Sunday, December 25, 2022

ಪ್ರೀತಿಯ ಅಂಗಡಿ ತೆರೆಯುವ ಮಾತನಾಡುವಾಗಲೇ ಇಲ್ಲಿ ಈ ಘಟನೆ ನಡೆದೇ ಹೋಯಿತಲ್ಲ !

 


ಈ ಕೊಲೆ ಮತ್ತು ರಕ್ತ ಪಾತ ನಿಲ್ಲುವುದೇ ಇಲ್ಲವೆ ?


ನಿನ್ನೆ ಈ ಘಟನೆ ನಡೆದುಹೋಯಿತು. ತನ್ನ ಅಂಗಡಿಯಲ್ಲಿದ್ದ ಮಧ್ಯ ವಯಸ್ಸಿನ ವ್ಯಕ್ತಿ ತಾನು ಈ ರೀತಿ ದಾಳಿಗೆ ಒಳಗಾಗಬಹುದು ಎಂದು ಅಂದುಕೊಂಡಿರಲಿಕ್ಕಿಲ್ಲ.   ತನ್ನ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಅವನ ಮೇಲೆ ಮೂವರು ಮುಸುಕುದಾರಿಗಳು ದಾಳಿ ಮಾಡಿದರು. ಚಾಕುವಿನಿಂದ ಇರಿದರು. ಗಾಯಗೊಂಡ ಈ ಮಧ್ಯ ವಯಸ್ಸಿನ ವ್ಯಕ್ತಿಯನ್ನು ಅಕ್ಕಪಕ್ಕದ ಜನ ಆಸ್ಪತ್ರೆಗೆ ಸೇರಿಸಿದರು... ಆಗ ಅವನ ಸ್ಥಿತಿ ಗಂಭೀರವಾಗಿತ್ತು.. ಜೀವ ಮರಣದ ನಡುವಿನ ಹೋರಾಟ..

ಇದು ವೈಯಕ್ತಿಕ ಧ್ವೇಷದಿಂದ ನಡೆದ ಘಟನೆಯೇ ಅಥವಾ ಇದರ ಹಿಂದೆ ಕೋಮು ದ್ವೇಷದ ನೆರಳು ಇದೆಯೇ ?

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ..

ಆದರೆ ಸರತ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ..ಪೊಲೀಸರು ಈ ಪ್ರದೇಶಗಳಲ್ಲಿ ನಿಶೇಧಾಜ್ನೆಯನ್ನು ವಿಧಿಸಿದ್ದಾರೆ..

ಈ ಹತ್ಯೆ ಪ್ರಕರಣದ ಬಗ್ಗೆ ಯಾವ ಮಾಧ್ಯಮದಲ್ಲೂ ಗಂಭೀರ ಚರ್ಚೆ ನಡೆಯುತ್ತಿಲ್ಲ.. ರಾಜ್ಯದ ಜನ ಇಂತಹ ಘಟನೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನೊಂದು ಕೊಲೆಯಾಯಿತಂತೆ ಎಂದು ಜನ ಸುಮ್ಮನಾಗುವ ಸ್ಥಿತಿ. ಯಾಕೆಂದರೆ ಹತ್ಯೆ ಎನ್ನುವುದು ಯಾರನ್ನೂ ತಲ್ಲಣಗೊಳಿಸುತ್ತಿಲ್ಲ.. ಈತ ಅಮಾಯಕನೋ ಅಲ್ಲವೂ ಎಂಬುದು ಕೂಡ ಮುಖ್ಯವಾಗುತ್ತಿಲ್ಲ.

