ ಚಡ್ಡಿ ಹಾಕಿಕೊಳ್ಳುವುದನ್ನು ಇಷ್ಟಪಡುತ್ತಾರೆ.. ಕಾಲಿನ ಭಾಗವನ್ನು ಬಿಸಿಲಿಗೆ ಒಡ್ಡಿ ಮಲಗುವುದು ಅವರಿಗೆ ಖುಷಿ ನೀಡುವಂತಹದು.. ಹಾಗೆ ಸಮುದ್ರ ದಂಡೆಗಳಲ್ಲಿ ಬಿಸಿಲು ಕಾಸುತ್ತ ಮನಗುವಾಗ ಚಡ್ಡಿಯೇ ಪ್ರಾಧಾನ್ಯ..ಚಡ್ಡಿ ಹಾಕಿಕೊಂಡು ಮೈ ಬಿಟ್ಟುಕೊಂಡು ಮಲಗುವುದು, ಕಣ್ಣಿಗೆ ಬಿಸಿಲು ಬೀಳದಂತೆ ಸನ್ ಗ್ಲಾಸ್ ಧರಿಸುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ,

ಪ್ಯಾಂಟಿನ ಜೊತೆ ಚಡ್ಡಿ ಬಂದಿದ್ದರೂ ಇವರೆಡರ ನಡುವೆ ತುಂಬಾ ವ್ಯತ್ಯಾಸವಿದೆ. ಪ್ಯಾಂಟು ಕಾಲನ್ನು ಪೂರ್ಣವಾಗಿ ಆವರಿಸಿಬಿಡುತ್ತದೆ. ಜೊತೆಗೆ ಶಿಸ್ತನ್ನು ಅದು ಹೊತ್ತುಕೊಂಡು ಬಂದಿರುತ್ತದೆ. ಚಡ್ಡಿ ಹಾಗಲ್ಲ. ಅದು ಫ್ರೀ ಎಂಬ ಫಿಲಿಂಗ್ ಕೊಡುತ್ತದೆ.. ಹೀಗಾಗಿ  ವೈಯಕ್ತಿಕವಾಗಿ ನನಗೆ ಚಡ್ದಿ ಎಂದರೆ ಇಷ್ಟ,,ನಮ್ಮ ಹಳ್ಳಿಗಳಲ್ಲಿ ಚಡ್ಡಿಗೆ ವಿಶೇಷ ಮರ್ಯಾದೆ ಇದೆ. ಜೊತೆಗೆ ತೋಟ ಗದ್ದೆಗಳಲ್ಲಿ ಕೆಲಸ ಮಾಡುವಾಗ ಚೆಡ್ದಿಯೇ ಒಳ್ಳೆಯದು. ಪಂಚೆ ಆದರೆ ಆಗಾಗ ಎತ್ತಿಕಟ್ಟಿ ಕೆಲಸ ಮಾಡಬೇಕು. ಚೆಡ್ದಿ ಹಾಗಲ್ಲ..

ಬ್ರೀಟೀಶರು ಈ ದೇಶಕ್ಕೆ ಬರುವಾಗ ತಂಡ ಚೆಡ್ದಿ ಈ ದೇಶವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲು ಹೆಚ್ಚಿನ ಸಮಯ ಹಿಡಿಯಲಿಲ್ಲ. ಆದರೆ ಸಂಪ್ರದಾಯಸ್ಥರು ಮತ್ತು ಸನಾತನಿಗಳಿಗೆ ಮಾತ್ರ ಚೆಡ್ದಿ ಹೆಚ್ಚು ಇಷ್ಟವಾಗುತ್ತಿರಲಿಲ್ಲ. ಯಾಕೆಂದರೆ ಇದು ಭಾರತೀಯ ಉಡುಪಿನ ಪಟ್ಟಿಯಲ್ಲಿ ಸೇರಿಲ್ಲ.. ಹಿಂದಿನ ಜನ ಚಡ್ದಿಗಿಂತ ಪಂಚೆಗೆ ಹೆಚ್ಚಿನ ಒಲವು ತೋರುತ್ತಿದ್ದರು..

ಹಾಗಿದ್ದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್ ಎಸ್ ಎಸ್ ಚಡ್ದಿಯನ್ನು ತನ್ನ ಸಾಂಪ್ರದಾಯಿಕ ಉಡುಪು ಅಥವಾ ಸಮವಸ್ತ್ರವನ್ನಾಗಿ ಯಾಕೆ ಸ್ವೀಕರಿಸಿತು ? ಈ ಪ್ರಶ್ನೆಗೆ ನಾವು ಅಂದಾಜಿನ ಉತ್ತರವನ್ನು ಕೊಡಬಹುದು.. ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೆವಾರ್ ಅವರನ್ನು ಕೇಳೋಣ ಎಂದರೆ ಅವರೀಗ ಬದುಕಿಲ್ಲ. ಈಗಿನ ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್ ಅವರನ್ನು ಈ ಬಗ್ಗೆ ಕೇಳಬಹುದು. ಆದರೆ ಅವರು ಚೆಡ್ದಿಯ ಸಮವಸ್ತ್ರವನ್ನು ಪ್ಯಾಂಟಿಗೆ ಬದಲಿಸಿದ್ದರಿಂದ ಅವರಿಗೆ ಚೆಡ್ಡಿಯ ಬಗ್ಗೆ ಅಂತಹ ವಿಶ್ವಾಸ ಇರಲಿಕ್ಕಿಲ್ಲ ಅನ್ನಿಸುತ್ತದೆ. ಹೀಗಾಗಿ ಈ ಪ್ರಶ್ನೆಯನ್ನು ಅವರಿಗೆ ಕೇಳಿ ಪ್ರಯೋಜನ ಇಲ್ಲ..

