Saturday, February 1, 2025

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..





 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್ರದೇಶಗಳು ಖಾಲಿಯಾಗುತ್ತಿವೆ.. ಗ್ರಾಮೀಣ ಪ್ರದೇಶದಲ್ಲಿ ವಯಸ್ಸಾದವರು ಮಾತ್ರ ಉಳಿದುಕೊಳ್ಳುವಂತಾಗಿದೆ., 

ಗ್ರಾಮೀಣ ಆರ್ಥಿಕತೆ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶದ ಜನರ ಕೈಯಲ್ಲಿ ಹಣವಿಲ್ಲ. 

ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾರತವನ್ನು ಉಳಿಸುವುದು ಬಹುದೊಡ್ಡ ಸವಾಲು. ಸರ್ಕಾರ ಈ ವಿಚಾರದಲ್ಲಿ ಲಕ್ಷ್ಯ ಒಹಿಸದಿದ್ದರೆ ?

ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಇಂದು ಮಂಡಿಸಿದ ಮುಂಗಡ ಪತ್ರದ ಬಹುಮುಖ್ಯ ಅಂಶ ಎಂದರೆ ಗ್ರಾಮೀಣ ಭಾರತದ ನಿರ್ಲಕ್ಷ. 

ನೀವು ಕಳೆದ ವರ್ಷದ ಅಂಕಿ ಅಂಶಗಳನ್ನೇ ಗಮನಿಸಿ. ಸುಮಾರು ೪೮ ಲಕ್ಷ ಕೋಟಿ ಮುಂಗಡ ಪತ್ರದಲ್ಲಿ ಗ್ರಾಮೀಣ ಭಾರತದ ಯೋಜನೆಗಳಿಗೆ ತೆಗೆದಿರಿಸಿದ್ದು ಸುಮಾರು ೧.೫೨ ಲಕ್ಷ ಕೋಟಿ . ಇದು ತಾರತಮ್ಯವಲ್ಲದೇ ಮತ್ತೇನು ?

ಭಾರತದ ಜನಸಂಖ್ಯೆಯಲ್ಲಿ ಪ್ರತಿಶತ ೫೦ ರಷ್ಟು ಜನರಿಗೆ ಕೆಲಸ ನೀಡುವುದು ನಮ್ಮ ಗ್ರಾಮೀಣ ಭಾರತ. ಆದರೆ ಮುಂಗಡ ಪತ್ರದಲ್ಲಿ ಒದಗಿಸುವುದು ನಗಣ್ಯ 

ಇವತ್ತು ಮಂಡಿಸಿದ ಮುಂಗಡ ಪತ್ರದಲ್ಲಿ ಒಂದು ಮಹತ್ತರ ಯೋಜನೆಯನ್ನು ಪ್ರಕಟಿಸಲಾಯಿತು. ಅದಿ ಪಿಎಮ್ ಧನ ದಾನ್ಯ ಕೃಷಿ ಯೋಜನೆ. ಈ ಯೋಜನೆಯಂತೆ ಅತಿ ಕಡಿಮೆ ಉತ್ಪಾದನೆ ಇರುವ ಆಯ್ದ ೧೦೦ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆಯಂತೆ.. ಯೋಜನೆಯ ಮೊದಲ ಹಂತದಲ್ಲಿ ೧.೭ ಕೋಟಿ ಜನರಿಗೆ ಲಾಭವಾಗಲಿದೆಯಂತೆ !  ೧೪೦ ಕೋಟಿ ಜನಸಂಖ್ಯೆಯ ದೇಶದಲ್ಲಿ ರೈತರ ಜನಸಂಖ್ಯೆ ಸುಮಾರು ೭೦ ಕೋಟಿ.. ೭ಒ ಕೋಟಿ ರೈತರಲ್ಲಿ ೧.೭ ಕೋಟಿ ರೈತರಿಗೆ ಲಾಭವಾಗುವ ಯೋಜನೆಯಂತೆ..

ಇದರ ಜೊತೆಗೆ ನಿರ್ಮಲಾ ಸೀತಾರಾಮನ್ ಇನ್ನೊಂದು ಯೋಜನೆಯನ್ನು ಪ್ರಕಟಿಸಿದ್ದಾರೆ. ಇದು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ. ಈ ಯೋಜನೆ ಹೆಚ್ಚಿನ ವಿವರಗಳು ಹೊರಬರಬೇಕಾಗಿದೆ,

ಇದರ ಜೊತೆಗೆ ಕಿಸಾನ್ ಕಾರ್ಡನ ಮಿತಿಯನ್ನು ೫ ಲಕ್ಷ ಕ್ಕೆ ಹೆಚ್ಚಿಸಲಾಗಿದೆ.ಇದು ಮಹಾ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳುತ್ತಿದ್ದಾರೆ.

ಇದು ರೋಗ ಯಾವುದು ಎಂದು ತಿಳೀಯದೇ ಔಷಧ ಕೊಟ್ಟ ಹಾಗೆ.  ಗ್ರಾಮೀಣ ಭಾರತ ಮತ್ತು ಆರ್ಥಿಕತೆಯ ಬಗ್ಗೆ ಈ ಸರ್ಕಾರಕ್ಕೆ ಅರ್ಥವಾದಂತಿಲ್ಲ. ಅರ್ಥವಾದರೂ ಅವರ ಆಧ್ಯತೆ ಗ್ರಾಮೀಣ ಭಾರತ ಅಲ್ಲ ಎಂಬುದು ಸ್ಪಷ್ಟ. 

ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಇರುವ ಸಂಘರ್ಷದಲ್ಲಿ ಮೋದಿ ಸರ್ಕಾರ ನಗರ ಭಾರತದ ಪರ ಎಂಬುದು ಮುಂಗಡ ಪತ್ರವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.

ನಮ್ಮ ದೇಶದಲ್ಲಿ ಜಿಡಿಪಿಯಲ್ಲಿ ಪ್ರತಿಶತ ೧೭ ರಷ್ಟು ಗ್ರಾಮೀಣ ಭಾರತದ ಪಾಲು. ಹಾಗೆ ಗ್ರಾಮೀಣ ಭಾರತದ ಆರ್ಥಿಕ ಬೆಳವಣಿಗೆ ಪ್ರತಿಶತ ೪.೫ ರಷ್ಟಿದೆ. ಹೀಗಿದ್ದರೂ ಗ್ರಾಮೀಣ ಭಾರತಕ್ಕೆ ಮಹತ್ವ ಸಿಗದಂತಾಗಿದೆ,

ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವಿನ ಕಂದಕ ಹೆಚ್ಚುತ್ತಲೇ ಇದೆ. ಜೊತೆಗೆ ಗ್ರಾಮೀಣ ಪ್ರದೇಶದ ಜನರ ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಈ ವಲಸೆ ಸಮಸ್ಯೇ ಹೊಸ ಯೋಜನೆಯಿಂದ ಬಗೆಹರಿಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರೂ ಈ ಸಮಸ್ಯೆ ಮೋದಿ ಅವರು ತಿಳಿಷ್ಟು ಸರಳವಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಹಣದ ಹರಿವು ಇಲ್ಲದಂತಾಗಿದೆ.  ಹೀಗಾಗಿ ಹಳ್ಳಿಯ ರೈತರಲ್ಲಿ ವೆಚ್ಚಕ್ಕೆ ಹಣ ಇಲ್ಲ. ಜೊತೆಗೆ ಕೃಷಿ ಕ್ಷೇತ್ರ ಎಂದೂ ಇಲ್ಲದ ಬಿಕ್ಕಟ್ಟಿನಲ್ಲಿದೆ. ಕೃಷಿ ಉತ್ಪನ್ನಗಳಿಗೆ  ವೈಜ್ನಾನಿಕ ಬೆಲೆ ಸಿಗದ ಹೊರತೂ ಕೃಷಿ ಕ್ಷೇತ್ರದ ಸಮಸ್ಯೆ ಬಗೆಹರಿಯಲಾರದು. ಈ ಬೇಡಿಕೆಗೆ ಯಾವ ಸರ್ಕಾರವೂ ಸ್ಪಂದಿಸುತ್ತಿಲ್ಲ.

