Saturday, October 22, 2022

ಬಲಿಯಿಂದ್ರ ಬಂದು ಬಾಗ್ಲಾಗೆ ನಿಂದಾಗ ಹೊನ್ನಂಥ ಮಳೆಯೇ ಸುರಿದಾವೂ,,,





ದೀಪಾವಳಿ ದೊಡ್ಡ ಹಬ್ಬ..ಇದನ್ನು ಕರೆಯುವುದೇ ಹಾಗೆ.. ಮೂರು ದಿನಗಳ ಈ ಹಬ್ಬದಲ್ಲಿ ಸಂಭ್ರಮ.. ನರಕ ಚತುರ್ದಶಿಯಿಂದ ಬಲಿ ಪಾಡ್ಯದವರೆಗೆ.. ಈ ಮೂರು ದಿನಗಳಲ್ಲಿ ಮೊದಲ ದಿನ ದೀಪ ಹಚ್ಚುವುದು ಮುಖ್ಯ.. ದೀಪದ ದೊಂದಿಯನ್ನು ಹಿಡಿದು ತೋಟಕ್ಕೆ ಹೋಗಿ ಹಬ್ಬವನ್ನು ಕಳಿಸುವುದು ಮೂರನೆಯ ದಿನ.. ಅಂದೇ ಗೋಪೂಜೆ ಮತ್ತು ಗೋಗಳನ್ನು ಸಿಂಗಾರ ಮಾಡಿ ಊರ ಹೊರಗೆ ಕರೆದೊಯ್ಯಲಾಗುತ್ತದೆ.. ಅಡಿಕೆ ಸರಗಳಿಂದ ಶ್ರಂಗಾರ ಮಾಡಿದ ಎಲ್ಲರ ಮನೆಯ ಗೋವುಗಳು ಊರ ಹೊರಗಿನ ಮೈದಾನಕ್ಕೆ ಬರುತ್ತವೆ. ಅಲ್ಲಿ ಗೋ ಬೆಚ್ಚುವ ಕಾರ್ಯಕ್ರಮ ನಡೆಯುತ್ತದೆ.
ನಾನು ಹೇಳಲು ಹೊರಟಿದ್ದು ಇದನ್ನಲ್ಲ.. ಬಲಿ ಬಲಿಯಾದ ಕಥೆ ಮತ್ತು ಬಿಂಗಿ ಪದ ನನ್ನನ್ನು ಹೆಚ್ಚು ಹೆಚ್ಚು ಕಾಡುತ್ತಿದೆ. ಬಾಲ್ಯದಲ್ಲಿ ದೊಡ್ಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಾಗ ಏನೂ ಅನ್ನಿಸುತ್ತಿರಲಿಲ್ಲ. ಆಗ ಕೊಟ್ಟಿಗೆಯಲ್ಲಿರುವ ದನ ಎಮ್ಮೆ ಎತ್ತುಗಳಿಗೆ ಮೈತೊಳೆಯುವುದು ಶ್ರಂಗಾರ ಮಾಡುವುದು ಅತಿ ಸಂತೋಷದ ಕೆಲಸವಾಗಿತ್ತು.. ಜೊತೆಗೆ ವಾರಾಂತ್ಯದಲ್ಲಿ ದನ ಕಾಯುವವರು ಬರದಿದ್ದಾಗ ದನ ಕಾಯಲು ಹೋಗುತ್ತಿದ್ದೆ. ಹೀಗಾಗಿ ಕೊಟ್ಟೆಗೆಯಲ್ಲಿರುವ ದನ ಎಮ್ಮೆ ಎತ್ತುಗಳ ಜೊತೆ ಆತ್ಮೀಯ ಸಂಬಂಧ ಬೆಳೆದಿರುತ್ತಿತ್ತು. ಹೀಗಾಗಿ  ಅವುಗಳ ಮೈ ತೊಳೆಯಲು ಕೊಟ್ಟಿಗೆಯಿಂದ ಹೊರಕ್ಕೆ ಕರೆದುಕೊಂಡು ಬಂದಾಗ ಅವುಗಳಿಗೂ ಸಂಭ್ರಮ.. ಮೈತೊಳೆಯುವಾಗ ಈ ಮೂಕ ಪ್ರಾಣಿಗಳು ಸಂಭ್ರಮಿಸುವ ರೀತಿ ನನಗೂ ಸಂತೋಷವನ್ನು ನೀಡುತ್ತಿತ್ತು.
