Thursday, October 27, 2022

ಕೇಜ್ರಿವಾಲ್. ಬಿಜೆಪಿ ಬುಡಕ್ಕೆ ಹಿಂದುತ್ವದ ಬಾಂಬ್..!


 ಅರವಿಂದ್ ಕೇಜ್ರಿವಾಲ್...

ಸರ್ಕಾರಿ ನೌಕರಿಯನ್ನು ಬಿಟ್ಟು ಸಾಮಾಜಿಕ ಬದುಕಿಗೆ ಕಾಲಿಟ್ಟವರು.. ಅಣ್ಣಾ ಹಜಾರೆಯ ಜೊತೆ ಕೈಜೋಡಿಸಿ ಅವರ ಜೊತೆ ಹೋರಾಟದ ಹಾದಿಯಲ್ಲಿ ಮುನ್ನಡೆದವರು.. ಆ ಅ ಸಮಯದಲ್ಲಿ ಅವರು ದೆಹಲಿಯ ಮುಖ್ಯಮಂತ್ರಿಯಾಗಬಹುದು ಎಂದು ಯಾರೂ ನಿರೀಕ್ಷಿಸರಲಿಲ್ಲ. ಹಾಗೆ ಪಂಜಾಬ್ ರಾಜ್ಯದ ಅಧಿಕಾರವನ್ನು ಆಮ್ ಆದ್ಮಿ ಪಾರ್ಟಿ ಪಡೆದಾಗ ಹಲವರಿಗೆ ಆಶ್ಚರ್ಯವಾಗಿತ್ತು,, ಬುಶ್ ಶರ್ಟ್ ಧರಿಸಿ ಆಗಾಗ ಕೆಮ್ಮುತ್ತ ಗಂಟಲು ಸರಿಮಾಡಿಕೊಂಡು ಮಾತನಾಡುವ ಕೇಜ್ರಿವಾಲ್ ಅಂತಹ ಜನಪ್ರಿಯ ನಾಯಕ ಎಂದೂ ಅನ್ನಿಸಿರಲಿಲ್ಲ.

ಆದರೆ ದೆಹಲಿಯಲ್ಲಿ ಅವರು ನೀಡಿದ ಆಡಳಿತ ಮತ್ತು ಅವರ ಆದ್ಯತೆಗಳು ಸಾಂಪ್ರದಾಯಿಕ ರಾಜಕಾರಣಕ್ಕೆ ಸಡ್ದು ಹೊಡೆದಂತೆ ಇತ್ತು. ಅವರು ಭಾರತದ ರಾಜಕಾರಣದ ವ್ಯಾಖ್ಯೆಯನ್ನು ಬದಲಿಸುತ್ತಿದ್ದಾರೆ ಎಂದು ಅನ್ನಿಸುತ್ತಿತ್ತು.. ಪ್ರಾಯಶಃ ದೆಹಲಿಯ ಜನ ಕೂಡ ಹಾಗೆ ಅಂದುಕೊಂಡಿದ್ದರು. ಶಿಕ್ಷಣ ಆರೋಗ್ಯದಂತಹ ಜನರ ಮೂಲಭೂತ ಅವಶ್ಯಕತೆಗಳತ್ತ ಅವರು ನೀಡುತ್ತಿದ್ದ ಲಕ್ಷ್ಯ ಮತ್ತು ಆದ್ಯತೆ ಬೆರಗು ಮೂಡಿಸುವಂತೆ ಇತ್ತು.. ಆದರೆ ಅವರ ಒಳಗೆ ಒಬ್ಬ ರಾಜಕಾರಣಿ ಇದ್ದ. ಅವನಲ್ಲಿ ರಾಜಕೀಯ ಚಾಕಚಕ್ಯತೆ ಇತ್ತು. ಬದ್ಧತೆಗಿಂತ ರಾಜಕೀಯ ಗೆಲವು ಅವನಿಗೆ ಮುಖ್ಯವಾಗಿತ್ತು..