ಸಾಧಾರಣವಾಗಿ ಯಾವುದೇ ವಸ್ತುಗಳ ಉತ್ಪಾದಕ ತಾನು ಉತ್ಪಾದಿಸಿದ ವಸ್ತುವಿನ ಬೆಲೆ ನಿಗದಿ ಪಡಿಸುತ್ತಾನೆ. ಆದರೆ ಕೃಷಿ ಉತ್ಪನ್ನಗಳ ಬೆಲೆ ನಿಗದಿಯ ಅಧಿಕಾರ ಉತ್ಪಾದಕನಿಗೆ ಇಲ್ಲ. ಅದನ್ನು ಮಾರುಕಟ್ಟೆ ಶಕ್ತಿಗಳು ಮತ್ತು ಮಧ್ಯವರ್ತಿಗಳು ನಿಗದಿ ಪಡಿಸುತ್ತಾರೆ. ಇದೇ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಮೂಲ ಕಾರಣ. ಜೊತೆಗೆ ಹವಾಮಾನದ ಮೇಲೆ ಅವಲಂಬಿತವಾದ ಕೃಷಿಗೆ ಸ್ಟಾಬಿಲಿಟಿ ಅಥವಾ ಸ್ಥಿರತೆ ಇಲ್ಲ. ಇಂತಹ ಸನ್ನಿವೇಶದಲ್ಲಿ ಸ್ಠಿರತೆ ತರುವ ಯೋಜನೆಗಳನ್ನು ಸರ್ಕಾರ ರೂಪಿಸಿ ಅನುಷ್ಟಾನಕ್ಕೆ ತರಬೇಕು. ಅದರೆ ಈ ಮುಂಗಡ ಪತ್ರದಲ್ಲಿ ಯಾವುದೇ ಕಾರ್ಯಕ್ರಮವೂ ಇಲ್ಲ.. ಇದಕ್ಕೆ ಉದಾಹರಣೆಯನ್ನೂ ನಾವು ನೀಡಬಹುದು.. ಟೊಮೆಟೋವನ್ನೆ ತೆಗೆದುಕೊಳ್ಳಿ. ಈ ಬೆಳೆಗೆ ಬೆಲೆ ಸ್ಥಿರತೆಯೇ ಇಲ್ಲ. ಬೆಲೆ ಕುಸಿದಾಗ ರೈತರು ಟೊಮೆಟೋ ತಂದು ರಸ್ತೆಗೆ ಸುರಿಯುತ್ತಾರೆ. ಇದನ್ನು ತಪ್ಪಿಸಲು ಟೋಮೆಟೋ ವನ್ನು ವಾಲ್ಯು ಎಡೆಡ್ ಉತ್ಪನ್ನವಾಗಿ ಪರಿವರ್ತಿಸಿ ಮಾರಾಟ ಮಾಡಬಹುದು. ಇದಕ್ಕಾಗಿ ಕೋಲ್ಡ್ ಸ್ಟೋರೇಜ್ ಗಳನ್ನು ನಿರ್ಮಿಸುವ ಕೆಲಸವನ್ನು ಸರ್ಕಾರ ಮಾಡಬಹುದು. ಇದನ್ನು 

ಉದಾಹರಣೆಯಾಗಿ ಹೇಳಿದೆ ಅಷ್ಟೇ>

ಮೋದಿ ಸರ್ಕಾರಕ್ಕೆ ಇಂತಹ ಯಾವುದೇ ಯೋಚನೆ ಯೋಜನೆ ಇಲ್ಲ. ಅವರದ್ದು ಏನಿದ್ದರೂ ಧರ್ಮ ರಾಜಕಾರಣ. ಧರ್ಮ ಮತ್ತು ಕೋಮುವಾದ ತಮ್ಮನ್ನು ಗದ್ದುಗೆಯ ಮೇಲೆ ಕೂಡ್ರಿಸುತ್ತದೆ ಎಂದು ಬಿಜೆಪಿ ನಂಬಿದೆ. ಜೊತೆಗೆ ಕಾರ್ಪುರೇಟ್ ವಲಯದ ಕೈಗೊಂಬೆಯಂತೆ ಈ ಸರ್ಕಾರ ಕೆಲಸ ಮಾಡುತ್ತಿದೆ.  ಹೀಗಾಗಿ ಗ್ರಾಮೀಣ ಭಾರತ ಗಾಯಗೊಂಡು ರಕ್ತ ಒಸರುತ್ತಿದೆ. 





Friday, January 31, 2025

ನಾನು ಪುನರ್ಜನ್ಮ ಪಡೆದು ಬಂದೆ..

 ಕಳೆದ ಕೆಲವು ತಿಂಗಳುಗಳಿಂದ ನಾನು ಏನನ್ನೂ ಬರೆಯಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ನನ್ನ ಆರೋಗ್ಯ. ಕಳೆದ ಜೂನ್ ತಿಂಗಳು. ನಾನು ಆಸ್ಪತ್ರೆ ಸೇರಿ ಬಿಟ್ಟೆ.. ಸುಮಾರು ೧೫ ದಿನ ಐಸಿಯು ನಲ್ಲಿದ್ದೆ. ನನ್ನ ಆರೋಗ್ಯ ಕೈಕೊಟ್ಟಿತ್ತು. 

ಬ್ರಾಂಕಿಯಲ್ ಆಸ್ತಮಾ ಹೋಗಿ ಕಾರ್ಡಿಯಾಕ್ ಆಸ್ತಮಾ ಕಾಡತೊಡಗಿತ್ತು. ಬಹಳ ವರ್ಷಗಳಿಂದ ನನ್ನನ್ನು ಕಾಡುತ್ತಿದ್ದ ಸಕ್ಕರೆ ಕಾಯಿಲೆ. ಅದೂ ಸುಸ್ತಾಗಿ ಕಿಡ್ನಿ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ಶ್ವಾಸ ಕೋಶದಲ್ಲಿ ನೀರು ತುಂಬಿಕೊಂಡಿತ್ತು 

ಮೈಸೂರಿನ ಆಸ್ಪತ್ರೆಯಲ್ಲಿ ಹಲವು ತಿಂಗಳು ಕಾಲ ಚಿಕಿತ್ಸೆ ಪಡದೆ..ನಂತರ ವಿಶ್ರಾಂತಿ..

ಈ ಅವಧಿಯಲ್ಲಿ ಬರೆಯಬೇಕು ಎಂಬ ಒತ್ತಡ. ಆದರೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಒಳಗೆ ಕಾಡುತ್ತಿದ್ದ ಅದೆಷ್ಟೋ ವಿಚಾರಗಳು.. ಅದನ್ನೆಲ್ಲ ಹೊರಹಾಕಬೇಕು. ಎಲ್ಲವನ್ನ್ನು ಹೊರಹಾಕಿ ನಿರಾಳವಾಗಿ ಬಿಡಬೇಕು ಎಂದುಕೊಂಡಿದ್ದೆ.

ಈ ನದುವೆ ಬಹಳಷ್ಟು ಜನ ನನ್ನ ಕಥೆ ಮುಗಿಯಿತು ಎಂದುಕೊಂಡರು. ಇನ್ನೆಷ್ಟು ದಿನ ಈ ಭಟ್ಟ ಹೋಗ್ತಾನೆ ಎಂದು ಮಾತನಾಡಿಕೊಂಡರು ಹಲವರು ಹೋಗುವವನನ್ನು ಕೊನೆಯದಾಗಿ ಮಾತನಾಡಿ ಬರೋಣ ಎಂದು ಬಂದರು.. ಬದುಕಿನ ನಶ್ವರತೆ ಬಗ್ಗೆ ಮಾತನಾಡಿ ಸಾರ್ ಎಲ್ಲರೂ ಹೋಗುವವರೇ. ಕೆಲವರು ಮೊದಲು ಕೆಲವು ನಂತರ ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಅವರ ಮಾತಿನ ಅರ್ಥ ನೀನು ಮೊದಲು ಹೋಗ್ತೀಯಾ ಹೋಗಿಬಿಡು ಎನ್ನುವಂತಿತ್ತು.

ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಮನಸ್ಸು ಘಟ್ಟಿಯಾಗಿತ್ತು, ಆದರೆ ನನಗಿದ್ದುದು ಹಣದ ಸಮಸ್ಯೆ. ಹಲವಾರಿ ಸ್ನೇಹಿತರು ಸಹಾಯಕ್ಕೆ ನಿಂತರಿ ಗೆಳೆಯ ಪ್ರಕಾಶ್ ರೈ ಎಲ್ಲ ವೆಚ್ಚ ಭರಿಸುವುದಾಗಿ ಹೇಳಿದ.. ಸರ್ಕಾರ ಕೂಡ ಮುಂದೆ ಬಂತು..

ನನ್ನ ಬಹುತೇಕ ಸಮಸ್ಯೆಗಳು ಬಗೆಹರಿದಿತ್ತು. 

ಈ ನಡುವೆ ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯ ಶುಶ್ರೂತ್ ಗೌಡ ಅವರು ಹೆಚ್ಚಿನ ಮುತವರ್ಜಿ ಒಹಿಸಿದರು.

ನಾನು ಸಾವಕಾಶವಾಗಿ ಸುಧಾರಿಸಿಕೊಳ್ಳತೊಡಗಿದೆ..

ಈಗ ಕಿಡ್ನಿ ಶಕ್ತ್ರಿಯುತವಾಗಿದೆ. ಹೃದಯವೂ ಪರ್ಫೆಕ್ಟ್ ಆಗಿದೆ. ಉಸಿರಾಟದ ತೊಂದರೆ ಬಹುಮಟ್ಟಿಗೆ ಗುಣವಾಗಿದೆ,,

ಅದಕ್ಕೆ ಹೇಳಿದ್ದು ಇದು ನನ್ನ ಪುನರ್ ಜನ್ಮ ಅಂತ.

