Saturday, March 6, 2010

ನಿತ್ಯಾನಂದ ಸ್ವಾಮಿ ಪ್ರಕರಣ; ಕೆಲವೊಂದು ಸಂಶಯಗಳು...!

ಬೆಂಗಳೂರು ಹೊರವಲಯದಲ್ಲಿ ಬಿಡಾರ ಹೂಡಿದ್ದ ನಿತ್ಯಾನಂದ ಸ್ವಾಮಿಯ ಮಾನ ಹರಾಜಾಗಿದೆ. ಆತ ಮಹಿಳೆಯೊಬ್ಬಳ ಜತೆ ಬೆಡ್ ರೂಂನಲ್ಲಿ ನಡೆಸಿದ ಎನ್ನಲಾದ ದೃಶ್ಯಗಳು ಟೀವಿ ಸುದ್ದಿ ವಾಹಿನಿಗಳಲ್ಲಿ ದಿನವಿಡಿ ಪ್ರಸಾರವಾಗಿವೆ. ಅವರ ಆಶ್ರಮ ಸಮೀಪ ಇರುವ ಜನ ರೊಚ್ಚಿಗೆದ್ದು ಆಶ್ರಮವನ್ನು ನಾಶಪಡಿಸಿದ್ದಾರೆ.
ಈ ದೃಶ್ಯವನ್ನು ಮೊದಲು ಪ್ರಸಾರ ಮಾಡಿದ್ದು ತಮಿಳುನಾಡಿನ ಸನ್ ಸುದ್ದಿ ವಾಹಿನಿ. ಇದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಕುಟುಂಬಕ್ಕೆ ಸೇರಿದ್ದು. ನನಗೆ ನೆನಪಿರುವ ಹಾಗೆ ಸನ್ ಎಂದೂ ಸಹ ಈ ರೀತಿ ಸ್ಟಿಂಗ್ ಆಪರೇಶನ್ ನಡೆಸಿಲ್ಲ. ಅಂದರೆ ನಿತ್ಯಾನಂದ ಸ್ವಾಮಿಯ ಅನಾಚಾರವನ್ನು ಬಯಲಿಗೆಳೆಯಲು ಸನ್ ನೆಟ್ ವರ್ಕ್ ವಿಶೇಷ ಕಾಳಜಿಯನ್ನು ಒಹಿಸಿತು. ಇದೂ ಸಹ ಸನ್ ನೆಟ್ ವರ್ಕ್ ನ ಅಘೋಷಿತ ನೀತಿಗೆ ವಿರುದ್ಧವಾಗಿ. ಇದನ್ನೆಲ್ಲ ಗಮನಿಸಿದರೆ, ಸಣ್ ನೆಟ್ ವರ್ಕ್ ನಿತ್ಯಾನಂದ ಸ್ವಾಮಿಯ ಅನಾಚಾರವನ್ನು ಬಯಲಿಗೆಳೆಯಲು ಬೇರೆಯದೇ ಆದ ವಿಶೇಷ ಕಾರಣಗಳು ಇದ್ದಿರಬೇಕು.
ಸನ್ ನೆಟ್ ವರ್ಕ್ ಇದನ್ನು ಪ್ರಸಾರ ಮಾಡಿದ ಮರುದಿನ ಕನ್ನಡದ ಸುದ್ದಿ ವಾಹಿನಿಗಳು ಸನ್ ನೆಟ್ ವರ್ಕ್ ನ ದೃಶ್ಯಗಳನ್ನು ಎರವಲು ಪಡೆದು ಚಚ್ಚಿ ಬಿಸಾಕಿದವು. ಈ ವಿಚಾರ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ಸರ್ಕಾರ ನೀಡಿತು. ನಿತ್ಯಾನಂದ ಸ್ವಾಮಿ ಸಂಪೂರ್ಣವಾಗಿ ಬೆತ್ತಲಾಗಿ ತಲೆ ಮರೆಸಿಕೊಂಡರು.
ಈಗ ಈ ದೃಶ್ಯಗಳತ್ತ ಗಮನ ಹರಿಸಿ.
