Thursday, January 5, 2023

ರಾಜಕಾರಣಿಗಳ ನಾಯಿ ಜಗಳ; ಕುಸಿದ ಬಿದ್ದ ಸಾರ್ವಜನಿಕ ಬದುಕಿನ ಸನ್ನಡತೆ..

 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಆ ಮಾತು. ಅದು ತೀವ್ರರೂಪದ ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದೆ. ರಾಜಕೀಯ ಟೀಕೆಗಳಿಗೆ ಬಹುತೇಕ ಪ್ರಾಣಿಗಳ ಬಳಕೆ ಯಾಗಿದೆ,, ನಾಯಿಯಿಂದ ಪ್ರಾರಂಭವಾಗಿ ಹಂದಿಯವರೆಗೆ ಇದು ಬಂದು ತಲುಪಿದೆ...

ಸಿದ್ದರಾಮಯ್ಯ ಹೇಳಿದ್ದು; ಮುಖ್ಯಮಂತ್ರಿಗಳು ಪ್ರಧಾನಿಯವರ ಮುಂದೆ ನಾಯಿ ಮರಿಯಂತೆ ಇರುತ್ತಾರೆ,, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ..

ಇದಕ್ಕೆ ಬಿಜೆಪಿಯ ಹಲವು ಸಚಿವರು ಮಾಜಿ ಸಚಿವರು ಇತರ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮುಂದೆ ಹೇಗೆ ನಿಲ್ಲುತ್ತಿರಿ ? ರಾಹುಲ್ ಗಾಂಧಿ ನಿಮಗಿಂತ ಹಿರಿಯರಾ ? ಅವರ ಮುಂದೆ ಕಾಲ ಮೇಲೆ ಕಾಲು ಹಾಕಿಕೊಂಡು ನಿಲ್ಲುತ್ತೀರಾ ? ಆ ಶಕ್ತಿ ನಿಮಗೆ ಇದೆಯಾ ? ಇದು ಬಿಜೆಪಿ ನಾಯಕರ ಪ್ರಶ್ನೆ,, ಈಶ್ವರಪ್ಪನಂತವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು.. ನಾವು ಅವರನ್ನೂ ಹಾಗೆ ಕರೆಯಬಹುದಿತ್ತು ಹಂದಿ ಎಂದೂ ಹೇಳಬಹುದಿತ್ತು ಎಂದಿದ್ದಾರೆ.. ಹಾಗೆ ತಮಗೆ ಸೌಜನ್ಯ, ಸ್ಥಾನ ಗೌರವ ಏನು ಎಂಬುದು ತಿಳಿದಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ, ಕಳೆದ ಎರಡೂ ದಿನಗಳಿಂದ ನಡೆಯುತ್ತಿರುವ ಈ ಫಿಶ್ ಮಾರ್ಕೆಟ್ ಜಗಳದ ನಂತರ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಹೇಳಿದ್ದು ಮುಖ್ಯಮಂತ್ರಿಗಳೂ ದೈರ್ಯ ಪ್ರದರ್ಶಿಸಬೇಕು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಪಡೆಯಲು ಕೇಂದ್ರದ ಮೇಲೆ ಒತ್ತಡ ಹೇರಬೇಕಿತ್ತು ಎಂಬ ಅರ್ಥದಲ್ಲಿ ಎಂದೂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿಯ ಗುಣ ಧರ್ಮವನ್ನು ವಿವರಿಸಿದ್ದಾರೆ. ನಾಯಿ ನಿಷ್ಟೆಯ ಬಗ್ಗೆ ಮಾತನಾಡಿದ್ದಾರೆ. ತಾವು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಾಯಿ ಎಂದು ತಮ್ಮ ಬೆನ್ನನ್ನು ತಾವು ತಟ್ಟಿಕೊಂಡಿದ್ದಾರೆ

ಈ ಮಾತು ಮತ್ತು ಜಗಳ ಸಾರ್ವಜನಿಕ ಬದುಕು ಅವನತಿಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ,

ಸಿದ್ದರಾಮಯ್ಯ ಈ ಮಾತು ಆಡಿದ್ದು ಸರಿಯೆ ಎಂಬುದು ಮೊದಲ ಪ್ರಶ್ನೆ..ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಮುಖ್ಯಮಂತ್ರಿಗಳು ತುಟಿ ಬಿಚ್ಚುತ್ತಿಲ್ಲ ಎಂದು ಅವರು ಹೇಳಬಹುದಾಗಿತ್ತು,. ಈ ಡಬಲ್ ಎಂಜಿನ್ ಸರ್ಕಾರದಲ್ಲಿ ದೆಹಲಿಯ ಎಂಜಿನ್ ಮುಂದೆ ರಾಜ್ಯದ ಎಂಜಿನ್ ನಿಷ್ಕಿಯವಾಗಿದೆ ಎಂದೂ ಟೀಕಿಸಬಹುದಾಗಿತ್ತು..ಆಗ ಅವರ ಮಾತು ಘನತೆಯನ್ನು ಉಳಿಸಿಕೊಳ್ಳುತ್ತಿತ್ತು. ಇದಕ್ಕೆ ಬದಲಾಗಿ ನಾಯಿ ಮರಿಯ ಬಗ್ಗೆ ಮಾತನಾಡಿದ ಅವರು ತಾವು ಗ್ರಾಮಾಂತರ ಪ್ರದೇಶದ ಭಾಷೆಯನ್ನು ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ಇದು ಸರಿಯಾದ ಸಮರ್ಥನೆ ಎಂದು ಹೇಳಲಾಗುವುದಿಲ್ಲ.

ಇನ್ನೂ ಬಿಜೆಪಿ ನೀಡಿದ ಪ್ರತಿಕ್ರಿಯೆಗಳನ್ನು ಗಮನಿಸೋಣ.. ಮೊದಲನೇಯದಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯವರನ್ನು ನಾಯಿ ಮರಿ ಎಂದು ಕರೆದಿಲ್ಲ.. ನಾಯಿಮರಿಯಂತೆ ವರ್ತಿಸುತ್ತಿದ್ದೀರಿ ಎಂದಿದ್ದಾರೆ.. ನೀವು ನಾಯಿ ಮರಿ ಎನ್ನುವುದಕ್ಕೂ ನಾಯಿ ಮರಿಯಂತೆ ವರ್ತಿಸುತ್ತಿದ್ದೀರಿ ಎಂಬುದಕ್ಕೂ ವ್ಯತ್ಯಾಸವಿದೆ. ಹೀಗಿರುವಾಗ ಈ ಹೇಳಿಕೆ ಮುಖ್ಯಮಂತ್ರಿಗಳ ಸ್ಥಾನ ಗೌರವಕ್ಕೆ ಚ್ಯುತಿ ತಂದಿದೆ ಎಂಬ ಬಿಜೆಪಿ ಪ್ರತ್ಯಾರೋಪ ಬಾಲಿಶವಾದದ್ದು.. ಮುಖ್ಯಮಂತ್ರಿಗಳ ವರ್ತನೆಗೆ ಯಾವುದೋ ಪ್ರಾಣಿಗೆ ಹೋಲಿಸಿದರೆ ಅದು ಮುಖ್ಯಮಂತ್ರಿ ಸ್ಥಾನದ ಗೌರವಕ್ಕೆ ಚ್ಯುತಿ ತಂದಂತೆ ಆಗುವುದಿಲ್ಲ..ಆದರೆ ಬೆಜೆಪಿಯ ಎಲ್ಲರೂ ಮುಖ್ಯಮಂತ್ರಿಗಳ ಸ್ಥಾನಗೌರವದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸ್ಥಾನ ಗೌರವದ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ತಮ್ಮನ್ನು ಟಗರು ಎಂದು ಕರೆಯುವುದು ಯಡಿಯೂರಪ್ಪ ಅವರನ್ನು ರಾಜಾ ಹುಲಿ ಎಂಬ ವಿಶೇಷಣದಿಂದ ಕರೆಯುವುದನ್ನು ನೆನಪಿಸಿದ್ದಾರೆ. ಇದೇನು ಅಸಂವಿಧಾನಿಕ ಶಬ್ದವೇ ಎಂದು ಕೇಳಿದ್ದಾರೆ. ಅದರಂತೆ ನಾಯಿ ಮರಿಯಂತೆ ಇರುತ್ತಾರೆ ಎಂದರೆ ಅದು ಅಸಂವಿಧಾನಿಕ ಶಬ್ದವಲ್ಲ ಎಂಬ ವಾದವನ್ನೂ ಸಿದ್ದರಾಮಯ್ಯ ಮಾಡಿದ್ದಾರೆ,

ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು, ಸಾಕಪ್ಪ ಎಂದು ಹೇಳುವಷ್ಟು ಪ್ರಚಾರ ದೊರಕಿದೆ, ಇನ್ನೂ ಕೆಲವು ದಿನ ಈ ಬಗ್ಗೆ ಚರ್ಚೆ ನಡೆಯಬಹುದು..

