Saturday, October 22, 2022

ಸಾಮಾಜಿಕ ಜಾಲತಾಣಗಳು ಮತ್ತು ಬೇಜವಾಬ್ದಾರಿ ನಡವಳಿಕೆ,,


 ಇದು ಸಾಮಾಜಿಕ ಜಾಲತಾಣಗಳ ಯುಗ,,,ಸುದ್ದಿ ಮನರಂಜನೆ, ಎಲ್ಲವೂ ಬೆರಳ ತುದಿಯಲ್ಲಿ ಲಭ್ಯ,,,ನಿಮಗೆ ಏನು ಬೇಕು ಅದೆಲ್ಲ ಸಿಗುತ್ತದೆ. ಏನು ಬೇಕಾದರೂ ಗೂಗಲ್ ಮಾಡಿ ಮಾಹಿತಿ ಪಡೆಯಬಹುದು,,ಇದು ಒಂದು ರೀತಿಯಲ್ಲಿ ಮಾಹಿತಿಗಳ ಕಣಜ..

ಇಷ್ಟೇ ಹೇಳಿದರೆ ಎಲ್ಲವನ್ನೂ ಹೇಳಿದಂತೆ ಆಗುವುದಿಲ್ಲ.. ಇದು ಎರಡು ಅಲುಗಿನ ಕತ್ತಿ. ಬಳಸುವಾಗ ಜವಾಬ್ದಾರಿ ಬೇಕು.. ಇಲ್ಲದಿದ್ದರೆ ಇದು ಏನುಬೇಕಾದರೂ ಕೊರೆದು ಬಿಡಬಹುದು. ಕೊರೆಯುವಾಗ ಗೊತ್ತಾಗುವುದಿಲ್ಲ. ರಕ್ತಸ್ರಾವವಾಗುವಾಗ ಗೊತ್ತಾಗುತ್ತದೆ,, ನಾನು ಈ ಮಾತುಗಳನ್ನು ಸಾಮಾಜಿಕ ಜಾಲತಾಣಗಳ ಪಾಲುದಾರನಾಗಿ ಹೇಳುತ್ತೇನೆ,, ನೀವು ಯಾವುದೇ ಸ್ಟೇಟಸ್ ಅಪ್ ಡೇಟ್ ಮಾಡಿದರೆ ತಕ್ಷಣ ಪ್ರತಿಕ್ರಿಯೆಗಳ ಸುರಿಮಳೆ ಪ್ರಾರಂಭ,, ಬರುವವರು ಯಾರೋ ? ಅವರದು ನಿಜವಾದ ಖಾತೆ ಹೌದೋ ಅಲ್ಲವೋ ಯಾವುದೂ ಗೊತ್ತಿರುವುದಿಲ್ಲ,, ಬೇರೆಯವರ ಖಾತೆಗೆ ಬಂದು ತಮ್ಮ ಮನಸ್ಸಿನಲ್ಲಿ ಇರುವ ಹೊಲಸನ್ನು ಹೊರಹಾಕಿ ಓಡಿ ಹೋಗುವುದು ಸಾಮಾನ್ಯ,, ನೀವು ಅವರ ಬೆನ್ನು ಹತ್ತಿ ಹೋಗಬೇಕು, ಇಲ್ಲವೇ ಅವರನ್ನು ಬ್ಲಾಕ್ ಮಾಡಬೇಕು ಅಷ್ಟೇ,,

ಆದರೆ ಸಾಮಾಜಿಕ ಜಾಲತಾಣ ಬಳಸುವವರು ತಮ್ಮ ನಡವಳಿಕೆಯ ಬಗ್ಗೆ ಜಾಗರೂಕರಾಗಿರಬೇಕು,, ಇದು ಒಂದು ರೀತಿಯಲ್ಲಿ ಸಾರ್ವಜನಿಕ ಶೌಚ ಗೃಹ ಇದ್ದಂತೆ,, ಸಾರ್ವಜನಿಕ ಶೌಚ ಗೃಹವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಅದರಲ್ಲಿಯೂ ಶೌಚಗೃಹವನ್ನು ಬಳಸುವವರು ಸ್ವಚ್ಚವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚಿಸಬೇಕು..

ಆದರೆ ವಿಕೃತ ಮನಸ್ಥಿತಿಯವರು ತಮ್ಮ ವಿಕೃತಿಯನ್ನು ಹೊರಹಾಕುತ್ತಾರೆ. ವಿಕೃತ ಕಾಮಿಗಳು ಅಮ್ಮ ಅಕ್ಕ ಎಂದು ಮಾತನಾಡಲು ಪ್ರಾರಂಭಿಸುತ್ತಾರೆ. ಆ ಮೂಲಕ ಒಂದು ವಿಕೃತ ಮತ್ತು ಅತೃಪ್ತ ಸಮಾಜವನ್ನು ನಿರ್ಮಿಸಿಬಿಡುತ್ತಾರೆ..