ಇನ್ನೂ ಹೊಸ ಉಮೇದಿಯಿಂದ ಕೆಲಸ ಮಾಡಲು ಸಿದ್ದನಾಗುತ್ತಿದ್ದೇನೆ. ಹಾಗೆ ಬರೆಯಬೇಕಾದ್ದು ತುಂಬ ಇದೆ, ಅದರಂತೆ ನನ್ನ ಸುದ್ದಿ ವಿಶ್ಲೇಷಣೆ.

ಬೆಂಗಳೂರಿನಲ್ಲಿ ಆಫೀಸ್ ಪ್ರಾರಂಭಿಸಬೇಕು.. ಸಣ್ಣ ತಂಡವನ್ನ್ನು ಕಟ್ಟಬೇಕು.. ಮತ್ತೆ ಕೆಲಸ ಮಾಡಬೇಕು.

ಇದಕ್ಕೆಲ್ಲ ತಮ್ಮ ಪ್ರೀತಿ ಬೆಂಬಲ ಬೇಕು.. ತಾವು ಎಂದಿನಂತೆ ನನ್ನನ್ನು ಬೆಂಬಲಿಸಿಸುತ್ತಿರಿ ಎಂದು ನಂಭಿದ್ದ್ದೇನೆ.

ತ್ಯಾಂಕ್ಸ್..

Saturday, July 8, 2023

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?




ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ಹಲವು ರೀತಿಯ ವಿಮರ್ಶೆಗಳು ಬಂದಿವೆ. ಈ ಒಣ್ದು ವಾರದ ಅಧಿವೇಶನದಲ್ಲಿ ಹೇಳುವಂತಹ ಮಹತ್ತರ ಚರ್ಚೆ ಸದನದಲ್ಲಿ ನಡೆದಿಲ್ಲ. ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ಪಕ್ಷಗಳು ಸಲ್ಲಿಸಿದ್ದ ನಿಲುವಳಿ ಸೂಚಾನೆ ಕುರಿತು ಸದನದಲ್ಲಿ ಗದ್ದಲ ನಡೆಯಿತು. ಎಲ್ಲ ಅಧಿಕೃತ ಕಲಾಪವನ್ನು ಬದಿಗೊತ್ತಿ ಈ ನಿಲುವಳಿ ಸೂಚನೆಯ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕು ಎಂಬು ಪ್ರತಿ ಪಕ್ಷಗಳ ಒತ್ತಾಯವಾಗಿತ್ತು.. ಸ್ಪೀಕರ್ ಖಾದರ್ ಈ ಒತ್ತಾಯಕ್ಕೆ ಮಣಿಯಲಿಲ್ಲ. ಇದಕ್ಕಾಗಿ ಸಭಾಧ್ಯಕ್ಷರ ಮುಂದಿನ  ಸ್ಥಳದಲ್ಲಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಹಾಲಿ ಮುಖ್ಯಮಂತ್ರಿ ಸಿದರಾಮಯ್ಯ ನಡುವೆ ನಡೆದ ಜಗಳದಲ್ಲಿ ಏಕ ವಚನ ಪ್ರಯೋಗ ಕೂಡ ಆಯಿತು..

ಇದರ ನಡುವೆ ಬಹುಮುಖ್ಯವಾದ ಪ್ರಶ್ನೆ ಎಂದರೆ ಪ್ರತಿ ಪಕ್ಷದ ನಾಯಕ ಆಯ್ಕೆ,  ಈ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಪ್ರತಿ ಪಕ್ಷದ ನಾಯಕರೇ ಇಲ್ಲದ ಸ್ಥಿತಿ. ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಇಂತಹ ಸಂದರ್ಭ ಬಂದ ಬೇರೆ ಉದಾಹರಣೆ ಇದ್ದಂತಿಲ್ಲ.. ಕಳೆದ ಒಂದು ತಿಂಗಳ ಸತತ ಪ್ರಯತ್ನದ ನಂತರವೂ ಬಿಜೆಪಿ ಪ್ರತಿ ಪಕ್ಷದ ನಾಯಕರನ್ನು ನೇಮಿಸಿಲ್ಲ.. ಹಲವು ಹೆಸರುಗಳು ತೇಲಿ ಬಂದರೂ ಅದೆಲ್ಲ ಗಾಳಿ ಸುದ್ದಿಯಾಗಿಯೇ ಉಳಿದಿದೆ.. ಮೊದಲು ಹಲವು ಹೆಸರುಗಳು ಕೇಳಿ ಬಂದರೂ ಕೊನೆಗೆ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಆದರೆ ಬಿಜೆಪಿಯಲ್ಲಿರುವ ಹಲವು ಗುಂಪುಗಳು ತಮ್ಮದೇ ಆದ ಒತ್ತಡ ಹೇರುತ್ತಿರುವುದರಿಂದ ಬಿಜೆಪಿ ವರಿಷ್ಠರು ಕೈಕಟ್ಟಿ ಕುಳಿತಿದ್ದಾರೆ. ನಮಗೇನು ಅರ್ಜೆಂಟ್ ಇಲ್ಲ ಎಂಬ ಸಂದೇಶವನ್ನು ರಾಜ್ಯ ಬಿಜೆಪಿ ನಾಯಕರಿಗೆ ನೀಡುತ್ತಿದ್ದಾರೆ, 

ಆದರೆ ಜನತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೇ ಮಹತ್ವ ಪ್ರತಿಪಕ್ಷಗಳಿಗೂ ಇದೆ. ಹಾಗೆ ಪ್ರತಿ ಪಕ್ಷದ ನಾಯಕನ ಸ್ಥಾನ. ಸರ್ಕಾರವನ್ನು ಪ್ರಶ್ನಿಸುವ, ತಪ್ಪುಗಳನ್ನು ಎತ್ತಿ ತೂರಿಸಿ ಸರಿ ದಾರಿಗೆ ತರುವ ಹೊಣೆಗಾರಿಕೆ ಪ್ರತಿ ಪಕ್ಷದ್ದು ಆಗಿರುವುದರಿಂದ ಪ್ರತಿ ಪಕ್ಷದ ನಾಯಕ ಇದರ ನಾಯಕತ್ವ ಒಹಿಸಬೇಕು. ಹೀಗಾಗಿಯೇ ಪ್ರತಿ ಪಕ್ಷದ ನಾಯಕರಿಗೆ ಸಚಿವರ ಸ್ಥಾನ ಮಾನ ಒದಗಿಸಲಾಗಿದೆ. ಸಚಿವರಿಗೆ ಸಿಗುವ ಸರ್ಕಾರಿ ಸೌಲಭ್ಯ ಪ್ರತಿ ಪಕ್ಷದ ನಾಯಕರಿಗೂ ದೊರಕುತ್ತಿದೆ. ಐರೋಪ್ಯ ದೇಶಗಳ ಜನತಂತ್ರ ವ್ಯವಸ್ಥ್ಎ ಹೇಗಿದೆ ಎಂದರೆ ಅಲ್ಲಿ ಶಾಡೋ ಕ್ಯಾಬಿನೆಟ್ ಕೂಡ ಇರುತ್ತದೆ. ಶ್ಯಾಡೋ ಕ್ಯಾಬಿನೆಟ್ ಅಂದರೆ ಸಚಿವ ಸಂಪುಟದ ನೆರಳೋ ನೆರಳಿನ ಸಂಪುಟ ಎಂದು ಕರೆಯಬಹುದೋ ಗೊತ್ತಿಲ್ಲ.. ಸಚಿವ ಸಂಪುಟ ಇದ್ದ ಹಾಗೆ ಪ್ರತಿ ಪಕ್ಷಗಳು ಒಂದು ಸಂಪುಟ ರಚಿಸಿಕೊಂಡಿರುತ್ತಾರೆ. ಆಯಾ ಇಲಾಖೆಗಳ ಜ್ನಾನ ತಿಳುವಳಿಕೆ ಎಲ್ಲವೂ ಪರಿಗಣನೆಗೆ ಬಂದಿರುತ್ತದೆ. ಜೊತೆಗೆ ಇಲಾಖೆಗಳ ಕುರಿತು ಜ್ನಾನ ತಿಳುವಳಿಕೆ ಎಲ್ಲವನ್ನೂ ಇವರು ಪಡೆಸಿರುತ್ತಾರೆ. ಪ್ರತಿ ಪಕ್ಷ ಅಧಿಕಾರಕ್ಕೆ ಬಂದಾಗ ಇವರೆಲ್ಲ ಆಯಾ ಇಲಾಖೆಯನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಆದರೆ ನಮ್ಮ ಯೋಗ್ಯತೆಗೆ  ಪ್ರತಿ ಪಕ್ಷದ ನಾಯಕನನ್ನು ಆರಿಸುವುದಕ್ಕೂ ನಮಗೆ ರಾಜಕೀಯ ಅಡ್ಡಿಯಾಗುತ್ತದೆ. ಪ್ರತಿ ಪಕ್ಷ್ಜದ ನಾಯಕನ ಆಯ್ಕೆಗೆ ಹೇಗೆ ರಾಜಕೀಯ ಕಾರಣಗಳು ಇರುತ್ತವೆಯೋ, ಹಾಗೆ ನೇಮಿಸದಿರುವುದಕ್ಕೂ ರಾಜಕೀಯ ಕಾರಣಗಳಿರುತ್ತದೆ.