ಹಾಗೆ ನೋಡಿದರೆ ಅಣ್ಣಾ ಹಜಾರೆ ಕೂಡ ಮುಖವಾಡ ಧರಿಸಿದ್ದರು. ಆ ಮುಖವಾಡದ ಹಿಂದಿದ್ದ ನೈಜ ಮುಖ ಹಿಂದುತ್ವದ ಮುಖವಾಗಿತ್ತು.. ಬೆಜೆಪಿಗೆ ಸಹಾಯ ಮಾಡುವ ಹೋರಾಟ ಅವರದಾಗಿತ್ತು.. ಅವರು ನಡೆಸಿದ ಎಲ್ಲ ಹೋರಾಟಗಳ ಹಿಂದೆ ಬಿಜೆಪಿಯ ವರದ ಹಸ್ತ, ಲೋಕಪಾಲ್ ವ್ಯವಸ್ಥೆಗಾಗಿ ಅವರು ನಡೆಸುತ್ತಿದ್ದ ಹೋರಾಟಕ್ಕೆ ವ್ಯವಸ್ಥೆಯ ಹಿಂದೆ ಬಿಜೆಪಿಯ ಉದ್ಯಮಪತಿಗಳ ಬೆಂಬಲವಿತ್ತು.. ಆದರೆ ಇದಕ್ಕೆ ಹೆಚ್ಚಿನ ಮಹತ್ವವವನ್ನು ಯಾರೂ ನೀಡಲೇ ಇಲ್ಲ. ಆಣ್ಣಾ ಹಜಾರೆ ಮಹಾತ್ಮಾ ಗಾಂಧಿಯವರ ನಂತರದ ಮಹತ್ವದ ಹೋರಾಟಗಾರ ಎಂಬಂತೆ ಮಾಧ್ಯಮಗಳು ಬಿಂಬಿಸಿದವು.. ಇದರ ಹಿಂದೆಯೂ ಬಿಜೆಪಿಯ ಕೈವಾಡವಿತ್ತು.

ಈ ಎಲ್ಲ ಸಂದರ್ಭಗಳಲ್ಲಿ ಅರವಿಂದ್ ಕೇಜ್ರಿವಾಲ್ ರಾಮನ ಮುಂದೆ ಹನುಮಂತ ತಲೆ ಬಗ್ಗಿಸಿ ಕುಳಿತ ಹಾಗೆ ಕೇಜ್ರಿವಾಲ್ ಕುಳಿತಿದ್ದರು..ಅಣ್ಣಾ ಹಜಾರೆಯ ಈ ಮುಖವಾಡದ ಹೋರಾಟ ತಿಳಿಯದಷ್ಟು ಕೇಜ್ರಿವಾಲ್ ಮೂರ್ಖರಾಗಿರಲಿಲ್ಲ. ಅವರು ತಮ್ಮ ಸಮಯಕ್ಕಾಗಿ ಕಾಯುತ್ತಿದ್ದರು. ಯಾಕೆಂದರೆ ಅವರೂ ಸಹ ಮುಖವಾಡದ ವ್ಯಕ್ತಿಯಾಗಿದ್ದರು.

