ಒಂದೆಡೆ ನಮ್ಮ ರಾಜ್ಯದ ಮುಖ್ಯಮಂತ್ರಿ ಅನಾಥರಾಗಿದ್ದಾರೆ. ಬಿಜೆಪಿ ವರಿಷ್ಠರು ಯಡಿಯೂರಪ್ಪನವರಿಗೆ ಬಾಗಿಲು ತೋರಿಸುವ ಎಲ್ಲ ಲಕ್ಷಣವೂ ಕಾಣುತ್ತಿದೆ. ಇನ್ನೊಂದೆಡೆ ದೇವೇಗೌಡರ ಕುಟುಂಬ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಲು ಕೆದರಿ ಜಗಳ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿ ವಿರೋಢಿ ಶಕ್ತಿಗಳು ಮತ್ತೆ ತಲೆ ಎತ್ತಂದಂತೆ ಮಾಡುತ್ತಿದ್ದಾರೆ.
ಕೃಷ್ಣನ ವ್ಯಕ್ತಿತ್ವದ ಹರಿವು ಅಗಾಧ. ಕೃಷ್ಣ ಪ್ರೇಮಿ. ಕೃಷ್ಣ ಈ ದೇಶದ ಮೊದಲ ರಾಜನೀತಿಜ್ನ. ಕೃಷ್ಣ ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಂಡ ಅದಕ್ಕೆ ಹೊಸ ವ್ಯಾಖ್ಯೆ ಬರೆದ ಸಮಾಜ್ ನೀತಿಜ್ನ. ಕೃಷ್ಣ ರುಕ್ಮುಣಿಯ ಆರಾಧ್ಯ. ಸತ್ಯಭಾಮೆಯ್ ಸ್ನೇಹಿತ ಜೀವದ ಗೆಳೆಯ. ದ್ರೌಪದಿಯ ಮೌನ. ರಾಧೆಯ ಪ್ರೀತಿ, ಅರ್ಜುನನ ಸಖ. ಧರ್ಮರಾಯನ ಧರ್ಮ. ಭೀಮನ ಶಕ್ತಿ. ಕೌರವರ ಧ್ವೇಷ..
ಆತ ಎಲ್ಲವೂ. ಕೃಷ್ಣಾಷ್ಟಮಿ ಸಂದರ್ಭದಲ್ಲಿ ನನ್ನ ಮಾತು.. ಕೄಷ್ಣನನ್ನು ಅರ್ಥ ಮಾಡಿಕೊಳ್ಳುವ ಒಂದು ಸಣ್ಣ ಯತ್ನ.. ಇದು ಸುದ್ದಿ ಟಿವಿಯಲ್ಲಿ ಮಾತ್ರ.
ಬಿಬಿ.ಎಸ್. ಯಡಿಯೂರಪ್ಪ ಹಠಕ್ಕೆ ಬಿದ್ದು ಮುಖ್ಯಮಂತ್ರಿಯಾದರು. ಈಗ ಬಿಜೆಪಿ ವರಿಷ್ಟರು ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಇದು ಯಡಿಯೂರಪ್ಪನವರನ್ನು ಕಟ್ಟಿ ಹಾಕುವ ಹಠ, ಯಾವ ಕಾರಣಕ್ಕೂ ಯಡಿಯೂರಪ್ಪ ತಮ್ಮ ಕೋಟೆಯನ್ನು ಕಟ್ಟಬಾರದು ಎಂಬ ಹಠ. ಹೀಗಾಗಿಯೇ ಸಚಿವ ಸಂಪುಟ ರಚನೆಗೆ ಒಪ್ಪಿಗೆ ನೀಡುವುದಕ್ಕೆ ತೆಗೆದುಕೊಂಡಿದ್ದು ಬರೋಬರಿ ೨೫ ದಿನಗಳು. ಈಗ ಖಾತೆ ಹಂಚಿಕೆಗೆ ಎಷ್ಟು ದಿನ ? ಗೊತ್ತಿಲ್ಲ. ಇದರಿಂದಾಗಿ ಯಡಿಯೂರಪ್ಪ ಹತಾಶ ದುರಂತ ನಾಯಕರಂತೆ ಕಾಣುತ್ತಾರೆ.