ರಾಜ್ಯದಲ್ಲಿ ಪ್ರತಿ ಪಕ್ಷದ ನಾಯಕನ ನೇಮಕವಾಗದಿರುವುದಕ್ಕೆ ಕೂಡ ರಾಜಕೀಯ ಕಾರಣಗಳು ಇರಬೇಕು. ಇದು ಪರಿಪಕ್ವ ಜನತಂತ್ರದ ಲಕ್ಷಣ ಅಲ್ಲ.. ನಮ್ಮದು ಪರಿಪಕ್ವ ಜನತಂತ್ರ ಅಲ್ಲ ಎಂದು ಒಪ್ಪಿಕೊಳ್ಳುವುದಕ್ಕೂ ನಮಗೆ ಹಿಂಜರಿಕೆ ಬೇಕಾಗಿಲ್ಲ.

ಪ್ರತಿ ಪಕ್ಷದ ನಾಯಕನ ಆಯ್ಕೆ ಮಾಡಬೇಕಾದ ಬಿಜೆಪಿಯಲ್ಲಿ ಹತಾಶೆಯ ಕಾರ್ಮೋಡ ಕವಿದಿದೆ. ಸೋಲಿನ ಆಘಾತವನ್ನು ಅವರಿಗೆ ತಾಳಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೋಲಿನ ಹೊಣೆಗಾರಿಕೆಯನ್ನು ಒಬ್ಬರ ಮೇಲೆ ಒಬ್ಬರು ಹಾಕುವ ಕ್ಶುಲ್ಲಕ ರಾಜಕಾರಣ ನಡೆಯುತ್ತಿದೆ.  ಹೊಂದಾಣಿಕೆ ರಾಜಕಾರಣದ ಆರೋಫವೂ ಕೇಳಿಬಂದಿದೆ. ಬಿ. ಎಲ್ ಸಂತೋಷ ರಾಜಯ ಬಿಜೆಪಿ ರಾಜಕಾರಣವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಮ್ಮ ಕಾಲಾಳುಗಳನ್ನು ಅಖಾಡಾಕ್ಕೆ ಇಳಿಸಿದ್ದಾರೆ. ಸಿ. ಟಿ. ರವಿ, ಬಸನಗೌಡ ಯತ್ನಾಳ್ ಮೊದಲಾದವರು ಒಂದೆಡೆ ಯಡೀಯೂರಪ್ಪನವರನ್ನು ಇನ್ನೊಂದೆಡೆ ಬಸವರಾಜ್ ಬೊಮ್ಮಾಯಿ ಅವರನ್ನು ಟಾರ್ಗೆಟ್ ಮಾಡಿ ಹೇಳಿಕೆ ನೀಡತೊಡಗಿದ್ದಾರೆ, ಇದು ಬಿಜೆಪಿಯ ಆಂತರಿಕ ಬಿಕ್ಕಟ್ಟು ಉಲ್ಬಣಗೊಂಡಿರುವುದರ ಲಕ್ಷಣ, ಇವರಿಗೆ ಬೆನ್ನೆಲುಬಾಗಿ ಸಂಘ ಪರಿವಾರವೂ ಇದೆ ಎನ್ನುವುದಕ್ಕೆ ಯಾವ ಸಾಕ್ಷ್ಯವೂ ಬೇಕಾಗಿಲ್ಲ..

ಬಿಜೆಪಿ ವರಿಷ್ಠರಾದ ಪ್ರಧಾನಿ ಮತ್ತು ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಕರ್ನಾಟಕ ರಾಜಕಾರಣದ ಒಳ ಸುಳಿಗಳು ಅರ್ಥವಾಗತೊಡಗಿದಂತಿದೆ. ಯಡೀಯೂರಪ್ಪ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಜೆಪಿಯನ್ನು ಕಟ್ಟುವುದು ಸಾಧ್ಯವಿಲ್ಲ ಎಂಬುದು ಅರಿವೆಗೆ ಬಂದಂತಿದೆ. ಹೀಗಾಗಿ ಕಳೆದ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿ ಹೈಕಮಾಂಡ್ ಮಾತುಕತೆ ನಡೆಸಿತು.. ಒಂದಾನೊಂದು ಕಾಲದಲ್ಲಿ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿದ್ದ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿಸುವ ಕುರಿತು ಚರ್ಚೆ ನಡೆಯಿತು ಎಂಬುದು ಮಾಹಿತಿ.ಇಂತಹ ಸ್ಥಿತಿಯಲ್ಲಿ ಬಿಜೆಪಿ ಈ ಬಿಕ್ಕಟ್ಟಿನಿಂದ ಹೇಗೆ ಹೊರ ಬರುತ್ತದೆ ಎಂಬುದನ್ನು ನೋಡಬೇಕು. ಇದರ ಮೇಲೆ ರಾಜ್ಯ ಬಿಜೆಪಿಯ ಭವಿಶ್ಯ ನಿಂತಿದೆ ಎಂಬುದು ಸತ್ಯ

Friday, July 7, 2023

Siddaramaiah Budget. Who is it for? Has the Chief Minister maintained the balance?




Whose budget is the budget for 2023 and 24 presented by Chief Minister Siddaramaiah, who is the finance minister? These questions are very important as to what this budget prioritizes. It has to be seen whether there has been any change in the priorities of Siddaramaiah, who has presented budget  for the 14th time in his political career.

An budget is not just an income and expenditure statement. What is the priority of the government beyond that? It is important to consider which sections of the society the budget is drawn up and the funds allocated. So the tax policy mentioned in this budget.. What is a government getting its income from? Apart from what is proposed to be taxed, it has to be observed whether the financial discipline is followed.

This is the biggest budget in Siddaramaiah's political life. He presented the budget for about an hour. The size of the budget presented by him is 3 lakh 27 thousand crores.. In this huge size budget, he intends to collect 50 percent of the money through tax collection in the state. After the implementation of GST in the country, the tax collection opportunities of the state government have reduced. The opportunity for state governments to collect taxes is commercial tax stamp, cess on petrol and excise duty.. In such a situation Siddaramaiah was not in a position to touch petrol. Because the price of petrol has already skyrocketed, if the price increases again, there will be public outrage. Thus Siddaramaiah has increased the excise duty by 20 percent. This will further burden the liquor lovers. But no one is in a position to openly criticize the increase in tax on liquor. Only drunkards should blame the government and drink alcohol.

Siddaramaiah has spoken of re-examining the land guidance value. Due to this one can expect some higher income.

Siddaramaiah has made his priority in revenue distribution clear.. He has earmarked 12 percent of his budjet income for the education sector. This is welcome..Education is what shapes the next generation..so much emphasis is given in this budget on women's welfare. 7% of the advance letter has been earmarked for the women and welfare sector. Having already arranged free travel for women through Shakti Yojana, the government has made it clear that after education, women's welfare is its next priority by providing more grants.

In this budget
, the government reiterated its commitment to fulfill the five guarantees for which Siddaramaiah has withdrawn Rs 52,000 crore.

In his advance letter, Siddaramaiah compared his government with the previous government. He has provided statistics on this.. It cannot be denied that there is a political motive behind this. But the argument of each party that the entire advance letter is a political advance letter is not correct. Also, this is not the first time that politics has infiltrated the advance letter.

JDS leader H. D. Kumaraswamy went a step ahead of the BJP and criticized Siddaramaiah's advance letter. While criticizing the Congress government, Avery indirectly defended the BJP party, Prime Minister Narendra Modi and the previous BJP government. This may sound like a bleak but it seems to be a compass of political development to come.


Some of the important points of Mandaga Patra are as follows..

70,427 crore for women targeted projects. . 51,220 crore for the proposed schemes for children. grant.

10 residential schools for mentally retarded children have been started in seven districts in collaboration with NGOs at a cost of Rs.2 crore.

50 crore in the current year for comprehensive development of nomadic and semi-nomadic communities such as Soliga community, beekeepers, wild herdsmen, Koragas, Iruliga, Betta Kurubas etc.

Repeal of Agricultural Land Sale Act, Abandoned Bhu Siri Yojana, Shram Shakti Yojana.

Annabhagya- Rs 10,000 crore, Griha Jyoti- Rs 13,910 crore, Shakti Yojana- Rs 4,000 crore, Indira Canteen- Rs 100 crore, Our Metro- Rs 30,000 crore.

Food Department-Rs 10,460 crore, Social Welfare-Rs 11,173 crore. , Bengaluru development - Rs.45,000 crore, Ettinhole-Rs.23,252 crore, Drinking water-Rs.770 crore, Education department-Rs.37,587 crore. grant

75 crore for the development of various tourist spots in the state including Hampi. Development of various sites including Meesalu, Mylar, Gangapur, Malakheda

01:55 PM Fuel- Rs 22000 crore, Women and Child Welfare- Rs 24,166 crore, Irrigation- Rs 19,000 crore, Rural Development- Rs 18,000 crore, Transport and Local Government- Rs 16,000 crore, Agriculture and Horticulture- Rs 5,860 crore ., Revenue- Rs 16,000 crore, Animal Husbandry Department - Rs 3,024 crore.

