ಮಾತುಕತೆ, ಅಲ್ಲಲ್ಲಿ ನಗು ಮತ್ತು ಅಳು
ಕ್ಷಯವಿಲ್ಲದ್ದು ಅಕ್ಷರ, ಅಕ್ಷರ ಅಕ್ಷರಗಳನ್ನು ಪೊಣಿಸಿ ಮಣಿಸಿ
ಕಟ್ಟಿದ ಕಾವ್ಯ.
ವಾಕ್ಯವೇ ಕಾವ್ಯವಾಗುವ ಅದ್ಭುತ
ಅಕ್ಷರಕ್ಕೆ ಕ್ಷಯಿಸುವ ಗುಣ ಇಲ್ಲದಿದ್ದರೆ.
ಆದರೆ ಇಲ್ಲಿ ಆಗುತ್ತಿರುವುದೇ ಬೇರೆ
ಮಾತಿನ ಭರಾಟೆಯಲ್ಲಿ ಅಕ್ಷರಕ್ಕೆ ಕ್ಷಯಿಸುವ ಗುಣ
ಮಾತಿನ ಶಕ್ತಿಯೇ ಕ್ಷಯ.
ಮೊದಲು ಹುಟ್ಟಿದ್ದು ನಾದವಂತೆ
ನಾದದ ಅಪ್ಪ ಸ್ವರ, ಎಲ್ಲವೂ ಅಪಸ್ವರ.
ಹೀಗಾದರೆ ನಗು ಅಳುವಿಗೆ, ವ್ಯತ್ಯಾಸ ಇರುವುದಾದರೂ ಹೇಗೆ ?
ನಾವೆಲ್ಲ ಮಾತನಾಡುವ ಹಾಗೆ.
ಅಳುವವನಿಗೆ ಕಳೆದುಕೊಂಡ ನೋವು
ನಗುವವನಿಗೆ ಶಕ್ತಿ ತುಂಬುವ ಕಾವು
ಆದರೆ ಅಳುವಿನಲ್ಲಿ ಏನೂ ಹುಟ್ಟುವುದಿಲ್ಲ, ಅದು ವ್ಯರ್ಥ ಭಾವೋಧ್ವೇಗ.
ನಗುವಿಲ್ಲ ಎನೂ ಇರುವುದಿಲ್ಲ ಅದು,ಇರುವವನ ಅಹಂಕಾರ.
ಆದರೂ ಶಬ್ದಕ್ಕೆ ಶಕ್ತಿ ಇಲ್ಲದದ್ದರೆ ?
ಸ್ವರಕ್ಕೆ ಮಾಂತ್ರಿಕತೆ ಇಲ್ಲದಿದ್ದರೆ ?
ನಾದಕ್ಕೆ ಲಾಲಿತ್ಯ ಇಲ್ಲದಿದ್ದರೆ ?
ಇಲ್ಲದಿರುವಲ್ಲಿ ತುಂಬಬೇಕು
ಹಾಗಿದ್ದರೆ ಇರುವಲ್ಲಿ ?
ಅಕ್ಷರ ಕ್ಷಯಿಸಕೂಡದು, ಸ್ವರಕ್ಕೆ ಮಾಂತ್ರಿಕತೆ ಬೇಕು
ಬದುಕು ನಾದಮಯವಾಗಬೇಕು
ಇದೆಲ್ಲ ಆಗುವುದೆಲ್ಲಿ ?
ಶಶಿಧರ್ ಭಟ್
Subscribe to:
Post Comments (Atom)
AMERICA SUPPORTS PAK#Shashidharbhat#Sudditv#Karnatakapolitics
ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...
-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...
-
ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...
No comments:
Post a Comment