ಪ್ರಸಾರವಾದ ದೃಶ್ಯಗಳಲ್ಲಿ ನಿತ್ಯಾನಂದ ಸ್ವಾಮಿ ಮಂಚದ ಮೇಲೆ ಮಲಗಿದ್ದಾನೆ. ಅದೂ ಸಹ ಆತನಲ್ಲಿ ಉದ್ವೇಗವಾಗಲೀ ಸೆಳೆತವಾಗಲಿ ಕಾಣುತ್ತಿಲ್ಲ. ಯಾವುದೋ ಅಮಲು ಪದಾರ್ಥವನ್ನು ಆತ ಸೇವಿಸಿದಂತೆ, ನಿತ್ರಾಣನಾದಂತೆ ಕಾಣುತ್ತದೆ. ಅಲ್ಲಿ ಒಬ್ಬ ಚೂಡಿದಾರ್ ಧರಿಸಿದ ಹುಡುಗಿ ಅತ್ತಿತ್ತ ಓಡಾಡುತ್ತಾಳೆ. ಆತನಿಗೆ ಕುಡಿಯುವುದಕ್ಕೆ ಏನನ್ನೋ ಕೊಡುತ್ತಾಳೆ. ನಿತ್ಯಾನಂದ ಅದನ್ನು ಕುಡಿಯುತ್ತಾಳೆ. ನಂತರ ಯಾವುದೋ ಮಾತ್ರೆಯೊಂದನ್ನು ಅವನಿಗೆ ಕೊಡುತ್ತಾಳೆ. ಆತ ಮಾತ್ರೆಯನ್ನು ಬಾಯಿಗೆ ಹಾಕಿಕೊಳ್ಳುತ್ತಾನೆ. ನಂತರ ಆಕೆಯೇ ಮಂಚವೇರುತ್ತಾಳೆ. ಆತನಪಕ್ಕದಿಂದ ಮೈಮೇಲಿ ಏರಿ ಹೋಗುತ್ತಾಳೆ. ಆತನ ಒಂದು ಕೈ ಅವಳ ಬೆನ್ನಮೇಲೆ ಬರುತ್ತದೆ. ನಂತರ ತನ್ನ ಎಡ ಗಾಲನ್ನು ಎತ್ತಿ ಆಕೆಯ ದೇಹದ ಮೇಲೆ ಹಾಕುತ್ತಾನೆ.
ಇನ್ನೊಬ್ಬಳು ಸೀರೆ ಒಟ್ಟವಳು. ಅವಳು ಚೂಡಿದಾರ್ ಧರಿಸಿದವಳೇ ಅಥವಾ ಬೇರೆಯವಳೇ ಎಂಬುದು ಗೊತ್ತಾಗುವುದಿಲ್ಲ. ಅವಳೂ ಸಹ ತಾನಾಗಿಯೇ ಸ್ವಾಮಿಒಯ ಮೇಲೆ ಏರಿ ಹೋಗುತ್ತಾಳೆ.
ಈ ದೃಶ್ಯಾವಳಿಗಳನ್ನು ನೋಡಿದಾಗ ಕೆಲವೊಂದು ಸಂಶಯಗಳು ಬರುತ್ತವೆ. ನಲವತ್ತರ ಹರೆಯದ ಸ್ವಾಮಿ ತಾನಾಗಿಯೇ ಆ ಯುವತಿಯನ್ನು ಕರೆಸಿಕೊಂಡಿದ್ದರೆ, ನಿರಾಸಕ್ತಿಯಿಂದ ಹೀಗೆ ಮಂಚದ ಮೇಲೆ ಮಲಗಿರುತ್ತಿದ್ದನೆ ? ತಾನಾಗಿಯೇ ಮೂವ್ ಮಾಡುತ್ತಿರಲಿಲ್ಲವೆ ?
ಯಾಕೆ ಆತ ಯಾವುದೋ ಅಮಲು ಪದಾರ್ಥವನ್ನು ಸೇವಿಸಿದಂತೆ ಏಕಿದ್ದ ? ಆತ ಗುಂಡು ಹಾಕಿದ್ದರೆ ಇನ್ನೂ ಉಮೇದಿಯಿಂದ ರತಿ ಕ್ರೀಡೆಯಲ್ಲಿ ತೊಡಗಬಹುದಿತ್ತು. ಆದರೆ, ಆತ ತೆಗೆದುಕೊಂಡ ಅಮಲು ಪದಾರ್ಥ ಡ್ರಗ್ಸ್ ಆಗಿದ್ದರೆ ಮಾತ್ರ ಹೀಗೆ ನಿತ್ರಾಣವಾಗಿ ಬಿಳಲು ಸಾಧ್ಯ ಅಲ್ಲವೆ ?
ಆತನಿಗೆ ಕುಡಿಯಲು ಯುವತಿ ಕೊಟ್ಟಿರುವುದು ಏನಿರಬಹುದು ? ಆತನಿಗೆ ಆಕೆ ಯಾಕೆ, ಯಾವ ಮಾತ್ರೆಯನ್ನು ಕೊಟ್ಟಿರಬಹುದು ?
ಈ ಪ್ರಶ್ನೆಗಳ ಬಗ್ಗೆ ಮಾಧ್ಯಮದಲ್ಲಿ ಚರ್ಚೆ ನಡೆಯಬೇಕಿತ್ತು. ಯಾಕೆಂದರೆ ಇಲ್ಲಿ ಸಂಶಯಪಡುವುದಕ್ಕೆ ಹಲವು ಕಾರಣಗಳಿವೆ. ಇಂಥಹ ಸಂಶಯಗಳು ಸತ್ಯವನ್ನು ಅನಾವರಣಗೊಳಿಸಲು ಸಹಾಯ ಮಾಡುತ್ತವೆ. ಮಾಧ್ಯಮಗಳು ಮಾಡಬೇಕಾದ್ದು ಇದೇ.