Siddaramaiah has not changed in the race.. He prepared this advance paper under his belief of social justice. No personal aid was given to the monks of the Math. Instead, he gave a grant for the development of Chamundi Hill. He has tried to give strength to the Jain community.. If you look at it, it was not so easy to prepare the advance letter in the current situation.. It was a condition that it would be difficult to arrange the money to be provided for the guarantee.. But all this has been achieved by the Chief Minister. S

ಸಿದ್ದರಾಮಯ್ಯ ಬಜೆಟ್. ಇದು ಯಾರ ಪರ ? ಸಮತೋಲನವನ್ನು ಕಾಪಾಡಿದ್ದಾರೆಯೆ ಮುಖ್ಯಮಂತ್ರಿ ?


 


ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರ ಯಾರ ಪರವಾದ ಮುಂಗಡ ಪತ್ರ ? ಈ ಮುಂಗಡ ಪತ್ರ ಯಾವುದಕ್ಕೆ ಆದ್ಯತೆ ನೀಡಿದೆ ಈ ಪ್ರಶ್ನೆಗಳು ಬಹಳ ಮುಖ್ಯವಾದವುಗಳು. ತಮ್ಮ ರಾಜಕೀಯ ಬದುಕಿನಲ್ಲಿ ೧೪ ನೆಯ ಬಾರಿ ಮುಂಗಡಪತ್ರವನ್ನು ಮಂಡಿಸಿದ ಸಿದ್ದರಾಮಯ್ಯನವರ ಆದ್ಯತೆಗಳಲ್ಲಿ ಏನಾದರೂ ಬದಲಾವಣೆ ಆಗಿದೆಯೆ ಎಂಬುದನ್ನು ನೋಡಬೇಕು,

ಮುಂಗಡ ಪತ್ರ ಎನ್ನುವುದು ಕೇವಲ ಆದಾಯ ಮತ್ತು ಖರ್ಚಿನ ಲೆಕ್ಕ ಪತ್ರ ಅಲ್ಲ. ಅದಕ್ಕೂ ಮೀರಿದ ಆದ್ಯತೆ ಇರುವುದು ಸರ್ಕಾರದ ಆದ್ಯತೆಗಳೇನು ? ಸಮಾಜದ ಯಾವ ವರ್ಗಗಳನ್ನು ನೋಡಿಕೊಂಡು ಮುಂಗಡ ಪತ್ರವನ್ನು ರಚಿಸಲಾಗಿದೆ ಮತ್ತು ಹಣಕಾಸಿನ ಹಂಚಿಕೆ ಮಾಡಲಾಗಿದೆ ಎಂಬುದು ಮಹತ್ವದ್ದಾಗಿರುತ್ತದೆ. ಹಾಗೆ ಈ ಮುಂಗಡ ಪತ್ರದಲ್ಲಿ ಅನಿಸರಿಸಲಾದ ತೆರಿಗೆ ನೀತಿ.. ಒಂದು ಸರ್ಕಾರ ತನ್ನ ಆದಾಯವನ್ನು ಯಾವುದರಿಂದ ಪಡೆದುಕೊಳ್ಳುತ್ತಿದೆ ? ಯಾವುದರ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ ಎಂಬುದರ ಜೊತೆಗೆ ಆರ್ಥಿಕ ಶಿಸ್ತನ್ನು ಪಾಲಿಸುತ್ತಿದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ..

ಸಿದ್ದರಾಮಯ್ಯನವರ ರಾಜಕೀಯ ಬದುಕಿನಲ್ಲಿ ಇದು ಅತಿ ದೊಡ್ದ ಮುಂಗಡ ಪತ್ರ. ಸುಮಾರು ಗಂಟೆಯ ಕಾಲ ಅವರು ಮುಂಗಡ ಪತ್ರದ ಮಂಡನೆ ಮಾಡಿದರು. ಅವರು ಮಂಡಿಸಿದ ಮುಂಗಡ ಪತ್ರದ ಗಾತ್ರ,೩ ಲಕ್ಷ ೨೭ ಸಾವಿರ ಕೋಟಿಗಳು.. ಈ ಬೃಹತ್ ಗಾತ್ರದ ಮುಂಗಡಪತ್ರದಲ್ಲಿ ಅವರು ಪ್ರತಿ ಶತ ೫೦ ರಷ್ಟು ಹಣವನ್ನು ರಾಜ್ಯದಲ್ಲಿ ತೆರಿಗೆ ಸಂಗ್ರಹದ ಮೂಲಕ ಸಂಗ್ರಹಿಸುವ ಉದ್ದೇಶ ಹೊಂದಿದ್ದಾರೆ. ಜಿಎಸ್ಟಿ ದೇಶದಲ್ಲಿ ಜಾರಿಯಾದ ಮೇಲೆ ರಾಜ್ಯ ಸರ್ಕಾರದ ತೆರಿಗೆ ಸಂಗ್ರಹದ ಅವಕಾಶಗಳು ಕಡಿಮೆಯಾಗಿವೆ. ರಾಜ್ಯ ಸರ್ಕಾರಗಳಿಗೆ ತೆರಿಗೆ ಸಂಗ್ರಹಿಸಲು ಇರುವ ಅವಕಾಶ ಎಂದರೆ ವಾಣಿಜ್ಯ ತೆರಿಗೆ ಮುದ್ರಾಂಕ, ಪೆಟ್ರೂಲ್ ಮೇಲೆ ಸೆಸ್ ಹಾಗು ಅಬ್ಕಾರಿ.. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೂಲ್ ಮುಟ್ಟುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಇರಲಿಲ್ಲ. ಯಾಕೆಂದರೆ ಈಗಾಗಲೇ ಪೆಟ್ರೂಲ್ ಬೆಲೆ ಗಗನವನ್ನು ಮುಟ್ಟಿರುವುದರಿಂದ ಮತ್ತೆ ಬೆಲೆ ಹೆಚ್ಚಳವಾದರೆ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಅಬ್ಕಾರಿ ಮೇಲಿನ ಸುಂಕವನ್ನು ಪ್ರತಿಶತ ೨೦ ರಷ್ಟು ಹೆಚ್ಚಿಸಿದ್ದಾರೆ. ಇದರಿಂದ ಮದ್ಯ ಪ್ರಿಯರಿಗೆ ಮತ್ತಷ್ಟು ಹೊರೆಯಾಗಲಿದೆ. ಆದರೆ ಯಾರೂ ಕೂಡ ಬಹಿರಂಗವಾಗಿ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದನ್ನು ಟೀಕಿಸುವ ಸ್ಥಿತಿಯಲ್ಲಿ ಇಲ್ಲ. ಕುಡುಕರು ಮಾತ್ರ ಸರ್ಕಾರವನ್ನು ಬೈದುಕೊಂಡು ಮದ್ಯಪಾನ ಮಾಡಬೇಕು ಅಷ್ಟೇ,,

ಇನ್ನು ಉಳಿದಂತೆ ಲಾಣ್ಡ್ ಗೈಡೆನ್ಸ್ ವಾಲ್ಯೂ ವನ್ನು ಪುನರ್ ವಿಮರ್ಶಿಸುವ ಮಾತನ್ನು ಸಿದ್ದರಾಮಯ್ಯ ಆಡಿದ್ದಾರೆ. ಇದರಿಂದಾಗಿ ಸ್ವಲ್ಪ ಮಟ್ಟಿನ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬಹುದು..

ಉಳಿದಂತೆ ಆದಾಯ ಹಂಚಿಕೆಯಲ್ಲಿ ತಮ್ಮ ಆದ್ಯತೆಯನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.. ಅವರು ತಮ್ಮ ಮುಂಗಡ ಪತ್ರದ ಪ್ರತಿಶತ ೧೨ ರಷ್ಟು ಆದಾಯವನ್ನು ಶಿಕ್ಷಣ ಕ್ಷೇತ್ರಕ್ಕೆ ತೆಗೆದಿರಿಸಿದ್ದಾರೆ. ಇದು ಸ್ವಾಗತಾರ್ಹ.. ಶಿಕ್ಶಣ ಅನ್ನುವುದು ಮುಂದಿನ ಜನಾಂಗವನ್ನು ರೂಪಗೊಳಿಸುವಂತಹುದು.. ಹಾಗೆ ಮಹಿಳಾ ಕಲ್ಯಾಣದ ಬಗ್ಗೆ ಈ ಮುಂಗಡಪತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಮುಂಗಡ ಪತ್ರದ ಪ್ರತಿಶತ ೭ ರಷ್ಟು ಹಣವನ್ನು ಮಹಿಳಾ ಮತ್ತು ಕಲ್ಯಾಣ ಕ್ಷೇತ್ರ್ರಕ್ಕೆ ತೆಗೆದಿರಸಲಾಗಿದೆ. ಈಗಾಗಲೇ ಶಕ್ತಿ ಯೋಜನೆಯ ಮೂಲಕ ,ಮಹಿಳೆಯರಿಗೆ ಉಚಿತ ಪ್ರವಾಸದ ವ್ಯವಸ್ಥೆ ಮಾಡಿರುವ ಸರ್ಕಾರ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಶಿಕ್ಷಣದ ನಂತರ ಮಹಿಳಾ ಕಲ್ಯಾಣ ತನ್ನ ನಂತರದ ಆದ್ಯತೆ ಎಂಬುದನ್ನು ಸ್ಪಷ್ಟಪಡಿಸಿದೆ..