ಅವರು ದೆಹಲಿ ಮುಖ್ಯಮಂತ್ರಿಯಾಗುವ ಹೊತ್ತಿಗೆ ಅವರ ಜೊತೆಗಿದ್ದ ಹಲವರು ಅವರನ್ನು ತೊರೆದರು. ಯೋಗೇಂದ್ರ ಯಾದವ್ ಅವರಂತವರು ಕೇಜ್ರಿವಾಲ್ ಅವರನ್ನು ಬಹುಬೇಗ ಅರ್ಥಮಾಡಿಕೊಂಡಿದ್ದರು.. ಆದರೆ ಅಷ್ಟರಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದರು.. ದೆಹಲಿಯ ಸರ್ಕಾರಿ ಶಾಲೆಗಳು ತಮ್ಮ ರೂಪ ಬಣ್ಣವನ್ನು ಬದಲಿಸಿದ್ದವು.. ಖಾಸಗಿ ಶಾಲೆಗಳ ಜೊತೆ ಪೈಪೋಟಿ ನೀಡುವಷ್ಟು ಸರ್ಕಾರಿ ಶಾಲೆಗಳು ಬದಲಾದವು. ಸರ್ಕಾರಿ ಆಸ್ಪತ್ರೆಗಳು ಸುಧಾರಿಸಿದವು.. ದೇಶದ ಸಾಮಾನ್ಯ ಜನ ಅರವಿಂದ್ ಕೇಜ್ರಿವಾಲ್ ಅವರತ್ತ ಆಸೆ ಗಣ್ಣುಗಳಿಂ ನೋಡತೊಡಗಿದರು.. ದೇಹಲಿಗೆ ಭೇಟಿ ನೀಡುವ ರಾಜಕಾರಣಿಗಳು ಸಾಮಾನ್ಯ ಜನ ಅಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಯಿತು.

ಕೇಜ್ರಿವಾಲ್ ತಮ್ಮ ವ್ಯಕ್ತಿತ್ವಕ್ಕಿಂತ ದೊಡ್ಡದಾಗಿ ಬೆಳೆಯತೊಡಗಿದರು...ಆದರೆ ಆಗಲೇ ಅವರು ಸಾಫ್ಟ್ ಹಿಂದುತ್ವದ ಆರಾಧಕರಾಗಿದ್ದರು. ದೆಹಲಿಯಲ್ಲಿ ಹಿಂಸೆ ತಾಂಡವಾಡುತ್ತಿದ್ದಾಗ ಅವರು ಹಿಂಸಾಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿಲ್ಲ. ಹಿಂಸೆಯಿಂದ ನಲುಗಿದ ಜನರಿಗೆ ಸಾಂತ್ವನ ಹೇಳುವ ಕೆಲಸವನ್ನು ಮಾಡಲಿಲ್ಲ...ಪ್ರತಿಷ್ಟಿತ ಜವಾಹರ್ ನೆಹರೂ ವಿಶ್ವಾವಿದ್ಯಾಲಯವನ್ನು ಕೇಸರಿಕರಣ ಮಾಡುವ ಪ್ರಕ್ರಿಯೆಗಳು ನಡೆಯುವಾಗ ಅವರ ಬಾಯಿಯಿಂದ ಯಾವ ಮಾತೂ  ಬರಲಿಲ್ಲ. ಜೊತೆಗೆ ಅವರು ಬಿಜೆಪಿಯ ಎಜೆಂಡಾವನ್ನು ಅನುಷ್ಠಾನಗೊಳಿಸುವುದರಲ್ಲಿ ನಿರತರಾದರು..

ಕೇಂದ್ರ ಪ್ರಭುತ್ವ ದೇವಾಲಯಗಳನ್ನು ನಿರ್ಮಿಸಲು ಆದ್ಯತೆ ನೀಡಿದರೆ, ಕೇಜ್ರೀವಾಲ್ ಈ ದೇವಾಲಯಗಳಿಗೆ ಭಕ್ತರನ್ನು ಸರಬರಾಜು ಮಾಡುವ ಯೋಜನೆಗಳನ್ನು ರೂಪಿಸತೊಡಗಿದರು, ವಯಸ್ಕರಿಗೆ ಉಚಿತ ತೀರ್ಥಯಾತ್ರೆ ಮಾಡಿಸತೊಡಗಿದರು..

ಕೇಜ್ರಿವಾಲ್ ಬದಲಾಗಿರಲಿಲ್ಲ. ಅವರು ಇದ್ದುದೇ ಹಾಗಾಗಿತ್ತು.