ಆರ್ ಎಸ್ ಎಸ್ ಸದಾ ಬ್ರಿಟೀಷರನ್ನು ಬೆಂಬಲಿಸುತ್ತಲೇ ಬಂದಿದೆ. ಹೀಗಾಗಿ ಸಂಘದ ಕಾರ್ಯಕರ್ತರು ಸ್ವಾತಂತ್ರ್ಯ ಚಳವಳಿಯಲ್ಲಿ ಹೆಚ್ಚಾಗಿ ಪಾಲ್ಗೊಂಡಿರಲಿಲ್ಲ. ಜೊತೆಗೆ ಬಹಳಷ್ಟು ಸಂಘದ ಕಾರ್ಯಕರ್ತರು ಬ್ರಿಟೀಷರ ಎಜೆಂಟರಾಗಿ ಕೆಲಸಮಾಡಿದವರು. ಹೀಗಾಗಿ ಅವರಿಗೆ ಬ್ರಿಟೀಷರ ಬಗ್ಗೆ ಅಂತರಿಕ ಪ್ರೀತಿ ಇರುವ ಸಾಧ್ಯತೆ ಇದೆ..ಹೀಗಾಗಿ ಬ್ರಿಟೀಷರ ಉಡುಪಾದ ಪ್ಯಾಂಟಿಗೆ ಬದಲಾಗಿ ಚಡ್ದಿಯನ್ನು ಒಪ್ಪಿಕೊಂಡಿರಬಹುದು.ಅದು ದೇಶೀಯ ಉಡುಪಿನಂತೆಯೂ ಅವರಿಗೆ ಕಂಡಿರಬಹುದು..

ಇದರ ಜೊತೆಗೆ ಬ್ರಿಟೀಷ್ ಕಾಲದಿಂದ ಪೊಲೀಸರು ಚಡ್ದಿಯನ್ನೇ ಹಾಕಿಕೊಳ್ಳುತ್ತಿದ್ದರು..ಅಧಿಕಾರಿಗಳಿಗೆ ಮಾತ್ರ ಪ್ಯಾಂಟು. ಇದನ್ನು ಗಮನಿಸಿದ ಸಂಘದ ಸಂಸ್ಥಾಪಕರು ತಮ್ಮ ಕಾರ್ಯಕರ್ತರು ಪೊಲೀಸರಂತೆ ಕಂಡರೆ ಒಳ್ಳೆಯದು ಎಂದು ಈ ಸಮವಸ್ತ್ರ ಧರಿಸುವ ತೀರ್ಮಾನಕ್ಕೆ ಬಂದಿರಬಹುದು..ಪೊಲೀಸರು ಮಾಡಬೇಕಾದ ಕೆಲಸವನ್ನು ಸಂಘದ ಕಾರ್ಯಕರ್ತರೇ ಮಾಡಲಿ ಎಂಬುದು ಅವರ ಮನಸ್ಸಿನಲ್ಲಿ ಇದ್ದುದು ಇದಕ್ಕೆ ಕಾರಣವಿರಬಹುದು..ಇತ್ತೀಚಿನ ದಿನಗಳಲ್ಲಿ ನೈತಿಕ ಮತ್ತು ಅನೈತಿಕ ಪೊಲೀಸ್ ಗಿರಿ,, ದಾದಾಗಿರಿಯನ್ನು ಮಾಡುವುದರಿಂದ ಈ ಸಮವಸ್ತ್ರ ಅವರಿಗೆ ಹೊಂದುತ್ತದೆ ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ..

ಈಗ ಹಲವು ವರ್ಷಗಳ ಹಿಂದೆ ಪೊಲೀಸರಿಗೆ ಸಮವಸ್ತ್ರದ ವಿಚಾರದಲ್ಲಿ ಪ್ರಮೋಷನ್ ನೀಡಿ ಪ್ಯಾಂಟಿಗೆ ಬಡ್ತಿ ನೀಡಲಾಯಿತು.. ಇದನ್ನು ಬಹಳ ವರ್ಷಗಳ ಕಾಲ ಮೌನವಾಗಿ ಅಧ್ಯಯನ ಮಾಡಿದ ಸರಸಂಘ ಚಾಲಕರು ತಮ್ಮ ಕಾರ್ಯಕರ್ತರಿಗೂ ಬಡ್ತಿ ನೀಡುವ ನಿರ್ಧಾರಕ್ಕೆ ಬಂದರು.. ಅವರೂ ಬದಲಾದರು.

ಪೊಲೀಸರಾಗಲಿ ಸಂಘದ ಕಾರ್ಯಕರ್ತರಾಗಲಿ ಚೆಡ್ದಿ ಧರಿಸಿದಾಗ ಕೆಲವೊಮ್ಮೆ ಅವರನ್ನು ನೋಡಲು ಕಷ್ಟವಾಗುತ್ತಿತ್ತು.. ಯಾಕೆಂದರೆ ಇವರ ದೆಹದ ಆಕಾರ ಇದಕ್ಕೆ ಕಾರಣ. ದೇಹದ ಮೇಲ್ಬಾಗ ದೊಡ್ಡದಾಗಿ ಇದ್ದು ಕಾಲುಗಳು ಸಣಕಲಾಗಿದ್ದವರು ಈ ಸಮವಸ್ತ್ರದಲ್ಲಿ ವಿಚಿತ್ರವಾಗಿ ಕಾಣುತ್ತಿದ್ದರು. ಅವರ ಕಾಲುಗಳು ಸಣ್ಣದಾಗಿದ್ದು ದೊಡ್ಡ ಚಡ್ದಿ ಆ ಕಡೆಯಿಂದ  ಈ ಕಡೆಗೆ ನರ್ತನ ಮಾಡುವಾಗ ಬೇಸರವಾಗುತ್ತಿತ್ತು.. ಜೊತೆಗೆ ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿತ್ತು..ಪ್ಯಾಂಟಿಗೆ ಬದಲಾದ ಮೇಲೆ ಈ ಸಮಸ್ಯೆ ಬಗೆಹರಿಯಿತು.