ಈ ದೊಡ್ಡ ಹಬ್ಬವನ್ನು ದೊಡ್ಡ ಹಬ್ಬ ಎಂದು ಯಾಕೆ ಕರೆಯಲಾಗುತ್ತಿದೆ ? ಮೂರು ದಿನಗಳ ಕಾಲ ನಡೆಯುತ್ತಿರುವುದರಿಂದ ಇದು ದೊಡ್ಡ ಹಬ್ಬವಾಯಿತೇ ? ಅಥವಾ ಬಲಿಯಿಂದ್ರನನ್ನ್ನು ವಾಮನ ಭೂಮಿಯ ಒಳಗೆ ತುಳಿದಿದ್ದರಿಂದ ಇದನ್ನು ದೊಡ್ಡ ಹಬ್ಬ ಎಂದು kಅರೆಯಲಾಯಿತೆ ? ಈ ಪುರಾಣದಲ್ಲಿ ಇರುವ ಪ್ರಮುಖ ಪಾತ್ರ ಎರಡೇ.. ಒಬ್ಬ ವಾಮನ ಇನ್ನೊಬ್ಬ ಬಲಿಯಿಂದ್ರ.. ವಾಮನ ವಿಶ್ಣುವಿನ ಅವತಾರ.. ಆತ ಬಲಿಯಿಂದ್ರನನ್ನು ಭೂಮಿಯ ಒಳಗೆ ತಳ್ಳಲು ಬ್ರಾಹ್ಮಣವೇಶಧಾರಿಯಾಗಿ ಬರುತ್ತಾನೆ. ನೆಲ ಸಂಸ್ಕೃತಿಯನ್ನು ಪ್ರತಿನಿಧಿಸುವ ಬಲಿಯನ್ನು ಸನಾತನ ಧರ್ಮದ ಪರಿಪಾಲಕರಾದ ಬ್ರಾಹ್ಮಣ ವೇಷಧಾರಿ ವಿಷ್ಣು ನೆಲಕ್ಕೆ ಕುಸಿಯುವಂತೆ ಮಾಡುವ ಮೂಲಕ ನೆಲ ಸಂಸ್ಕೃತಿಯ ವಿರುದ್ಧ ಬ್ರಾಹ್ಮಣ ಸಂಸ್ಕೃತಿ ಜಯಿಸುವಂತೆ ಮಾಡುತ್ತಾನೆ.. ಹೀಗಾಗಿ ನೆಲ ಸಂಸ್ಕೃತಿ ಕುಸಿದಿದ್ದು ಸನಾತನ ಧರ್ಮ ಜಯಿಸಿದ್ದು ದೊಡ್ಡ ಹಬ್ಬವಾಯಿತೆ..? ನನಗೆ ಹಾಗೇ ಅನಿಸುತ್ತದೆ..
ಹೀಗೆ ನೆಲಕ್ಕೆ ತಳ್ಳಲ್ಪಟ್ಟ ಬಲಿ ವರ್ಷಕ್ಕೆ ಮೂರು ದಿನ ಭೂಮಿಗೆ ಬರಲು ವಿಷ್ಣು ಅವಕಾಶ ನೀಡುತ್ತಾನೆ..ಅಂದರೆ ಸನಾತನ ಧರ್ಮ ನೆಲ ಸಂಸ್ಕೃತಿಗೆ ವರ್ಷಕ್ಕೆ ಮೂರು ದಿನದ ವರ ನೀಡುತ್ತದೆ.. ಪ್ರಾಯಶಃ ಈ ಹಬ್ಬಕ್ಕೆ ನೆಲದ ಜೊತೆ ನೇರವಾದ ಸಂಬಂಧವಿದೆ.. ಮನೆಯಲ್ಲಿರುವ ಜಾನುವಾರುಗಳ ಪೂಜೆಯಿಂದ ಕೃಷಿ ಉಪಕರಣಗಳ ಪೂಜೆಯವರೆಗೆ...
ಬಲಿಯಿಂದ್ರನ ಮೂಲ ಹೆಸರು ಬಲಿ ಎಂದು ಇರಲಿಕ್ಕಿಲ್ಲ. ಆತ ವಾಮನನಿಗೆ ಬಲಿಯಾದ್ದರಿಂದ ಬಲಿ ಎಂಬ ಹೆಸರು ಬಂದಿರಲಿಕ್ಕೂ ಸಾಕು.. ವಿಷ್ಣು ಕುಬ್ಜ ರೂಪದಲ್ಲಿ ಬಂದು ಬಾಹುಬಲಿಯನ್ನು ಬಲಿ ಹಾಕಿದ... ಬಲಿ ನಿಜವಾದ ಅರ್ಥದಲ್ಲಿ ಬಾಹುಬಲಿಯೇ.. ಆತ ಶಕ್ತಿ ಸಂಪನ್ನನಾಗಿದ್ದ. ದೈವ ಭಕ್ತನಾಗಿದ್ದ,, ಆದರೂ ಆತ ಬಲಿಯಾದ. ಅದೂ ಬ್ರಾಹ್ಮಣ ರೂಪದಲ್ಲಿ.. ಇದನ್ನು ಇನ್ನೂ ವಿಶದೀಕರಿಸುವುದಾದರೆ ಬ್ರಾಹ್ಮಣರು ಬಲಿಯಿಂದ್ರನನ್ನು ಬಲಿ ಹಾಕಿದರು ಎಂದೂ ಹೇಳಬಹುದಲ್ಲವೆ ?  ಸನಾತನ ಧರ್ಮ ನೆಲ ಧರ್ಮದ ಮೇಲೆ ವಿಜಯ ಸಾಧಿಸುವಂತೆ ಮಾಡಲಾಯಿತು ಎಂದೂ ವ್ಯಾಖ್ಯಾನಿಸಬಹುದು ಅಲ್ಲವೆ ?