ಅವರ ಸಂಪುಟ ಸದಸ್ಯರ ಮೇಲೆ ಬಂದ ಭ್ರಷ್ಟಾಚಾರದ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಅದು ರಾಜಕೀಯ ಪ್ರೇರಿತ ಆರೋಪಗಳು ಇರಬಹುದು.. ಆದರೆ ಅಷ್ಟರಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಕ್ಷದ ಅಪಾಯ ಅರಿವಾಗಿತ್ತು.. ಅಭಿವೃದ್ಧಿಯ ಮಾತನಾಡುತ್ತ ಹಿಂದು ಮತಗಳನ್ನು ಅವರು ಕ್ರೋಡಿಕರಿಸುತ್ತಿರುವ ರೀತಿಯಿಂದ ಬಿಜೆಪಿ ಎಚ್ಚರಗೊಂಡಿತು..ಅಷ್ಟರಲ್ಲಿ ದೆಹಲಿ ಪಂಜಾಬ್ ನಂತರ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್ ಗೂ ಕಾಲಿಟ್ಟಾಗಿತ್ತು.. ಅಲ್ಲಿಯೂ ಜನ ಆಮ್ ಆದ್ಮಿ ಪಕ್ಷದತ್ತ ನೋಡತೊಡಗಿದ್ದರು. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಹಿಂದೂ ಮತ ಬ್ಯಾಂಕ್ ಅನ್ನು ಕೇಜ್ರಿವಾಲ್ ಪಕ್ಷ ಒಡೆಯಬಹುದು ಎಂಬ ಆತಂಕ ಬಿಜೆಪಿಯದು..

ಅರವಿಂದ್ ಕೇಜ್ರಿವಾಲ್ ತಮ್ಮ ಮೃದು ಹಿಂದುತ್ವದ ಅಜೆಂಡಾವನ್ನು ಪರಿಣಾಮಕಾರಿಯಾಗಿ ಜಾರಿಗೆ ತರತೊಡಗಿದರು..ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ ಎಂಬ ಘೋಷಣೆಯನ್ನು ಕೂಗಿದರು. ರಾಮ ರಾಜ್ಯದ ಮಾತನಾಡತೊಡಗಿದರು. ಕೃಷ್ಣನನ್ನೂ ನೆನಪು ಮಾಡಿಕೊಳ್ಳತೊಡಗಿದರು..

ಬಿಜೆಪಿ ಕೇಜ್ರಿವಾಲ್ ಮೇಲೆ ಸತತ ದಾಳಿಯನ್ನು ಮುಂದುವರಿಸಿತು. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಅವರ ಬಾಯಿ ಮುಚ್ಚಿಸಲು ಯತ್ನ ನಡೆಸಾಲಾಯಿತು.. ಆದರೆ ಇದೆಲ್ಲ ನಿರೀಕ್ಷಿತ ಪರಿಣಾಮ ನೀಡಲಿಲ್ಲ. ಸಚಿವ ಸಿಸೋಡಿಯಾ ಅವರನ್ನು ಜೈಲಿಗೆ ಕಳುಹಿಸುವ ಯತ್ನವನ್ನೂ ಮುಂದುವರಿಸಲಾಯಿತು..

ಈಗ ಅರವಿಂದ್ ಕೇಜ್ರಿವಾಲ್ ಹಿಂದೂ ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟಿದ್ದಾರೆ. ಅದಕಾಗ್ಗಿ ಅವರು ಯಾವ ಹಂತವನ್ನು ತಲುಪಿದ್ದಾರೆ ಎಂದರೆ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಮ್ಮ ಸಹೋದ್ಯೋಗಿ ಗೌತಮ್ ಅವರನ್ನು ಸಂಪುಟದಿಂದ ಹೊರಹಾಕಿದ್ದಾರೆ.. ಹಿಂದೂಗಳ ಮನವೊಲಿಕೆಗೆ ಏನನ್ನಾದರೂ ಮಾಡಲು ಅವರು ಸಿದ್ದರಾಗಿದ್ದಾರೆ..