ಜೋತೆಗೆ ಇತ್ತೀಚಿನ ದಿನಗಳಲ್ಲ್ಲಿ ಸಂಘಪರಿವಾರದ ಕಾರ್ಯಕರ್ತರು ಶಸ್ತ್ರಾಭ್ಯಾಸವನ್ನು ಮಾಡುವುದರಿಂದ ಅವರಿಗೆ ಪ್ಯಾಂಟೇ ಹೆಚ್ಚು ಅನುಕೂಲ..ಪ್ಯಾಂಟಿನ ಎರಡೂ ಕಿಸೆಯಲ್ಲಿ ಮದ್ದು ಗುಂಡುಗಳನ್ನು ಇಟ್ಟುಕೊಳ್ಳಬಹುದು.. ಶ್ರೀರಾಮ ಸೇನೆ, ಬಜರಂಗದಳದ ಕಾರ್ಯಕರ್ತರು ಇಂಥ ಸಶಸ್ತ್ರ ತರಬೇತಿ ಪಡೆಯುವಾಗ ಅವರು ಖುಶಿಯಿಂದ ಇರುವುದನ್ನು ನಾನು ಗಮನಿಸಿದ್ದೇನೆ..

ಚಡ್ಡಿ ಬಗ್ಗೆ ಜಗಳ ತೆಗೆದವರು ಈ ಬಗ್ಗೆ ಯೋಚಿಸಲಿ.. ಚಡ್ದಿಗಳು ಈಗ ಪ್ಯಾಂಟು ಹಾಕುತ್ತಿದ್ದರೂ ಚೆಡ್ಡಿಗೆ ಇರುವ ಸಾಂಕೇತಿಕ ಅರ್ಥ ಪ್ಯಾಂಟಿಗೆ ಇಲ್ಲ..ಜೊತೆಗೆ ಈಗಲೂ ಚಡ್ದಿಯನ್ನು ಒಳಗೆ ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಅದಕ್ಕೆ ಗುಪ್ತತೆ ಇದೆ..ಪ್ಯಾಂಟಿಗೆ ಇಲ್ಲ. ಪ್ಯಾಂಟನ್ನು ಮುಚ್ಚಿಟ್ಟುಕೊಳ್ಳುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂಡ ಸಂಘ ಪರಿವಾರ ಮತ್ತೆ ಚೆಡ್ಡಿಗೆ ಹಿಂತಿರುಗುದು ಒಳ್ಳೆಯದು.

ಆಗ ಅವರಿಗೂ ಗೌರವ ಚಡ್ಡಿ ಆಂದೋಲನ ನಡೆಸುವುದು ಅರ್ಥಪೂರ್ಣ ಅನ್ನಿಸಿಕೊಳ್ಳುತ್ತದೆ. ಎಲ್ಲರೂ ಈ ಬಗ್ಗೆ ಯೋಚಿಸಲಿ

Sunday, June 5, 2022

ಬಿಜೆಪಿ ವಕ್ತಾರರು ಹಚ್ಚಿದ ಬೆಂಕಿ..ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ವಸ್ತುಗಳ ನಿಷೇದ; ಕೋಮುವಾದಿ ಆಡಳಿತಕ್ಕೆ ದೇಶದ ಹಿತಾಸಕ್ತಿಯ ಬಲಿ.

 



ಈಗ ಎರಡು ಮೂರು ದಿನಗಳ ಹಿಂದೆ;; ಟೈಂಸ್ ನೌ ಎಂಬ ವಾಹಿನಿಯಲ್ಲಿ ಚರ್ಚೆಯೊಂದು ನಡೆಯುತ್ತಿತ್ತು.. ಈ ಚರ್ಚೆ ನಡೆಸಿಕೊಡುತ್ತಿದ್ದವರು ನಾವಿಕಾ ಕುಮಾರ್ ಎಂಬ ಯಾಂಕರ್. ಚರ್ಚೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಪ್ರಮುಖರೆಂದರೆ ಬಿಜೆಪಿಯ ಪ್ರಭಾವಿ ವಕ್ತಾರರಾದ  ನೂಪುರ್ ಶರ್ಮಾ..

ಯಾಂಕರ್ ಮತ್ತು ಬಿಜೆಪಿ ವಕ್ತಾರಿಬ್ಬರೂ ಸೇರಿ ಮುಸ್ಲೀಂ ರ ಮೇಲೆ ದಾಳಿ ನಡೆಸುತ್ತಿದ್ದರು.. ಇಬ್ಬರೂ ತಮಗೆ ತಾವೇ ಸಂತೋಷಪಡುತ್ತಿದ್ದರು. ಹಾಗೆ ನೋಡಿದರೆ ಈ ವಾಹಿನಿಯಲ್ಲಿ ಇಂತಹ ಚರ್ಚೆ ನಡೆಯುತ್ತಿರುವುದು ಇದೇ ಮೊದಲಾಗಿರಲಿಲ್ಲ. ಇಂತಹ ಚರ್ಚೆಗಳಿಗೆ ಈ ವಾಹಿನಿ ಹೆಸರುವಾಸಿ.. ಗೋದಿ ಮೀಡಿಯಾದ ಪ್ರಮುಖ ವಾಹಿನಿಯಾಗಿರುವ ಟೈಂಸ್ ನೌ ಸ್ಪರ್ಧೆ ನಡೆಸುತ್ತಿರುವುದು ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯ ಜೊತೆ,,

ಇಂತಹ ಚರ್ಚೆಗಳನ್ನು ನಡೆಸುತ್ತ ಬಿಜೆಪಿ ವಲಯದಲ್ಲಿ ತಮ್ಮನ್ನು ಗುರುತಿಸಕೊಂಡ ನಾವಿಕಾ ಕುಮಾರ್ ಈ ಬಾರಿ ಇಂತಹ ವಿವಾದ ಸೃಷ್ಟಿಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ,,

ದಿವಂಗತ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರಿಗೆ ತುಂಬಾ ಹತ್ತಿರವಾಗಿದ್ದವರು ನಾವಿಕಾ ಕುಮಾರ್. ಅವರ ನಿಧನದ ನಂತರ ಈ ನಾವಿಕಾ ಕುಮಾರ್ ಗೃಹ ಸಚಿವ ಅಮಿತ್ ಶಾ ಅವರಿಗೆ ಹತ್ತಿರವಾಗಿದ್ದರು,, ಆಗಾಗ ಅಮಿತ್ ಶಾ ಅವರ ಸಂದರ್ಶನ ಮಾಡುತ್ತಿದ್ದ ನಾವಿಕಾ ಯಾವ ಸಂದರ್ಭದಲ್ಲೂ ತಾವೊಬ್ಬ ಪತ್ರಕರ್ತ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡವರೇ ಅಲ್ಲ.. ಸದಾ ಅಮಿತ್ ಶಾ ಅವರನ್ನು ಸಂತೋಷ ಪಡುವ ರೀತಿಯಲ್ಲೇ ಸಂದರ್ಶನ ಮಾಡುತ್ತಲೇ ಬಂದವರು.