ಈ ದೇಶದ ಬಹುತೇಕ ಹಬ್ಬ ಹರಿದಿನಗಳು ನೆಲ ಸಂಸ್ಕೃತಿ ಮತ್ತು ಸನಾತನ ಸಂಸ್ಕೃತಿಯ ನಡುವಿನ ಸಂಘರ್ಷವೇ ಆಗಿದೆ.  ರಾಕ್ಷಸರು ನೆಲದ ಜೊತೆ ಸಂಬಂಧ ಹೊಂದಿದವರಾದರೇ ದೇವತೆಗಳು ದೇವಲೋಕದಿಂದ ಬಂದವರಾಗಿದ್ದಾರೆ.. ಅವರು ದೇವಲೋಕದಿಂಡ ಕೆಳಗಿಳಿದು ಬಂದು ಸನಾತನ ಧರ್ಮಕ್ಕೆ ಜಯ ತ್ಂದುಕೊಟ್ಟು ತಮ್ಮ ಲೋಕಕ್ಕೆ ವಾಪಸ್ಸಾಗಿದ್ದಾರೆ..
ನಾನು ಲೇಖನದ ಪ್ರಾರಂಭದಲ್ಲಿ ಹೇಳಿದ್ದು ಬಿಂಗಿ ಕುರಿತು.. ಬಿಂಗಿ ಪದ ಹೇಳುವವರು, ಬಲಿಯನ್ನು ಇಂದ್ರ ಎಂದು ಕರೆಯುವವರು ಹಸಲರು.. ಸಮಾಜದ ಅತಿ ಕೆಳ ಹ್ಂತದಲ್ಲಿ ಇರುವ ಪರಿಶಿಷ್ಟರು..ಪರಿಶಿಷ್ಟ ಜನಾಂಗದ ಇವರಿಗೆ ತಮ್ಮ ಮನೆಯಲ್ಲಿ ಮಾಡಿದ ವಿಶೇಷ ಆದುಗೆಯನ್ನು ನೀಡುವವರು ಬ್ರಾಹ್ಮಣರು.. ಈ ಬ್ರಾಹ್ಮಣರು ಮಾಡುವ ದೊಡ್ಡ ಹಬ್ಬಕ್ಕೆ ವಿಶೇಷ ಮಂತ್ರಗಳಿಲ್ಲ.. ಬಲಿಯಿಂದ್ರನ ಸ್ತುತಿಸುವ ಮಂತ್ರಗಳೂ ಇಲ್ಲ. ಅಂದರೆ ಬಲಿ ಬಲಿಯಾದ ಬಗ್ಗೆ ಇವರಿಗೆ ಸಂತೋಷವಿದೆ. ಆತ ನೆಲ ಸಂಸ್ಖೃತಿಯನ್ನು ಪ್ರತಿನಿಧಿಸುವ ವ್ಯಕ್ತಿ ನೆಲದ ಒಳಗೆ ಸೇರಿಸಿದ್ದಿ ಅವರಿಗೆ ಸಂಭ್ರಮದ ದಿನ.
ಭಾರತಿಯಾ ಹಬ್ಬಗಳಲ್ಲಿ ಸಂಭ್ರಮವಿದೆ. ಈ ಸಂಭ್ರಮದ ಆಚರಣೆಯ ಹಿಂದೆ ಸತ್ಯ ಅಡಗಿ ಕುಳಿತಿದೆ..ಆ ಸತ್ಯ ಸನಾತನ ಧರ್ಮ ಮತ್ತು ನೆಲ ಸಂಸ್ಕೃತಿಯ ನಡುವಿನ ಸಂಘರ್ಷವೇ ಆಗಿದೆ.. ನಿಜ ಹಬ್ಬವನ್ನು ಆಚರಿಸುವ ಸಾಮಾನ್ಯ ಜನ ಇದನ್ನೆಲ್ಲ ಯೋಚಿಸುವುದಿಲ್ಲ. ಅವರಿಗೆ ಹಬ್ಬ ಮಾತ್ರ ಮುಖ್ಯ..ಆಚರಣೆ ಮಾತ್ರ ಮುಖ್ಯ.. ಆದರೆ ಪುರಾಣಗಳನ್ನು ಅರ್ಥೈಸುವ ಅದರ ಹಿಂದಿನ ಸತ್ಯವನ್ನು ತೆರೆದಿಡುವ ಕೆಲಸವೂ ಆಗಬೇಕು.. ಸತ್ಯವನ್ನು ಅನಾವರಣಗೊಳಿಸಿದ ಮೇಲೆ ಸಂಭ್ರಮಪಡುವುದು ಸರಿಯೇ ತಪ್ಪೇ ಎಂದು ತೀರ್ಮಾನಿಸಬೇಕು

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...