Saturday, January 28, 2017

ನೀ ಮತ್ತೆ ಬಂದೆಯಲ್ಲ ಮಾರಾಯ...!

ನೀ ಮತ್ತೆ ಬಂದೆಯಲ್ಲ ಮಾರಾಯ...!


ನೀ ಮತ್ತೆ ಪ್ರತ್ಯಕ್ಷನಾಗಿ ಬಿಟ್ಟೆಯಲ್ಲ ಮಾರಾಯಾ,,,
ಹಾಗೆ ನೋಡಿದರೆ ನೀ ಬಂದೇ ಬರುತ್ತೀಯಾ ಎಂಬುದು ನನಗೆ ಗೊತ್ತಿತ್ತು.
ಯಾಕೆಂದರೆ ನೀ ಭಕ್ತ ಪರಾಧೀನ. ಭಕ್ತರ ಕೈಗೊಂಬೆ.
ಬಾ ಎಂದರೆ ಬರುತ್ತೀಯಾ, ಹೋಗು ಎಂದರೆ ಹೋಗುತ್ತೀಯಾ ?
ಇದೆಲ್ಲ ಏನು ಮಾರಾಯಾ ?

ನೀ ದೇವರು, ನಿನ್ನನ್ನ ಕಾಯುವವರು ಯಾರು ?
ನೀ ಸರ್ವಾಂತರ್ಯಾಮಿ, ನೀ ಎಲ್ಲೆಡೆಗೂ ಇದ್ದೀಯಾ.
ಈ ವಿಶ್ವವೇ ನಿನ್ನ ಮನೆಯಾದರೆ, ನಿನಗೆ ಭಕ್ತರು ಕಟ್ಟುವ ಮನೆಯಾದರೂ ಯಾಕೆ ಬೇಕು..?
ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನನ್ನ ಮನೆ ಎಂದು ನಿನಗೆ ಅನ್ನಿಸಲೇ ಇಲ್ಲವಾ ?

ನೀನು ಅಪ್ಪ ಹೇಳಿದ್ದಕ್ಕೆ ಕಾಡಿಗೆ ಹೋದೆ.
ಯಾರೋ ಹೇಳಿದರೆಂದು ಹೆಂಡತಿಯನ್ನೆ ಬೆಂಕಿಗೆ ಹಾಕಿದೆ.
ಇದು ಕೊಲೆಯೇ ಆತ್ಮಹತ್ಯೆ ನೀ ಯೋಚಿಸಲೇ ಇಲ್ಲ.
 ನೀನಗೆ ಕೇಳಲಿಲ್ಲವೆ, ಆ ಹೆಣ್ಣಿನ ಧ್ವನಿ ?
ಅದು ಸೀತೆಯ ಅರ್ತನಾದವೆ ? ಶೂರ್ಪನಖಿಯ
ವಿರಹ ಗಾನವೆ ? ಲಕ್ಷ್ನಣನ ಒಂಟಿತನ ಪಿಸು ಧ್ವನಿಯೆ ?
ಅದು ಅಯೋಧ್ಯೆಯ ನೂರಾರು ಹೆಣ್ನು ಮಕ್ಕಳ
ಬಿಡುಗಡೆಯ ಕೂಗೆ ?
ಒಮ್ಮೆ ಕೇಳಿಸಿ ಕೋ ಆ ನೊಂದ ಬೆಂದ ಆತ್ಮಗಳ ಧ್ವನಿಯನ್ನು.

ನಿನ್ನ ಕೈಗಳು ರಕ್ತ ಸಿಕ್ತವಾಗಿವೆ.
ನೀ ಬಂದಲ್ಲಿ ಹೋದಲ್ಲಿ ರಕ್ತ ಹರಿದಿದೆ.
ರಕ್ತ ಹರಿಸಿ, ರಾಜ್ಯವನ್ನು ಕಟ್ಟಿದೆ. ಯಾರು ಯಾರನ್ನೋ ಮೆಟ್ಟಿದೆ.
ಇನ್ಯಾರದೋ ಬೆನ್ನು ತಟ್ಟಿದೆ. ಈಗ ಪ್ರತ್ಯಕ್ಷನಾದೆಯಲ್ಲ ನೀನು ?
ಈಗಲಾದರೂ ಸುಮ್ಮನಿರಲು ಏನು ಕೊಡಬೇಕು ಹೇಳು ?

ಬಂದಿದ್ದೀಯಲ್ಲ ಇರಲಿ ಬಿಡು. ನಿನ್ನ, ನಾಶವಾದ ದೇಶವನ್ನಾದರೂ ನೋಡು.
ಇಲ್ಲಿ ಮನಸ್ಸುಗಳು ಸತ್ತಿವೆ. ಆತ್ಮಗಳು ನಾಶವಾಗಿವೆ.
ಮಸೀದಿಗಳ ಅಡಿಯಲ್ಲಿ ದೇವಾಲಯಗಳ ಅವಶೇಷಗಳು.
ದೇವಾಲಯಗಳ ಅಡಿಯಲ್ಲಿ ಜೈನ ಬಸದಿಗಳು. ಬುದ್ಧ ಸ್ತೂಪಗಳು.
ಇದೆಲ್ಲವನ್ನು ಒಮ್ಮೆ ನೋಡಿ ಬಿಡು.

ನಿನ್ನ ಭಕ್ತರಿಗೆ ಬುದ್ದಿ ಮಾತು ಹೇಳಿ ಬಿಡು.
ಭಕ್ತ ಪರಾಧೀನನಾಗ ಬೇಡ ನೀನು.
ಸ್ವಂತ ವ್ಯಕ್ತಿತ್ವ ಇಲ್ಲದನು ಹೇಗೆ ಆದಾನು ದೇವರು..?

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...