ಇನ್ನು ಈ ನೂಪುರ್ ಶರ್ಮಾ.. ಬಿಜೆಪಿಯ ವಕ್ತಾರರಾದ ಇವರು ಬಿಜೆಪಿಯ ಹಲವು ನಾಯಕರಿಗೆ ಆಪ್ತರಾದವರು.. ಅವರೇ ಹೇಳಿಕೊಂಡಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್, ಗೃಹ ಸಚಿವ ಅಮಿತ್ ಶಾ ತಮ್ಮ ಬೆಂಬಲಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು

ಇವರಿಬ್ಬರು ತಮ್ಮ ಚರ್ಚೆ ಎಂಬ ಮುಸ್ಲೀಂ ವಿರೋಧಿ ಭಾಷಣದ ಕಾರ್ಯಕ್ರಮವನ್ನು ಮುಂದುವರಿಸಿದ್ದರು,, ಆದರೆ ಈ ಬಾರಿ ಇವರಿಬ್ಬರ ಈ ದಾಳಿಯಿಂದ ತೊಂದರೆಗೆ ಸಿಲುಕಿಕೊಂಡವರು ಪ್ರಧಾನಿ ನರೇಂದ್ರ ಮೋದಿ, ಗೄಹ ಸಚಿವ ಅಮಿತ್ ಶಾ, ಕೇಸರಿ ಪಕ್ಷ ಬಿಜೆಪಿ.. ಇವಲ್ಲಕ್ಕಿಂತ ಮುಖ್ಯ ಎಂದರೆ ಈ ಮೂರ್ಖರಿಂದಾಗಿ ಭಾರತ ತಮ್ಮ ಆಪ್ತ ಸ್ನೇಹಿತರ ಬೇಸರಕ್ಕೆ ಕಾರಣವಾದದ್ದು,

ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಯಿತು.. ಸಾಮಾಜಿಕ ಜಾಲ ತಾಣಗಳಲ್ಲಿ ಈ ಕೋಮುವಾದಿ ವಕ್ತಾರರು ಮತ್ತು ಯಾಂಕರ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಜೊತೆಗೆ ಸೌದಿ ಅರೇಬಿಯಾ, ಕುವೈತ್, ಒಮಾನ್, ಮೊದಲಾದ ಟ್ರಗರಾಯಭಾರಿಗಳನ್ನು ಕರೆಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಇಮಾನ್ ಧರ್ಮಗುರು ಹೇಳಿಕೆಯೊಂದನ್ನು ನೀಡಿ ಪ್ರವಾದಿ ಮೊಹಮ್ಮದ್ ಅವರಿಗೆ ಆದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಆಗ ಜಾಗೃತವಾದ ವಿದೇಶಾಂಗ ಇಲಾಖೆ ಪರಿಸ್ಥಿತಿಯನ್ನು ಸರ್ಕಾರಕ್ಕೆ ವಿವರಿಸಿತು,,ತಕ್ಷಣ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಲಹೆ ನೀಡಿತು.. ಕೋಮುವಾದಿ ರಾಜಕಾರಣದಲ್ಲಿ ನಿರತರಾಗಿದ್ದ ಬಿಜೆಪಿಗೆ ಇದರಿಂದ ಉಂಟಾದದ್ದು ಮುಜುಗರ. ಪ್ರಧಾನಿ ನರೇಂದ್ರ ಮೋದಿ ಅವರ ಬುಡಕ್ಕೆ ಇದು ಬಂದಿತ್ತು.. ಬಹುತೇಕ ಕೊಲ್ಲಿ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಸಹಾಯಕರು ಎಂದು ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಅವರಸ್ನು ಗುರುತಿಸಿದ್ದರು.. ಇದು ನಿಜವೂ ಆಗಿತ್ತು,

ಹೀಗಾಗಿ ಬಿಜೆಪಿ ತೆಗೆದುಕೊಂಡ ತೀರ್ಮಾನ ನವೀನ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವುದು ಮತ್ತು ನೂಪುರ್ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಅಮಾನತಿನಲ್ಲಿ ಇಡುವುದು.. ಅದರೆ ಹಿಂದಿನ ತರ್ಕ ಏನು ? ಟಿವಿ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಅವರಿಗೆ ಅವಮಾನ ಮಾಡಿದ್ದು ಪಕ್ಷದ ವಕ್ತಾರರಾದ ನೂಪುರ್ ಶರ್ಮಾ. ಇವಳಿಗೆ ಪಕ್ಕ ವಾದ್ಯ ನುಡಿಸಿದ್ದು ಟೈಂಸ್ ನೌ.. ನೂಪುರ್ ಶರ್ಮಾ ಅವರ ಅಭಿಪ್ರಾಯಗಳಿಗೆ ಟ್ವೀಟ್ ಮೂಲಕ ಸಹಮತ ವ್ಯಕ್ತಪಡಿಸಿದ್ದು ದೆಹಲಿ ಬಿಜೆಪಿ ಮಾಧ್ಯಮ ಸಂಘಟಕ ನವೀನ್ ಕುಮಾರ್. ಆದರೆ ನೂಪುರ್ ಶರ್ಮಾ ಅವರಸ್ನು ಅಮಾನತಿನಲ್ಲಿ ಮಾತ್ರ ಇಡಲಾಗಿದೆ. ನಿಜವಾಗಿ ಈ ಮುಜುಗರಕ್ಕಾಗಿ ಶರ್ಮಾ ಅವರನ್ನು ಉಚ್ಚಾಟನೆ ಮಾಡಬೇಕಿತ್ತು,,ನವೀನ್ ಕುಮಾರ್ ಅವರನ್ನು ಅಮಾನತಿನಲ್ಲಿ ಇಟ್ಟರೂ ಸಾಕಿತ್ತು.. ಆದರೆ ನೂಪುರ್ ಅವರನ್ನು ಅಮಾನತಿನಲ್ಲಿ ಮಾತ್ರ ಇಟ್ಟಿರುವುದು ಆಕೆ ಎಷ್ಟು ಪ್ರಭಾವಶಾಲಿ ಎಂಬುದನ್ನು ತೋರಿಸಿಕೊಡುತ್ತದೆ.