ಸತ್ತವರು ಯಾವ ಕೋಮಿನವರು ಎಂಬುದನ್ನು ನೋಡಿಕೊಂಡು ಜನ ಮತ್ತು ರಾಜಕಾರಣಿಗಳು ಪ್ರತಿಕ್ರಿಯೆ ನೀಡಬೇಕೋ ಬೇಡವೋ ಎಂದು ತೀರ್ಮಾನಿಸುತ್ತಾರೆ.. ಇಂತಹ ಹತ್ಯೆ ಮತ್ತು ಕೊಲೆ ಯತ್ನದ ನಂತರ ರಾಜಕಾರಣ ಪ್ರಾರಂಭವಾಗುತ್ತದೆ.. ಸತ್ತವನು ಬಹುಸಂಖ್ಯಾತನಾಗಿದ್ದರೆ ಮಂತ್ರಿಗಳು ಮತ್ತು ಶಾಸಕರು ಅವನ ಮನೆಗೆ ಭೇಟಿ ನೀಡುತ್ತಾರೆ. ಸರ್ಕಾರ ಸಹಾಯ ನೀಡಲು ಮುಂದಾಗುತ್ತದೆ. ಸಾರ್ವಜನಿಕರು ಅವರ ಮನೆಗೆ ಹೋಗಿ ಸಂತಾಪ ಹೇಳಿ ವಾಪಸ್ ಬರುತ್ತಾರೆ. ನಂತರ ಸಾರ್ವಜನಿಕ ಭಾಷಣಗಳಿಗೆ ಹೊಸ ಸರಕು ದೊರಕುತ್ತದೆ.. ಬಹುಸಂಖ್ಯಾತನ ಹತ್ಯೆ ಮಾಡಿದವನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ತನಿಖೆ ನಡೆಸಿ ಅರೋಪಿತನ ಬಾಯಿ ಬಿಡೀಸುವ ಮೊದಲು ಮಾಧ್ಯಮಗಳು ಈ ಆರೋಪಿತನಿಗೆ ಉಗ್ರಗಾಮಿ ಸಂಘಟನೆಗಳ ಸಂಪರ್ಕ ಇದೆ ಎಂದು ವಿವರಗಳನ್ನು ನೀಡಲು ಪ್ರಾರಂಬಿಸುತ್ತಾರೆ. ಆತನಿಗೆ ವಿದೇಶಗಳಿಂದ ಹಣ ಬಂದಿತ್ತು ಎಂದೂ ಮಾಧ್ಯಮಗಳೇ ಪ್ರಕರಣದ ತೀರ್ಪು ನೀಡಿಬಿಡುತ್ತಾರೆ,

ದಕ್ಷಿಣ ಕನ್ನಡ ಜಿಲ್ಲೆ ಈಗ ಕೋಮು ರಾಜಕಾರಣದ ಕುಲುಮೆಯಾಗಿದೆ.. ಇಂತಹ ಹತ್ಯೆ ನಡೆಯುವುದು ಸಾಮಾನ್ಯವಾಗಿದೆ.. ಹಾಗೆ ರಾಜಕಾರಣಿಗಳು ಮತ್ತು ಜನ ನೀಡುವ ಪ್ರತಿಕ್ರಿಯೆಗಳೂ ಏಕರೂಪವಾಗಿರುತ್ತದೆ.

ಒಬ್ಬ ಹಿಂದೂ ಹತ್ಯೆಯಾದರೆ ಆತ ಹಿಂದೂ ಧರ್ಮಕ್ಕಾಗಿ ಪ್ರಾಣ ನೀಡಿದ ಹುತಾತ್ಮನಾಗುತ್ತಾನೆ.. ಒಬ್ಬ ಮುಸ್ಲೀಂ ಹತ್ಯೆಯಾದರೆ ಆತ ಉಗ್ರಗಾಮಿ ಸಂಘಟನೆಗಳ ಸಂಪರ್ಕವಿರುವ ದೇಶದ್ರೋಹಿಯಾಗಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಪೋಲಿಸರು ಆಳುವ ಸರ್ಕಾರ ಅನುಕೂಲವಾಗುವ ರೀತಿಯಲ್ಲಿ ಮಾಧ್ಯಮಗಳಿಗೆ ಸುದ್ದಿಯನ್ನು ಪ್ಲಾಂಟ್ ಮಾಡುತ್ತಾರೆ.. ನಮ್ಮ ಮಾಧ್ಯಮ ದೇಶಭಕ್ತರ ಪಡೆಯ ಭಾಗವಾಗಿ ಈ ಸುದ್ದಿಯನ್ನು ಮಾರಾಟ ಮಾಡಲು ಪ್ರಾರಂಭಿಸುತ್ತವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಹತ್ಯೆ ಪ್ರಕರಣಗಳು ಇದೇ ಮಾದರಿಯಲ್ಲಿ ನಡೆಯುತ್ತವೆ.. ಹಾಗೆ ಪೋಲಿಸರು ಮತ್ತು ರಾಜಕಾರಣಿಗಳು ಒಂದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ..

