ಐ ಲವ್ ಯು ಎಂದು ಮೊದಲ ಬಾರಿ ಕೇಳಿದಾಗ ನನಗಾದ ರೋಮಾಂಚನ ನನಗಿನ್ನು ನೆನಪಿನಲ್ಲಿದೆ। ಇಂಥಹ ಒಂದು ಮಾತಿಗಾಗಿ ನಾನು ಕಾದಿದ್ದು, ಕನಸು ಕಂಡಿದ್ದು, ತಪಸ್ಸು ಮಾಡಿದ್ದು ಎಲ್ಲವೂ ನಿಜ। ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ಮಾತನ್ನು ಕೇಳುವ ತವಕದಲ್ಲಿ ಕಾತುರದಲ್ಲಿ ಬದುಕುತ್ತಿದ್ದಾಗಲೇ, ಈ ಮಾತನ್ನು ಹೇಳಲು ಒದ್ದಾಡಿದ್ದು ಒಂದೆರಡು ಬಾರಿಯಲ್ಲ। ಹಳ್ಳಿಯ ಮೂಲೆಯೊಂದರಲ್ಲಿ, ಅಡಕೆ ತೋಟ, ಗುಡ್ಡ ಬೆಟ್ಟಗಳ ನಡುವೆ ಓಡಾಡಿಕೊಂಡಿದ್ದ ನನಗೆ ಪ್ರೀತಿ ಒಂದು ಅನೂಹ್ಯವೇ। ಪ್ರೀತಿಯ ಬೆನ್ನು ಹತ್ತಿ ಹೋಗುವುದು ಒಂದು ಚಟ। ಪ್ರಾಯಶಃ ನನ್ನನ್ನು ಯಾರಾದರೂ ಪ್ರೀತಿಸಬೇಕು ಎಂದು ನಾನು ಆಸೆ ಪಟ್ಟಿದ್ದೆನೆ ಹೊರತೂ ಈ ಪ್ರೀತಿಯಲ್ಲಿ ನನ್ನದೇ ಆಯ್ಕೆ ಇರಲಿಲ್ಲವೇನೋ। ಯಾಕೆಂದರೆ ಬಾಲ್ಯದಲ್ಲಿ ವಿಚಿತ್ರ ಒಂಟಿತನದಿಂದ ಕಳೆದ ನನಗೆ ಒಂದು ಪುಟ್ಟ ಸಾಂತ್ವನ ಬೇಕಾಗಿತ್ತು। ಯಾರಾದರೂ ತಮ್ಮ ಸೀರೆಯ ಸೆರಗಿನಡಿಯಲ್ಲಿ ನನ್ನನ್ನು ಬಚ್ಚಿಟ್ಟುಕೊಳ್ಳಬೇಕಾಗಿತ್ತು। ಹಾಗೆ ನನ್ನನ್ನು ಒರಗಿಸಿಕೊಂಡು ನೀನು ಸಣ್ಣವಲ್ಲ, ದೊಡ್ಡವನು ಎಂದು ಹೇಳಬೇಕಾಗಿತ್ತು। ಹೀಗೆ ಹೇಳುವ, ನನ್ನ ಮನಸ್ಸಿನ ಜೊತೆ ಮಾತನಾಡುವ ಹೃದಯ ಸಾನ್ನಿಧ್ಯ ನನಗೆ ಬೇಕಾಗಿತ್ತು।
ನಾನು ಮಹಾಭಾರತ ಮತ್ತು ರಾಮಾಯಣವನ್ನು ಓದುತ್ತ ಬೆಳೆದವನು। ಯಕ್ಷಗಾನ , ನಾಟಕಗಳಲ್ಲಿ ಈ ಮಹಾ ಕಾವ್ಯದ ಪಾತ್ರಗಳನ್ನು ನೋಡಿ, ನನ್ನೊಳಗೆ ಅಹ್ವಾನಿಸಿಕೊಂಡು ಸಂತಸಪಟ್ಟವನು। ಈಗಲೂ ಸಹ ಮಹಾಭಾರತದ ಯಾವುದೋ ಒಂದು ಪಾತ್ರ ನಾನೇ ಎಂದು ನನಗೆ ಹಲವು ಭಾರಿ ಅನ್ನಿಸುವುದುಂಟು। ನನಗೆ ಹೆಚ್ಚು ಹತ್ತಿರವಾಗುವ ಮಹಾಭಾರತದ ಪಾತ್ರ ಎಂದರೆ ಕರ್ಣನದು। ಅರ್ಜುನನನ್ನು ಕಂಡರೆ ನನಗಾಗುವುದಿಲ್ಲ। ಸೂತಪುತ್ರನಾದ ಕರ್ಣನನ್ನು ಜರಿದಾಗ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ। ಅರ್ಜುನನ್ನು ಹೀಗಳಿದರೆ ಆತ ಮತ್ತಷ್ಟು ಶಕ್ತಿಯುತನಾಗಿ ಹೊರಹೊಮ್ಮುತ್ತಾನೆ। ನನಗೂ ಹಾಗೆ। ನನ್ನನ್ನು ಹೀಗಳಿದರೆ ನನ್ನ ಶಕ್ತಿ ಅಳಿದು ಹೋಗುತ್ತದೆ। ನಾನು ನಿಶಕ್ತನಾಗುತ್ತೇನೆ। ನನಗೆ ನೀನು ದೊಡ್ದವನು ಎಂದು ಹೇಳುವವರು ಬೇಕು। ಹಾಗೆ ಹಲವರನ್ನು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರೂ ನನಗೆ ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವವರಿಗಾಗಿ ಕಾದಿದ್ದು, ಅದೆಷ್ಟು ಕಾಲ ?
ಆದರೆ ಈ ಪ್ರೀತಿಯ ಜಗತ್ತು, ಇಲ್ಲಿ ನಮ್ಮ ಸಮಸ್ಯೆ ಎಂದರೆ, ನಾವು ಪ್ರೀತಿಯನ್ನು ಅಪೇಕ್ಷಿಸುತ್ತೇವೆಯೇ ಹೊರತೂ ಪ್ರೀತಿಯನ್ನು ನೀಡುವುದಿಲ್ಲ ಎಂಬುದು ನನಗೆ ಅರ್ಥವಾಗಿದ್ದು ಇತ್ತೀಚೆಗೆ॥ ನಮ್ಮನ್ನು ಪ್ರೀತಿಸುವರಿಗಾಗಿ ನಾವು ಕಾಯುತ್ತೇವೆ, ಹಪಹಪಿಸುತ್ತೇವೆ, ಆದರೆ ನಾವು ಯಾರನ್ನೂ ಪ್ರೀತಿಸುವುದಿಲ್ಲ। ನಮಗೆ ನಮ್ಮನ್ನು ಪ್ರೀತಿಸಿಕೊಳ್ಳುವುದು ಇಷ್ಟವೇ ಹೊರತೂ ಬೇರೆಯವರನ್ನು ಪ್ರೀತಿಸುವುದಲ್ಲ। ಪ್ರೀತಿ ಎಂದರೆ ಅದು ಪಡೆಯುವುದಲ್ಲ, ಅದನ್ನು ನೀಡುವುದು ಎಂಬ ಮಾತು ನಿಜ। ಪ್ರೀತಿಯನ್ನು ನೀಡುವುದರಲ್ಲಿ ಸಂತೋಷವಿದೆ। ಪಡೆಯುವುದರಲ್ಲಿ ಅಲ್ಲ। ಯಾಕೆಂದರೆ ಪಡೆದಿದ್ದನ್ನು ಸಂಭಾಳಿಸುವುದು ಕಷ್ಟ।ಪ್ರೀತಿ ನಮ್ಮಿಂದ ಎಲ್ಲವನ್ನೂ ಅಪೇಕ್ಷಿಸುತ್ತದೆ। ಪ್ರೀತಿ ಅಪೇಕ್ಷಿಸಿದ್ದನ್ನು ನೀಡುತ್ತ ಅದನ್ನು ಮಗುವಿನ ಹಾಗೆ ಸಂಬಾಳಿಸಬೇಕು। ಅದಿಲ್ಲದಿದ್ದರೆ, ಪ್ರೀತಿ ಆ ಕ್ಷಣವೇ ಕಾಲು ಕಿತ್ತು ಬಿಡುತ್ತದೆ। ಇಲ್ಲವೆ ಹಠ ಮಾಡುತ್ತದೆ। ಬೀದಿ ರಂಪ ಮಾಡಿ, ರಚ್ಚೆ ಹಿಡಿದು ಕುಳಿತು ಬಿಡುತ್ತದೆ। ಪಡೆದ ತಕ್ಷಣ ಅದನ್ನು ಉಳಿಸಿಕೊಳ್ಳುವ ಸಮಸ್ಯೆ ಪ್ರಾರಂಭವಾಗುತ್ತದೆ। ಹಾಗೆ ಕಳೆದುಕೊಳ್ಳುವ ಭಯದಲ್ಲೇ ನಾವು ಬದುಕುತ್ತಿರುತ್ತೇವೆ। ಯಾವಾಗಲೂ ಕಳೆದುಕೊಳ್ಳುವ ನೋವಿಗಿಂತ ಪಡೆಯದಿರುವ ಬೇಸರವೇ ಹೆಚ್ಚು ಒಳ್ಳೆಯದು ಎಂದು ನನಗೆ ಅನೇಕ ಸಲ ಅನ್ನಿಸುವುದುಂಟು। ಈ ಕಾರಣಕ್ಕಾಗಿಯೇ ಪ್ರೀತಿಯನ್ನು ಬಯಸುವುದಕ್ಕಿಂತ ನೀಡುವುದು ಒಳ್ಳೆಯದು ಎಂಬ ತೀರ್ಮಾನಕ್ಕೆ ನಾನು ಬಂದಿದ್ದು। ಯಾಕೆಂದರೆ ನೀಡುವವನಲ್ಲಿ ಸಣ್ಣ ಅಹಮಿಕೆ ಇರುತ್ತದೆ। ನೀಡುವವನ ಕೈ ಮೇಲಿರುವ ಹಾಗೆ। ನೀಡುವವನಿಗೆ ಕಳೆದುಕೊಳ್ಳುವ ಭಯ ಇರುವುದಿಲ್ಲ। ಹಾಗೆ ಕಳೆದುಕೊಂಡ ನೋವು ಅವನನ್ನು ಬಾಧಿಸಲಾರದು। ಈ ಕಾರಣಗಳಿಂದಾಗಿಯೇ ಪ್ರೀತಿಯನ್ನು ಪಡೆಯುವದರಲ್ಲಿ ನನಗೆ ಆಸಕ್ತಿ ಇಲ್ಲ। ಪ್ರೀತಿಯನ್ನು ನೀಡುವುದರಲ್ಲಿ ಮಾತ್ರ ನನಗೆ ಆಸಕ್ತಿ। ಹೀಗೆ ಪ್ರೀತಿ ನೀಡುವಲ್ಲಿ ನಾನೇ ಸಾರ್ವಬೌಮ। ನನನ್ನು ಯಾರೂ ಪ್ರಶ್ನಿಸಲಾರು। ಹಾಗೇ ಪ್ರೀತಿ ಪಡೆಯುವಲ್ಲಿ ಇರುವ ಪೈಪೋಟಿ, ಪ್ರೀತಿ ನೀಡುವಲ್ಲಿ ಇಲ್ಲ। ಹೀಗಾಗಿ ನಾನು ಯಾರಿಂದಲೂ ಪ್ರೀತಿಯನ್ನು ನಾನು ಅಪೇಕ್ಷಿಸಲಾರೆ। ಪ್ರೀತಿಯನ್ನು ಎಲ್ಲರಿಗೂ ನೀಡುವುದು ಮಾತ್ರ ನನಗೆ ಇಷ್ಟ.
Subscribe to:
Post Comments (Atom)
ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..
ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...

-
ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹ...
-
After the rain has passed, the rain drops continue to fall, the cloud cover. It is not possible to say when it will rain again.. thunder and...
-
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಹಳಷ್ಟು ಜನ ನನಗೆ ಫೋನ್ ಮಾಡುತ್ತಲೇ ಇದ್ದಾರೆ.. ಸಾರ್ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ನಿಮಗೆ ಲಾಟರಿ ಹೊಡೆದಂಗೆ,, ಸಾರ್ ...
1 comment:
nija, navu preeti andukondiruvudu bysuvudee hechchu, needuvudu bahala kadime.. padedaddu kaduvudu jasti...kottaddu manassaralisuvudu jasti...aadre, preeti kodu kolluvikeyannu miri beleyuva pari matra adbhuta....
Post a Comment