ಈ ಮುಂಗಡ ಪತ್ರದಲ್ಲಿ ಐದೂ ಗ್ಯಾರಂಟಿಗಳನ್ನು ಅನುಷ್ಟಾನಗೊಳಿಸುವ ತಮ್ಮ ಬದ್ಧತೆಯನ್ನು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ, ಇದಕ್ಕಾಗಿ ೫೨ ಸಾವಿರ ಕೋಟಿ ರೂಪಾಯಿಗಳನ್ನು ಸಿದ್ದರಾಮಯ್ಯ ತೆಗೆದಿಸಿರಿಸಿದ್ದಾರೆ. 

ಸಿದ್ದರಾಮಮಯ್ಯ ತಮ್ಮ ಮುಂಗಡ ಪತ್ರದಲ್ಲಿ ಹಿಂದಿನ ಸರ್ಕಾರದ ಜೊತೆ ತಮ್ಮ ಸರ್ಕಾರವನ್ನು ತುಲನೆ ಮಾಡಿದ್ದಾರೆ. ಈ ಕುರಿತು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.. ಇದರ ಹಿಂದೆ ರಾಜಕೀಯ ಉದ್ದೇಶ ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಇಡೀ ಮುಂಗಡ ಪತ್ರ ರಾಜಕೀಯ ಮುಂಗಡ ಪತ್ರ ಎಂಬ ಪ್ರತಿ ಪಕ್ಷಗಳ ವಾದ ಸರಿ ಎನ್ನಿಸುವುದಿಲ್ಲ. ಜೊತೆಗೆ ಮುಂಗಡ ಪತ್ರದಲ್ಲಿ ರಾಜಕೀಯ ನುಸುಳಿರುವುದು ಇದು ಮೊದಲೇನೂ ಅಲ್ಲ. 

ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೇ ಹೋಗಿ ಸಿದ್ದರಾಮಯ್ಯನವರ ಮುಂಗಡ ಪತ್ರವನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಭರದಲ್ಲಿ ಅವರಿ ಬಿಜೆಪಿ ಪಕ್ಷವನ್ನು, ಪ್ರಧಾನಿ ನರೇಂದ್ರ ಮೋದಿಯವರನ್ನು, ಹಿಂದಿನ ಬಿಜೆಪಿ ಸರ್ಕಾರವನ್ನು ಅಪ್ರತ್ಯಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಇದು ಸೋಜಿಗ ಅನ್ನಿಸಿದರೂ ಮುಂಬರುವ ರಾಜಕೀಯ ಬೆಳವಣಿಗೆಯ ದಿಕ್ಸೂಚಿಯಾಗಿ ಕಾಣುತ್ತದೆ.


ಮಂಗಡ ಪತ್ರದ ಕೆಲವೊಂದು ಮುಖ್ಯ ಅಂಶಗಳು ಹೀಗಿವೆ..

ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ. . ಮಕ್ಕಳ ಪ್ರಸ್ತಾಪಿತ ಯೋಜನೆಗಳಿಗೆ 51,220 ಕೋಟಿ ರೂ. ಅನುದಾನ.

10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು ಏಳು ಜಿಲ್ಲೆಗಳಲ್ಲಿಎನ್‌ ಜಿಒಗಳ ಸಹಯೋಗದೊಂದಿಗೆ ಎರಡು ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭ..

ಸೋಲಿಗ ಸಮುದಾಯ, ಜೇನುಕುರುಬ, ಕಾಡುಕುರುಬ, ಕೊರಗ, ಇರುಳಿಗ, ಬೆಟ್ಟ ಕುರುಬ ಇತ್ಯಾದಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 50 ಕೋಟಿ ಮೀಸಲು

ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು, ಭೂ ಸಿರಿ ಯೋಜನೆ ಕೈಬಿಟ್ಟ ಯೋಜನೆ, ಶ್ರಮಶಕ್ತಿ ಯೋಜನೆ ಬಂದ್.

ಅನ್ನಭಾಗ್ಯ- 10,000 ಕೋಟಿ ರೂ., ಗೃಹಜ್ಯೋತಿ-13,910 ಕೋಟಿ ರೂ.,ಶಕ್ತಿ ಯೋಜನೆ - 4,000 ಕೋಟಿ ರೂ., ಇಂದಿರಾ ಕ್ಯಾಂಟೀನ್ -100ಕೋಟಿ ರೂ., ನಮ್ಮ ಮೆಟ್ರೋ- 30,000ಕೋಟಿ ರೂ.

ಆಹಾರ ಇಲಾಖೆ-10,460ಕೋಟಿ ರೂ., ಸಮಾಜ ಕಲ್ಯಾಣ-11,173ಕೋಟಿ ರೂ. , ಬೆಂಗಳೂರು ಅಭಿವೃದ್ಧಿಗೆ -45,000ಕೋಟಿ ರೂ., ಎತ್ತಿನಹೊಳೆ-23,252 ಕೋಟಿ ರೂ., ಕುಡಿಯುವ ನೀರು- 770 ಕೋಟಿ ರೂ., ಶಿಕ್ಷಣ ಇಲಾಖೆ-37,587 ಕೋಟಿ ರೂ. ಅನುದಾನ

ಹಂಪಿ ಸೇರಿ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ 75 ಕೋಟಿ ರೂ. ಮೀಸಲು, ಮೈಲಾರ, ಗಾಣಗಾಪುರ, ಮಳಖೇಡ ಸೇರಿ ವಿವಿಧ ತಾಣಗಳ ಅಭಿವೃದ್ಧಿ

01:55 PMಇಂಧನ- 22000 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ-24,166 ಕೋಟಿ ರೂ., ನೀರಾವರಿ-19,000 ಕೋಟಿ ರೂ., ಗ್ರಾಮೀಣಾಭಿವೃದ್ಧಿ-18,000 ಕೋಟಿ ರೂ., ಸಾರಿಗೆ ಮತ್ತು ಒಳಾಡಳಿತ- 16,000 ಕೋಟಿ ರೂ., ಕೃಷಿ ಮತ್ತು ತೋಟಗಾರಿಕೆ- 5,860 ಕೋಟಿ ರೂ., ಕಂದಾಯ- 16,000 ಕೋಟಿ ರೂ., ಪಶು ಸಂಗೋಪನೆ ಇಲಾಖೆ - 3,024 ಕೋಟಿ ರೂ.

ಓಟ್ಟಿನಲ್ಲಿ ಸಿದ್ದರಾಮಯ್ಯ ಬದಲಾಗಿಲ್ಲ.. ಅವರ ಸಾಮಾಜಿಕ ನ್ಯಾಯದ ನಂಬಿಕೆಯ ಅಡಿಯಲ್ಲಿ ಈ ಮುಂಗಡಪತ್ರವನ್ನು ಸಿದ್ದಪಡಿಸಿದ್ದಾರೆ. ಮಠ ಮಾನ್ಯಗಳಿಗೆ ವ್ಯಯಕ್ತಿಕ ಅನುಧಾನವನ್ನು ನೀಡೀಲ್ಲ. ಬದಲಾಗಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಹಾಗೆ ಜೈನ ಸಮುದಾಯದವರಿಗೆ ಶಕ್ತಿ ತುಂಬುವ ಯತ್ನ ಮಾಡಿದ್ದಾರೆ.. ಹಾಗೆ ನೋಡಿದರೆ ಪ್ರಸಕ್ತ ಸನ್ನಿವೇಶದಲ್ಲಿ ಮುಂಗಡ ಪತ್ರವನ್ನು ಸಿದ್ದಪಡಿಸುವುದು ಅಷ್ಟು ಸುಲಭವಾಗಿರಲಿಲ್ಲ.. ಗ್ಯಾರಂಟಿಗಳ ಅನುಷ್ಟಾನಕ್ಕೆ ಒದಗಿಸಬೇಕಾದ ಹಣವನ್ನು ಹೊಂದಿಸುವುದು ಕಷ್ಟ ಸಾಧ್ಯ ಎನ್ನುವ ಸ್ಥಿತಿ ಇತ್ತು.. ಆದರೆ ಇದೆಲ್ಲವನ್ನೂ ಮುಖ್ಯಮಂತ್ರಿಗಳು ಸಾಧಿಸಿದ್ದಾರೆ. ಸಮತೋಲನದ ಮುಂಗಡ ಪತ್ರವನ್ನು ಮಂಡಿಸಿದ್ದಾರೆ.

Wednesday, July 5, 2023

Kumaranna's anger and accusation of corruption. ​

 Former Chief Minister H.D. Kumaraswamy is angry and he is venting his anger, constantly accusing the Congress government of corruption. As a politician of every party, one should work to squeeze the ears of the ruling party.. One should work to highlight their mistakes. In a democratic system, that is their job, the responsibility given by the constitution.. But what kind of accusation? What is the language used in making accusations? The important questions are whether the language used is civilized.