ಈ ರೀತಿಯ ಕೋಮು ರಾಜಕಾರಣ ಎಲ್ಲಕಾಲದಲ್ಲೂ ನಿರಿಕ್ಷಿತ ಲಾಭವನ್ನು ತಂದುಕೊಡುವುದಿಲ್ಲ...ಅದು ನಮ್ಮ ಸ್ನೇಹಿತರನ್ನು ದೂರಮಾಡುತ್ತದೆ. ವೈರಿಗಳನ್ನು ಪ್ರಬಲರನ್ನಾಗಿ ಮಾಡುತ್ತದೆ.. ದೇಶದಲ್ಲಿ ಬಿಜೆಪಿ ಮತ ಬ್ಯಾಂಕ್ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡ ಬಿಜೆಪಿಗೆ ಇಂತಹ ಘಟನೆಗಳು ತಮ್ಮ ವೈರಿಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂಬುದು ಅರ್ಥವಾದಂತಿಲ್ಲ..ಈಗಾಗಲೇ ಪಾಕಿಸ್ಥಾನದಲ್ಲಿ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ನಮ್ಮ್ ಸ್ನೇಹಿತರರಾದ ಕೊಲ್ಲಿ ರಾಷ್ಟ್ರಗಳು ಮತ್ತು ಪಾಕಿಸ್ಥಾನದ ನಿಲುಮೆ ಒಂದೇ ಆಗಿದೆ.. ಅಂದರೆ ನೂಪುರ್ ಶರ್ಮಳ ಮೂರ್ಖತನ ಪಾಕಿಸ್ಥಾನವನ್ನು ಕೊಲ್ಲಿ ರಾಷ್ಟ್ರಗಳನ್ನು ಒಂದು ಮಾಡಿದೆ.

ಈ ಕೋಮುವಾದಿಗಳಿಂದಾಗಿ ಭಾರತ ತಲೆ ತಗ್ಗಿಸುವಂತೆ ಆಗಿದೆ. ಭಾರತ ತಲೆ ತಗ್ಗಿಸುವಂತೆ ಆಗಿದೆ...ಒಟ್ಟಿನಲ್ಲಿ ಇವರು ದೇಶವನ್ನು ಉಳಿಸುವುದಿಲ್ಲ.. ತಮ್ಮ ಅಧಿಕಾರಕ್ಕಾಗಿ ದೇಶವನ್ನು ಇನ್ನಷ್ಟು ಸಂಕಟಕ್ಕೆ ಸಿಲುಕಿಸುತ್ತಾರೆ..

ಕಲುಷಿತಗೊಂಡ ರಾಜಕೀಯ ವಾತಾವರಣ; ಸಿದ್ದರಾಮಯ್ಯನವರ ಚಡ್ಡಿ ಸುಡುವ ಚಳವಳಿ ಮತ್ತು ಬಿಜೆಪಿ ಸಿಟ್ಟು

ಕಲುಷಿತಗೊಂಡ ರಾಜಕೀಯ ವಾತಾವರಣ; ಸಿದ್ದರಾಮಯ್ಯನವರ ಚಡ್ಡಿ ಸುಡುವ ಚಳವಳಿ ಮತ್ತು ಬಿಜೆಪಿ ಸಿಟ್ಟು

 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚೆಡ್ಡಿ ಸುಡುವ ಚಳವಳಿಯ ಪ್ರಸ್ತಾಪ ಈಗ ಚೆಡ್ಡಿ ಜಗಳವಾಗಿದೆ.. ಸಿದ್ದರಾಮಯ್ಯ  ಅವರ ಈ ಹೇಳಿಕೆಗೆ ಬಿಜೆಪಿ ನಾಯಕರುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ,,,ಸಿದ್ದರಾಮಯ್ಯನವರ ಮೇಲೆ ವೈಯಕ್ತಿಕ ದಾಳಿಯೂ ಪ್ರಾರಂಭವಾಗಿದೆ. ಸಿದ್ದರಾಮಯ್ಯನವರ ಮಾಜಿ ಸಹೋದ್ಯೋಗಿಗಳು ಈಗ ಬಿಜೆಪಿಯಲ್ಲಿ ಆಶ್ರಯ ಪಡೆದಿರುವವರು ತಿರುಗಿಬಿದ್ದಿದ್ದಾರೆ,, 

ಸಿದ್ದರಾಮಯ್ಯ ಆರ್ ಎಸ್ ಎಸ್ ಬಗ್ಗೆ ಮಾತನಾಡಿದಾಗಲೂ ಇದೇ 


ಆಗಿತ್ತು.. ಬಿಜೆಪ್ಪಿಯ ಹಲವು ನಾಯಕರು ತಿರುಗಿಬಿದ್ದಿದ್ದರು..ಆರ್ಯ ಮತ್ತು ದ್ರಾವಿಡ ಪ್ರಶ್ನೆ ಬಂದಾಗಲು ಕೂಡ ಸಿದ್ದರಾಮಯ್ಯ ಟಿಕೆಗೆ ಗುರಿಯಾಗಿದ್ದರು,,