ಆದರೆ ಘಟನೆ ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ, ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಚರ್ಚೆ ಮಾಡಬೇಕಾದ ಗಂಭೀರ ವಿಚಾರಗಳು ಕರೆಯಾಗುತ್ತಿವೆ. ಅದಕ್ಕೆ ಬದಲಾಗಿ ಜನರಿಗೆ ಮನರಂಜನೆ ನೀಡುವ ವಿಚಾರಗಳೇ ಮಹತ್ವ ಪಡೆಯುತ್ತಿವೆ.. ಹೇಳಬೇಕಾದ ವಿಚಾರಗಳನ್ನು ಲಘುವಾಗು ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದರಲ್ಲಿ ರಾಜಕಾರಣಿಗಳು ನಿರತರಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕ ಬದುಕಿನಲ್ಲಿ ಚರ್ಚಿಸ ಬೇಕಾಗಿರುವ ಪ್ರಮುಖ ವಿಚಾರಗಳು ನೇಪಥ್ಯಕ್ಕೆ ಸರಿದು ಹೋಗುತ್ತಿವೆ..

ಅಧಿಕಾರರೂಡ ಬಿಜೆಪಿಗೆ ಇದರಿಂದ ಲಾಭವಾಗುತ್ತಿದೆ. ಬೆಲೆ ಏರಿಕೆ ನಿರುಧ್ಯೋಗ,,ಕೋಮುವಾದ ಮೊದಲಾದ ವಿಚಾರಗಳು ಚರ್ಚೆಗೆ ಬರದೇ, ಲಘು ಚರ್ಚೆಗಳು ಎಲ್ಲವನ್ನು ಕೊಚ್ಚಿಕೊಂಡು ಹೋಗಿ ಬಿಡುತ್ತಿದೆ..ಜನ ಯಾರು ನಾಯಿ, ಯಾರು ಹುಲಿ,, ಯಾರು ಹಂದಿ ಎನ್ನುವ ಬಗ್ಗೆ ಚರ್ಚಿಸುತ್ತ, ಕೆಲವೊಮ್ಮೆ ಎಂಜಾಯ್ ಮಾಡುತ್ತ ತಮ್ಮ ಸಮಸ್ಯೆಗಳನ್ನು ಮರೆತು ಬಿಡುತ್ತಾರೆ. ತಮಗೆ ಮನೆಯಿಲ್ಲ, ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ, ಬೆಲೆ ಏರಿಕೆಯಿಂದ ಬದುಕುವುದು ದುಸ್ತರವಾಗಿ ಎಂಬುದು ಅವರಿಗೆ ನೆನಪಾಗುವುದಿಲ್ಲ.. ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಜನರಿಗೆ ಬೋಧನೆ ಮಾಡಿದ ವಿಚಾರಗಳ ಪ್ರಭಾವಕ್ಕೆ ಸಾಮಾನ್ಯ ಜನ ಒಳಗಾಗುತ್ತಾರೆ.. ನೀವು ರಸ್ತೆ ಚಿರಂಡಿಯಂತ ಸಣ್ಣ ಸಣ್ಣ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳಲು ಲವ್ ಜಿಹಾದ್ ಬಗ್ಗೆ ವಿಚಾರ ಮಾಡಿ ಇದನ್ನು ತಡೆಯುವುದು ಮೋದಿ ಮತ್ತು ಅಮಿತ್ ಶಾ ಅವರಿಗೆ ಮಾತ್ರ ಸಾಧ್ಯ ಎಂಬ ಕಟೀಲ್ ಹೇಳಿಕೆ ಸಾಮಾನ್ಯರಿಗೆ ಆಕರ್ಶಿಕವಾಗಿ ಕಾಣುತ್ತದೆ. ಲವ್ ಜಿಹಾದ್ ಎಂಬ ಭ್ರಮೆ ಅವರನ್ನು ಆವರಿಸಿಕೊಂಡ ತಮ್ಮ ಬದುಕಿನ ನೈಜ ಸಮಸ್ಯೆಗಳನ್ನು ಅವರು ಮರೆತುಬಿಡುತ್ತಾರೆ,

ಬಿಜೆಪಿಗೆ ಬೇಕಾದ್ದು ಇದೇ.. ಇದೇ ಅವರ ತಂತ್ರ..ಅವರು ಹೆಣೆದ ಈ ಬಲೆಗೆ ಕಾಂಗ್ರೆಸ್ ಸಿಕ್ಕಿಕೊಳ್ಳುತ್ತದೆ.

ಈಗ ಬಿಜೆಪಿ ಧರ್ಮದ ಆಧಾರದ ಈ ಖೆಡ್ಡಾವನ್ನು ತೋಡಿಯಾಗಿದೆ. ಈ ಖೆಡ್ಡಾಕ್ಕೆ ಕಾಂಗ್ರೆಸ್ ನಾಯಕರನ್ನು ಕೆಡವಲು ಕಾಯುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ತಾವಾಗಿಯೇ ಖೆಡ್ಡಾಕ್ಕೆ ಬೀಳುತ್ತಿದ್ದಾರೆ,

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...