Kumaraswamy is angry, is it anger on Congress party or anger on some leaders of Congress party? If he is angry with some leaders, what are the reasons for that anger?

For the past one week, Kumaraswamy's anger has increased, it has taken the form of outrage. As he is a senior politician and former chief minister of the country, it is not to be taken for granted that he spoke in a fit of anger. That's what he talked about. Accused..

Two days ago, he alleged corruption in the Chief Minister's office. It was his allegation that the chief minister's entourage demanded a bribe of Rs 30 lakh. Another former Chief Minister BJP Parliamentary Board member B.S. Yediyurappa also expressed his support. Some Congress leaders and ministers reacted bitterly to this.. If you have documents related to the allegation, give them to the Lokayukta.. File a complaint.. After this, another allegation.

The transfer is going on in the State Energy Department. This new allegation is that 10 crore bribe was received for the transfer of some important posts here.. Kumaraswamy also said that the daily earnings of these posts. In relation to this, he displayed the pen drive he had in front of the media.

Besides this, Deputy Chief Minister, KPCC President D. K. Targeted Sivakumar..but did not mention his name. Instead D. K. Sarcastically saying what Shivakumar was like before he entered politics, I am not like that, I am a person who has come through the hard times. He also warned me to be careful while talking about me.

Now let's look at the first allegation made by former Chief Minister Kumaraswamy. There is no record with us public to say that this is false or true. Common people think that when such an accusation is made, it may be possible. Because today corruption has reached such a level that people are surprised that there is no corruption in any department. People don't believe in authenticity. They believe that there has been corruption. So nothing else gets the publicity that the accusation gets.

If the accusation made once is false? It can be questioned what is the status of the accused person's reputation. But in today's situation, I don't think that either the accused or the accused will take this issue seriously.

Now Kumaraswamy's target is not the Congress government but Chief Minister Siddaramaiah and Deputy Chief Minister D.K. Shivkumar's goal, there are reasons for this, Devegowda's family has a grudge against Siddaramaiah.. They have their own reasons for that, Siddaramaiah also does not have a good opinion of Devegowda's family. This is not an ideological grudge. Personal anger. Still D. As K. Shivakumar is the leader of Okkaliga, it is politically inevitable for him to challenge his leadership. As the empire of Deve Gowda and Kumaraswamy is collapsing in the old Mysore region, the biggest challenge for them is to maintain their empire. So they have d. K. Sivakumar needs to be weakened.

When it comes to the issue of corruption, Kumaraswamy, who first targeted the Chief Minister's office, then targeted the Energy Department. In charge of Energy Department K.J. George is one of Siddaramaiah's close friends. Their intention seems to be to target Siddaramaiah by pelting him with stones.

The question now is what the Congress government will do about these allegations. Congress ministers are working to answer Kumaraswamy. Is that enough? In today's time when respect for public life has fallen, will an investigation be conducted on these allegations? It has to be said no.. It is unlikely that the Siddaramaiah government, which is investigating the corruption cases of the BJP era, will pay much attention to this. It is sad that our politics has reached such a tragic state in the race.


ಕುಮಾರಣ್ಣ ನ ಸಿಟ್ಟು ಆಕ್ರೋಶ ಮತ್ತು ಭ್ರಷ್ಟಾಚಾರದ ಆರೋಪ,,

 ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಿಟ್ಟು ಬಂದಿದೆ ಅವರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ,, ಕಾಂಗ್ರೆಸ್ ಸರ್ಕಾರದ ಮೇಲೆ ಸತತವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಒಬ್ಬ ಪ್ರತಿ ಪಕ್ಷದ ರಾಜಕಾರಣಿಯಾಗಿ ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸ ಮಾಡಬೇಕು.. ಅವರ ತಪ್ಪನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕು. ಜನತಂತ್ರ ವ್ಯವಸ್ಥೆಯಲ್ಲಿ ಅದು ಅವರ ಕೆಲಸ, ಸಂವಿಧಾನ ನೀಡಿದ ಜವಾಬ್ದಾರಿ.. ಆದರೆ ಮಾಡುವ ಆರೋಪ ಯಾವ ರೀತಿಯದು ? ಆರೋಪ ಮಾಡುವ ಸಂದರ್ಭದಲ್ಲಿ ಬಳಸುವ ಭಾಷೆ ಯಾವುದು ? ಬಳಸಿದ ಭಾಷೆ ಸುಸಂಸ್ಕೃತವಾದದ್ದೇ ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ..

ಕುಮಾರಸ್ವಾಮಿ ಅವರಿಗೆ ಸಿಟ್ಟು ಬಂದಿದೆ, ಅದು ಕಾಂಗ್ರೆಸ್ ಪಕ್ಷದ ಮೇಲಿನ ಸಿಟ್ಟೇ ಅಥವಾ ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಮೇಲಿನ ಸಿಟ್ಟೇ ? ಒಂದೊಮ್ಮೆ ಕೆಲವು ನಾಯಕರ ಮೇಲೆ ಅವರಿಗೆ ಸಿಟ್ಟಿದ್ದರೆ ಆ ಸಿಟ್ಟಿಗೆ ಕಾರಣಗಳೇನು ?

ಕಳೆದ ಒಂದು ವಾರದಿಂದ ಕುಮಾರಸ್ವಾಮಿ ಅವರ ಸಿಟ್ಟು ಹೆಚ್ಚಾಗಿದೆ,, ಅದು ಆಕ್ರೋಶದ ರೂಪ ತಾಳಿದೆ. ಅವರು ನಾಡಿನ ಹಿರಿಯ ರಾಜಕಾರಣಿಗಳೂ ಮಾಜಿ ಮುಖ್ಯಮಂತ್ರಿಗಳೂ ಆಗಿರುವುದರಿಂದ ಏನೋ ಸಿಟ್ಟಿನ ಭರದಲ್ಲಿ ಮಾತನಾಡಿಬಿಟ್ಟರು ಎಂದು ಸುಮ್ಮನಾಗುವಂತೆಯೂ ಇಲ್ಲ. ಅಂತೂ ಅವರು ಮಾತನಾಡಿ ಆಗಿದೆ. ಆರೋಪ ಮಾಡಿಯಾಗಿದೆ..

ಕಳೆದ ಎರಡು ದಿನಗಳ ಹಿಂದೆ ಅವರು ಮುಖ್ಯಮಂತ್ರಿ ಕಚೇರಿಯಲ್ಲಿನ ಭ್ರಷ್ಠಾಚಾರದ ಆರೋಪ ಮಾಡಿದರು. ಮುಖ್ಯಮಂತ್ರಿಗಳ ಸುತ್ತ ಮುತ್ತ ಇರುವವರು ೩೦ ಲಕ್ಷ ರೂಪಾಯಿ ಲಂಚ ಕೇಳಿದರು ಎಂಬುದು ಅವರ ಆರೋಪವಾಗಿತ್ತು. ಈ ಆರೋಪಕ್ಕೆ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡೀಯೂರಪ್ಪ ಅವರೂ ಬೆಂಬಲ ವ್ಯಕ್ತಪಡಿಸಿದರು. ಇದಕ್ಕೆ ಕಾಂಗ್ರೆಸ್ ನ ಕೆಲವು ನಾಯಕರು, ಸಚಿವರು ಖಾರವಾಗಿ ಪ್ರತಿಕ್ರಿಯಿಸಿದರು.. ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ದಾಖಲೆಗಳಿದ್ದರೆ ಅವುಗಳನ್ನು ಲೋಕಾಯುಕ್ತಕ್ಕೆ ನೀಡಿ.. ದೂರು ದಾಖಲಿಸಿ ಎಂದರು.. ಇದಾದ ಬೆನ್ನಲ್ಲೆ ಇನ್ನೋಮ್ದು ಆರೋಪ..

ರಾಜ್ಯ ಇಂಧನ ಇಲಾಖೆಯಲ್ಲಿ ವರ್ಗಾವಣೆ ನಡೆಯುತ್ತಿದೆ. ಇಲ್ಲಿ ಕೆಲವು ಮಹತ್ವದ ಹುದ್ದೆಗಳ ವರ್ಗಾವಣೆಗೆ ೧೦ ಕೋಟಿ ಲಂಚ ಪಡೆಯಲಾಗಿದೆ ಎಂಬುದು ಈ ಹೊಸ ಆರೋಪ.. ಈ ಹುದ್ದೆಗಳ ಪ್ರತಿದಿನದ ಕಮಾಯಿ ಎಂದೂ ಕುಮಾರಸ್ವಾಮಿ ಹೇಳಿದರು. ಇದಕ್ಕೆ ಸಂಬಂಧಿಸಿದ ಹಾಗೆ ತಮ್ಮ ಬಳಿ ಇರುವ ಪೆನ್ ಡ್ರೈವ್ ಅನ್ನು ಅವರು ಮಾಧ್ಯಮದ ಮುಂದೆ ಪ್ರದರ್ಶಿಸಿದರು.. ಇದರಲ್ಲಿ ಎಲ್ಲ ಇದೆ, ತೋರಿಸ್ತೀನಿ ಎಂದರು ಕುಮಾರಸ್ವಾಮಿ..