ಕಳೆದ ಒಂದೆರಡು ತಿಂಗಳಿನಿಂದ ಈಚೆಗೆ ಸಿದ್ದರಾಮಯ್ಯ ಹೆಚ್ಚು ಆಕ್ರಮಣಕಾರಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. ಸಂಘ ಪರಿವಾರದ ವಿರುದ್ಧ ಸಿದ್ದರಾಮಯ್ಯ ಸ್ಪಷ್ಟ ನಿಲುವು ಹೊಂದಿದ್ದಾರೆ. ಈ ವಿಚಾರದಲ್ಲಿ ಅವರಿಗೆ ವೈಚಾರಿಕ ಸ್ಪಷ್ಟತೆ ಇದೆ. ಆದರೆ ಅವರು ಈ ವಿಚಾರದಲ್ಲಿ ಅವರು ಆಕ್ರಮಣಕಾರಿ ನಿಲುವು ಪ್ರದರ್ಶಿಸಿದ್ದು ಕಡಿಮೆ.. ತಮ್ಮ ಸೈದ್ಧಾಂತಿಕ ನಿಲುವಿನಲ್ಲಿ ಅವರು ಯಾವುದೇ ರಾಜಿ ಮಾಡಿಕೊಳ್ಳದಿದ್ದರು ಮಾತಿನಲ್ಲಿ ಕೆಲವೊಮ್ಮೆ ಮೃದು ನಿಲುವು ತಳೆದಿದ್ದೂ ಉಂಟು.. ಆದರೆ ಈ ಬಾರಿ ಹಾಗಿಲ್ಲ. ಅವರು ಹೆಚ್ಚು ಆಕ್ರಮಣಕಾರಿ ನಿಲುವು ಪ್ರದರ್ಶಿಸಿದ್ದು..

ಇದಕ್ಕೆ ಮುಖ್ಯ ಕಾರಣ ಬಹುಸಂಖ್ಯಾತರ ಮನಸ್ಸನ್ನು ನೋಯಿಸಬಾರದು ಎಂಬ ಮತ ಬ್ಯಾಂಕ್ ರಾಜಕಾರಣದಿಂದ ಅವರು ಸಂಫೂರ್ಣವಾಗಿ ಹೊರಗೆ ಬಂದಿದ್ದೂ ಕಾರಣವಿರಬಹುದು. ಇದಕ್ಕೆ ಕಾಂಗ್ರೆಸ್ ವರಿಷ್ಠ್ರರು ಗ್ರೀನ್ ಸಿಗ್ನಲ್ ನೀಡಿರಲೂ ಬಹುದು.. ಜೊತೆಗೆ ಚುನಾವಣೆ ಬರುತ್ತಿರುವ ಈ ಸಂದರ್ಭದಲ್ಲಿ ಸಿದ್ಧಾಂತಿಕವಾಗಿ ಸ್ಫಷ್ಟ ನಿಲುವು ಹೊಂದುದುವುದು ಅಗತ್ಯ ಎಂಬ ಅರಿವಾಗಿರುವುದು ಇರಬಹುದು,, ಯಾಕೆಂದರೆ ಬಹುಸಂಖ್ಯಾತರ ಮನಸ್ಸಿಗೆ ನೋವಾಗಬಾರದು ಎಂಬ ನಿಲುವಿನಿಂದ ಕಾಂಗ್ರೆಸ್ ಗೆ ಯಾವ ರೀತಿಯ ಲಾಭ ಕೂಡ ಇಲ್ಲ.. ಈಗಾಗಲೇ ಬಹುಸಂಖ್ಯಾತ ಮತಗಳ ಕ್ರೋಡೀಕರಣದ ರಾಜಕಾರಣದಲ್ಲಿ ಬಿಜೆಪಿ ಯಶಸ್ವಿಯಾಗಿದೆ.. ಈಗ ಕಾಂಗ್ರೆಸ್ ಗೆ ಉಳಿದಿರುವುದು ತಮ್ಮ ಸೈದ್ಧಾಂತಿಕ ನಿಲುವಾದ ಅಲ್ಪಂಸಖ್ಯಾತರು, ದಲಿತರು ಮತ್ತು ಹಿಂದುಳಿದವರ ಮತವನ್ನು ಗಟ್ಟಿಗೊಳಿಸುವ ದಾರಿ ಮಾತ್ರ.

ಈ ಕಾರಣದಿಂದ ಸಿದ್ದರಾಮಯ್ಯ ಹೆಚ್ಚು ಆಕ್ರಮಣಶೀಲ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿರಬಹುದು.

ಈಗ ಸಿದ್ದರಾಮಯ್ಯ ಚೆಡ್ದಿಗೆ ಬೆಂಕಿ ಹಚ್ಚುವ ಅಥವಾ ಸುಡುವ ಮಾತನಾಡಿದ್ದಾರೆ..ಚೆಡ್ಡಿ ಸುಡುವುದು ಎಂದರೇನು ? ಎಲ್ಲೆಡೆ ಚಡ್ಡಿಯನ್ನು ರಾಶಿ ಹಾಕಿ ಬೆಂಕಿ ಹಚ್ಚುತ್ತಾರೆಯೆ ?

ಅಥವಾ ಚೆಡ್ಡಿ ಸುಡುವುದು ಎನ್ನುವುದು ಒಂದು ಸಾಂಕೇತೇಕ ನಿಲುವು ಮಾತ್ರವೆ ? ಚೆಡ್ಡಿ ಎನ್ನುವುದು ಸಂಘ ಪರಿವಾರವನ್ನು ಸಂಕೇತಿಸುತ್ತದೆ, ಸಂಘ ಪರಿವಾರದ ಮನುಷ್ಯ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿಯನ್ನು ಸಂಕೇತಿಸುತ್ತದೆ.. ಹಾಗೆ, ಮನುವಾದ ಈ ಮನಸ್ಥಿತಿಯ ಭಾಗವಾಗಿದೆ.. ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಚಡ್ಡಿ ಸುಡುವುದನ್ನು ಅರ್ಥ ಮಾಡಿಕೊಳ್ಳಬೇಕು,,

ಬಿಜೆಪಿಯ ಹಲವು ನಾಯಕರಿಗೆ ಇದೆಲ್ಲ ಅರ್ಥವಾಗುವುದಿಲ್ಲ..ಅವರಿಗೆ ಸಂಘಪರಿವಾರದ ಅಪಾಯದ ಅರಿವಿಲ್ಲ. ಅರಿವಿದ್ದರೂ ಅವರು ಬಯಸುವುದು ಸಂಘ ಪರಿವಾರ ಬಯಸುವ ಪ್ರತಿಪಾದಿಸುವ ಸಮಾಜವನ್ನೇ. ಅದೇ ಅವರ ರಾಜಕೀಯ ಮೌಲ್ಯ..