ಪ್ರವೀಣ್ ನಿಟ್ಟಾರು ಆಗಲೀ ಶಿವಮೊಗ್ಗದ ಆ ಯುವಕನಾಗಲಿ ಹತ್ಯೆಯಾಗಬಾರದಿತ್ತು.. ಆದರೆ ಈ ಹತ್ಯೆ ಪ್ರಕರಣ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ರಾಜಕೀಯ ಲಾಭವನ್ನು ತಂದುಕೊಟ್ಟಿತು.. ದೇಶಭಕ್ತಿ ಮತ್ತು ದೇಶದ್ರೋಹದ ಭ್ರಮಾತ್ಮಕ ಬಂದೀಖಾನೆಯಿಂದ ಹೊರ ಬರುತ್ತಿದ್ದ ಸಂದರ್ಭದಲ್ಲೇ ಈ ಹತ್ಯೆ ಪ್ರಕರಣಗಳು ನಡೆದವು.. ಹೀಗಾಗಿ ಜನ ಮತ್ತೆ ಈ ಭ್ರಮಾತ್ಮಕ ಜಗತ್ತಿನಲ್ಲಿ ಬಂದಿಯಾದರು.. ಸರ್ಕಾರದ ವೈಫಲ್ಯವನ್ನು, ಸರ್ಕಾರದ ಮೇಲಿನ ಆರೋಪಗಳನ್ನು ಜನ ಮರೆತು ಧರ್ಮ ರಾಜಕಾರಣಕ್ಕೆ ಬಲಿಯಾದರು.. ಇದು ಸಾಮಾನ್ಯ ಜನರಿಗೆ ಅರ್ಥವಾಗಲೇ ಇಲ್ಲ. ಅರ್ಥವಾಗುವುದೂ ಇಲ್ಲ..

ಈ ಹಿಂದೂ ರಕ್ಷಣೆಯ ಹೊಸ್ ನೆರೆಟೀವ್ ಹೇಗಿದೆ ಎಂದರೆ ಸರ್ಕಾರ ಕೂಡ ಹತ್ಯಾ ಪ್ರಕರಣಗಳಲ್ಲಿ ವಿಭಿನ್ನ ಮಾನದಂಡಗಳನ್ನು ಬಳಸುತ್ತದೆ.. ಹಿಂದೂ ಹತ್ಯೆ ಪ್ರಕರಣಗಳನ್ನು ನೋಡುವ ರೀತಿ ಒಂದು ರೀತಿ ಇದ್ದರೆ ಮುಸ್ಲೀಂ ಹತ್ಯೆ ಪ್ರಕರಣಗಳ ಮಾನದಂಡ ಬೇರೆಯಾಗಿರುತ್ತದೆ.. ಹತ್ಯೆಯಾದ ಹಿಂದೂ ಮನೆಗೆ ದೌಡಾಯಿಸುವ ಸರ್ಕಾರ ಮತ್ತು ಬಿಜೆಪಿ ಸಚಿವ ಶಾಸಕರು ಮುಸ್ಲೀಂ ಹತ್ಯೆಯಾದರೆ ಅವನ ಮನೆಯ ಕಡೆ ಮೂಸಿ ಕೂಡ ನೋಡುವುದಿಲ್ಲ್ಲ.. ಆತ ಕೇವಲ ಅನಾಥ ಹೆಣದಂತಾಗಿಬಿಡುತ್ತಾನೆ.. ಈ ರೀತಿ ತಾರ ತಮ್ಯ ನೀತಿಯನ್ನು ಅನುಸರಿಸುವ ಸರ್ಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವುದು ಮಾತ್ರವಲ್ಲ ತನ್ನ ಆತ್ಮವನ್ನೇ ಮಾರಿಕೊಂಡಂತೆ ಕಾಣುತ್ತದೆ..