ಈ ನಡುವೆ ತಮಿಳುನಾಡಿನಲ್ಲಿ ಹಬ್ಬಿರುವ ಸುದ್ದಿಗಳ ಪ್ರಕಾರ (ಗಾಳಿ ಸುದ್ದಿ ಇದ್ದರೂ ಇರಬಹುದು) ತಮಿಳುನಾಡಿನ ಅಧಿಕಾರಸ್ಥರಿಗೂ ಈ ಸ್ವಾಮಿಗೂ ಜಗಳ ಇದೆಯಂತೆ. ಅದು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ನಿತ್ಯಾನಂದನನ್ನು ಟ್ರಾಫ್ ಮಾಡಲಾಯಿತು ಎಂದೂ ಹೇಳಲಾಗುತ್ತಿದೆ.
ಮಾಧ್ಯಮವನ್ನು ಸೆಕ್ರೇಡ್ ಕೌ ಎಂದು ಪರಿಗಣಿಸಲಾಗಿರುವ ಈ ದೇಶದಲ್ಲಿ ಅದು ಪವಿತ್ರ ಹಸುವಾಗಿಯೇ ಇರಬೇಕು ಎಂದು ಬಯಸುವವನು ನಾನು. ಬದಲಾಗಿ ಪಕ್ಕದ ಮನೆ ಬೇಲಿ ಹಾರುವ ಊರಿಗೆ ಬಿಟ್ಟ ಹೋರಿ ಅದಾಗದಿರಲಿ ಎಂದು ನಾನು ಆಶಿಸುತ್ತೇನೆ.
ಇಲ್ಲಿ ನಾನು ನಿತ್ಯಾನಂದ ಸ್ವಾಮಿಯನ್ನಾಗಲೀ ಬೇರೆ ಯಾವುದೇ ಸ್ವಾಮಿಯನ್ನಾಗಲೀ ಸಮರ್ಥಿಸುತ್ತಿಲ್ಲ. ಬಹುತೇಕ ಕಾವಿಧಾರಿಗಳು ತಮ್ಮ ಆಶ್ರಮಗಳನ್ನು ಲೈಂಗಿಕೆ ಚಟುವಟಿಕೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇದರ ನಡುವೆಯೂ ಸಂತರೂ, ನಿಜವಾದ ಸನ್ಯಾಸಿಗಳು ನಮ್ಮ ನಡುವೆ ಇದ್ದಾರೆ. ಇದನ್ನು ನಾವು ಮರೆಯಬಾರದು.
ನಿತ್ಯಾನಂದ ಸ್ವಾಮಿ ಪ್ರಕರಣದಲ್ಲಿ ಹೀಗೆ ಸಂಶಯಕ್ಕೆ ಕಾರಣವಾದ ಕೆಲವೊಂದು ಅಂಶಗಳಿವೆ. ಇದು ಆತ ಟ್ರಾಪ್ ಆಗಿದ್ದರೂ ಆಗಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಆದರೆ ಈಗಾಗಲೇ ಆತ ಅಪರಾಧಿ ಎಂದು ಜನ ನಂಬಿಯಾಗಿದೆ. ಆತನ ಮೇಲೆ ಪ್ರಹಾರ ಮಾಡಿಯಾಗಿದೆ. ಆತ ಈಗ ಜನರ ಮುಂದೆ ಬಂದು ನಿಲ್ಲುವ ಸ್ಥಿತಿಯಲ್ಲೂ ಇಲ್ಲ. ಒಂದೊಮ್ಮೆ ಆತ ಟ್ರಾಪ್ ಆಗಿದ್ದರೆ ? ನಿಜವಾಗಿ ಈ ಕೃತ್ಯವನ್ನು ಯಾರದೂ ಷಡ್ಯಂತ್ರದ ಭಾಗವಾಗಿ, ಮಾದಕ ವಸ್ತುವಿನ ಪ್ರಭಾವದಲ್ಲಿ ಮಾಡಿದ್ದರೆ ?
ಏನೂ ಪ್ರಯೋಜನ ಇಲ್ಲ. ಮಾಧ್ಯಮಗಳು ಅವನ ಬಗ್ಗೆ ತೀರ್ಪು ನೀಡಿ, ಮಾನ ಹರಾಜು ಮಾಡಿ ಮುಗಿದಿದೆ. ಇನ್ನು ಆತ ಮಾಡಿರಲಿ ಮಾಡದೇ ಇರಲಿ, ಮಾಡಿದ್ದೆ ಎಂದು ಸುಮ್ಮನೆ ಶಿವ ನಾಮ ಜಪ ಮಾಡುವುದೊಂದೇ ಈ ಸ್ವಾಮಿಗೆ ಉಳಿದ ಮಾರ್ಗ.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...