ಇತ್ತೀಚಿಗೆ ಅಧಿಕಾರಕ್ಕಾಗಿ ಬಿಜೆಪಿ ಸೇರಿರುವ ಸೋಮಶೇಖರ್ ಅಂತವರಿಂದ ಈ ಮಟ್ಟದ ಬೌದ್ದಿಕತೆಯನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ..

ಇವತ್ತು ಬಿಜೆಪಿ ಸೇರಿ ವಿಧಾನ ಪರಿಷತ್ ಸದಸ್ಯರಾಗಲು ಹೊರಟೀರುವ ನಾರಾಯಣಸ್ವಾಮಿ ಅವರ ಹೇಳಿಕೆಯನ್ನೂ ನೋಡಬೇಕು.. ವರು ಸಿದ್ದರಾಮಯ್ಯ ತಿಕ್ಕಲು ಎಂದಿದ್ದಾರೆ. ತಿಕ್ಕಲು ಎಂದರೆ ತಲೆ ಸರಿಯಿಲ್ಲ ಎಂಬ ಅರ್ಥವಿವರಣೆಯನ್ನೂ ಅವರೇ ನೀಡಿದ್ದಾರೆ.. ಆದರೆ ಸಿದ್ದರಾಮಯ್ಯನವರ ಸೈದ್ಧಾಂತಿಕ ನಿಲುವು ಹೇಗೆ ತಪ್ಪು ಎಂದು ವಿವರಿಸಿದ್ದರೆ ಅವರ ಮಾತಿಗೆ ಬೆಲೆ ಬರುತ್ತಿತ್ತು. ಅದರ ಬದಲಿಗೆ ಅವರಿಗೆ ತಲೆ ಸರಿ ಇಲ್ಲ ಎಂದು ಹೇಳುವುದು ತುಂಬಾ ಸುಲಭ. ಇದಕ್ಕೆ ಯಾವುದೇ ಓದು ತಿಳುವಳಿಕೆ ಬೇಕಾಗಿಲ್ಲ. ಮಾತನ್ನು ಬಟ್ಟೆ ಒಗೆಯುವಂತೆ ಇಗೆಯುವುದು ಅಷ್ಟೇ. ಇದರಿಂದ ಕೊಳೆ ಹೋಗುವುದಕ್ಕೆ ಬದಲು ಮತ್ತಷ್ಟು ಕೊಳೆಯಾಗುತ್ತದೆ. ಹೀಗೆ ಕೊಳೆಯಾದ ರಾಜಕಾರಣದಲ್ಲಿ ಇವರೆಲ್ಲ ಈಜಾಡಬೇಕು.. ಅದನ್ನೇ ಇವರೆಲ್ಲ ಮಾಡುತ್ತಿದ್ದಾರೆ.

ಮಾತು ಮುತ್ತಿನ ಹಾರದಂತಿರಬೇಕು ಎಂದು ಹೇಳಿದವರು ಬಸವಣ್ಣ. ಆದರೆ ಇವರ ಮಾತುಗಳು ಮುತ್ತಿನ ಹಾರದಂತಿಲ್ಲ. ಬದಲಾಗಿ ರಾಜಕೀಯ ಮೌಲ್ಯಗಳ ಉರುಳಿನಂತಿದೆ.. ಅದು ರಾಜಕಾರಣವನ್ನು ಇನ್ನಷ್ಟು ಕಲುಷಿತಗೊಳಿಸುತ್ತದೆ.. ಕಲುಷಿತಗೊಂಡ ರಾಜಕಾರಣದಲ್ಲಿ ತಮ್ಮ ಅಧಿಕಾರ ರಾಜಕಾರಣದ ಭಗವಾ ಝೇಂಡಾವನ್ನು ಹಾರಿಸುವುದು ಇವರ ಉದ್ದೇಶ,,

ಒಟ್ಟಾರೆಯಾಗಿ ಇವತ್ತಿನ ರಾಜಕಾರಣ ಮೌಲ್ಯವನ್ನು ಕಳೆದುಕೊಂಡಿದೆ..ಕೇವಲ ಅಧಿಕಾರವೇ ರಾಜಕಾರಣದ ಪರಮ ಗುರಿ ಎಂಬಂತಾಗಿದೆ,,

ಇಲ್ಲಿ ಮಾತುಗಳಿಗೆ ಬೆಲೆ ಇಲ್ಲ. ಘನತೆ ಇಲ್ಲ..ಇದಕ್ಕೆ ಎಲ್ಲ ರಾಜಕಾರಣಿಗಳೂ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ,

ಸಿದ್ದರಾಮಯ್ಯನವರ ಮೂಲ ಹೇಳಿಕೆಗೆ ಬರೋಣ.. ಅವರು ಯಾವ ಉದ್ದೇಶದಿಂದ ಚಡ್ಡಿ ಸುಡುವ ಕಾರ್ಯಕ್ರಮದ ಬಗ್ಗೆ ಮಾತನಾಡಲಿ, ಅವರು ಹೇಳಬೇಕಾದ್ದನ್ನು ಇನ್ನಷ್ಟು ಗೌರವದಿಂದ ಹೇಳಬಹುದಿತ್ತು..ಆದರೆ ಅವರೂ ಸಹ ತಮ್ಮ ಮಾತನ್ನು ಹೇಳಿದ ರೀತಿ ಸರಿಯಿರಲಿಲ್ಲ...