ಒಬ್ಬ ಇಂತಹ ವಿಕೃತಿಯನ್ನು ಪ್ರಾರಂಭಿಸಿದರೆ ಉಳಿದವರೂ ಅದನ್ನು ಅನುಸರಿಸುತ್ತಾರೆ,, ಹಾಗಿದ್ದರೆ ಇದನ್ನೆಲ್ಲ ತಡೆಯುವುದು ಸಾಧ್ಯವಿಲ್ಲವೆ ? ಸಾಧ್ಯವಿದೆ.. ಅದು ನಮ್ಮ ಯುವ ಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಮಾಡುವುದರ ಮೂಲಕ.. ಈ ಮಾರ್ಗದರ್ಶನ ಅವರ ಶೈಕ್ಷಣಿಕ ಅವಧಿಯಲ್ಲೇ ಪ್ರಾರಂಭವಾಗಬೇಕು.. ಆದರೆ ಇಂದಿನ ಶಿಕ್ಷಣ ಬದುಕಿನ ಜೊತೆಗಿನ ಸಂಬಂಧವನ್ನೇ ಕಡಿದುಕೊಂಡಿದೆ.. ಎರಡನೆಯ ದರ್ಜೆಯ ಗುಮಾಸ್ತರನ್ನೋ ಐಟಿ ಬಿಟಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ತಯಾರು ಮಾಡುವ ಶಿಕ್ಷಣವನ್ನು ನಾವು ನೀಡುತ್ತಿದ್ದೇವೆ.. ಇದರ ಜೊತೆಗೆ ಬದುಕಿನ ಮೌಲ್ಯಗಳ ಬಗ್ಗೆ ತರಬೇತಿ ನೀಡುವ ಕೆಲಸ ಆಗಬೇಕು.. ನಮ್ಮ ಸಂವಿಧಾನದ ಪಾಠ ಆಗಬೇಕು.. ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಒಬ್ಬ ವ್ಯಕ್ತಿಗೆ ನಮ್ಮ ಸಂವಿಧಾನದಲ್ಲಿ ಏನಿದೆ ಎಂಬ ಅರಿವು ಇರಬೇಕು.. ಅರಿವು ಇದ್ದರಷ್ಟೆ ಸಾಲದು.. ಸಂವಧಾನದ ಆಶಯದಂತೆ ನಡೆದುಕೊಳ್ಳುವ ಬದ್ಧತೆ ಬೇಕು.

ಆದರೆ ಇಂದು ಸಿನಿಮಾಗಳು ಪ್ರತಿಪಾದಿಸುವ ಮನುಷ್ಯ ವಿರೋಧಿ ಅಂಶಗಳು, ಅವು ಪ್ರತಿಪಾದಿಸುವ ಹಿಂಸೆ, ಕೋಮುವಾದಗಳು ಯುವಕರ ಮನಸ್ಸನ್ನು ಆಕ್ರಮಿಸಿಕೊಂಡಿವೆ, ಭೂಗತ ಜಗತ್ತಿನ ವೈಭವೀಕರಣ, ಅಂಡರ್ ವರ್ಲ್ಡ್ ಡಾನ್ ಆಗಬೇಕು ಎಂಬ ಕನಸನ್ನು ಯುವಕರಲ್ಲಿ ಬಿತ್ತುತ್ತಿದೆ,, ಮೋಹನ್ ದಾಸ್ ಕರಮಚಂದ್ ಗಾಂಧಿಯ ಈ ನಾಡಿನಲ್ಲಿ ಈಗ ಗಾಂಧಿಯ ಬದಲು ಗೋಡ್ಸೆಯನ್ನು ಪ್ರತಿಷ್ಠಾಪಿಸುವ ಕೆಲಸ ನಡೆಯುತ್ತಿದೆ,,,ಇತಿಹಾಸವನ್ನು ತಿರುಚುತ್ತ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಅದನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ,, ಅದರ ಜೊತೆಗೆ ಪ್ರತೊಯೊಂದು ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ತಂಡವನ್ನು ಹೊಂದಿವೆ.. ಇವರು ಸುಳ್ಳು ಸುದ್ದಿ ಹರಡುವುದರಲ್ಲಿ, ಸತ್ಯವನ್ನು ಅಸತ್ಯ ಎಂದು ತಿರುಚುವುದರಲ್ಲಿ ಅಗ್ರಗಣ್ಯರು,,,ಇವರೆಲ್ಲ ಸೇರಿ ಸಾಮಾಜಿಕ ಜಾಲತಾಣಗಳನ್ನು ಸುಳ್ಳಿನ ಮಾರುಕಟ್ಟೆಯನ್ನಾಗಿ ಬದಲಿಸಿದ್ದಾರೆ.. ಇಲ್ಲಿ ಸುಳ್ಳು ಮತ್ತು ಸತ್ಯದ ನಡುವಿನ ವ್ಯತ್ಯಾಸ ಮರೆಯಾಗಿದೆ,

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ರಾಜಕಾರಣಿ ತಮ್ಮ ಹೆಸರಿನ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದಾರೆ. ಇವರು ಎಂದು ಯಾರು ಹುಟ್ಟಿದರು ಯಾರು ಸತ್ತರು ಎಂಬ ಅಂಕಿ ಅಂಶಗಳನ್ನು ಇಟ್ಟುಕೊಂಡು ಪ್ರತ್ರಿದಿನ ಸ್ಟೇಟಸ್ ಅಪಡೆಟ್ ಮಾಡುತ್ತಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ತಮ್ಮ ಹೆಸರಿನಲ್ಲಿ ಬರುವ ಪ್ರತಿಕ್ರಿಯೆಗಳು ಹೇಳಿಕೆಗಳು ಅವರಿಗೇ ತಿಳಿದಿರುವುದಿಲ್ಲ...

?

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...