ಇದರ ಜೊತೆಗೆ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದರು..ಆದರೆ ಅವರ ಹೆಸರನ್ನು ಹೇಳಲಿಲ್ಲ. ಬದಲಾಗಿ ಡಿ. ಕೆ. ಶಿವಕುಮಾರ್ ರಾಜಕಾರಣಕ್ಕೆ ಬರುವುದಕ್ಕೆ ಮೊದಲು ಏನಾಗಿದ್ದರು ಎಂಬುದನ್ನು ವ್ಯಂಗ್ಯವಾಗಿ ಹೇಳುತ್ತ ನಾನು ಹಾಗಲ್ಲ, ಕಷ್ಟ ಪಟ್ಟು ಮೇಲೆ ಬಂದವನು. ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದೂ ಎಚ್ಚರಿಕೆ ನೀಡಿದರು..

ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಮೊದಲ ಆರೋಪದತ್ತ ನೋಡೋಣ.. ಇಂಧನ ಇಲಾಖೆಯಲ್ಲಿ ವರ್ಗಾವಣೆಯಲ್ಲಿ ಹಣದ ದಂಧೆ ನಡೆಯುತ್ತಿದೆ ಎಂಬುದು ಈ ಆರೋಪ. ಇದು ಸುಳ್ಳು ಎಂದು ಹೇಳುವುದಕ್ಕಾಗಲಿ ಸತ್ಯ ಎಂದು ಹೇಳುವುದಕ್ಕಾಗಲಿ ನಮ್ಮಂಥ ಸಾರ್ವಜನಿಕರ ಬಳಿ ಯಾವ ದಾಖಲೆಯೂ ಇಲ್ಲ. ಸಾಧಾರಣವಾಗಿ ಇಂತಹ ಆರೋಪ ಬಂದಾಗ ಇರಬಹುದು ಎಂದು ಸಾಮಾನ್ಯ ಜನ ಭಾವಿಸುತ್ತಾರೆ. ಯಾಕೆಂದರೆ ಇವತ್ತು ಭ್ರಷ್ಟಾಚಾರ ಯಾವ ಹಂತವನ್ನು ತಲುಪಿದೆ ಎಂದರೆ ಯಾವುದೋ ಒಂದು ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲ ಎಂದರೆ ಜನರಿಗೆ ಆಶ್ಚರ್ಯವಾಗುತ್ತದೆ. ಜನ ಪ್ರಮಾಣಿಕತೆಯ ಮಾತನ್ನು ನಂಬುವುದಿಲ್ಲ. ಭ್ರಷ್ಟಾಚಾರ ನಡೆದಿದೆ ಎಂದರೆ ನಂಬುತ್ತಾರೆ. ಆದ್ದರಿಂದ ಆರೋಪಕ್ಕೆ ಸಿಗುವ ಪ್ರಚಾರ ಬೇರೆ ಯಾವುದಕ್ಕೂ ಸಿಗುವುದಿಲ್ಲ.

ಒಂದೊಮ್ಮೆ ಮಾಡಿದ ಆರೋಪ ಸುಳ್ಳಾಗಿದ್ದರೆ ? ಆರೋಪಕ್ಕೆ ಒಳಗಾದ ವ್ಯಕ್ತಿಯ ಗೌರವ ಪ್ರತಿಷ್ಟೆಯ ಗತಿ ಏನು ಎಂದು ಪ್ರಶ್ನಿಸಬಹುದು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅರೋಪ ಮಾಡಿದವರಾಗಲೀ ಆರೋಪಕ್ಕೆ ಒಳಾಗಾದವರಾಗಲಿ ಈ ವಿಚಾರವನ್ನು ಅಶ್ಃಟು ಗಂಬೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ..

ಈಗ ಕುಮಾರಸ್ವಾಮಿಯವರ ಟಾರ್ಗೆಟ್ ಕಾಂಗ್ರೆಸ್ ಸರ್ಕಾರ ಎನ್ನುವುದಕ್ಕಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗುರಿ , ಇದಕ್ಕೂ ಕಾರಣಗಳಿವೆ, ಸಿದ್ದರಾಮಯ್ಯ ಅವರ ಬಗ್ಗೆ ದೇವೇಗೌಡರ ಕುಟುಂಬಕ್ಕೆ ಸಿಟ್ಟು ಧ್ವೇಷ ಇದೆ.. ಅದಕ್ಕೆ ಅವರಿಗೆ ಅವರದೇ ಆದ ಕಾರಣಗಳಿವೆ,, ಸಿದ್ದರಾಮಯ್ಯನವರಿಗೂ ದೇವೇಗೌಡರ ಕುಟುಂಬದ ಒಳ್ಳೇ ಅಭಿಪ್ರಾಯ ಇಲ್ಲ. ಇದು ಸೈದ್ದಾಂತಿಕ ಸಿಟ್ಟಲ್ಲ. ವೈಯಕ್ತಿಕ ಸಿಟ್ಟು. ಇನ್ನೂ ಡಿ. ಕೆ.ಶಿವಕುಮಾರ್ ಒಕ್ಕಲಿಗರ ನಾಯಕರಾಗಿರುವುದರಿಂದ ಅವರ ನಾಯಕತ್ವಕ್ಕೆ ಸವಾಲು ಹಾಕುವುದು ರಾಜಕೀಯವಾಗಿ ಅವರಿಗೆ ಅನಿವಾರ್ಯ ಎನ್ನಿಸಿದೆ. ಯಾಕೆಂದರೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಸಾಮ್ರಾಜ್ಯ ಹಳೇ ಮೈಸೂರು ಪ್ರದೇಶದಲ್ಲಿ ಕುಸಿಯುತ್ತಿದೆ, ಅವರಿಗೆ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ಹೀಗಾಗಿ ಅವರಿಗೆ ಡಿ. ಕೆ.ಶಿವಕುಮಾರ್ ಅವರನ್ನು ದುರ್ಬಲಗೊಳಿಸಬೇಕಾಗಿದೆ,,

ಇನ್ನೂ ಬ್ರಷ್ಟಾಚಾರದ ವಿಚಾರಕ್ಕೆ ಬಂದರೆ ಮೊದಲು ಮುಖ್ಯಮಂತ್ರಿಗಳ ಕಚೇರಿಯನ್ನು ಟಾರ್ಗೆಟ್ ಮಾಡಿಕೊಂಡ ಕುಮಾರಸ್ವಾಮಿ ನಂತರ ಇಂಧನ ಇಲಾಖೆಯನ್ನು ಟಾರ್ಗೆಟ್ ಮಾಡಿದರು. ಇಂಧನ ಇಲಾಖೆಯ ಜವಾಬ್ದಾರಿ ಹೊತ್ತ ಕೆ.ಜೆ. ಜಾರ್ಜ್ ಸಿದ್ದರಾಮಯ್ಯನವರ ಆಪ್ತರಲ್ಲಿ ಒಬ್ಬರು. ಇವರಿಗೆ ಕಲ್ಲು ಹೊಡೆಯುವ ಮೂಲಕ ಸಿದ್ದರಾಮಯ್ಯನವರನ್ನು ಗುರಿಯಾಗಿಸುವುದು ಅವರ ಉದ್ದೇಶ ಇದ್ದಂತಿದೆ,

ಈಗಿರುವ ಪ್ರಶ್ನೆ ಎಂದರೆ ಕಾಂಗ್ರೆಸ್ ಸರ್ಕಾರ ಈ ಆರೋಪಗಳಿಗೆ ಸಂಬಂಧಿಸಿದಂತೆ ಏನು ಮಾಡುತ್ತದೆ ಎಂಬುದು. ಕುಮಾರಸ್ವಾಮಿ ಅವರಿಗೆ ಉತ್ತರ ಕೊಡುವ ಕೆಲಸವನ್ನು ಕಾಂಗ್ರೆಸ್ ಸಚಿವರು ಮಾಡುತ್ತಿದ್ದಾರೆ. ಇಷ್ಟೇ ಸಾಕೆ ? ಸಾರ್ವಜನಿಕ ಬದುಕಿನ ಗೌರವ ಕುಸಿದ ಇಂದಿನ ಸಂದರ್ಭದಲ್ಲಿ ಈ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುತ್ತದೆಯೆ ? ಇಲ್ಲ ಎಂದೇ ಹೇಳಬೇಕು.. ಬಿಜೆಪಿ ಕಾಲದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆಗೆ ಮುಂದಾಗಿರುವ ಸಿದ್ದರಾಮಯ್ಯ ಸರ್ಕಾರ ಈ ಬಗ್ಗೆ ಹೆಚ್ಚಿನ ಲಕ್ಷ್ಯ ಕೊಡುವ ಸಾಧ್ಯತೆ ಕಡಿಮೆ. ಓಟ್ಟಿನಲ್ಲಿ ನಮ್ಮ ರಾಜಕಾರಣ ಇಂತಹ ದುರಂತ ಸ್ಥಿತಿಗೆ ಬಂದು ತಲುಪಿದೆ ಎಂಬುದೇ ಬೇಸರದ ವಿಷಯ.


ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...