ಕರ್ನಾಟಕದ ಹಿರಿಯ ರಾಜಕಾರಣಿ ಆಗಿರುವ ಸಿದ್ದರಾಮಯ್ಯನವರಾದರೂ ಈ ಬಗ್ಗೆ ಯೋಚಿಸಲಿ.. ಮಾತನ್ನು ಒಮ್ಮೆ ಆಡಿದ ಮೇಲೆ ಮುಗಿಯಿತು ಅದನ್ನು ವಾಪಸ್ಸು ಪಡೆಯುವುದು ಸಾಧ್ಯವಿಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ

 

 ನಾನು ಕಳೆದ ಕಲವು ತಿಂಗಳುಗಳಿಂದ ಏನನ್ನೂ ಬರೆದಿಲ್ಲ.. ಬರೆಯುವುದು ಎಂದರೆ ಅದು ಹೃದಯವನ್ನು ಬಸಿಯುವ ಕೆಲಸ..ನಾನು ಸುದ್ದಿ ಟಿವಿ ಡಿಜಿಟಲ್ ವಾಹಿನಿಯ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದರಿಂದ ಬರೆಯಲು ಸಾಧ್ಯವಾಗಿರಲಿಲ್ಲ.

ಆದರೆ ಬರವಣಿಗೆ ನನ್ನ ಮೂಲ ಪ್ರವೃತ್ತಿ.. ನಾನು ಬರೆಯುತ್ತಲೇ ಇದ್ದವನು.. ನನ್ನ ಕಾಲೇಜು ದಿನಗಳಲ್ಲಿ ಕಥೆ ಕವನಗಳನ್ನು ಬರೆಯುತ್ತಿದ್ದೆ.. ೮೦ ರ ದಶಕದಲ್ಲಿ ನಾನು ಬರೆದ ಕಥೆ ಸಾವು ಮಯೂರ ಮಾಸಿಕದಲ್ಲಿ ಪ್ರಕಟವಾಗಿತ್ತು. ಆಗ ನಾನು ಸಂಭ್ರಮ ಪಟ್ಟಿದ್ದು ನನಗೆ ನೆನಪಿದೆ. ನನ್ನ ಮೊದಲ ಕವನ ಪ್ರಕಟವಾಗಿದ್ದು ಸಂಕ್ರಮಣ ಮಾಸಿಕದಲ್ಲಿ..ಚಂದ್ರಶೇಖರ ಪಾಟೀಲರು ಇದರ ಸಂಪಾದಕರಾಗಿದ್ದರು.. ಬುದ್ದಣ್ಣ ಹಿಂಗಮಿರೆ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿ ಅವರೂ ಚಂದ್ರಶೇಖರ್ ಪಾಟೀಲ್ ಅವರ ಜೊತೆಗಿದ್ದರು,

ಇದಾದ ಮೇಲೆ ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟೆ.. ಮೊದಲು ನಮ್ಮೂರಿನಿಂದ ಬರುತ್ತಿದ್ದ ಕಡಲಧ್ವನಿ ಪತ್ರಿಕೆಯಲ್ಲಿ ವಾರದ ಅಂಕಣ ಬರೆಯುತ್ತಿದ್ದೆ. ಆ ಪತ್ರಿಕೆಯಲ್ಲಿ ಬರೆದ ಭ್ರಷ್ಟಾಚಾರ ಪ್ರಕರಣದ ವರದಿಯಿಂದಾಗಿ ನಾನು ಮಾನಹಾನಿ ಕಟ್ಲೆ ಎದುರಿಸಬೇಕಾಯಿತು..ಆಗ ನನ್ನ ಪರವಾಗಿ ವಾದಿಸಿದವರು ಧಾರೇಶ್ವರ ವಕೀಲರು. ಅವರು ಏನನ್ನೂ ತೆಗೆದುಕೊಳ್ಳದೇ ವಾದ ಮಾಡಿ ನನ್ನನ್ನು ಗೆಲ್ಲಿಸಿದರು.

ಇದೇ ಸಂದರ್ಭದಲ್ಲಿ ಹೋರಾಟಗಳಲ್ಲಿ ಪಾಲ್ಗೊಂಡು ನಾನು ಊರು ಬಿಡಬೇಕಾಯಿತು.. ಊರು ಬಿಟ್ಟವನು ಬೆಂಗಳೂರಿಗೆ ಬಂದೆ.. ಆಕಾಶವಾಣಿ ನಂತರ ಸಂಯುಕ್ತ ಕರ್ನಾಟಕ ಸೇರಿದೆ. ಅಲ್ಲಿಂದ ನನ್ನ ಪತ್ರಿಕೋದ್ಯಮದ ಜರ್ನಿ ಪ್ರಾರಂಭವಾಯಿತು.. ಪತ್ರಿಕೋದ್ಯಮದ ಅವಸರದ ಸಾಹಿತ್ಯದಲ್ಲಿ ಕಳೆದು ಹೋದೆ.. ನನ್ನ ಕ್ರಿಯಾಶೀಲ ಬರವಣಿಗೆಗೆ ತಡೆ ಉಂಟಾಯಿತು,, ಆಗಾಗ ಬರೆಯುತ್ತಿದ್ದೆ. ಕುಮ್ರಿ ಬ್ಲ್ಲಾಗ್ ಗೆ ಅಗಾಗ ಬರೆಯುತ್ತಿದ್ದರೂ ಅಲ್ಲಿ ಶಿಸ್ತು ಇರಲಿಲ್ಲ,, 

ಈಗ ಮತ್ತೆ ಬರೆಯಬೇಕು ಅಲ್ಲಿಸುತ್ತಿದೆ..

ಯಾಕೆಂದರೆ ದೃಶ್ಯ ಮಾಧ್ಯಮ ಬರೆಯುವ ಸುಖ ನೀಡಲಾರದು..ಇದು ಈಗ ನನಗೆ ಅರ್ಥವಾಗುತ್ತಿದೆ, ನಾನು ಮತ್ತೆ ಬರೆಯಲು ಪ್ರಾರಂಭಿಸುತ್ತಿದ್ದೇನೆ.. ನನ್ನೊಳಗೆ ಇರುವುದಕ್ಕೆ ಅಕ್ಷರ ರೂಪ ಕೊಡುತ್ತೇನೆ,,

ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಸದಾ ಇರಲಿ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...