ಕಳೆದ ಎರಡು ದಶಕಗಳ ಈಚೇಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯಾ ಪ್ರಕರಣಗಳ ಅಂಕಿಅಂಶಗಳನ್ನು ಗಮನಿಸಿದರೆ ಬಹುಸಂಖ್ಯಾಕ ರಾಜಕಾರಣ ಹೇಗೆ ಸಮಾನತೆ ಮತ್ತು ಸಮಾನ ಹಕ್ಕುಗಳ ತತ್ವಕ್ಕೆ ವಿರೋಧವಾಗಿದೆ ಎಂಬುದನ್ನು ಗಮನಿಸಬಹುದು.. ಹಿಂದೂ ಹತ್ಯಾ ಪ್ರಕರಣಗಳು ಕೇವಲ ರಾಜಕೀಯ ಅಸ್ತ್ರವಾಗಿ ಮಾತ್ರ ಬಳಕೆಯಾಗಿವೆ.. ಬಹುಸಂಖ್ಯಾಕ ಹಿಂದೂಗಳ ಮನಸ್ಸಿನಲ್ಲಿ ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿಯಲ್ಲಿ ಗಟ್ಟಿಗೊಳಿಸುವಲ್ಲಿ ಸಫಲವಾಗಿವೆ. ಹಾಗೂ ಹಿಂದೂ ಮತ್ತು ಮುಸ್ಲೀಮ್ ಪ್ರತ್ಯೇಕವಾದವನ್ನು ಬಲಪಡಿಸಿವೆ.. ಜೊತೆಗೆ ಹಲವು ಪ್ರಕರಣಗಳಲ್ಲಿ ರಆಜಕೀಯ  ಲಾಭ ಪಡೆದುಕೊಂಡ ಮೇಲೆ ಪ್ರಕರಣದ ಹಿಂದಿನ ನಿಗೂಢ ಸತ್ಯ ಬಯಲಾಗಿದೆ. ಇದಕ್ಕೆ ಉದಾಹರಣೆಯಾಗಿ ಪರೇರಾಜಕೀಯ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನೇ ನೋಡಬಹುದು.. ಮುಸ್ಲೀಂ ಅಲ್ಪಸಂಖ್ಯಾತರು ಮೇಸ್ತಾನನ್ನು ಕೊಲೆ ಮಾಡಿದ್ದಾರೆ ಎಂಬಾ ಆರೋಪ ಸುಳ್ಳಾಯಿತು.. ಆದರೆ ಈ ಸತ್ಯ ಹೊರಬರುವುದಕ್ಕೆ ಮೊದಲೇ ಬಿಜೆಪಿಗೆ ಬಯಸಿದ್ದ ಲಾಭ ದೊರಕಿಯಾಗಿತ್ತು..

ನಿನ್ನೆ ಮುಸ್ಲೀಮ್ ಒಬ್ಬನ ಹತ್ಯ ಪ್ರಕರಣ ನಡೆಯಿತು.. ಇದರ ರಾಜಕೀಯ ಲಾಭ ಯಾರಿಗೆ ದೊರಕುತ್ತದೆ ? ಸತ್ಯ ವ್ಯಕ್ತಿ ಬಡಪಾಯಿ ಆಗಿರಬಹುದು ಅಥವಾ ವೈಯಕ್ತಿಕ ಕಾರಣದಿಂದಲೂ ಈ ಪ್ರಕರಣ ನಡೆದಿರಬಹುದು.. ಆದರೆ ಇದು ಬಹುಸಂಖ್ಯಾಕರನ್ನು ಒಗ್ಗೂಡೀಸಲು ಬಿಜೆಪಿ ಸಹಾಯ ಮಾಡುವುದು ಸತ್ಯ..

ಚುನಾವಣೆ ಬರುವ ಹೊತ್ತಿಗೆ ಇನ್ನಷ್ಟು ಹತ್ಯೆಗಳು ನಡೆಯದಿರಲಿ ಎಂದು ಮಾತ್ರ ನಾವು ಆಶಿಸಬಹುದು.. ಆದರೆ ಇಂದಿನ ಕೋಮುವಾದಿ ರಾಜಕಾರಣದಲ್ಲಿ ಹೀಗೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ..

ಕೊನೆಯದಾಗಿ ರಾಹುಲ್ ಗಾಂಧಿ ಹೇಳಿದ ಮಾತು ಮತ್ತೆ ಮತ್ತೇ ನೆನಪಾಗುತ್ತದೆ.

ಇದು ದ್ವೇಷದ ಮಾರುಕಟ್ಟೆ. ಇಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಾಗಿದೆ.




No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...