ಶಶಿಧರ್ ಭಟ್ ವಿಶ್ಲೇಷಣೆ. ಸುದ್ದಿ ಟಿವಿಯಲ್ಲಿ ಮಾತ್ರ
ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಕಾರದ ಆಡಳಿತ ಇದ್ದಾಗ ನಡೆದಿದೆ ಎನ್ನಲಾದ ಟೆಲಿಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುತ್ತದೆ. ಇದು ಕುಮಾರಸ್ವಾಮಿ ಅವರನ್ನು ಖೆಡ್ಡಾಕ್ಕೆ ಕೆಡವಲು ನಡೆಸಿತ್ತಿರುವ ರಾಜಕೀಯ ಷಡ್ಯಂತ್ರ. ಈ ಷಡ್ಯಂತ್ರದಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ನಾಯಕರೂ ಸೇರಿಕೊಂಡಿದ್ದಾರೆ. ಯಾಕೆಂದರೆ ಈ ರಾಜ್ಯದಲ್ಲಿ ಎಲ್ಲ ಮುಖ್ಯಮಂತ್ರಿಗಳ ಕಾಲದಲ್ಲೂ ಟೆಲಿಫೋನ್ ಕದ್ದಾಲಿಕೆ ನಡೆದಿದೆ. ಕೇಂದ್ರ ಸರ್ಕಾರವೂ ಟೆಲಿಫೋನ್ ಕದ್ದಾಲಿಕೆ ಮಾಡುತ್ತದೆ. ಹೀಗಿರುವಾಗ ಕುಮಾರಸ್ವಾಮಿ ಆಡಳಿತ ಕದ್ದಾಲಿಕೆಯನ್ನು ಮಾತ್ರ ಯಾಕೆ ಸಿಬಿಐ ತನಿಖೆ ಮಾಡಿಸುತ್ತಿದ್ದೀರಿ ? ಶಶಿಧರ್ ಭಟ್ ವಿಶ್ಲೇಷಣೆ. ಸುದ್ದಿ ಟಿವಿಯಲ್ಲಿ ಮಾತ್ರ.
ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ೬ ನೆಯ ಭಾಷಣ. ಈ ಭಾಷಣದಲ್ಲಿ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಆದರೆ ಪ್ರಮುಖವಾಗಿ ಕುಸಿಯುತ್ತಿರುವ ಆರ್ಥಿಕತೆಯ ವಿಚಾರವನ್ನು ಪ್ರಸ್ತಾಪಿಸಲಿಲ್ಲ. ಅಟೋಮೊಬೈಲ್ ಇಂಡಸ್ಟ್ರಿ ಸೇರಿದಂತೆ ಉದ್ಯಮ ರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ರೈತರ ಬಗ್ಗೆ ಮಾತನಾಡಲಿಲ್ಲ. ಆದರೆ ಭಾರತೀಯ ಸೈನ್ಯ, ವಾಯುಪಡೆ ಮತ್ತು ನೌಕಾಪಡೆ ಸೇರಿದಂತೆ ಒಬ್ಬ ಮುಖ್ಯಸ್ಥರನ್ನು ನೇಮಿಸುವ ಪ್ರಕಟಣೆ ಮಾಡಿದರು. ಇದು ಅಪಾಯಕಾರಿ. ಸೈನ್ಯ ಚುನಾಯಿತ ಸರ್ಕಾರಗಳಿಗಿಂತ ಹೆಚ್ಚು ಪ್ರಬಲವಾಗುವ ಅಪಾಯ ಇಲ್ಲಿದೆ.
ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಭಾರತಕ್ಕೆ ಜನತಾಂತ್ರಿಕ ಮೌಲ್ಯಗಳ ಬಗ್ಗೆ ಪಾಠ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇದು ಉದ್ದಟತನ. ಆರ್ ಎಸ್ ಎಸ್ ಬಗ್ಗೆಯಾಗಲೀ ಮೋದಿಯವರ ಬಗ್ಗೆ ಈ ದೇಶದ ಜನರಿಗೆ ಇರುವ ಭಿನ್ನಾಭಿಪ್ರಾಯವನ್ನು ಬಗೆ ಹರಿಸಿಕೊಳ್ಳುವ ಶಕ್ತಿ ಈ ದೇಶದ ಜನರಿಗಿದೆ. ಇದಕ್ಕೆ ಇಮ್ರಾನ್ ಖಾನ್ ಅವರ ಸಲಹೆ ನಮ ಗೆ ಬೇಕಾಗಿಲ್ಲ. ಹಾಗೆ ಈ ದೇಶದಲ್ಲಿ ಮೋದಿಯವರನ್ನು ಆರ್ ಎಸ್ ಎಸ್ ಅನ್ನು ವಿರೋಧಿಸುವವರು ಬೇರೆ ದೇಶದವರು ನಮಗೆ ಬುದ್ದಿ ಹೇಳಲು ಬಂದಾಗ ನಾವು ಪ್ರಧಾನಿ ಬೆಂಬಲಕ್ಕೆ ನಿಲ್ಲಬೇಕು. ಆಂತರಿಕವಾಗಿ ಅವರ ವಿರುದ್ದ ಹೋರಾಟ ಮಾಡಬೇಕು.