ಅವರು ಇತ್ತೀಚಿಗೆ ನೀಡಿದ ಒಂದು ಹೇಳಿಕೆಯನ್ನೇ ಗಮನಿಸಿ.. ನಮ್ಮ ನೋಟುಗಳಲ್ಲಿ ಲಕ್ಷ್ಮಿ ಮತ್ತು ಗಣೇಶನ ಚಿತ್ರವನ್ನು ಮುದ್ರಿಸಬೇಕು ಎಂಬ ಅವರ ಹೇಳಿಕೆ ಬಿಜೆಪಿ ಒಳಗೆ ತಲ್ಲಣವನ್ನು ಸೃಷ್ಟಿಸಿದೆ..ಬಿಜೆಪಿಯ ವಕ್ತಾರರು ಕೇಜ್ರಿವಾಲ್ ಅವರನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಆದರೆ ಕೇಜ್ರಿವಾಲ್ ಬಿಜೆಪಿಯ ಬಾಣವನ್ನು ಅವರ ಮೇಲೆ ತಿರುಗಿಸಿಬಿಟ್ಟಿದ್ದಾರೆ..ಭಾರತದ ನೋಟುಗಳ ಮೇಲೆ ಹಿಂದೂ ದೇವರ ಚಿತ್ರ ಹಾಕಬೇಕು ಎಂಬ ಬೇಡಿಕೆಯನ್ನು ಬಿಜೆಪಿ ಮತ್ತು ಕೇಂದ್ರ ಪ್ರಭುತ್ವ ತಿರಸ್ಕರಿಸುವಂತೆಯೂ ಇಲ್ಲ, ಒಪ್ಪಿಕೊಳ್ಳುವಂತೆಯೂ ಇಲ್ಲ. ಒಂದೊಮ್ಮೆ ಒಪ್ಪಿಕೊಂಡರೆ ಕೇಜ್ರಿವಾಲ್ ಹಿಂದೂಗಳ ಹೃದಯ ಸಾಮ್ರಾಟನಾಗುವತ್ತ ಇನ್ನೊಂದು ಹೆಜ್ಜೆಯನ್ನು ಇಟ್ಟುಬಿಡುತ್ತಾರೆ. ಹೀಗಾಗಿ ಬಿಜೆಪಿ ಅಡಗತ್ತರಿಯಲ್ಲಿ ಸಿಲುಕಿಕೊಂಡ ಅಡಕೆಯಂತಾಗಿದೆ..

ಈ ಮೃದು ಹಿಂದುತ್ವ ಗುಜರಾತ್ ಚುನಾವಣೆಯಲ್ಲಿ ಕೇಜ್ರಿವಾಲ್ ಅವರಿಗೆ ಲಾಭವನ್ನು ತಂದುಕೊಡಬಲ್ಲದೇ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಬಿಜೆಪಿಗೆ ದೊಡ್ಡ ತೊಡರುಗಾಲು ಎಂಬುದು ಮಾತ್ರ ನಿಜ..

ಈ ಬೆಳವಣಿಗೆ ಇನ್ನೊಂದು ಅಂಶವನ್ನು ಸ್ಪಷ್ಟಪಡಿಸಿದೆ.. ಕೇಜ್ರಿವಾಲ್ ಬಿಜೆಪಿಯ ಇನ್ನೊಂದು ಮುಖ.. ಅವರ ಅಜೆಂಡಾ ಸಂಘ ಪರಿವಾರ ಮತ್ತು ಬಿಜ್ರ್ಪಿಯ ಅಜೆಂಡಾಗಿಂತ ಭಿನ್ನವಾಗಿಲ್ಲ ಎಂಬುದು

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...