Saturday, October 22, 2022

ಮುಂಬರುವ ವಿಧಾನ ಸಭಾ ಚುನಾವಣೆ; ಬಿಜೆಪಿ ಗೇಮ್ ಪ್ಲಾನ್ ಬದಲು; ಗುಪ್ತ ಹಿಂದುತ್ವ ಬಹಿರಂಗ ಮೀಸಲಾತಿ ಅಸ್ತ್ರ...


 ಇನ್ನು ಆರು ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಬರಲಿದೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ರಂಗಸ್ಥಳಕ್ಕೆ ಇಳಿದಿವೆ.. ನಾಟಕ ಪ್ರಾರಂಭವಾಗಬೇಕು,, ಅಂಕದ ಪರದೆ ಮೇಲೇಳಬೇಕು.

ಇಂತಹ ಸ್ಥಿತಿಯಲ್ಲಿ ಬಿಜೆಪಿಯಲ್ಲಿ ಆತಂಕ ಪ್ರಾರಂಭವಾಗಿದೆ. ಯಾವ ವಿಚಾರವನ್ನು ಜನರ ಮುಂದೆ ತೆಗೆದುಕೊಂಡು ಹೋಗಬೇಕು,, ಯಾವುದು ಚುನಾವಣಾ ವಿಚಾರವಾಗಿ ಹೊರಹೊಮ್ಮಬಹುದು ? ಯಾವ ವಿಚಾರವನ್ನು ಜನರ ಮುಂದಿಟ್ಟು ಅವರ ಮನವೊಲಿಸಿ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿಗೆ ಸಾವಿರ ಡಾಲರ್ ಪ್ರಶ್ನೆ,, ಈ ಹಿಂದಿನ ಚುನಾವಣೆಗಳಲ್ಲಿ  ಬಿಜೆಪಿಗೆ ಇಂತಹ ಸಮಸ್ಯೆ ಇರಲಿಲ್ಲ.. ಹಿಂದುತ್ವ ಪ್ಲಸ್ ಅಭಿವೄದ್ಧಿ ಅವರ ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು,, ಆದರೆ ಈಗ ಪರಿಸ್ಥಿತಿ ಇಷ್ಟು ಸುಲಭವಾಗಿಲ್ಲ..

ಹಿಂದುತ್ವದ ಅಸ್ತ್ರವನ್ನು ಬಳಸುವಷ್ಟು ಬಳಸಿ ಆಗಿದೆ. ಅದೂ ಗರಿಷ್ಠ ಫಲವನ್ನು ನೀಡಿದೆ. ಕರಾವಳಿ ಕರ್ನಾಟಕ ಮತ್ತು ಮಲೇನಾಡಿನ ಕೆಲವು ಪ್ರದೇಶಗಳಲ್ಲಿ ಹಿಂದುತ್ವದ ಕಟ್ಟಾಳುಗಳಿದ್ದಾರೆ. ಅಲ್ಲಿ ಸಣ್ಣ ಪುಟ್ಟ ಗಲಭೆ ಎದ್ದರೆ ಸಾಕು ಆ ಮತ ಬ್ಯಾಂಕ್ ಬಲವಾಗಿ ಉಳಿಯುತ್ತದೆ,, ಹಾಗೂ ಉತ್ತರ ಕರ್ನಾಟಕದಲ್ಲೂ ಬಿಜೆಪಿ ತನ್ನ ಬಲವನ್ನು ಉಳಿಸಿಕೊಂಡಿದೆ, ಇನ್ನೂ ಉಳಿದ ಪ್ರದೇಶ ಎಂದರೆ ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕದ ಕೆಲವು ಪ್ರದೇಶಗಳು.. ಆದರೆ ಈ ಪ್ರದೇಶಗಳಲ್ಲಿ ಹಿಂದುತ್ವ ಪ್ರಭಾವ ಮತ್ತು ಪರಿಣಾಮ ಸೀಮಿತ,,

ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಮುಂದಿರುವ ಸಮಸ್ಯೆ ದೊಡ್ಡದು  ಮತ್ತು ಮುಂದಿನ ದಾರಿ ಕಠಿಣ, ಕರ್ನಾಟಕದಲ್ಲಿ ಬಿಜೆಪಿ ಈ ವರೆಗೆ ಅಧಿಕಾರಕ್ಕೆ ಬಂದಿದ್ದು ಅನ್ಯ ದಾರಿಗಳನ್ನು ಅನುಸರಿಸುವ ಮೂಲಕ ಎಂಬುದನ್ನು ಗಮನಿಸಬೇಕಾಗಿದೆ,, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವರ್ಚಸ್ಸು ಎಲ್ಲೆಡೆಗೆ ಪಸರಿಸಿದಾಗಲೂ ಅವರು ಸರ್ಕಾರ ನಡೆಸುವಷ್ಟು ಸಂಖ್ಯಾ ಬಲವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಯಡಿಯೂರಪ್ಪನವರ ವರ್ಚಸ್ಸು ಕುಂದಿದೆ. ಅವರು ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಇಲ್ಲ. ಇದರಿಂದಾಗಿ ಮತಗಳನ್ನು ತರುವ ಅವರ ಶಕ್ತಿ ಕುಂದಿದೆ. ಇನ್ನೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪ ಅವರಂತೆ ಜನ ನಾಯಕರಲ್ಲ. ಸ್ವಂತ ಶಕ್ತಿಯ ಮೇಲೆ ಮತ ತರುವ ಶಕ್ತಿ ಇಲ್ಲ. ಇನ್ನೂ ಪಕ್ಷ ರಾಜ್ಯ ಘಟಕದ  ಅಧ್ಯಕ್ಶ ನಳೀನ್ ಕುಮಾರ್ ಕಟೀಲ್ ಯಕ್ಷಗಾನದ ಹಾಸ್ಯ ಪಾತ್ರಧಾರಿಯಂತೆ ಕಾಣುತ್ತಾರೆ. ಅವರು ಮತ ತಾರುವುದು ಇರಲಿ, ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಲಾರರು.

ಜೊತೆಗೆ ಸರ್ಕಾರಕ್ಕೆ ಒಳ್ಲೆಯ ಹೆಸರಿಲ್ಲ. ಭ್ರಷ್ಟಾಚಾರದ ಆರೋಪಗಳಿಂದ ಸರ್ಕಾರದ ಇಮೇಜ್ ನಾಶವಾಗುತ್ತಲೇ ಇದೆ,,ಇಂತಹ ಸ್ಥಿತಿಯಲ್ಲಿ ರಾಜ್ಯ ಬಿಜೆಪಿಗೆ ಮತ ತರುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ.. ಆದ್ರೆ ೨೦೧೪ರಿಂದ ೨೦೧೮ ರ ಸಮಯದಲ್ಲಿ ಮೋದಿಯವರನ್ನು ಪ್ರಶ್ನಿಸುವವರೇ ಇರಲಿಲ್ಲ,, ಅವರನ್ನು ದೇವಧೂತ ಎನ್ನುವ ಮಟ್ಟಿಗೆ ದೇಶದ ಜನ ನಂಬಿದ್ದರು..ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ನರೇಂದ್ರ ಮೋದಿ ಅವರ ವರ್ಚಸ್ಸು ಕುಂದುತ್ತಿದೆ.. ಮೋದಿ ಅವರ ಬಗ್ಗೆ ಭಾರತದ ಜನರಿಗೆ ಭ್ರಮನಿರಸನವಾಗುತ್ತಿದೆ..

ಈಗ ಮತ್ತೆ ಕರ್ನಾಟಕದತ್ತ ಬರೋಣ. ಕರ್ನಾಟಕದಲ್ಲಿ ಯಾವ ವಿಚಾರಗಳು ಆ ಪಕ್ಷಕ್ಕೆ ಮತಗಳನ್ನು ತರುತ್ತವೆ ? ಯಾವ ನಾಯಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತಾನೆ ?

ಈ ಪ್ರಶ್ನೆಗಳಿಗೆ ಉತ್ತರ ಪಡೆಯುವ ಭರಾಟೆಯಲ್ಲಿ ಬಿಜೆಪಿ ತನ್ನ ಗೇಮ್ ಪ್ಲಾನ್ ಬದಲಿಸಿದೆ.. ಹಿಂದುತ್ವ ಅಜೆಂಡಾವನ್ನು ಗುಪ್ತವಾಗಿ ಜಾರಿಗೆ ತರಬೇಕು, ಹಿಂದುತ್ವದ ವಿಚಾರ, ಸಮಾಜವನ್ನು ಒಡೆಯುವ ಕೆಲಸವನ್ನು ಕಾಲಾಳುಗಳಿಗೆ ಬಿಟ್ಟು ಬಿಡಬೇಕು.. ನಾಯಕರು ಅಭಿವೄದ್ಧಿಯ ಬಗ್ಗೆ ಮಾತನಾಡಬೇಕು, ಮೀಸಲಾತಿ ವಿಚಾರವನ್ನು ಮುಂಡಿಟ್ಟುಕೊಂಡು ದಲಿತರು ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಬೇಕು.. ಇದು ಬಿಜೆಪಿಯ ಗೇಮ್ ಪ್ಲಾನ್.

ಈ ಸೂತ್ರದಂತೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ.

ಇದು ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆಗೆ ಏರಿಸಬಹುದೇ ? ಈ ಪ್ರಶ್ನೆಗೆ ಈಗಲೇ ಉತ್ತರ ನೀಡುವುದು ಕಷ್ಟ,,


No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...